ರಬ್ಬರ್ ಶೀಟ್ ಯಂತ್ರ ಕಳವು: ಓರ್ವ ಸೆರೆ

ಬದಿಯಡ್ಕ: ಶೇಣಿ ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವುಗೈದ ಪ್ರಕರಣದಲ್ಲಿ ಓರ್ವ ಸೆರೆಗೀಡಾಗಿದ್ದಾನೆ. ಪುತ್ತಿಗೆ ಬಾಡೂರುಪಳ್ಳ ಕೋಟ ನಿವಾಸಿ ಮುಹಮ್ಮದ್ ಇಶಾಕ್ (19) ಎಂಬಾತನನ್ನು ಬದಿಯಡ್ಕ ಇನ್‌ಸ್ಪೆಕ್ಟರ್ ಆರ್.ಪಿ. ಅನೂಪ್ ಕೃಷ್ಣನ್ ನೇತೃತ್ವದಲ್ಲಿ ಬಂಧಿಸಲಾ ಗಿದೆ. ಪ್ರಾಯಪೂರ್ತಿ ಯಾಗದ ಇಬ್ಬರ ಸಹಾಯದೊಂದಿಗೆ ಈತ 600 ಕಿಲೋ ತೂಕದ ರಬ್ಬರ್ ರೋಲರ್ ಯಂತ್ರವನ್ನು ಕಳವುಗೈದಿ ರುವುದಾಗಿ ದೂರಲಾಗಿದೆ. ಕನ್ನಾಟಿಕಾ ನದ ಸೋಜನ್ ಜೋರ್ಜ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜೂನ್ 22ರಿಂದ   28ರ ಮಧ್ಯೆಗಿನ ದಿನಗಳಲ್ಲಿ  …

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ : ರ‍್ಯಾಗಿಂಗ್: 13 ವಿದ್ಯಾರ್ಥಿಗಳ ಅಮಾನತು

ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ  ಪದವಿ ವಿದ್ಯಾರ್ಥಿಯನ್ನು   ರ‍್ಯಾಗಿಂಗ್ ಗೊಳಪಡಿಸಿದ ಆರೋಪದಂತೆ  ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಾದ 13 ಮಂದಿಯನ್ನು ತನಿಖಾ ವಿಧೇಯ ಗೊಳಿಸಿ ಪ್ರಾಂಶುಪಾಲ ವಿ.ಎಸ್. ಅನಿಲ್ ಕುಮಾರ್ ಅಮಾನತುಮಾ ಡಿದ್ದಾರೆ.  ಜುಲೈ 13ರಂದು ಕಾಲೇಜು ಕ್ಯಾಂಪಸ್‌ನಲ್ಲಿ ತಂಡವೊಂದು ಪ್ರಥಮವರ್ಷ ಪದವಿ ವಿದ್ಯಾರ್ಥಿಯನ್ನು  ತಡೆದು ನಿಲ್ಲಿಸಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿ ರಕ್ಷಕರಲ್ಲಿ ತಿಳಿಸಿದ್ದು, ಅನಂತರ ಕಾಲೇಜಿನ ಪ್ರಾಂಶುಪಾ ಲರಿಗೆ ದೂರು ನೀಡಲಾಗಿತ್ತು. ಕಾಲೇಜು ಅಧಿಕಾರಿಗಳು …

ವಾಟ್ಸಪ್ ಮೂಲಕ ಯುವತಿಗೆ ಕಿರುಕುಳ : ಕುಂಜತ್ತೂರು ನಿವಾಸಿ ವಿರುದ್ಧ ಕೇಸು

ಮಂಜೇಶ್ವರ: ವಾಟ್ಸಾಪ್ ಮೂಲಕ ವಿವಾಹಿತ ಯುವತಿಗೆ ಕಿರುಕುಳ ನೀಡಿ  ಆಕೆಯನ್ನು  ಅವಮಾನಗೈಯ್ಯಲೆತ್ನಿಸಿರುವುದಾಗಿ ನೀಡಿದ ದೂರಿನಂತೆ  ಯುವಕ ನೋರ್ವನ ವಿರುದ್ಧ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವರ್ಕಾಡಿ ಪಾವೂರು ನಿವಾಸಿಯಾದ 31ರ ಹರೆಯದ ಯುವತಿ ದೂರು ನೀಡಿದ್ದಾಳೆ.  ಕುಂಜತ್ತೂರು ನಿವಾಸಿ ಇಬ್ರಾಹಿಂ ಖಲೀಲ್  ಎಂಬಾತ     ಮೇ 29ರಿಂದ ಜೂನ್ 30ರ ವರೆಗಿನ ಕಾಲಾವಧಿಯಲ್ಲಿ ಅವಮಾನಗೈಯ್ಯುವ ರೀತಿಯಲ್ಲಿ ವಾಟ್ಸಪ್‌ನಲ್ಲಿ ಪ್ರಚಾರಗೈದಿರುವುದಾಗಿ   ಯುವತಿ ಆರೋಪಿಸಿದ್ದಾಳೆ. ಸೈಬರ್ ಸೆಲ್ ಎಸ್‌ಐ ಎಂ. ಸವ್ಯಸಾಚಿ ಯುವತಿಯ ಹೇಳಿಕೆ ದಾಖಲಿಸಿ ಕೊಂಡ ಬಳಿಕ ಯುವಕನ …

ರಸ್ತೆಗೆ ಅಡ್ಡಬಂದ ಕಾಡುಕೋಣಗಳು: ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದು ಪಲ್ಟಿ

ಕಾಸರಗೋಡು: ಕಾಡುಕೋಣಗಳು ರಸ್ತೆಗಡ್ಡ ಬಂದ ಹಿನೆಲೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದು ಮಗುಚಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.3೦ರ ವೇಳೆ ಬೋವಿಕ್ಕಾನ- ಕಾನತ್ತೂರು ರಸ್ತೆಯ ಇರಿಯಣ್ಣಿ ಫಾರೆಸ್ಟ್ ಕಚೇರಿ ಸಮೀಪ ಅಪಘಾತ ಸಂಭವಿಸಿದೆ. ಎರಿಂಞಿಪುಳ ನಿವಾಸಿಯ ಕಾರು ಅಪಘಾತಕ್ಕೆ ತುತ್ತಾಗಿತ್ತು. ಬೋವಿಕ್ಕಾನ ಭಾಗಕ್ಕೆ ಬರುತ್ತಿದ್ದ ಮಧ್ಯೆ ಕಾಡುಕೋಣಗಳು ರಸ್ತೆಗೆ ಅಡ್ಡ ಓಡಿತ್ತೆನ್ನಲಾಗಿದೆ. ಇವುಗಳಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ …

ಪ್ರೀತಿ ನಿರಾಕರಣೆ: ನಡುಬೀದಿಯಲ್ಲೇ ಓಡಿಸಿ ಕಡಿದು ಕೊಲೆಗೈದ ಯುವಕ

ಮಂಗಳೂರು: ಆಕೆ ತನಗೆ ಸಿಗಬೇಕು, ತನಗಲ್ಲದಿದ್ದರೆ ಬೇರೊಬ್ಬನೊಂದಿಗೆ ಆಕೆಯೂ ಬದುಕಿರಬಾರದು ಎನ್ನುವ ಕಪಟ ಪ್ರೀತಿಗೆ ಅಮಾಯಕ ಯುವತಿ ಬಲಿಯಾಗಿದ್ದಾಳೆ. ಬಂಟ್ವಾಳ ಬಿ ಸಿ ರೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಸಂಜೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಕಕ್ಕೆಪದವು ಸಮೀಪದ ಉಳಿ ಗ್ರಾಮದ ಕೋಡಂಗೆ ನಿವಾಸಿ ಬಾಳಪ್ಪ ಗೌಡರ ಪುತ್ರಿ ಲಾವಣ್ಯ (೨೧) ಎಂಬ ಯುವತಿ ಎರಡು ತಿಂಗಳ ಹಿಂದೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಈಕೆಯ ಸಂಬಂಧಿಕ ೨೨ ವರ್ಷದ ಚೇತನ್ …

ರಸ್ತೆಗಳ ದುಸ್ಥಿತಿ, ತ್ಯಾಜ್ಯ ಸಮಸ್ಯೆಗಳ ಬಗ್ಗೆ ಕೌನ್ಸಿಲರ್‌ಗಳ ಆರೋಪ: ಕಾಸರಗೋಡು ನಗರಸಭೆ ಕೌನ್ಸಿಲ್ ಸಭೆಯಲ್ಲಿ ತೀವ್ರ ಟೀಕೆ

ಕಾಸರಗೋಡು: ನಗರ ವ್ಯಾಪ್ತಿಯಲ್ಲಿ ಹಾನಿಗೊಂಡ ರಸ್ತೆಗಳನ್ನು ಸೂಕ್ತ ಸಮಯದಲ್ಲಿ ದುರಸ್ತಿಗೊಳಿಸದಿರುವುದು, ನಗರದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭಾ ಕೌನ್ಸಿಲ್ ಸಭೆಯಲ್ಲಿ ಆಡಳಿತ ಸಮಿತಿ ವಿರುದ್ಧ ಕೌನ್ಸಿಲರ್‌ಗಳು ತೀವ್ರ ಟೀಕೆ ವ್ಯಕ್ತಪಡಿಸಿದರು. ರಸ್ತೆಗಳು ಹಾನಿಗೊಂಡು ಹೊಂಡಗಳಾಗುತ್ತಿವೆ ಎಂದು ಗುರುಪ್ರಸಾದ್ ಪ್ರಭು ಆರೋಪಿಸಿದ್ದಾರೆ. ಜಲಪ್ರಾಧಿಕಾರ ಹಾಗೂ ಕೆಎಸ್‌ಇಬಿ ತಮ್ಮ ಕೆಲಸಗಳಿಗಾಗಿ ರಸ್ತೆಗಳನ್ನು ಹೊಂಡ ಮಾಡಿದ ಬಳಿಕ ಅದನ್ನು ಪೂರ್ವಸ್ಥಿತಿಯಂತೆ ಮಾಡದಿರು ವುದು ನಗರದಲ್ಲಿ ಪ್ರಯಾಣ ಸಂಕಷ್ಟ ಸೃಷ್ಟಿಸುತ್ತಿರುವುದಾಗಿ ಅವರು ಆರೋಪಿಸಿ ದರು. ಮಳೆಗಾಲ ತೀವ್ರಗೊಂಡಾಗ ರಸ್ತೆಗಳ ಸಣ್ಣ ಹೊಂಡಗಳು …

ಬೀರಾನ್ ಬಂಗರ ನಿಧನ

ಕಾಸರಗೋಡು: ದೀರ್ಘಕಾಲ ಬಹರೈನ್‌ನಲ್ಲಿದ್ದ ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಹಾಗೂ ವಿದ್ಯಾನಗರ ಉದಯಗಿರಿ ಮಾಹಿನ್ ನಗರದಲ್ಲಿ ವಾಸಿಸುತ್ತಿದ್ದ ಬೀರಾನ್ ಬಂಗರ (85) ನಿಧನ ಹೊಂದಿದರು. ಮೃತರು ಪತ್ನಿ ಆಯಿಷ, ಮಕ್ಕಳಾದ ಶೌಕತ್ತಲಿ, ಸಹದಿಯ, ನಾದಿಯ, ತಸ್ನೀಂ, ಅಳಿಯಂದಿರಾದ ಅಸೀಸ್ ಪಾರೆಕಟ್ಟೆ, ಇಕ್ಬಾಲ್ ಬೇಕಲ, ಅರಾಫತ್, ಸೊಸೆ ರಸೀನ ಕೊಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಎಂ.ಎ. ಅಬ್ದುಲ್ಲ ನಿಧನ

ಮೊಗ್ರಾಲ್: ಹಿರಿಯ ಕೊಲ್ಲಿ ಉದ್ಯೋಗಿ, ಕಡಪ್ಪುರ ಕಿಳರ್‌ಮಸ್ಜಿದ್ ಸಮಿತಿ ಉಪಾಧ್ಯಕ್ಷರಾಗಿದ್ದ ಮೊಗ್ರಾಲ್ ನಾಂಗಿ ಕಡಪ್ಪುರ ನಿವಾಸಿ ಎಂ.ಎ. ಅಬ್ದುಲ್ಲ (75) ನಿಧನ ಹೊಂದಿದರು. ಮೃತರು ಪತ್ನಿ ನಫೀಸ ಪಳ್ಳಿಕ್ಕೆರೆ, ಪುತ್ರಿ ಕುಂಞಿಬಿ, ಅಳಿಯ ಹಮೀದ್ ಮೊಗ್ರಾಲ್‌ಪುತ್ತೂರು, ಸೊಸೆ ಶಹನಾಸ್ ಮಂಜೇಶ್ವರ, ಸಹೋದರರಾದ ಎಂ.ಎ ಕುಂಞಂಹಮ್ಮದ್, ಎಂ.ಎ. ಇಬ್ರಾಹಿಂ, ಎಂ.ಎ. ಮೂಸ, ಸಹೋದರಿ ಬೀಫಾತಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಮುಜೀಬ್ ರಹ್ಮಾನ್ ಈ ಹಿಂದೆ ನಿಧನ ಹೊಂದಿದ್ದಾರೆ.

 ಕೂಲಿ ಕಾರ್ಮಿಕ ನಿಧನ

ಪೈವಳಿಕೆ: ಚಿಪ್ಪಾರು ತಜಿಪ ನಿವಾಸಿ ಕೂಲಿ ಕಾರ್ಮಿಕ ನಾರಾಯಣ (6೦) ನಿಧನ ಹೊಂದಿದರು. ಅಸೌಖ್ಯದಿಂದ ಕಾಸರಗೊಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತೆ್ಸಯಲ್ಲಿದ್ದರು. ದಿ| ಕಲ್ಲಾಳ-ದಿ| ತುಕ್ರು ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಕಮಲ, ಮಕ್ಕಳಾದ ಪದ್ಮನಾಭ, ಕಿರಣ್, ಅಜಿತ್, ಕುಶಲ, ಚೈತ್ರ, ಅಳಿಯ ಪ್ರಶಾಂತ್, ಸಹೋದರ ತುಕ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಸಹೋದರಿ ಸೀತಾ, ಸಹೋ ದರ ಐತ್ತ ಈ ಹಿಂದೆ ನಿಧನ ಹೊಂದಿ ದ್ದಾರೆ. ಮನೆಗೆ ವಾರ್ಡ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ …

ಶಸ್ತ್ರ ಚಿಕಿತ್ಸೆ ಮಧ್ಯೆ ಮೃತಪಟ್ಟ ಬಾಲಕನ ಮೃತದೇಹ: ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂಗೆ ;ಆಸ್ಪತ್ರೆಗೆ ಡಿವೈಎಫ್‌ಐ ಮಾರ್ಚ್

ಕಾಸರಗೋಡು: ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮೃತಪಟ್ಟ ನಾಲ್ಕನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು.  ಬೇಡಗಂ ತಲೇಕುನ್ನು ನಿವಾಸಿ ಅಶ್ರಫ್ ಸಖಾಫಿ ಎಂಬವರ ಪುತ್ರ  ಇಯಾಸ್ (9)ನ ಮೃತದೇಹವನ್ನು ಇಂದು ಬೆಳಿಗ್ಗೆ ಪರಿಯಾರಂಗೆ ಕೊಂಡೊಯ್ಯ ಲಾಗಿದೆ.  ಬಾಲಕನ ಸಾವಿಗೆ ಸಂಬಂಧಿಸಿ  ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಪರಿಯಾರಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.  ಉದರಸಂಬಂಧ  ಅಸೌಖ್ಯ ಬಾಧಿಸಿದ್ದ ಇಯಾಸ್‌ನನ್ನು ನಿನ್ನೆ ಬೆಳಿಗೆ ಜನರಲ್ ಆಸ್ಪತ್ರೆಯಲ್ಲಿ …