ಅವಯವ ವ್ಯಾಪಾರಕ್ಕಾಗಿ ನಕಲಿ ದಾಖಲುಪತ್ರ ಸೃಷ್ಟಿ: ಪ್ರಧಾನ ಆರೋಪಿ ಕಾಸರಗೋಡು ನಿವಾಸಿ ಉತ್ತರಪ್ರದೇಶದಲ್ಲಿ ಸೆರೆ

ಕಾಸರಗೋಡು: ನಕಲಿ ದಾಖಲು ಪತ್ರಗಳನ್ನು ಸೃಷ್ಟಿಸಿ ಅವಯವ ದಾನ ನಡೆಸುತ್ತಿದ್ದ ಪ್ರಕರಣದ ಪ್ರಧಾನ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಕಳನಾಡು ಆಲ್ ನಿಹಾಮತ್ ಮಂಜಿಲ್ ನಿವಾಸಿ ಮುಹಮ್ಮದ್ ನಜೀಬ್ ಕಲ್ಲಟ್ರ (53) ಬಂಧಿತ ಪ್ರಧಾನ ಆರೋಪಿ. ಎರ್ನಾಕುಳಂ ಗ್ರಾಮೀಣ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕೆ.ಎಸ್. ಸುದರ್ಶನ್ ನೇತೃತ್ವದ ವಿಶೇಷ ಪೊಲೀಸರ ತಂಡ ಉತ್ತರಪ್ರದೇಶದ ಗಾಸಿಯಾಬಾದ್ ನಿಂದ ಈತನನ್ನು ಸೆರೆಹಿಡಿದಿದೆ. ತನ್ನನ್ನು ಪೊಲೀಸರು ಹುಡುಕಾಡುತ್ತಿ ರುವುದು  ಮನಗಂಡ ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್‌ಮಾಡಿ …

ಪಂಚಾಯತ್ ನಿವೃತ್ತ ಕಾರ್ಯದರ್ಶಿ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ, ಮಂಜೇಶ್ವರ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಮಹಾಬಲ ಭಟ್ (85) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬದಿಯಡ್ಕ, ಪುತ್ತಿಗೆ ಸಹಿತ ವಿವಿಧ ಪಂಚಾಯತ್‌ಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಮಂಜೇಶ್ವರ ಪಂಚಾಯತ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ. ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಘಟಕದ ಸದಸ್ಯರಾಗಿದ್ದರು. ಮೃತರು ಪತ್ನಿ ರೇವತಿ, ಮಕ್ಕಳಾದ ಗಣೇಶ, ಪಾರ್ವತಿ, ಅಳಿಯ ನ್ಯಾಯವಾದಿ ಕೃಷ್ಣಮೂರ್ತಿ, ಸಹೋದರ ಸಹೋದರಿಯರಾದ ಸದಾಶಿವ ಭಟ್, ಲಕ್ಷಿ÷್ಮÃ, ಶಂಕರಿ, ಶಾರದಾ ಹಾಗೂ ಅಪಾರ ಬಂಧು ಬಳಗ ವನ್ನು …

ಕೂಲಿ ಕಾರ್ಮಿಕ ಅಸೌಖ್ಯದಿಂದ ನಿಧನ

ನೀರ್ಚಾಲು: ಕುಂಟಿಕ್ಕಾನ ಉರುಳಿತ್ತಡ್ಕ ನಿವಾಸಿ ದಿ| ಸುಂದರ ಎಂಬವರ ಪುತ್ರ ರಾಮ ಕೆ. (56) ನಿಧನ ಹೊಂದಿದರು. ಕೂಲಿ ಕಾರ್ಮಿಕ ನಾಗಿದ್ದ ಇವರು 3 ವರ್ಷಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ದೇವಕಿ, ಪತ್ನಿ ಗೀತ, ಮಕ್ಕಳಾದ ಚಂದ್ರಶೇಖರ, ವನಜ ಕುಮಾರಿ, ಸುರೇಶ್ ಕುಮಾರ್, ಅಳಿಯ ಗಂಗಾಧರ, ಸೊಸೆ ಶೀಬಾ ಮೋಳ್, ಸಹೋದರ ಸಹೋದರಿಯರಾದ ಸುಕುಮಾರ, ವೇಣುಗೋಪಾಲ, ಶೋಭಾ, ಜಾನಕಿ, ಶಾಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಯುವತಿಯ ಮೃತದೇಹ: ಪತಿ ಕಸ್ಟಡಿಗೆ

ಪಾಲಕ್ಕಾಡ್: 25ರ ಹರೆಯದ ಸೇಲಂ ನಿವಾಸಿ ಬಾಡಿಗೆ ಮನೆಯಲ್ಲಿ  ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಆತೂರು ಪೋತನಾಯಕನ್ ಪಾಳಯಂ ಪುದುಕೋತ್ತಂಪಡಿ ನಿವಾಸಿ ಕೃಷ್ಣವೇಣಿಯ ಮೃತದೇಹ ಈ ರೀತಿಯಲ್ಲಿ ಪತ್ತೆಯಾಗಿದೆ. ತೆನ್ನಾಡಿ ಬಜಾರ್ ವಿವೇಕಾನಂದ ರಸ್ತೆಯ ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ಕೃಷ್ಣವೇಣಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 10 ವರ್ಷಗಳಿಂದ ಒಟ್ಟೆಪ್ಪಾಲಂ ಹಾಗೂ ಪರಿಸರದಲ್ಲಿ ಇವರು ಬಾಡಿಗೆಗೆ ವಾಸಮಾಡುತ್ತಿದ್ದರು. ಪತಿ ಆತೂರು ನಿವಾಸಿ ಮಣಿಕಂಠನ್ ನಿರಂತರ ಮದ್ಯಪಾನ ಗೈದು ಮನೆಯಲ್ಲಿ ಗಲಾಟೆ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತೆಂದು ನೆರೆಮನೆ ನಿವಾಸಿಗಳು …

ಮುಹಿಮ್ಮಾತ್ ವಾರ್ಷಿಕ ಕೌನ್ಸಿಲ್ ಸಮಾರೋಪ: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತಿಗೆ: ಮುಹಿಮ್ಮಾತುಲ್ ಇಸ್ಲಾಮಿನ್ ಎಜ್ಯುಕೇಶನ್ ಸೆಂಟರ್‌ನ ವಾರ್ಷಿಕ ಕೌನ್ಸಿಲ್ ಸಮಾಪ್ತಿಗೊಂಡಿತು. ಕಲ್ಲಿಕೋಟೆ ಮರ್ಕ್ಸಿಲ್ ಅಧ್ಯಕ್ಷ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದು, ಮರ್ಕ್ಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಸಿ ಉದ್ಘಾಟಿಸಿದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಪ್ರಸ್ತಾಪಿಸಿದರು. ಹಸನುಲ್ ಅಹ್ದಲ್ ತಂಙಳ್ ಚರ್ಚೆಗಳಿಗೆ ನೇತೃತ್ವ ನೀಡಿದರು. ಮೂಸ ಸಖಾಫಿ ಕಳತ್ತೂರು ವರದಿ, ಉಮ್ಮರ್ ಸಖಾಫಿ ಕರ್ನೂರು ಆರ್ಥಿಕ ವರದಿ ಮಂಡಿಸಿದರು. ಹಲವಾರು ಗಣ್ಯರು ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಂತಾಪುರಂ ಎ.ಪಿ ಅಬೂಬಕ್ಕರ್ …

ಅಡ್ವಕೇಟ್ ಕ್ಲರ್ಕ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಅಡ್ವಕೇಟ್ ಕ್ಲರ್ಕ್ಸ್ ಜಿಲ್ಲಾ ಸಮ್ಮೇಳನ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ರಾಜ್ಯಾಧ್ಯಕ್ಷ ವಿ. ರವೀಂದ್ರನ್ ಪೇರಾಂಬ್ರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ. ರಘುನಾಥ್ ಅಧ್ಯಕ್ಷತೆ ವಹಿಸಿದರು. ಕೆಎಸಿಎ ರಾಜ್ಯ ಕಾರ್ಯದರ್ಶಿ ಪಿ. ರಾಜ್‌ಮೋಹನ್, ಮುಖಂಡರಾದ ಶ್ರೀಕುಮಾರ್ ಕುನ್ನಮಂಗಲಂ, ವಿ.ಎಂ. ಜಯದೇವನ್, ಸಿ. ರವಿ, ಜಯರಾಮ್ ಶೆಟ್ಟಿ, ವಿ.ವಿ. ಬಾಲನ್ ಮಾತನಾಡಿದರು. ನಿವೃತ್ತರಾಗುವ ಹಿರಿಯ ಸದಸ್ಯ ಸೂರ್ಯನಾರಾಯಣ ಮಯ್ಯರನ್ನು  ಈ ವೇಳೆ ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಿ. ಬಾಬು ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯ ದರ್ಶಿ …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಮಂಗಲ್ಪಾಡಿ: ಆರ್.ಎಸ್.ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಪ್ರತಾಪನಗರ ನಿವಾಸಿ ಎಂ.ಇ ಗಂಗಾಧರ ಆಚಾರ್ಯ ((65) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮರದ ಕೆಲಸಗಾರರಾಗಿದ್ದರು. ಬಿ.ಎಂ.ಎಸ್ ನಿರ್ಮಾಣ ಔ್ತೆ್ನ%ಔ್ಣ ್ಚ್ಣಒಙ್ಣಟವ್ರಿ¾್ಣ್ನ ಮಾಜಿ ಜಿಲ್ಲಾ ಉಪಾಧ್ಯಾಕ್ಷರು, ಶ್ರೀ ಗಾಯತ್ರಿ ವಿಶ್ವಕರ್ಮ ಸಮಾಜ ಸಭಾ ಪ್ರತಾಪನಗರ ಮಂಗಲ್ಪಾಡಿ ಇದರ ಮಾಜಿ ಅಧ್ಯಕ್ಷರಾಗಿದ್ದರು. ದಿ| ಈಶ್ವರ ಆಚಾರ್ಯ- ದಿ| ಪದ್ಮಾವತಿ ದಂಪತಿ ಪುತ್ರರಾಗಿದ್ದಾರೆ. ಮೃತರು ಪತ್ನಿ ಕಲಾವತಿ, ಮಕ್ಕಳಾದ ಯಶಸ್ವಿನಿ, ಕೀರ್ತಿಶ್ರೀ, ಮಿಥುನ್ ಆಚಾರ್ಯ, ಸಹೋದರ-ಸಹೋದರಿಯರಾದ ಜನಾರ್ದನ ಆಚಾರ್ಯ, ಮಾಧವ ಆಚಾರ್ಯ, …

ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ರಸ್ತೆ  ಹದಗೆಟ್ಟು ಶೋಚನೀಯ: ಸಂಚಾರ ದುಸ್ತರ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ರಸ್ತೆ ಸಂಚಾರಕ್ಕೆ ಅಯೋಗ್ಯಗೊಂಡಿರುವುದಾಗಿ ವಾಹನಚಾಲಕರು ದೂರಿದ್ದಾರೆ. ರೈಲ್ವೇ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯ 150 ಮೀಟರ್‌ನಷ್ಟು ಭಾಗದಲ್ಲಿ ಹಲವಾರು ವರ್ಷಗಳಿಂದ ದುರಸ್ತಿಗೊಳಿಸದೆ ಇರುವುದರಿಂದಾಗಿ ಹೊಂಡಗಳಿಂದ ಕೂಡಿ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ರೈಲ್ವೇ ನಿಲ್ದಾಣಕ್ಕೆ ತಲುಪುವರು, ಈ ಭಾಗದಲ್ಲಿ ವಾಸಿಸುವ ನೂರಾರು ಕುಟುಂಬಗಳು ಉಪ್ಪಳ ಪೇಟೆ ಸಹಿತ ವಿವಿಧ ಕಡೆಗಳಿಗೆ ತೆರಳಲು ಇದೇ ರಸ್ತೆಯನ್ನು ಆಶ್ರಯಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಇದರಿಂದಾಗಿ ಬೃಹತ್ ಹೊಂಡಗಳು ಸೃಷ್ಟಿಯಾಗಿವೆ. …

ಪೆಟ್ರೋಲಿಯಂ, ಗ್ಯಾಸ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಲು ಬಿಎಂಎಸ್ ಆಗ್ರಹ

ಕಾಸರಗೋಡು: ಭಾರತೀಯ ಮಜ್ದೂರು ಸಂಘದ ಪೋಷಕ ಸಂಘಟನೆಯಾದ ಪೆಟ್ರೋಲಿಯಂ ಆಂಡ್ ಗ್ಯಾಸ್ ಮಜ್ದೂರ್ ಸಂಘ್ ಜಿಲ್ಲಾ ಸಮ್ಮೇಳನದಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಬೇಕೆಂದು ಬೇಡಿಕೆ ಒಡ್ಡಲಾಯಿತು. ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರನ್ ಬಂಗಳೋತ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲಿಯಂ, ಗ್ಯಾಸ್ ವಲಯದ ಲಾರಿ ಕಾರ್ಮಿಕರಿಗಾಗಿ ಪ್ರಸ್ತುತ ಇರುವ ಒಪ್ಪಂದ ಪ್ರಕಾರದ ವೇತನ ಕಾಸರಗೋಡು ಜಿಲ್ಲೆಯಲ್ಲಿ ಲಭ್ಯಗೊಳಿಸಲಾಗುತ್ತಿಲ್ಲವೆಂದು ಆರೋಪಿಸಿದರು. ಒಪ್ಪಂದ ಪ್ರಕಾರವಿರುವ ವೇತನ ಹಾಗೂ ಇತರ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರವೇ ಲಭ್ಯಗೊಳಿಸಬೇಕೆಂದು ಅವರು ಆಗ್ರಹಿಸಿದರು. ಕಂಪೆನಿಗಳು …

ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್ ಮೊದಲ ಪರಿಗಣನೆ

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿರುವ ಚರ್ಚೆಗಳು  ಬಿರುಸಿನಿಂದ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನ ವಿ.ಡಿ. ಸತೀಶನ್‌ರಿಗೆ ಲಭಿಸುವ ಸಾಧ್ಯತೆ ಇದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ.  ಹೆಚ್ಚಿನ ಶಾಸಕರು ಕೆ.ಸಿ. ವೇಣುಗೋಪಾಲ್‌ರ ಪರ ಬೆಂಬಲ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಸ್ಥಾನದ ರೇಸ್‌ನಿಂದ ಸ್ವಯಂ ಆಗಿ ಹಿಂದಕ್ಕೆ ಸರಿಯುವಂತೆ ಕಾಂಗ್ರೆಸ್ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್‌ರ ಮೇಲೆ ಒತ್ತಡ ಹೇರುತ್ತಿರುವುದಾಗಿಯೂ ವರದಿಗಳು ಸೂಚಿಸುತ್ತಿವೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಮತ್ತು ಯುಡಿಎಫ್‌ನ ಇತರ ಹೆಚ್ಚಿನ ಘಟಕ ಪಕ್ಷಗಳು ವಿ.ಡಿ. ಸತೀಶನ್‌ರಿಗೆ ಬೆಂಬಲ ಸೂಚಿಸಿವೆ.   …