ಮಂಡಲ, ಮಕರಜ್ಯೋತಿ ಉತ್ಸವ ಸಮಾಪ್ತಿ: ಶಬರಿಮಲೆ ಕ್ಷೇತ್ರದ ಬಾಗಿಲು ಮುಚ್ಚಿ ಕೀಲಿಕೈ ಹಸ್ತಾಂತರ

ಶಬರಿಮಲೆ: ಮಂಡಲ, ಮಕರ ಜ್ಯೋತಿ ಮಹೋತ್ಸವಕ್ಕೆ ಸಮಾಪ್ತಿ ಹಾಡಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಮುಚ್ಚಲಾಯಿತು. ಪಂದಳಂ ರಾಜಪ್ರತಿನಿಧಿ ಪುನರ್ತಂನಾಳ್ ನಾರಾಯಣವರ್ಮರವರ ಕ್ಷೇತ್ರ ಭೇಟಿಯ ಬಳಿಕ ಬೆಳಿಗ್ಗೆ 6.45ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. 5 ಗಂಟೆಗೆ ಬಾಗಿಲು ತೆರೆದು ಗಣಪತಿ ಹೋಮ ನಡೆಸಲಾಯಿತು. ಬಳಿಕ ಚಿನ್ನಾಭರಣಗಳನ್ನು ವಾಪಸ್ ಅರಮನೆಗೆ ಕೊಂಡೊಯ್ಯುವ ಶೋಭಾಯಾತ್ರೆ ಆರಂಭಗೊಂಡಿತು. ಪೆರಿಯ ಸ್ವಾಮಿ ಮರುದವನ ಶಿವನ್‌ಕುಟ್ಟಿಯವರ ನೇತೃತ್ವದಲ್ಲಿ ೩೦ ಮಂದಿಯ ತಂಡ ಚಿನ್ನಾಭರಣಗಳ ಜೊತೆ ಅರಮನೆಗೆ ಹಿಂತಿರುಗಿದೆ. ಈ ತಿಂಗಳ ೨೩ರಂದು ಇದು …

ಮಂಜೇಶ್ವರ ಪಂ. ಮಾಜಿ ಸದಸ್ಯ ನಿಧನ

ಮಂಜೇಶ್ವರ: ಉದ್ಯಾವರ ನಿವಾಸಿ, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ (೫೩)ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಉಲ್ಬಣ ಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಮೊನ್ನೆ ರಾತ್ರಿ ನಿಧನ ಸಂಭವಿಸಿದೆ. ಪಂಚಾಯತ್‌ನ 20ನೇ ವಾರ್ಡ್ ಮಾಜಿ ಸದಸ್ಯರಾಗಿ ದ್ದರು. 10ನೇ ಮೈಲು ಹಾಗೂ ಕುಂಜತ್ತೂರಿನಲ್ಲಿ ಅಂಡರ್ ಪಾಸ್‌ಗಾಗಿ ಹೋರಾಟ ಸಮಿತಿ ರೂಪಿಸಿ ಅದರ ನೇತೃತ್ವ ವಹಿಸಿದ್ದರು. ವಿವಿಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ದಿ| ಮೊಹಮ್ಮದ್ ಹಾಜಿ- ದಿ| ಬಿಫಾತಿಮ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಸಬೀನ …

ವಿಧಾನಸಭಾ ಚುನಾವಣೆ: ವಿದ್ಯುನ್ಮಾನ ಮತಯಂತ್ರಗಳು ಜಿಲ್ಲೆಯಲ್ಲಿ ಸಿದ್ಧವೆಂದು ಜಿಲ್ಲಾಧಿಕಾರಿ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಅಗತ್ಯವಾದ ಇಲೆಕ್ಟ್ರೋ ನಿಕ್ ಮತಯಂತ್ರಗಳು ಜಿಲ್ಲೆಯಲ್ಲಿ ಸಿದ್ಧವಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನುಡಿದರು. ವಿಧಾನ ಸಭಾ ಚುನಾವಣೆಗೆ ಅಗತ್ಯಕ್ಕಿರುವ ವಿದ್ಯುನ್ಮಾನ ಮತಯಂತ್ರಗಳ ಪ್ರಾಥಮಿಕ ತಪಾಸಣೆ ಜಿಲ್ಲೆಯಲ್ಲಿ ಪೂರ್ತಿಗೊಂಡಿದೆ. ಹೊಸತಾಗಿ ರೂಪೀಕರಿಸಿದ 158 ಬೂತ್‌ಗಳು ಸಹಿತ ಜಿಲ್ಲೆಯಲ್ಲಿ 1141 ಬೂತ್‌ಗಳು ಮುಂದಿನ ವಿಧಾನಸಭಾ ಚುನಾವಣೆಗಾಗಿ ಸಿದ್ಧವಾಗಿವೆ. ಮತದಾ ಕ್ಕಾಗಿ 1426 ಬ್ಯಾಲೆಟ್ ಘಟಕಗಳು, 1426 ಕಂಟ್ರೋಲ್ ಘಟಕಗಳು, 1536 ವಿವಿಪ್ಯಾಟ್ ಎಂಬಿವುಗಳ ಫಸ್ಟ್ ಲೆವೆಲ್ ಚೆಕ್ಕಿಂಗ್ ಪೂರ್ತಿಗೊಂಡಿದೆ. …

ಕೆಂಪುಕಲ್ಲು ಕೈಗಾರಿಕಾ ವಲಯವನ್ನು ಸಂರಕ್ಷಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಧರಣಿ

ಕಾಸರಗೋಡು: ಕೆಂಪುಕಲ್ಲು ಕೈಗಾರಿಕಾ ವಲಯಕ್ಕೆ ಪರ್ಮಿಟ್ ಮಂಜೂರು ಮಾಡುವುದಕ್ಕಾಗಿ ಹಲವು ಕಾಲಗಳಿಂದ ಒತ್ತಡ, ಮುಷ್ಕರ ನಡೆಸಲಾಗುತ್ತಿದ್ದು, ಸಾವಿರಾರು ಕಾರ್ಮಿಕರು ಕೆಲಸ ಮಾಡುವ ಈ ವಲಯವನ್ನು ಅಧಿಕಾರಿಗಳು ಅವಗಣಿಸುತ್ತಿರುವುದಾಗಿ ದೂರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು. 98 ಶೇಕಡ ಕೆಂಪುಕಲ್ಲು ಕ್ವಾರೆಗಳು ಪಟ್ಟಾ ಭೂಮಿಯಲ್ಲಿ ಕಾರ್ಯಾಚರಿಸುತ್ತಿದ್ದು, 400ರಷ್ಟು ಕೆಂಪುಕಲ್ಲು ಕ್ವಾರೆಗಳಲ್ಲಿ ಕೇವಲ 8 ಕ್ವಾರೆಗಳಿಗೆ ಮಾತ್ರವೇ ಪರವಾನಗಿ ಮಂಜೂರು ಮಾಡಿರುವುದಾಗಿ ದೂರಲಾಗಿದೆ. ಕೆಂಪುಕಲ್ಲು ವಲಯಕ್ಕೆ ಇಸಿ ಹೊರತುಪಡಿಸಬೇಕು, ಒಂದೇ ಬಾರಿ ಅದಾಲತ್ ಜ್ಯಾರಿಗೊಳಿಸಬೇಕು, ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ …

ಕಾಸರಗೋಡು ಅಬಕಾರಿ ಡಿವಿಶನ್‌ನಿಂದ ಮಾದಕ ಪದಾರ್ಥ ವಿರುದ್ಧ ತಿಳುವಳಿಕಾ ತರಗತಿ

ಕುಂಬಳೆ: ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಇಲಾಖೆ, ಕುಟುಂಬಶ್ರೀ ಮಿಷನ್, ಲೀಗಲ್ ಸರ್ವೀಸ್ ಅಥೋರಿಟಿ ಎಂಬಿವುಗಳ ಸಹಕಾರದೊಂದಿಗೆ ಮಾದಕ ಪದಾರ್ಥ ವಿರುದ್ಧ ತಿಳುವಳಿಕೆ, ಎನ್‌ಡಿಪಿಎಸ್ ಕಾನೂನುಗಳ ಬಗ್ಗೆ ತಿಳುವಳಿಕೆ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೇರಳ ಸರಕಾರದ ೫ನೇ ಹಂತದ ‘ನೋ ಟು ಡ್ರಗ್ಸ್’ ಕಾರ್ಯಾಗಾರದಂಗವಾಗಿ ಮಾದಕ ಪದಾರ್ಥ ವಿರುದ್ಧ ಪ್ರಚಾರಕ್ಕೆ ಸಂಬಂಧಿಸಿ ರಾಜ್ಯದ ೧೪೦ ವಿಧಾನಸಭಾ ಮಂಡಲಗಳಲ್ಲೂ ಶಾಸಕರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಂತೆ ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಂಬಳೆ ಪಂಚಾಯತ್ ಅಧ್ಯಕ್ಷ …

ರಸ್ತೆಯ ಶೋಚನೀಯಾವಸ್ಥೆ: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಖಾಸಗಿ ಬಸ್ ಮುಷ್ಕರ: ಪ್ರಯಾಣಿಕರಿಗೆ ಸಮಸ್ಯೆ

ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ  ಖಾಸಗಿ ಬಸ್ ಸಂಚಾರವನ್ನು ಇಂದು ಮೊಟಕುಗೊಳಿಸಿದ್ದು ಇದರಿಂದ ಪ್ರಯಾಣಿಕರು ಭಾರೀ ಸಮಸ್ಯೆಗೀಡಾ ಗಿದ್ದಾರೆ.  ಎಂದಿನಂತೆ ಕಾಸರಗೋಡು ಹಾಗೂ ಕಲ್ಲಡ್ಕ ಭಾಗಕ್ಕೆ ತೆರಳಲು ಬಸ್ ಸ್ಟಾಪ್‌ಗಳಿಗೆ ತಲುಪಿದ ಪ್ರಯಾಣಿಕರು ಬಸ್‌ಗಳಿಲ್ಲದುದರಿಂದ ಸಂಕಷ್ಟಕ್ಕೀಡಾದರು.  ಈ ರೂಟ್‌ನಲ್ಲಿ  ಕೆಲವೊಮ್ಮೆ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆಯಾದರೂ ಪ್ರಯಾಣಿಕರ  ಸಂದಣಿ ಹೆಚ್ಚಿರುವುದರಿಂದ ಅದಕ್ಕೇರಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರೂಟ್‌ನಲ್ಲಿ  ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಒಂದು ವರ್ಷದಿಂದ ಹೊಂಡಗಳಿಂದ ತುಂಬಿಕೊಂಡಿರು ವುದರಿಂದ  ಪ್ರಯಾಣಿಕರು ಹಾಗೂ …

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಚಾಲಕ ನಿಧನ

ಬದಿಯಡ್ಕ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಪಿಕಪ್ ಚಾಲಕ ಮೃತಪಟ್ಟರು. ಬದಿಯಡ್ಕ ಬಳಿಯ ಬೀಜಂತಡ್ಕದ ವಸಂತ ಟೈಲರ್‌ರ ಪುತ್ರ ಹರ್ಷಿತ್ ಯಾನೆ ಅಶೋಕ್ (36) ಎಂಬವರು ಮೃತಪಟ್ಟ ಯುವಕನಾಗಿ ದ್ದಾರೆ. ಇಂದು ಮುಂಜಾನೆ ಮನೆಯಲ್ಲಿ ನಿಧನ ಸಂಭವಿಸಿದೆ. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆ ಪಡೆಯುತ್ತಿ ದ್ದರು. ಮೊದಲು ಬದಿಯಡ್ಕದಲ್ಲಿ ಆಟೋ ಚಾಲಕನಾಗಿದ್ದ ಹರ್ಷಿತ್ ಬಳಿಕ ಪಿಕಪ್ ಚಾಲಕನಾಗಿದ್ದರು. ಹರ್ಷಿತ್‌ರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿವೆ. ಗಣ್ಯರ ಸಹಿತ ಹಲವರು  ಮನೆಗೆ ಬೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು …

ನ್ಯಾಯವಾದಿ ಮನೆಯಿಂದ ಭಾರೀ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳು, ನಗದು ಕಳವು

ಕುಂಬಳೆ:  ನಾಯ್ಕಾಪುನಲ್ಲಿ ನ್ಯಾಯವಾದಿಯ ಮನೆಗೆ ನುಗ್ಗಿದ ಕಳ್ಳರು ಭಾರೀ ಪ್ರಮಾಣದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದು ದೋಚಿದ್ದಾರೆ.  ಕಾಸರಗೋಡು ಬಾರ್‌ನ ನ್ಯಾಯವಾದಿಯಾದ ಚೈತ್ರಾ ಹಾಗೂ ಕುಟುಂಬ ವಾಸಿಸುವ ಮನೆಯಿಂದ ಈ ಕಳವು ನಡೆದಿದೆ. ಮನೆಯ ಹಿಂಭಾಗದ ಬಾಗಿಲು ಕೆಡವಿ ಒಳಗೆ ನುಗ್ಗಿದ ಕಳ್ಳರು ಕಪಾಟುಗಳಲ್ಲಿರಿಸಿದ್ದ 29 ಪವನ್ ಚಿನ್ನ, 25 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ 5 ಸಾವಿರ  ರೂಪಾಯಿಗಳನ್ನು ಕಳ್ಳರು ದೋಚಿರುವುದಾಗಿ ತಿಳಿದುಬಂದಿದೆ. ನೆಕ್ಲೇಸ್, ಬಳೆಗಳು, ಉಂಗುರಗಳು, ಬ್ರೇಸ್‌ಲೆಟ್, ಮಾಲೆ, ಬೆಂಡೋಲೆ, ಮಕ್ಕಳ …

ಮರದ ಮಿಲ್‌ನಲ್ಲಿ ಮರ ತಲೆಗೆ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಕುಂಬಳೆ:  ಮರದ ಮಿಲ್‌ನಲ್ಲಿ ಮರ ತುಂಡುಮಾಡುತ್ತಿದ್ದಂತೆ ಮರ ಚದುರಿ ತಲೆಮೇಲೆ ಬಿದ್ದು ಗಾಯ ಗೊಂಡ ಮಿಶನ್ ಆಪರೇಟರ್ ಮೃತಪಟ್ಟಿದ್ದಾರೆ. ಕುಂಬಳೆ ಶಾಂತಿಪಳ್ಳದ ಜಮಾಲಿಯ ಮರದ ಮಿಲ್‌ನ ಮಿಶನ್ ಆಪರೇಟರ್, ಕುಂಟಂಗೇ ರಡ್ಕ ವೆಲ್ಫೇರ್ ಶಾಲೆ ಬಳಿ ವಾಸಿಸುವ ಗೋಪಾಲನ್ (60) ಮೃತಪಟ್ಟ ದುರ್ದೈವಿ.  ಕಳೆದ ಶುಕ್ರವಾರ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಇವರನ್ನು  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶನಿವಾರ ನಿಧನ ಸಂಭವಿಸಿದೆ.   ದೀರ್ಘಕಾಲದಿಂದ ಇವರು ಇದೇ ಮಿಲ್‌ನಲ್ಲಿ ಮಿಶನ್ ಆಪರೇಟರ್ ಆಗಿದ್ದಾರೆ. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ …

ಸ್ಕೂಟರ್‌ನಿಂದ ಎಂಡಿಎಂಎ ವಶ: ಪರಾರಿಯಾದ ಆರೋಪಿ ಸೆರೆ

ಉಪ್ಪಳ:  ಪೊಲೀಸರನ್ನು ಕಂಡು  ಉಪೇಕ್ಷಿಸಿದ ಸ್ಕೂಟರ್‌ನಿಂದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿ ಸೆರೆಗೀಡಾ ಗಿದ್ದಾನೆ. ಉಪ್ಪಳ ಮೂಸೋಡಿಯ ಅಬ್ದುಲ್ ಮಜೀದ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದ್ದಾರೆ.  ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.  ಜನವರಿ ೮ರಂದು ರಾತ್ರಿ 8.15 ರ ವೇಳೆ  ಮಾದಕವಸ್ತು ವಶಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಡಾನ್ಸಾಪ್ ಸ್ಕ್ವಾಡ್‌ನ ಸದಸ್ಯರಾದ ಆರಿಫ್, ಶೈಜು ಎಂಬಿವರು ಸೇರಿ ಮೂಸೋಡಿಯಲ್ಲಿ  ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಸ್ಕೂಟರ್‌ಗೆ ತಡೆಯೊಡ್ಡಿದರು.  ಇದನ್ನು ಕಂಡು ಸ್ಥಳಕ್ಕೆ …