ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಜಾತ್ರೆ ನಾಳೆಯಿಂದ

ಕುಂಬಳೆ: ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವರ್ಷಾವಧಿ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭಗೊಳ್ಳಲಿದೆ.  ನಾಳೆ ಬೆಳಿಗ್ಗೆ 8ರಿಂದ ಸೋಪಾನ ಸಂಗೀತ, 9.30ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, 10ಕ್ಕೆ ಶ್ರೀ ಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ನಡೆ ತೆರೆಯುವುದು, 5.15ರಿಂದ ಯಕ್ಷಗಾನ ಬಯಲಾಟ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ರಂಗಪೂಜೆ, ಉತ್ಸವ ಶ್ರೀ ಭೂತಬಲಿ ನಡೆಯಲಿರುವುದು. ವಾರ್ಷಿಕೋತ್ಸವದಂಗವಾಗಿ ಈ ತಿಂಗಳ 18ರವರೆಗೆ ವಿವಿಧ ವೈದಿಕ, …

ಕಲ್ಲಂಗೈ ಸರ್ವೀಸ್ ರಸ್ತೆಯಲ್ಲಿ ಗುಡ್ಡೆ ಕುಸಿತ: ಶಾಲಾ ಕಟ್ಟಡ ಅಪಾಯಭೀತಿಯಲ್ಲಿದ್ದರೂ ಅಧಿಕಾರಿಗಳಿಗೆ ಮೌನ

ಕುಂಬಳೆ: ಗುಡ್ಡೆ ಕುಸಿತ ಮುಂದುವರಿಯುತ್ತಿರುವ ಮೊಗ್ರಾಲ್‌ಪುತ್ತೂರು ಕಲ್ಲಂಗೈ ಎಎಲ್‌ಪಿ ಶಾಲೆ ಬಳಿ ಗೋಡೆ ಕಟ್ಟಿ ಸಂರಕ್ಷಣೆ ಖಚಿತಪಡಿಸುವುದರಲ್ಲಿ ಅಧಿಕಾರಿಗಳು ಅನಾಸ್ಥೆ ತೋರುತ್ತಿರುವುದು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಮೂಲಕ ಇರುವ ಪ್ರಯಾಣಿಕರಿಗೆ ಬೆದರಿಕೆಯಾಗುತ್ತಿದೆ. ಸ್ಥಳೀಯರು ಆತಂಕದಲ್ಲಿದ್ದಾರೆ. ಈ ಮೊದಲು ಕೂಡಾ ಈ ಬಗ್ಗೆ ಸುದ್ಧಿ ಪ್ರಕಟಗೊಂಡಿತ್ತು. ಶಾಲಾ ಮೆನೇಜ್‌ಮೆಂಟ್ ಇದುವರೆಗೂ ಈ ಬಗ್ಗೆ ಬಾಯಿ ತೆರೆದಿಲ್ಲ. ಈ ಮೂಲಕ ಸಂಚರಿಸುವ ವಾಹನಗಳಿಗೆ, ಪ್ರಯಾಣಿಕರಿಗೆ ಶಾಲಾ ಕಟ್ಟಡ ಭಾರೀ ಬೆದರಿಕೆಯೊಡ್ಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಮಣ್ಣು ತೆಗೆದಾಗ ಶಾಲಾ …

ಭಾಷಾ ಮಸೂದೆ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹೇಳಿಕೆ ವಾಸ್ತವ ವಿರುದ್ಧ-ಕೆ.ಆರ್. ಜಯಾನಂದ

ಮಂಜೇಶ್ವರ: ಕೇರಳ ಸರಕಾರ ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಯ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದು,  ಇದು ಕೇರಳ ವಿರೋಧಿ ಧೋರಣೆಗೆ ಉದಾಹರಣೆಯಾಗಿದೆಯೆಂದು ಸಿಪಿಎಂ ಮಂಜೇಶ್ವರ  ಏರಿಯಾ ಕಾರ್ಯದರ್ಶಿ ಕೆ.ಆರ್. ಜಯಾನಂದ ಆರೋಪಿಸಿದ್ದಾರೆ. ವರ್ಷಗಳ ಹಿಂದೆ  ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕದೆ ಮರಳಿಸಿದ್ದರು.  ಆ ಬಳಿಕ ಪರಿಷ್ಕೃತ ಮಸೂದೆಯಲ್ಲಿ ಕೇರಳದ ಮತ್ತು ತಮಿಳುಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಲೆಯಾಳಂ ಕಲಿಯಲು …

ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ ಕೆ. ಮಾಧವನ್ ನಾಯರ್ ನಿಧನ

ಕಾಸರಗೋಡು: ಬಿಜೆಪಿ ಮಾಜಿ ರಾಜ್ಯ ಕೌನ್ಸಿಲ್ ಸದಸ್ಯ, ನಿವೃತ್ತ ಪಂಚಾಯತ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದ ಪರವನಡ್ಕದ ಕೆ. ಮಾಧವನ್ ನಾಯರ್ (88) ನಿಧನ ಹೊಂದಿದರು. ಚೆಮ್ನಾಡ್ ಪಂಚಾಯತ್‌ನಲ್ಲಿ ಇವರು ನಾಲ್ಕು ಬಾರಿ ಸದಸ್ಯನಾಗಿದ್ದರು. ಪರವನಡ್ಕ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೋಟರುವಂ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯಾಚರಿಸಿದ್ದಾರೆ. ಎಕ್ಸಿಕ್ಯೂಟಿವ್ ಮಾಧವನ್ ನಾಯರ್ ಎಂದೇ ತಿಳಿಯಲ್ಪಡುತ್ತಿದ್ದ ಇವರು ಪರವನಡ್ಕ ಹಾಗೂ ಪರಿಸರ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ಆರಂಭಿಸುವಲ್ಲಿ ನಿರ್ಣಾಯಕ …

ಮಂಜೇಶ್ವರ ಬ್ಲೋಕ್ ಪಂಚಾಯತ್ ವಾಹನ ಮಂಗಳೂರಿಗೆ ಸರ್ವೀಸ್: ವಿಜಿಲೆನ್ಸ್‌ಗೆ ದೂರು

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ವಾಹನ ಮಂಜೇಶ್ವರ- ಮಂಗಳೂರು ಮಧ್ಯೆ ಸರ್ವೀಸ್ ನಡೆಸುತ್ತಿದೆ ಎಂದು ಹೊಸಂಗಡಿ ಗೌಸಿಯಾ ನಗರದ ಎನ್. ಅಬ್ದುಲ್ ಹಮೀದ್ ವಿಜಿಲೆನ್ಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಕೆಎಲ್14ಎಲ್ 9926 ನಂಬ್ರದ ಸರಕಾರಿ ವಾಹನವನ್ನು ಈ ರೀತಿಯಲ್ಲಿ ಸರ್ವೀಸ್‌ಗೆ ಬಳಸಿಕೊಳ್ಳುತ್ತಿರುವುದಾಗಿ ದೂರಲಾಗಿದೆ.  ಈ ವಾಹನಕ್ಕೆ ಬೆಂಗಾವ ಲಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವಾಹನವೂ ಸಂಚರಿಸುತ್ತಿರುವುದಾಗಿ ಆರೋಪಿಸಲಾಗಿದೆ. ಈ ವಾಹನಗಳು ಮಂಗಳೂರಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮ ಸ್ಥಳಗಳಲ್ಲಿ,  ಊರಿನ ರಾಜಕೀಯ ಪಕ್ಷಗಳ ಸಭೆ ನಡೆಯುವಲ್ಲಿ, ಕೆಲವು …

ಸುಲ್ತಾನ್ ಗ್ರೂಪ್‌ನ 20ನೇ ಶೋರೂಂ ವಿಜಯಪುರದಲ್ಲಿ ಉದ್ಘಾಟನೆ

ಬೆಂಗಳೂರು: ಸುಲ್ತಾನ್ ಗ್ರೂಪ್‌ನ 20ನೇ ಡೈಮಂಡ್ಸ್ ಆಂಡ್ ಗೋಲ್ಡ್ ಶೋರೂಂ ಕರ್ನಾಟಕದ ವಿಜಯಪುರ ದಲ್ಲಿ ಕೃಷಿ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ವಿಜಯಪುರ ಮೇಯರ್ ಎಂ.ಎಸ್. ಕರಡಿ,  ಶ್ರೀ ಜ್ಞಾನಯಾನ ಯೋಗಾಶ್ರಮ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ಮಕ್ಬುಲ್ ಭಗವಾನ್, ದೇವಾನಂದ ಫುಲಸಿಂಗ್ ಚವಾನ್, ಶ್ರೀದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಗುಡ್ಡಾಪುರ ಇದರ ಅಧ್ಯಕ್ಷ ವಿಜುಗೌಡ ಎಸ್ ಪಾಟೀಲ್, ಅಂಜುಮಾನ್ ಇಸ್ಲಾಮ್ ಉಪಾಧ್ಯಕ್ಷ ಸೈನುಲಬದಿನ್ ಹಶ್ಮಿ, ಫಾರಿಶ್‌ಪ್ರಿಸ್ಟ್, ಸೈಂಟ್ ಆನ್‌ಚರ್ಚ್ ಫಾದರ್ ಜೋಸೆಫ್ ಎಸ್.ಜೆ …

ಕುಂಬಳೆಯಲ್ಲಿ ಟೋಲ್ ಸಂಗ್ರಹಕ್ಕೆ ನಾಗರಿಕರಿಂದ ತಡೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕು; ಶಾಸಕ ಸಹಿತ 60 ಮಂದಿ ಬಂಧನ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ  ಟೋಲ್  ಪ್ಲಾಜಾದಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಈ ಕ್ರಮವನ್ನು ನಾಗರಿಕರು ತಡೆದಿದ್ದಾರೆ. ಶಾಸಕ ಎ.ಕೆ.ಎಂ. ಅಶ್ರಫ್‌ರ ನೇತೃತ್ವದಲ್ಲಿ ನಾಗರಿಕರು ಸ್ಥಳದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ.  ಘಟನೆಗೆ ಸಂಬಂಧಿಸಿ ಶಾಸಕ ಸಹಿತ 60 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಟೋಲ್ ಸಂಗ್ರಹ ಆರಂಭಿಸಿರುವುದನ್ನು ತಿಳಿದು ಶಾಸಕರ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ತಲುಪಿದ್ದಾರೆ. ಅನ್ಯಾಯ ರೀತಿಯಲ್ಲಿ ಟೋಲ್ ಸಂಗ್ರಹಕ್ಕೆ ಬಿಡಲಾರೆವೆಂದು ಚಳವಳಿನಿರತರು …

ಎಂಡಿಎಂಎ ಸಹಿತ ಮೂವರ ಸೆರೆ: ಆಟೋ ರಿಕ್ಷಾ, ಬೈಕ್ ವಶ

ಉಪ್ಪಳ: ಎಂಡಿಎಂಎ ಸಾಗಿಸುತ್ತಿದ್ದ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಒಂದು ಆಟೋ ರಿಕ್ಷಾ ಹಾಗೂ ಬುಲ್ಲೆಟ್ ಬೈಕ್ ವಶಪಡಿಸಲಾಗಿದೆ. ಮಂಜೇಶ್ವರ ಪೊಸೋಟ್ ಆದರ್ಶ್‌ನಗರ ಅನ್ಸೀನ ಮಂಜಿಲ್‌ನ ಅನ್ಸಾರ್ ಐ.ಬಿ (36), ಉದ್ಯಾವರ ಸೆಕೆಂಡ್ ರೈಲ್ವೇ ಗೇಟ್ ಬಳಿಯ ಮದೀನಾ ಮಂಜಿಲ್‌ನ ಸಿರಾಜುದ್ದೀನ್ (24), ಪಾವೂರು ಮಚ್ಚಂಪಾಡಿ ಪಳ್ಳ ಗುಡ್ಡೆ ಹೌಸ್‌ನ ಅಹಮ್ಮದ್ ಸೈಫುದ್ದೀನ್ (21) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ 3.39 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ ಸಂಜೆ 6.15ರ …

ಸುಟ್ಟು ಗಾಯಗೊಂಡಿದ್ದ ಕಾವುಗೋಳಿ ನಿವಾಸಿ ಎಎಸ್‌ಐ ಮಂಗಳೂರಿನಲ್ಲಿ ನಿಧನ

ಕಾಸರಗೋಡು: ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮೂಲತಃ ಕಾವುಗೋಳಿ ನಿವಾಸಿ ಹಾಗೂ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಎಎಸ್‌ಐ ಆಗಿರುವ ಹರಿಶ್ಚಂದ್ರ ಬೇರಿಕೆ (57) ನಿಧನಹೊಂದಿದರು.  ಇವರು ವಾಸಿಸುವ ಮಂಗಳೂರು ಕೆಪಿಟಿ ವ್ಯಾಸನಗರ  ಮನೆ ಬಳಿ ತರಗೆಲೆಗೆ ಬೆಂಕಿ ಹಚ್ಚಿದಾಗ ಅಕಸ್ಮಾತ್ ಬೆಂಕಿ ದೇಹಕ್ಕೆ ತಗಲಿ ಸುಟ್ಟು ಗಾಯಗೊಂಡಿದ್ದರು.  ಡಿಸೆಂಬರ್ ೨೮ರಂದು ಘಟನೆ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ನಿನ್ನೆ ನಿಧನ ಸಂಭವಿಸಿದೆ. ಪಾಂಡೇಶ್ವರ ಠಾಣೆ, ಡಿವೈಎಸ್ಪಿ ಕಚೇರಿ, ಎಸಿಪಿ ಕಚೇರಿ, ಕರಾವಳಿ ಕಾವಲು ಪಡೆ, ಸಂಚಾರಪೂರ್ವ …

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾದಕವಸ್ತು ಸಾಗಾಟ: ಓರ್ವ ಸೆರೆ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉಪ್ಪಳ ಬಾಲಕುಂಡ ನಿವಾಸಿ ಮುಹಮ್ಮದ್ ರಫೀಕ್ (43) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಈತ ಸೆರೆಗೀಡಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಾಗಿದ್ದ ಈತನ ಕೈಯಲ್ಲಿದ್ದ 20 ಗ್ರಾಂ ಗಾಂಜಾ ಹಾಗೂ 1.79 ಗ್ರಾಂ ಮೆಥಾಫಿಟಮಿನ್‌ನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಸಿ. ಸಂತೋಷ್ ಕುಮಾರ್, ಸಿವಿಲ್ ಎಕ್ಸೈಸ್ …