ಟ್ರೋಲಿಂಗ್ ನಿಷೇಧ ಇಂದು ತಡರಾತ್ರಿ ತೆರೆ : ಭಾರೀ ಮತ್ಸ್ಯ ಸಂಪತ್ತು ನಿರೀಕ್ಷೆಯಲ್ಲಿ ಮೀನುಕಾರ್ಮಿಕರು

ಕಾಸರಗೋಡು: ಮಳೆಗಾಲ ಸಮು ದ್ರದಲ್ಲಿ ಮತ್ಸ್ಯಗಳ ಸಂತಾನೋತ್ಪತ್ತಿಯ ಋತುವಾಗಿದ್ದು, ಆ ಹಿನ್ನೆಲೆಯಲ್ಲಿ ಇಂತಹ ವೇಳೆಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರುವ ಪ್ರತಿವರ್ಷದ ಕ್ರಮವೆಂಬಂತೆ ಕೇರಳದಲ್ಲಿ ಕಳೆದ ೫೨ ದಿನಗಳ ಹಿಂದೆ ಮೀನು ಗಾರಿಕೆ (ಟ್ರೋಲಿಂಗ್)ಗೆ ಹೇರಲಾಗಿದ್ದ ಟ್ರೋಲಿಂಗ್ ನಿಷೇಧಕ್ಕೆ ಇಂದು ರಾತ್ರಿ 12 ಗಂಟೆಗೆ ತೆರೆ ಬೀಳಲಿದೆ. ಇದರಿಂ ದಾಗಿ ಬೆಸ್ತರು ಭಾರೀ ಮತ್ಸ್ಯಸಂಪತ್ತಿನ ನಿರೀಕ್ಷೆಯೊಂದಿಗೆ  ಇಂದು ತಡರಾತ್ರಿಯಿಂದ ಮತ್ತೆ ಯಾಂತ್ರೀಕೃತ ದೋಣಿಗಳೊಂದಿಗೆ ಸಮುದ್ರಕ್ಕಿಳಿಯಲಿ ದ್ದಾರೆ. ಟ್ರೋಲಿಂಗ್ ನಿಷೇಧ ಅವಧಿ ಯಲ್ಲಿ ಬೆಸ್ತರು ತಮ್ಮ ದೋಣಿ ಮತ್ತು …

ನೆಲ್ಲಿಕುಂಜೆಯಲ್ಲಿ ಗಲ್ಫ್ ಉದ್ಯೋಗಿ ಮನೆಯಿಂದ ಕಳವು: ತನಿಖೆ ಆರಂಭ

ಕಾಸರಗೋಡು:  ನೆಲ್ಲಿಕುಂಜೆ ಯಲ್ಲಿ  ಗಲ್ಫ್ ಉದ್ಯೋಗಿಯ ಮನೆಯಿಂದ ಚಿನ್ನಾಭರಣ ಹಾಗೂ ವಿವಿಧ ಉಪಕರಣಗಳು ಕಳವಿಗೀ ಡಾದ ಪ್ರಕರಣದಲ್ಲಿ  ಕಾಸರಗೋಡು ನಗರಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನೆಲ್ಲಿಕುಂಜೆ ಲೈಟ್ ಹೌಸ್ ಬಳಿಯ  ಮೋಹನನ್ ಎಂಬವರ ಮನೆಯಿಂದ ಕಳವು ನಡೆದಿದೆ. ಮನೆಯ ಕಪಾಟಿನಲ್ಲಿದ್ದ ಒಂದೂವರೆ ಪವನ್‌ನ ಚಿನ್ನದ ಬಳೆ, ಐಫೋನ್‌ನ ಚಾರ್ಜರ್, ಈಯರ್ ಡ್ರೋಪ್, ಹೆಡ್‌ಸೆಟ್, ಲ್ಯಾಪ್ ಟಾಪ್‌ನ ಎರಡು ಬ್ಯಾಗ್‌ಗಳು ಕಳವಿ ಗೀಡಾಗಿರುವುದಾಗಿ ದೂರಲಾಗಿದೆ. ಮೋಹನನ್ ಹಾಗೂ ಕುಟುಂಬ ಗಲ್ಫ್‌ನಲ್ಲಿದ್ದಾರ. ಮೋಹನ ನ್‌ರ ಪತ್ನಿಯ ತಾಯಿ ಮುಲ್ಲ ಮನೆಯನ್ನು  …

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 15 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಹತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಆಂಡ್ ಸ್ಪೆಷಲ್ ಕೋರ್ಟ್‌ನ ನ್ಯಾಯಾಧೀಶ ರಾದ ಕೆ. ಸುರೇಶ್ ಕುಮಾರ್ 15 ವರ್ಷ ಕಠಿಣ ಸಜೆ ಮತ್ತು 75,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಗಲ್ಪಾಡಿ ಅಡ್ಕ ವೀರನಗರ ನಿವಾಸಿ ಪವಿತ್ರ ಕುಮಾರ್ (45) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಕುಂಬಳೆ …

ಪೈಂಟಿಂಗ್ ಕಾರ್ಮಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಪೈಂಟಿಂಗ್ ಕಾರ್ಮಿಕನಾದ ಯುವಕ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಡೂರು ಅಡ್ಕ ಚಾಕೋಟ್ ಎಂಬಲ್ಲಿನ ಅಭಿಲಾಷ್ (28) ಮೃತಪಟ್ಟ ಯುವಕ. ಕಳೆದ ನಾಲ್ಕು ದಿನಗಳಿಂದ ಇವರು ಕೆಲಸಕ್ಕೆ  ಹೋಗಿರಲಿಲ್ಲವೆನ್ನಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಯಾದರೂ ಬೆಡ್‌ರೂಂನ ಬಾಗಿಲು ತೆರೆಯದುದರಿಂದ  ಮನೆಯವರು   ನೋಡಿದಾಗ ಅಭಿಲಾಷ್ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಘಟನೆ ಬಗ್ಗೆ ಆದೂರು …

ಎಂಡಿಎಂಎ ಕೈವಶವಿರಿಸಿದ ಪ್ರಕರಣ : ಆರೋಪಿಗೆ ಮೂರು ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಮಾದಕ ದ್ರವ್ಯವಾದ ಎಂಡಿಎಂಎ ಕೈವಶವಿರಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದ  ನ್ಯಾಯಾ ಧೀಶರಾದ ವಿನಾಯಕ ರಾವ್ ಆರ್  ಅವರು ಮೂರು ವರ್ಷ ಕಠಿಣ ಸಜೆ ಹಾಗೂ 25,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಚೆರ್ಕಳ ಮುಟ್ಟತ್ತೋಡಿಯ ಅಪಾರ್ಟ್‌ಮೆಂಟ್‌ವೊಂದಲ್ಲಿ ವಾಸಿಸುತ್ತಿರುವ ಅಬ್ದುಲ್ ಸಿ (41) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೦ ಸೆಪ್ಟಂಬರ್ ೨೬ರಂದು ರಾತ್ರಿ ಚೆರ್ಕಳದಲ್ಲಿ …

ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ

ಕಾಸರಗೋಡು: ಮನೆಯಿಂದ ಹೊರ ಹೋದ ವ್ಯಕ್ತಿ ಹಿಂತಿರುಗಲಿಲ್ಲ ವೆಂದು ದೂರಲಾಗಿದೆ. ಪೆರಿಯ ಕಲ್ಯೋಟ್ ಆರಾಟ್‌ಕಡವ್ ಹೌಸ್‌ನ ದಿ| ರಾಮನ್‌ರ ಪುತ್ರ ಪುರುಷೋತ್ತಮ (52) ನಾಪತ್ತೆಯಾ ದವರು. ಸಹೋದರ ಟಿ. ಕೃಷ್ಣನ್ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗೆ 6 ಗಂಟೆಗೆ ಪುರುಷೋತ್ತಮ ಮನೆಯಿಂದ ಹೊರ ಹೋಗಿದ್ದನು. ಆ ಬಳಿಕ ಅವರು ಹಿಂತಿರುಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ಸಹೋದರ ದೂರು ನೀಡಿದ್ದಾರೆ. ನಾಪತ್ತೆಯಾದ ಬಗ್ಗೆ ಪೊಲೀಸರು ನಡೆಸಿದ ತನಿಖೆ ಯಲ್ಲಿ ಕಾಞಂಗಾಡ್‌ನಲ್ಲಿ ಇವರನ್ನು …

ದೇರಂಬಳ ಸೇತುವೆ ಶೀಘ್ರ ನಿರ್ಮಾಣ-ಎಕೆಎಂ ಅಶ್ರಫ್

 ಮೀಂಜ: ಮಂಗಲ್ಪಾಡಿ ಮೀಂಜ ಪಂಚಾಯತ್‌ಗಳನ್ನು ಜೋಡಿಸುವ ದೇರಂಬಳ ಸೇತುವೆಯನ್ನು ಕೂಡಲೇ ನಿರ್ಮಿಸಲಾಗುವುದೆಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಕುಸಿದ ದೇರಂಬಳ ಸೇತುವೆ ಸಮೀಪದ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ. ಮೂರು ವರ್ಷದ ಹಿಂದೆ ಸೇತುವೆ ಕುಸಿದಕೂಡಲೇ ಶಾಸಕರ  ಮಧ್ಯಪ್ರವೇಶದಿಂದಾಗಿ ಮೈನರ್ ಇರಿಗೇಶನ್ ಇಲಾಖೆ ಹೊಸ ಸೇತುವೆಗಾಗಿ  ಇನ್ವೆಸ್ಟಿಗೇಶನ್ ನಡೆಸಿತ್ತು. ಆದರೆ ಇದರ ಸಮೀಪದಲ್ಲೇ ಜಲಜೀವನ್ ಮಿಷನ್ ಯೋಜನೆಯಂಗವಾಗಿ ಮೇಜರ್ ಇರಿಗೇಶನ್ ಇಲಾಖೆ ಚೆಕ್ ಡ್ಯಾಂ ಸಹಿತದ ಸೇತುವೆ …

ಜಂಬೋ ಸರ್ಕಸ್: ನಗರದಲ್ಲಿ  ಪ್ರದರ್ಶನ ಆಗಸ್ಟ್ 3ರಂದು ಕೊನೆ

ಕಾಸರಗೋಡು: ವಿಸ್ಮಯ ಸೃಷ್ಟಿಸಿ ಪ್ರದರ್ಶನ ಮುಂದುವರಿಯುತ್ತಿರುವ ಭಾರತದ ಅತ್ಯಂತ ದೊಡ್ಡ ಜಂಬೋ ಸರ್ಕಸ್ ಇನ್ನು ಕೆಲವೇ ದಿನಗಳಲ್ಲಿ ಕಾಸರಗೋಡು ನಗರದ ಪ್ರದರ್ಶನ ಕೊನೆಗೊಳಿಸಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸುಮಾರು ಒಂದು ತಿಂಗಳಿನಿಂದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲಿ ದಿನಕ್ಕೆ ಮೂರು ಪ್ರದರ್ಶನ ನೀಡುತ್ತಿರುವ ಜಂಬೋ ಸರ್ಕಸ್‌ಗೆ ಈಗಾಗಲೇ ಜಿಲ್ಲೆಯ ವಿವಿಧ ಕಡೆಗಳಿಂದ ಜನ ತಲುಪಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ಗಂಟೆಗಳ ಕಾಲದ ಪ್ರದರ್ಶನದಲ್ಲಿ ೩೦ಕ್ಕೂ ಹೆಚ್ಚು ವಿಸ್ಮಯ ಅಭ್ಯಾಸಗಳು ಇರುತ್ತದೆ. ಟಾನ್ಸಾನಿಯ, ಎಥಿಯೋಪಿಯ ಮೊದಲಾದ …

ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ  ಚಾತುರ್ಮಾಸ್ಯ ವ್ರತ ಆರಂಭ

ಕಟಪಾಡಿ: ಗುರುವಿನ ಅನುಗ್ರ ಹವೇ ಬದುಕಿನ ಹುಣ್ಣಿಮೆ, ಗುರುವಿನ ಅನುಗ್ರಹವಿಲ್ಲದ ಬದುಕು ಅಮಾವಾಸ್ಯೆ. ಬದುಕಿನಲ್ಲಿ ಸುಖ, ಶಾಂತಿ ಮತ್ತು ಆತ್ಮಾನಂದವನ್ನು ಪಡೆಯಲು ಪ್ರತಿ ಯೊಬ್ಬರಿಗೂ ಗುರುವಿನ ಅನುಗ್ರಹ ಹಾಗೂ ಸಾನ್ನಿಧ್ಯ ಅಗತ್ಯವಾಗಿದೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಪೀಠಾಧಿಪತಿ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಪಡುಕುತ್ಯಾರಿನ ಶ್ರೀಮಠ ದಲ್ಲಿ ಬುಧವಾರ ಆರಂಭಗೊAಡ ೨೨ನೇ ಚಾತುರ್ಮಾಸ್ಯ ವ್ರತಾಚರಣೆಯ ಮೊದಲ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ …

ಕೊಂಡೆವೂರು ಮಠದಲ್ಲಿ ಗುರುಪೂರ್ಣಿಮೆ :ಶ್ರೀಗಳ ಚಾತುರ್ಮಾಸ್ಯ ಆರಂಭ

ಉಪ್ಪಳ: ಕೊಂಡೆವೂರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗುರುಪೂರ್ಣಿಮೆಯಂದು 23ನೇ ವರ್ಷದ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಶ್ರೀ ಮಠದಲ್ಲಿ ಗಣಹೋಮ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತ ಸಹಿತ 108 ಸೀಯಾಳಾಭಿಷೇಕ, ವ್ಯಾಸ ಪೂಜೆ, ಕ್ಷೇತ್ರದಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ 6.30ಕ್ಕೆ ಕ್ಷೇತ್ರದಲ್ಲಿ ಮಹಾಪೂಜೆಯಾದ ನಂತರ ಶ್ರೀ ಗಾಯತ್ರಿ ಮಂಟಪದಲ್ಲಿ ಶ್ರೀ ಗುರುಪಾದುಕಾ ಪೂಜೆ ನಡೆಯಿತು.