ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಾರೆಕಟ್ಟೆ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಛೇಂಬರ್

ಮಧೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ಮುಖಾಂತರ ಮಧೂರು ಗ್ರಾಮ ಪಂಚಾಯತ್ ನ ಪಾರೆಕಟ್ಟೆ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಛೇಂಬರ್ ಒದಗಿಸುವುದರ ಬಗ್ಗೆ ಮಂಜೂರಾತಿ ಪತ್ರವನ್ನು ನೀಡಲಾಯಿತು.  ಕಾರ್ಯಕ್ರಮದಲ್ಲಿ ಪಂಚಾಯತ್  ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದರು.  ತಾಲೂಕು ಯೋಜನಾಧಿಕಾರಿ  ದಿನೇಶ್, ಕಾಸರಗೋಡು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ,  ಕಾಸರಗೋಡು ವಲಯ ಜನಜಾಗೃತಿ ಅಧ್ಯಕ್ಷ  ಕಿರಣ್ ಪ್ರಸಾದ್ ಕೂಡ್ಲು, ಕೇಂದ್ರ ಒಕ್ಕೂಟದ ಅಧ್ಯಕ್ಷ  ಜ್ಞಾನೇಶ್ ಆಚಾರ್ಯ, ಸೇವಾ ಪ್ರತಿನಿಧಿ ಜ್ಯೋತಿ, ಜನಜಾಗೃತಿ ಸದಸ್ಯ ರವೀಂದ್ರ ರೈ, …

ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಯುವತಿ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಾವುಂಗಾಲ್, ಕಲ್ಯಾಣ್ ರಸ್ತೆ ಕ್ರೈಸ್ಟ್ ಶಾಲೆಯ ಸಮೀಪ ಸಂಭವಿಸಿದ ಅಪಘಾತದಲ್ಲಿ ಯುವತಿ ಮೃತಪಟ್ಟರು. ಮಾವುಂಗಾಲ್ ನೆಲ್ಲಿಕ್ಕಾಟ್ ಪೈರಡ್ಕದ ವೇಣುಗೋಪಾಲರ ಪತ್ನಿ ಕೆ. ರಜನಿ (38) ಮೃತಪಟ್ಟವರು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಪುತ್ರ ಅದ್ವೈತ್ (11) ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ನಿನ್ನೆ ಸಂಜೆ 6.3೦ರ ವೇಳೆ ಇನ್ನೋವ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಳಿಕ ನಿಲ್ಲಿಸದೆ ಪರಾರಿಯಾದ ಕಾರನ್ನು ರಾತ್ರಿ 8 ಗಂಟೆ ವೇಳೆ ಹೊಸದುರ್ಗ ಪೊಲೀಸರು ಪತ್ತೆಹಚ್ಚಿದ್ದಾರೆ.

ಮೊಗ್ರಾಲ್ ಮಖಾಂ ಉರೂಸ್: ಕ್ಷೇತ್ರಕ್ಕೆ ತಲುಪಿ  ಆಮಂತ್ರಣ ನೀಡಿದ ಮಸೀದಿ ಪದಾಧಿಕಾರಿಗಳಿಗೆ ಸ್ವಾಗತ

ಮೊಗ್ರಾಲ್: ಮೊಗ್ರಾಲ್ ಮಖಾಂ ಉರೂಸ್ ನಾಳೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳು ಗಾಂಧಿನಗರ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿ ಕ್ಷೇತ್ರ ಸಮಿತಿ ಪದಾಧಿಕಾರಿಗಳನ್ನು ಉರೂಸ್‌ಗೆ ಆಹ್ವಾನಿಸಿದರು. ಹಲವು ಕಾಲಗಳಿಂದ ಇಲ್ಲಿ ಕಾಯ್ದುಕೊಂಡಿರುವ ಒಗ್ಗಟ್ಟಿನ ಪ್ರದರ್ಶನವಾಗಿದೆ ಇದು. ಜಿಲ್ಲೆಯ ವಿವಿಧ ಭಾಗಗಳಿಂದ ಕಾಣಿಕೆ ಸಹಿತ ಜನರು ಒಂದಾಗಿ ಉರೂಸ್‌ಗಾಗಿ ಮಸೀದಿ ಅಂಗಣಕ್ಕೆ ತಲುಪುತ್ತಾರೆ. ಅವರನ್ನು ಉರೂಸ್ ಸಮಿತಿ ಪದಾಧಿಕಾರಿಗಳು ಸ್ವಾಗತಿಸುತ್ತಿದ್ದಾರೆ. ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿದ ಮಸೀದಿ ಸಮಿತಿ ಪದಾಧಿಕಾರಿಗಳಾದ ಹಾದಿ ತಂಙಳ್, ಬಿ.ಎನ್. ಮೊಹಮ್ಮದಲಿ, ಇಬ್ರಾಹಿಂ …

ಕೊಲೆಗೀಡಾದ ಬಿ.ಕೆ. ಸುರೇಶ್‌ರಿಗೆ  ನಾಡಿನ ಅಂತಿಮ ನಮನ

ಮಾರ್ಪನಡ್ಕ: ಕುಂಬ್ಡಾಜೆ ಬೆದ್ರಕೂಡ್ಲು ನಿವಾಸಿ, ಎಸ್‌ಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ, ಎಸ್‌ಸಿ ಮೋರ್ಚಾ ಬದಿಯಡ್ಕ ಮಂಡಲ ಮಾಜಿ ಅಧ್ಯಕ್ಷ ಬಿ.ಕೆ. ಸುರೇಶ್‌ರಿಗೆ ಭಾರೀ ಜನಸಂದಣಿಯ ಮೂಲಕ ಬಿಜೆಪಿ ಜಿಲ್ಲಾ ಸಮಿತಿ ಅಂತಿಮ ನಮನ ಸಲ್ಲಿಸಿದೆ. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್, ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರ, ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ …

ಸಮಾಂತರ ಲಾಟರಿ ವಂಚನೆ ತಂಡದ ಮೂವರ ಬಂಧನ

ಕುಂಬಳೆ: ಕುಂಬಳೆ, ಬಂದ್ಯೋಡು ಮೊದಲಾದೆಡೆಗಳನ್ನು ಕೇಂದ್ರೀಕರಿಸಿ ಭಾರೀ ಪ್ರಮಾಣದಲ್ಲಿ ಸಮಾಂತರ ಲಾಟರಿ ವ್ಯಾಪಾರ ನಡೆಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂದ್ಯೋಡಿನ ಮಂಜುನಾಥ, ಪುತ್ರ ಕಿಶನ್ ಕುಮಾರ್, ಕುಂಬಳೆ ಕೊಯಪ್ಪಾಡಿ ಶಾಂತಿಪಳ್ಳದ ಸರಣ್ ಕುಮಾರ್ ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ ಸಮಾಂತರ ಲಾಟರಿಯ ನಂಬ್ರಗಳನ್ನು ಬರೆದ ಕಾಗದಗಳು, ಅವುಗಳನ್ನು ಮಾರಾಟಗೈದು ಲಭಿಸಿದ ೬೨೮೦ ರೂಪಾಯಿ, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಸಮಾಂತರ ಲಾಟರಿ ಮಾರಾಟಗಾರರ ಹೆಸರುಗಳು, ಅವರು ತೆಗೆದ ಸಮಾಂತರ ಲಾಟರಿ …

ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಯುವಕ ಮೃತ್ಯು: ಇಬ್ಬರಿಗೆ ಗಂಭೀರ

ಕುಂಬಳೆ: ಕುಂಬಳೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಪಘಾv ದಲ್ಲಿ ಇಬ್ಬರು ಗಂಭೀರ ಗಾಯಗೊಂ ಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಪಡುಬಿದ್ರೆ ಬಂಗರೆ ರಸ್ತೆಯ ಅಬ್ದುಲ್ ರಹೀಂರ ಪುತ್ರ ಮುಹಮ್ಮದ್ ರಾಹಿಲ್ (24) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಉಪ್ಪಳ ಬಪ್ಪಾಯಿತೊಟ್ಟಿಯ ಅಬ್ದುಲ್ ಜಸೀರ್, ಉಪ್ಪಳ ಕುರ್ಚಿಪಳ್ಳದ ಮುಹಮ್ಮದ್ ರೈಸ್ ಎಂಬಿವರು ಗಾಯಗೊಂಡವರಾಗಿದ್ದಾರೆ. ನಿನ್ನೆ ಮುಂಜಾನೆ ಒಂದು ಗಂಟೆ ವೇಳೆ ಅಪಘಾತವುಂಟಾಗಿದೆ. ಮುಹಮ್ಮದ್ …

ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರನನ್ನು ಇರಿದು ಕೊಲೆ: ಇಬ್ಬರ ವಿರುದ್ಧ ಕೇಸು

ಬದಿಯಡ್ಕ: ಬ್ಯಾಂಕ್‌ನ ಕಾವಲುಗಾರನಾದ ಯುವಕನನ್ನು ಇರಿದು ಕೊಲೆಗೈದ ಘಟನೆ ಮಾರ್ಪನಡ್ಕದಲ್ಲಿ ನಡೆದಿದೆ. ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸೆಕ್ಯುರಿಟಿ ನೌಕರನೂ, ಮಾರ್ಪನಡ್ಕ ಬೆದ್ರಂಕೂಡ್ಲು ನಿವಾಸಿ ಸುರೇಶ್ (42) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ 9.25ರ ವೇಳೆ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸಮೀಪ ಈ ಕೊಲೆಕೃತ್ಯ ನಡೆದಿದೆ. ಘಟನೆಗೆ ಸಂಬಂಧಿಸಿ ಮಾರ್ಪನಡ್ಕದ ಕಿರಣ್, ಅಖಿಲೇಶ್ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ವೇಳೆ …

ಸ್ನೇಹಿತೆಯ ಮದುವೆಗೆ ತೆರಳಿದ ಯುವತಿ ಮರಳಿ ಬಂದಿಲ್ಲ: ತಾಯಿಯಿಂದ ದೂರು

ಸೀತಾಂಗೋಳಿ: ಸ್ನೇಹಿತೆಯ ಮದುವೆಗೆ ಹೋದ ಯುವತಿ ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೀತಾಂಗೋಳಿ ಪೆರ್ಣೆ ಎಡನಾಡಿನ ಕರುಣಾಕರರ ಪತ್ನಿ ವನಿತ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಈ ತಿಂಗಳ 6ರಂದು ಮಧ್ಯಾಹ್ನ 1 ಗಂಟೆಗೆ ಸ್ನೇಹಿತೆಯ ಮದುವೆಗೆಂದು ತಿಳಿಸಿ ಪುತ್ರಿ ಕಾವ್ಯ (19) ಮನೆಯಿಂದ ತೆರಳಿದ್ದಳು. ಆದರೆ ಮದುವೆ ಕಳೆದು 10 ದಿನಗಳಾದರೂ ಪುತ್ರಿ ಮರಳಿ ಬಂದಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹೊಸ ಸಚಿವಸಂಪುಟ ಜಿಲ್ಲೆಯ ಪಾಲಿಗೆ ನಿರಾಶೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಆರು ದಶಕಗಳ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಎಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಜಿಲ್ಲೆಯ ಪಾಲಿಗೆ ನಿರಾಶೆಯಷ್ಟೇ ಉಳಿದಿದೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಮತ್ತೊಮ್ಮೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯ ಬಗ್ಗೆ ವಿ.ಡಿ ಸತೀಶನ್ ಅವರ ಸರಕಾರದ ಧೋರಣೆ ಏನಿರಲಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಸಚಿವರನ್ನು ಆಯ್ಕೆ ಮಾಡುವುದು ಯುಡಿಎಫ್‌ನ ಆಂತರಿಕ ವಿಷಯವಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳನ್ನು ಸಚಿವ …

20 ಸಚಿವರೊಂದಿಗೆ ವಿ.ಡಿ.ಎಸ್ ಅಧಿಕಾರ ಸ್ವೀಕಾರ

ತಿರುವನಂತಪುರ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ವಿ.ಡಿ. ಸತೀಶನ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ  ಇಂದು ಬೆಳಿಗ್ಗೆ ನಡೆದ ಬೃಹತ್ ಜನಸ್ತೋಮ ನೆರೆದ  ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮುಖ್ಯಮಂತ್ರಿಯಾಗಿ  ವಿ.ಡಿ.ಸತೀಶನ್‌ರಿಗೆ ಪ್ರಮಾಣವಚನ ಬೋಧಿಸಿದರು. ವಿ.ಡಿ.ಸತೀಶನ್ ಜೊತೆಗೆ ಅವರ ನೇತೃತ್ವದ ಸಚಿವ ಸಂಪುಟದ ೨೦ ಮಂದಿ ಸದಸ್ಯರು ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದ ಬಳಿಕ  ಮುಸ್ಲಿಂ ಲೀಗ್ ನೇತಾರ ಪಿ.ಕೆ ಕುಂಞಾಲಿಕುಟ್ಟಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. …