ಸೈಕಲ್ ಅಂಗಡಿ ಮಾಲಕ ನಿಧನ

ಉಪ್ಪಳ: ಮಂಗಲ್ಪಾಡಿ ಕುಕ್ಕಾರ್‌ನಲ್ಲಿ ಹಲವು ವರ್ಷಗಳಿಂದ ಶ್ರೀರಾಮ ಸೈಕಲ್ ಅಂಗಡಿ ನಡೆಸುತ್ತಿದ್ದ ಪರಮೇಶ್ವರ ಶೆಟ್ಟಿಗಾರ್ (79) ನಿಧನ ಹೊಂದಿದರು. ಚೆರುಗೋಳಿ ಶ್ರೀರಾಮ ನಿಲಯ ನಿವಾಸಿಯಾದ ಇವರು ಇತ್ತೀಚೆಗಿನಿಂದ ನಯಾಬಜಾರ್‌ನಲ್ಲಿ ಸೈಕಲ್ ಅಂಗಡಿ ಆರಂಭಿಸಿದ್ದು, ಕಾರವಲ್ ಏಜೆಂಟ್ ಕೂಡಾ ಆಗಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಮಹಾಲಕ್ಷ್ಮಿ, ಉಷಾಕುಮಾರಿ, ಚಂದ್ರಕಲಾ, ಜಯರಾಮ, ರಾಮಕೃಷ್ಣ, ಅಳಿಯಂದಿರಾದ ಜಯರಾಮ, …

ಬಿರುಕು ಬಿಟ್ಟು ಶೋಚನೀಯ ಸ್ಥಿತಿಯಲ್ಲಿರುವ ಪೈವಳಿಕೆ ವಿಲೇಜ್ ಕಚೇರಿ ಕಟ್ಟಡ: ದಾಖಲೆ ಪತ್ರ ಸಂರಕ್ಷಣೆಗೆ ಸಮಸ್ಯೆ

ಪೈವಳಿಕೆ: ಕಾಸರಗೋಡು ಜಿಲ್ಲೆಯೆಲ್ಲೆಡೆ ವಿಲೇಜ್ ಕಚೇರಿಗಳು ಅಭಿವೃದ್ದಿ ಪಥದತ್ತ ಸಾಗುತ್ತಿದ್ದರೂ ಪೈವಳಿಕೆ ವಿಲೇಜ್ ಕಚೇರಿ ಕಟ್ಟಡ ಬಿರುಕು ಬಿಟ್ಟು ಶೋಚನೀಯಾವಸ್ಥೆಯಲ್ಲಿದೆ. ಅಭಿವೃದ್ಧಿಗೊಳಿಸಲು ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸು ತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮÁಧಾನ ಉಂಟÁಗಿದೆ. ವರ್ಷಗಳ ಹಿಂದೆ ಅಧಿಕಾರಿಗಳು ತಲುಪಿ ಸ್ಮಾರ್ಟ್ ವಿಲೇಜ್ ಕಚೇರಿ ನಿರ್ಮಿಸಲು ಸ್ಥಳ ಪರಿಶೋಧನೆ ನಡೆಸಿದ್ದರು. ಆದರೆ ಇದುವರೆಗೂ ಯಾವುದೇ ಮಾಹಿತಿಯಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡ ಹೆದ್ದಾರಿ ಬದಿಯಲ್ಲಿರುವ ಈ ವಿಲೇಜ್ ಕಚೇರಿ 62 ಸೆಂಟ್ಸ್ ವಿಸ್ತೀರ್ಣವಾದ ಸ್ಥಳ ಹೊಂದಿದೆ. ಇಲ್ಲಿ ಈ ಹಿಂದೆ ಹಳೇಯದಾದ …

ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಉಬ್ರಂಗಳದಲ್ಲಿ ಸಾಹಿತ್ಯಾಮೃತ ಕಾರ್ಯಕ್ರಮ

ಉಬ್ರಂಗಳ: ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾ ನದಲ್ಲಿ ಪಾಟು ಉತ್ಸವ, ಭೂತಬಲಿ ಉತ್ಸವದ ಪ್ರಯುಕ್ತ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯಾಮೃತ ಸಾಂಸ್ಕೃ ತಿಕ ಕಾರ್ಯಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ಗಾನಾಮೃತ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಮಧುಲತಾ ಪುತ್ತೂರು, ವಿಶ್ವನಾಥ ಪುತ್ತಿಗೆ, ರತ್ನಾಕರ ಒಡಂಗಲ್ಲು, ಮುರಳಿ ನೀರ್ಚಾಲ್, ಈಶ್ವರ ಸೂರಂಬೈಲ್ ಮುಂತಾದ ಕಲಾವಿದರು ಹಾಡಿ ರಂಜಿಸಿದರು. ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ, ಪುಸ್ತಕಗಳನ್ನು …

ಉದ್ಯೋಗ ಖಾತರಿ ಯೋಜನೆ: ಕೇಂದ್ರ ನಿಲುವು ಪ್ರತಿಭಟಿಸಿ ಐಎನ್‌ಟಿಯುಸಿ ಮುಷ್ಕರ

ಕಾಸರಗೋಡು: ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿ ಸಲು, ಗಾಂಧೀಜಿಯ ಹೆಸರನ್ನು ಯೋ ಜನೆಯಿಂದ ತೆರವುಗೊಳಿಸಲಿರುವ  ಕೇಂದ್ರ ಸರಕಾರದ ಕ್ರಮದ ವಿರುದ್ಧ ಐಎನ್‌ಟಿಯುಸಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಪ್ರಧಾನ ಅಂಚೆ ಕಚೇರಿ ಎದುರಲ್ಲಿ ಮುಷ್ಕರ ಆಯೋಜಿಸಿತು. ಐಕ್ಯರಂಗದ ಜಿಲ್ಲಾ ಕಾರ್ಯದರ್ಶಿ ಎ. ಗೋ ವಿಂದನ್ ನಾಯರ್ ಉದ್ಘಾಟಿಸಿದರು. ವಿಧಾನಸಭಾ ಮಂಡಲ ಸಮಿತಿ ಅಧ್ಯಕ್ಷ ಸಿ.ಜಿ. ಟೋನಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ.ವಿ. ಕುಂಞಿರಾಮನ್, ಅರ್ಜುನನ್ ತಾಯಲಂಗಾಡಿ, ಪಿ.ಕೆ. ವಿಜಯನ್, ಶಿವಶಂಕರನ್, ಉಷಾ ಎಸ್, ವಿದ್ಯಾಶ್ರೀ, ಶಾಂತ …

ಮೀಂಜದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆ

ಮೀಂಜ: ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಮಂಜೇಶ್ವರ ಬ್ಲೋಕ್‌ನ ಕೆಲವು ವಾರ್ಡ್‌ಗಳಲ್ಲಿ ಬಿಜೆಪಿಯನ್ನು ಸೋಲಿಸಲು ಎಡ-ಬಲ ಒಕ್ಕೂಟಗಳು ಪ್ರತ್ಯಕ್ಷ ಹೊಂದಾಣಿಕೆ ನಡೆಸಿರುವುದಕ್ಕೆ ಪುರಾವೆಯಾಗಿದೆ ಈ ಬಾರಿಯ ಚುನಾವಣೆಯ ಫಲಿತಾಂಶವೆಂದು ಅಶ್ವಿನಿ ಆರೋಪಿಸಿದರು. ಕೇಂದ್ರ ಸರಕಾರದ ಜನಕ್ಷೇಮ ಯೋಜನೆಗಳ ಪ್ರಯೋಜನ ಗರಿಷ್ಠವಾಗಿ ಗ್ರಾಹಕರಿಗೆ ಲಭ್ಯಗೊಳಿಸಲು ಹೊಸತಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಅಶ್ವಿನಿ ಕರೆ ನೀಡಿದರು. ಮೀಜ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ …

ಕರಂದಕ್ಕಾಡ್ ಶಾಂತಿನಗರದ ಕೆ. ಶಾರದಾ ನಿಧನ

ಕಾಸರಗೋಡು: ಕರಂದಕ್ಕಾಡು ಶಾಂತಿ ನಗರ ಶಾರದಾಚಂದಂ ನಿವಾಸ್‌ನ ದಿ| ಚಂದ ಭಂಡಾರಿ ಯವರ ಪತ್ನಿ ಶಾರದಾ ಕೆ. (86) ನಿಧನ ಹೊಂದಿದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ  ಕೆ. ವಿಜಯ (ನಿವೃತ್ತ ಬ್ಯಾಂಕ್ ಉದ್ಯೋಗಿ), ಕೆ. ಕಸ್ತೂರಿ, ಕೆ. ನಿರ್ಮಲ (ಮಾಜಿ ನಗರಸಭಾ ಕೌನ್ಸಿಲರ್), ಕೆ. ಅಶೋಕ (ಕಾರವಲ್), ಅಳಿಯಂದಿ ರಾದ ರಾಧಾಕೃಷ್ಣ, ದಾಮೋದರ, ಸೊಸೆ ಉಮಾವತಿ, ಸಹೋದರಿಯರಾದ ಅನಸೂಯ, ಅಹಲ್ಯ  ಹಾಗೂ ಅಪಾರ ಬಂಧು-ಮಿತ್ರರನ್ನು …

ಎಂ.ಜಿ. ರಸ್ತೆಯ ಕಾಲುದಾರಿ ನಿರ್ಮಾಣಕ್ಕೆ ವಿಳಂಬಗತಿ: ಚೇಂಬರ್ ಆಫ್ ಕಾಮರ್ಸ್‌ನಿಂದ ಮುಖ್ಯಮಂತ್ರಿಗೆ ಮನವಿ

ಕಾಸರಗೋಡು: ಕಳೆದ ಐದ ವರ್ಷದ ಹಿಂದೆ ಆರಂಭಗೊಳಿಸಿದ ಕಾಸರಗೋಡು ಎಂ.ಜಿ ರಸ್ತೆಯ ಪಳ್ಳಂ ಟ್ರಾಫಿಕ್‌ನಿಂದ ಹೊಸ ಬಸ್ ನಿಲ್ದಾಣದವರೆಗಿನ ಇಕ್ಕಡೆಗಳಲ್ಲೂ ಇರುವ ಕಾಲುದಾರಿಯ ಕಾಮಗಾರಿ ಪೂರ್ತಿಯಾಗದಿರುವುದನ್ನು ಪ್ರತಿಭಟಿಸಿ ಕಾಸರಗೋಡು ಚೇಂಬರ್ ಆಫ್ ಕಾಮರ್ಸ್ ರಾಜ್ಯ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ದೂರು ನೀಡಿದೆ. ಜನಸಂದಣಿ ಇರುವ ಪೇಟೆಯಲ್ಲಿ ಜನರಿಗೆ ಭಯವಿಲ್ಲದೆ ನಡೆದು ಸಾಗಲು ಉಪಕಾರವಾಗುವಂತಹ ಕಾಲುದಾರಿ ಈಗ ಜನರಿಗೆ ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಕೆಲವು ಕಡೆಗಳಲ್ಲಿ ಸಂರಕ್ಷಣಾ ಬೇಲಿಯೊಂದಿಗೆ ಕಾಲುದಾರಿ ಇದ್ದರೂ ಇನ್ನು ಕೆಲವು ಕಡೆಗಳಲ್ಲಿ ಸಂರಕ್ಷಣಾ …

ಶಬರಿಮಲೆಯಿಂದ ಮರಳುವ ಭಕ್ತರಿಗೆ ಪೊಲೀಸರ ಮುನ್ನೆಚ್ಚರಿಕೆ

ತಿರುವನಂತಪುರ: ಶಬರಿಮಲೆ ಕ್ಷೇತ್ರ ದರ್ಶನ ನಡೆಸಿ ಮರಳುವ ಭಕ್ತರ ವಾಹನಗಳು ಅಪಘಾತಕ್ಕೀಡಾಗುತ್ತಿರು ವುದು ಇತ್ತೀಚೆಗಿನಿಂದ ಹೆಚ್ಚಿರುವ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಲು ಪೊಲೀಸ್ ಇಲಾಖೆ ಕೆಲವು ನಿರ್ದೇಶಗಳನ್ನು ಹೊರಡಿಸಿದೆ. ಶಬರಿಮಲೆಯಿಂದ ಹಿಂತಿರುಗಿದ ಬಳಿಕ ದೀರ್ಘದೂರ ಪ್ರಯಾಣ ಹಾಗೂ ವಿಶ್ರಾಂತಿ ಇಲ್ಲದೆ ವಾಹನ ಓಡಿಸುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ವಾಹನಗಳಲ್ಲಿ ಹೆಚ್ಚುವರಿ ಚಾಲಕರನ್ನು ಸೇರಿಸಿಕೊಳ್ಳಬೇಕು. ಅದೇ ರೀತಿ ಅಗತ್ಯದಷ್ಟು ನಿದ್ದೆ ಹಾಗೂ ವಿಶ್ರಾಂತಿ ಪಡೆದ ಬಳಿಕವೇ ಪ್ರಯಾಣ ಮುಂದುವರಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ಕಠಿಣ ವ್ರತಾನುಷ್ಠಾನಗಳನ್ನು ಪಾಲಿಸಿ, ದೀರ್ಘದೂರ ಕಾಲ್ನಡೆಯಾಗಿ …

ಕೆಆರ್‌ಡಿಎಸ್‌ಎ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ರೆವೆನ್ಯೂ ಡಿಪಾರ್ಟ್‌ಮೆಂಟ್ ಸ್ಟಾಫ್ ಅಸೋಸಿಯೇಶನ್ (ಕೆಆರ್‌ಡಿಎಸ್‌ಎ) ಜಿಲ್ಲಾ ಸಮ್ಮೇಳನ ವಿದ್ಯಾನಗರ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಸಭಾಂಗಣದಲ್ಲಿ ನಿನ್ನೆ ಆರಂಭಗೊಂಡಿದ್ದು, ಇಂದು ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾಪ್ತಿಗೊಳ್ಳಲಿದೆ. ನಿನ್ನೆ ನಡೆದ ಸಾಂಸ್ಕೃತಿಕ ಸಮ್ಮೇಳನವನ್ನು ಜೋ ಯಿಂಟ್ ಕೌನ್ಸಿಲ್ ರಾಜ್ಯ ಕಾರ್ಯ ದರ್ಶಿ ನರೇಶ್ ಕುಮಾರ್ ಕುಣಿಯೂರು ಉದ್ಘಾಟಿಸಿದರು. ರಾಜ್ಯ ಮಹಿಳಾ ಸಮಿತಿ ಸದಸ್ಯೆ ಆಮಿನ ಅಧ್ಯಕ್ಷತೆ ವಹಿಸಿದರು. ಪತ್ರಕರ್ತ ರವೀಂದ್ರನ್ ರಾವಣೀಶ್ವರಂ ಪ್ರಧಾನ ಭಾಷಣ ಮಾಡಿದರು. ಪ್ರಸಾದ್ ಕರುವಳಂ ಮಾತನಾಡಿದರು. …

ಅಪಘಾತಕ್ಕೀಡಾದ ಕಾರಿನಲ್ಲಿ ಎಂಡಿಎಂಎ ಪತ್ತೆ : ಪರಾರಿಯಾದ ಉಪ್ಪಳ ನಿವಾಸಿಗಾಗಿ ಶೋಧ; ಇನ್ನೋರ್ವ ಆಸ್ಪತ್ರೆಯಲ್ಲಿ

ಮಂಜೇಶ್ವರ: ತಲಪ್ಪಾಡಿಯಲ್ಲಿ ಅಪಘಾತಕ್ಕೀಡಾದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕವಸ್ತು ಪತ್ತೆಯಾಗಿದ್ದು ಈ ಸಂಬಂಧ ಪರಾರಿಯಾದ ಉಪ್ಪಳ ನಿವಾಸಿಗಾಗಿ ಉಳ್ಳಾಲ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ಉಪ್ಪಳ ನಿವಾಸಿಯಾದ ಸಿದ್ದಿಕ್ ಎಂಬಾತ ಪರಾರಿಯಾದ ವ್ಯಕ್ತಿಯೆಂದು ತಿಳಿದುಬಂದಿರುವುದಾಗಿ  ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಮೂಲದ ಆದಂ ಎಂಬಾತ  ಅಪಘಾತದಲ್ಲಿ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ೭.೩೦ರ ವೇಳೆ ತಲಪ್ಪಾಡಿಯಲ್ಲಿರುವ ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಟ್ಯಾಂಕರ್ ಲಾರಿಗೆ ಮಂಗಳೂರು ಭಾಗದಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಕಾರು ಢಿಕ್ಕಿ …