ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಅರಫನಗರದಿಂದ ನಾಪತ್ತೆಯಾದ ಯುವಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅರಫನಗರದ ಮಾಹಿನ್ (45) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಆದಿತ್ಯವಾರ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಸಂಬಂಧಿಕರು, ನಾಗರಿಕರು, ಪೊಲೀಸರು ಸೇರಿ ಹುಡುಕಾಡುತ್ತಿದ್ದ ವೇಳೆ ಸೋಮವಾರ ಸಂಜೆ ಅರಫನಗರದ ಸಾರ್ವಜನಿಕ ಬಾವಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರ ಣೋತ್ತರ ಪರೀಕ್ಷೆ ನಡೆಸಲಾಯಿತು.  ಅನಂತರ  ಮನೆಗೆ ತಲುಪಿಸಿ ಮೊಗ್ರಾಲ್ ಪುತ್ತೂರು ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ …

ಕುಂಬಳೆ ಮೀನು ಮಾರಾಟ ಕೇಂದ್ರ ಬಳಿಯ ಚರಂಡಿಯಲ್ಲಿ ತ್ಯಾಜ್ಯರಾಶಿ: ದುರ್ನಾತದಿಂದ ನಾಗರಿಕರಿಗೆ ಸಮಸ್ಯೆ

ಕುಂಬಳೆ: ಕುಂಬಳೆ ಮೀನು ಮಾರುಕಟ್ಟೆ ಬಳಿಯ ಚರಂಡಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡ ಪರಿಣಾಮ ಅದರಿಂದ ಹೊರ ಸೂಸುವ ದುರ್ನಾ ತದಿಂದ ನಾಗರಿಕರು ಸಮಸ್ಯೆಗೀಡಾಗಿ ದ್ದಾರೆ. ಹೊಸತಾಗಿ ನಿರ್ಮಿಸಿದ ಮೀನು ಮಾರುಕಟ್ಟೆಯನ್ನು ತೆರೆದು ಕೊಡದಿ ರುವುದರಿಂದ ಮೀನು ಮಾರಾಟ ಕೇಂದ್ರ ಬಳಿಯ ಚರಂಡಿಗಳಿಗೆ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಅವುಗಳು ಜೀರ್ಣಿಸಿ ದುರ್ನಾತ ಬೀರುತ್ತಿದ್ದು, ಇದು ಸ್ಥಳೀಯರಿಗೆ ಹಾಗೂ ವ್ಯಾಪಾರಿಗಳಿಗೆ ಭಾರೀ ಸಮಸ್ಯೆ ಉಂಟುಮಾಡುತ್ತಿದೆ. ತ್ರಿಸ್ತರ ಪಂಚಾಯತ್ ಚುನಾವಣೆ ಘೋಷಣೆಯಾಗಿರುವುದರಿಂದ ನಿರ್ಮಾಣ ಪೂರ್ಣಗೊಂಡ ಮೀನು ಮಾರುಕಟ್ಟೆ ತೆರೆದು ಕೊಡುವಲ್ಲಿ ಅಡಚಣೆ ಎದುರಾಗಿರುವುದಾಗಿ ಹೇಳಲಾಗುತ್ತಿದೆ. …

ಕೇಂದ್ರೀಯ ವಿ.ವಿ: ಸ್ವದೇಶಿ ಸಯನ್ಸ್ ಕಾಂಗ್ರೆಸ್ ರಾಷ್ಟ್ರೀಯ ವಿಚಾರ ಸಂಕಿರಣ ಆರಂಭ

ಕಾಸರಗೋಡು: 32ನೇ ಸ್ವದೇಶಿ ಸಯನ್ಸ್ ಕಾಂಗ್ರೆಸ್ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದರ ಅಂಗವಾಗಿ ವಿಕಸಿತ್ ಭಾರತ್‌ಗಾಗಿ ಪರಿವರ್ತಕ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಎಂಬ ವಿಷಯದಲ್ಲಿ ಆರಂಭಗೊಂಡ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಖರ್ ಉದ್ಘಾಟಿಸಿದರು. ವಿಶ್ವವಿದ್ಯಾನಿಲಯದ ಲೈಬ್ರೆರಿ ಸಭಾಂಗಣದಲ್ಲಿ ಆರಂಭಗೊಂಡ ವಿಚಾರಗೋಷ್ಠಿಯಲ್ಲಿ ಕೇಂದ್ರೀಯ ವಿ.ವಿ ಉಪಕುಲಪತಿ ಪ್ರೊ| ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸಿದರು.  ವಿಜ್ಞಾನಭಾರತಿ ಕಾರ್ಯದರ್ಶಿ ಜನರಲ್ ವಿವೇಕಾನಂದ ಪೈ ಮುಖ್ಯ ಅತಿಥಿಯಾಗಿ ದ್ದರು. ವಿಜ್ಞಾನ …

ಜಿಲ್ಲೆಯಲ್ಲಿ ಕಾಡುಹಂದಿಗಳ ಉಪಟಳ ತೀವ್ರ: ಜನರು ಆತಂಕದಲ್ಲಿ; ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿಗಳು

ಕಾಸರಗೋಡು: ಜಿಲ್ಲೆಯಲ್ಲಿ ಕಾಡುಹಂದಿಗಳ ಉಪಟಳ ತೀವ್ರ ಗೊಂಡಿರುವಾಗ ಅಧಿಕಾರಿಗಳು ನಿಶ್ಚಿಂತೆಯಲ್ಲಿದ್ದಾರೆಂಬ ಆರೋಪ ತೀವ್ರಗೊಂಡಿದೆ. ವನ್ಯಮೃಗಗಳ ಹಾವಳಿಗೆ ತಡೆಯೊಡ್ಡಲು ಕೇಂದ್ರ, ರಾಜ್ಯ ಸರಕಾರಗಳು, ಸುಪ್ರೀಂಕೋರ್ಟ್ ಕಠಿಣ ನಿರ್ದೇಶಗಳನ್ನು ನೀಡಿರುವಾಗಲೂ ಕಾಸರಗೋಡಿನಲ್ಲಿ ವನ್ಯಮೃಗಗಳ ದಾಳಿ ತಡೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ನೀತಿಯನ್ನು ಅನುಸರಿಸುತ್ತಿದ್ದಾರೆಂದು ನಾಗರಿಕರು ತಿಳಿಸುತ್ತಿದ್ದಾರೆ. ಕಾಡುಹಂದಿಯ ದಾಳಿಯಿಂದ ಇತ್ತೀಚೆಗೆ ಯುವಕನೋರ್ವ ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದನು.  ಊಜಂಪಾಡಿಯ ಅಖಿಲ್ ಸಿ. ರಾಜು ಎಂಬವರಿಗೆ ಬುಧವಾರ ರಾತ್ರಿ ಕಾಡುಹಂದಿ ದಾಳಿ ನಡೆಸಿದೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಅಖಿಲ್‌ರ ಮೇಲೆ ಕಾಡುಹಂದಿಗಳ ಹಿಂಡು ದಾಳಿ …

ವಿವಿಧ ಪ್ಲಾಟ್‌ಗಳ ಮಲಿನ ನೀರು ಚರಂಡಿಗೆ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ದುರ್ನಾತ ; ಪರಿಸರ ನಿವಾಸಿಗಳಲ್ಲಿ ಆತಂಕ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ  ರಸ್ತೆ ಬದಿ ಹಲವು ಪ್ಲಾಟ್‌ಗಳಿದ್ದು, ಇದರಲ್ಲಿ ಕೆಲವು ಪ್ಲಾಟ್‌ಗಳ ಮಲಿನ ನೀರನ್ನು ರಸ್ತೆಯ ಚರಂಡಿಗೆ ಹರಿದುಬರುತ್ತಿದೆ. ಇದರಿಂದ ಚರಂಡಿ ತುಂಬಿ ರಸ್ತೆಗೆ ಹರಿದು ಪರಿಸರವಿಡೀ ದುರ್ವಾಸನೆ ತುಂಬಿಕೊಂಡು ಸ್ಥಳೀಯ ಕುಟುಂಬಗಳು ಹಾಗೂ ಪಾದಚಾರಿಗಳಿಗೆ ಸಮಸ್ಯೆ  ಉಂಟಾಗಿದೆ.  ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂ.ಕೆ. ಬ್ರದರ್ಸ್ ಉಪ್ಪಳ ಇದರ ಸದಸ್ಯರು ಹಾಗೂ ಸ್ಥಳೀಯರು ಸೇರಿ ನಿನ್ನೆ ಬೆಳಿಗ್ಗೆ ರೈಲ್ವೇ ನಿಲ್ದಾಣ ರಸ್ತೆ ಬದಿಯ ಚರಂಡಿಯ ಸ್ಲಾಬ್‌ಗಳನ್ನು ಜೆಸಿಬಿ ಮೂಲಕ ತೆಗೆದು ಪರಿಶೀಲಿಸಿದಾಗ ಪ್ಲಾಟ್‌ಗಳಿಂದ …

ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲೋಕ್ ಸ್ಥಾಯೀ ಸಮಿತಿ ಸದಸ್ಯರ, ಜಿ.ಪಂ. ಮಹಿಳಾ ಸ್ಥಾಯೀ ಸಮಿತಿ ಸದಸ್ಯೆಯರ ಆಯ್ಕೆ

ಮಂಜೇಶ್ವರ: ಬ್ಲೋಕ್ ಪಂಚಾ ಯತ್ ಸ್ಥಾಯೀ ಸಮಿತಿ ಸದಸ್ಯರ ಆಯ್ಕೆ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.  13 ನಾಮನಿರ್ದೇಶ ಪತ್ರಿಕೆಗಳು ಲಭಿಸಿದ ಹಿನ್ನೆಲೆಯಲ್ಲಿ  ಅವಿರೋಧವಾಗಿ 13 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕುಂಜತ್ತೂರು, ಬಂದ್ಯೋಡು, ಚೇವಾರು, ಪಾತೂರು ಡಿವಿಶನ್‌ಗಳಿಂದಿರುವ ಜನಪ್ರತಿನಿಧಿಗಳಾದ ಮುಹಮ್ಮದ್ ಹನೀಫ, ಅಬ್ದುಲ್ ಅಸೀಸ್ ಮರಿಕ್ಕೆ, ಚಂದ್ರಾವತಿ, ಎಸ್.ಎ. ಬೀಪಾತು ಎಂಬಿವರು ಸ್ಥಾಯೀ ಸಮಿತಿ ಸದಸ್ಯರಾ ಗಿಯೂ, ಪುತ್ತಿಗೆ, ಮಜೀರ್ಪಳ್ಳ, ಪೆರ್ಲ ಡಿವಿಶನ್‌ನಿಂದಿರುವ ಜನಪ್ರತಿನಿಧಿ ಗಳಾದ ಮೊಹಮ್ಮದ್ ಜುನೈದ್, ಕೆ. ಮೋಹನ್,ನಫೀಸತ್ ಮಿಸ್ರಿಯ ಎಂಬಿವರು ಆರೋಗ್ಯ …

ಪುತ್ರ ಶಾಲೆಯಿಂದ ಮನೆಗೆ ತಲುಪಿದಾಗ ತಾಯಿ ರಕ್ತದ ಮಡುವಿನಲ್ಲಿ: ತಲೆಗೆ ಬಡಿದು ಕೊಲೆಗೈದ ಪತಿ ಪರಾರಿ

ಇಡುಕ್ಕಿ: ಉಪ್ಪುತ್ತರದಲ್ಲಿ ಪತಿ ಪತ್ನಿಯನ್ನು ತಲೆಗೆ ಬಡಿದು ಕೊಲೆಗೈದ ಘಟನೆ ನಡೆದಿದೆ. ಉಪ್ಪುತ್ತರ ಮಲಯಕ್ಕಾವಿಲ್ ನಿವಾಸಿ  ರಜನಿ (37) ಕೊಲೆಗೀಡಾದ ಯುವತಿ.  ಪತಿ ಸುಬಿನ್‌ಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಈತ ಮಲೆಮರೆಸಿಕೊಂಡಿದ್ದಾ ನೆನ್ನಲಾಗಿದೆ.  ಪತಿ-ಪತ್ನಿಯ ಮಧ್ಯೆ ಪ್ರತಿದಿನ ವಾಗ್ವಾದ ಉಂಟಾಗುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪುತ್ತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಒಂದು ತಿಂಗಳ ಹಿಂದೆ ಇವರಿಬ್ಬರು ಒಂದೇ ಮನೆಯಲ್ಲಿ ವಾಸ ಆರಂಭಿಸಿದ್ದರು. ಮಂಗಳವಾರ ಇವರ ಸಣ್ಣ ಮಗ ಶಾಲೆಯಿಂದ ಬಂದಾಗ ರಜನಿ ರಕ್ತದ ಮಡುವಿನಲ್ಲಿ …

ಅಸೌಖ್ಯ:ನಿಧನ

 ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ಮೋಹಿನಿ (48) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ಬೆಳಿಗ್ಗೆ ಮನೆಂiiಲ್ಲಿ ಅಸೌಖ್ಯ ಉಲ್ಭಣಗೊಂಡಿದ್ದು, ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಅವಿವಾಹಿತರಾದ ಇವರು ದಿವಂಗತರಾದ  ಜಾನಕಿ-ಕುಟ್ಟಿ ಮೇಸ್ತ್ರಿ ದಂಪತಿ ಪುತ್ರಿಯಾಗಿದ್ದಾರೆ. ಸಹೋದರಿ ಸುಹಾಸಿನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿ ದ್ದಾರೆ. ಸಹೋದರಿಯರಾದ ಬೇಬಿ, ಲಲಿತಾ ಈ ಹಿಂದೆ ನಿಧನರಾಗಿದ್ದಾರೆ.

ಮಾಜಿ ಸಚಿವ ಇಬ್ರಾಹಿಂ ಕುಂಞಿ ನಿಧನ

ಕೊಚ್ಚಿ: ಮಾಜಿ ಸಚಿವಹಾಗೂ ಮುಸ್ಲಿಂ ಲೀಗ್‌ನ ರಾಜ್ಯ ಉಪಾಧ್ಯಕ್ಷ ರಾಗಿರುವ ವಿ.ಕೆ.ಇಬ್ರಾಹಿಂ ಕುಂಞಿ (73)  ಅಸೌಖ್ಯದಿಂದ ಕೊಚ್ಚಿಯ ಪಾಲಿಯೇಟಿವ್ ಕೇರ್ ಆಸ್ಪತ್ರೆಯಲ್ಲಿ ನಿನ್ನೆ ನಿಧನಹೊಂದಿದರು. ಇಬ್ರಾಹಿಂ ಕುಂಞಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿ ದ್ದರು. ಮುಸ್ಲಿಂ ಲೀಗ್ ನೇತಾರ ಪಿ.ಕೆ. ಕುಂಞಾಲಿಕುಟ್ಟಿ ಯವರು ೨೦೦೫ರಲ್ಲಿ ತಮ್ಮ ಕೈಗಾರಿಕಾ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತೆರವುಗೊಂಡ ಆ ಸ್ಥಾನಕ್ಕೆ ಇಬ್ರಾಹಿಂ ಕುಂಞಿಯವರನ್ನು ನೇಮಿಸಲಾಗಿತ್ತು.  ಆಗ ಅವರು ಮಟ್ಟಾಂಚೇರಿಯ ಶಾಸಕರಾಗಿದ್ದರು. ನಂತರ 2011ರಲ್ಲಿ ಕಳಮಶ್ಶೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ …

ಕರ್ನಾಟಕ ಮುಕ್ತ ವಿ.ವಿ ರಿಜಿಸ್ಟ್ರಾರ್ ಪೆರಡಾಲ ಕ್ಷೇತ್ರಕ್ಕೆ ಭೇಟಿ: ಸಹಾಯ ಭರವಸೆ

ಬದಿಯಡ್ಕ: ಜೀರ್ಣೋದ್ಧಾರಗೊ ಳ್ಳುತ್ತಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ರಿಜಿಸ್ಟ್ರಾರ್ ಪ್ರೊ. ನವೀನ್ ಕುಮಾರ್ ಎಸ್.ಕೆ ಭೇಟಿ ನೀಡಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ, ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡುವುದಾಗಿ ಅವರು ಭರ ವಸೆ ನೀಡಿದರು. ದೇವಳದ ಹೊರಾಂ ಗಣದ ಎದುರುಭಾಗದ ಕಲ್ಲು ಹಾಸುವ ಮತ್ತು ಸುತ್ತಲಿನ ಇಂಟರ್ ಲಾಕ್ ಹಾಕಿಸುವ ವೆಚ್ಚವನ್ನು ಭರಿಸುವುದಾಗಿ ಅವರು ತಿಳಿಸಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಪದಾಧಿಕಾರಿಗಳು ಉಪಸ್ಥಿತರಿದ್ದರು.