ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾಪ್ತಿ

ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಭಗವತಿ ಮಾತೆಯರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಿನ್ನೆ ಸಮಾಪ್ತಿಗೊಂಡಿತು. ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ ಪೌರೋಹಿತ್ಯ ವಹಿಸಿದರು. ಇದೇ ವೇಳೆ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾ ನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿವಿಧ ವಿಭಾಗಗಳ ಗಣ್ಯರು ಉಪಸ್ಥಿತರಿ ದ್ದರು. ಈ ತಿಂಗಳ 26ರಿಂದ ಮೇ 3ರ ತನಕ ಕ್ಷೇತ್ರದಲ್ಲಿ ಭರಣಿ ಮಹೋತ್ಸವ ವಿವಿಧ ಕಾರ್ಯ ಕ್ರಮಗಳೊಂದಿಗೆ …

ಕುಡಿಯುವ ನೀರು ಕ್ಷಾಮ ತೀವ್ರಗೊಂಡ ಸ್ಥಳಗಳಲ್ಲಿ ಕುಡಿಯುವ ನೀರು ವಿತರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಕುಡಿಯುವ ನೀರು ಕ್ಷಾಮ ತೀವ್ರಗೊಳ್ಳುತ್ತಿರುವ  ಹಿನ್ನೆಲೆಯಲ್ಲಿ ಎಲ್ಲಾ ಪ್ರದೇಶಗಳಿಗೂ ಕುಡಿಯುವ ನೀರು ಲಭಿಸುತ್ತದೆಯೇ ಎಂಬುದನ್ನು ಖಚಿತಪಡಿಸಬೇಕೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿ ಚೇಂಬರ್‌ನಲ್ಲಿ ನಡೆದ ಜಿಲ್ಲಾ ಬರ ಅವಲೋಕನ ಸಭೆಯಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ನಿರ್ದೇಶ ನೀಡಿದ್ದಾರೆ. ತೀವ್ರವಾದ ಕುಡಿಯುವ ನೀರು ಕ್ಷಾಮ ಎದುರಿಸುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಲಭ್ಯಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಇಲಾಖೆಯ ಜೋಯಿಂಟ್ ಡೈರೆಕ್ಟರ್‌ಗೆ ಹೊಣೆ ನೀಡಲಾಗಿದೆ. ವಿದ್ಯುತ್  ವಿತರಣೆಯಲ್ಲಿನ ತಡೆಯನ್ನು ಪರಿಹರಿಸಿ ಬಾವಿಕ್ಕರೆ …

ರಜಾ ಕಾಲದಲ್ಲಿ ಉಲ್ಲಾಸ ಮೂಡಿಸಲು ಕೈಕಂಬದಲ್ಲಿ ಎಕ್ಸ್‌ಪೋ ಇಂದಿನಿಂದ

ಕುಂಬಳೆ: ರಜಾ ಕಾಲದಲ್ಲಿ ಉಲ್ಲಾಸದಿಂದಿರಲು ಉಪ್ಪಳ ಎಕ್ಸ್‌ಪೋ ಇಂದಿನಿಂದ ಆರಂಭಗೊಳ್ಳಲಿದೆ. ಏಷ್ಯನ್ ಟೂರ್ಸ್ ಆಂಡ್ ಟ್ರಾವಲ್ಸ್ ಇರಿಟ್ಟಿ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ. ಸಂಜೆ 3 ಗಂಟೆಯಿಂದ ರಾತ್ರಿ ೧೦.೩೦ರ ವರೆಗೆ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8ಗಂಟೆಯಿಂದ 10.30ರ ವರೆಗೆ ಪ್ರತೀ ದಿನ ಮಲಯಾಳದ ಖ್ಯಾತರಾದ ಕಲಾವಿದರು ಭಾಗವಹಿಸುವ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ. ಮಕ್ಕಳಿಗೆ, ಹಿರಿಯರಿಗೆ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳು, ಸ್ಥಳದಲ್ಲೇ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಂಗವಾಗಿ ಫ್ಲವರ್ ಶೋ, ಅಪೂರ್ವ ವಿಭಾಗದ ಹೂ ಕುಂಡಗಳು ಸಹಿತವಿರುವ ಸಾಮಗ್ರಿಗಳ …

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೆಸರಲ್ಲಿ ಮೋಟಾರು ಕಾರ್ಮಿಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಿರಲಿ-ಟ್ಯಾಕ್ಸಿ ಆಂಡ್ ಲೈಟ್ ವೆಹಿಕಲ್ ಯೂನಿಯನ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಹೆಸರಲ್ಲಿ ಮೋಟಾರು ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗದಂತೆ   ಅಧಿಕಾರಿಗಳು ಜಾಗ್ರತೆ ವಹಿಸಬೇಕೆಂದು ಟ್ಯಾಕ್ಸಿ ಆಂಡ್ ಲೈಟ್ ಮೋಟಾರ್ ವೆಹಿಕಲ್  ಯೂನಿಯನ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ಸುನಿಲ್ ವಾಳಕ್ಕೋಡ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಅನಿಲ್ ಬಿ ನಾಯರ್, ಹರೀಶ್ ಕುದ್ರೆಪ್ಪಾಡಿ, ರಾಜೇಶ್ ಪೊಳ್ಳಕ್ಕಡ, ರಾಜೀವನ್ ಮಾವುಂಗಾಲ್, ಗೀತಾ ಬಾಲಕೃಷ್ಣನ್ ಮಾತನಾಡಿದರು. ನೂತನ ಪದಾಧಿ ಕಾರಿಗಳಾಗಿ ಸುನಿಲ್ ವಾಳಕ್ಕೋಡ್ (ಅಧ್ಯಕ್ಷ), ಚಂದ್ರನ್ …

ಶುದ್ಧವಾದ ಮನಸ್ಸಿನಿಂದ ಹೃದಯದಲ್ಲಿ ರುದ್ರದೇವನ ಪ್ರತಿಷ್ಠೆ ಮಾಡಬೇಕು-ಅದಮಾರು ಶ್ರೀ

ಬದಿಯಡ್ಕ: ಎಲ್ಲ ಕಡೆಗಳಲ್ಲಿಯೂ ಇರುವ ಭಗವಂತ ಶಿಲೆಯಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ಭಕ್ತನಿಗೆ ಭಕ್ತಿ ಇದ್ದರೆ ಆತನಿಗೆ ದೇವರು ಕಾಣಿಸಿ ಕೊಳ್ಳುತ್ತಾನೆ. ನಮ್ಮ ಹೃದಯವೆಂಬ ದೇಗುಲದಲ್ಲಿ ಭಗವಂತನ ಪ್ರತಿಷ್ಠೆ ಆಗಬೇಕು. ಶುದ್ಧವಾದ ಮನಸ್ಸಿದ್ದರೆ ಮಾತ್ರ ಉತ್ತಮ ಆರೋಗ್ಯ ಸಿದ್ಧಿಸಲು ಸಾಧ್ಯವಿದೆ. ನಿರಂತರ ಜಪ, ಅನು ಷ್ಠಾನದ ಮೂಲಕ ನಮ್ಮ ಹೃದಯದಲ್ಲಿ ರುದ್ರದೇವನ ಪ್ರತಿಷ್ಠೆಯನ್ನು ಮಾಡಬೇಕು. ಗಾಳಿ, ನೀರು, ದೇಹವನ್ನು ನೀಡಿದ ಭಗವಂತನನ್ನು ನಿತ್ಯನಿಯಮಿತವಾಗಿ ನೆನೆಯುತ್ತಿರಬೇಕು ಎಂದು ಶ್ರೀಮದ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ಅದಮಾರು ಮಠ ಉಡುಪಿಯ ಶ್ರೀ ಈಶಪ್ರಿಯ …

ಭಜಕರಲ್ಲಿ ಬಲಗೊಂಡಿರುವ ಭಕ್ತಿಯ ಸಂಕೇತವೇ ಬ್ರಹ್ಮಕಲಶೋತ್ಸವಗಳು-ಎಡನೀರು ಶ್ರೀ

ಕಾಸರಗೋಡು: ಭಜಕರಲ್ಲಿ ಬಲಗೊಂಡಿರುವ ಭಕ್ತಿಯ ಸಂಕೇತವೇ ಅಲ್ಲಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಗಳಾಗಿವೆ. ದೇವರಿಗೆ ಸಲ್ಲಿಸಲ್ಪಡುವ ಬ್ರಹ್ಮಕಲಶ ಮೂಲಾರ್ಥದಲ್ಲಿ ನಮ್ಮೊಳಗಿನ ಕ್ಲೇಶಗಳು ಮಾಯವಾಗಿ ಹೊಸ ಚೈತನ್ಯಕ್ಕೆ ತೆರೆದುಕೊಳ್ಳಲು ಪ್ರೇರೇಪಿಸುವ ಕಲಶವಾಗಿದೆ. ನಮ್ಮ ಒಳಗಿನ ಅಹಂ ಎಂಬ ಭಾವ ಇಲ್ಲವಾಗಿ ನವ ಪ್ರತಿಷ್ಠೆ ಆಗಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.ಶ್ರೀ …

ದೈವ ನೋಡಲು ಹೋದ 15ರ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯ: ಪ್ರಶ್ನಿಸಿದ ಹೆತ್ತವರಿಗೆ ಆಕ್ರಮಣ

ಕಾಸರಗೋಡು: ಕಾರಗುಳಿಗನ್ ದೈವವನ್ನು ಕಾಣಲೆಂದು ತೆರಳಿದ 15ರ ಹರೆಯದ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯವುಂಟಾಗಿದೆ. ಈ ಬಗ್ಗೆ ಪ್ರಶ್ನಿಸಿದ ಬಾಲಕ ಹಾಗೂ ಹೆತ್ತವರನ್ನು ಹೊಡೆದು ಹಲ್ಲೆಗೈದ ಮೂರು ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಿಲಕೈ ಅಡುಕ್ಕತ್‌ಪರಂಬಿಲ್‌ನ 15ರ ಹರೆಯದ ಬಾಲಕನ ದೂರಿನಂತೆ ಪುದುಕೈ ನಿವಾಸಿಗಳಾದ ಅಭಿಲಾಷ್, ಶಿಬು, ಶಿಬಿನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆಗೆ ಚತುರಕಿಣರ್ ಕಾರಗುಳಿಗನ್ ದೈವಸ್ಥಾನದ ಸಮೀಪ ಘಟನೆ ನಡೆದಿದೆ. ದೈವ ಕಾಣಲೆಂದು …

ದೇರಂಬಳ ಸೇತುವೆ ಕುಸಿದು ಬಿದ್ದು ವರ್ಷಗಳು ಕಳೆದರೂ ನಿರ್ಮಾಣಕ್ಕೆ ಕ್ರಮವಿಲ್ಲ: ಸ್ಥಳೀಯರಿಗೆ ಸಂಕಷ್ಟ

ಉಪ್ಪಳ: ದೇರಂಬಳದಲ್ಲಿ ಕಾಲು ಸೇತುವೆ ಕುಸಿದು ಬಿದ್ದು ಹಲವು ವರ್ಷಗಳು ಕಳೆದರೂ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಊರವರಿಗೆ ಸಮಸ್ಯೆಯಾಗಿದೆ. ಮಂಗಲ್ಪಾಡಿ, ಮೀಂಜ ಪಂಚಾಯತ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಈಗ ಸಂಚಾರ ದುಸ್ತರವಾಗಿದೆ. ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು. ಆದರೆ ಈಗ ಈ ಪ್ರದೇಶಗಳಿಗೆ ಹಲವಾರು ಕಿಲೋ ಮೀಟರ್ ಸುತ್ತು ವರಿದು ಬಾಯಿಕಟ್ಟೆ, ಕಳಾಯಿ …

ತಮಿಳುನಾಡು, ಪ. ಬಂಗಾಳ ವಿಧಾನಸಭಾ ಚುನಾವಣೆ: 5,501 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ಇಂದು

ಚೆನ್ನೈ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ತಮಿಳುನಾಡಿನ ಒಟ್ಟು ೨೩೪  ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದರೆ  ಪಶ್ಚಿಮಬಂಗಾಳ  ವಿಧಾನಸಭೆಗೆ ಎರಡು ಹಂತಗಳಲ್ಲಾಗಿ ನಡೆಯುವ ಚುನಾವಣೆಯಲ್ಲಿ ಒಂದನೇ ಹಂತದಲ್ಲಿ 152 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಹೀಗೆ ತಮಿಳುನಾಡಿನ 234 ಮತ್ತು ಪಶ್ಚಿಮಬಂಗಾಳದ 152 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 5501 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು ಇವರ ರಾಜಕೀಯ ಭವಿಷ್ಯ ವನ್ನು 9.33 ಕೋಟಿ ಮತದಾರರು ಇಂದು …

ಮಹಿಳೆಯನ್ನು ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ನೀಡಿದ ವ್ಯಕ್ತಿ ಸೆರೆ

ಕಾಸರಗೋಡು: ಮ್ಯಾಟ್ರಿಮೋನಿ ಮೂಲಕ ಮಹಿಳೆಯನ್ನು ಪರಿಚಯಗೊಂಡು ಬಳಿಕ ಅವರನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋ ಪದಂತೆ  ಕಾಸರ ಗೋಡು ನಿವಾಸಿ ಯೋರ್ವನನ್ನು ಕೊಚ್ಚಿಯಲ್ಲಿ  ಸೆರೆಹಿಡಿಯಲಾಗಿದೆ. ಕಾಸರಗೋಡು ನೆಡುಂಕನಾಲ್ ಮಲಾಂಕಾವು ನಿವಾಸಿ ಸಂತೋಷ್ ಜೋಸ್ (58) ಎಂ ಬಾತನನ್ನು ಎರ್ನಾಕುಳಂ ನೋರ್ತ್‌ನ ಪೊಲೀ ಸರು ಬಂಧಿಸಿದ್ದಾರೆ.  ಆಲಪ್ಪುಳ ನಿವಾಸಿಯಾದ ೫೯ರ ಹರೆಯದ ಮಹಿಳೆ ನೀಡಿದ ದೂರಿನಂತೆ ಸಂತೋಷ್ ಜೋಸ್‌ನನ್ನು ಸೆರೆಹಿಡಿಯಲಾಗಿದೆ. ಮಹಿಳೆಯನ್ನು ಮ್ಯಾಟ್ರಿಮೋನಿ ಮೂಲಕ ಈತ ಪರಿಚಯಗೊಂಡಿದ್ದನೆನ್ನಲಾಗಿದೆ.  ಬಳಿಕ ಆಕೆಯನ್ನು ಕೊಚ್ಚಿ ನಗರದ ಲಾಡ್ಜ್‌ವೊಂದಕ್ಕೆ ಕರೆದೊಯ್ದು …