ಚೆರುಗೋಳಿಯಲ್ಲಿ ವಿದ್ಯುತ್ ತಂತಿ ಮೇಲೆ ಬಿದ್ದ ಮರ:ಹಲವು ವಿದ್ಯುತ್ ಕಂಬ ಹಾನಿ, ತಪ್ಪಿದ ದುರಂತ

ಮಂಗಲ್ಪಾಡಿ: ಚೆರುಗೋಳಿ ಶಾಲಾ ಬಳಿಯಲ್ಲಿರುವ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದ ಪರಿಣಾಮ ಪರಿಸರದ ಸುಮಾರು ಎಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ವೇಳೆ ರಸ್ತೆಯಲ್ಲಿ ಯಾರು ಇಲ್ಲದಿರು ವುದರಿಂದ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿಹೋಗಿದೆ. ಮರ ಬಿದ್ದ ವೇಳೆ ತಂತಿ ಹಾಗೂ ಕಂಬಗಳು ಮುರಿದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಗೊಂಡಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಾಹನ ಸಹಿತ ಜನರÀÄ ನಿತ್ಯವೂ ಸಂಚರಿಸುತ್ತಿದ್ದು, ಘಟನೆ ವೇಳೆ ರಸ್ತೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಅಪಾಯತಪ್ಪಿದೆ. ಕೂಡಲೇ ವಿದ್ಯುತ್ ಇಲಾಖೆ …

ಬದಿಯಡ್ಕದಲ್ಲಿ ವಿಬಿ ಜಿ ರಾಮ್ ಜಿ ಆರಂಭದ ನೇರಪ್ರಸಾರ ವೀಕ್ಷಣೆ

ಬದಿಯಡ್ಕ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ವಿಬಿ ಜಿ ರಾಮ್ ಜಿ (ವಿಕಸಿತ್ ಭಾರತ್ – ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ – ಗ್ರಾಮೀಣ್) ಯೋಜನೆಯ ಆರಂಭದ ನೇರ ಪ್ರಸಾರ ವೀಕ್ಷಣೆ ಬದಿಯಡ್ಕ ಪಂಚಾಯತ್ ಸಭಾಂಗಣದಲ್ಲಿ ಜರಗಿತು.ದೇಶದಾದ್ಯಂತ ಜುಲೈ ೧ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿರುವ ಈ ಯೋಜನೆಯ ರಾಷ್ಟ್ರೀಯ ಉದ್ಘಾಟನಾ ಸಮಾರಂಭದ ನೇರ ಪ್ರಸಾರಕ್ಕೆ ಪಂಚಾಯತ್ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ …

ದೈವ ಕಲಾವಿದ ನಿಧನ

ಹೊಸದುರ್ಗ: ದೈವ ಕಲಾವಿದ ಮಾಂಙಾಡ್ ಅರಮಂಗಾನದ ಕೆ. ಚಂದ್ರನ್ (61) ನಿಧನ ಹೊಂದಿ ದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ರಂಜಿತ್, ರಂಜಿನಿ, ರಜೀಶ್, ರಜಿತ, ಅಳಿಯಂದಿರಾದ ಉಮೇಶ್, ಪ್ರಜಿಲ್, ಸೊಸೆ ರಜೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೆರ್ಲ-ಸ್ವರ್ಗ ಅಂತಾರಾಜ್ಯ ರಸ್ತೆ ಅಭಿವೃದ್ಧಿಗೆ ಒಟ್ಟಾಗಿ ಹೋರಾಟ ಮಾಡಲು ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್. ಕರೆ

ಪೆರ್ಲ: ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸರಕಾರ, ಅಧಿಕಾರಿ ಗಳಿಗೆ ಕೇವಲ ಮನವಿ ಸಲ್ಲಿಸಿದರೆ ಮಾತ್ರ ನಮ್ಮ ಜವಾಬ್ದಾರಿ ಮುಗಿಯದು. ರಸ್ತೆ ಹೀನಾಯ ಸ್ಥಿತಿಯನ್ನು ಸರಕಾರಕ್ಕೆ ಗಮನಕ್ಕೆ ತಂದು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಿದರೂ ಪ್ರಯೋಜನ ವಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಬೇಕೆಂದು ಜಿಲ್ಲಾ ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ನುಡಿದರು. ಪೆರ್ಲ-ಸ್ವರ್ಗ ಅಂತಾರಾಜ್ಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ನಡೆದ ನಾಗರಿಕ ಕ್ರಿಯಾ ಸಮಿತಿ ರಚನೆ ಸಭೆಯಲ್ಲಿ ಅವರು …

ಬೈಕ್ ಖರೀದಿ ನೆಪದಲ್ಲಿ ಶೋರೂಂಗೆ ತಲುಪಿ ಬೈಕ್‌ನೊಂದಿಗೆ ಪರಾರಿಯಾದ ಯುವಕ

ಕೊಚ್ಚಿ: ಬೈಕ್ ಖರೀದಿಗೆಂದು ತಲುಪಿದ ಯುವಕ ಸೆಕೆಂಡ್ ಸೇಲ್ ಶೋರೂಂನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ. ಆಲುವಾ ಅಸೀಸ್ ಜಂಕ್ಷನ್‌ನ ಫೋರ್ ವ್ಹೀಲ್ ಡ್ರೈವ್ ಎಂಬ ಸಂಸ್ಥೆಯಿಂದ ಕಳವು ನಡೆಸಲಾಗಿದೆ. ಟೆಸ್ಟ್‌ರೈಡ್‌ಗೆಂದು ನೀಡಿದ ಬೈಕ್‌ನೊಂದಿಗೆ ಯುವಕ ವೇಗದಲ್ಲಿ ಸಂಚರಿಸಿ ಪರಾರಿಯಾಗಿ ದ್ದನೆನ್ನ ಲಾಗಿದೆ. ಗಂಟೆಗಳು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಈತ ಕಳ್ಳನಾಗಿರಬೇಕೆಂದು ಶೋರೂಂ ನೌಕರರು ತಿಳಿದುಕೊಂಡರು. ಮಾರುಕಟ್ಟೆಯಲ್ಲಿ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಬೆಲೆಬಾಳುವ ಬಜಾಜ್ ಕಂಪೆನಿಯ ಡೋಮಿ ನಾರ್ ಬೈಕ್ ಈತ ಅಪಹರಿಸಿದ್ದಾನೆ. …

ಮಸೀದಿಗೆ ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟ ಉಸ್ತಾದ್‌ರ ಮೃತದೇಹ ಹೊಳೆಯಲ್ಲಿ ಪತ್ತೆ

ತಲಪಾಡಿ: ಮಸೀದಿಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಉಸ್ತಾದ್‌ರ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜನಾಡಿ, ಮಂಗಳಂದಿಯ ಮೊಹಮ್ಮದ್ ಅಶ್ರಫ್ ಮಾಲಿಕಿ (45)ರ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆಯಾಗಿದೆ. ಮಸೀದಿಗೆ ತೆರಳುತ್ತಿರುವುದಾಗಿ ತಿಳಿಸಿ ಇವರು ಮಂಗಳವಾರ ಸಂಜೆ ಮನೆಯಿಂದ ಹೊರಟಿದ್ದರು. ರಾತ್ರಿಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಸಂಬಂಧಿಕರು ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದರಾದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಮಧ್ಯೆ ನಿನ್ನೆ ಬೆಳಿಗ್ಗೆ ಇವರ ಸ್ಕೂಟರ್ ಗುರುಪುರ ಸೇತುವೆಯ ಬಳಿಯಲ್ಲಿ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ …

ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ಮುಸ್ಲಿಂ ಲೀಗ್ ನೇತಾರ ಕುಸಿದುಬಿದ್ದು ನಿಧನ

ಬದಿಯಡ್ಕ: ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ವೇಳೆ ಕುಸಿದುಬಿದ್ದು ಮುಸ್ಲಿಂ ಲೀಗ್ ಮುಖಂಡ ಮೃತಪಟ್ಟ ಘಟನೆ ನಡೆದಿದೆ. ಚೆಂಗಳ ಪಂಚಾಯತ್ ಮಾಜಿ ಸದಸ್ಯ, ಪಂಚಾಯತ್ ಮುಸ್ಲಿಂ ಲೀಗ್  ಕಾರ್ಯಕಾರಿ ಸಮಿತಿ ಸದಸ್ಯ, ನೆಕ್ರಾಜೆ ನಿವಾಸಿ ಕೆ.ಎನ್. ಬಡುವನ್ ಕುಂಞಿ (66) ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ನಮಾಜಿಗೆಂದು ಮಸೀದಿಗೆ ತೆರಳುತ್ತಿದ್ದಾಗ ಕುಸಿದುಬಿದ್ದಿದ್ದು, ಕೂಡಲೇ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಪತ್ನಿ ಆಯಿಶಾ, ಮಕ್ಕಳಾದ ಸಿರಾಜ್, ಅನೈಸ್, ಸಾಬಿರ, ಸುಮಯ್ಯ, ಸಬೀನ, ಸೊಸೆಯಂದಿರಾದ ಬುಶ್ರಾ, …

ಮರ ಬಿದ್ದು ವಿದ್ಯುತ್ ಕಂಬ, ಆಟೋರಿಕ್ಷಾಕ್ಕೆ ಹಾನಿ: ಸಂಚಾರಕ್ಕೆ ಅಡಚಣೆ

ಬಾಯಾರು: ಮುಳಿಗದ್ದೆ-ಬೆರಿಪದವು ರಸ್ತೆಯ ಬದಿಯಾರ್‌ನಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾಕ್ಕೆ ಹಾನಿ ಉಂಟಾದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಸುಮಾರು 10.45ರವೇಳೆ ರಸ್ತೆ ಬದಿಯಲ್ಲಿರುವ ಬೃಹತ್ ಮರವೊಂದು ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಈ ವೇಳೆ ಮುಳಿಗದ್ದೆ ಭಾಗಕ್ಕೆ ತೆರಳುವ ಬಾಯಾರು ಪದವು ಆಟೋ ನಿಲ್ದಾಣದ ಆರೀಫ್ ಎಂಬವರ ಆಟೋರಿಕ್ಷಾಕ್ಕೆ ಹಾನಿ ಉಂಟಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ತಂತಿ ಚೆಲ್ಲಾಪಿಲ್ಲಿಗೊಂಡು …

ತೀವ್ರ ಗಾಳಿ, ಮಳೆ: ಬಂದ್ಯೋಡು ಶಿರಿಯದಲ್ಲಿ ಮನೆ ಕುಸಿದು ದಂಪತಿಗೆ ಗಾಯ

ಕುಂಬಳೆ: ಭಾರೀ ಗಾಳಿ, ಮಳೆಗೆ ಬಂದ್ಯೋಡು ಶಿರಿಯದಲ್ಲಿ ಮನೆಯೊಂದು ಕುಸಿದಿದೆ. ಇದರಿಂದ ದಂಪತಿಗಳಿಗೆ ಗಾಯವುಂಟಾಗಿದೆ. ಶಿರಿಯ ಉನ್ನತಿಯ ತಿರುಮಲೇಶ್ ಹಾಗೂ ಪತ್ನಿ ಗಾಯಗೊಂಡವರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ಈ ಪರಿಸರದಲ್ಲಿ ಬಲವಾಗಿ ಬೀಸಿದ ಸುಳಿಗಾಳಿಗೆ ಹಾಗೂ ಭಾರೀ ಮಳೆಗೆ ತಿರುಮಲೇಶರ ಹೆಂಚು ಹಾಸಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಈ ವೇಳೆ ದಂಪತಿ ಮನೆಯೊಳಗಿದ್ದರು. ಪತ್ನಿಯ ಕಾಲಿಗೆ ಗಾಯವುಂಟಾಗಿದೆ. ಇವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸುವಾಗ ತಿರುಮಲೇಶರ ತಾಯಿ ಹಾಗೂ …

ಬಿದ್ದು ಸಿಕ್ಕಿದ ಪರ್ಸ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ 8ನೇ ತರಗತಿ ವಿದ್ಯಾರ್ಥಿ

ಹೊಸದುರ್ಗ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಬೆಲೆಬಾಳುವ ದಾಖಲೆಗಳು ಅಡಕವಾದ ಪರ್ಸ್ 8ನೇ ತರಗತಿ ವಿದ್ಯಾರ್ಥಿ ವಾರೀಸು ದಾರನಿಗೆ ಹಸ್ತಾಂತರಿಸಿದನು. ನೀಲೇಶ್ವರ ಪರಿಪ್ಪುವಡ ವಿಭವ ಶಾಲಾ ಬಳಿಯಿಂದ 15ರಷ್ಟು ದಾಖಲೆಪತ್ರಗಳು ಅಡಕವಾಗಿರುವ ಪರ್ಸ್ ಛಾಯೋತ್ತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಹಾಗೂ ಶಾಲೆಯ ಎನ್‌ಸಿಸಿ ಕೆಡೆಟ್ ಪಾಲಾ ನಿವಾಸಿ ದ್ರುಪದ್‌ನಿಗೆ ಬಿದ್ದು ಸಿಕ್ಕಿತ್ತು. ದಾಖಲೆಪತ್ರಗಳು  ಅಡಕವಾಗಿರುವ ಈ ಪರ್ಸ್‌ನ್ನು ದ್ರುಪದ್ ಕೂಡಲೇ ನೀಲೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದನು. ತನಿಖೆಯಲ್ಲಿ ಪರ್ಸ್‌ನ ವಾರೀಸುದಾರ ಪಾಲಕ್ಕಾಡ್ …