ಕಾಞಂಗಾಡ್ ಜಿಲ್ಲಾಸ್ಪತ್ರೆಯ ವ್ಹೀಲ್ ಚೆಯರ್‌ನಲ್ಲಿ ಹೆಬ್ಬಾವು

ಹೊಸದುರ್ಗ: ಇಲ್ಲಿನ ಜಿಲ್ಲಾಸ್ಪತ್ರೆಯ ವ್ಹೀಲ್‌ಚೆಯರ್‌ನಲ್ಲಿ ಹೆಬ್ಬಾವು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಆರ್ದ್ರಂ ಮಿಷನ್ ಅಧೀನದಲ್ಲಿ ನಿರ್ಮಿಸಿದ ಕಟ್ಟಡದ ಒಳಗಿದ್ದ ವ್ಹೀಲ್ ಚೆಯರ್‌ನಲ್ಲಿ ಸುತ್ತಿಕೊಂಡಿರುವ ರೀತಿಯಲ್ಲಿ ಹೆಬ್ಬಾವು ಪತ್ತೆಯಾಗಿದೆ. ಕರ್ತವ್ಯದಲ್ಲಿದ್ದ ನರ್ಸ್ ಇದನ್ನು ಪ್ರಥಮವಾಗಿ ಕಂಡಿದ್ದಾರೆ. ಮಾಹಿತಿ ತಿಳಿದು ಆಸ್ಪತ್ರೆಯ ಶುಚೀಕರಣ ವಿಭಾಗ ನೌಕರ ಚೆಮ್ಮಟ್ಟಂವಯಲ್‌ನ ಎಚ್. ಅರುಣ್ ಕುಮಾರ್ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಕಟ್ಟಡದ ಸಮೀಪದ ಕಾಡಿನಿಂದ ಹೆಬ್ಬಾವು ಒಳಗೆ ಪ್ರವೇಶಿಸಿರಬೇಕೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಫೇಸ್‌ಕ್ರೀಂ ಬದಲಿಸಿಟ್ಟ ತಾಯಿಯ ಪಕ್ಕೆಲುಬು ಮುರಿದ ಪುತ್ರಿ

ಕೊಚ್ಚಿ: ಫೇಸ್‌ಕ್ರೀಂ ಬದಲಿಸಿಟ್ಟ ತಾಯಿಗೆ ಪುತ್ರಿ ಕಬ್ಬಿಣದ ಸಲಾಖೆಯಿಂದ ಹೊಡೆದು ಪಕ್ಕೆಲುಬು ಮುರಿದ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ರಮಿಯಾದ ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಪನಂಗಾಡ್ ನಿವಾಸಿಯಾದ ನಿವಿಯ ಸೆರೆಯಾದ ಯುವತಿ. ಕಳೆದ ಸೋಮವಾರ ಘಟನೆ ನಡೆದಿದೆ. ನಿವಿಯಳ ಫೇಸ್‌ಕ್ರೀಂ ತಾಯಿ ಬದಲಿಸಿಟ್ಟಿರುವುದೇ ಆಕ್ರಮಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಬಗ್ಗೆ ತಾಯಿ ಹಾಗೂ ಪುತ್ರಿ ಮಧ್ಯೆ ವಾಗ್ವಾದವುಂಟಾಗಿ ಬಳಿಕ ಜಗಳದಲ್ಲಿ ಕೊನೆಗೊಂಡಿದೆ. ನಿವಿಯ ಈ ಮೊದಲು ಕೂಡಾ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ …

ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

ಮಂಜೇಶ್ವರ: ಮಂಜೇಶ್ವರ ಅಬಕಾರಿ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಕೆಎಸ್ ಆರ್‌ಟಿಸಿ ಬಸ್‌ನಲ್ಲಿ ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ 30 ಲಕ್ಷ ರೂ. ನಗದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಮಲಪ್ಪುರಂ ಪೆರಿಂದಲ್‌ಮಣ್ ವಡಕಾಂಕರ ಎರಂಬತ್ ವೀಟಿಲ್ ಹಂಸ (64) ಎಂಬಾತನ ಕೈಯಿಂದ  ಈ ಹಣ ಪತ್ತೆಹಚ್ಚಿ ವಶಪಡಿಸಲಾಗಿದೆ. ಅದಕ್ಕೆ ಸಂಬಂಧಿಸಿ ಆತನನ್ನು ಕಸ್ಟಡಿಗೆ ತೆಗೆದುಕೊಂಡು ಬಳಿಕ ಅಬಕಾರಿ ಅಧಿಕಾರಿಗಳು ಆತನನ್ನು ವಶಪಡಿಸಲಾದ ಹಣದೊಂದಿಗೆ ಮಂಜೇಶ್ವರ ಪೊಲೀಸರಿಗೆ  ಹಸ್ತಾಂತರಿಸಿದರು. ಅಬಕಾರಿ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ …

ಎನ್‌ಟಿಯು ರಾಜ್ಯ ಸಮ್ಮೇಳನಕ್ಕೆ ಚಾಲನೆ

ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪರಿಷತ್ 47ನೇ ರಾಜ್ಯ ಸಮ್ಮೇಳನದಂಗವಾಗಿ ಎನ್‌ಟಿಯು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಂಪೂರ್ಣ ರಾಜ್ಯ ಸಮಿತಿ ಸಭೆಯನ್ನು ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು ಉದ್ಘಾಟಿಸಿದರು. ಎನ್‌ಟಿಯು ರಾಜ್ಯಾಧ್ಯಕ್ಷೆ ಕೆ. ಸ್ಮಿತ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ದಕ್ಷಿಣ ಕೇರಳ ಬೌದ್ದಿಕ್ ಪ್ರಮುಖ್ ಪಿ. ಉಣ್ಣಿಕೃಷ್ಣನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್, ಎಬಿಆರ್‌ಎಸ್‌ಎಂ ದಕ್ಷಿಣ ಕ್ಷೇತ್ರೀಯ ಪ್ರಮುಖ್ ಎಸ್. ಗೋಪ ಕುಮಾರ್ ಮಾತನಾಡಿದರು.

ದಿನನಿತ್ಯ ಹಲವಾರು ಲಾರಿಗಳಲ್ಲಿ ಕೆಂಪುಕಲ್ಲು ಸಾಗಾಟ: ರಸ್ತೆಯ ಸ್ಥಿತಿ ಶೋಚನೀಯವಾಗಿ ಸಂಚಾರ ಸಮಸ್ಯೆ

ಪೈವಳಿಕೆ: ಪಂಚಾಯತ್‌ನ ೧ನೇ ವಾರ್ಡ್ ವ್ಯಾಪ್ತಿಯ ಕುರುಡಪದವು-ಕೊಮ್ಮಂಗಳ ರಸ್ತೆಯಲ್ಲಿ ಸಂಚಾರವೇ ಅಸಾಧ್ಯ ವಾದ ಸ್ಥಿತಿಗೆ ತಲುಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯಗೆ ಕಳೆದ ಮಾರ್ಚ್‌ನಲ್ಲಿ ಡಾಮರೀಕರಣ ನಡೆಸಲಾಗಿತ್ತು. ಆದರೆ ಈ ರಸ್ತೆ ಮೂಲಕ ದಿನಂಪ್ರತಿ ಕೆಂಪುಕಲ್ಲು ಸಾಗಾಟದ ಲಾರಿಗಳು ಅವ್ಯಾಹತ ವಾಗಿ ಸಂಚರಿಸಿರುವುದು ರಸ್ತೆಯ ದುರಸ್ತಿಗೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ರಸ್ತೆಯ ದುರಸ್ತಿಗೆ ಈಗ ಮತ್ತೆ ಹಣ ಮಂಜೂರಾಗಿದ್ದು, ಆದರೆ ಈ ಮೂಲಕ ಸಾಗುವ ಲಾರಿಗಳಿಗೆ  ನಿಯಂತ್ರಣ ಹೇರದಿದ್ದಲ್ಲಿ ದುರಸ್ತಿ ಬಳಿಕವೂ ರಸ್ತೆ ಇದೇ ಸ್ಥಿತಿಗೆ ತಲುಪಬಹುದೆಂದು …

ಎಸ್.ಎನ್. ಭಟ್‌ರಿಗೆ ಶ್ರೀ ಸಂತಡ್ಕ ಮಾಡ ಪ್ರಶಸ್ತಿ ಪ್ರದಾನ

ಉಪ್ಪಳ: ಸಂತಡ್ಕ ಶ್ರೀ ಅರಸು ಸಂಕಲ ಮಾಡದ ಜಾತ್ರಾ ಮಹೋತ್ಸವದ ಸಂದರ್ಭ ಅರಸು ಸಂಕಲ ಸೇವಾ ಬಳಗದ ವತಿಯಿಂದ ವೈದ್ಯ ಎಸ್.ಎನ್. ಭಟ್ ಮೀಯಪದವುರಿಗೆ ಶ್ರೀ ಸಂತಡ್ಕ ಮಾಡ ಪ್ರಶಸ್ತಿ ಪ್ರಧಾನ ಕ್ಷೇತ್ರ ಅಧ್ಯಕ್ಷ ಶ್ರೀಧರ ಭಟ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಮೂರ್ತಿ ಬೋಳಂತಕೋಡಿ ರಾಮ್ ಭಟ್ ಉಪಸ್ಥಿತರಿದ್ದರು. ಚಿಗುರುಪಾದೆಯ  ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಮೀಂಜ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜ ಮಾನೂರು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ …

ಜಾಗತಿಕ ಸೇವಾರಂಗದಲ್ಲಿ ಲಯನ್ಸ್ ಕಾರ್ಯಕರ್ತರು 15 ಲಕ್ಷಕ್ಕೇರುವ ನಿರೀಕ್ಷೆ

ಕಾಸರಗೋಡು: ಲಯನ್ಸ್ ಡಿಸ್ಟ್ರಿಕ್ಟ್ 318 ಇ ಇದರ ಆಶ್ರಯದಲ್ಲಿ ರಿವ್ಯೂ ಆಂಡ್ ರೈಸ್ ಎಂಬ ಕಾರ್ಯಕ್ರಮ ಕಣ್ಣೂರು ಹೋಟೆಲ್ ಗ್ರಾಂಡ್ ಬಿನಾಲೆಯಲ್ಲಿ ಜರಗಿತು. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್, ಮಾಹಿ ಎಂಬೀ ಜಿಲ್ಲೆಗಳಿಂದಿರುವ 170 ಕ್ಲಬ್‌ಗಳ ಪದಾಧಿಕಾರಿಗಳು ಭಾಗವಹಿ ಸಿದರು. ಕೇರಳ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಕಾರ್ಯದರ್ಶಿ ಜೇಮ್ಸ್ ವಳಪ್ಪಿಲ್ ಪ್ರಧಾನ ಭಾಷಣ ಮಾಡಿ 2027ರಲ್ಲಿ ಮಿಷನ್ 1.5 ಮಿಲಿಯನ್ ಮೂಲಕ ಲಯನ್ಸ್ ಇಂಟರ್ ನ್ಯಾಶನಲ್‌ನ ಸೇವಾ ಕರಗಳನ್ನು 15 ಲಕ್ಷಕ್ಕೆ ತಲುಪಿಸಲಾಗುವುದೆಂದು ತಿಳಿಸಿದರು. ಲಯನ್ಸ್ ಡಿಸ್ಟ್ರಿಕ್ಟ್ …

ಶಬರಿಮಲೆ ಚಿನ್ನ ಕಳವು: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ಮಧ್ಯೆ ವಾಗ್ವಾದ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಕಾವು ಇಂದು ಬೆಳಿಗ್ಗೆ ವಿಧಾನಸಭೆಯಲ್ಲೂ ಭುಗಿಲೆದ್ದಿತು. ಇದರ ಹೆಸರಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಭಾರೀ ವಾಗ್ವಾದ ಹಾಗೂ ಸದ್ದುಗದ್ದಲದ ವಾತಾವರಣ ನಿರ್ಮಾಣಗೊಂಡಿದ್ದು, ಇದರಿಂದ  ಸದನದ ಇಂದಿನ ಕಾರ್ಯಕಲಾಪಗಳನ್ನು ನಡೆಸಲು ಸಾಧ್ಯವಾಗದೆ  ವಿಧಾನಸಭಾ ಅಧ್ಯಕ್ಷರು ಅಲ್ಲಿಗೇ ಕೊನೆಗೊಳಿಸಿದರು. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಾಗಲೇ ಫಲಕ ಗಳನ್ನು ಹಿಡಿದುಕೊಂಡು ಸದನಕ್ಕೆ ಆಗಮಿಸಿದ  ವಿಪಕ್ಷಗಳ ಶಾಸಕರು ಶಬರಿಮಲೆ ಚಿನ್ನ ಕಳವು ವಿಷಯಕ್ಕೆ ಸಂಬಂಧಿಸಿ ಪ್ರತಿಭಟನೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಮುಜರಾಯಿ …

ಶಬರಿಮಲೆ ಚಿನ್ನ ಕಳವು: ಪೋತ್ತಿಯ ಬೆನ್ನಲ್ಲೇ ಇತರ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಇ.ಡಿ ಕ್ರಮ

ಶಬರಿಮಲೆ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಒಂದನೇ ಆರೋಪಿ  ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯ 1.30 ಕೋಟಿ ರೂ.ಗಳ ಆಸ್ತಿಗಳನ್ನು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ) ಮುಟ್ಟುಗೋಲು ಹಾಕಿದ ಬೆನ್ನಲ್ಲೇ ಈ ಪ್ರಕರಣದ ಇತರ   ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು  ಹಾಕುವ ಅಗತ್ಯದ ಕ್ರಮದಲ್ಲೂ ಇ.ಡಿ ತೊಡಗಿದೆ. ಇದರಂತೆ ಈ ಪ್ರಕರಣದ ಇತರ ಆರೋಪಿಗಳ ಪೈಕಿ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ವಾಸು, ಮಂಡಳಿಯ ಮಾಜಿ ಅಧಿಕಾರಿ ಮುರಾರಿಬಾಬುರ ಆಸ್ತಿಗಳ ಮುಟ್ಟುಗೋಲು ಕ್ರಮದಲ್ಲೂ ಇ.ಡಿ ತೊಡಗಿದೆ. ಇದಾದ …

ಹೊಳೆ ಹೊಯ್ಗೆ ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ವಶಪಡಿಸಿದ ಪೊಲೀಸ್: ಆರೋಪಿಗಳು ಪರಾರಿ 

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆಯನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದವರು ಓಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೊಯಿಪ್ಪಾಡಿ ಬದ್ರಿಯಾ ನಗರದ  ಕೆ.ಬೆಡ್ ತಹ್‌ನೂನ್ ಹಾಗೂ ಜೊತೆಗಿದ್ದ ಜುನೈದ್ ಎಂಬಿ ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 10.40ರ ವೇಳೆ ಘಟನೆ ನಡೆದಿದೆ. ಕುಂಬಳೆ ಎಸ್‌ಐ ಕೆ. ಶ್ರೀಜೇಶ್, ಎಎಸ್‌ಐ ಸುರೇಶ್, ಸಿಪಿಒ ಸಂದೀಪ್ ಎಂಬಿವರು ನಿನ್ನೆ ರಾತ್ರಿ ಪಟ್ರೋಲಿಂಗ್ ನಡೆಸುತ್ತಿದ್ದರು. ಈ ವೇಳೆ ಮೊಗ್ರಾಲ್ …