ಯುವ ನ್ಯಾಯವಾದಿ ಕಚೇರಿಯೊಳಗೆ ನೇಣು ಬಿಗಿದು ಸಾವಿಗೀಡಾದ ಘಟನೆ: ತನಿಖೆ ಆರಂಭ; ಮೊಬೈಲ್ ಫೋನ್ ಪೊಲೀಸ್ ಕಸ್ಟಡಿಗೆ

ಕುಂಬಳೆ: ಯುವ ನ್ಯಾಯ ವಾದಿ ಯೊಬ್ಬರು ತನ್ನ ಕಚೇರಿ ಯೊಳಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುರಿತು ಪೊಲೀಸರು  ತನಿಖೆ ತೀವ್ರಗೊ ಳಿಸಿದ್ದಾರೆ. ಯುವ ನ್ಯಾಯವಾದಿ, ಪ್ರಜಾ ಪ್ರಭುತ್ವ ಮಹಿಳಾ ಅಸೋಸಿ ಯೇಶನ್‌ನ ಕುಂಬಳೆ ಏರಿಯಾ ಕಮಿಟಿ ಸದಸ್ಯೆ ಹಾಗ ವಿಲ್ಲೇಜ್ ಕಾರ್ಯದರ್ಶಿಯೂ ಆಗಿರುವ ಬತ್ತೇರಿಯ ಸಿ. ರಂಜಿತ ಕುಮಾರಿ (30) ಅವರ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಮುಟ್ಟಂ ಬೇರಿಕೆ ನಿವಾಸಿಯಾದ ಕೃತಶ್ ಎಂಬವರ ಪತ್ನಿಯಾದ ರಂಜಿತ ಕುಮಾರಿ ಕಾಸರ ಗೋಡು …

ಕಣ್ಣೂರಿನಲ್ಲಿ ಬಿಜೆಪಿ ನೇತಾರನ ಮನೆಗೆ ಬಾಂಬೆಸೆತ

ಕಣ್ಣೂರು: ಕಣ್ಣೂರು ಸಮೀಪದ ಚೆರುಕುನ್ನಿನಲ್ಲಿ ಬಿಜೆಪಿ ನೇತಾರನ ಮನೆಗೆ ದುಷ್ಕರ್ಮಿಗಳು ಬಾಂಬೆಸೆದು ಹಾನಿಗೊಳಿಸಿದ್ದಾರೆ. ಬಿಜೆಪಿಯ ಕಲ್ಯಾಶ್ಶೇರಿ ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಬಿಜುರ  ಮನೆಗೆ ಇಂದು ಮುಂಜಾನೆ 2.30ರ ವೇಳೆ ಬಾಂಬೆಸೆಯಲಾಗಿದೆ. ಒಂದರ ಬಳಿಕ ಒಂದರಂತೆ ಮೂರು ಬಾಂಬ್ ಗಳನ್ನು ಈ ಮನೆಗೆ ಎಸೆಯಲಾಗಿದೆ.  ಇದರಿಂದ ಮನೆಯ ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿವೆ. ಮಾತ್ರವಲ್ಲದೆ ಮನೆಗೆ ಬಾರೀ ಹಾನಿ ಉಂಟಾಗಿದೆ. ವಿಷಯ ತಿಳಿದ ಕಣ್ಣಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಬಾಂಬೆಸೆದವರು ಯಾರು ಮತ್ತು ಅದರ ಹಿಂದಿನ …

ಪೋಕ್ಸೋ ಪ್ರಕರಣದ ಆರೋಪಿ ಬಂಧನ

ಮುಳ್ಳೇರಿಯ: ಪೋಕ್ಸೋ ಪ್ರಕರಣದಲ್ಲಿ ವಾರಂಟ್ ಆರೋಪಿಯಾಗಿರುವಾತ ಗಲ್ಫ್‌ನಿಂದ ಊರಿಗೆ ಮರಳುತ್ತಿದ್ದ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನೆಟ್ಟಣಿಗೆ ಐತ್ತನಡ್ಕದ ಮುಹಮ್ಮದಲಿ ಶಿಹಾಬ್ (25) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಆದೂರು ಪೊಲೀ ಸರು ೨೦೨೨ರಲ್ಲಿ ದಾಖಲಿಸಿದ ಪೋಕ್ಸೋ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರಂಭ: ಕ್ಷೇತ್ರಗಳಲ್ಲಿ ಭಕ್ತರ ಸಂದಣಿ

ಕಾಸರಗೋಡು: ಇಂದು ವಿಜಯದಶಮಿ  ಅರಿವಿನ ಮೊದಲ ಅಕ್ಷರ ದಾಖಲಿಸಿ ಚಿಣ್ಣರು ವಿದ್ಯಾರಂಭ ನಡೆಸಿದರು. ವಿವಿಧ  ಕ್ಷೇತ್ರಗಳಲ್ಲಿ, ಕೆಲವು ಸಂಸ್ಥೆಗಳಲ್ಲಿ ಮಕ್ಕಳಿಗೆ ವಿದ್ಯಾರಂಭ ಕೈಗೊಳ್ಳುವ ಕಾರ್ಯಕ್ರಮ ಇಂದು ನಡೆಸಲಾಗಿದೆ. ದೇವಿ ಮಹಿಷಾಸುರನನ್ನು ಕೊಂದು ಅಧರ್ಮವನ್ನು ತೊಡೆದುಹಾಕಿ ಧರ್ಮವನ್ನು ಸ್ಥಾಪಿಸಿದ ವಿಜಯ ಸಂಕೇತವಾಗಿ ಇಂದು ವಿಜಯದಶಮಿ ಆಚರಿಸಲಾಗುತ್ತಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಟೀಲು ಕ್ಷೇತ್ರ ಸಹಿತ ಜಿಲ್ಲೆಯ ಪ್ರಧಾನ ಹಲವು ದೇವೀ ಕ್ಷೇತ್ರಗಳಲ್ಲಿ ವಿದ್ಯಾರಂಭಕ್ಕೆ ಭಕ್ತರ ದಟ್ಟಣೆ ಕಂಡುಬಂದಿದೆ. ಜೊತೆಗೆ ದಶಮಿ ಪ್ರಯುಕ್ತ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಯಿತು.

ಕಟ್ಟಡದ ಮೇಲೆ ಸೀರೆಯಿಂದ ನೇಣು ಬಿಗಿದು ಕೆಳಕ್ಕೆ ಹಾರಿ ಯುವತಿ ಸಾವು

ಸೀತಾಂಗೋಳಿ: ವಾಸಿಸುವ ಕಟ್ಟಡದ ಒಂದನೇ ಮಹಡಿಯ ಕಬ್ಬಿಣದ ಕೊಂಡಿಗೆ ಸೀರೆ ಕಟ್ಟಿ ಕುತ್ತಿಗೆಗೆ ಬಿಗಿದ ಬಳಿಕ ಯುವತಿ ಕೆಳಕ್ಕೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಸೀತಾಂಗೋಳಿ ಅಪ್ಸರ ಮರದ ಮಿಲ್‌ನಲ್ಲಿ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ ಉತ್ತರ ಪ್ರದೇಶದ ಮುಹಮ್ಮದಾಬಾದ್ ಸಿರೌಳಿ ನಿವಾಸಿ ಖಾಲಿದ್ ಎಂಬವರ ಪತ್ನಿ ತಸ್ಲಿ ಮುನ್‌ನಿಶ (40) ಸಾವಿಗೀಡಾದ ಯುವತಿ. ಮೊನ್ನೆ ರಾತ್ರಿ 8.30೦ರ ವೇಳೆ ಘಟನೆ ನಡೆದಿದೆ. ಮರದ ಮಿಲ್‌ನ ಹಿಂಭಾಗದಲ್ಲೇ ಇರುವ ಕ್ವಾರ್ಟರ್ಸ್‌ನಲ್ಲಿ  ಯುವತಿ ಪತಿ ಹಾಗೂ ಮಗುವಿನೊಂದಿಗೆ …

ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಿಗ್ಗೆ ಕಾರು ಢಿಕ್ಕಿ ಹೊಡೆದು ಮಧ್ಯವಯಸ್ಕ ಮೃತಪಟ್ಟ ಘಟನೆ ನಡೆದಿದೆ. ತಮಿಳುನಾಡು ಉಲುಂದುಲ್ ಪೇಟೆ ವಿಲ್ಲುಪುರಂನ ವೇಲಾಯುಧಂ (56) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ 7.45ರ ವೇಳೆ ಕಾಸರಗೋಡು ಭಾಗ ದಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ  ಹೆದ್ದಾರಿ ಬದಿ ನಿಂತಿದ್ದ ವೇಲಾಯು ಧಂರಿಗೆ ಢಿಕ್ಕಿ ಹೊಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಢಿಕ್ಕಿಯ ಆಘಾತದಿಂದ ಸರ್ವೀಸ್ ರಸ್ತೆಗೆಸೆ ಯಲ್ಪಟ್ಟು ಗಂಭೀರ ಗಾಯಗೊಂಡ ವೇಲಾಯುಧಂರನ್ನು ಕೂಡಲೇ …

11.91 ಗ್ರಾಂ ಎಂಡಿಎಂಎ ಸಹಿತ ಆರೋಪಿ ಸೆರೆ

ಕಾಸರಗೋಡು: ಅಣಂಗೂ ರಿನಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮಾದಕದ್ರವ್ಯವಾದ 11.91 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅಣಂ ಗೂರು ಮೆಹಬೂಬ್ ರಸ್ತೆ ಬಳಿಯ ನಿವಾಸಿ ಮೊಹಮ್ಮದ್ ರಿಯಾಸ್ ಎ.ಎ (35) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಮನೆಯಿಂದ ಈ ಮಾಲು ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಲಿಫ್ಟ್‌ನಲ್ಲಿ ಸಿಲುಕಿದ 4ಮಂದಿ ಯುವಕರನ್ನು ರಕ್ಷಿಸಿದ ಉಪ್ಪಳ ಅಗ್ನಿಶಾಮಕದಳ

ಉಪ್ಪಳ: ಫ್ಲಾಟ್‌ವೊಂದರ ಲಿಫ್ಟ್ ಹಾನಿಯಾಗಿ ಅದರೊಳಗೆ ಸಿಲುಕಿಕೊಂಡ 4 ಮಂದಿ ಯುವಕ ರನ್ನು ಉಪ್ಪಳ ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಡೆದಿದೆ. ಉಪ್ಪಳ ಬಸ್ ನಿಲ್ದಾಣ ಬಳಿಯಿರುವ ಫ್ಲ್ಲಾಟ್‌ವೊಂದರಲ್ಲಿ ನಿನ್ನೆ ರಾತ್ರಿ ಸುಮಾರು 7ರಿಂದ 8 ಗಂಟೆ ಮಧ್ಯೆ  ಕೆಳ ಅಂತಸ್ತಿನಿಂದ ನಾಲ್ಕು ಮಂದಿ ಯುವಕರು ಲಿಫ್ಟ್‌ಗೆ ಹತ್ತಿದ್ದರು. ಎರಡನೇ ಅಂತಸ್ತಿಗೆ ತಲುಪುವ ಮಧ್ಯೆ ಲಿಫ್ಟ್ ಹಾನಿಗೊಂಡು ನಿಂತಿದೆ. ಈ ವೇಳೆ ಗಾಬರಿಗೊಂಡ ಯುವಕರು ಫ್ಲಾಟ್‌ನ ಇತರರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಅರ್ಧದಲ್ಲಿ ನಿಂತಿರುವ …

ಕಚೇರಿ ಉದ್ಘಾಟನೆ ಪಕ್ಷದ ಬಲವರ್ಧನೆಗೆ ಪೂರಕ-ಅಶ್ವಿನಿ ಎಂ.ಎಲ್.: ನೀರ್ಚಾಲಿನಲ್ಲಿ ಭಾಜಪ ಬದಿಯಡ್ಕ ಪಶ್ಚಿಮ ವಲಯ ಕಚೇರಿ ಉದ್ಘಾಟನೆ

ಬದಿಯಡ್ಕ: ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಬದಿಯಡ್ಕ ಪಂಚಾಯತ್‌ನ ಪಶ್ಚಿಮ ವಲಯದಲ್ಲಿ ಕಾರ್ಯಾಲಯದ ಅಗತ್ಯತೆಯನ್ನು ಮನಗಂಡು ನೀರ್ಚಾಲಿನ ಹೃದಯ ಭಾಗದಲ್ಲಿ ಪಕ್ಷದ ಕಚೇರಿಯನ್ನು ತೆರೆದಿರುವುದು ನಮ್ಮ ಬಲವರ್ಧನೆಗೆ ಪೂರಕವಾಗಲಿದೆ. ಮುಂದಿನ ಚುನಾವಣೆಯಲ್ಲಿ ಪಂಚಾಯತ್‌ನ ಆಡಳಿತ ಭಾರತೀಯ ಜನತಾಪಕ್ಷದ್ದು ಆಗಬೇಕು. ಇದಕ್ಕಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂದುವರಿದು ತಳಮಟ್ಟದಲ್ಲಿ ಪ್ರತೀಮನೆಯನ್ನು ಸಂಪರ್ಕಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಹೇಳಿದರು.ನೀರ್ಚಾಲಿನಲ್ಲಿ ಭಾರತೀಯ ಜನತಾ ಪಕ್ಷದ ಬದಿಯಡ್ಕ ಪಂಚಾಯತ್ ಪಶ್ಚಿಮ ವಲಯ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಸ್ಲಿಂಲೀಗ್ ಆಡಳಿತವು …

ಉತ್ತರ ಕೇರಳದ ಆರೋಗ್ಯ ವಲಯಕ್ಕೆ ಹೊಸ ದಿಶೆ ನೀಡಿ ಆಸ್ಟರ್ ಮಿಮ್ಸ್ ಕಾಸರಗೋಡಿನಲ್ಲಿ ಕಾರ್ಯಾರಂಭ

ಕಾಸರಗೋಡು: ದೇಶದ ಮುಂಚೂಣಿ ಆರೋಗ್ಯ ಸೇವಾದಾತರಾದ ಆಸ್ಟರ್ ಡಿ.ಎನ್. ಹೆಲ್ತ್‌ಕೇರ್‌ನ ಕೇರಳದ 8ನೇ ಆಸ್ಪತ್ರೆ ಇಂದಿರಾನಗರದಲ್ಲಿ ಆರಂಭಗೊಂಡಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಆಸ್ಪತ್ರೆಯನ್ನು ಇಂದು ಬೆಳಿಗ್ಗೆ ದೀಪ ಬೆಳಗಿಸಿ ಉದ್ಘಾಟಿಸಿದರು. 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ, 264 ಹಾಸಿಗೆಗಳಿರುವ ಉತ್ತರ ಕೇರಳದ ಆರೋಗ್ಯ ವಲಯಕ್ಕೆ  ಕೊಡುಗೆಗಳನ್ನು ನೀಡಬಹುದಾದ ಸಂಸ್ಥೆಯನ್ನು ಉದ್ಘಾಟಿ ಸಿರುವುದಾಗಿ ಮುಖ್ಯಮಂತ್ರಿ ನುಡಿದರು. 2.1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 31 ಮೆಡಿಕಲ್ ಸ್ಪೆಷಲಿಸ್ಟ್‌ಗಳಿರುವ ಈ ಆಸ್ಪತ್ರೆಯಲ್ಲಿ ಕಾಸರಗೋಡು ಹಾಗೂ ಸಮೀಪದ ಪ್ರದೇಶದ …