ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಖಾಸಗಿ ಬಸ್ ಮಾಲಕರ ಸಭೆ ಇಂದು

ತೃಶೂರು: ಕೆಎಸ್‌ಆರ್‌ಟಿಸಿ ಆರ್ಡಿನರಿ ಬಸ್‌ಗಳಲ್ಲಿ ಮಹಿಳೆ ಯರಿಗೆ ಉಚಿತ ಪ್ರಯಾಣ ಮಂಜೂರು ಮಾಡಿದ ಸರಕಾರದ ನಿರ್ಧಾರದ ವಿರುದ್ಧ ಖಾಸಗಿ ಬಸ್ ಮಾಲಕರ ರಾಜ್ಯ ಮಟ್ಟದ ಸಭೆ ಇಂದು ತೃಶೂರ್‌ನಲ್ಲಿ ನಡೆಯಲಿದೆ. ಉಚಿತ ಪ್ರಯಾಣ ಆರಂಭಿಸು ವುದರೊಂದಿಗೆ ಖಾಸಗಿ ಬಸ್ ಮಾಲಕರು ಭಾರೀ ಸಂದಿಗ್ಧತೆ ಯಲ್ಲಿದ್ದಾರೆ. ನಿನ್ನೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಕಡಿಮೆಯಾಗಿರುವುದಾಗಿ ಹೇಳಲಾಗುತ್ತಿದೆ. ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಪ್ರಯಾಣಿಸುತ್ತಿರುವುದು ಖಾಸಗಿ ಬಸ್ ವಲಯಕ್ಕೆ ಭಾರೀ ಹೊಡೆತ ನೀಡಿದೆ ಎಂದು ಮಾಲಕರು ತಿಳಿಸುತ್ತಿದ್ದಾರೆ. ಇಂದು ನಡೆಯುವ …

ವಿಮಾನ ನಿಲ್ದಾಣದಲ್ಲಿ ಪರಿಚಯಗೊಂಡ ಗೃಹಿಣಿಗೆ ಅತ್ಯಾಚಾರ: ಯುವಕನ ವಿರುದ್ಧ ಕೇಸು ದಾಖಲು

ಕಾಸರಗೋಡು: ದುಬಾ ಗಿರುವ ಪ್ರಯಾಣ ಮಧ್ಯೆ ವಿಮಾನ ನಿಲ್ದಾಣದಲ್ಲಿ ಪರಿಚಯಗೊಂಡ ಗೃಹಿಣಿಯೊಂದಿಗೆ ಸ್ನೇಹ ನಟಿಸಿ ಬಳಿಕ ಆಕೆಗೆ ಅತ್ಯಾಚಾರ ಗೈದು ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕಾಸರಗೋಡು ಮಹಿಳಾ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 32ರ ಹರಯದ ಗೃಹಿಣಿ ನೀಡಿದ ದೂರಿನಂತೆ ಮಲಪ್ಪುರಂ ನಿವಾಸಿಯಾದ ಸೈಫುದ್ದೀನ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪತಿಯೊಂದಿಗೆ ದುಬಾಯಿಗೆ  ತೆರಳುತ್ತಿರುವ ಮಧ್ಯೆ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ  ಗೃಹಿಣಿಯನ್ನು ಸೈಫುದ್ದೀನ್ ಪರಿಚಯಗೊಂಡಿದ್ದನು. ಅನಂತರ ಅವರಿಬ್ಬರು  ಸೌಹಾದತೆ ಯಲ್ಲಿದ್ದರು. ಈ ಮಧ್ಯೆ ಗೃಹಿಣಿಗೆ …

16ರ ಬಾಲಕಿ ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: 16ರ ಹರೆಯದ ಬಾಲಕಿಯ ಮೃತದೇಹ  ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ. ತಲಪಾಡಿ ಸೋಮೇಶ್ವರದ ಶಾಂತಿ ಎಂಬವರ ಪುತ್ರಿ ಸಮನ್ವಿ ಮೃತಪಟ್ಟ ಬಾಲಕಿ. ನಿನ್ನೆ ಸಂಜೆ ಘಟನೆ ನಡೆದಿದೆ. ತಾಯಿ ಹಾಗೂ ಹಿರಿಯ ಸಹೋದರಿ ಮನೆಯಲ್ಲಿದ್ದ ವೇಳೆಯೇ ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ. ಸ್ನಾನಕ್ಕೆ ತೆರಳುವುದಾಗಿ ಮನೆಯವರಲ್ಲಿ ತಿಳಿಸಿ ಹೋದ ಬಾಲಕಿ ತುಂಬ ಸಮಯ ಕಳೆದರೂ ಬಾರದ ಹಿನ್ನೆಲೆಯಲ್ಲಿ ಶಂಕೆ ತೋರಿದ ಮನೆಮಂದಿ ಬಾಗಿಲನ್ನು ಮುರಿದು ಒಳನುಗ್ಗಿ ನೋಡಿದಾಗ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಳ್ಳಾಲ …

ಹೊಸಂಗಡಿ ಲಾಡ್ಜ್‌ಗೆ ಪೊಲೀಸ್ ದಾಳಿ: ಎಂಡಿಎಂಎ, ಗಾಂಜಾ ಸಹಿತ ಇಬ್ಬರ ಸೆರೆ

ಉಪ್ಪಳ: ಹೊಸಂಗಡಿಯ ಲಾಡ್ಜ್‌ವೊಂದರಿಂದ ಮಂಜೇಶ್ವರ ಪೊಲೀಸರು ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಮಚ್ಚಂಪಾಡಿ ಪಳ್ಳ ಗುಡ್ಡೆ ಹೌಸ್‌ನ ಅಹಮ್ಮದ್ ಸೈಫುದ್ದೀನ್ (21), ಹೊಸಬೆಟ್ಟು ಗುಡ್ಡೆಕೇರಿ ನಿವಾಸಿ ಮುಹಮ್ಮದ್ ಮುಶ್ತಾಕ್ (36) ಎಂಬಿವರನ್ನು ಮಂಜೇಶ್ವರ ಎಸ್‌ಐ ಉಮೇಶ್ ಕೆ.ಆರ್. ನೇತೃ ತ್ವದ ಪೊಲೀಸ್ ತಂಡ ಬಂಧಿಸಿದೆ. ಲಾಡ್ಜ್ ಕೊಠಡಿಯ ಹಾಸಿಗೆಯಲ್ಲಿ ತಲೆದಿಂಬಿನ ಅಡಿ ಭಾಗದಲ್ಲಿ ಬಚ್ಚಿಟ್ಟಿದ್ದ 1.61 ಗ್ರಾಂ ಎಂಡಿಎಂಎ ಹಾಗೂ 38.33 ಗ್ರಾಂ  ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಪ್ತ ಮಾಹಿತಿ ಲಭಿಸಿದ …

ಮಾಜಿ ಸಂಸದ ಎಂ. ರಾಮಣ್ಣ ರೈ ಸಹೋದರಿ ನಿಧನ

ಕಾಸರಗೋಡು: ಕಾಸರಗೋಡಿನ ಮಾಜಿ ಸಂಸದ ಎಂ. ರಾಮಣ್ಣ ರೈಯವರ ಸಹೋದರಿ, ಕುಂಬ್ಡಾಜೆ ಪಂಚಾಯತ್‌ನ ಮಾಜಿ ಸದಸ್ಯೆ, ಪುತ್ರಕಳದ ದಿ| ರಾಘವ ರೈಯವರ ಪತ್ನಿ ಇಂದಿರಾ ರೈ ಮಾಯಿಪ್ಪಾಡಿ ಗುತ್ತು (83) ಇಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಮಕ್ಕಳಾದ  ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‌ನ ನಿವೃತ್ತ ಮೆನೇಜರ್ ಎಂ. ಅಶೋಕ ರೈ, ಸಂತೋಷ್ ರೈ, ಜಯಶ್ರೀ ಆಳ್ವ, ಅಳಿಯ ಸುರೇಂದ್ರ ಆಳ್ವ ಬಾಲುಶ್ಶೇರಿ, ಸೊಸೆಯಂದಿರಾದ …

ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಾಣ ಧನಸಹಾಯ 6 ಲಕ್ಷಕ್ಕೇರಿಸಬೇಕೆಂದು ಒತ್ತಾಯಿಸಿ ಸಚಿವರಿಗೆ ಮನವಿ

ಬದಿಯಡ್ಕ: ರಾಜ್ಯದಲ್ಲಿ  ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಧನ ಸಹಾಯವನ್ನು 6 ಲಕ್ಷ ರೂಪಾಯಿಗೆ ಏರಿಸಬೇಕೆಂದು ಒತ್ತಾಯಿಸಿ ಬದಿಯಡ್ಕ ಪಂಚಾಯತ್ ಸದಸ್ಯ ಗಂಗಾಧರ ಗೋಳಿಯಡ್ಕ ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾರ್ಯಕ್ರಮ ನಿಮಿತ್ತ ಸಚಿವರು ನಿನ್ನೆ ಕಿಳಿಂಗಾರಿನ ಸಾಯಿ ಮಂದಿರಕ್ಕೆ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಾಣಕ್ಕೆ ಕೇವಲ 4 ಲಕ್ಷ ರೂಪಾಯಿ ಸರಕಾರ ನೀಡುತ್ತಿದೆ. ಆ ಮೊತ್ತದಿಂದ ಮನೆ …

ಮುನ್ನೂರ್: ಚಿಕಿತ್ಸಾ ಧನ ಸಹಾಯ ವಿತರಣೆ

ಪೆರ್ಮುದೆ:  ಸೀತಾಂಗೋಳಿಯ ಎಯ್ಯೂರ್‌ನ ರಾಜೇಶ್ ಕುಲಾಲರ ಪತ್ನಿ ರುಕ್ಮಿಣಿಯವರಿಗೆ ಚಿಕಿತ್ಸಾ ಧನ ಸಹಾಯವಾಗಿ ಮುನ್ನೂರ್ ಸಾಲಿಯಾನ್ ಕುಟುಂಬಸ್ಥರು ಮತ್ತು ಸಮಿತಿ ಸದಸ್ಯರು ಸಂಗ್ರಹಿಸಿದ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಮುನ್ನೂರ್ ತರವಾಡಿನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಮ್ಮು ಮಾಸ್ತರ್ ಕೋರಿಕ್ಕಾರ್ ಧನ ಸಹಾಯ ಹಸ್ತಾಂತರಿಸಿದರು. ರುಕ್ಮಿಣಿ ಕುಂಬಳೆಯ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ದೈವಸ್ಥಾನ ಮೂಲ್ಯಣ್ಣ, ಚಂದ್ರಹಾಸ ಮಲೆರಿಕೆ, ಈಶ್ವರ ಮೂಲ್ಯ, ಆಡಳಿತ ಸಮಿತಿ ಅಧ್ಯಕ್ಷ ರಾಮ ಮೂಲ್ಯ, ನವೀನ್ ಕಾಶಿ, ಪದ್ಮನಾಭ ಮಂಚಿ, ಅಮ್ಮು ಮೂಲ್ಯ …

ಪೆರಡಾಲ ಬ್ಯಾಂಕ್ ಬದಿಯಡ್ಕ ಶಾಖೆ ನೂತನ ಕಟ್ಟಡಕ್ಕೆ 17ರಂದು ಸ್ಥಳಾಂತರ

ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಬದಿಯಡ್ಕ ಶಾಖೆ ಬದಿಯಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶಾಸ್ತ್ರೀಸ್ ಕಾಂಪ್ಲೆಕ್ಸ್ ಕಟ್ಟಡಕ್ಕೆ ನಾಳೆ (ಈ ತಿಂಗಳ 17ರಂದು) ಸ್ಥಳಾಂತರಗೊಳ್ಳಲಿದೆ. ಅಂದು ಬೆಳಿಗ್ಗೆ ೮.೪೫ಕ್ಕೆ ನಡೆಯುವ ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸುವರು. ಬ್ಯಾಂಕ್‌ನ ಅಧ್ಯಕ್ಷ ಕೆ. ಗಣಪತಿ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಸಹಕಾರಿ ಇಲಾಖೆ ಅಸಿಸ್ಟೆಂಟ್ ರಿಜಿಸ್ಟ್ರಾರ್ ವಿನೋದ್ ಕುಮಾರ್ ಸಿ. ಸೇಫ್ ಲಾಕರ್ ಉದ್ಘಾಟಿಸುವರು. ಹಲವರು ಉಪಸ್ಥಿತರಿರುವರು. 

ಎಲ್ಲಾ ರೈತರಿಗೆ ಉಚಿತ ವಿದ್ಯುತ್ ನೀಡಲು  ಕಲ್ಲಗ ಚಂದ್ರಶೇಖರ ರಾವ್ ಸಚಿವರಿಗೆ ಮನವಿ

ಬೆಳ್ಳೂರು: ಕೇರಳದಲ್ಲಿ ಕೃಷಿ ನೀರಾವರಿ ಉದ್ದೇಶಗಳಿಗಾಗಿ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವಂತೆ ಆಗ್ರಹಿಸಿ ವಿದ್ಯುತ್ ಇಲಾಖೆ ಸಚಿವ ಸನ್ನಿ ಜೋಸೆಫ್‌ರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲ್ಲಗ ಚಂದ್ರಶೇಖರ್ ರಾವ್ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಅಡಕೆ ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ ಈ ಮನವಿ ಸಲ್ಲಿಸಲಾಗಿದೆ. ಈಗ ಕೇರಳದಲ್ಲಿ ೫ ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರವೇ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಹೆಚ್ಚು ಭೂಮಿ ಹೊಂದಿರುವ ಹಿಡುವಳಿಧಾರರಿಗೂ ವಿಸ್ತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕದಲ್ಲಿ …

ಚಿಲ್ಲರೆ ಡೀಸೆಲ್ ಮಾರಾಟ ನಿಯಂತ್ರಣ ಹಿಂತೆಗೆಯಬೇಕು-ಕೇರಳ ವ್ಯಾಪಾರಿ ವ್ಯವಸಾಯಿ  ಏಕೋಪನ ಸಮಿತಿ

ಕಾಸರಗೋಡು: ಕೈಗಾರಿಕಾ ಸಂಸ್ಥೆಗಳಿಗೆ ಚಿಲ್ಲರೆ ಮಾರಾಟ ಮಾಡುವ ಪೆಟ್ರೋಲ್ ಬಂಕ್‌ಗಳಿಂದ ನೇರವಾಗಿ ಡೀಸೆಲ್, ಪೆಟ್ರೋಲ್ 2026 ಜೂನ್ 11ರಿಂದ ಖರೀದಿಸಬಾರದು ಎಂಬ ಆದೇಶದಿಂದಾಗಿ ವ್ಯಾಪಾರಿ, ಕೈಗಾರಿಕೆಗಳು ಸಂದಿಗ್ಧತೆಯಲ್ಲಿದೆಯೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಆರೋಪಿಸಿದೆ. ವಿದ್ಯುತ್ ಮೊಟಕು ಎದುರಿಸುವಾಗ ಸಂಸ್ಥೆಗಳಲ್ಲಿ ಜನರೇಟರ್‌ಗಳನ್ನು ಕಾರ್ಯಾಚರಿಸುವಂತೆ ಮಾಡಬೇಕಾಗುತ್ತದೆ. ಮೇಲಿನ ಆದೇಶದಿಂದ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ಅಥವಾ ಡೀಸೆಲ್ ಲಭಿಸುವುದಿಲ್ಲ. ಆಸ್ಪತ್ರೆ ಸಹಿತದ ವ್ಯಾಪಾರ, ವಾಣಿಜ್ಯ ಸಂಸ್ಥೆಗಳು ಈ ಆದೇಶದಿಂದ ಬಹಳ ಸಂಕಷ್ಟದಲ್ಲಿವೆ. ವಿದ್ಯುತ್ ಮೊಟಕಾದಾಗ ಹೋಟೆಲ್‌ಗಳು, ಐಸ್‌ಕ್ರೀಂ, ಮೀನು, …