ಕುಂಬಳೆ ಭಾಸ್ಕರನಗರದಲ್ಲಿ ಕಾರು ಅಪಘಾತ: ನಾಲ್ಕು ಮಂದಿಗೆ ಗಾಯ

ಕುಂಬಳೆ: ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಸಮೀಪ ಭಾಸ್ಕರನಗರದಲ್ಲಿ ಇಂದು ಬೆಳಿಗ್ಗೆ ಕಾರು ಅಪಘಾತವುಂಟಾಗಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕುಂಬಳೆಯಿಂದ ಮುಳ್ಳೇರಿಯ ಭಾಗಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಮೋರಿಸಂಕದ ಕೆಳಗಿನ ಹೊಂಡಕ್ಕೆ ಮಗುಚಿ ಬಿದ್ದಿದೆ. ಬೆಳ್ಳೂರು ನಿವಾಸಿಗಳಾದ ಇಬ್ರಾಹಿಂ, ನೌಶಾದ್, ಉನೈಸ್ ಸಹಿತ ನಾಲ್ಕು ಮಂದಿ ಕಾರಿನಲ್ಲಿದ್ದರು. ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆ ತಿಳಿದು ತಲುಪಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳು ಕುಂಬಳೆಯ ಆಸ್ಪತ್ರೆಯಲ್ಲಿ …

ಧರ್ಮಸ್ಥಳ ಒಳಸಂಚು ಪುರಾವೆ ಗಳುಳ್ಳ ಫೋನ್ ಪತ್ತೆ-ಎಸ್‌ಐಟಿ

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಸಂಬಂಧಿಸಿ ನಡೆದ ಒಳಸಂಚಿನ ಬಗ್ಗೆ ನಿರ್ಣಾಯಕ ಪುರಾವೆಗಳು ಲಭಿಸಿವೆ ಎಂದು ಪ್ರತ್ಯೇಕ ತನಿಖಾ ತಂಡ ತಿಳಿಸಿದೆ. ಚಿನ್ನಯ್ಯ ಉಪಯೋಗಿಸಿರುವ ಸಹಿತ ಆರು ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಒಳಸಂಚು ಸಾಬೀತುಪಡಿಸುವ ವೀಡಿಯೋಗಳು ಫೋನ್‌ನಲ್ಲಿ ಇದೆ ಎಂದು ಎಸ್‌ಐಟಿ ತಿಳಿಸುತ್ತಿದೆ.  ಇದೇ ವೇಳೆ ಚಿನ್ನಯ್ಯನನ್ನು ಮಹೇಶ್ ತಿಮರೋಡಿಯ ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೆ ಪುತ್ರಿ ನಾಪತ್ತೆಯಾಗಿದ್ದಾಳೆಂದು ತಿಳಿಸಿದ್ದ ಸುಜಾತಾ ಭಟ್‌ನ್ನು ಇಂದು ಮತ್ತೆ ತನಿಖೆಗೊಳಪಡಿಸಲು ಎಸ್‌ಐಟಿ ನಿರ್ಧರಿಸಿದೆ. ಚಿನ್ನಯ್ಯ ನೀಡಿದ ಹೇಳಿಕೆಯಲ್ಲಿ ಕಂಡುಬಂದ ಸಂಶಯವೇ ಆರೋಪ ಸುಳ್ಳಾಗಿದೆ …

ಜಮ್ಮು-ಕಾಶ್ಮೀರ ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 30ಕ್ಕೇರಿಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಯಿಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಮಾತಾ ವೈಷ್ಣೋದೇವಿ ದೇಗುಲಕ್ಕೆ ಸಾಗುವ ಮಾರ್ಗದಲ್ಲಿ ಅರ್ಧ ಕುಮರಿಯ ಇಂದ್ರಪ್ರಸ್ತ ಭೋಜನಾಲಯ ಬಳಿ ನಿನ್ನೆ ಸಂಜೆ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಅವಶೇಷ ಗಳಡಿ ಇನ್ನೂ ಹಲವರು ಸಿಲುಕಿಕೊಂಡಿ ರುವ ಶಂಕೆ ಉಂಟಾಗಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಂದಾಗಿ ಜಮ್ಮು-ಕಾಶ್ಮೀರದ ಇತರ …

ವೇದಮೂರ್ತಿ ಬಜೆ ಗೋಪಾಲಕೃಷ್ಣ ಭಟ್ ನಿಧನ

ಬೋವಿಕ್ಕಾನ: ಇರಿಯಣ್ಣಿ ಸಮೀಪ ಪಯ ನಿವಾಸಿ ವೇದ ಮೂರ್ತಿ ಶ್ರೀ ಬಜೆ ಗೋ ಪಾಲಕೃಷ್ಣ ಭಟ್ (82) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನಹೊಂದಿದರು. ಪ್ರಸಿದ್ಧ ಪುರೋಹಿತರೂ, ಧಾರ್ಮಿಕ ಪಂಡಿತರೂ ಆಗಿದ್ದ ಇವರು ಊರ ಹಾಗೂ ಪರವೂರ ಕ್ಷೇತ್ರಗಳಲ್ಲಿ, ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ  ಪೌರೋಹಿತ್ಯದ ನೇತೃತ್ವ ವಹಿಸುತ್ತಿದ್ದರು. ಮೃತರು ಪತ್ನಿ ಸರಸ್ವತಿ ಭಟ್, ಮಕ್ಕಳಾದ ಶ್ರೀಕೃಷ್ಣ ಭಟ್ (ನ್ಯಾಯವಾದಿ ಮಂಗಳೂರು), ಈಶ್ವರಿ ಭಟ್, ಶಾರದಾ ಭಟ್, ಶ್ಯಾಮ ಭಟ್ (ಪುರೋಹಿತರು), ಅಳಿಯ ರಾಮಕೃಷ್ಣ ಭಟ್ (ಪುನೂರುಕಜೆ ಸುಳ್ಯ), ಸೊಸೆಯಂದಿರಾದ  …

ರಿಕ್ಷಾದಲ್ಲಿ ಸಾಗಿಸುತ್ತಿದ್ದ ಗಾಂಜಾ ವಶ:  ಓರ್ವ ಸೆರೆ; ಇನ್ನೋರ್ವ ಪರಾರಿ

ಬದಿಯಡ್ಕ: ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 1 ಕಿಲೋ 312 ಗ್ರಾಂ ಗಾಂಜಾವನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಂಗಡಿಮೊಗರು ಪೆರ್ಲಾಡಂ ನಿವಾಸಿ ರಿಫಾಯಿ ಬಿ.ಎಂ.(42) ಎಂಬಾತನನ್ನು ಬಂಧಿಸಲಾಗಿದೆ. ಈತನ ಜತೆಗಿದ್ದ ಬಾಪಲಿಪೊನ ನಿವಾಸಿ ಬಿ.ಎಂ. ಸಹದ್ ಯಾನೆ ಅದ್ದು ಎಂಬಾತ ಓಡಿ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ಚರ್ಲಡ್ಕ ಬಸ್ ನಿಲ್ದಾಣ ಬಳಿ ಬದಿಯಡ್ಕ ಎಸ್.ಐ. ಅಖಿಲ್ ನೇತೃತ್ವದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ್, ಶಶಿ, ಸಿ.ಪಿ.ಒ.ಗಳಾದ ಶ್ರೀನೇಶ್, ಅಭಿಲಾಶ್ ಎಂಬಿವರು ಗಸ್ತು ನಡೆಸುತ್ತಿದ್ದ ವೇಳೆ ಬಂದ …

ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ಮರುಪರಿಶೀಲನಾ ಅರ್ಜಿ ಹಿಂತೆಗೆದುಕೊಂಡ ರಾಜ್ಯ ಸರಕಾರ ; ಕೆ. ಸುರೇಂದ್ರನ್ ಮತ್ತಿತರರಿಗೆ ನಿರಾಳ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ೨೦೨೧ರಲ್ಲಿ ನಡೆದ ಚುನಾವಣೆಯಲ್ಲಿ ಲಂಚ ನೀಡಲಾಗಿದೆಯೆಂದು ಆರೋಪಿಸಿ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತ್ತಿತರರ ವಿರುದ್ಧ ಹೂಡಲಾಗಿದ್ದ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ  ಸಲ್ಲಿಸಲಾಗಿದ್ದ  ಅರ್ಜಿಯನ್ನು ರಾಜ್ಯ ಸರಕಾರ ಹಿಂತೆಗೆದುಕೊಂಡಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದ್ದ ಕೆ. ಸುರೇಂದ್ರನ್, ಬಿಜೆಪಿಯ  ಕಾಸರಗೋಡಿನ ಇತರ ಐವರು ನೇತಾರರನ್ನು ನಿರಾಳಗೊಳಿಸುವಂತೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಉಮೇದ್ವಾರರಾಗಿ ಮಂಜೇಶ್ವರದಲ್ಲಿ …

ಮಾಜಿ ಆಂಬುಲೆನ್ಸ್ ಚಾಲಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಂಬುಲೆನ್ಸ್ ಮಾಜಿ ಚಾಲಕ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಬಲ್ಲಾ ಕಡಪ್ಪುರ ನಿವಾಸಿ ಅಬ್ದುಲ್ಲ (53) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 8.15 ರ ವೇಳೆ ಇವರು ಕಾಞಂಗಾಡ್ ರೈಲ್ವೇ ನಿಲ್ದಾಣ ಸಮೀಪ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾವಕ್ಕೆ ತಲುಪಿಸಿದ್ದಾರೆ. ಅಬ್ದುಲ್ಲ ಅರಿಮಲ ಹಾಸ್ಪಿಟಲ್‌ನ ಮಾಜಿ ಆಂಬುಲೆನ್ಸ್ ಚಾಲಕರಾಗಿದ್ದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸ್ಥಳದಿಂದ ಕಬ್ಬಿಣದ ಸಾಮಗ್ರಿಗಳನ್ನು ಕದ್ದು ಸಾಗಿಸಿದ ತಂಡದ ಮೂವರ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸ್ಥಳದಿಂದ ಕಬ್ಬಿಣದ ಸಾಮಗ್ರಿಗಳನ್ನು ಕದ್ದು ಸಾಗಿಸಿದ ತಂಡಕ್ಕೆ ಸೇರಿದ ಮೂವರನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್‌ಐ ಎ.ಎನ್. ಸುರೇಶ್ ಕುಮಾರ್ ನೇತೃತ್ವದ ಪೊಲೀ ಸರ ತಂಡ ಬಂಧಿಸಿದೆ. ಪೆರಿಯ ಚೆಕ್ಕಿ ಪಳ್ಳದ ಎಂ.ಮನ್ಸೂರ್(31), ಕುಣಿಯ ಪ್ಪಾರ ಹೌಸ್‌ನ ಮೊಹಮ್ಮದ್ ರಿಸಾದ್ (26) ಮತ್ತು ಕುಣಿಯ ಕುಂಡೂರ್ ಹೌಸ್‌ನ ಕೆ.ಎಚ್. ಅಲಿ ಅಸ್ಕರ್ (26) ಬಂಧಿತರಾದ ಆರೋಪಿಗಳು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಎರಡನೇ ರೀಚ್‌ಗೆ ಸೇರಿದ ಚೆಂಗಳ-ನೀಲೇಶ್ವರ ವಲಯದ ಪೊಯಿನಾಚಿ ಸೌತ್‌ನಿಂದ …

ಕಾಲೇಜು ಯೂನಿಯನ್ ಚುನಾವಣೆ: ಕಾಸರಗೋಡಿನಲ್ಲಿ ಎಸ್‌ಎಫ್‌ಐ, ಮಂಜೇಶ್ವರದಲ್ಲಿ ಎಬಿವಿಪಿ ಗೆಲುವು

ಕಾಸರಗೋಡು: ಕಣ್ಣೂರು ವಿವಿ ಅಧೀನದಲ್ಲಿರುವ ಕಾಲೇಜುಗಳ ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ  ಜಿಲ್ಲೆಯಲ್ಲಿ ಎಸ್‌ಎಫ್‌ಐ  ಮುನ್ನಡೆ ಸಾಧಿಸಿದೆ. ಐದು ಸರಕಾರಿ ಕಾಲೇಜುಗಳ ಪೈಕಿ ನಾಲ್ಕರಲ್ಲಿ ಎಸ್‌ಎಫ್‌ಐ, 1ರಲ್ಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ. ಮೂರು ಐಡೆಡ್ ಕಾಲೇಜುಗಳ ಪೈಕಿ 2ರಲ್ಲಿ ಎಸ್‌ಎಫ್‌ಐ, 1ರಲ್ಲಿ ಯುಡಿಎಸ್‌ಎಫ್ ಗೆಲುವು ಸಾಧಿಸಿದೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಸ್‌ಎಫ್‌ಐ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ.

ಹಿಂದಕ್ಕೆ ಚಲಿಸಿದ ಟೆಂಪೋ ಟ್ರಾವಲರ್ ಬೈಕ್‌ಗೆ ಢಿಕ್ಕಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಪೆಟ್ರೋಲ್ ಪಂಪ್‌ನಿಂದ ಹಿಂದಕ್ಕೆ ಚಲಿಸಿದ ಟೆಂಪೋ ಟ್ರಾವಲರ್ ಬೈಕ್‌ಗೆ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಕಾರಮಲ ನಿವಾಸಿಯೂ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಕಂಡತ್ತಿಲ್ ಅಲ್ಬರ್ಟ್ ಜೋಯಿಸ್ (20) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಸಂಜೆ ೫ ಗಂಟೆಗೆ ಮಲೆನಾಡು ಹೆದ್ದಾರಿಯಲ್ಲಿ ಚಿಟ್ಟಾರಿಕಲ್ ನಾಯರ ಪೆಟ್ರೋಲ್ ಪಂಪ್ ಸಮೀಪ ಅಪಘಾತವುಂ ಟಾಗಿದೆ. ಗಂಭೀರ ಗಾಯಗೊಂಡ ಅಲ್ಬರ್ಟ್‌ರನ್ನು ಚೆರುಪುಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಾರಮಲ ನಿವಾಸಿ ದಿ| ಕಂಡತ್ತಿಲ್ ಜೋಯಿಸ್‌ರ ಪುತ್ರನಾದ ಮೃತರು …