ಮೀಂಜ ಪಂ. ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರಲ್ಲಿ  ಲೀಗ್ ಕಚೇರಿಯಲ್ಲಿ ಹೊಡೆದಾಟ

ಮಂಜೇಶ್ವರ: ಮೀಂಜ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸ್ಥಾನದ ಹೆಸರಲ್ಲಿ  ಉಂಟಾದ ತರ್ಕ ನಿನ್ನೆ ಬೆಳಿಗ್ಗೆ ಮೀಂಜ ಪಂಚಾಯತ್ ಲೀಗ್ ಕಚೇರಿಯಲ್ಲಿ ಹೊಡೆದಾಟದೊಂದಿಗೆ ಕೊನೆಗೊಂಡಿತು. ಲೀಗ್ ಕಚೇರಿಯಲ್ಲಿದ್ದ ಓರ್ವೆ ಸದಸ್ಯೆಗೂ ಹಲ್ಲೆಗೈದಿರುವುದಾಗಿ ಆರೋಪವುಂಟಾಗಿದೆ. ಓರ್ವ ಸ್ಥಾಯೀ ಸಮಿತಿಗೆ ಲೀಗ್ ಸದಸ್ಯರಾದ ಸಲೀಂ ಹಾಗೂ ಕೆ.ಸಿದ್ದಿಕ್‌ರ ಹೆಸರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಡಲ ಸಮಿತಿ ಪಂಚಾಯತ್ ಸಮಿತಿಯೊಂದಿಗೆ  ಚರ್ಚೆ ಕೂಡಾ ನಡೆಸದೆ  ಅದರಲ್ಲೊಂದು ಹೆಸರನ್ನು ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಪಂಚಾಯತ್‌ನಲ್ಲಿ ಆ ಕುರಿತಾಗಿ  ಅಸಮಾಧಾನ ವ್ಯಕ್ತವಾಗುವುದರೊಂದಿಗೆ ಜಿಲ್ಲಾ ಸಮಿತಿ ವಿವಾದದಲ್ಲಿ ಮಧ್ಯಪ್ರವೇಶಿಸಿ …

ಕೇಳುಗುಡ್ಡೆಯ ಬಾಲಕಿ ಇಂಡಿಯ ಬುಕ್ ಆಫ್ ರೆಕಾರ್ಡ್ ಸಾಧಕಿ

ಕಾಸರಗೋಡು: ಕೇಳುಗುಡ್ಡೆಯ ಮನು- ಮಾಳವಿಕ ದಂಪತಿ ಪುತ್ರಿ 1 ವರ್ಷ 6 ತಿಂಗಳ ಪ್ರಾಯದ ಮಿನ್ಹಾ ಎಂ. ಈಗ ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಬಂದ ಬಾಲಕಿಯಾಗಿದ್ದಾಳೆ. 5 ದೇವತೆಗಳು, 10 ಪ್ರಾಣಿಗಳು, 5 ತರಕಾರಿಗಳು, 14 ಹಣ್ಣುಗಳು, 8 ಪಕ್ಷಿಗಳು, 7 ವಾಹನಗಳು, 8 ದೇಹದ ಅಂಗಗಳು, 9  ಇತರ ವಸ್ತುಗಳನ್ನು ಗುರುತಿಸಿದ ಹಿನ್ನೆಲೆಯಲ್ಲಿ ಈಕೆ ‘ಐಬಿಆರ್ ಸಾಧಕಿ’ ಎಂಬ ಬಿರುದು ಪಡೆದಿದ್ದಾಳೆ. ಡಿಸೆಂಬರ್ 15ರಂದು ಈಕೆಯ ಹೆಸರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ …

ಲೈಂಗಿಕ ಕಿರುಕುಳ ಆರೋಪ: ಎಣ್ಮಕಜೆ ಪಂ. ಸದಸ್ಯ ಸುಧಾಕರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಎಣ್ಮಕಜೆ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಣ್ಮಕಜೆ ಪಂಚಾಯತ್ ಸದಸ್ಯ, ಸಿಪಿಎಂ ನೇ ತಾರ ಸುಧಾಕರ ಕೂಡಲೇ ಪಂಚಾ ಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಿನ್ನೆ ಸಂಜೆ ಬಾಳೆಮೂಲೆ ಬಿಜೆಪಿ ವಾರ್ಡ್ ಸಮಿತಿಯ ವತಿಯಿಂದ ಬಾಳೆಮೂಲೆ ಟಿವಿ ಶೆಡ್‌ನಿಂದ ಬಾಳೆಮೂಲೆ ಶಾಲೆಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು. ರಾಜಿನಾಮೆ ನೀಡದಿದ್ದಲ್ಲಿ ಮುಂದಕ್ಕೆ ಸುಧಾಕರ ಪಂಚಾಯತ್ ಪ್ರವೇಶಿಸುವುದಕ್ಕೆ ತಡೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಉಗ್ರ ಪ್ರತಿರೋಧಕ್ಕೆ ಬಿಜೆಪಿ ಸನ್ನದ್ಧವಾಗಿದೆ ಎಂಬ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ …

ಲೈಂಗಿಕ ಕಿರುಕುಳ ಎದುರಿಸುತ್ತಿರುವ ಅಧ್ಯಾಪಕನನ್ನು ಹೊರಹಾಕಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್‌ನಿಂದ ಕಳತ್ತೂರು ಶಾಲೆಗೆ ಮಾರ್ಚ್

ಕುಂಬಳೆ:  ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಿಪಿಎಂ ನೇತಾರನೂ, ಅಧ್ಯಾಪಕನಾದ ಸುಧಾಕರನನ್ನು ಶಾಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಳತ್ತೂರು ಶಾಲೆಗೆ  ಮಾರ್ಚ್ ನಡೆಸಿದರು.  ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾರ್ಚ್ ನಡೆಸಲಾಯಿತು. ಮಾರ್ಚ್ ಶಾಲೆಗೆ ತಲುಪುವ ಮೊದಲೇ ಪೊಲೀಸರು ತಡೆಯೊಡ್ಡಿದರು. ಕುಂಬಳೆ ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಶೆರಿನ್ ಕಯ್ಯಂಕೂಡ್ಲು,  ವಿಧಾನಸಭಾ ಕ್ಷೇತ್ರ  ಯೂತ್ ಕಾಂಗ್ರೆಸ್ ಅಧ್ಯಕ್ಷ ಜುನೈದ್ ಉರ್ಮಿ, ಫಾರೂಕ್, ದಯಾನಂದ ಬಾಡೂರು, ರವಿರಾಜ್ ಮೊದಲಾದವರು ನೇತೃತ್ವ ನೀಡಿದರು. …

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಅಧ್ಯಾಪಕನನ್ನು ಶಾಲೆಯಿಂದ ಹೊರ ಹಾಕಬೇಕು- ಬಿಜೆಪಿಯಿಂದ ಮನವಿ

ಕುಂಬಳೆ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ, ಸಿಪಿಎಂ ನೇತಾರನೂ  ಕಳತ್ತೂರು ಶಾಲೆಯ ಶಿಕ್ಷಕ ಸುಧಾಕರನನ್ನು ಶಾಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿ ಬಿಜೆಪಿ ಕುಂಬಳೆ ಉತ್ತರವಲಯ ಸಮಿತಿ ಶಾಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸುಧಾಕರ ಶಾಲೆಯಲ್ಲಿ ಇನ್ನೂ ಮುಂದುವರಿದರೆ ಬಿಜೆಪಿ ಶಾಲೆ ಮುಂದೆ ಧರಣಿ, ಪ್ರತಿಭಟನೆ ನಡೆಸುವುದಾಗಿಯೂ ಮನವಿಯಲ್ಲಿ ತಿಳಿಸಲಾಗಿದೆ. ಬಿಜೆಪಿ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್, ದಕ್ಷಿಣವಲಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, …

ಪಾಲಕ್ಕಾಡ್‌ನಲ್ಲೂ ಅಧ್ಯಾಪಕನ ವಿರುದ್ಧ ದೂರು : ಮದ್ಯ ನೀಡಿ ವಿದ್ಯಾರ್ಥಿಗೆ ದೌರ್ಜನ್ಯ ಪ್ರಕರಣ

ಪಾಲಕ್ಕಾಡ್: ಮಲಂಪುಳ ಶಾಲೆಯಲ್ಲಿ ಅಧ್ಯಾಪಕ ವಿದ್ಯಾರ್ಥಿಗೆ ಮದ್ಯ ನೀಡಿ ದೌರ್ಜನ್ಯಗೈದ ಘಟನೆಯಲ್ಲಿ 7 ವಿದ್ಯಾರ್ಥಿಗಳು ಹೇಳಿಕೆ ನೀಡಿರುವುದಾಗಿ ಚೈಲ್ಡ್ ವೆಲ್ಫೇರ್ ಸಮಿತಿ ಅಧ್ಯಕ್ಷ ಎಂ. ಸೇತುಮಾಧವನ್ ತಿಳಿಸಿದ್ದಾರೆ. ಮೊದಲ ಹಂತದ ಕೌನ್ಸಿಲಿಂಗ್‌ನಲ್ಲಿ 7 ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಲಾಗಿತ್ತು. ಇದರಲ್ಲಿ ೫ ಮಕ್ಕಳದ್ದು ಗಂಭೀರ ಆರೋಪವಾದ ಕಾರಣ ಇದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅಧ್ಯಾಪಕನ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರೂ ಶಾಲಾ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬುದು ಶಾಲಾ ಅಧಿಕಾರಿಗಳು ನಡೆಸಿದ ಲೋಪವೆಂದು ಅವರು ತಿಳಿಸಿದರು. …

ತಂದೆಯ ಆರೈಕೆಗಾಗಿ ಆಸ್ಪತ್ರೆಯಲ್ಲಿದ್ದ ಪುತ್ರ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಪಯ್ಯನ್ನೂರು: ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ 7ನೇ ಮಹಡಿಯಿಂದ ಹಾರಿ ರೋಗಿಯ ಜೊತೆಗೆ ನಿಲ್ಲಲು ತಲುಪಿದ್ದ ವ್ಯಕ್ತಿ ಮೃತಪಟ್ಟರು. ಶ್ರೀಕಂಠಪುರ ಕಾನಿಲೇರಿ ಆಲಕುನ್ನು ಥೋಮಸ್- ತ್ರೇಸಿಯಮ್ಮ ದಂಪತಿ ಪುತ್ರ ಟೋಮ್ ಥೋಮ್ಸನ್ (40) ಮೃತಪಟ್ಟವರು. ಇಂದು ಮುಂಜಾನೆ 1 ಗಂಟೆ ವೇಳೆ ಘಟನೆ ನಡೆದಿದೆ.  ಟೋಮ್ ಥೋಮ್ಸನ್‌ರ ತಂದೆ ಥೋಮಸ್ ಹರ್ನಿಯ ಆಪರೇಶನ್ ಮುಗಿಸಿ ವಾರ್ಡ್‌ನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ತಂದೆಯನ್ನು ಶುಶ್ರೂಷಿಸಲು ನಿಂತಿದ್ದ ಟೋಮ್ ಥೋಮ್ಸನ್ ಇಂದು ಮುಂಜಾನೆ 1 ಗಂಟೆ ವೇಳೆ ಗಲಭೆ ಸೃಷ್ಟಿಸಿರುವುದಾಗಿ ಹೇಳಲಾಗುತ್ತಿದೆ. ಭದ್ರತಾ …

ಗಲ್ಫ್ ಉದ್ಯೋಗಿ ಮನೆಯಿಂದ ಕಳವು

ಕಾಸರಗೋಡು:  ಗಲ್ಫ್ ಉದ್ಯೋಗಿ ಯಾದ ಉದುಮ ಬಾರಾದ ಮುರಳಿ ಎಂಬವರ ಮನೆಯಿಂದ ೮ ಪವನ್ ಚಿನ್ನಾಭರಣ ಹಾಗೂ ೫ ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿ ನಲ್ಲಿದ್ದ ನಗ-ನಗದು ದೋಚಿದ್ದಾರೆ.  ಮುರಳಿ ಗಲ್ಫ್‌ನಲ್ಲಿದ್ದಾರೆ.   ಮುರಳಿ ಅವರ ಪತ್ನಿ ಹಾಗೂ ಮಕ್ಕಳು ಸಮೀಪದಲ್ಲಿರುವ ಮುರಳಿಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಅಲ್ಲಿಂದ ಸ್ವಂತ ಮನೆಗೆ  ತೆರಳಿದಾಗ  ಕಳ್ಳರು ಮನೆಗೆ ನುಗ್ಗಿದ ವಿಷಯ …

ಹೊಲಿಗೆ ಕಾರ್ಮಿಕರ ವೆಲ್ಫೇರ್ ಫಂಡ್ ಕಾಯ್ದೆ ಸಮಸ್ಯೆ ಬಗ್ಗೆ ಶಾಸಕರಿಂದ ಪರಿಹಾರ ಭರವಸೆ

ಹೊಸಂಗಡಿ: ಕೇರಳ ರಾಜ್ಯ ಹೊಲಿಗೆ ಕಾರ್ಮಿಕರಿಗೆ ಟೆÊಲರಿಂಗ್ ವೆಲ್ಫೇರ್ ಫಂಡ್ ಕಾಯ್ದೆ ಪ್ರಕಾರ ಕ್ಷೇ ಮನಿಧಿಯಲ್ಲಿ ನೋಂದಾಯಿಸಿ ಕೊಂಡರೂ ಪರಿಷ್ಕೃತ ಕಾನೂನು ವಿಧೇಯ ಪಿಂಚಣಿ ದೊರೆಯದೆ ಇರುವ ಸಮಸ್ಯೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ನ್ಯಾಯ ದೊರಕಿಸಿ ಕೊಡುವುದಾಗಿ ಶಾಸಕ ಎಕೆಎಂ ಅಶ್ರಫ್ ಭರವಸೆ ಇತ್ತರು. ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆದ ಕೇರಳ ಸ್ಟೇಟ್ ಟÉÊಲರ್ಸ್ ಅಸೋಸಿಯೇಷನ್ (ಕೆಎಸ್‌ಟಿಎ) ಮಂಜೇಶ್ವರ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷೇಮನಿಧಿ ಯೋಜನೆಯಲ್ಲಿ ಸೀನಿಯಾರಿಟಿಯಂತೆ ಪಿಂಚಣಿ ನೀಡುವ ವ್ಯವಸ್ಥೆ ಅಳವಡಿಸಿಲ್ಲ, ಅನುಗುಣವಾದ …

ಜನಪ್ರತಿನಿಧಿಗಳು ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು- ವಿ.ಕೆ. ಸಜೀವನ್

ಕಾಸರಗೋಡು: ಗರಿಷ್ಠ ಸಂಖ್ಯೆಯ ಪ್ರಜೆಗಳನ್ನು ಪ್ರಧಾನಮಂತ್ರಿಯವರ ಕ್ಷೇಮ ಯೋಜನೆಗಳ ಫಲಾನುಭವಿಗಳಾಗಿಸಲು ಬಿಜೆಪಿ ಜನಪ್ರತಿನಿಧಿಗಳು ಮುಂದೆ ಬರಬೇಕೆಂದೂ, ಜನಕ್ಷೇಮ ಯೋಜನೆಗಳ ಪ್ರಚಾರಕರಾಗಿ ಅವರು ಕಾರ್ಯಾಚರಿಸಬೇಕೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಬಿಜೆಪಿ ಜನಪ್ರತಿನಿಧಿಗಳ ಮೊದಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಸರಕಾರದ ಜನಕ್ಷೇಮ ಯೋಜನೆಗಳು ಕೇರಳದಲ್ಲಿ ಜ್ಯಾರಿಗೊಂಡರೆ ಬಿಜೆಪಿಗೆ ರಾಜಕೀಯ ಸಾಧನೆ ಉಂಟಾಗಲಿದೆ ಎಂದು ಪಿಣರಾಯಿ ವಿಜಯನ್ ಸರಕಾರ ಭಯಪಡುತ್ತಿದೆ. ಆದ್ದರಿಂದ  ಹಲವು ಕೇಂದ್ರ …