ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರ: ಮೂವರ ಬಂಧನ

ಕೊಚ್ಚಿ: ಫ್ಯಾಶನ್ ಶೋನಲ್ಲಿ ಭಾಗವಹಿಸಲು ಅವಕಾಶವೊದಗಿಸವು ದಾಗಿ ತಿಳಿಸಿ ಯುವತಿಯರನ್ನು ದುಬಾಯಿಗೆ ತಲುಪಿಸಿ ವೇಶ್ಯಾವಾಟಿಕೆ ಜಾಲಕ್ಕೆ ಒಪ್ಪಿಸುವ ಯುವತಿಯರ  ತಂಡ ಸೆರೆಗೀಡಾಗಿದೆ. ಆಲುವ  ತೈನೋತ್‌ನ ಕಡವಿಲ್ ರೋಡ್‌ನ ಮನೆಯೊಂದರಲ್ಲಿ  ವಾಸಿಸುವ ಗುರುವಾಯೂರು ತೈಕ್ಕಾಡ್ ನಿವಾಸಿ ಸ್ಟೋಯಿಸಿಟಿ ಮುಟ್ಟತ್ತ್  ಯಾನೆ ಸಿಂಧು (56), ತಿರುವನಂತಪುರ ಕುನ್ನತ್ತುಕಾಲ್ ಮಣ್ಣಂಕೋಡ್ ಪೊಂಙವಿಳ ಜೆಸಿ ವೀಟಿಲ್‌ನ ಅಲೀನ ಎಬ್ರಹಾಂ (23), ಮಲಪ್ಪುರಂ ಪೊನ್ನಾನಿ ಬಿಎಂ ಪುಕ್ಕಯಿಲ್ ವೀಟಿಲ್‌ನ ಮಂಜಿಮ (25) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ಕರೆದೊಯ್ದು  …

10ರ ಬಾಲಕ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕೊಚ್ಚಿ: ಹತ್ತರ ಹರೆಯದ ಬಾಲಕನ ಮೃತದೇಹ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಲಯಾಟೂರ್ ಚೆರಿಯಂಪರಂಬಿಲ್ ರಮೇಶನ್- ದಿವ್ಯಾ ದಂಪತಿ ಪುತ್ರ ಆಗತ್ (10) ಮೃತಪಟ್ಟ ಬಾಲಕ. ದಿವ್ಯರ ಮನೆಯ ಮಲಗುವ ಕೊಠಡಿಯ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಗತ್‌ನ ಮೃತದೇಹ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. 5ನೇ ತರಗತಿ ವಿದ್ಯಾರ್ಥಿಯಾದ ಆಗತ್  ನೇಣು ಬಿಗಿಯಲು ಕಾರಣವೇನೆಂಬುದು ಸ್ಪಷ್ಟಗೊಂಡಿಲ್ಲ.  ಆತ್ಮಹತ್ಯೆಯಾ ಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾತ್ರವೇ ಸಾವಿನ ಕಾರಣ …

ಕಲ್ಲಡ್ಕ-ಚೆರ್ಕಳ ರಸ್ತೆಗೆ ಟೆಂಡರ್ 29.83 ರೂ.ಗಳ ಕಾಮಗಾರಿಗೆ ಅಂಗೀಕಾರ

ತಿರುವನಂತಪುರ: ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಹಾಜಿಯವರ ವಿನಂತಿ ಮೇರೆಗೆ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇರವಾಗಿ ಮಧ್ಯಪ್ರವೇಶಿಸಿ ಕಲ್ಲಡ್ಕ-ಚೆರ್ಕಳ ರಸ್ತೆ ಅಭಿವೃದ್ಧಿಗೆ 29.83 ಕೋಟಿ ರೂ.ಗಳ ಟೆಂಡರ್ ಕ್ರಮಗಳನ್ನು ಅಂಗೀಕರಿಸಲಾಗಿದೆ. ಈ ಮೊದಲು ಆಡಳಿತಾನುಮತಿ ಲಭಿಸಿಯೂ ತಾಂತ್ರಿಕ ಕಾರಣ ಹೇಳಿ ಕೈ ಬಿಡಲಿರುವ ಯತ್ನ ನಡೆಯುತ್ತಿದ್ದ ಮಧ್ಯೆ ಮುಖ್ಯಮಂತ್ರಿಯ ಈ ಮಧ್ಯಪ್ರವೇಶದಿಂದಾಗಿ ಅನುಕೂಲ ಕ್ರಮ ಉಂಟಾಗಿದೆ. ಕಿಲೋ ಮೀಟರ್ 33/000, 52/190 ವರೆಗಿರುವ ಭಾಗದಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಪೂರ್ತಿಗೊಳಿ ಸಲಾಗಿತ್ತು. ಪ್ರಸ್ತುತ ರಸ್ತೆಯ ಬಿಸಿ ಕಾಮಗಾರಿಗೆ ಬೇಕಾಗಿ …

ಹಿರಿಯ ಕೃಷಿಕ ನಿಧನ

ಉಪ್ಪಳ: ಮಂಗಲ್ಪಾಡಿ ಪಂಜಗುತ್ತು ನಿವಾಸಿ, ಹಿರಿಯ ಕೃಷಿಕ ದೂಮಣ್ಣ ಶೆಟ್ಟಿ (90) ನಿನ್ನೆ ನಿಧನ ಹೊಂದಿದರು. ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಸೇವಾ ಸಮಿತಿಯಲ್ಲಿ ೩೫ ವರ್ಷ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪಂಜಗುತ್ತು ತರವಾಡಿನ ಹಿರಿಯರಾಗಿದ್ದಾರೆ. ಇವರ ಪತ್ನಿ ಮುತ್ತಕ್ಕೆ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಹೇಮರಾಜ್ ಶೆಟ್ಟಿ, ಸೋಮನಾಥ ಶೆಟ್ಟಿ, ವಿಮಲ, ಉಮಾವತಿ, ಪದ್ಮಾವತಿ, ಸೊಸೆಯಂ ದಿರಾದ ನವ್ಯ, ವಿದ್ಯಾ, ಅಳಿಯಂದಿರಾದ ಚಂದ್ರಹಾಸ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ, …

ರಂಗಶಂಕರ ಬೆಂಗಳೂರು ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಕನ್ನಡ ನಾಟಕೋತ್ಸವ ನಾಳೆಯಿಂದ

ಕಾಸರಗೋಡು: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ, ಸವಾಕ್ ಮತ್ತು ಥಿಯೇಟ್ರಿಕ್ಸ್ ಕಾಸರಗೋಡು ಇವುಗಳ ಸಹಕಾರದೊಂದಿಗೆ ರಂಗಶಂಕರ ಬೆಂಗಳೂರು ಹಮ್ಮಿಕೊಳ್ಳುವ ಈ ಬಾರಿಯ ಕನ್ನಡ ನಾಟಕೋತ್ಸವ ಕಾಸರಗೋಡಿನಲ್ಲಿ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ನಾಲ್ವರು ನಿರ್ದೇಶಕರು ಹಾಗೂ ನಾಲ್ಕು ತಂಡಗಳನ್ನೊಳಗೊಂಡ ನಾಟಕೋತ್ಸವ ನಾಳೆಯಿಂದ ೨೪ರವರೆಗೆ ಸಂಜೆ ೭ಕ್ಕೆ ಕಾಸರಗೋಡು ಪಿಲಿಕುಂಜೆ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ನಾಳೆ ನಿಸರ್ಗಪ್ರಿಯ ರಚಿಸಿ ಮಂಜುನಾಥ ಎಲ್ ಬಡಿಗೇರ ನಿರ್ದೇಶಿಸಿದ  ‘ಶುನಶ್ಯೇಪ’ ನಾಟಕವನ್ನು ಒಡ್ಡೋಲಗ ರಂಗಪರ್ಯಟನೆ ಹಿತ್ತಲಕೈ (ಸಿದ್ಧಾಪುರ) ತಂಡ ಪ್ರದರ್ಶಿಸಲಿದೆ. ೨೨ರಂದು ವಿವೇಕ ಶಾನಭಾಗ ರಚಿಸಿ …

ಕಾಸರಗೋಡು ಮೆಡಿಕಲ್ ಕಾಲೇಜ್‌ಗೆ ಪ್ರಥಮ ಪರಿಗಣನೆ- ಮುಖ್ಯಮಂತ್ರಿ

ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಮಟ್ಟ ದಲ್ಲಿ ಸಜ್ಜುಗೊಳಿಸಲು ಪ್ರಥಮ ಪರಿಗಣನೆ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕಾಸರಗೋಡು ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಹಾಜಿಯವರಿಗೆ ಭರವಸೆ ನೀಡಿದ್ದಾರೆ. ಅಭಿವೃದ್ಧಿರಂಗದಲ್ಲಿ ಕಾಸರಗೋಡಿನ ಲೋಪವನ್ನು ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಕೈಗಾರಿಕಾ ಸಚಿವ ಪಿ.ಕೆ. ಕುಂಞಾಲಿಕುಟ್ಟಿ ಅವರ ಗಮನಕ್ಕೆ ತರಲಾಯಿತು. ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು, ನ್ಯಾಯವಾದಿ ಎ. ಗೋವಿಂ ದನ್ ನಾಯರ್, ಮಾಹಿನ್ ಕೇಳೋಟ್, ಎಂ.ಎ.ಎಚ್. ಮಹಮ್ಮೂದ್, ಅನ್ವರ್ ಕೋಳಿಯಡ್ಕ, ಸಿದ್ದಿಕ್ ಪಳ್ಳಿಪುಳ …

ಕಟ್ಟಿನಿಂತ ಕಪ್ಪು ನೀರು: ಕಲ್ಮಾಡಿ ತೋಡು ಪರಿಸರದ ಜನರಿಗೆ ದುರ್ವಾಸನೆ ಬದುಕು

ಕಾಸರಗೋಡು: ನೆಲ್ಲಿಕುಂಜೆ- ಬಂಗರಗುಡ್ಡೆ- ಕಡಪ್ಪುರ ಈ ಭಾಗ ದಲ್ಲಿ ಹರಿದುಹೋಗುವ ಕಲ್ಮಾಡಿ ತೋಡು ಈಗ ದುರ್ವಾಸನೆ ಕೇಂದ್ರವಾಗಿದೆ. ಬಂಗರಗುಡ್ಡೆ ಹಾಗೂ ಕಡಪ್ಪುರವನ್ನು ಜೋಡಿಸುವ ಅಣೆಕಟ್ಟಿನಿಂದ ಪಳ್ಳಂ ಭಾಗಕ್ಕಿರುವ ಸೇತುವೆವರೆಗಿನ ಈಸ್ಥಳದಲ್ಲಿ ದುರ್ಗಂ ಧದಿಂದ ಪರಿಸರ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಪ್ಪಗಿನ ನೀರು ತೋಡಿನಲ್ಲಿ ಕಟ್ಟಿ ನಿಂತಿದ್ದು, ಈ ಪರಿಸರದ ಬಾವಿ ಹಾಗೂ ಕೊಳವೆ ಬಾವಿಗಳಿಗೆ ಒರತೆಯಾಗಿ ಈ ಮಲಿನಜಲ ಸೇರಲು ಸಾಧ್ಯವಿದೆ. ಕುಡಿಯಲು ಅಥವಾ ಸ್ನಾನ ಮಾಡಲು, ಬಟ್ಟೆ ತೊಳೆಯಲು ಕೂಡಾ  ಉಪಯೋ ಗಿಸಲಾಗದಷ್ಟು ತೋಡಿನ ನೀರು …

ಲಾಲ್‌ಭಾಗ್-ಕುರುಡಪದವು ರಸ್ತೆ ಅಭಿವೃದ್ಧಿ: ವಾಹನ ಸಂಚಾರ ಆರಂಭಗೊಂಡರೂ ಕಾಮಗಾರಿ ಕಳಪೆಯೆಂದು ಆರೋಪ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್ ಕುರುಡಪದವು ರಸ್ತೆ ಅಭಿವೃದ್ದಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ತಿಂಗಳು ಮೊಟಕುಗೊಂಡಿದ್ದ ವಾಹನಗಳ ಸಂಚಾರ ಪುನಾರಾರಂ¨ÀsಗೊAಡಿದೆ. ಇದ ರಿಂದ ಊರವರು ನಿಟ್ಟುಸಿರು ಬಿಟ್ಟಿದ್ದಾರೆ. ಲಾಲ್‌ಭಾಗ್‌ನಿಂದ ಅಮ್ಮೇರಿ ತನಕ ಕೋmÀ್ಯಂತರ ರೂ. ವೆಚ್ಚದಲ್ಲಿ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಆದರೆ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿರುವುದಾಗಿ ಹೇಳಲಾಗುತ್ತಿದೆ. ಅಭಿವೃದ್ದಿ ಕೆಲಸದ ಮಧ್ಯೆ ಡಾಮರೀಕರಣ ಹಾಗೂ ಚರಂಡಿ ಕಾಮಗಾರಿ ಕಳಪೆ ಮಟ್ಟದಲ್ಲಿದೆ ಎಂದು ಆರೋಪಿಸಿ ಊರವರು ಪ್ರತಿಭಟನೆ ನಡೆಸಿದ್ದರು. ಈಗ …

ಮಾರ್ಪನಡ್ಕದಲ್ಲಿ ಬ್ಯಾಂಕ್ ಸೆಕ್ಯೂರಿಟಿ ನೌಕರನನ್ನು ಇರಿದು ಕೊಲೆಗೈದ ಇಬ್ಬರು ಆರೋಪಿಗಳ ಬಂಧನ: ಕೊಲೆಗೆ ಬಳಸಿದ ಚಾಕು ಪತ್ತೆಗಾಗಿ ಪೊಲೀಸರು ಪುತ್ತೂರಿಗೆ

ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸೆಕ್ಯೂರಿಟಿ ನೌಕರನೂ, ಮಾರ್ಪನಡ್ಕ ಬೆದ್ರಕೂಡ್ಲು ನಿವಾಸಿಯಾದ ಸುರೇಶ್ (42) ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂಬ್ಡಾಜೆ ಮೈಲ್ತೊಟ್ಟಿಯ ಕಿರಣ್ (30), ಕರುವತ್ತಡ್ಕದ ಅಖಿಲೇಶ್ (25) ಎಂಬಿವರನ್ನು  ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್, ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣನ್ ಎಂಬಿವರ ನೇತೃತ್ವದಲ್ಲಿ  ಸೆರೆಹಿಡಿಯಲಾಗಿದೆ.  ಕೊಲೆ ಕೃತ್ಯದಬಳಿಕ  ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಕೂಡಲೇ ಪೊಲೀಸರು ಕಾರ್ಯಾಚರಣೆ …

ಬೈಕ್-ಸ್ಕೂಟರ್ ಢಿಕ್ಕಿ ಹೊಡೆದು ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಉಳಿಯತ್ತಡ್ಕ-ಚೌಕಿ ರಸ್ತೆಯ  ಆಜಾದ್‌ನಗರದಲ್ಲಿ  ಸ್ಕೂಟರ್ ಹಾಗೂ ಬೈಕ್  ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ  ಪ್ಲಸ್‌ಟು ವಿದ್ಯಾರ್ಥಿ  ಮೃತಪಟ್ಟ ದಾರುಣ ಘಟನೆ ನಡೆದಿದೆ. ನೆಕ್ರಾಜೆ ನಿವಾಸಿಯೂ, ಚೌಕಿ ಆಜಾದ್‌ನಗರದಲ್ಲಿ ವಾಸಿಸುವ ಗಲ್ಫ್ ಉದ್ಯೋಗಿ ರಫೀಕ್ ಎಂಬವರ ಪುತ್ರ ಶಹಬಾಸ್ ಅಸರ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ.  ಈತನ ಜೊತೆಗಿದ್ದ ಇನ್ನೋರ್ವ ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಇವರನ್ನು  ಮಂಗಳೂರು ಹಾಗೂ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ರಾತ್ರಿ 10.45ರ ವೇಳೆ ಅಪಘಾತ ಸಂಭವಿ ಸಿದೆ. ರಫೀಕ್-ಅಲ್ಫೀನ ದಂಪತಿಯ …