ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಾಟುಕುಕ್ಕೆಯ ಯುವಕ ಸೆರೆ

ಪೆರ್ಲ: ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಗಾಂಜಾ ಸಹಿತ ಪ್ರಯಾಣಿಸುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಕಾಟುಕುಕ್ಕೆ ಪೆರ್ಲತ್ತಡ್ಕ ನಿವಾಸಿ ಅಬ್ದುಲ್ ಸಮದ್ (37) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಈತ ಸೆರೆಗೀಡಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಬ್ದುಲ್ ಸಮದ್ ಪ್ರಯಾಣಿಸುತ್ತಿದ್ದನು. ಈತನ ಕೈಯಲ್ಲಿ 12 ಗ್ರಾಂ ಗಾಂಜಾ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಟುಕುಕ್ಕೆಯ ಶಾಲಾ ಮಕ್ಕಳಿಗೆ ಹಾಗೂ ಪೆರ್ಲದ ಕಾಲೇಜು ವಿದ್ಯಾರ್ಥಿಗಳಿಗೆ …

ಕಳ್ಳನೆಂದು ಆರೋಪಿಸಿ ತಂಡದಿಂದ ಹಲ್ಲೆ: ಗಾಯಗೊಂಡ ಅನ್ಯರಾಜ್ಯ ಕಾರ್ಮಿಕ ಮೃತ್ಯು

ಪಾಲಕ್ಕಾಡ್: ಕಳ್ಳನೆಂದು ಆರೋಪಿಸಿ ತಂಡವೊಂದು ನಡೆ ಸಿದ ಹಲ್ಲೆಯಿಂದ ಗಾಯಗೊಂಡು ಅನ್ಯ ರಾಜ್ಯ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.  ಛತ್ತೀಸ್‌ಗಡದ ಬಿಲಾಸ್‌ಪುರ್ ನಿವಾಸಿ ರಾಮ್ ನಾರಾಯಣ್ ಬಯ್ಯಾರ್ (31) ಮೃತಪಟ್ಟ ಯುವಕನಾಗಿದ್ದಾನೆ. ಮೊನ್ನೆ ಸಂಜೆ ವಾಳಯಾರ್‌ನಲ್ಲಿ ಘಟನೆ ನಡೆದಿದೆ. ಕಳ್ಳನೆಂದು ಆರೋಪಿಸಿ ಯುವಕನಿಗೆ ತಂಡವೊಂದು ಹಲ್ಲೆಗೈದು ಗಂಭೀರ ಗಾಯಗೊಳಿಸಿತ್ತು. ಇದರಿಂದ ಅಸ್ವಸ್ಥಗೊಂಡ ರಾಮ್ ನಾರಾಯಣನ್‌ನನ್ನು ಪಾಲಕ್ಕಾಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಈತ ಮೃತಪಟ್ಟನು. ಘಟನೆಗೆ ಸಂಬಂಧಿಸಿ 10 ಮಂದಿಯನ್ನು ವಾಳಯಾರ್ ಪೊಲೀಸರು …

ಸೋಷ್ಯಲ್ ಮೀಡಿಯಾ ಮೂಲಕ ಗಲಭೆ ಸೃಷ್ಠಿಗೆತ್ನ ಮಹಿಳಾ ಲೀಗ್ ನೇತಾರೆ ವಿರುದ್ಧ ಕೇಸು

ಕಾಸರಗೋಡು: ಸೋಷ್ಯಲ್ ಮೀಡಿಯಾ ಮೂಲಕ ಶಾಂತಿ ಸಮಾಧಾನಕ್ಕೆ  ಭಂಗವುಂಟಾಗುವ ರೀತಿಯಲ್ಲಿ ಸುಳ್ಳು ಸಂದೇಶಗಳನ್ನು ಪ್ರಚಾರ ಮಾಡಿದ ಆರೋಪದಂತೆ ಚೆರುವತ್ತೂರಿನ ಮಹಿಳಾ ಲೀಗ್ ನೇತಾರೆ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಡಕ್ಕರ ಮುಳಕ್ಕೀಲ್ ನಿವಾಸಿ ಇ.ವಿ. ಶಾಜಿ ಎಂಬವರು ನೀಡಿದ ದೂರಿನಂತೆ ನಫೀಸ ಪೂಮಾಡತ್ತ್ ವಿರುದ್ಧ ಕೇಸು ದಾಖಲಿಸಲಾಗಿದೆ. ನಫೀಸ ಚೆರುವತ್ತೂರು ಗ್ರಾಮ ಪಂಚಾಯತ್ 2ನೇ ವಾರ್ಡ್ ಯುಡಿಎಫ್ ಅಭ್ಯರ್ಥಿಯಾಗಿದ್ದರು.  ಈ ತಿಂಗಳ 13ರಂದು ಮತ ಎಣಿಕೆ ನಡೆದ ಬೆನ್ನಲ್ಲೇ ಚೆರುವತ್ತೂರು ಮಡಕ್ಕರದಲ್ಲಿ ಮುಸ್ಲಿಂ ಲೀಗ್- ಸಿಪಿಎಂ …

ಏರುತ್ತಿದೆ ಕೋಳಿ ಮಾಂಸದ ಬೆಲೆ : ನಕಲಿ ಕ್ಷಾಮ ಸೃಷ್ಟಿಯೆಂದು ಆರೋಪ

ಕಾಸರಗೋಡು: ಸಾಮಾನ್ಯವಾಗಿ ಶಬರಿಮಲೆ ತೀರ್ಥಾಟನೆ ಸಮಯದಲ್ಲಿ ಬೆಲೆ ಕಡಿಮೆಯಾಗಲಿರುವ ಕೋಳಿ ಮಾಂಸಕ್ಕೆ ನಕಲಿ ಕ್ಷಾಮ ಸೃಷ್ಟಿಸುತ್ತಿರುವುದಾಗಿ ಗ್ರಾಹಕರು ಆರೋಪಿಸುತ್ತಾರೆ. ಈಗ ಕೋಳಿ ಮಾಂಸದ ಬೆಲೆ 150 ರೂ. ದಾಟಿದೆ.  ಕಳೆದ ವಾರ ಕೋಳಿ ಮಾಂಸಕ್ಕೆ 115ರಿಂದ 130 ರೂ. ವರೆಗಿದ್ದ ಬೆಲೆ ದಿಢೀರ್ ಆಗಿ 150ಕ್ಕೇರಿದೆ. ತಮಿಳುನಾಡಿನಿಂದ ಅಗತ್ಯಕ್ಕೆ ಕೋಳಿ ತಲುಪುತ್ತಿಲ್ಲವೆಂದು ರಖಂ ವ್ಯಾಪಾರಿ ಗಳು ತಿಳಿಸುತ್ತಾರೆ. ಆದರೆ ಚಿಲ್ಲರೆ ಮಾರಾಟ ವ್ಯಾಪಾರಿಗಳು ಇದನ್ನು ಅಂಗೀಕರಿಸುತ್ತಿಲ್ಲ.  ರಖಂ ವ್ಯಾಪಾರಿಗಳು ಮನಪೂರ್ವಕ ಉಂಟುಮಾಡು ತ್ತಿರುವ  ಬೆಲೆಯೇರಿಕೆ ಇದಾಗಿದೆಯೆಂದು ಗ್ರಾಹಕರು …

ಸೇವಾ ಭಾರತಿ ಆಂಬುಲೆನ್ಸ್ ಲೋಕಾರ್ಪಣೆ

ಕಾಸರಗೋಡು: ರಾಷ್ಟ್ರೀಯ ಸೇವಾ ಭಾರತಿ ನಗರ ಘಟಕದ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ  ಜರಗಿತು. ಕಾಸರಗೋಡು ಜನಾರ್ದನ (ಡ್ರೀಂ ಫ್ಲವರ್ ಐವಿಎಫ್ ಸೆಂಟರ್) ಆಸ್ಪತ್ರೆಯ ಡಾ| ಜಯಲಕ್ಷ್ಮಿ ಸೂರಜ್‌ರ ತಂದೆ ಡಾ| ವಿ.ಎಂ. ವಿಜಯನ್ ಅವರ ಸ್ಮರಣಾರ್ಥ ಆಂಬುಲೆನ್ಸ್ ಹಸ್ತಾಂತರಿಸಲಾಗಿದೆ.  ತಾಯಿ ಮಣಿ ಬೆನ್ ವಿಜಯನ್ ಸೇವಾ ಭಾರತಿಯ ಜಿಲ್ಲಾಧ್ಯಕ್ಷ  ದಿನೇಶ್ ಎಂ.ಟಿ ಅವರಿಗೆ ಆಂಬುಲೆನ್ಸ್ ಹಸ್ತಾಂತರಿಸಿದರು. ಈ ವೇಳೆ ಡಾ| ಜಯಲಕ್ಷ್ಮಿ ಸೂರಜ್, ಡಾ| ಸೂರಜ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ …

ಉದ್ಯಾವರ ಸಾವಿರ ಜಮಾಯತ್ ಉರೂಸ್‌ಗೆ ಇಂದು ಧ್ವಜಾರೋಹಣ

ಮಂಜೇಶ್ವರ:  ಉತ್ತರ ಕೇರಳದ  ಪ್ರಸಿದ್ಧ ಉದ್ಯಾವರ ಸಾವಿರ ಜಮಾಯತ್‌ನಲ್ಲಿ ಉದಯಾಸ್ತಮಾನ ಉರೂಸ್ ಇಂದಿನಿಂದ ಆರಂಭಗೊ ಳ್ಳುವುದಾಗಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ದರ್ಗಾ ಸಮಿತಿ ಅಧ್ಯಕ್ಷ ಪೂಕುಂಞಿ ತಂಙಳ್ ಉದ್ಯಾವರ ಧ್ವಜಾರೋಹಣಗೈಯ್ಯುವರು.  ಈ ತಿಂಗಳ 25ರಂದು ರಾತ್ರಿ 8.30ಕ್ಕೆ ಕಾಂತಾಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು. ಉರೂಸ್ ಸಮಿತಿ ಗೌರವಾಧ್ಯಕ್ಷ ಎಂ.ಎ. ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಆ ದಿನ ನಡೆಯುವ ಮಜ್ಲಿಸ್‌ಗೆ ಇಬ್ರಾಹಿಂ ಖಲೀಲುಲ್ ಮುಖಾರಿ ಕಡಲುಂಡಿ ತಂಙಳ್ ನೇತೃತ್ವ ನೀಡುವರು. ಫಾರೂಕ್ ನಇಮಿ ಮದ್‌ಹು ರಸೂಲ್ ಪ್ರವಚನ …

ಕೊಡ್ಯಮ್ಮೆ ಜಮಾಯತ್ ಮಸೀದಿಯಲ್ಲಿ ಉರೂಸ್ 21ರಿಂದ

ಕುಂಬಳೆ: ಕೊಡ್ಯಮ್ಮೆ ಜಮಾಯತ್ ಮಸೀದಿಯಲ್ಲಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್‌ರ ಹೆಸರಲ್ಲಿ ನಡೆಯುತ್ತಿರುವ ವಾರ್ಷಿಕ ಉರೂಸ್ ಹಾಗೂ ಧಾರ್ಮಿಕಪ್ರವಚನ ಈ ತಿಂಗಳ 21ರಿಂದ 28ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯ ಲಿದೆಯೆಂದು ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 1.30ಕ್ಕೆ ಮಖಾಂ ಸಿಯಾರತ್‌ಗೆ ಮಹಮೂದ್ ಸಅದಿ ನೇತೃತ್ವ ನೀಡುವರು. ಬಳಿಕ ಜಮಾಯತ್ ಅಧ್ಯಕ್ಷ ಎಂ.ಎಂ.ಕೆ. ಮೊಯ್ದು ಹಾಜಿ ಧ್ವಜಾರೋಹಣಗೈಯ್ಯುವರು. 21ರಂದು ರಾತ್ರಿ 8 ಗಂಟೆಗೆ ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಎಂ.ಎಂ.ಕೆ. ಮೊಯ್ದು ಹಾಜಿ ಅಧ್ಯಕ್ಷತೆ ವಹಿಸುವರು. …

ಪತ್ನಿಯನ್ನು ದಡದಲ್ಲಿ ನಿಲ್ಲಿಸಿ ಕ್ಷೇತ್ರದ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಮುಳುಗಿ ಸಾವು

ಪಯ್ಯನ್ನೂರು: ಪತ್ನಿಯನ್ನು ಕೆರೆಯ ಸಮೀಪ ನಿಲ್ಲಿಸಿ ಸ್ನಾನಕ್ಕಿಳಿದ  ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕಯ್ಯೂರು ಉದಯಗಿರಿಯ  ಇ.ಕೆ. ಅನಿಲ್ ಕುಮಾರ್ (36) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ಪಯ್ಯನ್ನೂರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಕೆರೆಯಲ್ಲಿ ಘಟನೆ ನಡೆದಿದೆ. ಪತ್ನಿ ಶೀಬಾಳೊಂದಿಗೆ ಅನಿಲ್ ಕುಮಾರ್ ಕ್ಷೇತ್ರಕ್ಕೆ ತಲುಪಿದ್ದರು. ದರ್ಶನದ ಬಳಿಕ ಸ್ನಾನಕ್ಕೆಂದು ಅನಿಲ್ ಕುಮಾರ್ ಕ್ಷೇತ್ರದ ಕೆರೆಗಿಳಿದಿದ್ದರು.  ಪತ್ನಿಯನ್ನು ಕೆರೆ ಸಮೀಪ ನಿಲ್ಲಿಸಿ ಅನಿಲ್ ಕುಮಾರ್ ಕೆರೆಗಿಳಿದಿದ್ದು,   ಅಲ್ಪ ಹೊತ್ತಿನ ಬಳಿಕ ನಾಪತ್ತೆಯಾಗಿದ್ದರು. …

ಕುಂಬ್ಡಾಜೆ ಘಟಕದ ವತಿಯಿಂದ ಪಿಂಚಣಿದಾರರ ದಿನಾಚರಣೆ

ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕುಂಬ್ಡಾಜೆ ಘಟಕ ವತಿಯಿಂದ ಪಿಂಚಣಿದಾರರ ದಿನಾಚರಣೆ ನಡೆಸಲಾಯಿತು.  ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಶ್ರೀಕೃಷ್ಣ ಭಟ್‌ರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪ್ರಾಂತ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಈಶ್ವರ ರಾವ್, ಜಿಲ್ಲಾ ಸಮಿತಿ ಸದಸ್ಯ ಶ್ರೀಧರ ಭಟ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಸೀತಾರಾಮ ರಾವ್, ಬ್ಲೋಕ್ ಸಮಿತಿ ಸದಸ್ಯ ವೆಂಕಟ್ರಮಣ ಕೆದಿಲ್ಲಾಯ, ಪಂಚಾಯತ್ ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಕುಂಬ್ಡಾಜೆ, ಜಿಲ್ಲಾ ಸಮಿತಿ ಸದಸ್ಯ ಸೀತಾರಾಮ ಭಟ್ ಉಪಸ್ಥಿತರಿದ್ದರು. ಬ್ಲೋಕ್ ಸಮಿತಿ ಅಧ್ಯಕ್ಷ ಸೂರ್ಯನಾರಾ …

ಶಿರಿಯದಲ್ಲಿ ಎಲ್‌ಡಿಎಫ್-ಯುಡಿಎಫ್ ಘರ್ಷಣೆ: ಯುಡಿಎಫ್ ಕಾರ್ಯಕರ್ತನ ಕಾರಿಗೆ ಮತ್ತೊಂದು ಕಾರು ಢಿಕ್ಕಿ ; ನಾಲ್ಕು ಮಂದಿಗೆ ಗಾಯ, ಓರ್ವ ಸೆರೆ

ಕುಂಬಳೆ : ಪಂಚಾಯತ್  ಚುನಾವಣೆಗೆ ಸಂಬಂಧಿಸಿ ಉಂಟಾದ ತರ್ಕದ ಹೆಸರಲ್ಲಿ ಶಿರಿಯದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಮಧ್ಯೆ ಘರ್ಷಣೆ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.ಇದೇ ವೇಳೆ ಎಲ್‌ಡಿಎಫ್ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಎರಡೂ ಭಾಗದ ಎರಡು ಕಾರುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಘರ್ಷಣೆ ಆರಂಭಗೊಂಡಿದೆಯೆಂದು ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಶಿರಿಯ ಮಸೀದಿ ಸಮೀಪ  ಕಾರು ನಿಲ್ಲಿಸಿ ಇಳಿದ ಎಲ್‌ಡಿಎಫ್ …