ಪೊಸೋಟು ಹೆದ್ದಾರಿಯಲ್ಲಿ ಕರ್ನಾಟಕ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ: ಹಲವರಿಗೆ ಗಾಯ

ಮಂಜೇಶ್ವರ: ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಚಾಲಕ ಸಹಿತ ಹಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಬಸ್ ರಾಷ್ಟಿಯ ಹೆದ್ದಾರಿ ಪೊಸೋಟು ಜಂಕ್ಷನ್‌ನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ಇನ್ನೊಂದು ಭಾಗದ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಈ ಅಪಘಾತದಲ್ಲಿ ಚಾಲಕ ಹಾಗೂ ಮಹಿಳೆಯರು ಸೇರಿದಂತೆ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂ ಡಿದ್ದು, …

ಪಳ್ಳತ್ತಡ್ಕ ಶಾಲೆ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಖಂಡನೀಯ ಶಿಕ್ಷಕ ನಡೆಸುವ ಹೋರಾಟಕ್ಕೆ ಪೂರ್ಣ ಬೆಂಬಲ-ಕೆ.ಸುರೇಂದ್ರನ್

ಕಾಸರಗೋಡು: ಫ್ರೀಡಂ ಕ್ವಿಜ್ ಹೆಸರಿನಲ್ಲಿ ಪಳ್ಳತ್ತಡ್ಕ ಎಯುಪಿ ಶಾಲೆಯ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಅತ್ಯಂತ ಖಂಡನೀಯವಾಗಿ ದೆಯೆಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ತಿಳಿಸಿದ್ದಾರೆ.  ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂ ಧಿಸಿ ಸುಧೀರ್ಘಕಾಲ ಜೈಲುಶಿಕ್ಷೆ ಅನುಭ ವಿಸಿದ್ದು, ವಿ.ಡಿ. ಸಾವರ್ಕರ್ ಅವರಾಗಿದ್ದಾ ರೆಂಬುವುದು  ಐತಿಹಾಸಿಕ ಸತ್ಯವಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲವೆಂದು ಇದುವರೆಗೆ ಯಾರೂ ಹೇಳಿಲ್ಲ. ಅವರು ಸುಧೀರ್ಘ ಕಾಲ ಜೈಲಿನಲ್ಲಿದ್ದರೆಂಬ ವಿಷಯವನ್ನೂ ಯಾರೂ ನಿರಾಕರಿಸುವು ದಿಲ್ಲ. ಅವರ   ವಿರುದ್ಧ ಕಾಂಗ್ರೆಸ್ ಮತ್ತು ಎಡ-ಜಿಹಾದಿ ಪಡೆಗಳು ಹೊರಿಸಿದ …

ಏಳರ ಹರೆಯದ ಬಾಲಕನ ಅಪಹರಣ ಯತ್ನ: ಕಾರಿನಲ್ಲಿ ತಲುಪಿದ ಇಬ್ಬರ ಪತ್ತೆಗಾಗಿ ಶೋಧ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಏಳರ ಹರೆಯದ ಬಾಲಕನನ್ನು ಕಾರಿನಲ್ಲಿ ಅಪಹರಿಸಲೆತ್ನಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಂಗವಾಗಿ ಘಟನೆ ನಡೆದ ಸ್ಥಳದ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾದ  ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಭಾಸ್ಕರನಗರದ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುವ ಉತ್ತರಭಾರತದ ಕುಟುಂಬವೊಂದರ ಬಾಲಕನನ್ನು ಅಪಹರಿಸಲು ಯತ್ನ ನಡೆದಿದೆ. ಘಟನೆ ಬಗ್ಗೆ ಪೊಲೀಸರಿಗೆ ಲಭಿಸಿದ ದೂರಿನಲ್ಲಿ ಈ ರೀತಿ ತಿಳಿಸಲಾಗಿದೆ-“ನಿನ್ನೆ ಮಧ್ಯಾಹ್ನ 12.30ರ ವೇಳೆ …

ಶ್ರೀಗಂಧ ಮರ ಕಡಿದು ಸಾಗಿಸಲೆತ್ನಿಸಿದ ವ್ಯಕ್ತಿ ಸೆರೆ

ಮುಳ್ಳೇರಿಯ: ಕಾರಡ್ಕ ಮೂಡಾಂಗುಳಂನ ಜನವಾಸವಿಲ್ಲದ ಹಿತ್ತಿಲಿನಿಂದ ಶ್ರೀಗಂಧ ಮರವನ್ನು ಕಡಿದು ಮಾರಾಟ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಗಂಟೆಗಳೊಳಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮುಳ್ಳೇರಿಯ  ನಿವಾಸಿ ಕೆ.ಎಂ. ಅಶೋಕ್ (56)ನನ್ನು ಕಾರಡ್ಕ ಸೆಕ್ಷನ್ ಆಫೀಸರ್ ಕೆ.ಎ. ಬಾಬು ಹಾಗೂ ತಂಡ ಬಂಧಿಸಿದೆ. ಈತನಿಂದ ಸವರಿ ಸಿದ್ಧಗೊಳಿಸಿದ್ದ ಎರಡು ಕಿಲೋ ಶ್ರೀಗಂಧ ಹಾಗೂ ತುಂಡರಿಸಲು ಉಪಯೋಗಿಸಿದ ಹ್ಯಾಕ್ಸೋ ಬ್ಲೇಡ್, ಕತ್ತಿಯನ್ನು ವಶಪಡಿಸಲಾಗಿದೆ. ಶ್ರೀಗಂಧವನ್ನು ಮಾರಾಟ ಮಾಡಲೆಂದು ಕೊಂಡುಹೋಗಲು ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ …

ಕಾರಿನಲ್ಲಿ ತ್ಯಾಜ್ಯ ತಂದು ರಸ್ತೆ ಬದಿ ಉಪೇಕ್ಷೆ

ಕುಂಬಳೆ:   ಗೋಣಿ ಚೀಲಗಳಲ್ಲಿ ತುಂಬಿಸಿದ್ದ ತ್ಯಾಜ್ಯವನ್ನು ಕಾರಿನಲ್ಲಿ ತಂದು ರಸ್ತೆಬದಿ ಎಸೆಯುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಪಂಚಾಯತ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.  ನಿನ್ನೆ ಬೆಳಿಗ್ಗೆ ನಾಯ್ಕಾಪಿನಲ್ಲಿ ತ್ಯಾಜ್ಯ ಎಸೆಯಲಾಗಿದೆ. ಕಾರಿನಲ್ಲಿ ಬಂದ ವ್ಯಕ್ತಿ ರಸ್ತೆ ಬದಿ ಕಾರು ನಿಲ್ಲಿಸಿ  ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ತ್ಯಾಜ್ಯವನ್ನು ರಸ್ತೆ ಬದಿ ಎಸೆದಿದ್ದಾನೆ. ಈ ದೃಶ್ಯ   ಈ ಪರಿಸರದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ನಾಗರಿಕರು ಸಂಗ್ರಹಿಸಿ ಪಂಚಾಯತ್ ಅಧಿಕಾರಿಗಳಿಗೆ ನೀಡಿದ್ದಾರೆ. ಇದರಂತೆ ಪಂಚಾಯತ್ …

ಓಣಂ ಸ್ಪೆಷಲ್ ಡ್ರೈವ್: ಸ್ಕೂಟರ್‌ನಲ್ಲಿ ಕರ್ನಾಟಕ ಮದ್ಯ ಸಾಗಾಟ; ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಮಾರ್ಕೆಟ್ ಜಂಕ್ಷನ್‌ನಲ್ಲಿ ಕರ್ನಾಟಕ ಮದ್ಯ ಮಾರಾಟಗೈಯ್ಯಲು ಸ್ಕೂಟರ್‌ನಲ್ಲಿ ತಲುಪಿದ ಯುವಕ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಗುಡ್ಡೆಕೇರಿ ನಿವಾಸಿ ನಿತಿನ್ (30) ಸೆರೆಗೀಡಾದ ವ್ಯಕ್ತಿ. ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ನಿನ್ನೆ ಕುಂಬಳೆ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಎಯ ಬಿ.ಅಬ್ದುಲ್ಲ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಯುವಕ ಸೆರೆಗೀಡಾಗಿದ್ದಾನೆ. ಸ್ಕೂಟರ್ ಕಸ್ಟಡಿಗೆ ತೆಗೆಯಲಾಗಿದೆ. ಸ್ಕೂಟರ್‌ನಿಂದ ೮.೬೪ ಲೀಟರ್  ಕರ್ನಾಟಕ ನಿರ್ಮಿ ತ ಮದ್ಯ ವಶಪಡಿಸಲಾಗಿದೆ. ಆರೋಪಿ,  ಮದ್ಯ ಹಾಗೂ ಸ್ಕೂಟರ್ ಕುಂಬಳೆ  ರೇಂಜ್ ಅಬಕಾರಿ …

ಕಟ್ಟಡಕ್ಕೆ ನಂಬ್ರ ಲಭಿಸಲು ನಕಲಿ ದಾಖಲೆ ತಯಾರಿ: ಓರ್ವನ ವಿರುದ್ಧ ಕೇಸು

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಿಂದ ಕಟ್ಟಡ ನಂಬ್ರ ಲಭಿಸಲು ವರ್ಗಾವಣೆಗೊಂಡ ಪಂಚಾಯತ್ ಕಾರ್ಯದರ್ಶಿಯ ಹೆಸರಲ್ಲಿ ನಕಲಿ ಪ್ರಮಾಣಪತ್ರ ಹಾಗೂ ನಕಲಿ ಹಣ ಪಾವತಿಸಿದ ರಶೀದಿ ತಯಾರಿಸಿದ ಆರೋಪದಂತೆ  ಓರ್ವನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪಂಚಾಯತ್ ಮಾಜಿ ಕಾರ್ಯದರ್ಶಿ ಕೋಟ್ಟಯಂ ನಿವಾಸಿಯಾದ ಸಿದ್ದಾರ್ಥನ್ ನೀಡಿದ ದೂರಿನಂತೆ ಕೊಡ್ಯಮ್ಮೆ ಪೂಕಟ್ಟೆಯ ಫಾರೂಕ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಜನವರಿ 14ರಂದು ಈ ಘಟನೆ ನಡೆದಿದೆ. ಫಾರೂಕ್‌ನ ಮಾಲಕತ್ವದಲ್ಲಿರುವ ಉಳ್ವಾರ್ ಎಂಬಲ್ಲಿನ ಕಟ್ಟಡಕ್ಕೆ ನಂಬ್ರ ಲಭಿಸಲು  …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಪುತ್ತಿಗೆ: ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಬಡಗಿಯಾಗಿದ್ದ ಪುತ್ತಿಗೆ ನಾಗೇಶ್ ಆಚಾರ್ಯ (65) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲಸದ ಮಧ್ಯೆ ತಲೆಸುತ್ತಿ ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್‌ಎಸ್‌ಎಸ್ ಪುತ್ತಿಗೆ ಶಾಖಾ ಮುಖ್ಯ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತನಾಗಿದ್ದ ಇವರ ಓರ್ವ ಪುತ್ರ ಪ್ರವೀಣ್  ಈ ಹಿಂದೆ ನಿಧನ ಹೊಂದಿದ್ದಾರೆ. ಇನ್ನೋರ್ವ ಪುತ್ರ ಕಳೆದ ದೀಪಾವಳಿ ಸಂದರ್ಭದಲ್ಲಿ ದೀಪಾಲಂಕಾರ ಮಧ್ಯೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದರು. ಮೃತರು ಪತ್ನಿ ಹೇಮಲತ, ಪುತ್ರ ಕಿರಣ್ …

ತಾಯಿ, ಮಗಳ ಮನೆಗಳಿಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಕಳವು

ಬದಿಯಡ್ಕ: ಒಂದೇ ಹಿತ್ತಿಲಿನಲ್ಲಿರುವ ತಾಯಿ ಹಾಗೂ ಮಗಳ ಮನೆಗಳಿಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ್ದಾರೆ.  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ಲಡ್ಕದಲ್ಲಿರುವ ಮನೆಗಳಿಂದ ಕಳವು ನಡೆದಿದೆ. ಚರ್ಲಡ್ಕದ ಮರಿಯಮ್ಮ ಹಾಗೂ ಅವರ ಪುತ್ರಿ ಆಯಿಶಾನ ಎಂಬಿವರ ಮನೆಗಳಿಗೆ ಕಳ್ಳರು ನುಗ್ಗಿದ್ದು ಒಟ್ಟು 7 ಪವನ್ ಚಿನ್ನಾಭರಣ ಕಳವಿಗೀಡಾಗಿ ರುವುದಾಗಿ ಸೂಚನೆಯಿದೆ. ಈ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಸಂಜೆ ಮರಳಿ ಬಂದಾಗಲೇ ಮನೆಗೆ ಕಳ್ಳರು ನುಗ್ಗಿದ …

ವ್ಯಕ್ತಿಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟ: ತಲೆಮರೆಸಿಕೊಂಡ ಆರೋಪಿ 19 ವರ್ಷಗಳ ಬಳಿಕ ಸೆರೆ

ಕಾಸರಗೋಡು: ವ್ಯಕ್ತಿ ಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ  ವಾಹನ ಮಾರಾಟಗೈದ ಪ್ರಕರಣದಲ್ಲಿ  ತಲೆಮರೆಸಿಕೊಂಡ ಆರೋಪಿ 16 ವರ್ಷಗಳ ಬಳಿಕ ಸೆರೆಗೀಡಾಗಿದ್ದಾನೆ.  ಕರ್ನಾಟಕದ ಮುಲ್ಕಿ ಹಳೆಯಂಗಡಿ ಚಂದ್ರಮೌಳೀಶ್ವರ ಕ್ಷೇತ್ರ ಸಮೀಪದ ಗಣೇಶ್ ಶೆಟ್ಟಿ (50) ಎಂಬಾತನನ್ನು ಕಣ್ಣೂರು, ಕಾಸರಗೋಡು ರೇಂಜ್ ಕ್ರೈಂ ಬ್ರಾಂಚ್ ಎಸ್ಪಿ ಕೆ.ವಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್ಪಿ ಟಿ. ಮಧುಸೂದನನ್ ಬಂಧಿಸಿದ್ದಾರೆ. ೨೦೦೨ರಲ್ಲಿ  ಮಂಜೇಶ್ವರ ಪೊಲೀಸರು ಗಣೇಶ್ ಶೆಟ್ಟಿಯನ್ನು ಆರೋಪಿಯಾಗಿಸಿ   ಕೇಸು ದಾಖಲಿ ಸಿಕೊಂಡಿದ್ದರು. ಕ್ವಾಲಿಸ್ ವಾಹನವನ್ನು ನಕಲಿ …