ಟಿ.ಕೆ. ಅಬ್ದುಲ್ಲ ಹಾಜಿ ನಿಧನ

  ಬಂದ್ಯೋಡು: ಚಳ್ಳಂಗಯ ತಲೆಮೊಗರು ಬಾಣಿಯನ್‌ಮೂಲೆ ನಿವಾಸಿ ಟಿ.ಕೆ. ಅಬ್ದುಲ್ಲ ಹಾಜಿ (70) ನಿಧನ ಹೊಂದಿದರು. ಹಲವಾರು ವರ್ಷ ಕಾಲ ಕೊಲ್ಲಿಯಲ್ಲಿದ್ದರು. ಮೃತರು ಪತ್ನಿ ಆಸ್ಯಮ್ಮ, ಮಕ್ಕಳಾದ ಶಾಹುಲ್ ಹಮೀದ್ ಹಿಮಮಿ ಸಖಾಫಿ, ಆತಿಕ್ಕ, ಕಮರುನ್ನಿಸ, ಸುಮಾಯ್ಯ, ಅಳಿಯಂದಿ ರಾದ ಯೂಸಫ್ ಎ.ಕೆ., ಅಬ್ದುಲ್ ಸತ್ತಾರ್, ಸೊಸೆ ಮೈಮೂನ ಮೀಯ ಪದವು ಹಾಗೂ ಸಹೋದರ ಸಹೋದರಿ ಯರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಟೈಲರ್ ನಿಧನ

ಮುಳ್ಳೇರಿಯ: ಮುಳ್ಳೇರಿಯದ ಬಟ್ಟೆ ಅಂಗಡಿಯಲ್ಲಿ ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ ತೆಕ್ಕೇಕರೆ ನಿವಾಸಿ ಸುಬ್ಬ ಪಾಟಾಳಿ ಯಾನೆ ಸುಭಾಷ್ (76) ನಿಧನ ಹೊಂದಿದರು. ಇತ್ತೀಚೆಗಿನಿಂದ ಕಾರಡ್ಕ ಗಾಂಧಿನಗರ ದಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸ್ಕೂಟರ್ ಅಪಘಾತ ಸಂಭವಿಸಿ  ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಸಂತೆಷ್, ಗಿರೀಶ್, ಬಿಂದು, ಸೊಸೆ ಮೇಘ, ಅಳಿಯ ರಘುನಾಥ್ ಅಡ್ಕಸ್ಥಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರರಾದ …

ಯುವಕನನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕೊಲೆಗೈಯ್ಯಲೆತ್ನ: ಯುವತಿ ಸಹಿತ ನಾಲ್ಕು ಮಂದಿಯ ಕೃತ್ಯ

ಕುಂಬಳೆ: ಯುವಕನನ್ನು ತಡೆದು ನಿಲ್ಲಿಸಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಮೊಗ್ರಾಲ್‌ನಲ್ಲಿ ನಡೆದಿದೆ.  ಇದರಿಂದ ಗಂಭೀರ ಗಾಯಗೊಂಡ ಯುವಕನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ ಹಲವು ವರ್ಷಗಳಿಂದ ಮೊಗ್ರಾಲ್ ಕೊಪ್ಪಳದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ ಗಫೂರ್ (45)  ಗಂಭೀರ ಸುಟ್ಟು ಗಾಯಗೊಂಡ ವ್ಯಕ್ತಿಯಾಗಿದ್ದಾರೆ.  ಇಂದು ಮುಂಜಾನೆ 5.30ರ ವೇಳೆ ಮೊಗ್ರಾಲ್ ರೈಲ್ವೇ ಕೆಳಸೇತುವೆಯಲ್ಲಿ ಈ ಘಟನೆ ನಡೆದಿದೆ. ಸಾರಣೆ ಮೇಸ್ತ್ರಿಯಾದ ಅಬ್ದುಲ್ ಗಫೂರ್ …

ಹೊಸಬೆಟ್ಟುವಿನ ಮನೆಯಿಂದ ಮೂರೂವರೆ ಪವನ್ ಚಿನ್ನ, 8 ಸಾವಿರ ರೂ. ಕಳವು

ಉಪ್ಪಳ: ಮಂಜೇಶ್ವರ ಹೊಸಬೆಟ್ಟುವಿನ ಮನೆಯೊಂದ ರಿಂದ ಮೂರೂವರೆ ಪವನ್ ಚಿನ್ನಾಭರಣ ಹಾಗೂ 8 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಹೊಸಬೆಟ್ಟು ಗುಡ್ಡೆಕೇರಿ ಸೀನತ್ ಮಂಜಿಲ್‌ನ ಸೌದ (41) ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ 6ರಂದು ಸಂಜೆ 5 ಗಂಟೆ ಮಧ್ಯೆ ಮನೆಯಿಂದ ನಗ-ನಗದು ಕಳವಿಗೀಡಾಗಿರುವುದಾಗಿ  ಸೌದ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಮನೆಯೊಳಗೆ ಕಪಾಟಿನಲ್ಲಿರಿಸಿದ್ದ ಚಿನ್ನ ಹಾಗೂ ಹಣವನ್ನು ಕಳವು ನಡೆಸಲಾಗಿದೆ.  ಈ ಬಗ್ಗೆ …

ಮೀನು ಮಾರಾಟ ಶೆಡ್‌ನಿಂದ 160ರಷ್ಟು ಪೆಟ್ಟಿಗೆ ಕಳವು: ಆರೋಪಿ ಸೆರೆ

ಕಾಸರಗೋಡು: ಚಟ್ಟಂ ಚಾಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೀನು ಮಾರಾಟ ಮಾಡುವ  ಶೆಡ್‌ನಲ್ಲಿ ತೆಗೆದಿರಿಸಿದ್ದ ಒಂದೂ ಮುಕ್ಕಾಲು ಲಕ್ಷಕ್ಕೂ ಹೆಚ್ಚು ಮೌಲ್ಯದ 160ರಷ್ಟು ಮೀನಿನ ಪೆಟ್ಟಿಗೆಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸೆರೆ ಹಿಡಿಯಲಾಗಿದೆ. ಉದುಮ ಬಂಗರಕುನ್ನುನ ಸಿ.ಎ. ಸಲೀಂ (41) ನನ್ನು ಮೇಲ್ಪರಂಬ ಪೊಲೀಸರು ಸೆರೆ ಹಿಡಿದಿದ್ದಾರೆ. ಚಟ್ಟಂಚಾಲ್‌ನ ಟಿ.ಎಸ್. ರಹೀಂರ ದೂರಿನಂತೆ ಕೇಸು ದಾಖಲಿಸಿದ ಪೊಲೀಸರು ಗಂಟೆಗಳೊಳಗೆ ಆರೋಪಿಯನ್ನು ಸೆರೆಹಿಡಿದಿದ್ದಾರೆ. ೪೦ ಪೆಟ್ಟಿಗೆಗಳನ್ನು ನಿನ್ನೆ ಹಾಗೂ ಉಳಿದವುಗಳನ್ನು ಅದರ ಮುಂಚಿನ ದಿನಗಳಲ್ಲಿ ಕಳವು ನಡೆಸಲಾಗಿದೆ. ಸಿಸಿ …

ಶಾಲೆಗಳಲ್ಲಿ ಮತ್ತೆ ರ‍್ಯಾಗಿಂಗ್ ಪಿಡುಗು: ಎಡನೀರು, ಕುಂಬಳೆ ಬಳಿಕ ಬೆಳ್ಳೂರಿನಲ್ಲೂ ಪ್ಲಸ್‌ವನ್ ವಿದ್ಯಾರ್ಥಿಗೆ ಪ್ಲಸ್‌ಟು ವಿದ್ಯಾರ್ಥಿಗಳಿಂದ ಹಲ್ಲೆ

ಮುಳ್ಳೇರಿಯ: ಪ್ಲಸ್‌ವನ್ ತರಗತಿಗಳು ಆರಂಭಗೊಂಡ ಬೆನ್ನಲ್ಲೇ ಶಾಲೆಗಳಲ್ಲಿ ರ‍್ಯಾಗಿಂಗ್ ಪಿಡುಗು ತೀವ್ರಗೊಂಡಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಹಾಗೂ ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ ಹಲ್ಲೆಯಿಂದ ಗಾಯಗೊಂಡ ಬೆನ್ನಲ್ಲೇ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ರ‍್ಯಾಗಿಂಗ್ ನಡೆದಿದೆ. ಬೆಳಿಂಜ ನಿವಾಸಿಯೂ, ಬೆಳ್ಳೂರು ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿಯಾದ 16ರ ಹರೆಯದ ಬಾಲಕನ ಮೇಲೆ ನಿನ್ನೆ ಬೆಳಿಗ್ಗೆ ರ‍್ಯಾಗಿಂಗ್ ನಡೆಸಲಾಗಿದೆ. ಅಂಗಿಯ ಮೇಲಿನ ಗುಬ್ಬಿ ಹಾಕಿಲ್ಲವೆಂದು ತಿಳಿಸಿ ನಾಲ್ವರು …

ಯುವಕ ಮತ್ತು ಸಂಬಂಧಿಕನನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ: ಸುಫಾರಿ ತಂಡದ ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ಖಾಸಗಿ ಸಂಸ್ಥೆಗೆ ನೀಡಿದ ಒಂದು ಕೋಟಿ ರೂ.ವನ್ನು  ಹಿಂತಿರುಗಿಸದ ಬಗ್ಗೆ  ಪೊಲೀಸರಿಗೆ ದೂರು ನೀಡಿದ ಯುವಕ ಮತ್ತು ಆತನ ಸಂಬಂಧಿಕನನ್ನು ಅಪಹರಿಸಿ ಹಲ್ಲೆ ನಡೆಸಿದ ಸುಫಾರಿ ತಂಡಕ್ಕೆ ಸೇರಿದ ಕಾಸರಗೋಡು ನಿವಾಸಿಯನ್ನು ಕಣ್ಣೂರು ಟೌನ್ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಅಬೂಬಕರ್ ಸಿದ್ದಿಕ್ (36) ಬಂಧಿತ ಆರೋಪಿ. ಕಣ್ಣೂರು ಪಳ್ಳಿಪ್ರಂ ಆದಿರಗಂ ನಿವಾಸಿ ಪಿ. ರಿಯಾಸ್ (42) ಮತ್ತು ಅವರ ಸಂಬಂಧಿನೋರ್ವನನ್ನು ಕಳೆದ ಎಪ್ರಿಲ್ 19ರಂದು ಕಾರಿನಲ್ಲಿ ಅಪಹರಿಸಿ ಮಂಗಳೂರಿನ ಅತ್ತಾವರಕ್ಕೆ  ತಲುಪಿಸಿ  ಹಲ್ಲೆ ನಡೆಸಿ …

ರಾಣಿಪುರಂ ರಸ್ತೆಯಲ್ಲಿ ಕಾರುಗಳಲ್ಲಿ ಸಾಹಸಿಕ ಪ್ರಯಾಣ: ನಾಲ್ವರು ಯುವಕರ ವಿರುದ್ಧ ಕೇಸು, ದಂಡ ವಸೂಲಿ

ಹೊಸದುರ್ಗ: ರಾಣಿಪುರಕ್ಕಿರುವ ರಸ್ತೆಯಲ್ಲಿ ಕಾರುಗಳಲ್ಲಿ ಅಪಾಯಕರವಾದ ರೀತಿಯಲ್ಲಿ ಸಾಹಸಿಕ ಪ್ರಯಾಣ ನಡೆಸಿದ ಯುವಕರ ವಿರುದ್ಧ ಕೇಸು ದಾಖಲಿಸಲಾಗಿದೆ. ನಾಲ್ಕು ಮಂದಿ ಕರ್ನಾಟಕ ನಿವಾಸಿಗಳ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಬೆಳಿಗ್ಗೆ ಎರಡು ಕಾರುಗಳಲ್ಲಾಗಿ ತಲುಪಿದ ಯುವಕರು ರಾಣಿಪುರಂ ರಸ್ತೆಯಲ್ಲಿ ಸ್ಥಳೀಯರಲ್ಲಿ ಭೀತಿ ಮೂಡಿಸುವ ರೀತಿಯಲ್ಲಿ ಸಾಹಸಿಕ ಪ್ರಯಾಣ ನಡೆಸಿದ್ದಾರೆ. ಕಾರಿನ ಬಾಗಿಲುಗಳನ್ನು ತೆರೆದು ಅದರ ಮೇಲೆ ಕುಳಿತುಕೊಂಡು ಕಿಲೋ ಮೀಟರ್‌ಗಳಷ್ಟು ದೂರ ಪ್ರಯಾಣ ನಡೆಸಿದ್ದಾರೆನ್ನಲಾಗಿದೆ. ಇವರು ಪ್ರಯಾಣಿಸುವ ದೃಶ್ಯಗಳು ಇನ್ನೋರ್ವ ಪ್ರಯಾಣಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿ …

ರಾಜ್ಯ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ: ಜುಲೈ 13 ಕೊನೆಯ ದಿನ

ಕಾಸರಗೋಡು: ರಾಜ್ಯ ಕೃಷಿ ಪ್ರಶಸ್ತಿಗಿರುವ ಅರ್ಜಿಗಳನ್ನು ಈತಿಂಗಳ 13ರವರೆಗೆ ಸಂಬಂಧಪಟ್ಟ ಕೃಷಿಭವನಗಳಲ್ಲಿ ಸಲ್ಲಿಸಬಹುದು. ಕೃಷಿವಲಯದ ಸಮಗ್ರ ಕೊಡುಗೆಗಳಿಗೆ ಗೌರವ ಸೂಚಿಸಿ 5 ಲಕ್ಷ ರೂ. ಬಹುಮಾನ ಮೊತ್ತವಿರುವ ಉಮ್ಮನ್‌ಚಾಂಡಿ ಸ್ಮಾರಕ ಪ್ರಶಸ್ತಿ ಸಹಿತ 39 ವಿಭಾಗಗಳಲ್ಲಾಗಿ 2025ರ ರಾಜ್ಯ ಕೃಷಿ ಪ್ರಶಸ್ತಿಗಳಿಗೆ ಸರಕಾರ ಅಂಗೀಕಾರ ನೀಡಿದೆ. ಇದರ ಜೊತೆಯಲ್ಲೇ ತಾರಸಿ ಕೃಷಿ ಮಾಡುವ ಉತ್ತಮ ಕೃಷಿಕನಿಗೆ (ಛಿbಟಿ ಖ್ಟ್ಟಜಿಡ್ಟಿo Ibme),  ಉದ್ಯಾನಶ್ರೇಷ್ಠ ಎಂಬೀ ಎರಡು ವಿಭಾಗಗಳು (5೦,೦೦೦ ರೂ.ನಂತೆ ಫಲಕ, ಪ್ರಮಾಣಪತ್ರ) ಒಳಗೊಂಡಿದೆ. ರಾಜ್ಯ ಕೃಷಿ ಪ್ರಶಸ್ತಿಗಳಲ್ಲಿ …