ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿಯವರಿಗೆ ಬಿಜೆಪಿ ಅಭಿನಂದನೆ

ವರ್ಕಾಡಿ: ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ ಅವರನ್ನು ಬಿಜೆಪಿ ಜಿಲ್ಲಾ ಘಟಕ ಅಭಿನಂದಿಸಿತು.ಈ ಗೌರವವು ರೂಪಶ್ರೀ ಅವರ ವರ್ಷಗಳ ಶ್ರಮ ಮತ್ತು ಅಭಿನಯ ಪ್ರತಿಭೆಗೆ ಸಿಕ್ಕ ಸೂಕ್ತ ಗೌರವವಾಗಿದೆ ಎಂದು ಎಂ.ಎಲ್. ಅಶ್ವಿನಿ ಹೇಳಿದರು. ನೂರಾರು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ನಿರೂಪಿಸಿದ ರೂಪಶ್ರೀ ಅವರ ರಾಷ್ಟ್ರೀಯ ಪ್ರಶಸ್ತಿ ಸಾಧನೆ ಕಾಸರಗೋಡು ಜಿಲ್ಲೆಗೆ ಹೆಮ್ಮೆಯಾಗಿದೆ ಎಂದು ಅಶ್ವಿನಿ ಪ್ರತಿಕ್ರಿಯಿಸಿದರು.ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯ ಸತೀಶ್ ಚಂದ್ರ ಭಂಡಾರಿ, ಜಿಲ್ಲಾ …

ಪಿಎಸ್‌ಸಿ ಚೆಯರ್‌ಮೆನ್ ರಾಜೀನಾಮೆಗೆ ಒತ್ತಾಯಿಸಿ ಕೆಎಸ್‌ಯುನಿಂದ ಪಿಎಸ್‌ಸಿ ಕಚೇರಿಗೆ ಮಾರ್ಚ್

ಕಾಸರಗೋಡು: ಪಿಎಸ್‌ಸಿ ಚೆಯರ್‌ಮೆನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕೆಎಸ್‌ಯು ಕಾರ್ಯಕರ್ತರು ನಿನ್ನೆ ಜಿಲ್ಲಾ ಪಿಎಸ್‌ಸಿ ಕಚೇರಿಗೆ ಮಾರ್ಚ್ ನಡೆಸಿದರು. ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಜವಾದ್ ಪುತ್ತೂರು ನೇತೃತ್ವದಲ್ಲಿ ಕಾರ್ಯಕರ್ತರು ಮಾರ್ಚ್ ನಡೆಸಿದ್ದು ಅವರನ್ನು ಪೊಲೀಸರು ಬಂಧಿಸಿ ತೆರವುಗೊಳಿ ಸಿದರು. ಯೋಜನಾ ಮಂಡಳಿ ಪರೀಕ್ಷೆಗೆ ಸಂಬಂಧಿಸಿ ಪಿಎಸ್‌ಸಿ ಅಧಿಕಾರಿಗಳು ಗೂಢಾಲೋಚನೆ ನಡೆಸಿ ನೇಮಕಾತಿಯನ್ನು ಬುಡಮೇಲುಗೊಳಿಸಿದ್ದಾರೆಂದು ತಿಳಿಸಿ ಕ್ರೈಂ ಬ್ರಾಂಚ್ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‌ಯು ಕಾರ್ಯಕರ್ತರು  ಪಿಎಸ್‌ಸಿ ಚೆಯರ್‌ಮೆನ್‌ರ ರಾಜೀನಾಮೆಗೆ ಒತ್ತಾಯಿಸಿ ಮಾರ್ಚ್ ನಡೆಸಿದ್ದಾರೆ. ಕೆಎಸ್‌ಯು ಜಿಲ್ಲಾಧ್ಯಕ್ಷ …

ಪುತ್ತಿಗೆ ಪಂ.ಕಚೇರಿಗೆ ಎಲ್‌ಡಿಎಫ್‌ನಿಂದ ಮಾರ್ಚ್

 ಪುತ್ತಿಗೆ: ಪುತ್ತಿಗೆ ಪಂಚಾಯತ್ ಆಡಳಿತ ಪಕ್ಷಪಾತ ನೀತಿ ಅನುಸರಿಸುತ್ತಿದೆಯೆಂದು   ಆರೋಪಿಸಿ ಎಲ್‌ಡಿಎಫ್ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಿತು. ಪಂಚಾಯತ್ ಗಳಿಗೆ ಲಭಿಸಬೇಕಾದ ಯೋಜನೆ ಮೊತ್ತವನ್ನು ಸರಕಾರ ಬುಡಮೇಲು ಗೊಳಿಸಿದೆ,  ಕಳೆದ ಪಂಚಾಯತ್ ಆಡಳಿತ ಸಮಿತಿ ಸ್ಥಾಪಿಸಿದ ಮಿನಿ ಮಾಸ್ಟ್ ಲೈಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದು ಹಾಗೂ ಎಡರಂಗ ಸದಸ್ಯರ  ವಾರ್ಡ್‌ಗಳಿಗೆ ಯೋಜನೆ ಮಂಜೂರು ಮಾಡದಿರುವುದನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ. ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಉದ್ಘಾಟಿಸಿದರು. ಕೃಷ್ಣ ಆಳ್ವ, ಡಿ.ಎನ್.  ರಾಧಾಕೃಷ್ಣ , ವಿಠಲ ರೈ, …

ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್  ಆಟೋಸ್ಟಾಂಡ್ ನಾಮಫಲಕ ಅನಾವರಣ

ಬದಿಯಡ್ಕ: ಪಂಚಾಯತ್‌ನ ಕನ್ನೆಪ್ಪಾಡಿಯಲ್ಲಿ ಫ್ರೆಂಡ್ಸ್ ಆಟೋ ಸ್ಟಾಂಡ್‌ನ ಉದ್ಘಾಟನೆ ಜರಗಿತು. ಪಂ. ಅಧ್ಯಕ್ಷ ಶಂಕರ ಡಿ. ನಾಮಫಲಕ ಅನಾವರಣಗೊಳಿಸಿ ಮಾತನಾಡುತ್ತಾ ನಾಡಿನ ಸುಸ್ಥಿತಿಯನ್ನು ಕಾಯುವಲ್ಲಿ ಕನ್ನೆಪ್ಪಾಡಿಯ ಆಟೋಚಾಲಕರು ಮಾದರಿಯಾಗಿದ್ದಾರೆ. ಪಂ. ಹಾಗೂ ಸಾರಿಗೆ ಇಲಾಖೆಯ ಆದೇಶಗಳನ್ನು ಯಥಾವತ್ತಾಗಿ ಪಾಲಿಸಿ ಚಾಲಕರು ನಾಡಿನ ಜನತೆಯ ಸೇವೆಯನ್ನು ಮಾಡುವುದರೊಂದಿಗೆ ಸಮಾಜಮುಖಿಯಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು. ಸದಸ್ಯ ಗಂಗಾಧರ ಗೋಳಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲೋಕ್ ಪಂ.ಸದಸ್ಯ ಮಹೇಶ್ ವಳಕ್ಕುಂಜ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, …

ಸಿಪಿಸಿಆರ್‌ಐ ಆವರಣ ಗೋಡೆ ಸಮುದ್ರ ಪಾಲು  ಕೃಷಿ ಭೂಮಿ ನೀರು ಪಾಲಾಗುವ ಭೀತಿ

  ಕಾಸರಗೋಡು: ಕಡಲ್ಕೊ ರೆತಕ್ಕೆ ಸಿಪಿಸಿಆರ್‌ಐಯ ತೋಟ ಅಪಾಯಕ್ಕೆ ಸಿಲುಕಿದೆ. ಕಾಸರ ಗೋಡು ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯ ಕಡಲತೀರದ ತೋಟ ಸುಮಾರು 1 ಕಿಲೋ ಮೀಟರ್ ಉದ್ದಕ್ಕೆ ಸಮುದ್ರ ತೀರ ಸಮೀಪ ವಿದ್ದು, ಇಲ್ಲಿ ಈಗ ಸುಮಾರು 8೦ ಮೀಟರ್ ಉದ್ದದ ಆವರಣಗೋಡೆ ಸಮುದ್ರ ಪಾಲಾಗಿದೆ. ಇನ್ನು 3೦ ಮೀಟರ್ ಉದ್ದದ ಆವರಣಗೋಡೆ  ಕುಸಿತದ ಅಂಚಿನಲ್ಲಿದೆ. ಈ ಹಿಂದೆ ಸಂಸ್ಥೆಯ ಗಡಿಯ ಹೊರಭಾಗದಲ್ಲಿ ಸಮೀಪದ ಗ್ರಾಮವನ್ನು ಸಂಪರ್ಕಿಸುವ ಡಾಮರು ರಸ್ತೆಯಿದ್ದು, ಸಮುದ್ರವು ಗಡಿಯಿಂದ ಸುಮಾರು …

ಜೇಮ್ಸ್ ಡಿಸೋಜ ನಿಧನ

ಪೆರ್ಲ: ಇಲ್ಲಿಗೆ ಸಮೀಪದ ಬೊಲ್ಕಿನಡ್ಕ ನಿವಾಸಿ ಜೇಮ್ಸ್ ಡಿಸೋಜ (72) ನಿನ್ನೆ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೃಷಿಕರಾಗಿದ್ದ ಇವರು ಮಣಿಯಂಪಾರೆ ಸಂತ ಲಾರೆನ್ಸ್‌ರ ಇಗರ್ಜಿ ನಿರ್ಮಾಣ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಯಾಗಿ ಕಾರ್ಯನಿರ್ವ ಹಿಸಿದ್ದರು. ಮೃತರು ಪತ್ನಿ ಲೂಸಿ ಡಿಸೋಜ, ಮಕ್ಕಳಾದ ಸಂತೋಷ್ ಡಿಸೋಜ, ದಯಾಕಿಶೋರ್, ಸಚಿನ್, ಸೋಫಿಯ, ಸೊಸೆಯಂದಿರಾದ ಝೀನಪ್ರಿಯ, ವಿನಯ ಡಿಸೋಜ, ಅಶ್ವಿನಿ ಡಿಸೋಜ, ಸಹೋದರ ಥೋಮಸ್ ಡಿಸೋಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೊಸಂಗಡಿಯಲ್ಲಿ ಆಟೋ ಚಾಲಕರ ನಿಲ್ದಾಣ ಶಾಸಕರಿಂದ ಉದ್ಘಾಟನೆ

ಮಂಜೇಶ್ವರ: ಹೊಸಂಗಡಿಯಲ್ಲಿ ರಿಕ್ಷಾ ಚಾಲಕರು ಮತ್ತು ಮಾಲಕರು ಸುಮಾರು ೪.೫೦ ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಆಟೋ ಫ್ರೆಂಡ್ಸ್ ಹೊಸಂ ಗಡಿ ಎಂಬ ಹೆಸರಿನ ಆಟೋರಿಕ್ಷಾ ನಿಲ್ದಾಣವನ್ನು ನಿನ್ನೆ ಉದ್ಘಾಟಿಸಲಾ ಯಿತು. ಹೊಸಂಗಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾ ಗಿರುವ ಈ ನಿಲ್ದಾಣವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಶುಭ ಹಾರೈಸಿದರು. ಹಿರಿಯ ಆಟೋ ಚಾಲಕ ಶ್ರೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಹಿರಿಯ ಆಟೋ ಚಾಲಕರನ್ನು ಅಭಿನಂದಿಸಲಾ …

ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಯುವತಿಯರು ಮೃತ್ಯು

ಕಾಸರಗೋಡು:  ಇಲಿ ವಿಷ ಸೇವಿಸಿ  ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಇಬ್ಬರು ಯುವತಿಯರು ಮೃತಪಟ್ಟ ಘಟನೆ ವೆಳ್ಳೇರಿಕುಂಡ್ ಹಾಗೂ ಪಡನ್ನಕ್ಕಾಡ್‌ನಲ್ಲಿ ನಡೆದಿದೆ. ಕಾಞಂಗಾಡ್ ಪಡನ್ನಕ್ಕಾಡ್  ಸಿಯಾರತ್ತಿಂಕ್ಕರ ಹೆಲ್ತ್ ಸೆಂಟರ್ ಸಮೀಪದ ಎಂ.ಕೆ. ಅಬ್ದುಲ್  ರಹ್ಮಾನ್ರ ಪುತ್ರಿ  ಎಂ.ಕೆ.ತಾಹಿರ (35)ಮೃತಪಟ್ಟ ಯುವತಿ.  ಜುಲೈ ೨೮ರಂದು ಮಧ್ಯಾಹ್ನ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಹಿರರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು.  ವೈದ್ಯರು ತಪಾಸಣೆ ನಡೆಸುತ್ತಿದ್ದ ವೇಳೆ ತಾನು ಇಲಿವಿಷ ಸೇವಿಸಿರುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ತಜ್ಞ ಚಿಕಿತ್ಸೆಗಾಗಿ ಈಕೆಯನ್ನು …

ಶೌಚಾಲಯದ ತ್ಯಾಜ್ಯ ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷೆ: ಟ್ಯಾಂಕರ್ ಮಾಲಕನಿಗೆ 25 ಸಾವಿರ ರೂ. ದಂಡ ವಿಧಿಸಿದ ಪಂಚಾಯತ್

ಕಾಸರಗೋಡು: ಶೌಚಾಲಯದ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸಲು ತಲುಪಿದ ವಾಹನಕ್ಕೆ ನಾಗರಿಕರು ತಡೆಯೊಡ್ಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅನಂತರದ ಕ್ರಮದಂತೆ  ಪಂಚಾಯತ್ ಅಧಿಕಾರಿ ಗಳು ವಾಹನದ ಮಾಲಕನಿಗೆ  25 ಸಾವಿರ  ರೂಪಾಯಿ ದಂಡ ವಿಧಿಸಿದ್ದಾರೆ.  ನಿನ್ನೆ ಮುಂಜಾನೆ 1 ಗಂಟೆ ವೇಳೆ ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯ ಮೊಗ್ರಾಲ್ ಪುತ್ತೂರು ಆಜಾದ್‌ನಗರದಲ್ಲಿ ಶೌಚಾಲಯದ ತ್ಯಾಜ್ಯ ಉಪೇಕ್ಷಿಸಲು ಯತ್ನ ನಡೆದಿದೆ. ಈ ಭಾಗದಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಾಗರಿಕರು ಜಾಗ್ರತೆ ಪಾಲಿಸುತ್ತಿದ್ದರು. ಇದೇ ವೇಳೆ ನಿನ್ನೆ ಮುಂಜಾನೆ  …

ಗುಪ್ತಾಂಗದಲ್ಲಿ ಅಡಗಿಸಿ ಸಾಗಿಸಿದ ಎಂಡಿಎಂಎ ಸಹಿತ ಯುವತಿ, ಗೆಳೆಯ ಸೆರೆ

ಕೊಚ್ಚಿ: ಗುಪ್ತಾಂಗದಲ್ಲಿ ಅಡಗಿಸಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ ಸಹಿತ ಯುವತಿ ಹಾಗೂ ಗೆಳೆಯನನ್ನು ಅಬಕಾರಿ ತಂಡ ಬಂಧಿಸಿದೆ. ಆಲಪ್ಪುಳ ತೃಕುನ್ನಪ್ಪುಳ ಕೋಟೆಮುರಿ ಪಾಂಡಿಗ ಶಾಲೆ ನಿವಾಸಿ ಮುಹಮ್ಮದ್ ಶಾಫಿ (29), ಆಲಪ್ಪುಳ ನಿವಾಸಿ ಸರಿತ (30) ಎಂಬಿವರನ್ನು ಬಂಧಿಸಲಾಗಿದೆ. ಇವರಿಂದ 94.032 ಗ್ರಾಂ ಎಂಡಿಎಂಎಯನ್ನು ಅಬಕಾರಿ ತಂಡ ವಶಪಡಿಸಿದೆ. ಬೆಂಗಳೂರಿನಿಂದ ಎಂಡಿಎಂಎ ಎರ್ನಾಕುಳಂಗೆ ಹಾಗೂ ಆಲಪ್ಪುಳಕ್ಕೆ ತಲುಪಿಸಿ ವಸತಿಗೃಹಗಳನ್ನು ಕೇಂದ್ರೀಕರಿಸಿ ಇವರು ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರೆಂದು ಅಬಕಾರಿ ತಂಡ ತಿಳಿಸಿದೆ. ಎರ್ನಾಕುಳಂ ಸೌತ್‌ನ …