ವರ್ಕಾಡಿ ಪಂಚಾಯತ್ ದೂರು ಪರಿಹಾರ ಅದಾಲತ್  80ಕ್ಕೂ ಹೆಚ್ಚು ದೂರುಗಳಿಗೆ ಒಂದೇ ಸೂರಿನಡಿ ಪರಿಹಾರ

ವರ್ಕಾಡಿ: ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟ, ಸಮಸ್ಯೆ ಹಾಗೂ ಅಹವಾಲುಗಳನ್ನು ಸೂಕ್ಷ್ಮವಾಗಿ ಗುರುತಿಸಿ, ಅವುಗಳಿಗೆ ತ್ವರಿತ ಹಾಗೂ ಸೂಕ್ತ ಪರಿಹಾರ ಒದಗಿಸುವುದರಲ್ಲೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಮತ್ತು ‘ರಾಮರಾಜ್ಯ’ ಪರಿಕಲ್ಪನೆಗಳ ನಿಜವಾದ ಸಾಕಾರತೆ ಅಡಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಹೇಳಿದರು. ಬಹುಕಾಲಗಳಿಂದ ವಿವಿಧ ಸಮಸ್ಯೆಗಳಿಗೆ ವಿವಿಧ ಸರಕಾರಿ ಕಚೇರಿಗಳಲ್ಲಿ ಅಲೆದಾಡುತ್ತಿರುವ ಜನರಿಗೆ, ಅವರ ಅಹವಾಲು ಗಳನ್ನು ಒಂದೇ ಸೂರಿನಡಿ ಆಲಿಸಿ ಸಂಬAಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವ …

ಕರ್ಷಕಮೋರ್ಚಾ ವತಿಯಿಂದ ಕೃಷಿಕ ಅರುಣ್‌ಕುಮಾರ್‌ರಿಗೆ ಸನ್ಮಾನ

ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಕರ್ಷಕ ಮೋರ್ಚಾ ವತಿಯಿಂದ ಕೃಷಿಕರ ದಿನಾಚರಣೆ ಪ್ರಯುಕ್ತ ಕೂಡ್ಲು ತೈವಳಪ್ ನಿವಾಸಿ ಕೃಷಿಕ ಅರುಣ್ ಕುಮಾರ್‌ರನ್ನು ಸನ್ಮಾನಿಸಲಾಯಿತು. ಕರ್ಷಕಮೋರ್ಚಾ ಮಂಡಲ ಅಧ್ಯಕ್ಷೆ ಲೀಲಾ ಕೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳ ಮಜಲ್, ಮಹಿಳಾಮೋರ್ಚ ಕಾಸರಗೋಡು ಮಂಡಲ ಅಧ್ಯಕ್ಷೆ ಶ್ರೀವಿದ್ಯಾ, ಮೊಗ್ರಾಲ್ ಪುತ್ತೂರು ಪಂಚಾಯತ್ ಪ್ರಧಾನ ಕಾರ್ಯದರ್ಶಿ ಗಣೇಶ್, ಸಂಪತ್, ವಿಜು ಕುಮಾರ್, ಸರಳ ಉಪಸ್ಥಿತರಿದ್ದರು. 

ನಗರದ ಸಾರಿಗೆ ಸಮಸ್ಯೆಗಳಿಗೆ ತುರ್ತು ಪರಿಹಾರ ಕಾಣಬೇಕು-ಮರ್ಚೆಂಟ್ಸ್ ಅಸೋಸಿಯೇಶನ್

ಕಾಸರಗೋಡು: ಎಂ.ಜಿ.ರಸ್ತೆಯ ತೀವ್ರವಾದ ಸಾರಿಗೆ ಸಮಸ್ಯೆಗಳಿಗೆ ತುರ್ತು ಪರಿಹಾರ ಕಾಣಬೇಕೆಂದು, ನಗರದ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗಾಗಿ ಸಮಗ್ರವಾದ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಿ ಜ್ಯಾರಿಗೊಳಿಸ ಬೇಕೆಂದು ಆಗ್ರಹಿಸಿ ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಪಿಡಬ್ಲ್ಯೂಡಿ ಚೀಫ್ ಇಂಜಿನಿಯರ್ ರನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಾರಿಗೆ ಸಂಚಾರ ಸಮಸ್ಯೆ, ಅಪಘಾತ ಸಾಧ್ಯತೆಗಳು ತೀವ್ರವಾಗಿ ಎದುರಿಸುತ್ತಿರುವ ನಗರದ ವಿವಿಧ ರಸ್ತೆಗಳು, ಜಂಕ್ಷನ್‌ಗಳನ್ನು ಮರ್ಚಂಟ್ಸ್ ಅಸೋಸಿಯೇಶನ್ ಪ್ರತಿ ನಿಧಿಗಳ ಜೊತೆ ಪಿಡಬ್ಲ್ಯೂಡಿ ಅಧಿP ರಿಗಳು ಸಂದರ್ಶಿಸಿದರು. ಸಮಸ್ಯೆ ಉಂಟಾಗಿರುವ ವಲಯಗಳನ್ನು ಸಮಗ್ರ …

ಕೇರಳವನ್ನು ಭಾರತದಿಂದ ಬೇರ್ಪಡಿಸಲು ಗೂಢ ಚಿಂತನೆ- ಪಿ.ಕೆ. ಕೃಷ್ಣದಾಸ್

ಕಾಸರಗೋಡು: ಕೇರಳವನ್ನು ಭಾರತದಿಂದ ಬೇರ್ಪಡಿಸಲಿರುವ ನಿಗೂಢ ಚಿಂತನೆ ನಡೆಯುತ್ತಿರುವುದಾಗಿ ಶಂಸಯಿಸಬೇ ಕಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ವಂದೇ ಮಾತರಂ ಸದಸ್ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲೆಲ್ಲಾ ರಾಷ್ಟ್ರಗೀತೆಗೆ ಇಲ್ಲದ ನಿಷೇಧ ಕೇರಳದಲ್ಲಿ ಏರ್ಪಡಿಸಿದ ವಿ.ಡಿ. ಸತೀಶನ್‌ರ ಸರಕಾರದ ಕ್ರಮದಿಂದ ಈ ಸಂಶಯ ಬಲಪಡುತ್ತಿದೆ ಎಂದು ಅವರು ನುಡಿದರು. ೧೯೪೭ರಲ್ಲಿ ಭಾರತದ ವಿಭಜನೆಗೆ …

ಯುವಕನನ್ನು ಪೊಲೀಸ್ ಠಾಣೆಯಿಂದ ಕರೆದೊಯ್ದು ಕೊಲೆಗೈದ ಪ್ರಕರಣ: ಗಲ್ಫ್‌ಗೆ ಪರಾರಿಯಾಗಿದ್ದ ಇನ್ನೋರ್ವ ಆರೋಪಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸೆರೆ

ಮಂಜೇಶ್ವರ: ಪೊಲೀಸರ ಕಸ್ಟಡಿಯಲ್ಲಿದ್ದ ಯುವಕನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದ ಬಳಿಕ ಆತನನ್ನು ಕೊಲೆಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬೆಂಗಳೂರು ವಿಮಾನ  ನಿಲ್ದಾಣದಿಂದ  ಬಂಧಿಸಲಾಗಿದೆ. ಕುಂಜತ್ತೂರು ಕಣ್ವತೀರ್ಥ ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಸಿನಾನ್ (26) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ.  ಈ ವಿಷಯವನ್ನು ಬೆಂಗಳೂರು ವಿಮಾನ ನಿಲ್ದಾಣದ ಎಮಿಗ್ರೇಶನ್  ವಿಭಾಗದ ಅಧಿಕಾರಿಗಳು ತಿಳಿಸಿರುವುದಾಗಿ ಮಂಜೇಶ್ವರ ಪೊಲೀಸರು ಹೇಳಿದ್ದಾರೆ. ಮೀಯಪದವು ಬಳಿಯ ಮದಂಗಲ್ಲು ಎಂಬಲ್ಲಿನ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (22)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ …

ತಾಯಿ, ಪುತ್ರಿ ನಾಪತ್ತೆ

ಕುಂಬಳೆ: ತಾಯಿ ಮತ್ತು ಪುತ್ರಿ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಬಂಬ್ರಾಣ ಗ್ರಾಮದ ಕಿದೂರು ಕುಂಟಂಗೇರಡ್ಕ ಹೌಸ್‌ನ ಸುನಿಲ್ ಕುಮಾರ್ ಎಂಬವರ ಪತ್ನಿ ರಮ್ಯ ಬಿ. (29) ಮತ್ತು ಪುತ್ರಿ ಶ್ರೀರಕ್ಷಾ (7) ಎಂಬುರು ಆಗಸ್ಟ್ 19ರಿಂದ ಬೆಳಿಗ್ಗೆ 8.30ರಿಂದ ಮನೆಯಿಂದ ಹೋದವರು ಬಳಿಕ ಮನೆಗೆ ಹಿಂತಿರುಗದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನಾಪತ್ತೆಯಾದ ರಮ್ಯಾಳ ಪತಿ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಶಾಲೆಗೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳಕ್ಕೆತ್ನಿಸಿದ ಆರೋಪಿ ಬಂಧನ

ಬದಿಯಡ್ಕ: ಶಾಲೆಗೆ ನಡೆದು ಹೋಗುತ್ತಿದ್ದ ೧೩ರ ಹರೆಯದ ವಿದ್ಯಾರ್ಥಿನಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಳ್ಳತ್ತಡ್ಕ ನಿವಾಸಿಯಾದ ರಮೇಶ್ (43) ಎಂಬಾತನನ್ನು ಬದಿಯಡ್ಕ ಎಸ್‌ಐ ಸುನಿಲ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಮೂರು ದಿನಗಳ ಹಿಂದೆಯಷ್ಟೇ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಶಾಲೆಗೆ ನಡೆದು ಹೋಗುತ್ತಿದ್ದ ಬಾಲಕಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ದೇಹ ಸ್ಪರ್ಶಿಸಿ ಕಿರುಕುಳಕ್ಕೆತ್ನಿಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ವಿವಿಧ ಪ್ರದೇಶಗಳ ಸಿಸಿಟಿವಿ …

ನಗರ ಮಧ್ಯದ ಕೆಪಿಆರ್‌ರಾವ್ ರೋಡ್‌ನಲ್ಲಿ ಆಳ ಹೆಚ್ಚುತ್ತಿರುವ ಹೊಂಡಗಳು: ವಾಹನ ಸಂಚಾರಕ್ಕೆ ಸಮಸ್ಯೆ

ಕಾಸರಗೋಡು: ನಗರಸಭೆಯ ಮೂಗಿನ ನೇರ ಕೆಳಗೆ, ನಗರಮಧ್ಯದ ಕೆಪಿಆರ್ ರಾವ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪ್ಪೋ ಸಮೀಪದ ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪ್ಪೋಗೆ ಪ್ರವೇಶಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ತೀವ್ರ ಮಳೆಗೆ ಹೊಂಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಳವೂ ದೊಡ್ಡದಾಗುತ್ತಾ ಹೋಗುತ್ತಿದೆ. ಕೆಪಿಆರ್‌ರಾವ್ ರಸ್ತೆ ನಗರದ ಪ್ರಧಾನ ವಾಹನದಟ್ಟಣೆಯಿರುವ ರಸ್ತೆಗಳಲ್ಲೊಂದಾಗಿದೆ. ಬ್ಯಾಂಕ್ ರಸ್ತೆಯ ಸಾರಿಗೆ ತಡೆಯನ್ನು ಹೊರತುಪಡಿಸಲು ಹೆಚ್ಚಿನವರು ಇದೇ ರಸ್ತೆಯನ್ನು ಸಂಚಾರಕ್ಕಾಗಿ ಉಪಯೋಗಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಡಿಪ್ಪೋದಲ್ಲಿ ಬಸ್‌ಗಳ ಪ್ರವೇಶ ಹಾಗೂ ಹೊರ ಹೋಗುವುದು ಆಗುವಾಗ ಸಂಭವಿಸುವ …

ಸಾಲದ ಹೊರೆ : ವ್ಯಾಪಾರಿ ನಾಪತ್ತೆ

ಬದಿಯಡ್ಕ: ವ್ಯಾಪಾರಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬ್ಡಾಜೆ ಮಾರ್ಪನಡ್ಕ ಹೌಸ್‌ನ ಮುಹಮ್ಮದ್ ಅಜಿರ್ಷ (22) ನಾಪತ್ತೆಯಾದ ವ್ಯಕ್ತಿ. ಇವರು ಅಗೋಸ್ತ್ ೧೫ರಂದು ಬೆಳಿಗ್ಗೆ ೧೧ ಗಂಟೆಗೆ  ಮನೆಯಿಂದ ಹೊರಹೋ ದ ವರು ನಂತರ  ಹಿಂತಿರುಗಿಲಿಲ್ಲ ವೆಂದು  ಅವರ  ತಾಯಿ ಸುಬೈದಾ ಎ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಮೊ ಮ್ಮದ್ ಅಜಿರ್ಷ ಈ ಹಿಂದೆ ನಾಯಮ್ಮಾರಮೂಲೆಯಲ್ಲಿ ಅಂಗಡಿ ನಡೆಸುತ್ತಿದ್ದರು.  ಆ ವತಿಯಿಂದ ಅವರು …