ರಾಷ್ಟ್ರೀಯ ಹೆದ್ದಾರಿ ಕಾಲು ದಾರಿ ನಿರ್ಮಾಣ ಅಪಾಯಕರ ಸ್ಥಿತಿಯಲ್ಲಿ: ಕಳಪೆ ಕಾಮಗಾರಿ ಆರೋಪ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ತಲಪಾಡಿ- ಚೆಂಗಳ ರೀಚ್ ಉದ್ಘಾಟಿಸಲ್ಪಟ್ಟಿತಾದರೂ ಕಾಲ್ನಡೆ ಪ್ರಯಾಣಿಕರ ಸಂಕಷ್ಟ ಅಪಾಯಕರವಾದ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಆರೋಪಿಸಲಾಗಿದೆ. ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಕಾಲ್ನಡೆ ದಾರಿ ಹಾನಿಗೊಂಡ ಸ್ಥಿತಿಯಲ್ಲಿದೆ. ಮಳೆಯ ಆಗಮನದೊಂದಿಗೆ ಇಲ್ಲಿ ಇನ್ನಷ್ಟು ಸಮಸ್ಯೆ ತಲೆದೋರಲಿದೆ. ಕಾಲ್ನಡೆ ಪ್ರಯಾಣಿಕರ ವಿಷಯದಲ್ಲಿ ಸುಪ್ರೀಂಕೋರ್ಟ್ ಕಠಿಣ ನಿಲುವು ತಳೆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣು ತೆರೆದಿತ್ತು. ಈ ಹಿನ್ನೆಲೆಯಲ್ಲಿ ಕಾಲ್ನಡೆ ದಾರಿಯನ್ನು ನಿರ್ಮಿಸಲಾಗಿದೆ. ಆದರೆ ಇದನ್ನು ಕಳಪೆ ರೀತಿಯಲ್ಲಿ ನಿರ್ಮಿಸಲಾಗಿದ್ದು, ಮಣ್ಣಿನ ಮೇಲೆ ಇಂಟರ್ಲಾಕ್ ಹಾಕಲಾಗಿದೆ. …
Read more “ರಾಷ್ಟ್ರೀಯ ಹೆದ್ದಾರಿ ಕಾಲು ದಾರಿ ನಿರ್ಮಾಣ ಅಪಾಯಕರ ಸ್ಥಿತಿಯಲ್ಲಿ: ಕಳಪೆ ಕಾಮಗಾರಿ ಆರೋಪ”