13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು

13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು ಕಾಸರಗೋಡು: 13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀ ಡಾದ ಘಟನೆಯಲ್ಲಿ ವ್ಯಕ್ತಿಪಲ್ಲಟ ನಡೆಸಿದ ಯುವತಿ ವಿರುದ್ಧ ಹೊಸದುರ್ಗ ಪೊಲೀ ಸರು ಸ್ವತಃ ಕೇಸು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ದೂರಿನಂತೆ ನ್ಯಾಯಾಲಯದಲ್ಲಿ ತಪ್ಪು ಹೇಳಿಕೆ ನೀಡಿರುವುದಕ್ಕೆ ಕಾಞಂಗಾಡ್, ವಡಗರಮುಖ್‌ನ ಹಂಸರ ಪತ್ನಿ ಪಿ. ಅನೀಸ (42)ರ ವಿರುದ್ಧ ಕೇಸು ದಾಖಲಿಸಲಾಗಿದೆ. 2024 ನವೆಂಬರ್ 17ರಂದು ಘಟನೆ …

ಸುಂಕ ವಿವಾದ ಮಧ್ಯೆ ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕ ಭೇಟಿ

ನವದೆಹಲಿ: ಅಮೆರಿಕಾದ ಜೊತೆ ಸುಂಕದ ಸಂಘರ್ಷ ನಡೆಯುತ್ತಿರುವ ಮಧ್ಯದಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಿನ ತಿಂಗಳು ಅಮೆರಿಕಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು  ಸಂಬಂಧಪಟ್ಟ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯಸಭೆ (ಯುಎನ್‌ಜಿಎ) ಮುಂದಿನ ತಿಂಗಳು ಅಮೆರಿಕಾದಲ್ಲಿ ನಡೆಯಲಿದ್ದು, ಅದರಲ್ಲಿ  ಪ್ರಧಾನಮಂತ್ರಿ ಮೋದಿ ಭಾಗವಹಿಸುವ ಸಾಧ್ಯತೆ ಇದೆ.  ಈ ಸಾಮಾನ್ಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೈನ್ ಅಧ್ಯಕ್ಷ ಝೆಲ್‌ನ್ಸ್ಕಿ ಸೇರಿದಂತೆ ಉನ್ನತ ಮಟ್ಟದ ನಾಯಕರು ಭಾಗವಹಿಸು ವರು. ಯುಎನ್‌ಜಿಎ ಶೃಂಗ ಸಭೆ ನ್ಯೂಯಾರ್ಕ್ ನಗರದಲ್ಲಿ ಸೆಪ್ಟಂಬರ್ …

ತಲಪ್ಪಾಡಿಯಲ್ಲಿ ಲಾರಿ-ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಮಂಜೇಶ್ವರ: ಕಾರು ಹಾಗೂ ಮೀನು ಸಾಗಾಟದ ಲಾರಿ ಢಿಕ್ಕಿ ಹೊಡೆದು ನಾಲ್ಕು ಮಂದಿ   ಗಾಯಗೊಂಡ ಘಟನೆ ಮೇಲಿನ ತಲಪ್ಪಾಡಿಯಲ್ಲಿ ಸಂಭವಿಸಿದೆ. ಇಂದು ಮುಂಜಾನೆ 1 ಗಂಟೆಗೆ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗುತ್ತಿದೆ.  ಇವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಗಾಯಗೊಂಡವರ ಕುರಿತು ಮಾಹಿತಿ ಲಭ್ಯವಾಗಿಲ್ಲ.   ಕಾಸರಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಮೀನಿನ ಲಾರಿ ಪರಸ್ಪರ ಢಿಕ್ಕಿ …

ಕಾರಿನಲ್ಲಿ ಸಾಗಿಸುತ್ತಿದ್ದ 215ಕಿಲೋ ತಂಬಾಕು ಉತ್ಪನ್ನ ವಶ: ಇಬ್ಬರ ಬಂಧನ

ಮಂಜೇಶ್ವರ: ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಅನಧಿಕೃ ತವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 215 ಕಿಲೋ ತಂಬಾಕು ಉತ್ಪನ್ನಗಳನ್ನು  ಮಂಜೇಶ್ವರದಲ್ಲಿ ಅಬಕಾರಿ ಅಧಿ ಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾರಿನಲ್ಲಿದ್ದ ವಡಗರ ತೆಕ್ಕಾಟಚಾಲಿ ನಿಯನ್ ಹೌಸ್‌ನ ಅಪ್ಸಲ್(31), ತಲಶ್ಶೇರಿ ಪಾಟಿಯಂ ವಲಿಯವೀಟಿಲ್‌ನ ಅಶ್ರಫ್ (40) ಎಂಬಿವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಹೊಸಂಗಡಿ ಬಳಿಯ ವಾಮಂಜೂರಿನಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ  ಇಂದು ಮುಂಜಾನೆ 5.30ರ ವೇಳೆ ನಡೆಸಿದ ಕಾರ್ಯಾಚ ರಣೆಯಲ್ಲಿ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮಂಗಳೂರು ಭಾಗದಿಂದ ಬರುತ್ತಿದ್ದ ಕಾರನ್ನು …

ಮನೆಯೊಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಯುವಕ ಮೃತ್ಯು

ಬೋವಿಕ್ಕಾನ: ಮನೆಯೊಳಗೆ ಬಿದ್ದ ಸ್ಥಿತಿಯಲ್ಲಿ ಯುವಕ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ.  ಇರಿಯಣ್ಣಿ ನಿವಾಸಿ ದಿ| ಮಹಾಲಿಂಗನ್ ಎಂಬವರ ಪುತ್ರ ಹರಿಹರನ್ ಪಿ (36) ಮೃತಪಟ್ಟ ಯುವಕನಾಗಿದ್ದಾನೆ. ಮನೆಯಲ್ಲಿ ಹರಿಹರನ್ ಹಾಗೂ ತಾಯಿ ಪದ್ಮಾವತಿ ವಾಸಿಸುತ್ತಿದ್ದರು. ನಿನ್ನೆ ತಾಯಿ  ಪಯ್ಯನ್ನೂರಿನಲ್ಲಿರುವ ಪುತ್ರಿ ಹರಿಣಾಕ್ಷಿಯ ಮನೆಗೆ ತೆರಳಿದ್ದರು. ನಿನ್ನೆ ರಾತ್ರಿ  ಹರಿಹರನ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ 10 ಗಂಟೆ ವೇಳೆ ನೆರೆಮನೆ ನಿವಾಸಿ ಅಲ್ಲಿಗೆ ಹೋದಾಗ ಹರಿಹರನ್ ಕೊಠಡಿಯೊಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ …

ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚಪ್ಪರ ನಿರ್ಮಾಣ ಕಾರ್ಮಿಕನಾದ ಯುವಕ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ದೇಳಿ ಕುನ್ನುಪಾರದ ದಾಮೋದರನ್ ಎಂಬವರ ಪುತ್ರ ಧನುಷ್ (21) ಮೃತ ಯುವಕನಾಗಿದ್ದಾರ. ಮೊನ್ನೆ ರಾತ್ರಿ ಊಟಮಾಡಿ ಮಲಗಿದ್ದ ಧನುಷ್ ನಿನ್ನೆ ಬೆಳಿಗ್ಗೆ ಎದ್ದಿರಲಿಲ್ಲ. ಇದರಿಂದ ಮನೆಯವರು ಎಬ್ಬಿಸಲು ಕೊಠಡಿಗೆ ಹೋದಾಗ ಧನುಷ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ಗೀತಾ, …

ನಿವೃತ್ತ ಎಇಒ ನಿಧನ

ಕುಂಬಳೆ: ಮೂಲತಃ ಇಡುಕ್ಕಿ ನೆಡುಕಂಡಂ ನಿವಾಸಿ ಕುಂಬಳೆ ಕಂಚಿಕಟ್ಟೆ ಶ್ರೀರಾಘದಲ್ಲಿ ವಾಸಿಸುತ್ತಿರುವ ನಿವೃತ್ತ ಎಇಒ ವಿಜಯನ್ ಕೆ.ಟಿ.(63) ನಿಧನ ಹೊಂದಿದರು. ಹಲವು ವರ್ಷಗಳ ಕಾಲ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಲೆಯಾಳ ಅಧ್ಯಾಪಕನಾಗಿದ್ದರು. ಮೃತರು ಪತ್ನಿ ಗೀತ ಕೆ.(ಸೂರಂಬೈಲು ಸರಕಾರಿ ಹೈಸ್ಕೂಲ್ ಅಧ್ಯಾಪಿಕೆ), ಮಕ್ಕಳಾದ ಅರ್ಜುನ್ ವಿಜಯ್, ತೇಜಸ್ ವಿಜಯ್, ಸಹೋದರ ಸುರೇಶ್, ಸಹೋದರಿಯರಾದ ಉಷಾ, ಶೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಹುಟ್ಟೂರಾದ ವಯನಾಡು ಕಾಟಿ ಕುಳಂಗೆ ಕೊಂಡೊಯ್ಯಲಾಗುವು ದೆಂದು ಸಂಬಂಧಿಕರು ತಿಳಿಸಿದ್ದಾರೆ.

ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ವಲಸೆ ಕಾರ್ಮಿಕ ಸಾವು

ಕಾಸರಗೋಡು: ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ. ಕರ್ನಾಟಕ ವಿಜಯನಗರ ಹಾವಿನಗರ ಗಲ್ಲಿಯ ಶಂಕರ್ ನಾಯ್ಕ- ಕಮಲ ದಂಪತಿ ಪುತ್ರ ವಿನೋದ್ (38) ಸಾವನ್ನಪ್ಪಿದ ಕಾರ್ಮಿಕ. ಕಳೆದ ಜನವರಿ ೯ರಂದು ವಿದ್ಯಾನಗರ ಐಟಿಐ ರಸ್ತೆ ಬಳಿ ಹೊಸದಾಗಿ ನಿರ್ಮಿಸುತ್ತಿದ್ದ ಕಟ್ಟಡವೊಂದರ ಮೂರನೇ ಅಂತಸ್ತಿನಲ್ಲಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ವಿನೋದ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೂ ನಂತರ ಬಳ್ಳಾರಿಯ ಆಸ್ಪತ್ರೆಗೆ  ದಾಖಲಿಸಿ ಉನ್ನತ ಮಟ್ಟದ …

19ರ ಯುವತಿ ನಾಪತ್ತೆ

ಕಾಸರಗೋಡು: ಮನೆಯೊಳಗೆ ನಿದ್ರಿಸುತ್ತಿದ್ದ ಯುವತಿ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಚೀಮೇನಿ ಪೋತಕಂಡಂ ನಂಙಾರತ್ ಹೌಸ್ ನಿವಾಸಿ ಕರೀಂರ ಪುತ್ರಿ ಶರಫು ನಾಜಿಯ (19) ನಾಪತ್ತೆಯಾದ ಬಗ್ಗೆ ದೂರ ಲಾಗಿದೆ. ನಿನ್ನೆ ರಾತ್ರಿ 12 ಗಂಟೆಯ ಬಳಿಕ ಯುವತಿ ನಾಪತ್ತೆಯಾಗಿ ರಬೇಕೆಂದು ಶಂಕಿಸಲಾಗಿದೆ. ಚೀಮೇನಿ ಪೊಲೀಸರು ಕೇಸು ನೋಂದಾಯಿಸಿ ದ್ದಾರೆ. ಯುವತಿಯ ಪತ್ತೆಗೆ ಯತ್ನ ನಡೆಸಲಾಗುತ್ತಿದೆ. ಇದೇ ವೇಳೆ ಈಕೆ ಯುವಕನೊಂದಿಗೆ ಪತ್ತೆಹಚ್ಚಿರುವುದಾಗಿ ಪೊಲೀಸರು ಮಾಹಿತಿ ನೀಡುತ್ತಿದ್ದು, ಇವರಿಬ್ಬರನ್ನು ಠಾಣೆಗೆ ಹಾಜರಾಗಲು ನಿರ್ದೇಶಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಸುರೇಶ್‌ಗೋಪಿ ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದ ದುಷ್ಕರ್ಮಿಗಳು: ಬಿಜೆಪಿಯಿಂದ ವ್ಯಾಪಕ ಪ್ರತಿಭಟನೆ

ತೃಶೂರು: ಕೇಂದ್ರ ಸಚಿವ ಸುರೇಶ್ ಗೋಪಿಯವರ ಕಚೇರಿಯ ನಾಮಫಲ ಕಕ್ಕೆ ದುಷ್ಕರ್ಮಿಗಳು ಕರಿ ಆಯಿಲ್ ಸುರಿದು ವಿಕೃತಗೊಳಿ ಸಿದ್ದಾರೆ. ಇದನ್ನು ಪ್ರತಿಭಟಿಸಿ ಬಿಜೆಪಿ ಇಂದು ರಾಜ್ಯ ವ್ಯಾಪಕವಾಗಿ ಪ್ರತಿಭಟನೆ ಆರಂಭಿಸಿದೆ. ತೃಶೂರಿನ ಚೇರೂರ್‌ನಲ್ಲಿ ಸುರೇಶ್‌ಗೋಪಿಯ ಎಂ.ಪಿ ಕಚೇರಿ ಇದ್ದು ಅದರ ನಾಮಫಲಕಕ್ಕೆ ನಿನ್ನೆ ಸಂಜೆ ಕರಿ ಆಯಿಲ್ ಪ್ರಯೋಗ ನಡೆಸಲಾಗಿದೆ. ಇದು ಸಿಪಿಎಂ ನಡೆಸಿದ ದುಷ್ಕೃತ್ಯವಾಗಿದೆಯೆಂದು ಬಿಜೆಪಿ ಆರೋಪಿಸಿದೆ. ಅದರ ವಿರುದ್ಧ ತೃಶೂರಿನಾದ್ಯಂತ ಭಾರೀ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ಮೆರವಣಿಗೆ ಘರ್ಷಣೆಗೂ ದಾರಿ ಮಾಡಿಕೊಟ್ಟಿತು.  ಅದರಲ್ಲಿ ಬಿಜೆಪಿ …