ಯುವತಿ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಓರ್ವ ಆರೋಪಿ ಬಂಧನ: ಇನ್ನೋರ್ವನಿಗಾಗಿ ಶೋಧ

ಹೊಸಂಗಡಿ: ಹೊಸಂಗಡಿ ಪೇಟೆಯಲ್ಲಿ ಹಾಡಹಗಲೇ ಯುವತಿಯ ಕುತ್ತಿಗೆಯಿಂದ ಎರಡೂಕಾಲು ಪವನ್ ಚಿನ್ನದ ಸರ ಕಸಿದು ಪರಾರಿಯಾದ ಆರೋಪಿಗಳ ಪೈಕಿ ಓರ್ವ ಸೆರೆಗೀಡಾಗಿದ್ದಾನೆ. ಬಂಬ್ರಾಣ ಕಳತ್ತೂರು ಚೆಕ್‌ಪೋಸ್ಟ್ ಬಳಿಯ ನಿವಾಸಿ ಸಂದೀಪ್ ಎ ಯಾನೆ ಸಂತು (31) ಎಂಬಾತನನ್ನು ಮಂಜೇಶ್ವರ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸರ ಎಗರಿಸಲು ಈತನೊಂದಿಗಿದ್ದ ಇನ್ನೋರ್ವನ ಪತ್ತೆಗಾಗಿ ಶೋಧ ಮುಂದುವರಿಸಿರುವುದಾಗಿ  ಪೊಲೀಸರು ತಿಳಿಸಿದ್ದಾರೆ. ಯುವತಿಯ ಕುತ್ತಿಗೆಯಿಂದ ಕಸಿದ ಚಿನ್ನದ ಸರವನ್ನು ಆರೋಪಿಗಳು ಕಾಸರಗೋಡಿನ ಜ್ಯುವೆಲ್ಲರಿ ಯೊಂದರಲ್ಲಿ ಅಡವಿರಿಸಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. …

ಹಲವು ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣ: ಬೇಕಲದಿಂದ ತಲೆಮರೆಸಿಕೊಂಡಿದ್ದ ಮದ್ರಸ ಅಧ್ಯಾಪಕ ಬಿಹಾರದಲ್ಲಿ ಸೆರೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಯಾದ  ಮದ್ರಸ ಅಧ್ಯಾಪಕ ಸೆರೆಗೀಡಾಗಿದ್ದಾನೆ.  ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಮಲಪ್ಪುರಂ  ಆದವನಾಡ್ ನಿವಾಸಿ ಯಾದ ಎಂ.ಕೆ.ಮೊಹಮ್ಮದ್ ಎಂಬಾತನನ್ನು ವಳಾಂಜೇರಿ ಪೊಲೀಸರು ಬಂಧಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಹಮ್ಮದ್ ಮದ್ರಸ ಅಧ್ಯಾಪಕನಾಗಿದ್ದನು.  ಪ್ರಾಯಪೂರ್ತಿ ಯಾಗದ ಇಬ್ಬರು ಮಕ್ಕಳಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಈತನ ವಿರುದ್ಧ ಬೇಕಲ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದರು.  ಅಷ್ಟರಲ್ಲಿ ಈತ ತಲೆಮರೆಸಿಕೊಂಡಿ ದ್ದನು. ಇದೇ ವೇಳೆ ಮಲಪ್ಪುರದ ಮದ್ರಸವೊಂದರ ೧೪ …

ಕರ್ನಾಟಕ ಮದ್ಯ ಸಹಿತ ಹಲವು ಅಬಕಾರಿ ಪ್ರಕರಣಗಳ ಆರೋಪಿ ಸೆರೆ

ಕುಂಬಳೆ: ಕರ್ನಾಟಕ ನಿರ್ಮಿತ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕಡಂಬಾರು ಅಂಗಡಿಪದವು ನಿವಾಸಿ ಬಿ.ಎಂ. ಅನಿಲ್ ಕುಮಾರ್ ಎಂಬಾತನನ್ನು ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಎ.ಬಿ. ಅಬ್ದುಲ್ಲ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ಬೆಳಿಗ್ಗೆ ಅಂಗಡಿಪದವಿನಿಂದ ಈತನನ್ನು ಬಂಧಿಸಲಾಗಿದೆ. ಆರೋಪಿಯ ಕೈಯಿಂದ 1.35 ಲೀಟರ್ ಕರ್ನಾಟಕ ಮದ್ಯ ವಶಪಡಿಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಕುಂಬಳೆ ರೇಂಜ್‌ನಲ್ಲಿ ೫ ಅಬಕಾರಿ ಪ್ರಕರಣಗಳು ದಾಖಲಾ ಗಿರುವುದಾಗಿ  ತಿಳಿಸಲಾಗಿದೆ. ಸಿವಿಲ್ ಎಕ್ಸೈಸ್ ಅಫೀಸರ್‌ಗಳಾದ ವಿ.ಜಿ ತಿನ್, ಪಿ. …

ಪೈವಳಿಕೆಯಲ್ಲಿ ತ್ಯಾಜ್ಯ ಸಮಸ್ಯೆ:ಡಿವೈಎಫ್‌ಐಯಿಂದ 29ರಂದು ಪಂಚಾಯತ್ ಧರಣಿ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ ಅವೈಜ್ಞಾನಿಕ ತ್ಯಾಜ್ಯ ವಿಲೇ ವಾರಿ ಕ್ರಮದ ವಿರುದ್ಧ, ವಿಲೇವಾರಿ ಕೇಂದ್ರಗಳಲ್ಲಿ ತಿಂಗಳುಗಳಿAದ ಶೇಖರಣೆಗೊಂಡಿರುವ ತ್ಯಾಜ್ಯವನ್ನು ತುರ್ತಾಗಿ ತೆರವುಗೊಳಿಸಬೇಕು, ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಗಳಲ್ಲಿ ಅಧಿಕಾರಿಗಳು ತೋರಿದ ತೀವ್ರ ನಿರ್ಲಕ್ಷ್ಯವನ್ನು ಖಂಡಿಸಿ ಡಿಪಿs ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಧರಣಿ ಹಮ್ಮಿಕೊಳ್ಳಲಾಗಿದೆ. ಜೂನ್ 29ರಂದು ಬೆಳಗ್ಗೆ ೧೦ಕ್ಕೆ ಪೈವಳಿಕೆ ವಿಲೇಜ್ ಕಚೇರಿ ಆವರಣದಿಂದ ಯುವಜನ ಮೆರ ವಣಿಗೆ ಆರಂಭವಾಗಲಿದೆ. ಹಸಿರು ಕ್ರಿಯÁ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾವುದೇ ಸಂಸ್ಕರಣೆ …

ಕಣ್ಣೂರು ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಉಚಿತ ರೋಗ ನಿರ್ಣಯ ಶಿಬಿರ 28ರಂದು

ಕಣ್ಣೂರು: ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಸರ್ಜರಿ ವಿಭಾಗದ ನೇತೃತ್ವದಲ್ಲಿ ಉಚಿತ ರೋಗ ನಿರ್ಣಯ ಶಿಬಿರ ನಡೆಸಲಾಗುವುದು. ಜೂನ್ ೨೮ರಂದು ಬೆಳಿಗ್ಗೆ 10ರಿಂದ 2 ಗಂಟೆವರೆಗೆ ಶಿಬಿರ ನಡೆಯಲಿದೆ. ಹರ್ನಿಯ, ಗುಧ ಸಂಬಂಧವಾದ ರೋಗಗಳು, ಥೈರೋಯ್ಡ್ ಗಡ್ಡೆಗಳು, ಸ್ತನದಲ್ಲಿನ ಗಡ್ಡೆಗಳು, ಡಯಾಬಿಟಿಕ್ ಫೂಟ್ ಮೊದಲಾದ ಸಮಸ್ಯೆಗಳಿರುವವರಿಗೆ ಶಿಬಿರದಲ್ಲಿ ಭಾಗವಹಿಸಬಹುದು. ರೇಡಿಯೋಲಜಿ, ಲ್ಯಾಬ್ ಸೇವೆಗಳಲ್ಲಿ ರಿಯಾಯಿತಿ ಅಲ್ಲದೆ ಶಿಬಿರಗಳಲ್ಲಿ ಭಾಗವಹಿಸುವವರಿಗೆ ಮುಂದಿನ ಚಿಕಿತ್ಸೆಗಳಲ್ಲಿ ರಿಯಾಯಿತಿಗಳು ಲಭಿಸುವುದು. ಮೊದಲಾಗಿ ನೋಂದಾಯಿಸುವ ನೂರು ಮಂದಿಗೆ ಮಾತ್ರವೇ ಉಚಿತ ತಪಾಸಣೆ ಲಭಿಸುವುದು. ಮುಂಗಡವಾಗಿ …

ಬಿಆರ್‌ಪಿಎಂಎಸ್ ಜಿಲ್ಲಾ ಸಮ್ಮೇಳನ, ಕುಟುಂಬ ಸಂಗಮ

ಕಾಸರಗೋಡು: ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘ್ (ಬಿಆರ್‌ಪಿಎಂಎಸ್) ಕಾಸರಗೋಡು ಜಿಲ್ಲಾ ಸಮ್ಮೇಳನ ಹಾಗೂ ಕುಟುಂಬ ಸಂಗಮ ಚಟ್ಟಂಚಾಲ್ ತೈರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಘಟನೆಯ ರಾಜ್ಯಾಧ್ಯಕ್ಷ ಎಂ. ವಿಜಯ ಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಹಿರಿಯ ಪ್ರಚಾರಕ್ ಎ.ಸಿ. ಗೋಪಿನಾಥ್ ಪ್ರಧಾನ ಭಾಷಣ ಮಾಡಿದರು. ಬಿಆರ್‌ಪಿಎಂಎಸ್ ರಾಜ್ಯ ಮುಖಂಡರಾದ ಸಿ.ಎಚ್. ಸುರೇಶ್, ಕೆ. ದಯಾನಂದ, ರಾಜಲಕ್ಷ್ಮಿ, ಕುಂಞಮ್ಮ, ಪಿ.ಆರ್. ಮುರಳೀಧರನ್, ಎಸ್.ಎಸ್. ಸುರೇಶ್ ಕುಮಾರ್, ರಘು ಕುಮಾರ್ ನಾಯರ್, …

ಪೈವಳಿಕೆಯಲ್ಲಿ ಬೀದಿನಾಯಿಗಳ ಕಾಟ: ಸ್ಕೂಟರ್‌ನ ಸೀಟು ಹರಿದುಹಾಕಿ ಅಟ್ಟಹಾಸ

ಪೈವಳಿಕೆ: ಪೈವಳಿಕೆ ಪೇಟೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದ ಸ್ಥಳೀ ಯರು ಭೀತಿಗೊಳಗಾಗಿದ್ದಾರೆ. ಪೇಟೆ ಯಲ್ಲಿ ನಾಯಿಗಳ ಹಿಂಡು ಅಲೆ ದಾಡುತ್ತಿರುವುದು ಪಾದಚಾರಿಗಳಲ್ಲಿ ತೀವ್ರ ಭೀತಿಗೆ ಕಾರಣವಾಗಿದೆ. ಅಲ್ಲದೆ ವಾಹನ ಸವಾರರನ್ನು ಬೆನ್ನಟ್ಟಿ ಆಕ್ರಮಿಸಲು ಮುಂದಾಗು ತ್ತಿರುವುದಾಗಿ ದೂರಲಾಗಿದೆ. ಬುಧವಾರ ರಾತ್ರಿ ಪೈವಳಿಕೆಯ ನಜೀರ್ ಎಂಬವರ ಮನೆಯ ಸಿಟ್‌ಔಟ್‌ನಲ್ಲಿ ನಿಲ್ಲಿಸಲಾದ ಸ್ಕೂಟರ್‌ನ ಸೀಟ್‌ನ್ನು ನಾಯಿಗಳು ಹರಿದು ಹಾಕಿದ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಬೀದಿ ನಾಯಿಗಳ ಕಾಟದಿಂದ ನಡೆದಾಡಲು ಸಾಧ್ಯವಾಗದ …

ಕಾಲ್ಚೆಂಡಾಟ ಮಧ್ಯೆ ವಿವಾದ: 11ರ ಬಾಲಕ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕೋಟ್ಟಯಂ: 11ರ ಹರೆಯದ ಬಾಲಕನನ್ನು ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈರಾಟ್‌ಪೇಟ ಕಿಡನಾಡ್ ಪೇಟೆಯಲ್ಲಿ ವಾಸಿಸುವ ಸುಭಾಷ್‌ರ ಪುತ್ರ ಆಮೋಸ್ ಮೃತಪಟ್ಟ ಬಾಲಕ. ಕಾಲ್ಚೆಂಡಾಟದ ಮಧ್ಯೆ ಸಹೋದರನೊಂದಿಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ.  ನಿನ್ನೆ ಸಂಜೆ ಆಟದ ಮಧ್ಯೆ ತರ್ಕವುಂಟಾಗಿತ್ತು. ಶಾಲೆಯಿಂದ ಬಂದ ಬಳಿಕ ಮೈದಾನದಲ್ಲಿ ಕಾಲ್ಚೆಂಡಾಟ ಆಡುತ್ತಿದ್ದ ಮಧ್ಯೆ ಸಹೋದರನೊಂದಿಗೆ ಜಗಳವುಂಟಾಗಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕ ಮನೆಗೆ ಮರಳಿ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಆಮೋಸ್ ತಿಡನಾಡ್ ಸರಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಹಿರಿಯ ವ್ಯಾಪಾರಿ ನಿಧನ

ಉಪ್ಪಳ: ಸೋಂಕಾಲು ಕೊಡಂಗೆ ರಸ್ತೆಯ ಬಳಂಕುಡೆ ನಿವಾಸಿ, ಕಾಸರಗೋಡು ವಿವೇಕಾನಂದ ನಗರದಲ್ಲಿ ವಾಸವಾಗಿರುವ ಹಿರಿಯ ವ್ಯಾಪಾರಿ ನಾರಾಯಣ.ಎಂ (78) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತೆ್ಸಯಲ್ಲಿದ್ದರು. ಇವರು ಪ್ರತಾಪನಗರ ಹಾಗೂ ಕೊಡಂಗೆಯಲ್ಲಿ ಹಲವಾರು ವರ್ಷಗಳ ಕಾಲ ದಿನಸಿ ವ್ಯಾಪಾರಿಯಾಗಿದ್ದರು. ಬಿಜೆಪಿ ಹಿರಿಯ ಕಾರ್ಯಕರ್ತರಾಗಿದ್ದ ಇವರು ದಿವಂಗತರಾದ ಅಂಬು ವೈದ್ಯರ್ -ಕಲ್ಯಾಣಿ ಅಮ್ಮ ದಂಪತಿ ಪುತ್ರರಾಗಿದ್ದು, ಪತ್ನಿ ಪ್ರಮೀಳ, ಮಕ್ಕಳಾದ ನಿಶಾ, ನಿಮ್ಮಿ, ಸೌಮ್ಯ, ಅಳಿಯಂದಿರಾದ ಸಜಿತ್, ಸುಜಿತ್, ಸಹೋದರ -ಸಹೋದರಿಯರಾದ ಯಶೋದ, …

ಹೊಸಂಗಡಿ ರೈಲ್ವೇ ಮೇಲ್ಸೇತುವೆ: ನಿರೀಕ್ಷೆಯಲ್ಲಿ ಸ್ಥಳೀಯರು: ದಶಕಗಳ ಕನಸು ನನಸಾದಿತೇ..!

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಧಾನ ಪೇಟೆಯಾದ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆಗಾಗಿ ಸ್ಥಳೀಯರು ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಕೇಂದ್ರದ ಯುಪಿಎ ಆಡಳಿತ ಕಾಲದಲ್ಲಿ ಇ. ಅಹಮ್ಮದ್ ಕೇಂದ್ರ ರೈಲ್ವೇ ಸಹ ಸಚಿವರಾಗಿದ್ದಾಗ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಮಂಜೂರು ಮಾಡಬೇಕೆಂದು ಆಗ್ರಹ ಕೇಳಿ ಬಂದಿತ್ತು. ಅಗತ್ಯದ ಮೊತ್ತ ಮಂಜೂರು ಮಾಡಿರುವುದಾಗಿಯೂ ಪ್ರಚಾರವಿತ್ತು. ಆದರೆ ಆ ಬಳಿಕ ಎರಡು ದಶಕಗಳು ಕಳೆದರೂ ಯಾವುದೇ ಕ್ರಮ ಉಂಟಾಗಿಲ್ಲ. ಮಂಜೇಶ್ವರ ತಾಲೂಕಿನಲ್ಲಿ ಮಾತ್ರವಾಗಿ ನಾಲ್ಕು ರೈಲ್ವೇ ಕ್ರಾಸಿಂಗ್ ವ್ಯವಸ್ಥೆಯಿದೆ. ಹೊಸಂಗಡಿಗೆ ಹೊರತಾಗಿ ಮಂಜೇಶ್ವರ, ಮುಟ್ಟಂ, ಉಪ್ಪಳ …