ಮನೆ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಬಿದ್ದು ಯುವಕ ಮೃತ್ಯು

ಕಾಸರಗೋಡು: ಹಳೆ ಮನೆಯನ್ನು ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ದಾರುಣ ಘಟನೆ ಕೂಡ್ಲು ಬಳಿ ನಡೆದಿದೆ. ಮೂಲತಃ ಪಾಲಕ್ಕಾಡ್ ಕೊಲ್ಲಂಕೋಡ್ ಪಯಲೂರ್ ಮುಖ್ ತೆಕತ್ತರ ನಿವಾಸಿ ಹಾಗೂ ಈಗ ಪೆರಿಯದ ಕುಣಿಯಾದಲ್ಲಿ ವಾಸಿಸುತ್ತಿರುವ ವಿ.ವಿ. ವಿಶಾಖ್ ಚಂದ್ರ (35) ಸಾವನ್ನಪ್ಪಿದ ದುರ್ದೈವಿ. ಕೂಡ್ಲು ಭಗವತಿನಗರದಲ್ಲಿರುವ ಸಂಬಂಧಿಕರೊಬ್ಬರ ಹಳೆ ಮನೆಯನ್ನು ವಿಶಾಖ್ ಸೇರಿ ಇತರ ಕಾರ್ಮಿಕರು ನಿನ್ನೆ ಮಧ್ಯಾಹ್ನ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದು ವಿಶಾಖ್‌ರ ದೇಹದ ಮೇಲೆ ಕುಸಿದು ಬಿದ್ದಿದೆ. ಇದರಿಂದ …

ರಿಕ್ಷಾ ಚಾಲಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮಧೂರು: ಆಟೋರಿಕ್ಷಾ ಚಾಲಕ ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧೂರು ಬೈನಡ್ಕದ ದಿ| ಕುಂಞಿರಾಮ ಮಣಿಯಾಣಿ -ಸುಶೀಲ ದಂಪತಿ ಪುತ್ರ ಚಂದ್ರಶೇಖರ ಮಣಿಯಾಣಿ (51) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮನೆ ಪಕ್ಕದ ಮರವೊಂದರ ರೆಂಬೆಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ  ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪ ಡಿಸಲಾಯಿತು. ಮಧೂರು ದೇವಸ್ಥಾನ ಪರಿಸರದ ಆಟೋರಿಕ್ಷಾ ಸ್ಟಾಂಡ್‌ನಲ್ಲಿ ಚಂದ್ರ ಶೇಖರ ಮಣಿಯಾಣಿ ಆಟೋರಿಕ್ಷಾ ಚಾಲಕನಾಗಿ …

ಕರ್ನಾಟಕ ಮದ್ಯ ಸಹಿತ ಸೆರೆ

ಕುಂಬಳೆ:  ಕರ್ನಾಟಕ ಮದ್ಯ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಪಿ. ಅಭಿಷೇಕ್ (31) ಸೆರೆಗೀಡಾದ ಯುವಕ. ಮೊನ್ನೆ ಸಂಜೆ ಕುಬಣೂರು ಎಟಿಎಸ್ ಗ್ರೌಂಡ್ ಸಮೀಪ ನಿಂತಿದ್ದ ಅಭಿಷೇಕ್ ನನ್ನು ಕುಂಬಳೆ ಪೊಲೀಸರು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ೧೮೦ ಮಿಲ್ಲಿ ಲೀಟರ್‌ನ 24 ಟೆಟ್ರಾ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿದೆ. ಈತ ಕರ್ನಾಟಕದಿಂದ ಮದ್ಯ ತಂದು ಮಾರಾಟ ನಡೆಸುವ ತಂಡದ ಸದಸ್ಯನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ …

ಅಸೌಖ್ಯ: ಯುವತಿ ನಿಧನ

ಉಪ್ಪಳ : ಕುಂಬಳೆ ಕಂಚಿಕಟ್ಟೆ ನಿವಾಸಿ ಪ್ರದೀಪ್‌ರ ಪತ್ನಿ ವೈಶಾಲಿ (33) ನಿನ್ನೆ ಮುಂಜಾನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಬಂದ್ಯೋಡು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ನಿಧನ ಸಂಭವಿಸಿದೆ. ಮೃತರು ತಂದೆ ಪ್ರೇಮ್ ಕುಮಾರ್ ಐಲ (ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ), ತಾಯಿ ಮೋಹಿನಿ, ಸಹೋದರ ವೈಶಾಕ್ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ನಿನ್ನೆ ಸಂಜೆ ಐಲ ಮನೆ ಪರಿಸರದಲ್ಲಿ ನಡೆಯಿತು. ಮನೆಗೆ ಸಂಘ ಪರಿ ವಾರದ …

ಶೋಚನೀಯಾವಸ್ಥೆಯಿಂದ ಸಂಚಾರ ಸಮಸ್ಯೆ: ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿ ಚತುಷ್ಪಥಗೊಳಿಸಲು ಹೆಚ್ಚಿದ ಬೇಡಿಕೆ

ಮುಳ್ಳೇರಿಯ: ಕೇರಳ ಕರ್ನಾಟಕ ರಾಜ್ಯಗಳ ಪ್ರಧಾನ ನಗರ ಹಾಗೂ ಪ್ರವಾಸೋಧ್ಯಮ ವಲಯವನ್ನು ಜೋಡಿಸುವ ಚೆರ್ಕಳ- ಜಾಲ್ಸೂರು ರಾಜ್ಯ ಹೆದ್ದಾರಿ ೫೫ರಲ್ಲಿ ವಾಹನ ದಟ್ಟಣೆ ಹಾಗೂ ದುರಸ್ತಿ ಕೆಲಸಗಳ ಕೊರತೆಯಿಂದಾಗಿ ಹೆದ್ದಾರಿ ಶೋಚನೀಯಾವಸ್ಥೆಗೆ ತಲುಪಿದೆ ಎಂದು ಪ್ರಯಾಣಿಕರು ದೂರುತ್ತಾರೆ. ಅಂತಾರಾಜ್ಯ ಪ್ರಾಮುಖ್ಯತೆ ಇರುವ ಈ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಡೆದು ಹಲವು ಕಾಲ ಕಳೆದಿರುವುದಾಗಿಯೂ ದೂರಲಾಗಿದೆ. ಕೇರಳ – ಕರ್ನಾಟಕ ರಾಜ್ಯಗಳ ಪ್ರಧಾನ ನಗರಗಳನ್ನು ಹಾಗೂ ಪ್ರವಾಸೋಧ್ಯಮ ವಲಯಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನದಟ್ಟಣೆ ಹಾಗೂ ಸರಕು ವಾಹನಗಳ …

ಆಹಾರ ಗಂಟಲಲ್ಲಿ ಸಿಲುಕಿ ಬಾಲಕ ಮೃತ್ಯು

ಕಾಸರಗೋಡು: ಆಹಾರ ಗಂಟಲಲ್ಲಿ ಸಿಲುಕಿ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಡಂಕುಳಿ ನಿವಾಸಿ ಸಿದ್ದಿಕ್ ಸಖಾಫಿಯವರ  ಪುತ್ರ ಇಬ್ರಾಹಿಂ ಬಾತಿಷ (9) ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನೆ ಸಂಜೆ ಮನೆಯಲ್ಲಿ ಆಹಾರ ಸೇವಿಸತ್ತಿದ್ದಾಗ ಗಂಟಲಲ್ಲಿ ಸಿಲುಕಿ ಬಾಲಕನಿಗೆ ಉಸಿರಾಟ ಸಮಸ್ಯೆ ಉಂಟಾಗಿತ್ತೆನ್ನ ಲಾಗಿದೆ. ಇದು ಗಮನಕ್ಕೆ ಬಂದ ತಕ್ಷಣ ಮನೆಯವರು ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇಬ್ರಾಹಿಂ ಬಾತಿಷ ಬಡ್ಸ್ ಶಾಲೆ ವಿದ್ಯಾರ್ಥಿಯಾಗಿದ್ದಾನೆ.

ಕುಂಬಳೆ ದೇವಿನಗದಲ್ಲಿ ಹಾನಿಗೊಂಡ ಸರ್ವೀಸ್ ರಸ್ತೆ: ಅಪಘಾತ ನಿತ್ಯ ಘಟನೆ

ಕುಂಬಳೆ: ಇಲ್ಲಿನ ದೇವಿನಗರ ದಲ್ಲಿ ಸರ್ವೀಸ್ ರಸ್ತೆಗಳು ನಾಶಗೊಂ ಡಿವೆ. ಇದರಿಂದಾಗಿ ರಸ್ತೆ ಅಪಘಾತ ಗಳು ಹೆಚ್ಚುತ್ತಿವೆ. ಅವೈಜ್ಞಾನಿಕ ನಿರ್ಮಾಣವೇ ಹಾನಿಗೊಳ್ಳಲು ಕಾರಣವೆಂದು ಸ್ಥಳೀಯರು ಆರೋ ಪಿಸುತ್ತಾರೆ. ಒಂದು ವಾರದ ಹಿಂದೆ ದೇವಿನಗರದಲ್ಲಿ ಸರ್ವೀಸ್ ರಸ್ತೆಯ ಚರಂಡಿಯ ಮೇಲೆ ಹಾಸಿದ್ದ ಸ್ಲ್ಯಾಬ್ ಹಾನಿಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ತಿಳಿದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇಲ್ಲಿ ಪ್ಲಾಸ್ಟಿಕ್ ಬಾರಿಕೇಡ್ ಸ್ಥಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆಂದು ದೂರಲಾಗಿದೆ. ಇದೇ ವೇಳೆ ಹಾನಿಗೊಂಡ ರಸ್ತೆಯ ದುರಸ್ತಿ …

ಕುಂಬಳೆ ಪ್ರೆಸ್ ಫಾರಂ: ಸೋಶ್ಯಲ್ ಮೀಡಿಯಾ ಉದ್ಘಾಟನೆ ಇಂದು

 ಕುಂಬಳೆ: ಕುಂಬಳೆ ಪ್ರೆಸ್ ಫಾರಂ ಡಿಜಿಟಲೈಸೇಶನ್ ಅಂಗವಾಗಿ ಆರಂಭಿಸುವ ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಪೇಜ್‌ಗಳ ಉದ್ಘಾಟನೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಇಂದು ಸಂಜೆ ೪ಕ್ಕೆ ಕುಂಬಳೆ  ಪ್ರೆಸ್‌ಫಾರಂ ಹಾಲ್‌ನಲ್ಲಿ ನಡೆಯಲಿದೆ. ಶಾಸಕ ಎಕೆಎಂ ಅಶ್ರಫ್, ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಮುಳುಗುತಜ್ಞ ಈಶ್ವರ ಮಲ್ಪೆ, ಕಾಸರಗೋಡು ಬ್ಲೋಕ್ ಪಂಚಾಯತ್  ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಕುಂಬಳೆ ಸಿಐ ಅನೂಪ್‌ಕೃಷ್ಣ, ಉದ್ಯಮಿ ಡಾ. ಎಂ.ಎಂ. ಇಸ್ಸುದ್ದೀನ್ ಎಂಬಿವರನ್ನು ಗೌರವಿಸಲಾಗುವುದು.

ಗೋ ಸಮ್ಮಾನ್ ಆವಾಹನ್ ಅಭಿಯಾನಕ್ಕೆ ಕುಂಬ್ಡಾಜೆಯಲ್ಲಿ ಚಾಲನೆ

ಮಾರ್ಪನಡ್ಕ: ಭಾರತೀಯ ಸ್ಥಳೀಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವವನ್ನು ಒದಗಿಸುವಂತೆ ಆಗ್ರಹಿಸಿ, ದೇಶಾದ್ಯಂತ ೪೦ ಕೋಟಿ ಸಹಿಗಳನ್ನು ಸಂಗ್ರಹಿಸಿ ಭಾರತದ ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಗೋ ಸಮ್ಮಾನ್ ಆವಾಹನ್ ಅಭಿಯಾನ’ಕ್ಕೆ ಕುಂಬ್ದಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು.ಅಕ್ಟೋಬರ್ ೨೭ರಂದು ರಾಷ್ಟ್ರಪತಿಗೆ ಸಲ್ಲಿಸಲಿರುವ ಈ ಮನವಿಗೆ ನಿವೃತ್ತ ಜಿಲ್ಲಾ ಮೆಡಿಕಲ್ ಮಾಸ್ ಆಫೀಸರ್, ಕುಂಬ್ದಾಜೆ ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷ ರಾಮಚಂದ್ರ ಪದ್ಮಾರ್ ಮಾರ್ಪನಡ್ಕ ಪ್ರಥಮ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಭಾರತೀಯ ಸಂಸ್ಕೃತಿ, ಕೃಷಿ …

ಅಸೌಖ್ಯ: ನಿವೃತ್ತ ಮುಖ್ಯೋಪಾಧ್ಯಾಯಿನಿ ನಿಧನ

ಕಾಸರಗೋಡು: ತಳಂಗರೆ ಪಳ್ಳಿಕ್ಕಲ್ ಎಂ.ಐ.ಎ.ಎಲ್.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವಿದ್ಯಾನಗರ ನಿವಾಸಿ ಕೆ.ವಿ. ಆನಂದವಲ್ಲಿ (54) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ಶಾಲೆಯಿಂದ ಸ್ವತಃ ರಜೆ ಪಡೆದು ನಿವೃತ್ತರಾಗಿದ್ದರು. ೩೦ ವರ್ಷಕ್ಕೂ ಹೆಚ್ಚು ಕಾಲ ಈ ಶಾಲೆಯಲ್ಲಿ ಸೇವೆಗೈದಿದ್ದರು. ಮೃತರು ಪತಿ ದಾಮೋದರನ್ (ನಿವೃತ್ತ ಡಿಡಿಇ ಸುಪರಿಂಟೆಂಡೆಂಟ್), ಪುತ್ರ ಅಮರನಾಥ್ (ಅಸಿಸ್ಟೆಂಟ್ ಇಂಜಿನಿಯರ್, ಪುತ್ತಿಗೆ ಪಂಚಾಯತ್), ಸಹೋದರ- ಸಹೋದರಿಯರಾದ ಅನಿಲ್ ಕುಮಾರ್, ಶ್ಯಾಮಳವಲ್ಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.