ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಸೂತ್ರಧಾರ ಸೇರಿ 22 ಮಂದಿ ಸೆರೆ
ನವದೆಹಲಿ: ಭಾರತದಲ್ಲಿ ಸರಣಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನಿ ಪರ ಬೇಹುಗಾರಿಕೆ ನಡೆಸುತ್ತಿದ್ದ ಜಾಲದ ಸೂತ್ರಧಾರ ಸೇರಿದಂತೆ 22 ಮಂದಿಯನ್ನು ಉತ್ತರಪ್ರದೇಶದ ಘಾಸಿಯಾಬಾದ್ ನಿಂದ ಪೊಲೀಸರು ಬಂಧಿಸಿದ್ದಾರೆ. ಇದರ ಹೊರತಾಗಿ ಇತರ ೮ ಮಂದಿ ಈಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೇಹುಗಾರಿಕೆ ತಂಡದ ಪ್ರಧಾನ ಸೂತ್ರ ಧಾರನಲ್ಲೋರ್ವನಾಗಿರುವ ನೌಶಾದ್ ಅಲಿ (ಲಾಲು) ಎಂಬಾತನನ್ನು ಫರೀದಾಬಾದ್ನಿಂದ ಬಂಧಿಸಲಾಗಿದೆ. ಈತ ಫರೀದಾಬಾದ್ನ ಪೆಟ್ರೋಲ್ ಬಂಕ್ ಸಮೀಪ ಚಕ್ರಗಳಿಗೆ ಪಂಕ್ಚರ್ ಲಗತ್ತಿಸುವ ಅಂಗಡಿಯಲ್ಲಿ ಕಾರ್ಮಿಕನ ಸೋಗಿನಲ್ಲಿ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆಧುನಿಕ …