ಮೆಡಿಕಲ್ ಪ್ರತಿನಿಧಿಯ ಸಾವಿನಲ್ಲಿ ಸಮಗ್ರ ತನಿಖೆ ಆಗ್ರಹಿಸಿ ಬಿಎಂಎಸ್‌ಆರ್‌ಎ ಮಾರ್ಚ್

ಕಾಸರಗೋಡು: ಅಬೋಟ್ ಫಾರ್ಮಾಸ್ಯೂಟಿಕಲ್ ಕಂಪೆನಿಯಲ್ಲಿ ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ತಿರುವನಂತಪುರ ನಿವಾಸಿ ಮಿಥುನ್‌ರ ಸಾವಿಗೆ ಸಂಬಂಧಿಸಿ ಸಮಗ್ರ ಹಾಗೂ ನಿಷ್ಪಕ್ಷವಾದ ತನಿಖೆ ನಡೆಸಬೇಕೆಂದು ಬಿಎಂಎಸ್‌ಆರ್‌ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಉಪೇಂ ದ್ರನ್ ಕೆ. ಆಗ್ರಹಿಸಿದರು. ಮಿಥುನ್‌ರ ಸಾವಿನ ಮುಂಚಿತ ಕೆಲಸದ ಸ್ಥಳದಲ್ಲಿ ಉಂಟಾದ ಮಾನಸಿಕ ಒತ್ತಡ ಸಂಬಂ ಧಿಸಿದ ಆರೋಪಗಳು ಮೂಡಿ ಬಂದಿತ್ತು. ಘಟನೆಯಲ್ಲಿ ಸತ್ಯಾಂಶವನ್ನು ಪತ್ತೆಹಚ್ಚಲು ಸಂಬಂಧಪಟ್ಟವರು ಸಮಗ್ರ ತನಿಖೆ ನಡೆಸಬೇಕೆಂದು ಕಾರ್ಮಿಕರ ಹಕ್ಕು ಸಂರಕ್ಷಿಸುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. …

ರಾಣಿಪುರಂ ರಸ್ತೆಯಲ್ಲಿ ಕಾರುಗಳು ಮಗುಚಿ ಪ್ರಯಾಣಿಕರಿಗೆ ಗಾಯ

ಕಾಸರಗೋಡು: ರಾಣಿಪುರಂ ರಸ್ತೆಯ ನೆಲ್ಲಿತ್ತೋಡ್ ಭಾಗದಲ್ಲಿ ಕಾರುಗಳು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅರ್ಧ ಗಂಟೆಯ ಮಧ್ಯಂತರದಲ್ಲಿ ಎರಡು ಅಪಘಾತಗಳು ಸಂಭವಿಸಿವೆ. ನಿನ್ನೆ ಮಧ್ಯಾಹ್ನ ೩ ಗಂಟೆಗೆ ಮೊದಲ ಅಪಘಾತ ನಡೆದಿದ್ದು, ಕಾಞಂಗಾಡ್ ನಿವಾಸಿಗಳಾದ ಸ್ವಿಪ್ಟ್ ಕಾರ್ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಇದಾದ  ಅರ್ಧ ಗಂಟೆ ಬಳಿಕ ಅರ್ಧ ಕಿಲೋ ಮೀಟರ್ ದೂರದಲ್ಲಿ ಕರ್ನಾಟಕ ನೋಂದಾವಣೆಯ ಎರ್ಟಿಗ ಕಾರು ರಸ್ತೆ ಬದಿಯ ಬರೆಗೆ ಢಿಕ್ಕಿ ಹೊಡೆದ ಬಳಿಕ ರಸ್ತೆಗೆ ಪಲ್ಟಿಯಾಗಿದೆ. ಕಾರುಗಳು ಸಂಪೂರ್ಣವಾಗಿ …

ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸಿ ಮಾದರಿಯಾದ ವಿನಾಯಕ ಕ್ಲಬ್ ಕಾರ್ಯಕರ್ತರು

ಕುಂಬಳೆ: ವಿನಾಯಕ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶ್ರಮಾದಾನದ ಮೂಲಕ ಮುಳಿಯಡ್ಕ- ನಾಯ್ಕಾಪು ರಸ್ತೆಯನ್ನು ಶುಚಿಗೊಳಿಸಲಾ ಯಿತು. ಕಾಡುಪೊದೆಗಳು ತುಂಬಿ ಅಪಾಯ ಒಡ್ಡುತ್ತಿದ್ದ ಈ ರಸ್ತೆಯನ್ನು ಕ್ಲಬ್ ಕಾರ್ಯಕರ್ತರು ಶುಚಿಗೊಳಿಸಿದರು. ಕಾಲ್ನಡೆ ಪ್ರಯಾಣಿಕರು ಹಾಗೂ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದ್ದ ರಸ್ತೆಗೆ ಬಾಗಿಗೊಂಡಿದ್ದ ಪೊದೆಗಳನ್ನು ತೆರವುಗೊಳಿ ಸಲಾಯಿತು. ಕ್ಲಬ್‌ನ ಈ ಚಟುವಟಿಕೆಯನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.

ಗೂಡಂಗಡಿಗಳಲ್ಲಿ ನಗರಸಭೆಯಿಂದ ರಾತ್ರಿ ಕಾಲ ತಪಾಸಣೆ

ಕಾಸರಗೋಡು: ನಗರಸಭೆ ವ್ಯಾಪ್ತಿಯ ಗೂಡಂಗಡಿಗಳಲ್ಲಿ  ರಾತ್ರಿ  ತಪಾಸಣೆ ತೀವ್ರಗೊಳಿಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶಿಗೆಲ್ಲ ವ್ಯಾಪಕವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ನಗರಸಭೆಯ ಆರೋಗ್ಯ ವಿಭಾಗದ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಹೆಲ್ತ್ ಇನ್ಸ್‌ಪೆಕ್ಟರ್ ಮಧು ಕೆ., ಪಿಎಚ್‌ಐಗಳಾದ ವೈಶಾಖ್, ಮುಬಶಿರ, ನೌಫಿಯ ಎಂಬಿವರು ಸೇರಿದ ತಂಡ ಗೂಡಂಗಡಿಗಳ ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಎಂಬಿವುಗಳ ಬಗ್ಗೆ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಹೋಟೆಲ್, ಕೂಲ್‌ಬಾರ್ ಮೊದಲಾದ ಸಂಸ್ಥೆ ಗಳಲ್ಲೂ ತಪಾಸಣೆ ನಡೆಸಲಾಗುವುದೆಂದು ತಿಳಿಸಲಾಗಿದೆ.

ಯುವತಿಯೊಂದಿಗೆ ಅವಮಾನಕರ ನಡವಳಿಕೆ: ಯೂತ್ ಕಾಂಗ್ರೆಸ್ ಮುಖಂಡ ಶ್ರೀಜಿತ್ ಕೋಡೋತ್ ವಿರುದ್ಧ ಶಿಸ್ತು ಕ್ರಮ

 ಕಾಸರಗೋಡು: ಯುವತಿಯ ಜೊತೆ ಅವಮಾನಕರವಾದ ರೀತಿಯಲ್ಲಿ ನಡೆದುಕೊಂಡನೆಂಬ ದೂರಿನಂತೆ ಯೂತ್ ಕಾಂಗ್ರೆಸ್ ಮುಖಂಡನನ್ನು ಹುದ್ದೆಯಿಂದ ಹೊರತುಪಡಿಸಲಾಗಿದೆ. ಮಂಡಲ ನೇತೃತ್ವದ ನಿರ್ದೇಶ ಪ್ರಕಾರ ಜಿಲ್ಲಾ ನೇತೃತ್ವ ಶಿಸ್ತು ಕ್ರಮ ಸ್ವೀಕರಿಸಿದೆ. ಉದುಮ ವಿಧಾನಸಭಾ ಮಂಡಲ ಉಪಾಧ್ಯಕ್ಷನಾಗಿದ್ದ ಶ್ರೀಜಿತ್ ಕೋಡೋತ್ ಯುವತಿಯ ಜೊತೆ ಅವಮಾನಕರವಾದ ರೀತಿಯಲ್ಲಿ ವ್ಯವಹರಿಸಿದನೆಂಬ ಆರೋಪ ಕೇಳಿ ಬಂದಿತ್ತು. ಘಟನೆ ಬಗ್ಗೆ ಯುವತಿ  ಕಾಂಗ್ರೆಸ್ ಮಂಡಲ ಸಮಿತಿಗೆ ದೂರು ನೀಡಿದ್ದರು. ಸಂಘಟನೆಗೆ ಅವಮಾನ ಉಂಟಾಗುವ ರೀತಿಯ ವ್ಯವಹಾರ ಯೂತ್ ಕಾಂಗ್ರೆಸ್ ನೀತಿಯಂತೆ ಅಂಗೀಕರಿಸಲು ಸಾಧ್ಯವಿಲ್ಲವೆಂದು ಜಿಲ್ಲಾ ಕಮಿಟಿ …

ಅಭಿವೃದ್ಧಿ ಯೋಜನೆಯಲ್ಲಿ ನರೇಂದ್ರ ಮೋದಿಗೆ ಪಕ್ಷಪಾತವಿಲ್ಲ- ಎಂ.ಎಲ್. ಅಶ್ವಿನಿ

ಅಡೂರು: ಅಭಿವೃದ್ಧಿ ಯೋಜನೆ ಗಳನ್ನು ಜ್ಯಾರಿಗೊಳಿಸುವುದರಲ್ಲಿ, ಜನಕ್ಷೇಮಯೋಜನೆಗಳಿಗಾಗಿ ಮೊತ್ತ ಮೀಸಲಿಡುವುದರಲ್ಲಿ ಯಾವುದೇ ಪಕ್ಷಪಾತ ನೀತಿ ತೋರಿಸದ ಆಡಳಿತಾ ಧಿಕಾರಿಯಾಗಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿ ದರು. ವಿವಿಧ ಪೋಷಕ ಸಂಘಟನೆಗಳ ನೇತೃತ್ವದಲ್ಲಿ ವಯೋಜನರಿಗಾಗಿ ಆಯೋಜಿಸಿದ ರಾಷ್ಟ್ರೀಯ ವಯೋ ಶ್ರೀಯೋಜನಾ ಸ್ಕ್ರೀನಿಂಗ್ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಯುಷ್ಮಾನ್ ಭಾರತ್ ವಯೋಜನ ಇನ್ಶೂರೆನ್ಸ್ ಯೋಜನೆ ಸಹಿತವಿರುವ ಕೇಂದ್ರ ಸರಕಾರದ ಜನಕ್ಷೇಮ ಯೋಜನೆ ಗಳನ್ನು ಸೂಕ್ತ ಸಮಯದಲ್ಲಿ ಜ್ಯಾರಿಗೊಳಿ ಸಲು ರಾಜ್ಯ ಸರಕಾರ …

ಶಾರದಾ ವಿ. ಭಟ್ ನಿಧನ

ಮಧೂರು: ಕೊಲ್ಯ ಕಕ್ಕೆಪ್ಪಾಡಿ ನಿವಾಸಿ ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಕೆ. ವಿಷ್ಣು ಭಟ್‌ರ ಪತ್ನಿ ಶಾರದಾ ವಿ. ಭಟ್ (74) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಲಕ್ಷ್ಮಿನಾರಾಯಣ ಶರ್ಮ, ಶ್ರೀಗಂಗಾ, ಮಹಾಲಕ್ಷ್ಮಿ, ಪುರೋಹಿತ ಮಾಧವ ಶರ್ಮ, ಸೊಸೆಯಂದಿರಾದ ಸವಿತ,  ಶ್ರೀಕಲ, ಅಳಿಯಂದಿರಾದ ವಾಸುದೇವ ಟಿ.ಕೆ., ಈಶ್ವರ ಕಡಂಬಳಿತ್ತಾಯ, ಸಹೋದರರಾದ ಶ್ರೀಕೃಷ್ಣ ಸರಳಾಯ, ಜಯರಾಮ, ಶ್ರೀಧರ, ಸಹೋದರಿಯ ರಾದ ಸತ್ಯವತಿ, ರಾಜೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ತಮ್ಮನ ತಮ್ಮನ ಮರಣಾನಂತರ ಕ್ರಿಯೆಗಳ ಮಧ್ಯೆ ಕುಸಿದು ಬಿದ್ದ ಅಣ್ಣ

ಕಾಸರಗೋಡು: ಸಹೋದರನ ಮರಣಾನಂತರ ಕಾರ್ಯಕ್ರಮದ ಮಧ್ಯೆ ಕುಸಿದು ಬಿದ್ದ ಅಣ್ಣ ನಿಧನ ಹೊಂದಿದರು. ತೃಕರಿಪುರ ಆಯಿಟ್ಟಿ ನಗರ ನಿವಾಸಿ ಎಂ. ಲಕ್ಷ್ಮಣನ್ (68) ಮೃತಪಟ್ಟವರು. ತಮ್ಮ ಎಂ. ಗೋಪಾಲನ್ ನಿಧನ ಹೊಂದಿದ ಹಿನ್ನೆಲೆಯಲ್ಲಿ 12ನೇ ದಿನದ ಮರಣಾನಂತರ ಕ್ರಿಯೆಗಳಿಗಾಗಿ ತೃಕ್ಕನ್ನಾಡ್ ಕ್ಷೇತ್ರಕ್ಕೆ ತಲುಪಿದ್ದರು. ಕ್ಷೇತ್ರದಲ್ಲಿ ಹೊರಗೆ ನಡೆಯುತ್ತಿದ್ದ ಕ್ರಿಯೆಗಳ ಮಧ್ಯೆ ಲಕ್ಷ್ಮಣನ್ ಕುಸಿದು ಬಿದ್ದಿದ್ದರು. ಕೂಡಲೇ ಇವರನ್ನು ಪಾಲಕುನ್ನುನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಪಿ. ಸರಸ್ವತಿ, ಮಕ್ಕ ಳಾದ ಪಿ. …

ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ: ಇಲಿ ವಿಷ ಸೇವಿಸಿದ 16ರ ಬಾಲಕ ಆಸ್ಪತ್ರೆಯಲ್ಲಿ

ಬಂದಡ್ಕ: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ ನಡೆದಿದೆ. ಉನ್ನತಿಯಲ್ಲಿ ವಾಸ ಮಾಡುತ್ತಿದ್ದ 16ರ ಹರೆಯದ ಬಾಲಕ ಇಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವಿಸಿದ್ದಾನೆಂಬ ಮಾಹಿತಿ ತಿಳಿದ ಕೂಡಲೇ ನಿನ್ನೆ ಬೆಳಿಗ್ಗೆ ಬಾಲಕನನ್ನು ಬೇಡಡ್ಕ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಡಾಕ್ಟರ್ ನಡೆಸಿದ ತಪಾಸಣೆಯಲ್ಲಿ ಇಲಿ ವಿಷ ಹೊಟ್ಟೆಯೊಳಗೆ ಸೇರಿರುವುದನ್ನು  ಖಚಿತಪಡಿಸಲಾಯಿತು. ಆ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೇಡಗಂ ತೋರೋತ್ ನಿವಾಸಿ ಟಿ. …

ನಿರಶನ ಕೊನೆಗೊಳಿಸಿದ ಸೋನಂ ವಾಂಕ್ಚುಕ್: ಪ್ರಶ್ನೆ ಪತ್ರಿಕೆಗಳ ಸೋರಿಕೆ ತಡೆಗೆ ಮಸೂದೆ ರೂಪು

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳು ದಾಗಿ ನಿನ್ನೆ ತಡರಾತ್ರಿ ಸುಮಾರು 3 ನಿಮಿಷಗಳ ಇನ್‌ಸ್ಟಾಗ್ರಾಂ ವೀಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ದಾರೆ.  ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ಇನ್ನೂ  ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿ ಯಾಗಿರುವವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲು …