ಕಾಸರಗೋಡು ಡಯಲೈಫ್ ಹಾಸ್ಪಿಟಲ್‌ನಲ್ಲಿ ಕಿಡ್ನಿ ಟ್ಯೂಮರ್ ಯಶಸ್ವಿ ಶಸ್ತ್ರಚಿಕಿತ್ಸೆ

ಕಾಸರಗೋಡು:  ಕಾಸರಗೋಡು ಡಯಲೈಫ್ ಹಾಸ್ಪಿಟಲ್‌ನಲ್ಲಿ ಅಪೂರ್ವವಾದ ಕಿಡ್ನಿ ಟ್ಯೂಮರ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ  ತೆರವುಗೊಳಿಸಲಾಯಿತು.  ರೆನಲ್ ಅಂಗ್ಯೋಮ್ಯೋ ಲಿಪೋಮಾ ಎಂಬ ಗಂಭೀರ ಟ್ಯೂಮರ್ ಬಾಧಿಸಿದ್ದ ೫೦ರ ಹರೆಯದ ಮಹಿಳೆಯ ಕಿಡ್ನಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಿಡ್ನಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ   ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ರೋಗಿಗೆ ಪ್ರತ್ಯೇಕವಾಗಿ ಯಾವುದೇ ಲಕ್ಷಣವಿರಲಿಲ್ಲ. ಸಾಮಾನ್ಯ ಆರೋಗ್ಯ ತಪಾಸಣೆಯಂಗವಾಗಿ ನಡೆಸಿದ  ರುಟೀನ್ ಟೆಸ್ಟ್ ಮೂಲಕ ಟ್ಯೂಮರ್ …

ಮಂಜೇಶ್ವರ ಮಂಡಲದ ಅಭ್ಯರ್ಥಿಗಳ  ಬಿರುಸಿನ ಮತಯಾಚನೆ ಮುಂದುವರಿಕೆ

ಮಂಜೇಶ್ವರ: ಮತದಾನಕ್ಕಿನ್ನು  ಕೇವಲ ಏಳೇ ದಿನಗಳು ಬಾಕಿ ಇರು ವಂತೆ ಮಂಜೇಶ್ವರ ವಿಧಾನಸಭಾ ಮಂಡ ಲದ ಪ್ರಮುಖ ಮೂವರು ಅಭ್ಯರ್ಥಿ ಗಳು ಪ್ರಚಾರದ  ತುತ್ತತುದಿಯಲ್ಲಿ ಪರ್ಯಟನೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಮಂಗ ಲ್ಪಾಡಿ ಪಂಚಾಯತ್‌ನ ಬೇಕೂರು ಸಹಿತ ವಿವಿಧೆಡೆ ಕಾರ್ಯಕರ್ತರು ಎರಡನೇ ಹಂತದ ಮನೆ ಸಂಪರ್ಕ ನಡೆಸಿದರು. ಅಭ್ಯರ್ಥಿ ಕೆ. ಸುರೇಂದ್ರನ್ ನಿನ್ನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸಿದ್ದು, ಮಧ್ಯಾಹ್ನ ಕುಂಬಳೆ ಬಳಿಯ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಸಾಮೂಹಿಕ …

ಸುಡು ಬಿಸಿಲನ್ನೂ ಲೆಕ್ಕಿಸದೆ ಮುಂದುವರಿಯುತ್ತಿರುವ ಬಿರುಸಿನ ಚುನಾವಣಾ ಪ್ರಚಾರ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಇನ್ನು ಏಳು ದಿನಗಳು ಮಾತ್ರ  ಬಾಕಿ ಉಳಿದುಕೊಂಡಿ ರುವಂತೆ ಮತ ಯಾಚನೆಗಾಗಿರುವ ಅಭ್ಯರ್ಥಿಗಳ ಪ್ರಚಾರ ಪರ್ಯಟನೆ ಬೇಸಿಗೆಯ ಸುಡು ಬಿಸಿಲನ್ನು ಲೆಕ್ಕಿಸದೆ ಇನ್ನಷ್ಟು ಆವೇಶಭರಿತವಾದ ರೀತಿಯಲ್ಲಿ ಮುಂದಕ್ಕೆ ಸಾಗುತ್ತಿದೆ.ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ನಿನ್ನೆ ಕುಟುಂಬ ಸಭೆಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಿದರು. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ವಿಘ್ನೇಶ್ವರ ಭಟ್ ಮತ್ತು  ಕುಟುಂಬವನ್ನು ಪೆರ್ಣೆಯಲ್ಲಿರುವ ಅವರ ಮನೆಯಲ್ಲಿ ಸಂದರ್ಶಿಸಿ ಮತ ಯಾಚನೆ ನಡೆಸಿದರು. ನಂತರ ಅವರು ಪೆರ್ಣೆ ಶ್ರೀ ಮುಚ್ಚಿಲೋಟ್ …

ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವ್ಯಕ್ತಿಯೊಬ್ಬರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೀರಂತಬೈಲು ಬೂತಗುಡಿ ನಿವಾಸಿ ದಿ| ಬಾಬು ನಾಕ್‌ರ ಪುತ್ರ ಬಿ. ಪ್ರಕಾಶ್ (೪೮) ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ ಮನೆಯವರು ಅಡ್ಕತ್ತಬೈಲು ಬೈದರ್ಕಳ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಪ್ರಕಾಶ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ ೧೨ ಗಂಟೆ ವೇಳೆ ಮನೆಯವರು ಮರಳಿದಾಗ ಮನೆ ಹಿಂಭಾಗದ ಮರದಲ್ಲಿ ಪ್ರಕಾಶ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಮೃತರು …

ಹೋಟೆಲ್‌ನಲ್ಲಿ ಆಹಾರ ಸೇವಿಸಿ ಮರಳುವಷ್ಟರಲ್ಲಿ ಬೈಕ್ ನಾಪತ್ತೆ : ಕಳವುಗೈದ ವ್ಯಕ್ತಿಯ ಪತ್ತೆಗಾಗಿ ಶೋಧ

ಕುಂಬಳೆ: ಹೋಟೆಲ್‌ನಲ್ಲಿ ಆಹಾರ ಸೇವಿಸಿ ಮರಳಿದಾಗ ಹೊರಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಕುರಿತು ಲಭಿಸಿದ ದೂರಿನಂತೆ  ಕೇಸುದಾಖಲಿಸಿಕೊಂಡ ಕುಂಬಳೆ ಪೊಲೀಸರು ನಡೆಸಿದ ತನಿಖೆಯಲ್ಲಿ ಬೈಕ್ ಕಳವಿಗೀಡಾಗಿರು ವುದಾಗಿ ತಿಳಿದುಬಂದಿದೆ.  ಬೈಕ್ ಕಳವುಗೈದ ವ್ಯಕ್ತಿ ಯಾರೆಂದು ತಿಳಿದುಬಂದಿದ್ದು, ಇದೀಗ ಆತನನ್ನು ಪತ್ತೆಹಚ್ಚಲಿರುವ ಪ್ರಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.ಕುಂಬಳೆ ಕಂಚಿಕಟ್ಟೆ ನಿವಾಸಿ ಅಜಿತ್ ಕುಮಾರ್ ಎಂಬವರ ಪಲ್ಸರ್ ಬೈಕ್  ಕಳವಿಗೀಡಾಗಿದೆ. ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆ ಅಜಿತ್ ಕುಮಾರ್ ಕುಂಬಳೆ ಪೇಟೆಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ …

ಪೇರಾಲ್‌ನಲ್ಲಿ ಎರಡು ದಶಕಗಳಿಂದ ದುರಸ್ತಿಯಾಗದೆ ರಸ್ತೆ ಶೋಚನೀಯ ಸ್ಥಿತಿಯಲ್ಲಿ ಅಭಿವೃದ್ಧಿಯೆಂದರೆ ಇದಾಗಿದೆಯೇ ಎಂದು ಪ್ರಶ್ನಿಸುತ್ತಿರುವ ನಾಗರಿಕರು

ಕುಂಬಳೆ:  ನಾಡಿನ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಜವಾಬ್ದಾ ರಿಯಿಲ್ಲವೇ ಎಂದು ನಾಗರಿಕರು ಪ್ರಶ್ನಿಸ ತೊಡಗಿ ದ್ದಾರೆ. ನಾಡಿನಲ್ಲಿ ಪರಿಹರಿಸ ಲಾಗದ ಹಲವು ಸಮಸ್ಯೆಗಳಿದ್ದು, ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ನಾಗರಿಕರು ಈ ಬಗ್ಗೆ ಪ್ರಶ್ನಿಸುತ್ತಿರುವು ದು ರಾಜಕೀಯ ಪಕ್ಷ ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕುಂಬಳೆ ಪೇರಾಲ್ ವಾರ್ಡ್‌ನ ‘ತಾಯಲ್’ ಶಾಲೆ ರಸ್ತೆಯನ್ನು  ಸಂಚಾರಯೋಗ್ಯಗೊಳಿಸಬೇಕೆಂದು ನಾಗರಿಕರು ಕಳೆದ ಎರಡು ದಶಕಗಳಿಂದಲೇ ಬೇಡಿಕೆ ಮುಂದಿರಿಸಿ ದ್ದಾರೆ. ಹಲವು ವರ್ಷಗಳಿಂದ  ಮರು ಡಾಮರೀಕರಣ ನಡೆಯದ ಈ ರಸ್ತೆ ಇದೀಗ ಶೋಚನೀಯ ಸ್ಥಿತಿಯಲ್ಲಿದೆ.  …

ಸುಂದರ ಕಟ್ಟಡವಿದೆ ಕುಂಬಳೆ ಮೃಗಾಸ್ಪತ್ರೆಗೆ ಆದರೆ ಒಳಗೆ ಶೂನ್ಯ; ಕ್ಷೀರ ಕೃಷಿಕರು ಸಂಕಷ್ಟದಲ್ಲಿ

ಕುಂಬಳೆ: ಅತೀ ವಿಶಾಲವಾದ ಕಟ್ಟಡ ಕುಂಬಳೆ ಮೃಗಾಸ್ಪತ್ರೆಗೆ ಇದ್ದರೂ ಇದರಿಂದ ಯಾವುದೇ ಪ್ರಯೋಜನ ಕೃಷಿಕರಿಗೆ ಲಭಿಸುತ್ತಿಲ್ಲವೆಂದು ದೂರ ಲಾಗಿದೆ. ಇಲ್ಲಿ ಮೃಗಗಳಿಗೆ ಚುಚ್ಚುಮದ್ದು ಇಲ್ಲ. ಔಷಧಿ ಇಲ್ಲ. ಇದರಿಂದಾಗಿ ಕ್ಷೀರ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಹಲವಾರು ತಿಂಗಳಿಗಳಿಂದ ಇದೇ ಸ್ಥಿತಿ ಮುಂದುವರಿಯುತ್ತಿದ್ದರೂ ಈ ಬಗ್ಗೆ ಗಮನ ಹರಿಸಲು ಯಾರೂ ಮುಂದಾಗುತ್ತಿಲ್ಲವೆಂದು ಕ್ಷೀರ ಕೃಷಿಕರು ದೂರುತ್ತಾರೆ.ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ಹಾಗೂ ದೊಡ್ಡ ಮಟ್ಟಿನ ನೂರಾರು ಮಂದಿ ಹೈನುಗಾರರು ಇದ್ದು, ಅಲ್ಲದೆ ಇತರ ಪ್ರಾಣಿ ಪ್ರೇಮಿಗಳು ಕೂಡಾ ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳನ್ನು …

ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11.40 ಲಕ್ಷ ರೂ. ಪತ್ತೆ: ಕಣ್ಣೂರು ನಿವಾಸಿ ಕಸ್ಟಡಿಗೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಇಂದು ಮುಂಜಾನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11,40,000 ರೂ. ನಗದು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಣ್ಣೂರು ಅಳಿಕ್ಕಲ್ ಪಾದಿರಾಪರಂ ಬಿಲ್‌ಪಾರಯಿಲ್ ನಿವಾಸಿ ಅನೂಪ್ (37) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು  ಆತನ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಟ್ರಾಫಿಕ್ ಜಂಕ್ಷನ್ ನಲ್ಲಿ ಕಾಸರಗೋಡು ಪೊಲೀಸರು ಇಂದು ಮುಂಜಾನೆ 2 ಗಂಟೆ ವೇಳೆವಾಹನ ತಪಾಸಣೆಯಲ್ಲಿ ತೊಡಗಿದ್ದಾಗ …

ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 195.50 ರೂ. ಏರಿಕೆವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 195.50 ರೂ. ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ತೈಲ ಕಂಪೆನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ 195/5- ರೂ.ನಂತೆ  ಹೆಚ್ಚಳಮಾಡಿವೆ.ಇದರಿಂದಾಗಿ ಕೇರಳದಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 2092 ರೂ.ಗೇರಿದೆ.  ಇದಕ್ಕೂ ಮೊದಲು ಮಾರ್ಚ್ 1ರಂದು ಪ್ರತೀ ಸಿಲಿಂಡರ್ ಬೆಲೆಯಲ್ಲಿ ತಲಾ 114/5 ರೂ.ನಂತೆ ಹೆಚ್ಚಿಸಲಾಗಿತ್ತು. ಅದಾದ ಬೆನ್ನಲ್ಲೇ ಎಪ್ರಿಲ್ ತಿಂಗಳ ಮೊದಲ ದಿನದಿಂದಲೇ  ಬೆಲೆಯಲ್ಲಿ ಮತ್ತೆ 195.50  ರೂ.ನಂತೆ ಹೆಚ್ಚಿಸಲಾಗಿದೆ. ಇದು …

ಬೇಡಗಂನಲ್ಲಿ ಬಾಲಕಿ ಗರ್ಭಿಣಿ: ವಿವಿಧ ಕಡೆಗಳ ದೌರ್ಜನ್ಯ ಪ್ರಕರಣಗಳಲ್ಲಿ 82ರ ವೃದ್ದ ಸೇರಿ 3 ಮಂದಿ ವಿರುದ್ಧ ಪೋಕ್ಸೋ ಕೇಸು; ತಂದೆ ಸೆರೆ

ಕಾಸರಗೋಡು: ವಿಭಿನ್ನ ಘಟನೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ಪೊಲೀಸರು ಮೂರು ಪೋಕ್ಸೋ ಪ್ರಕರಣಗಳನ್ನು ನೋಂದಾಯಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಯಾದ ಘಟನೆಯಲ್ಲಿ ಬೇಡಗಂ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. 15ರ ಹರೆಯದ ಬಾಲಕಿ ನೀಡಿದ ದೂರಿನಂತೆ ಕುತ್ತಿಕ್ಕೋಲ್ ಪಂಚಾಯತ್‌ನಲ್ಲಿ ವಾಸವಾಗಿರುವ ಸಂಬಂಧಿಕನಾದ ಯುವಕನ ವಿರುದ್ಧ ಕೇಸು ದಾಖಲಿಸ ಲಾಗಿದೆ. ಬಾಲಕಿ ಗರ್ಭಿಣಿ ಎಂದು ಸ್ಪಷ್ಟವಾಗಿರುವುದರೊಂದಿಗೆ ದೌರ್ಜನ್ಯ ಘಟನೆ ಬಹಿರಂಗ ಗೊಂಡಿದೆ. ಆರೋಪಿಯನ್ನು ಪತ್ತೆಹಚ್ಚಲು ಬೇಡಗಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.೮ನೇ ತರಗತಿಯ ಬಾಲಕಿಯನ್ನು ದೌರ್ಜನ್ಯಗೈದ ತಂದೆಯ …