ಡೆಂಗ್ಯು ಜ್ವರ: ಕಾರಡ್ಕ ನಿವಾಸಿ ನಿಧನ

ಮುಳ್ಳೇರಿಯ: ಕಾರಡ್ಕ ಮುಂಡೋಳು ಜಂಕ್ಷನ್‌ನಲ್ಲಿ  ಈ ಮೊದಲು ಆಟೋ ಚಾಲಕನಾಗಿದ್ದು, ಈಗ ಬೆಂಗಳೂರಿನ ಕಂಪೆನಿ ಯೊಂದರ ವಾಹನದಲ್ಲಿ ಚಾಲಕ ನಾಗಿ ದುಡಿಯುತ್ತಿದ್ದ ಪ್ರಭಾಕರನ್ (52) ನಿಧನ ಹೊಂದಿದರು. ಬೆಂಗಳೂರಿನಲ್ಲಿ ಜ್ವರ ತಗಲಿದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ಊರಿಗೆ ಕರೆದುಕೊಂಡು ಬರಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮುಳ್ಳೇರಿಯ ನಿವಾಸಿಯಾದ ಇವರು ಮೂಡಾಂಕುಳಂ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಪ್ರಭಾ, ಮಕ್ಕಳಾದ ಅನಘ, ಅನುನಂದ್, ಸಹೋದರರಾದ ಬಾಲಕೃಷ್ಣನ್, ನಾರಾಯಣನ್, ಕುಂಞಂಬು, ಸಹೋದರಿಯರಾದ ಕಮಲಾಕ್ಷಿ, …

ಚಿನ್ನದ ಬೆಲೆ ಇಂದು  ಪವನ್‌ಗೆ  ಹೆಚ್ಚಿದ್ದು 3680 ರೂ.

ಕಾಸರಗೋಡು: ರಾಜ್ಯದಲ್ಲಿ  ಚಿನ್ನದ ಬೆಲೆಯಲ್ಲಿ ಇಂದು ಕೂಡಾ ಭಾರೀ ಹೆಚ್ಚಳ ಉಂಟಾಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಇಂದು ಗ್ರಾಂಗೆ 460 ರೂಪಾಯಿಗಳ ಹೆಚ್ಚಳ ಉಂಟಾಗಿದೆ. ಇದರೊಂದಿಗೆ  1 ಗ್ರಾಂ ಚಿನ್ನಕ್ಕೆ 14,190 ರೂಪಾಯಿ ಹಾಗೂ 1  ಪವನ್‌ಗೆ 1,13,520 ರೂ.ಗೇರಿದೆ. ಅಂತಾರಾಷ್ಟ್ರೀಯ ಘರ್ಷಣೆ ಹೆಚ್ಚುತ್ತಿರುವುದರಿಂದ  ಚಿನ್ನದ ಬೆಲೆಯಲ್ಲಿ ಇನ್ನೂ ಹೆಚ್ಚಳವಾಗುವ ಸೂಚನೆಯಿದೆ ಯೆಂದು ಹೇಳಲಾಗುತ್ತಿದೆ.  ನಿನ್ನೆಯೂ ಚಿನ್ನದ ಬೆಲೆಯಲ್ಲಿ 3160 ರೂ. ಹೆಚ್ಚಳವಾಗಿ ಪವನ್‌ಗೆ 1,10,400 ರೂ. ಆಗಿತ್ತು.  ನಿನ್ನೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡುಬಾರಿಯಾಗಿ ಬೆಲೆ …

ಶುಕ್ರಿಯ ಬಸ್ ಮಾಲಕ ನಿಧನ

ಎಡನೀರು: ಶುಕ್ರಿಯ ಬಸ್ ಮಾಲಕ, ಚೆಂಗಳ ಪಂಚಾಯತ್ ೩ನೇ ವಾರ್ಡ್ ಮುಸ್ಲಿಂ ಲೀಗ್ ಉಪಾ ಧ್ಯಕ್ಷ ಅಬ್ದುಲ್ಲ ಮಂಡಲಿಕ್ಕಾಡ್ (55) ನಿಧನ ಹೊಂದಿದರು. ಮುಹಿಯು ದ್ದೀನ್ ಜಮಾಯತ್ ಸಮಿತಿ ಉಪಾಧ್ಯಕ್ಷ, ನೆಲ್ಲಿಕಟ್ಟೆ ಟಾಸ್ಕ್‌ಕ್ಲಬ್ ಉಪಾಧ್ಯಕ್ಷ, ಬಸ್ ಓನರ್ಸ್ ಅಸೋಸಿಯೇಶನ್ ಸದಸ್ಯನಾಗಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸುರಯ್ಯಾಬಿ, ಮಕ್ಕಳಾದ ಅಶ್‌ರೀದ್, ಅನ್ಶೀದ್, ಅಸ್ನೀನ, ಅಸ್ಮಿನ, ಅಳಿಯ ಮಿರ್ಷಲ್, ಸೊಸೆ ಶಹಾನ, ಸಹೋದರರಾದ ಇಬ್ರಾಹಿಂ, ಅಲಿ, ಉಮ್ಮರ್,  ಸಹೋದರಿಯರಾದ ನಬೀಸ, ಆಮಿನ, ಅಸ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ …

ಮಜಿಬೈಲ್‌ನಲ್ಲಿ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 4 ಮಂದಿ ಸೆರೆ; ಕೋಳಿ ವಶ

ಮಂಜೇಶ್ವರ: ಕೋಳಿ ಅಂಕ ನಡೆಯುತ್ತಿದ್ದಸ್ಥಳಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ೪ ಮಂದಿಯನ್ನು ಸೆರೆ ಹಿಡಿದಿದ್ದಾರೆ. ಕಡಂಬಾರು ಮಜಿಬೈಲ್ ಕೊರಗಜ್ಜ ದೈವಸ್ಥಾನದ ಬಳಿಯಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ದ್ದವರು ಪರಾರಿಯಾಗಲು ಯತ್ನಿಸಿದರೂ 4 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ವಿಕೇಶ್ (32), ಮಜಿಬೈಲ್ ನಿವಾಸಿ ಸುರೇಶ್ (33), ಉಳ್ಳಾಲ ನಿವಾಸಿ ಯಾದವ (63), …

ಶಬರಿಮಲೆಗೆ ಕಾಣಿಕೆ ರೂಪದಲ್ಲಿ ಲಭಿಸಿದ ಚಿನ್ನವೂ ಅಪ್ರತ್ಯಕ್ಷ: ಇ.ಡಿ. ತನಿಖೆಯಲ್ಲಿ ಮಹತ್ತರ ಮಾಹಿತಿ ಬಹಿರಂಗ

ಕೊಚ್ಚಿ: ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ದ್ವಾರಪಾಲಕ ಮೂರ್ತಿ ಗಳ ಹಾಗೂ ದ್ವಾರದ ಚೌಕಟ್ಟಿನ ಚಿನ್ನವನ್ನು ಮಾತ್ರವಲ್ಲ ಭಕ್ತರು ಶ್ರೀ ಕ್ಷೇತ್ರಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸಿರುವ ಚಿನ್ನ ಇತ್ಯಾದಿ ಹಲವು ಅಮೂಲ್ಯ ವಸ್ತುಗಳನ್ನೂ ಕಳವುಗೈಯ್ಯ ಲಾಗಿದೆ ಯೆಂದು ಕ್ಷೇತ್ರದಲ್ಲಿ ನಡೆದ ಕಾಳಧನ ವ್ಯವಹಾರದ ಬಗ್ಗೆ  ತನಿಖೆ ನಡೆಸುತ್ತಿರುವ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ)  ಪತ್ತೆಹಚ್ಚಲಾಗಿದೆ.  ಇದರಿಂ ದಾಗಿ ಶಬರಿಮಲೆಯಲ್ಲಿ ಭಾರೀ ಮಟ್ಟದ ಆರ್ಥಿಕ ಅವ್ಯವಹಾರ ನಡೆದಿದೆಯೆಂದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಗೊಂ ಡಿದ್ದು  ಆ ಬಗ್ಗೆಯೂ ಆಳವಾದ ರೀತಿಯ ತನಿಖೆ ನಡೆಸಲಾಗುವುದೆಂದು …

ಪತಿ ಮನೆಗೆಂದು ತಿಳಿಸಿ ಹೋದ ಯುವತಿ ನಾಪತ್ತೆ

ಕಾಸರಗೋಡು: ಪತಿಯ ಮನೆಗೆ ಹೋಗುವುದಾಗಿ ತಿಳಿಸಿ   ಮನೆಯಿಂದ ಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕಾಸರಗೋಡು ಕರಂದಕ್ಕಾಡ್‌ನ ಉಮಾವತಿ ಎಂಬವರ ಪುತ್ರಿ ಪ್ರೀತಿಕ (20) ಎಂಬಾಕೆ ನಾಪತ್ತೆಯಾದ ಯುವತಿ. ಸೋಮವಾರ ಸಂಜೆ 5.30 ರ ವೇಳೆ ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಈಕೆ ಮನೆಯಿಂದ ತೆರಳಿದ್ದಳು. ಅನಂತರ  ಪುತ್ರಿ ಮನೆಗೆ ಮರಳಿ ಬಂದಿಲ್ಲವೆಂದು ತಾಯಿನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಂಜೇಶ್ವರ ರೈಲು ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಮಂಜೇಶ್ವರ: ರೈಲು ಡಿಕ್ಕಿಹೊಡೆದ ಸ್ಥಿತಿಯಲ್ಲಿ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಮಂಜೇಶ್ವರದಲ್ಲಿರುವ ಹೆದ್ದಾರಿ ನಿಯಂತ್ರಣ ಕೇಂದ್ರದ ಹಿಂಭಾಗದ ರೈಲು ಹಳಿಯಲ್ಲಿ ಸುಮಾರು 65 ವರ್ಷ ಪ್ರಾಯ ಅಂದಾಜಿಸುವ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಮಂಗಳೂರಿನಿAದ ಕಾಸರಗೋಡಿಗೆ ತೆರಳುವ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಲುಂಗಿ ಮತ್ತು ಅಂಗಿ ಧರಿಸಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತೆರಳಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ …

ಕುಂಬಳೆಯಲ್ಲಿ ಟೋಲ್ ಸಂಗ್ರಹ: ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣದರ ಏರಿಕೆ

ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಗೊಳ್ಳುವುದರೊಂದಿಗೆ ಮಂಗಳೂರಿಗೆ ತೆರಳುವ ಪ್ರಯಾಣಿಕರು ಇನ್ನಷ್ಟು ಮೊತ್ತವನ್ನು ಇದಕ್ಕಾಗಿ ವ್ಯಯಿಸಬೇಕಾಗಿಬಂದಿದೆ.  ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇದರ ಹೆಸರಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ಕಳೆದ ದಿನದಿಂದ ಹೆಚ್ಚಿಸಿದ ದರ ವಸೂಲಿ ಮಾಡಲಾ ಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಪ್ರಯಾಣದರ ಹೆಚ್ಚಿಸಿರುವು ದಾಗಿಯೂ ಇದು ಪ್ರಯಾಣಿಕರಿಗೆ ಭಾರೀ ಹೊರೆಯಾಗಿ ದೆಯೆಂದು ದೂರಲಾಗಿದೆ. ಕುಂಬಳೆಯಿಂದ ಉಪ್ಪಳಕ್ಕೆ 18 ರೂಪಾಯಿಯಿದ್ದುದು ಈಗ ೨೫ ರೂಪಾಯಿಯಾಗಿ ಹೆಚ್ಚಳಗೊಂಡಿದೆ.  ಕುಂಬಳೆಯಿಂದ ಮಂಗಳೂರಿಗೆ ೬೭ ರೂಪಾಯಿ ಇದ್ದುದು 75 …

ಕಾಣಿಕೆ ಹುಂಡಿಯ ಹಣ ಕಳವಿಗೆತ್ನ: ಕಾಂಗ್ರೆಸ್ ನೇತಾರ ಸೆರೆ

ಆಲಪ್ಪುಳ: ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡುತ್ತಿದ್ದಾಗ ಅದರಿಂದ ಕಳವು ನಡೆಸಲೆತ್ನಿಸಿದ ದೇವಸ್ವಂ ಮಂಡಳಿಯ ನೌಕರ ಸೆರೆಗೀಡಾಗಿದ್ದಾನೆ. ಕಾಂಗ್ರೆಸ್ ಪ್ರಾದೇಶಿಕ ನೇತಾರ ಹರಿಪ್ಪಾಡ್ ಕುಮಾರಪುರಂ ನಿವಾಸಿ ರಾಗೇಶ್‌ಕೃಷ್ಣ ಎಂಬಾತನನ್ನು ದೇವಸ್ವಂ ವಿಜಿಲೆನ್ಸ್ ಕೈಯ್ಯಾರೆ ಸೆರೆಹಿಡಿದಿದೆ. ಹರಿಪ್ಪಾಡ್  ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಘಟನೆ ನಡೆದಿದೆ. ಕಾಣಿಕೆ ಹುಂಡಿಯ 35 ಸಾವಿರ ರೂಪಾಯಿಗಳನ್ನು ಈತ ಅಪಹರಿಸಲೆತ್ನಿಸಿರುವುದಾಗಿ ದೂರಲಾಗಿದೆ. ಹಣ ಎಣಿಕೆ ಮಾಡುತ್ತಿದ್ದಂತೆ ಇಷ್ಟು ಮೊತ್ತವನ್ನು ಈತ ಬ್ಯಾಗ್‌ಗೆ ತುಂಬಿಸಿಕೊಂಡಿ ದ್ದಾನೆನ್ನಲಾಗಿದೆ. 20ರಷ್ಟು ನೌಕರರು ಎಣಿಕೆ ಮಾಡಿದ ಹಣವನ್ನು ಬ್ಯಾಂಕ್ ನೌಕರರಿಗೆ …

ನ್ಯಾಯವಾದಿ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು: ತನಿಖೆ ತೀವ್ರ; ಹಲವು ಬೆರಳಚ್ಚುಗಳು ಲಭ್ಯ

ಕುಂಬಳೆ: ನಾಯ್ಕಾಪಿನಲ್ಲಿ ನ್ಯಾಯವಾದಿ ಮನೆಯಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವುಗೈದ ಪ್ರಕರಣದಲ್ಲಿ  ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.  ಫಾರೆನ್ಸಿಕ್ ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಕಳ್ಳರದ್ದೆಂದು ಸಂಶಯಿಸುವ ಹಲವು ಬೆರಳಚ್ಚುಗಳು ಲಭಿಸಿದೆ.  ಪೊಲೀಸ್ ಶ್ವಾನ ಮನೆ ಹಾಗೂ ಪರಿಸರದಲ್ಲಿ ವಾಸನೆ ಹಿಡಿದ ಬಳಿಕ ರಸ್ತೆ ಬಳಿವರೆಗೆ ಓಡಿ ನಿಂತಿದೆ. ಆದ್ದರಿಂದ ಕಳ್ಳರು ವಾಹನದಲ್ಲಿ ಬಂದು ಕಳವು ನಡೆಸಿ ಬಳಿಕ ಅದರಲ್ಲೇ ಪರಾರಿಯಾಗಿರ ಬಹುದೆಂದು  ಸಂಶಯಿ ಸಲಾಗುತ್ತಿದೆ. ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ.ಮುಕುಂದನ್, ಎಸ್‌ಐ ಕೆ. …