ಮೇಸ್ತ್ರಿ ನಿಧನ

ಮುಳ್ಳೇರಿಯ: ಆದೂರು ಮಂಟಮೆ ನಿವಾಸಿ ಹಿರಿಯ ಮೇಸ್ತ್ರಿ ಸುರೇಂದ್ರ (68) ನಿಧನ ಹೊಂದಿದರು. ದಿವಂಗತರಾದ ಅಪ್ಪುಟ್ಟಿ- ವೆಳ್ಳಚ್ಚಿ ದಂಪತಿ ಪುತ್ರನಾಗಿರುವ ಇವರು ಪತ್ನಿ ಶ್ಯಾಮಲ, ಮಕ್ಕಳಾದ ಸೌಮ್ಯ, ಸೌಜ, ಸುಜಿತ್, ಸೊಸೆ ರಶ್ಮಿತ, ಅಳಿಯಂದಿ ರಾದ ಸುನಿಲ್ ಕುಮಾರ್, ಸುಧೀಶ್, ಸಹೋದರ ಗಂಗಾಧರ, ಸಹೋದರಿ ಪದ್ಮಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಮೆನೇಜರ್ ನಿಧನ

ವರ್ಕಾಡಿ: ವಿಜಯಾ ಬ್ಯಾಂಕ್‌ನ ನಿವೃತ್ತ ಮೆನೇಜರ್ ಸೇನ್ಯ ಕಲ್ಲಾಡಿಗುತ್ತು ಎನ್. ತಿಮ್ಮಪ್ಪ ರೈ ನಾಣಿಲ್ತಡಿ (69) ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಗಿದ್ದರು. ಅಲ್ಲದೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರ, ಕುಂಬಳೆ, ಉಪ್ಪಿನಂಗಡಿ ಸಹಿತ ವಿವಿಧ ಕಡೆಗಳ ವಿಜಯಾ ಬ್ಯಾಂಕ್ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಕಲ್ಪನ, ಪುತ್ರಿ ಶರಣ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೋಟೆಲ್ ಮಾಲಕ ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ವಿಶ್ವನಾಥ ಶೆಟ್ಟಿ (61) ಹೃದಯÁಘಾತದಿಂದ ನಿಧನ ಹೊಂದಿದರು. ಮಂಗಳೂರಿನ ಕಂಕನಾಡಿಯ ಗರಡಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಐಸಿರಿ ಹೋಟೆಲ್‌ನ ಮಾಲಕರಾಗಿದ್ದರು. ಇವರು ನಿನ್ನೆ ರಾತ್ರಿ ೮ಗಂಟೆ ವೇಳೆ ಹೋಟೆಲ್‌ನಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ. ದಿ| ಬಟ್ಟು ಶೆಟ್ಟಿ -ದಿ| ದೇಂಞÂ ದಂಪತಿ ಪುತ್ರರಾಗಿದ್ದು, ಪ್ರತಾಪನಗರ ಶಿವ ಶಕ್ತಿ ಫ್ರೆಂಡ್ಸ್ ಕ್ಲಬ್‌ನ ಹಿರಿಯ ಸದಸ್ಯರಾಗಿದ್ದರು.ಮೃತರು ಪತ್ನಿ ನಳಿನಿ, ಮಕ್ಕಳಾದ ನವೀನ್ ಶೆಟ್ಟಿ, ನಯನ, ಅಳಿಯ ಸುದರ್ಶನ ಶೆಟ್ಟಿ, ಸಹೋದರ …

ಗುತ್ಯಡ್ಕದಲ್ಲಿ ಚಿರತೆ ಆತಂಕ : ಸಾಕುನಾಯಿಗಳೆರಡು ನಿಗೂಢ ನಾಪತ್ತೆ

ಬೆಳ್ಳೂರು: ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಗುತ್ಯಡ್ಕದಲ್ಲಿ ಮನೆ ಸಮೀಪ ಕಟ್ಟಿಹಾಕಿದ್ದ ಎರಡು ಸಾಕುನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚಿರತೆ ಭೀತಿ ತಲೆಯೆತ್ತಿದೆ. ಬೆಳ್ಳೂರು ಪಂಚಾಯತ್‌ನ ಕಾಯರ್‌ಪದವು ಮೂಲಕ ಕರ್ನಾಟಕದ ಈಶ್ವರಮಂ ಗಲವನ್ನು ಸಂಪರ್ಕಿಸುವ ಗಡಿ ಭಾಗದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಮನೆಯವರು ನೋಡಿದಾಗ ಕಟ್ಟಿ ಹಾಕಿದ ನಾಯಿಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ಆದರೆ ಜಾಗದಲ್ಲಿ ಯಾವುದೇ ರಕ್ತದ ಕಲೆ ಅಥವಾ ಕಾಡುಪ್ರಾಣಿ ದಾಳಿಯ ಕುರುಹು ಕಂಡು ಬಂದಿಲ್ಲ. ಅಲ್ಲದೆ ಈ ಪರಿಸರದಲ್ಲೆಲ್ಲೂ ನಾಯಿಗಳ …

ಸೀತಾಂಗೋಳಿಯಿಂದ ಯುವತಿ ನಾಪತ್ತೆ

ಸೀತಾಂಗೋಳಿ: ಸೀತಾಂಗೋಳಿ  ಕ್ವಾರ್ಟರ್ಸ್‌ನಿಂದ ಯುವತಿ ಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇಲ್ಲಿನ ಬಿವರೇಜಸ್ ಮದ್ಯದಂಗಡಿ ಬಳಿಯ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದ ಜುನು ನರ್ಸಾರಿ (23) ಎಂಬಾಕೆ ನಾಪತ್ತೆಯಾಗಿ ದ್ದಾಳೆ. ನಿನ್ನೆ ಬೆಳಿಗ್ಗೆ 10.30ರ ವೇಳೆ ಕ್ವಾರ್ಟರ್ಸ್‌ನಿಂದ ಈಕೆ ತೆರಳಿದ್ದಳು. ಆದರೆ ಮರಳಿ ಬಂದಿಲ್ಲವೆನ್ನಲಾಗಿದೆ. ಇದರಿಂದ ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ನಿಖಿಲ್ ನರ್ಸಾರಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.  ಇದರಂತೆ ಪೊಲೀಸರು ಕೇಸು ದಾಖಲಿಸಿ ಶೋಧ ಆರಂಭಿಸಿದ್ದಾರೆ. ಇದೇ ವೇಳೆ ಜುನು ಕ್ವಾರ್ಟರ್ಸ್‌ನಿಂದ ಹಣ ಕೊಂಡೊಯ್ದಿರುವುದಾಗಿ …

ತಿರುವನಂತಪುರ ಕಾರ್ಪೋರೇಶನ್‌ನ 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧುಗೊಳಿಸಿದ ಹೈಕೋರ್ಟ್

ತಿರುವನಂತಪುರ: ತಿರುವನಂತಪುರ ಕಾರ್ಪೋರೇಶನ್‌ನಲ್ಲಿ ಕೇರಳದ ಇತಿಹಾಸದಲ್ಲೇ ಪ್ರಥಮವಾಗಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಆಡಳಿತ ಸಮಿತಿ  ಕೌನ್ಸಿಲರ್‌ಗಳ ಪೈಕಿ  ಬಲಿದಾನಿಗಳ ಹಾಗೂ ದೇವರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ 20 ಕೌನ್ಸಿಲರ್‌ಗಳ ಪ್ರಮಾಣವಚನ ವನ್ನು ಹೈಕೋರ್ಟ್ ಅಸಿಂಧುಗೊಳಿಸಿ ಇಂದು ತೀರ್ಪು ನೀಡಿದೆ. ಅಲ್ಲದ  ಈ 20 ಸದಸ್ಯರು ಮುಂದಿನ 4 ವಾರದೊಳಗಾಗಿ  ಮರು ಪ್ರಮಾಣವಚನ ಸ್ವೀಕರಿಸಬೇಕೆಂದು ಹೈಕೋರ್ಟ್ ನಿರ್ದೇಶ ನೀಡಿದೆ.  ಬಿಜೆಪಿಯ 20 ಕೌನ್ಸಿಲರ್‌ಗಳು ಬಲಿದಾನಿಗಳ ಹಾಗೂ  ವಿವಿಧ ದೇವರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಸ್ಥಾನ ವಹಿಸಿಕೊಂಡಿದ್ದರು.  ಪ್ರಮಾಣವಚನ ಸ್ವೀಕರಿಸಿದ …

ದುಬಾಯಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ಯುವಕ ನಾಪತ್ತೆ

ಕಾಸರಗೋಡು: ದುಬಾಯಿಗೆ ಹೋಗಲೆಂದು ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ವಿದ್ಯಾನಗರ ಬೆದಿರ ಖಲೀಲ್ ಹೌಸ್‌ನ ಎ.ಎ. ಉಬೈಸ್ (26) ನಾಪತ್ತೆಯಾದ ಯುವಕ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು  ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದುಬಾಯಿಗೆ ಹೋಗಲೆಂದು ಜೂನ್ 22ರಂದು ಸಂಜೆ 4 ಗಂಟೆಗೆ ಉಬೈಸ್ ಮನೆಯಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವುದಾಗಿ ಉಬೈಸ್ ಮನೆಯವರಲ್ಲಿ ತಿಳಿಸಿದ್ದರು. ಆದರೆ ಅವರಿಂದ ಉಬೈಸ್‌ನ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ಪೊಲೀಸರು ದಾಖಲಿಸಿಕೊಂಡ …

ಕಣಜದ ಹುಳುಗಳ ದಾಳಿಗೆ ವೃದ್ಧೆ ಬಲಿ

ಬೋವಿಕ್ಕಾನ: ಕಣಜದ ಹುಳುಗಳ ದಾಳಿಗೊಳಗಾಗಿ ವೃದ್ಧೆ ಸಾವನ್ನಪ್ಪಿದ ಘಟನೆ ನಡೆದಿದೆ. ಎರಿಂಞಿಪುಳ ಮಾಲಾಂಕಡಪ್ಪಿನ ಟಿ. ನಾರಾಯಣಿ (77) ಸಾವನ್ನಪ್ಪಿದ ದುರ್ದೈವಿ. ಕಳೆದ ಶುಕ್ರವಾರ ಇವರು ತಮ್ಮ ಹಿತ್ತಿಲಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಣಜದ ಹುಳುಗಳು ಅವರ ಮೇಲೆ ದಾಳಿ ನಡೆಸಿವೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕಾಸರಗೋಡು  ಜನರಲ್ ಆಸ್ಪತ್ರೆಗೆ  ತಲುಪಿಸಿ ಚಿಕಿತ್ಸೆ ನೀಡಿ ನಂತರ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಂiiಲ್ಲಿ ದಾಖಲಿಸಿ ಉನ್ನತಮ ಟ್ಟದ ಚಿಕಿತ್ಸೆ ನೀಡಲಾಯಿ ತಾದರೂ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಇವರು ಕೃಷಿ …

ತಲಪಾಡಿಯಲ್ಲಿ ಸರಣಿ ಅಪಘಾತ : ಹಲವರಿಗೆ ಗಾಯ; ರಿಕ್ಷಾ ಚಾಲಕನಿಗೆ ಗಂಭೀರ

ಮಂಜೇಶ್ವರ: ತಲಪಾಡಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಗಂಭೀರ ವಾಗಿ ಗಾಯಗೊಂಡಿದ್ದು, ಆಟೋ ದಲ್ಲಿದ್ದ ಇಬ್ಬರು ಮತ್ತು ಕಾರುಗಳಲ್ಲಿ ದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾಸರಗೋಡು ಕಡೆಯಿಂದ ಮಂ ಗಳೂರಿನತ್ತ ತೆರಳುತ್ತಿದ್ದ ಕಂಟೈನರ್ ಲಾರಿ ಆಟೋ ರಿಕ್ಷಾಕ್ಕೆ ಡಿsಕ್ಕಿಯÁಗು ವುದನ್ನು ತಪ್ಪಿಸಲು ಚಾಲಕ ಬಲ ಭಾಗಕ್ಕೆ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಹಾಗೂ ಮೂರು ಕಾರು, ಆಟೋ ರಿಕ್ಷಾಕ್ಕೆ ಡಿsಕ್ಕಿ ಹೊಡೆದಿದೆ. ಡಿsಕ್ಕಿಯ ರಭಸಕ್ಕೆ …