ವಿದ್ಯುತ್ ಕಡಿತ: ಡಿವೈಎಫ್‌ಐಯಿಂದ ಉಪ್ಪಳದಲ್ಲಿ ಪ್ರತಿಭಟನೆ

ಉಪ್ಪಳ: ವಿದ್ಯುತ್ ಕಡಿತ ದಿನವೂ  ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಜನವಿರೋಧಿ ನೀತಿ ವಿರುದ್ಧ ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ನಿನ್ನೆ ಉಪ್ಪಳ ಕೆಎಸ್‌ಇಬಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ತಾಲೂಕು ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆಯನ್ನು ವಿದ್ಯುತ್ ಕಚೇರಿ ಎದುರಲ್ಲಿ ಪೊಲೀಸರು ತಡೆದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ದೀಕ್ಷಿತ್ ಉಪ್ಪಳ ಅಧ್ಯಕ್ಷತೆ ವಹಿಸಿ ದರು. ಬ್ಲೋಕ್ ಕಾರ್ಯದರ್ಶಿ ಉದಯ ಸಿ.ಎಚ್, ಉಪಾಧ್ಯಕ್ಷ ರಮೇಶ್ ಟಿ, ಸದಸ್ಯರಾದ ನೌಶಾದ್, ಮಹೇಶ್ ಕುಮಾರ್,ಇಕ್ಭಾಲ್ ಮಾತನಾಡಿದರು. …

ಕಾಸರಗೋಡು ಶ್ರೀ ಗಣೇಶೋತ್ಸವ ಗಣಪತಿ ವಿಗ್ರಹ ರಚನೆ ಮುಹೂರ್ತ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಾಜಾಂಗಣ ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ೭೧ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಗಣಪತಿ ವಿಗ್ರಹ ತಯಾರಿ ಮುಹೂರ್ತ ಉಳಿಯತ್ತಡ್ಕ ಬ್ರಹ್ಮಶ್ರೀ ಕೇಶವ ಆಚಾರ್ಯರ ನಿವಾಸದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ವಿಟ್ಲ, ಅಧ್ಯಕ್ಷ ಸತೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಕೆ.ಆರ್, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಗಣೇಶೋತ್ಸವ ಸಮಿತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಮಲಾಕ್ಷನ್ ಕೆ.ಎನ್, ಟ್ರಸ್ಟ್ ಖಜಾಂಚಿ ಸಂದೀಪ್ ಭಟ್, ಸಮಿತಿ ಸದಸ್ಯರಾದ …

ಬಿಜೆಪಿ ಸಂಘಟನಾ ಮಂಡಲ  ಅಧ್ಯಯನ ಶಿಬಿರ ಇಂದಿನಿಂದ

ಕಾಸರಗೋಡು: ಜಿಲ್ಲೆಯ ವಿವಿಧ ಸಂಘಟನಾ ಮಂಡಲಗಳಲ್ಲಿ ಬಿಜೆಪಿ ಮಂಡಲ ಸಮಿತಿಗಳ ಆಶ್ರಯ ದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ಅಧ್ಯಯನ ಶಿಬಿರಗಳು ಇಂದು, ನಾಳೆ ಜರಗಲಿವೆ.ಕುಂಬಳೆ ಸಂಘಟನಾ ಮಂ ಡಲದ ಅಧ್ಯಯನ ಶಿಬಿರ ಎಣ್ಮಕಜೆ ಪಂಚಾಯತ್‌ನ ಪೆರ್ಲ ಶಂಕರ ಸದನದಲ್ಲಿ ನಡೆಯಲಿದೆ. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟಿಸುವರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಪಾಲ್ಗೊಳ್ಳುವರು. ತೃಕರಿಪುರ ಸಂಘಟನಾ ಮಂಡಲದ ಅಧ್ಯಯನ ಶಿಬಿರ …

ಕಾಸರಗೋಡು ಸಿಟಿ ಗೋಲ್ಡ್‌ನಲ್ಲಿ ಹಿಸ್ತಾರ ಪ್ರೀಮಿಯಂ ಜ್ಯುವೆಲ್ಲರಿ ಎಕ್ಸಿಬಿಶನ್ ಆರಂಭ

ಕಾಸರಗೋಡು: ಆಭರಣ ಪ್ರೇಮಿಗಳು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದ ‘ಹಿಸ್ತಾರ’ ಪ್ರೀಮಿಯಂ ಜ್ಯುವೆಲ್ಲರಿ ಎಕ್ಸಿಬಿಶನ್ ಕಾಸರಗೋಡು ಸಿಟಿ ಗೋಲ್ಡ್ ಶೋರೂಂನಲ್ಲಿ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಖದೀಜ ಜಾಫರ್, ಜಾಫರ್ ಕಮಾಲ್ ಎಂಬಿವರು ಜಂಟಿಯಾಗಿ ಉದ್ಘಾಟನೆ ನಿರ್ವಹಿಸಿದರು. ಸಿಟಿ ಗೋಲ್ಡ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಾಂಚ್ ಮೆನೇಜರ್ ತಂಜೀದ್, ನಿರ್ದೇಶಕರಾದ ಇರ್ಶಾದ್, ನೌಶಾದ್, ದಿಲ್ಶಾದ್ ಭಾಗವಹಿಸಿದರು. ಎಕ್ಸಿಬಿಶನ್‌ನ ಮೊದಲ ಚಿನ್ನ ಮಾರಾಟವನ್ನು ಸಿ.ಎಂ. ಅಬ್ದುಲ್ ರಹಿಮಾನ್, ದ್ವಿತೀಯ ಚಿನ್ನಾಭರಣ ಮಾರಾಟವನ್ನು ಶುಹೈಬ್, ನಾಸಿಯಾ ಎಂಬಿವರಿಗೆ ನೀಡಿ ನಿರ್ವಹಿಸಿದರು. ಅಲ್ಲದೆ …

ನಾರಾಯಣಿ ಅಮ್ಮ ನಿಧನ

ಬೋವಿಕ್ಕಾನ: ಮಲ್ಲ ಬಾದಿಯಡ್ಕದ ಕಣ್ಣನ್ ನಾಯರ್‌ರ ಪತ್ನಿ ನಾರಾಯಣಿ ಅಮ್ಮ (85) ನಿಧನ ಹೊಂದಿದರು. ಮೃತರು ಮಕ್ಕಳಾದ ಕಮಲಾಕ್ಷಿ, ಬಾಲಕೃಷ್ಣನ್, ಶಾಂತ ಕುಮಾರಿ, ನಾರಾಯಣನ್, ಅಳಿಯ-ಸೊಸೆಯಂದಿರಾದ ಮಧು ಮುಳಿಯಾರು, ವತ್ಸಲ, ಶ್ರೀಲತ (ಕಾರವಲ್ ಆನ್‌ಲೈನ್ ಮೀಡಿಯಾ), ಸಹೋದರಿಯರಾದ ಕಾರ್ತ್ಯಾಯಿನಿ, ಗೀತ (ತಂಬಾಯಿ), ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರ ಮಾಧವನ್ ನಾಯರ್, ಇತರ ಸಹೋದರಿಯರಾದ ಶಾರದ, ಜಾನಕಿ, ಮೀನಾಕ್ಷಿ ಎಂಬಿವರು ಈ ಹಿಂದ ನಿಧನಹೊಂದಿದ್ದಾರೆ.

ಮುಹಮ್ಮದ್ ಹಾಜಿ ನಿಧನ

ಕುಂಬಳೆ: ಕುಂಬಳೆಯ ಹಿರಿಯ ವ್ಯಾಪಾರಿ ಹಾಗೂ ಬದರಿಯಾ ನಗರ ವೆಲ್ಫೇರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ (67) ನಿಧನ ಹೊಂದಿದರು.  ಮೃತರು ಪತ್ನಿ ಫಾತಿಮಾ, ಮಕ್ಕಳಾದ ಸಾಬಿರ, ಜಾಫರ್, ಮುಸ್ತಫ, ಶಾಕೀರ, ಸಲಾಹುದ್ದೀನ್, ಶುಹೈಬ್, ಶಮೀಮ್, ಆಸಿಫ್, ಶಿಮ್ನಾ, ಸಹೋದರ ಮೊದೀನ್, ಸಹೋದರಿ ನಫೀಸ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವಾಸಿಯಾಗದ ಕಾಲುನೋವು: ಖಾಸಗಿ ಆಸ್ಪತ್ರೆ ನೌಕರೆ ಆತ್ಮಹತ್ಯೆ

ಕಾಸರಗೋಡು: ವಾಸಿಯಾ ಗದ ಕಾಲುನೋವು ಹಿನ್ನೆಲೆಯಲ್ಲಿ ಮನನೊಂದು ಖಾಸಗಿ ಆಸ್ಪತ್ರೆಯ ನೌಕರೆ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೂಡ್ಲು ಮೀಪುಗುರಿ ಕಾಳ್ಯಂಗಾಡು ದೇವಿಕೃಪ ನಿವಾಸಿ ಸೂರ್ಯ ಎಂಬವರ ಪತ್ನಿ ಶ್ಯಾಮಲ (50) ಆತ್ಮಹತ್ಯೆಗೈದವರು. ನಿನ್ನೆ ಸಂಜೆ 4 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶ್ಯಾಮಲ ಪತ್ತೆಯಾಗಿದ್ದಾರೆ. ಈಕೆ ಕಾಲು ನೋವಿನಿಂದ ಬಳಲುತ್ತಿದ್ದುದಾಗಿ ಹೇಳಲಾಗುತ್ತಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದು, ಇದಾಗಿರಬಹುದು ಆತ್ಮಹತ್ಯೆಗೆ ಕಾರಣವೆಂದು ಶಂಕಿಸುತ್ತಿರು …

ಶಸ್ತ್ರಚಿಕಿತ್ಸೆ ಬಳಿಕ ಬಾಲಕ ಸಾವನ್ನಪ್ಪಿದ ಪ್ರಕರಣ: ರಾಜ್ಯ ಆರೋಗ್ಯ ಇಲಾಖೆಯ ವಿಶೇಷ ಸಮಿತಿಯಿಂದ ತನಿಖೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ   ಉದರ   ಸಂಬಂಧ ಕಾಯಿಲೆಗೆ  ಶಸ್ತ್ರಚಿಕಿತ್ಸೆಗೊಳಗಾದ ಬೇಡಡ್ಕ ತಲೆಕುನ್ನಿನ ಮುಹಮ್ಮದ್ ಇಯಾಸ್ (9) ಬಳಿಕ ಸಾವನ್ನಪ್ಪಿದ ಪ್ರಕರಣದ ತನಿಖೆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ವಿಶೇಷ ತಂಡ ತನಿಖೆ ನಡೆಸಲಿದೆ. ಬಾಲಕನ ಮೃತದೇಹವನ್ನು ನಿನ್ನೆ  ಪರಿಯಾರಂನ ವೈದ್ಯಕೀಯ ಕಾಲೇಜು  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ನಂತರ ಮೃತದೇಹದ ಆಂತರಿಕ ಅವಯವಗಳನ್ನು  ಉನ್ನತ ಮಟ್ಟದ ಪರೀಕ್ಷೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.  ಅದರ ವರದಿ ಕೈಸೇರಿದ ಬಳಿಕವಷ್ಟೇ ಬಾಲಕನ ಸಾವಿಗೆ ಕಾರಣ ಸ್ಪಷ್ಟಗೊಳ್ಳಲಿದೆ ಯೆಂದು …

ಯುವತಿ ಕ್ಷೇತ್ರ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಆರಂಭ

ಕುಂಬಳೆ: ಮುಜುಂಗಾವು  ಕ್ಷೇತ್ರದ ಕೆರೆಯಲ್ಲಿ  ಯುವತಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಸೀತಾಂಗೋಳಿ ಎಡನಾಡು ಬ್ಯಾಂಕ್ ಸಮೀಪದ ರಾಮಕೃಷ್ಣ ಎಂಬವರ ಪತ್ನಿ ಎಂ. ಸುನಿತ (48) ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದ ಕೆರೆಯಲ್ಲಿ ನಿನ್ನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುನಿತ ಮೊನ್ನೆ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ ಪತಿ ಎದ್ದು ನೋಡಿದಾಗ ಸುನಿತ ಮನೆಯಲ್ಲಿ ರಲಿಲ್ಲ. ಪರಿಸರ ಪ್ರದೇಶಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಕುಂಬಳೆ …

ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಗೆ ಹಲ್ಲೆಗೈದು: ಹಣ ದರೋಡೆಗೈದ ಆರೋಪಿಗಳಿಗಾಗಿ ಶೋಧ

ಸೀತಾಂಗೋಳಿ: ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ದಾರಿಮಧ್ಯೆ ತಡೆದು ನಿಲ್ಲಿಸಿ  ಹಲ್ಲೆಗೈದು  ೪೩,೫೦೦  ರೂಪಾಯಿ ಗಳಿದ್ದ ಬ್ಯಾಗ್‌ನ್ನು ದರೋಡೆಗೈದ ಸಂಬಂಧ ಆರೋಪಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.  ಕಟ್ಟತ್ತಡ್ಕ ಎಡನಾಡಿನ ಈಶ್ವರ (೬೨) ಎಂಬವರ ಕೈಯಿಂದ ಹಣವಿದ್ದ ಬ್ಯಾಗ್‌ನ್ನು ದರೋಡೆಗೈಯ್ಯಲಾಗಿದೆ.  ಪೆರ್ಮುದೆ ಮುನ್ನೂರು ಹೊಸಮನೆ ತರವಾಡು ಕ್ಷೇತ್ರದ ಪದಾಧಿಕಾರಿಯಾದ ಈಶ್ವರ ತರವಾಡಿನಲ್ಲಿ ಸಂಕ್ರಮಣ ಕಾರ್ಯಕ್ರಮಕ್ಕೆಂದು  ತೆರಳುತ್ತಿದ್ದ ವೇಳೆ ನಿನ್ನೆ ಮಧ್ಯಾಹ್ನ ೨ ಗಂಟೆ ವೇಳೆ ಅವರಿಗೆ ಹಲ್ಲೆಗೈದು ಹಣ ದರೋಡೆ ನಡೆಸಲಾಗಿದೆ. ಮುನ್ನೂರಿನಲ್ಲಿ ಬಸ್ ಇಳಿದು ನಡೆದು ಹೋಗುತ್ತಿದ್ದಾಗ …