ಯುವಕನನ್ನು ಅಪಹರಿಸಿ ಹಣ ಎಗರಿಸಿದ ಓರ್ವ ಆರೋಪಿ ಸೆರೆ

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಹಣ ಎಗರಿಸಿದ ಪ್ರಕರಣದ ಆರೋಪಿಗಳ ಲ್ಲೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಚೆಟ್ಟುಂಗುಳಿ ಎಸ್‌ಪಿ ನಗರದ ಸೈನುಲ್ ಆಬೀದ್ (34) ಬಂಧಿತ ಆರೋಪಿ. ಈತನನ್ನು ನ್ಯಾಯಾಲ ಯದ  ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಆರೋಪಿಯನ್ನು ಸೆರೆಹಿಡಿಯಲೆಂದು ಮೇಲ್ಪರಂಬ ಪೊಲೀಸರು ಆತನ ಮನೆಗೆ  ಹೋದಾಗ ಆತ ಅಲ್ಲಿಂದ ತಪ್ಪಿಸಿ ಕಾರಿನಲ್ಲಿ ಪಲಾಯನಗೈಯ್ಯಲೆತ್ನಿಸಿದ್ದಾನೆ. ಅದನ್ನು ಕಂಡ ಪೊಲೀಸರು ತಕ್ಷಣ ತಮ್ಮ ಜೀಪಿನಲ್ಲಿ ಆ ಕಾರನ್ನು ಹಿಂಬಾಲಿಸಿ ಆತನನ್ನು ಸೆರೆಹಿಡಿಯುವಲ್ಲಿ ಸಫಲರಾದರು. ಅಗೋಸ್ತ್ 24ರಂದು ರಾತ್ರಿ …

ಓಣಂ ಆಚರಣೆ ವೇಳೆ ಪಾಳು ಬಾವಿಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿ ಚಿಕಿತ್ಸೆ ಮಧ್ಯೆ ಮೃತ್ಯು

ಕಾಸರಗೋಡು: ಪಾಳು ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟನು. ಕೊಡಕ್ಕಾಡ್ ಆನಿಕ್ಕಾಡಿ ನಿವಾಸಿ ಸನೂಪ್ (14) ಮೃತಪಟ್ಟ ದುರ್ದೈವಿ. ಗುರುವಾರ ರಾತ್ರಿ ಚೆಂಬ್ರಕಾನದಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಸನೂಪ್ ಹಾಗೂ ಸ್ನೇಹಿತ ಭಾಗವಹಿಸಿದ್ದರು. ಈ ಮಧ್ಯೆ ಸ್ನೇಹಿತರೊಂದಿಗೆ ಮೂತ್ರಶಂಕೆ ಗೆಂದು ಹೋದಾಗ ಸನೂಪ್ ಆವರಣ ಗೋಡೆಯಿಲ್ಲದ ಪಾಳು ಬಾವಿಗೆ ಬಿದ್ದಿ ದ್ದನು. ಕೂಡಲೇ ನಾಗರಿಕರು ರಕ್ಷಿಸಲು ಯತ್ನಿಸಿದರೂ ಬಾಲನನ್ನು ಮೇಲ ಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಕೊನೆಗೆ ಚೀಮೇನಿಯಿಂದ ಅಗ್ನಿಶಾಮಕದಳ ತಲುಪಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ …

ಶಾರ್ಜಾದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ ಅಂತ್ಯಸಂಸ್ಕಾರ

ಕಾಸರಗೋಡು: ಶಾರ್ಜಾದ ಅಲ್ನಬ್ಬ ಎಂಬಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಮೊಗ್ರಾಲ್ ನಿವಾಸಿ ಬಾಲಕಿಯ  ಮೃತದೇಹದ ಅಂತ್ಯಸಂಸ್ಕಾರ ನಿನ್ನೆ  ಮೊಗ್ರಾಲ್ ಚಳಿಯಂಗೋಡು ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.  ಮೊಗ್ರಾಲ್ ಕಾಡಿಯಂಕುಳಂ ಸಫ ಮಂಜಿಲ್‌ನ ಮುಬಾರಕ್ ಅಲಿ-ಮುರ್ಶಿದಾ ದಂಪತಿಯ ಏಕೈಕ ಪುತ್ರಿ ಸಫ (7) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಈಕೆ ಶಾರ್ಜಾದ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಸೋಮವಾರ ದುರ್ಘಟನೆ ಸಂಭವಿಸಿದೆ. ಅಂದು ಬೆಳಿಗ್ಗೆ ತಾಯಿ ಮುರ್ಶಿದ ಶಾರ್ಜಾದ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸಕ್ಕಾಗಿ  ತೆರಳಿದ್ದರು.  …

ನೂರಾರು ಮಂದಿ ಆಶ್ರಯಿಸುವ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡು: ನಾಗರಿಕರಿಗೆ ಸಂಚಾರ ಸಮಸ್ಯೆ

ಸೀತಾಂಗೋಳಿ: ದಿನಂಪ್ರತಿ ನೂರಾರು ಮಂದಿ ಆಶ್ರಯಿಸುವ ರಸ್ತೆಯೊಂದು ಇನ್ನೂ ಡಾಮರು ಕಾಣದೆ ಇದೀಗ ಕೆಸರುಗದ್ದೆಯಾಗಿ ಮಾರ್ಪಾಡುಗೊಂಡಿದೆ. ಬೇಳ ಗ್ರಾಮದ ದರ್ಬೆತ್ತಡ್ಕ-ನಾನಿಲಪಳ್ಳ-ಮುಖಾರಿಕಂಡವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯ ಇಕ್ಕಡೆಗಳಲ್ಲಿ ಹಲವು ಮನೆಗಳಿವೆ. ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಹಿತ ವಿವಿಧ ಅಗತ್ಯಗಳಿಗಾಗಿ ಈ ಭಾಗದ ಜನತೆ ಇದೇ ರಸ್ತೆಯಲ್ಲಿ ತೆರಳಬೇ ಕಾಗಿದೆ. ಇದೀಗ ಸುರಿಯುತ್ತಿರುವ ಮಳೆಯ ನೀರು ರಸ್ತೆಯಲ್ಲಿ ತುಂಬಿ ಕೊಂಡಿದ್ದು ಕೆಸರುಗದ್ದೆಯಂತಾಗಿದೆ. ಇದರಿಂದಾಗಿ ಜನರಿಗೆ ನಡೆದು ಹೋಗಲು ಕೂಡಾ …

ಅಕ್ರಮ ಮರಳುಗಾರಿಕೆ: 2 ಲಾರಿ ವಶ

ಕುಂಬಳೆ: ಹೊಳೆಯಿಂದ ಅಕ್ರಮವಾಗಿ ಹೊಯ್ಗೆ ಹೇರಿಕೊಂಡು ಸಾಗುತ್ತಿದ್ದ ಎರಡು ಲಾರಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಚ್ಲಂಗೋಡ್ ಬಿ ಸಿ ರೋಡ್ ಎಂಬಲ್ಲಿಂದ ಶಿರಿಯ ಹೊಳೆಯ ಪಾಚಾನಿಕಡವ್‌ನಿಂದ ಅನಧಿಕೃತ ಹೊಯ್ಗೆ ಹೇರಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡು ಇದಕ್ಕೆ ಸಂಬಂಧಿಸಿ ಲಾರಿ ಚಾಲಕ ಸೇರಿದಂತೆ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಹೊಳೆಯಿಂದ  ಅಕ್ರಮವಾಗಿ ಹೊಯ್ಗೆ ಸಾಗಿಸುತ್ತಿದ್ದ ಇನ್ನೊಂದು ಲಾರಿಯನ್ನು ಸುಬ್ಬಯ್ಯಕಟ್ಟೆಯಿಂದ  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ …

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ಮತ್ತು ಮಾತೃ ಸಮಿತಿಯ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ವೇದಮೂರ್ತಿ ಶಿವರಾಮ್ ಭಟ್‌ರ ಪೌರೋಹಿತ್ಯದಲ್ಲಿ ನೆರವೇರಿತು.ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಚಂದ್ರಹಾಸ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಕೋಶಾಧಿಕಾರಿ ವೆಂಕಟಗಿರೀಶ್ ಪಟ್ಟಾಜೆ, ಸೂರ್ಯನಾರಾಯಣ ಬಿ, ಜಯಪ್ರಕಾಶ ಶೆಟ್ಟಿ ಕಡಾರು ಬೀಡು, …

ಕಾರು ಢಿಕ್ಕಿ ಹೊಡೆದು ಚಿಕಿತ್ಸೆಯಲ್ಲಿದ್ದ ವೃದ್ಧ ಮೃತ್ಯು

ಕಾಸರಗೋಡು: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಪಾಣತ್ತೂರಿನ ಚೆಂಬಕಶ್ಶೇರಿ ಅಪ್ಪುಕುಟ್ಟನ್ (79) ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಈ ತಿಂಗಳ 22 ರಂದು ಬೆಳಿಗ್ಗೆ ಪಾಣತ್ತೂರಿನ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅವರ ದವಡೆ, ಪಕ್ಕೆಲುಬುಗಳು ಮತ್ತು ಆಂತರಿಕ ಅಂಗಗಳಿಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯ ನಂತರ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಬAಧಿಕರು ತಿಳಿಸಿದ್ದಾರೆ. ಮೃತರು ಪತ್ನಿ ಎನ್.ಕೆ. ಪ್ರಸನ್ನ, ಮಕ್ಕಳಾದ ಸಿಂಧು, ಸಂಧ್ಯಾ, ಸಂದೀಪ್ …

ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕ ಶ್ರೀ ನಾರಾಯಣಗುರು- ಸತೀಶ್ಚಂದ್ರ ಭಂಡಾರಿ

ಕುಂಬಳೆ: ಸಮಾಜದಲ್ಲಿನ ಮೂಢನಂಬಿಕೆಗಳು ಮತ್ತು ಅನೈತಿಕತೆಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರಾಗಿದ್ದರು ಶ್ರೀ ನಾರಾಯಣಗುರು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ನುಡಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಆಯೋಜಿಸಿದ್ದ ಶ್ರೀ ನಾರಾಯಣಗುರು ಜಯಂತಿ ಆಚರಣೆ ಉದ್ಘಾಟನೆ ಸಂದರ್ಭ ಅವರು ಮಾತನಾಡುತ್ತಿದ್ದರು. ಕೇರಳದ ಶಿಲ್ಪಿ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಕೆಳವರ್ಗದವರನ್ನು ಸಬಲೀಕರಣಗೊಳಿಸಿ ಸಹೋದರತ್ವದ ಭಾವನೆಯನ್ನು ತುಂಬಲು ಅವರು ಪ್ರಯತ್ನಿಸಿರುವುದಾಗಿ ಅವರು ನುಡಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ …

ಓಣಂ ಹಬ್ಬಾಚರಣೆ ಮಧ್ಯೆ ಪಾಳು ಬಾವಿಗೆ ಬಿದ್ದ ಬಾಲಕ : ಬಾಲಕನ ಸ್ಥಿತಿ ಗಂಭೀರ 

ಕಾಸರಗೋಡು:  ಓಣಂ ಆಚರಣೆ ಕಾರ್ಯಕ್ರಮಕ್ಕೆ ತೆರಳಿದ್ದ 15ರ ಹರೆಯದ ಬಾಲಕ ಪಾಳುಬಾವಿಗೆ ಬಿದ್ದ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತಲುಪಿದ ಚೀಮೇನಿ ಅಗ್ನಿಶಾಮದಳ  ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದೆ. ಪುಲ್ಲಾಂಞಿಪ್ಪಾರ ನಿವಾಸಿಯಾದ ಸನೂಪ್ (15)  ಅಪಾಯಕ್ಕೆಡೆ ಯಾದ ಬಾಲಕ. ನಿನ್ನೆ ರಾತ್ರಿ 8.45ರ ವೇಳೆ ಚೀಮೇನಿ ಚೆಂಬ್ರಕಾನದಲ್ಲಿ ಜರಗಿದ ಓಣಂ ಹಬ್ಬಾಚರಣೆ ಕಾರ್ಯ ಕ್ರಮಕ್ಕೆ ಸನೂಪ್ ಹಾಗೂ ಗೆಳೆಯರು  ತಲುಪಿದ್ದರು. ಕಾರ್ಯ ಕ್ರಮ ನಡೆಯುತ್ತಿದ್ದ ಮಧ್ಯೆ ಗೆಳೆ ಯರೊಂದಿಗೆ  ಮೂತ್ರಶಂಕೆಗೆಂದು ಹೋದಾಗ  ಆವರಣವಿಲ್ಲದ ಬಾವಿಗೆ ಬಿದ್ದಿದ್ದಾನೆ.  …

ಬ್ರಹ್ಮಶ್ರೀ ನಾರಾಯಣಗುರು ಜಯಂತಿಗೆ ಚಾಲನೆ

ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಂಗ ವಾಗಿ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋ ಹಣ, ಗುರುಪೂಜೆ ಜರಗಿತು. ಸಂಘದ ಅಧ್ಯಕ್ಷ ಎನ್. ಸತೀಶ್ ಧ್ವಜಾರೋಹಣ ಗೈದರು. ಮುಕುಂದನ್ ಗುರುಸಂದೇಶ ನೀಡಿದರು. ಅರ್ಚಕ ಅನೀಶ್, ಉಪಾಧ್ಯಕ್ಷ ಗಣೇಶ್ ಪಾರೆಕಟ್ಟೆ,  ಕೋಶಾಧಿಕಾರಿ ಉಮೇಶ್, ಸದಸ್ಯರಾದ ಆರ್.ಪಿ. ರಮೇಶ್ ಬಾಬು, ನಿರ್ಮಲಾ ಉಪೇಂದ್ರನ್, ನಿರ್ಮಲಾ ಅಚ್ಯುತನ್, ಸುಮಿತ್ರ, ಆಚರಣೆ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಅರವಿಂದನ್, ಸುನಿಲ್, ಬಿಜೇಶ್, ಶರತ್, ರಮೇಶ್ ಭಾಗವಹಿಸಿದರು. …