ಎರಡು ದಿನ ಮದ್ಯದಂಗಡಿಗಳಿಗೆ ರಜೆ: ಕಾಳಸಂತೆಯಲ್ಲಿ ಮದ್ಯ ಮಾರಾಟ ಸಾಧ್ಯತೆ

ಕಾಸರಗೋಡು: ರಾಜ್ಯದಲ್ಲಿ ನಾಳೆ ಹಾಗೂ ಅ.2ರಂದು ಬಿವರೇಜಸ್ ಕಾರ್ಪರೇಶನ್‌ನ ಮದ್ಯದಂಗಡಿಗಳಿಗೆ ರಜೆಯಾಗಿರುವುದರಿಂದ ಈ ಎರಡು ದಿನ ಮದ್ಯಪಾನಿಗಳಿಗೆ ಮದ್ಯ ಲಭಿಸದು. ಪ್ರತಿ ತಿಂಗಳು 1ರಂದು ಡ್ರೈಡೇ ಆಗಿರುವು ದರಿಂದ ನಾಳೆ ಮದ್ಯದಂಗಡಿಗಳಿಗೆ ರಜೆ ಯಾಗಿರುವುದು. ಅ.2ರಂದು ಗಾಂಧೀ ಜಯಂತಿ ಪ್ರಯುಕ್ತ ರಜೆಯಾಗಿರಲಿದೆ. ನಿರಂತರ ಎರಡು ದಿನಗಳ ಕಾಲ ರಜೆಯಾಗಿರುವುದರಿಂದ ಇಂದು ಮದ್ಯದಂಗಡಿಗಳ ಮುಂದೆ ಭಾರೀ ಸಂದಣಿ ಕಂಡು ಬರುವ ಸಾಧ್ಯತೆ ಇದೆ. ಇದೇ ವೇಳೆ ರಜಾದಿನಗಳನ್ನು ಪರಿಗಣಿಸಿ ಕೆಲವರು ಭಾರೀ ಪ್ರಮಾಣದಲ್ಲಿ ಮದ್ಯ ದಾಸ್ತಾನಿರಿಸಿ ಅದನ್ನು ಕಾಳಸಂತೆಯಲ್ಲಿ …

ಸಹೋದರರಿಗೆ ತಂಡದಿಂದ ಹಲ್ಲೆ : 21 ಮಂದಿ ವಿರುದ್ಧ ಕೇಸು ದಾಖಲು

ಮಂಜೇಶ್ವರ: ಸಹೋದರ ಪುತ್ರಿಯನ್ನು ಪ್ರೀತಿಸುತ್ತಿದ್ದ ಬಗ್ಗೆ ಪ್ರಶ್ನಿಸಿದ ವಿರೋಧದಿಂದ ಸಹೋದರರಾದ ಮೂರು ಮಂದಿಗೆ ತಂಡವೊಂದು ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ತಿಂಗಳ 28ರಂದು ಮುಂಜಾನೆ 4.30ಕ್ಕೆ ಉಪ್ಪಳ ಪಾರೆಕಟ್ಟೆ ಎಂಬಲ್ಲಿ ದೂರುದಾರನಾದ ಬಂದ್ಯೋಡು ಬೀಚ್ ರಸ್ತೆ ನಿವಾಸಿ ಉಮ್ಮರ್  ಎಂ.ಎಸ್ (55) ಎಂಬವರು ತಮ್ಮಿಬ್ಬರು ಸಹೋದರರಾದ ಮೂಸ ಬಿ.ಎಂ (52), ಮುನೀರ್ ಬಿ.ಎನ್ (50)ರೊಂದಿಗಿರುವಾಗ ಆರೋಪಿ ಪತ್ವಾಡಿ ನಿವಾಸಿ ಮುನಾವಿರ್ (22)ನ ನೇತೃತ್ವದಲ್ಲಿ 21 ಮಂದಿಯ ತಂಡ ಕೈಗಳಿಂದ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದಿದೆಯೆಂದು ದೂರಲಾಗಿದೆ. ಉಮ್ಮರ್ …

ಪ್ರಾಯಪೂರ್ತಿಯಾಗದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ 47 ವರ್ಷ ಸಜೆ, ಎರಡೂವರೆ ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಪ್ರಾಯ ಪೂರ್ತಿಯಾಗದ ವಿದ್ಯಾರ್ಥಿನಿ ಯರಿಗೆ  ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯ (ಪೋಕ್ಸೋ) ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು 47 ವರ್ಷ ಕಠಿಣ ಸಜೆ ಹಾಗೂ ಎರಡೂವರೆ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಈಗ ಬೋವಿಕ್ಕಾನ ಮುದ ಲಪ್ಪಾರ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಚೆಂಗಳ ಕೆ.ಕೆ.ಕುನ್ನಿಲ್ ತೈವಳಪ್ಪು ನಿವಾಸಿ ಅಬ್ದುಲ್ ನೌಶಾದ್ (40) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 10 …

ಕುಂಬಳೆ ಪೇಟೆಯಲ್ಲಿ ಟ್ರಾಫಿಕ್ ಪರಿಷ್ಕರಣೆ ಪ್ರಯೋಗ 6ರಿಂದ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಉಂಟಾಗುತ್ತಿರುವ ಸಾರಿಗೆ ಅಡಚಣೆಗೆ ಪರಿಹಾರ ಕಂಡುಕೊಳ್ಳಲು ಹೊಸ ವ್ಯವಸ್ಥೆಗಳೊಂದಿಗೆ ಜ್ಯಾರಿಗೊಳಿಸುವ ಟ್ರಾಫಿಕ್ ಪರಿಷ್ಕರಣೆಯ ಪ್ರಯೋಗ ಅಕ್ಟೋಬರ್ 6ರಿಂದ 16ರವರೆಗೆ ನಡೆಯಲಿದೆ. ಇದು ಯಶಸ್ವಿಯಾದಲ್ಲಿ ಅದನ್ನು ಖಾಯಂ ಆಗಿ ಜ್ಯಾರಿಗೊಳಿಸಲಾಗುವುದು. ಇದರ ಅಂಗವಾಗಿ ಬಸ್, ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ಕಾರ್ಮಿಕರ ಯೂನಿಯನ್ ಪ್ರತಿನಿಧಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಅದರಲ್ಲಿ ಲಭಿಸಿದ ಸಲಹೆ ಸೂಚನೆಗಳಂತೆ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ ನಿರ್ಧಾರ ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಪೈವಳಿಕೆ: ಅಟ್ಟೆಗೋಳಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾ ಧ್ಯಾಯ ಹಾಜಿ ಅಬ್ದುಲ್ಲ ಕೆ. (89) ನಿಧನ ಹೊಂದಿದರು. ಮೂಲತಃ ಪೈವ ಳಿಕೆ ಕೊಂದಲಕ್ಕಾಡು ನಿವಾಸಿಯಾದ ಇವರು ಮಣ್ಣಂಗುಳಿಯಲ್ಲಿ ವಾಸವಾಗಿ ದ್ದರು. ಮೃತರು ಪತ್ನಿ ಬೀಫಾತುಮ್ಮ, ಮಕ್ಕಳಾದ ಮಹಮ್ಮದ್ ಕೆ.ಎ. (ನಿವೃತ್ತ ಜಿಯೋಲಜಿಸ್ಟ್), ಸೈನಬಾ, ಖದೀ ಜಮ್ಮ, ಫಾತಿಮ್ಮತ್ ಸಹುರಾ, ತಾಹಿರಾ, ಸೊಸೆ ಸೆಮಿನಾ ಎಂ.ಟಿ (ಡೆಪ್ಯುಟಿ ತಹಶೀಲ್ದಾರ್ ಕಾಸರಗೋಡು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಅಟ್ಟೆಗೋಳಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕವೃಂದ, ಆಡಳಿತ ಮಂಡಳಿ …

ತಿಂಬರ ರಸ್ತೆಯಲ್ಲಿ ಅಲುಗಾಡುತ್ತಿರುವ ಇಂಟರ್‌ಲಾಕ್ ಅಪಘಾತ ಭೀತಿ; ದುರಸ್ತಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ ಸಮೀಪದ ತಿಂಬರ ರಸ್ತೆಗೆ ಇಂಟರ್‌ಲಾಕ್ ಅಳವಡಿಸಲಾಗಿದ್ದು, ಈಗ ಇಂಟರ್ ಲಾಕ್ ಎದ್ದು ಸಡಿಲಗೊಂಡು ಅಲುಗಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ಊರವರು ತಿಳಿಸಿದ್ದಾರೆ. ಹಲವು ವರ್ಷಗಳ ಹಿಂದೆ ಸುಮಾರು ನೂರು ಮೀಟರ್ ರಸ್ತೆಗೆ ಇಂಟರ್ ಲಾಕ್ ಅಳವಡಿಸಲಾಗಿದೆ. ಇದರಿಂದ ಸ್ಥಳೀಯರ ಸಂಚಾರ ಸುಗಮವಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ರಸ್ತೆಯ ಅಲ್ಲಲ್ಲಿ ಇಂಟರ್ ಲಾಕ್ ಸಡಿಲಗೊಂಡ ಕಾರಣ ವಾಹನಗಳು ಸಂಚರಿಸುವಾಗ ಅಪಘಾತ ಭೀತಿ ಉಂಟಾಗುತ್ತಿದೆ. ಸವಾರರು ಆತಂಕಗೊಂಡಿದ್ದಾರೆ. ಪ್ರತಾಪನಗರ ದಿಂದ ತಿಂಬರ, …

ನವರಾತ್ರಿ ಮಹೋತ್ಸವ ಕ್ಷೇತ್ರಗಳಲ್ಲಿ ಭಕ್ತರ ಸಂದಣಿ

ಕಾಸರಗೋಡು: ನವರಾತ್ರಿ ಮಹೋತ್ಸವದಂಗವಾಗಿ ನಾಡಿನಾದ್ಯಂತ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರಗುತ್ತಿವೆ. ಸೆ. 22ರಿಂದ ಆರಂಭಗೊಂಡ ನವರಾತ್ರಿ ಮಹೋತ್ಸವ ಅಕ್ಟೋಬರ್ 2ರವರೆಗೆ ಜರಗಲಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಾಳೆ ಮಹಾನವಮಿ, ಚಂಡಿಕಾಹೋಮ, ವಾಹನಪೂಜೆ, 2ರಂದು ವಿಜಯದಶಮಿ, ವಿದ್ಯಾರಂಭ, ಶಮಿಪೂಜೆ ನಡೆಯಲಿರುವುದು. ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಇಂದು ಸಂಜೆ 7ರಿಂದ ಧನ್ಯಾಮುರಳಿ ಆಸ್ರ ಉಳಿಯ ಇವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9ರಿಂದ ವೆಂಕಟರಮಣ ಬಾಲಗೋಕುಲ …

ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಮಧ್ಯೆ ಕುಸಿದು ಬಿದ್ದ ವ್ಯಕ್ತಿ ನಿಧನ

ಉಪ್ಪಳ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ದಾರಿ ಮಧ್ಯೆ ಕುಸಿದು ಬಿದ್ದ ವ್ಯಕ್ತಿಯೋರ್ವರು ನಿಧನ ಹೊಂದಿದ್ದಾರೆ. ಉಪ್ಪಳ ಬಳಿಯ ಹನುಮಾನ್ ನಗರದ ಕೆ.ಕೆ ಸದನ್‌ನ ಪುರುಷೋತ್ತಮ.ಕೆ ಐಲ್ (68) ಎಂಬವರು ನಿಧನ ಹೊಂದಿದವರು. ಭಾನುವಾರ ರಾತ್ರಿ ಸ್ಥಳೀಯ ಹನುಮಾನ್ ಟೈಗರ್ಸ್ ನೆÃತೃತ್ವದಲ್ಲಿ ಊದು ಪೂಜೆ ಸಮೀಪದ ಶ್ರೀ ಅಯ್ಯಪ್ಪ ಮಂದಿರ ಪರಿಸರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮನೆಯಿಂದ ನಡೆದು ಹೋಗುತ್ತಿರುವ ವೇಳೆ ದಾರಿ ಮಧ್ಯೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ …

ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಸೀತಾಂಗೋಳಿ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ನ 2024-25ನೇ ವರ್ಷದ ವಾರ್ಷಿಕ ಮಹಾಸಭೆ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಮನ್ವಯ ಸಭಾಭವನದಲ್ಲಿ ಜರಗಿತು. ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶರ ಡಿ ಎಸ್ ಪ್ರಾರ್ಥನೆ ಹಾಡಿದಳು. ಉಪಾಧ್ಯಕ್ಷೆ ಹರಿಣಿ ಜಿ ಕೆ ನಾಯಕ್ ಸ್ವಾಗತಿಸಿದರು. ಬ್ಯಾಂಕಿನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿಯೂ ಎ ಪ್ಲಸ್ ಪಡೆದ ಬ್ಯಾಂಕ್‌ನ ಸದಸ್ಯರ ಏಳು ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. …

ವಾಹನ ಅಪಘಾತದಲ್ಲಿ ಗಾಯಗೊಂಡ ಯುವಕನ ಕೈಯಲ್ಲಿ ಸಿಲುಕಿಕೊಂಡ ಸ್ಟೀಲ್ ಬಳೆಯನ್ನು ತುಂಡರಿಸಿ ತೆಗೆದ ಅಗ್ನಿಶಾಮಕದಳ

ಕಾಸರಗೋಡು: ವಾಹನ ಅಪ ಘಾತದಲ್ಲಿ ಗಾಯಗೊಂಡ ಯುವಕನ ಕೈಯಲ್ಲಿ ಸಿಲುಕಿಕೊಂಡ ಸ್ಟೀಲ್ ಬಳೆಯನ್ನು ಅಗ್ನಿಶಾಮಕದಳ ಮುರಿದು ತೆಗೆದು ಆತನನ್ನು ನೋವಿನಿಂದ ರಕ್ಷಿಸಿದ ಘಟನೆ ನಡೆದಿದೆ. ಬೈಕ್ ಸವಾರ ಗಣೇಶ್ (38) ಎಂಬವರ ಕೈಗೆ ಸಿಲುಕಿದ್ದ ಸ್ಟೀಲ್ ಬಳೆಯನ್ನು ಮುರಿದು ತೆಗೆಯಲಾಗಿದೆ. ಇವರು ನಿನ್ನೆ ಬೈಕ್‌ನಲ್ಲಿ ಮೊಗ್ರಾಲ್ ಪುತ್ತೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಚೌಕಿಯಲ್ಲಿ  ಬೈಕ್ ಮತ್ತು ಆಟೋ ರಿಕ್ಷಾ ಪರಸ್ಪರ ಢಿಕ್ಕಿ ಹೊಡೆದಿತ್ತು. ಇದರಿಂದ ಗಣೇಶ್‌ರ ಕೈಯ ಎಲುಬು ಮುರಿದು ಹೋಗಿತ್ತು. ಮಾತ್ರವಲ್ಲ ಕೈಯಲ್ಲಿ ಅವರು …