ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಸೂತ್ರಧಾರ ಸೇರಿ 22 ಮಂದಿ ಸೆರೆ

ನವದೆಹಲಿ: ಭಾರತದಲ್ಲಿ ಸರಣಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನಿ ಪರ ಬೇಹುಗಾರಿಕೆ ನಡೆಸುತ್ತಿದ್ದ ಜಾಲದ ಸೂತ್ರಧಾರ ಸೇರಿದಂತೆ 22 ಮಂದಿಯನ್ನು  ಉತ್ತರಪ್ರದೇಶದ ಘಾಸಿಯಾಬಾದ್ ನಿಂದ ಪೊಲೀಸರು ಬಂಧಿಸಿದ್ದಾರೆ.  ಇದರ ಹೊರತಾಗಿ ಇತರ ೮ ಮಂದಿ ಈಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಬೇಹುಗಾರಿಕೆ ತಂಡದ ಪ್ರಧಾನ ಸೂತ್ರ ಧಾರನಲ್ಲೋರ್ವನಾಗಿರುವ ನೌಶಾದ್ ಅಲಿ (ಲಾಲು) ಎಂಬಾತನನ್ನು ಫರೀದಾಬಾದ್‌ನಿಂದ ಬಂಧಿಸಲಾಗಿದೆ. ಈತ ಫರೀದಾಬಾದ್‌ನ ಪೆಟ್ರೋಲ್ ಬಂಕ್ ಸಮೀಪ ಚಕ್ರಗಳಿಗೆ ಪಂಕ್ಚರ್ ಲಗತ್ತಿಸುವ ಅಂಗಡಿಯಲ್ಲಿ ಕಾರ್ಮಿಕನ ಸೋಗಿನಲ್ಲಿ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆಧುನಿಕ …

ಬಿಜೆಪಿ ಕಲ್ಲಿಕೋಟೆ ವಲಯ ಪ್ರಭಾರಿಯಾಗಿ ಕೆ. ಶ್ರೀಕಾಂತ್ ನೇಮಕ

ಕಾಸರಗೋಡು: ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳು ಒಳಗೊಳ್ಳುವ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ರಾಜ್ಯ ನಾಯಕತ್ವ ಕಲ್ಲಿಕೋಟೆ ವಲಯ ಅಧ್ಯಕ್ಷರಾದ ಕೆ. ಶ್ರೀಕಾಂತ್‌ರನ್ನು ವಲಯ ಪ್ರಭಾರಿಯಾಗಿ ನೇಮಿಸಿದೆ. ಈ ಹಿಂದೆ ಈ ಹೊಣೆಗಾರಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್‌ರಿಗಾಗಿತ್ತು. ಮಂಜೇಶ್ವರ  ಸಹಿತ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಟುವಟಿಕೆಗಳ ಮೇಲ್ನೋಟ ಇನ್ನು ಶ್ರೀಕಾಂತ್‌ರಿಗಾಗಿದೆ.

ಯುಡಿಎಫ್ ತೊರೆದು ಬಿಜೆಪಿಗೆ ಸೇರಿದವರಿಗೆ ಸ್ವಾಗತ

ಮಂಜೇಶ್ವರ: ಯುಡಿಎಫ್ ಮುಖಂಡ, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯನಾಗಿದ್ದ ರಾಘವ ಮಂಜೇಶ್ವರ ಹಾಗೂ  ಪೈವಳಿಕೆ ನಿವಾಸಿ ಅಬ್ದುಲ್ ಸಮದ್ ಬಿಜೆಪಿ ಸದಸ್ಯತನ ಸ್ವೀಕರಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಇವರಿಗೆ ಬಿಜೆಪಿ ಸದಸ್ಯತನ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ನವೀನ್‌ರಾಜ್, ಯಾದವ ಬಡಾಜೆ, ಸುರೇಶ್ ಮಂಜೇಶ್ವರ, ಸಲೀಂ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 47 ನಾಮಪತ್ರ ಸಲ್ಲಿಕೆ: ಸೂಕ್ಷ್ಮ ತಪಾಸಣೆ ಇಂದು; ಹಿಂತೆಗೆಯಲು ಕೊನೆಯ ದಿನಾಂಕ 26

ಕಾಸರಗೋಡು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿರುವ ಸಮಯ ನಿನ್ನೆ ಕೊನೆಗೊಂಡಾಗ ಜಿಲ್ಲೆಯಲ್ಲಿ 47 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಸೂಕ್ಷ್ಮ ಪರಿಶೀಲನೆ ಇಂದು ನಡೆಯಲಿದೆ. ಈ ತಿಂಗಳ 26ರವರೆಗೆ ನಾಮಪತ್ರ ಹಿಂತೆಗೆಯಲು ಅವಕಾಶ ನೀಡಲಾಗಿದೆ. ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ  ನಾಮಪತ್ರ ಸಲ್ಲಿಸ ಲಿರುವ ಕೊನೆಯ ದಿನಾಂಕವಾದ ನಿನ್ನೆ ಮುಸ್ಲಿಂ ಲೀಗ್‌ನ ಅಭ್ಯರ್ಥಿ ಎಕೆಎಂ ಅಶ್ರಫ್ ಮೂರು ಸೆಟ್, ಎ.ಕೆ. ಆರಿಫ್ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.  ಇವರಲ್ಲದೆ  ಎಸ್‌ಡಿಪಿಐಯ ಕೆ.ಎಂ. ಅಶ್ರಫ್, ಬಿಎಸ್‌ಪಿಯ ಸಂಜೀವ, ಸ್ವತಂತ್ರ ಅಭ್ಯರ್ಥಿಗಳಾಗಿ …

ಎಂ.ಎಲ್. ಅಶ್ವಿನಿ ಇಂದು ಬದಿಯಡ್ಕದಲ್ಲಿ ಮನೆಗಳಿಗೆ ಭೇಟಿ ನೀಡಿ ಮತ ಯಾಚನೆ

ಬದಿಯಡ್ಕ: ಕಾಸರಗೋಡು ಮಂಡಲದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂದು ಬದಿಯಡ್ಕ ಪಂಚಾಯತ್‌ನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯ  ಸಕ್ರಿಯ ಕಾರ್ಯಕರ್ತನೂ, ಪಂ. ಮಾಜಿ ಉಪಾಧ್ಯಕ್ಷರಾದ ಗಣೇಶಾನಂದ ಆಳ್ವರ ಮನೆಗೆ  ಭೇಟಿ ನೀಡಿದ ಅಶ್ವಿನಿ ಅವ ರಿಂದ ಆಶೀರ್ವಾದ ಪಡೆದ ಬಳಿಕ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಆರಂಭಿಸಿ ದ್ದಾರೆ.  ಪಂಚಾಯತ್ ಅಧ್ಯಕ್ಷ ಡಿ. ಶಂಕರ, ಸೂರ್ಯಪ್ರಕಾಶ್ ಶೆಟ್ಟಿ, ಸುಕುಮಾರ ಕುದ್ರೆಪ್ಪಾಡಿ, ಮೋಹನ್ ದಾಸ್ ರೈ, ಮೋಹನ, ಸುರೇಶ್, ಮನ್ವಿತ್ ಎಂಬಿವರು ಅಭ್ಯರ್ಥಿಯೊಂದಿಗಿದ್ದರು.

 ಜಿಲ್ಲಾ ಸಹಕಾರಿ ಆಸ್ಪತ್ರೆಗಳಲ್ಲಿ ಇ.ವಿ ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಗೆ ಸಜ್ಜು

ಕುಂಬಳೆ: ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಆಶ್ರಯದಲ್ಲಿ  ಸೌರ ಶಕ್ತಿ ನಿರ್ಮಿತ ಇಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಗೆ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಸಹಕಾರಿ ವಲಯದಲ್ಲಿ ಚಾರ್ಜಿಂಗ್ ಸ್ಟೇಶನ್ ಇದೇ ಪ್ರಥಮವಾಗಿದ್ದು,  ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ಅಧೀನದಲ್ಲಿರುವ ಕುಂಬಳೆ, ಚೆಂಗಳ, ಮುಳ್ಳೇರಿಯ ಎಂಬ ಮೂರು ಆಸ್ಪತ್ರೆಗಳಲ್ಲೂ ಸೋಲಾರ್ ಇಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲಾಗಿದೆ. ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  35 ಕೆಡಬ್ಲ್ಯುಪಿ ವೇಗದ, 37 ಕೆಡಬ್ಲ್ಯುಡಿಸಿ ಚಾರ್ಜಿಂಗ್ ಯಂತ್ರಗಳಿದ್ದು, ಚೆಂಗಳದ ಆಸ್ಪತ್ರೆಯಲ್ಲಿ 115 ಕೆಡಬ್ಲ್ಯುಪಿ, 67 ಕೆಡಬ್ಲ್ಯುಡಿಸಿ …

ಪಡಿಪ್ಪರೆ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು

ಬದಿಯಡ್ಕ: ಕುಂಬಳೆ ಮುಳ್ಳೇ ರಿಯ ಕೆಎಸ್‌ಟಿಪಿ ರಸ್ತೆಯ ಬದಿ ಯಡ್ಕ-ನೀರ್ಚಾಲು ಸಮೀಪದ ಪಡಿಪ್ಪರೆ ಎಂಬಲ್ಲಿ ರಸ್ತೆಗೆ ವಾಲಿ ಕೊಂಡಿರುವ ತೆಂಗಿನಮರವೊAದು ಅಪಾಯಕಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿ ಸಲಾಯಿತು.ಬದಿಯಡ್ಕ ಪಂ. ನೀರ್ಚಾಲು ವಾರ್ಡು ವ್ಯಾಪ್ತಿಯ ಕನ್ನೆಪ್ಪಾಡಿ ಪಡಿಪ್ಪರೆ ಎಂಬಲ್ಲಿ ರಸ್ತೆಯ ಬದಿ ತೆಂಗಿನ ಮರವೊಂದು ರಸ್ತೆಗೆ ವಾಲಿಕೊಂಡಿತ್ತು. ತಿರುವಿನ ಸ್ಥಳವಾಗಿರುವುದರಿಂದ ವಾಹನಗಳು ಸಂಚರಿಸುವ ವೇಳೆ ಈ ತೆಂಗಿನ ಮರ ವಾಹನಗಳಿಗೆ ತಾಗಿ ಕೊಳ್ಳುತ್ತಿತ್ತು. ಅದನ್ನು ತಪ್ಪಿಸುವುದಕ್ಕಾಗಿ ವಾಹನ ಚಾಲಕರು ಬಲಭಾಗದಲ್ಲಿ ಸಂಚರಿಸುತ್ತಿದ್ದರು. ಅದರಿಂದಾಗಿ ಎದುರಿನಿಂದ ಬರುವ ವಾಹನಕ್ಕೆ …

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ; ಒಂದೂವರೆ ಗಂಟೆ ಕಾರ್ಯಾಚರಣೆ ಮೂಲಕ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ ಕ್ಲೀನರ್‌ನನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾಸರಗೋಡು: ನಗರದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ  ಟೋರಸ್ ಲಾರಿಯ ಹಿಂಬದಿಗೆ ಇನ್ನೊಂದು ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ಹಿನ್ನೆಲೆಯಲ್ಲಿ ಒಂದೂವರೆ ಗಂಟೆ ಕಾಲ ಕ್ಯಾಬಿನ್‌ನಲ್ಲಿ ಸಿಲುಕಿದ ಲಾರಿ ಕ್ಲೀನರ್‌ನನ್ನು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ಸಾಹಸಿಕ ವಾಗಿ ರಕ್ಷಿಸಿದ್ದಾರೆ. ಪಶ್ಚಿಮಬಂಗಾಲ ನಿವಾಸಿಯಾದ ಸ್ವರೂಪ್ ಮೋದಿ (೨೮) ಎಂಬವರನ್ನು ರಕ್ಷಿಸಲಾಗಿದೆ. ನಿನ್ನೆ ರಾತ್ರಿ ೧೨ ಗಂಟೆ ವೇಳೆ ಅಗ್ನಿಶಾಮಕದಳ ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿಯ …

ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶ: ಮಂಜೇಶ್ವರ ನಿವಾಸಿ ಸಹಿತ ಇಬ್ಬರ ಸೆರೆ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಪ್ರಮಾಣದ ಸ್ಪಿರಿಟ್ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತೃಶೂರು ಎಡಕಳಿಯೂರ್ ಪುನ್ನಯೂರ್ ಸೌತ್‌ನ ಅರಕ್‌ಪರಂ ಬಿಲ್ ಹೌಸ್‌ನ ಎ.ಎಚ್. ಅನ್ಸಿಫ್ (40), ಮಂಜೇಶ್ವರ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮೀಪದ ಭೂಮಿಕಾ ನಿಲಯದ ಎ.ಆರ್. ಗಿರೀಶ್ (39) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಎಸ್.ಐ. ಜಿ. ವಿಷ್ಣು ಅವರ ನೇತೃತ್ವದಲ್ಲಿ ಇಂದು ಮುಂಜಾನೆ 1 …

ಅಸೌಖ್ಯ: ಯುವತಿ ಮೃತ್ಯು 

ಬೆಳ್ಳೂರು: ಅಡ್ವಳ ಕಾನ ನಿವಾಸಿ ಅಡ್ವಳಬೀಡು ಪುಷ್ಪಾ ಕುಮಾರಿ (45) ನಿನ್ನೆ ನಿಧನಹೊಂದಿದರು. ಕಜಮುಂಡ ಬಾಲಕೃಷ್ಣ ಬಲ್ಲಾಳ್-ಸುಶೀಲಮ್ಮ ದಂಪತಿ ಪುತ್ರಿಯಾಗಿದ್ದಾರೆ. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇವರ ಪತಿ ಮಧುಸೂದನ ಬಲ್ಲಾಳ್ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ತಂದೆ, ತಾಯಿ, ಮಕ್ಕಳಾದ ನಿಶಾಂತ್, ನಿತೇಶ್, ಸಹೋದರರಾದ ಎ.ಬಿ. ಬಾಲ ಗೋಪಾಲ ಬಲ್ಲಾಳ್, ಎ.ಬಿ. ದಿವಾಕರ ಬಲ್ಲಾಳ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.