ಶಬರಿಮಲೆ ಚಿನ್ನ ಕಳವು: ಬಂಧಿತ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಜೈಲಿಗೆ; ತನಿಖೆ ಮಾಜಿ ಮುಜುರಾಯಿ ಸಚಿವರತ್ತ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಬಂಧಿಸಿದ ತಿರುವಿದಾಂಕೂರು ದೇವಸ್ವಂ ಮಂಡಳಿ   ಮಾಜಿ ಅಧ್ಯಕ್ಷ, ಸಿಪಿಎಂ ನೇತಾರ ಹಾಗೂ ಮಾಜಿ ಶಾಸಕನೂ ಆಗಿರುವ  ಎ. ಪದ್ಮಕುಮಾರ್‌ರನ್ನು ಕೊಲ್ಲಂ ವಿಜಿಲೆನ್ಸ್  ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ತಿರುವನಂತಪುರ ಸ್ಪೆಷಲ್ ಜೈಲಿನಲ್ಲಿ ೧೪ ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದೇ ಸಂದರ್ಭದಲ್ಲಿ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪದ್ಮಕುಮಾರ್‌ನನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅವರನ್ನು ಇಂದು …

ನಿವೃತ್ತ ಹಡಗು ಉದ್ಯೋಗಿ ನಿಧನ

ಬದಿಯಡ್ಕ: ಬದಿಯಡ್ಕ ಶಾಸ್ತ್ರೀಸ್ ಕಂಪೌಂಡ್ ನಿವಾಸಿ ಶ್ಯಾಮ್ ಶೆಟ್ಟಿ (62) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಹಡಗಿನಲ್ಲಿ ಉದ್ಯೋ ಗಿಯಾಗಿದ್ದ ಇವರು ನಿವೃತ್ತಿ ಬಳಿಕ ಮನೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಉಡುಪಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ಮೃತದೇಹ ವನ್ನು ನಿನ್ನೆ ಸ್ವ-ಗೃಹಕ್ಕೆ ತಲುಪಿಸಿ ಬಳಿಕ ಮೂಕಂಪಾರೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ದಿವಂಗತರಾದ ರಾಮಯ್ಯ ಶೆಟ್ಟಿ- ಲಕ್ಷ್ಮಿ ಶೆಟ್ಟಿ ದಂಪತಿ ಪುತ್ರನಾದ ಮೃತರು ಪತ್ನಿ ಉಷಲತ (ಬ್ರಹ್ಮಾವರದಲ್ಲಿ ಸರಕಾರಿ ಶಾಲೆ ಅಧ್ಯಾಪಿಕೆ), …

ಸೀಟು ವಿಭಜನೆ ತರ್ಕ: ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನೇತಾರರ ಮಧ್ಯೆ ಹೊಡೆದಾಟ ; ಅಮಾನತು

ಕಾಸರಗೋಡು: ಕಾಂಗ್ರೆಸ್‌ನಲ್ಲಿ ಸೀಟು ವಿಭಜನೆ ತರ್ಕದ ಹಿನ್ನೆಲೆಯಲ್ಲಿ ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ನೇತಾರರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಡಿಸಿಸಿ ಉಪಾಧ್ಯಕ್ಷ ಜೇಮ್ಸ್‌ಪಂದಮಾಕಲ್ ಹಾಗೂ ಡಿ.ಕೆ.ಟಿ.ಎಫ್ ಜಿಲ್ಲಾಧ್ಯಕ್ಷ ವಾಸು ದೇವನ್ ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ಈಸ್ಟ್ ಎಳೇರಿ ಪಂಚಾಯತ್‌ನಲ್ಲಿ ಸೀಟು ವಿಭಜನೆಗೆ ಸಂಬಂಧಿಸಿ ಹೊಡೆದಾಟ ನಡೆದಿರುವು ದಾಗಿ ಹೇಳಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ದೂರವಾದ ಜೇಮ್ಸ್ ಪಂದಮಾಕಲ್ ಡಿಡಿಎಫ್ ಎಂಬ ಸಂಘಟನೆಯನ್ನು ರೂಪೀಕರಿಸಿದ್ದರು. ಅನಂತರ ಚರ್ಚೆ ನಡೆಸಿ ಕಳೆದ ವರ್ಷ ಅವರ ಸಹಿತ ಏಳು ಮಂದಿಯನ್ನು ಕಾಂಗ್ರೆಸ್‌ಗೆ …

ಆರ್ಲಪದವು ಪರಿಸರದ ಸಿಸಿ ಟಿವಿಯಲ್ಲಿ ಕಂಡುಬಂದ ಪ್ರಾಣಿ ಚಿರತೆಯೇ? ಸ್ಥಳೀಯರಲ್ಲಿ ಮತ್ತೆ ಆತಂಕ

ಬೆಳ್ಳೂರು:  ಬೆಳ್ಳೂರು, ಎಣ್ಮಕಜೆ ಪಂಚಾಯತ್ ಗಡಿ ಪ್ರದೇಶದಲ್ಲಿ  ಚಿರತೆ ಕಂಡುಬಂದಿರುವುದು ಸ್ಥಳೀಯರಲ್ಲಿ ಮತ್ತೆ ಭೀತಿಗೆ ಕಾರಣವಾಗಿದೆ.  ಬೇಡಡ್ಕ ಪಂಚಾಯತ್‌ನ ಕೊಳತ್ತೂರಿನಿಂದ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಹಿಡಿದ ಚಿರತೆಯನ್ನು ಕೇರಳ-ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ, ಪಾಣಾಜೆ, ಆರ್ಲಪದವು  ಜನವಸತಿ ಪ್ರದೇಶದಲ್ಲಿ  ತೆರೆದುಬಿಟ್ಟಿದ್ದರೆಂದು ಈ ಹಿಂದೆ ವಿವಾದ ಸೃಷ್ಟಿಯಾಗಿತ್ತು. ಈ ಪರಿಸರದಲ್ಲಿ ಕಳೆದ ಬುಧವಾರ ರಾತ್ರಿ  ಚಿರತೆಯನ್ನು ಹೋಲುವ ಪ್ರಾಣಿಯೊಂದರನ್ನು ಸ್ಥಳೀಯನಾದ ಓರ್ವರು ದೇವಸ್ಥಾನದಿಂದ ಮರಳುತ್ತಿದ್ದ ವೇಳೆ ಕಂಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಲಪದವು ಬದ್ರಿಯಾ ಮಸೀದಿಯಲ್ಲಿರುವ ಸಿಸಿ ಟಿವಿಯನ್ನು ಪರಿಶೀಲಿಸಿದಾಗ  …

ಕುಖ್ಯಾತ ಕಳವು ಆರೋಪಿ ತೊರಪ್ಪನ್ ಸಂತೋಷ್ ಮೇಲ್ಪರಂಬದಲ್ಲಿ ಸೆರೆ

ಕಾಸರಗೋಡು: ಕುಖ್ಯಾತ ಕಳವು ಆರೋಪಿ ತೊರಪ್ಪನ್ ಸಂತೋಷ್ ಮತ್ತೆ ಸೆರೆಗೀಡಾಗಿದ್ದಾನೆ. ಇಂದು ಮುಂಜಾನೆ ಮೇಲ್ಪರಂಬ ಹಳೆಯ ಮಿಲ್ಮಾ ಬೂತ್ ಸಮೀಪದ ಕ್ಯಾಶ್‌ಮಾರ್ಟ್ ಹೈಪರ್ ಮಾರ್ಕೆಟ್‌ನಲ್ಲಿ ಕಳವು ನಡೆಸಲು ಯತ್ನಿಸುತ್ತಿದ್ದ ವೇಳೆ ತೊರಪ್ಪನ್ ಸಂತೋಷ್‌ನನ್ನು ನಾಗರಿಕರು ಸೆರೆ ಹಿಡಿದಿದ್ದಾರೆ. ನಾಗರಿಕರ ಕೈಯಿಂದ ತಪ್ಪಿಸಿಕೊಳ್ಳಲು ಈತ ಸೂಪರ್ ಮಾರ್ಕೆಟ್ ಕಟ್ಟಡದ ಒಂದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಇದರಿಂದ ಕಾಲಿಗೆ ಗಾಯಗೊಂಡಿದ್ದ ಈತ ಓಡಲು ಸಾಧ್ಯವಾಗದೆ ನಾಗರಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾದ ತೊರಪ್ಪನ್ ಸಂತೋಷ್ ಕುಡಿಯಾನ್‌ಮಲ ಪೊಲೀಸ್‌ಠಾಣೆ …

ಗೃಹಿಣಿ ಆಸಿಡ್ ಸೇವಿಸಿ ಮೃತ್ಯು

ಬಂದಡ್ಕ: ಆಸಿಡ್ ಹೊಟ್ಟೆಗೆ ಸೇರಿ ಮನೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಗೃಹಿಣಿ ಮೃತಪಟ್ಟಿದ್ದಾರೆ. ಕುತ್ತಿಕ್ಕೋಲ್ ವೆಳ್ಳಾಲ ನಿವಾಸಿ ಎ. ಕೃಷ್ಣನ್ ನಾಯರ್‌ರ ಪತ್ನಿ ಕಾರ್ತ್ಯಾಯಿನಿ ಅಮ್ಮ (65) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತದೇಹದ ಮಹಜರಿಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಬೇಡಗಂ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ಬಿಂದು, ಸೇತು, ವಿನಿತ, ಅಳಿಯಂದಿರಾದ ಕುಂಞಂಬು, ಅನಂತನ್, ಸೊಸೆ ಸುನಿಲ, ಸಹೋದರರಾದ ನಾರಾಯಣನ್ ನಂಬ್ಯಾರ್, ಅಂಬುಞಿ ನಂಬ್ಯಾರ್, ಬಾಲಕೃಷ್ಣನ್ ನಂಬ್ಯಾರ್, ಶ್ರೀಧರನ್ …

ಬಸ್‌ನಲ್ಲಿ ಗಾಂಜಾ ಸಹಿತ ಪ್ರಯಾಣಿಸುತ್ತಿದ್ದ ವ್ಯಕ್ತಿ ಸೆರೆ

ಮಂಜೇಶ್ವರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಹಿತ ಪ್ರಯಾಣಿಸುತ್ತಿದ್ದ ಓರ್ವನನ್ನು ಮಂಜೇಶ್ವರ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕಲ್ಲಿಕೋಟೆ ತಾಲೂಕಿನ ಪಂದಲಾಯನಿ ವಿಲ್ಲೇಜ್ ಬೀಚ್‌ರೋಡ್ ಕೊಲಾಂಡಿ ವಡಕ್ಕೇ ಪಾಂಡಿಗಶಾಲ ವಳಪ್ಪ್ ಎಂಬಲ್ಲಿನ ಅಜಿನಾಸ್ ವಿ.ಕೆ. (32) ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ ೯ಗ್ರಾಂ ಗಾಂಜಾ ವಶಪಡಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಜಿನು ಜೇಮ್ಸ್ ಬಿ.ಯು. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಮಂಗಳೂರು ಭಾಗದಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್‌ನೊಳಗೆ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿತ್ತು. ಇದರಂತೆ ಆರೋಪಿಯನ್ನು …

ಮಾದಕದ್ರವ್ಯ ಸಾಗಾಟ ಪ್ರಕರಣ :ಆರೋಪಿಗೆ ಎರಡು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಮಾದಕ ದ್ರವ್ಯ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಎರಡು ವರ್ಷ ಮೂರು ತಿಂಗಳ ಕಠಿಣ ಸಜೆ ಹಾಗೂ ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಣ್ಣೂರು ಮುಳಪ್ಪಿಲಂಗಾಡ್ ಕುಳಂ ಬಜಾರಿನ ರುಹೈಬ್ ಸಿ.ವಿ.(35)  ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇ ಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಸೆಪ್ಟಂಬರ್ 6ರಂದು …

ಪೆರಿಯ ಕಲ್ಯೋಟ್‌ನ ಪೊದೆಗಳೆಡೆಯಲ್ಲಿ ನಕಲಿ ಕೋವಿ ಅಡಗಿಸಿಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ, ಕಲ್ಯೋಟ್‌ನ ಪೊದೆಗಳೆಡೆಯಲ್ಲಿ ಅಡಗಿಸಿಟ್ಟ ಸ್ಥಿತಿಯಲ್ಲಿ ನಕಲಿ ಕೋವಿ ಪತ್ತೆಯಾಗಿದೆ. ಹೊಸದುರ್ಗ ಅಬಕಾರಿ ಅಧಿಕಾರಿ ಮದ್ಯ ಪತ್ತೆಹಚ್ಚುವುದಕ್ಕಾಗಿ ನಡೆಸಿದ ತಪಾಸಣೆ ಮಧ್ಯೆ ಕೋವಿ ಪತ್ತೆಯಾಗಿದೆ. ಮಾಹಿತಿ ತಿಳಿದು ತಲುಪಿದ ಬೇಕಲ ಎಸ್‌ಐ ಪಿ. ಅಖಿಲ್ ಹಾಗೂ ತಂಡ ಕೋವಿಯನ್ನು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿದ್ದಾರೆ. ಪೆರಿಯ-ಉದಯಪುರಂ ರಸ್ತೆಯ ಕಲ್ಯೋಟ್‌ನಲ್ಲಿರುವ ಇರಿಗೇಶನ್ ಇಲಾಖೆಯ ರೈನ್ ಗೇಜ್ ಸ್ಟೇಶನ್‌ನ ಉತ್ತರ ಭಾಗದ ಪೊದೆಗಳ ಮಧ್ಯೆ ನಿನ್ನೆ ಸಂಜೆ ಕೋವಿಯನ್ನು ಪತ್ತೆಹಚ್ಚ ಲಾಗಿದೆ. ಎರಡು …

ಕಾರಿನಲ್ಲಿ ಸಾಗಿಸುತ್ತಿದ್ದ 6000 ಪ್ಯಾಕೆಟ್ ಪಾನ್‌ಮಸಾಲೆ ವಶ: ಓರ್ವ ಸೆರೆ

ಮಂಜೇಶ್ವರ: ರಾಜ್ಯದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳನ್ನು ಕಾಸರಗೋಡಿಗೆ ತಲುಪಿಸಿ ಮಾರಾಟಗೈಯ್ಯುವ ದಂಧೆ ಮತ್ತೆ ತೀವ್ರಗೊಂಡಿದೆ. ನಿನ್ನೆ ಮಂಜೇಶ್ವರ ಪೊಲೀಸರು ತಲಪಾಡಿಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ೬೦೦೦ ಪ್ಯಾಕೆಟ್ ಪಾನ್‌ಮಸಾಲೆ ಪತ್ತೆಹಚ್ಚಲಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಕಣ್ಣೂರು ಕೊಳಚ್ಚೇರಿ ಕಂಡಪ್ಪನ್ ಕಂಬಿಲ್ ತೇರು ನೋರ್ತ್‌ನ ಅನಿರುದ್ಧನ್ ಕೆ. (53) ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ತಲಪಾಡಿ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರು ಭಾಗದಿಂದ ಉಪ್ಪಳ …