ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಮನೆ ಆವರಣದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಹೌಸ್ ನಿವಾಸಿ  ಜಿ. ಭಾಸ್ಕರ ಎಂಬವರ ಪುತ್ರ ರಾಜೇಶ್ ಜಿ. (47) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ಸಂಜೆ ಅವರ ಮನೆ ಆವರಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಕಂಡ ಸ್ನೇಹಿತ ತಕ್ಷಣ ಮುಳ್ಳೇರಿಯ ಕೋ-ಆಪರೇಟಿವ್ ಆಸ್ಪತ್ರೆಗೆ ಸಾಗಿಸಿ ವೈದ್ಯರು ತಪಾಸಣೆ ನಡೆಸಿದಾಗ ರಾಜೇಶ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಳ್ಳೂರು ದೇವಸ್ಥಾನದ ಕಾಣಿಕೆಹುಂಡಿ ಕಳವು

ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ಕಾಣಿಕೆ ಹುಂಡಿಯಿಂದ  ಹಣ ಕಳವು ನಡೆದ ಬಗ್ಗೆ ವರದಿಯಾಗಿದೆ.  ಎರಡು  ದಿನಗಳ ಹಿಂದೆ ಈ ಕಳವು ನಡೆದಿದೆ. ಕ್ಷೇತ್ರದ ಪ್ರವೇಶದ್ವಾರದ ಬಳಿಯಿರುವ  ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ನಡೆಸಲಾಗಿದೆ. ಎರಡು ದಿನಗಳ ಹಿಂದೆ ಹುಂಡಿಯಿಂದ ಹಣ ತೆಗೆಯಲೆಂದು ದೇವಸ್ಥಾನ ಸಮಿತಿಯವರು ಅಲ್ಲಿಗೆ ಹೋದಾಗ  ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಅದರಿಂದ ಎಷ್ಟು ಹಣ ಕಳವಿಗೀಡಾಗಿದೆಯೆಂದು ಖಚಿತವಾಗಿ ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಕ್ಷೇತ್ರ ಸಮಿತಿಯವರು ಆದೂರು ಪೊಲೀಸರಿಗೆ …

ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ: ದಾಖಲಿಸಿ ತನಿಖೆ ಆರಂಭಿಸಿದ ಸೈಬರ್ ಪೊಲೀಸರು

ಕಾಸರಗೋಡು: ವಿದ್ಯಾನಗರದಲ್ಲಿ ರುವ ಜಿಲ್ಲಾ ನ್ಯಾಯಾಲಯ ಸಮುಚ್ಛಯದಲ್ಲಿ ನಿನ್ನೆ ಉಂಟಾದ ಹುಸಿ ಬಾಂಬ್ ಬೆದರಿಕೆ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಅನೀಶ್ ಜೋನ್ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಲೆತ್ನಿಸುವ ಮೂಲಕ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ. ತಮಿಳು ಲಿಬರೇಶನ್ ಆರ್ಗನೈಸೇಶನ್ (ಟಿಎಲ್‌ಒ) ಎಂಬ ಹೆಸರಲ್ಲಿ ನಿನ್ನೆ ಮುಂಜಾನೆ 3.30ರ ವೇಳೆಗೆ ಜಿಲ್ಲಾ …

ರಾಜ್ಯದಲ್ಲಿ ಕನಿಷ್ಠ 40 ಸೀಟುಗಳನ್ನು  ಗೆಲ್ಲಲು ಬಿಜೆಪಿ ಗುರಿ: ಅಮಿತ್ ಶಾ ಬೆನ್ನಲ್ಲೇ ಪ್ರಧಾನಮಂತ್ರಿ ತಿರುವನಂತಪುರಕ್ಕೆ 

ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ನಡೆಯಲಿರುವಂತೆ ಅದಕ್ಕಿರುವ ಸಿದ್ಧತೆಗಳನ್ನು ಬಿಜೆಪಿ ಆರಂಭಿಸಿದೆ. ಇದರ ಪೂರ್ವಭಾವಿಯಾಗಿ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ  ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ ೧೧ರಂದು ಅಮಿತ್ ಶಾ ತಿರುವನಂತಪುರಕ್ಕೆ ಆಗಮಿಸುವರು. ಎಲ್ಲಾ  ಮಂಡಲಗಳ ಮೇಲೂ ಗಮನ ಕೇಂದ್ರೀಕರಿಸುವುದರ ಬದಲು ಗೆಲುವು ಸಾಧ್ಯತೆಯುಳ್ಳ ಮಂಡಲಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಬಿಜೆಪಿ ಈ ಬಾರಿ ನಿರ್ಧರಿಸಿದೆ.  ಈ ಬಾರಿ 40 ಮಂಡಲಗಳ ಮೇಲೆ ಬಿಜೆಪಿ ಮುಖ್ಯವಾಗಿ ಕಣ್ಣಿರಿಸಿರುವು ದಾಗಿ ಹೇಳಲಾಗುತ್ತಿದೆ. ಕಳೆದ …

ಹವ್ಯಾಸಿ ಯಕ್ಷಗಾನ ಕಲಾವಿದ ನಿಧನ

ಮಂಗಲ್ಪಾಡಿ: ಮಂಗಲ್ಪಾಡಿ ಪ್ರತಾಪ ನಗರ ನಿವಾಸಿ ಮಂಗಳೂರಿನ ಊರ್ವಸ್ಟೋರ್‌ನಲ್ಲಿ ವಾಸವಾಗಿರುವ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ವಸಂತ ಕುಮಾರ್ (68) ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಇವರು ಮಂಗಳೂರಿನಲ್ಲಿ ಬಿಎಸ್ ಎನ್‌ಎಲ್ ನಿವೃತ ಸೀನಿಯರ್ ಸೂಪರಿಂಟೆಂಡೆಂಟ್ ಆಗಿದ್ದರು. ಯಕ್ಷಕಲಾ ಭಾರತಿ ಮಂಗಲ್ಪಾಡಿ ಇದರ ಸದಸ್ಯರಾಗಿ ದ್ದುಕೊಂಡು ಯಕ್ಷಗಾನ, ತಾಳಮದ್ದಳೆ ಯಲ್ಲಿ ಸಕ್ರಿಯರಾಗಿದ್ದರು. ನಾಟಕ ರಂಗ ದಲ್ಲಿ, ಕೋಟಿ ಚೆನ್ನಯ್ಯ ಧಾರವಾಹಿ ಯಲ್ಲೂ ಪಾತ್ರ ಮಾಡಿದ್ದರು. ದಿ| ಆನಂದ ಮಾಸ್ತರ್ -ದಿ| ಲಕ್ಷ್ಮೀ ದಂಪತಿ ಪುತ್ರನಾ ಗಿದ್ದಾರೆ. …

ಆಟದ ಸ್ಥಳವನ್ನು ವಶಪಡಿಸುವ ಕ್ರಮದ ವಿರುದ್ಧ ಮನವಿ

ಬದಿಯಡ್ಕ: ಆಟದ ಮೈದಾನವನ್ನು ಅಳೆದು ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಸಿ ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಲಾಗಿದೆ. ಬೇಳ ವಿಲ್ಲೇಜ್‌ನ ಏಣಿಯರ್ಪ್‌ನಲ್ಲಿ ಮೂರು ದಶಕಗಳ ಕಾಲ ಉಪಯೋಗಿಸುತ್ತಿದ್ದ ಆಟದ ಮೈದಾನವನ್ನು ಕೆಲವು ದಿನಗಳ ಹಿಂದೆ ಬೇಳ ವಿಲ್ಲೇಜ್ ಆಫೀಸರ್ ಅಳತೆ ಮಾಡಿ ಗುರುತು ಹಾಕಲು ತಲುಪಿದ್ದರು. ಪರಿಸರದ ಯುವಕರು ಸೇರಿ ವಿಶ್ವಭಾರತಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ರೂಪೀಕರಿಸಿ ಸ್ಥಳೀಯ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಸ್ಥಳವಾಗಿದೆ ಇದು. ಈ ಸ್ಥಳವನ್ನು ಈಗ ಅಳೆದು ನೀಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದು, ಇದನ್ನು …

ಎಸ್‌ಐಆರ್‌ನ್ನು ಸ್ವಾಗತಿಸಿದ ಡಿಸಿಸಿ ಅಧ್ಯಕ್ಷಯುಡಿಎಫ್ ಕ್ಷಮೆಯಾಚಿಸಬೇಕು-ಕೆ.ಶ್ರೀಕಾಂತ್

ಕಾಸರಗೋಡು: ಎಸ್‌ಐಆರ್ ಜ್ಯಾರಿಗೊಳಿಸಿದುದರಿಂದ ಸಿಪಿಎಂ ಕೇಂದ್ರಗಳಲ್ಲಿ ಸಹಿತ ಇತರೆಡೆಗಳಲ್ಲಿ ನಕಲಿ ಮತಗಳನ್ನು ತೆಗೆದುಹಾಕಲು ಸಾಧ್ಯವಾಯಿತು ಎಂಬ ಕಾಸರಗೋಡು  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್‌ರ ಹೇಳಿಕೆ ಸ್ವಾಗತಾರ್ಹವೆಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿ ದ್ದಾರೆ. ಇದುವರೆಗೆ ಕೇಂದ್ರ ಚುನಾವಣಾ  ಆಯೋಗದ ಎಸ್ ಐಆರ್ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಕಾಂಗ್ರೆಸ್ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಇದರಿಂದ ಎಸ್‌ಐಆರ್ ಕುರಿತು ಕಾಂಗ್ರೆಸ್ ನಡೆಸಿದ ಅಪಪ್ರಚಾರ ತಪ್ಪು ಎಂದು ಸಾಬೀತು ಗೊಂಡಿದೆ. ಆದ್ದರಿಂದ ಯುಡಿಎಫ್ ಮಾಡಿದ …

ಕಾಮ ಹುಚ್ಚ ಯಾರಪ್ಪ? ಬೀಜದ ಹೋರಿಗಳೇನಪ್ಪ?

ಕಾಸರಗೋಡು: ಕಿರುಕುಳಕ್ಕೊಳ ಗಾಗುವವರೊಂದಿಗೆ ಸರಕಾರ ಹಾಗೂ ಕಾಮ್ರೇಡ್‌ಗಳು ಇದ್ದಾರೆಂದು ಪದೇ ಪದೇ ತಿಳಿಸುತ್ತಿರುವಾಗ ವಿವಾಹಿ ತೆಯೂ ಪ್ರಬುದ್ಧರಾದ ಮಕ್ಕಳಿರುವ  50ರ ಹರೆಯದ ಗೃಹಿಣಿಯನ್ನು ಓರ್ವ ಕಾಮ್ರೇಡ್ 30 ವರ್ಷಗಳಿಂದ  ಹಿಂಬಾಲಿಸಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುತ್ತಿರುವುದಾಗಿ ಕಾಸರಗೋಡಿನ ಗೃಹಿಣಿ ರಾಜ್ಯ ಪೊಲೀಸ್ ಡೈರೆಕ್ಟರ್ ಜನರಲ್‌ಗೆ ದೂರು ನೀಡಿದ್ದಾರೆ. ದೂರಿನೊಂದಿಗೆ ಎದುರು ಕಕ್ಷಿಯ  ಲೈಂಗಿಕ ಚೇಷ್ಠೆಗಳು ಒಳಗೊಂಡ ವೀಡಿಯೋ ಹಾಗೂ ಶಬ್ದ ಸಂದೇಶ ಒಳಗೊಂಡ  ಪೆನ್‌ಡ್ರೈವ್ ನೀಡಿರುವುದಾಗಿ  ತಿಳಿಸಲಾಗಿದೆ. 2025 ಡಿಸೆಂಬರ್ 31ರಂದು ತಿರುವನಂತಪುರ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ ಅಧಿಕಾರಿಗಳು …

ಎಡನೀರು ಮಕ್ಕಾಕೋಡನ್ ತರವಾಡಿನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಒಡವೆ ಕಳವು: ಬೆರಳಚ್ಚು ಲಭ್ಯ; ಜೈಲಿನಿಂದ ಹೊರಬಂದ ಕಳ್ಳರ ಕೇಂದ್ರೀಕರಿಸಿ ತನಿಖೆ

ಎಡನೀರು: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ನ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ದೈವದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳು ಹಾಗೂ ಹಣವನ್ನು ದೋಚಿದ್ದಾರೆ. ಇದು ಮಾತ್ರವಲ್ಲದೆ ಮೂರು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕದ್ದು ಸಾಗಿಸಿದ್ದಾರೆ. ಜನವರಿ 6ರಂದು ಬೆಳಿಗ್ಗೆ 7 ಗಂಟೆ ಮತ್ತು ನಿನ್ನೆ ಬೆಳಿಗ್ಗೆ 7 ಗಂಟೆಯೊಳಗಿನ ಸಮಯದಲ್ಲಿ ಈ ಕಳವು ನಡೆದಿದೆ. 1,70,000 ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ …

ಮುಳ್ಳೇರಿಯ ರಸ್ತೆಯಲ್ಲಿ ಚಿರತೆಬೆಕ್ಕು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ರಸ್ತೆಯಲ್ಲಿ ಚಿರತೆ ಬೆಕ್ಕೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವಾಹನ ಢಿಕ್ಕಿಹೊಡೆದು ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆಗೆ ಮುಳ್ಳೇರಿಯದಿಂದ ಆದೂರಿನತ್ತ ತೆರಳುವ ರಸ್ತೆಯಲ್ಲಿ ಚಿರತೆಬೆಕ್ಕಿನ (ಪುಲಿಪೂಚ) ಮರಿಯ ಮೃತದೇಹ ಪತ್ತೆಯಾಗಿದೆ. ತಾಯಿಯ ಜೊತೆ ರಸ್ತೆ ದಾಟುವಾಗ ಯಾವುದೋ ವಾಹನ ಢಿಕ್ಕಿ ಹೊಡೆದಿರಬೇಕೆಂದು ಶಂಕಿಸಲಾಗುತ್ತಿದೆ. ಮಾಹಿತಿ ತಿಳಿದು ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್, ಆರ್‌ಆರ್‌ಪಿಯ ಸತ್ಯನ್ ನೇತೃತ್ವದ ತಂಡ ಸ್ಥಳಕ್ಕೆ ತಲುಪಿ ಕಳೇಬರವನ್ನು ಅರಣ್ಯ ಇಲಾಖೆಯ ಕಚೇರಿಗೆ ಸ್ಥಳಾಂತರಿಸಿದ್ದಾರೆ. ಇಂದು ಬೆಳಿಗ್ಗೆ ಮುಳ್ಳೇರಿಯ ವೆಟರ್ನರಿ …