ಮೀನುಗಾರಿಕೆ ವೇಳೆ ದೋಣಿಯ ಇಂಜಿನ್ ಹಾನಿ: ಸಮುದ್ರ ಮಧ್ಯೆ ಸಿಲುಕಿಕೊಂಡ ಕಾರ್ಮಿಕರನ್ನು ರಕ್ಷಿಸಿದ ಪೊಲೀಸ್, ನಾಗರಿಕರು
ಕಾಸರಗೋಡು: ಇಂಜಿನ್ ಹಾನಿಗೀಡಾದ ಹಿನ್ನೆಲೆಯಲ್ಲಿ ಸಮುದ್ರದ ಮಧ್ಯೆ ಸಿಲುಕಿಕೊಂಡ ದೋಣಿಯಲ್ಲಿದ್ದ ಮೀನು ಕಾರ್ಮಿಕರನ್ನು ಕುಂಬಳೆ ಪೊಲೀಸರು ಹಾಗೂ ನಾಗರಿಕರು ಸೇರಿ ಸುರಕ್ಷಿತವಾಗಿ ದಡಕ್ಕೆ ತಲುಪಿಸಿ ಅಪಾಯದಿಂದ ಪಾರು ಮಾಡಿದ್ದಾರೆ. ತಮಿಳುನಾಡು ನಿವಾಸಿ ಮೈಕಲ್ (31), ಕರ್ನಾಟಕ ನಿವಾಸಿ ಸತೀಶ್ (39) ಎಂಬಿವರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಇವರು ಮಂಗಳೂರಿನ ಶಾಹುಲ್ ಹಮೀದ್ ಎಂಬವರ ಮಾಲ ಕತ್ವದ ದೋಣಿಯ ಕಾರ್ಮಿಕರಾಗಿ ದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದಂತೆ ದೋಣಿಯ ಇಂಜಿನ್ ಹಾನಿಗೀಡಾಗಿ ರುವುದಾಗಿ ತಿಳಿದು ಬಂದಿದೆ. ಇದರಿಂದ ಕಾಸರಗೋಡು ಭಾಗಕ್ಕೆ ಸಾಗತೊಡಗಿದ …