12ರ ಬಾಲಕನಿಗೆ ಸಲಿಂಗರತಿ ದೌರ್ಜನ್ಯ: ಯುವಕ ಸೆರೆ

ಹೊಸದುರ್ಗ: 12ರ ಹರೆಯದ ಬಾಲಕನನ್ನು ಸಲಿಂ ಗರತಿ ದೌರ್ಜನ್ಯಕ್ಕೀಡುಮಾಡಿದ ಪ್ರಕರಣದ ಆರೋಪಿ ಸೆರೆಯಾಗಿದ್ದಾನೆ. ಪಟ್ಟಾನ್ನೂರ್ ವರುವಕ್ಕಾಡ್ ಲಕ್ಷ್ಯಂವೀಡು ಉನ್ನತಿಯ ವಡಕ್ಕೇಕಂಡಿ ಹೌಸ್ ವಿ.ಕೆ. ವಿನೀಶ್ (39)ನನ್ನು ಮಟ್ಟನ್ನೂರು ಎಸ್‌ಐ ಫೈರೂಸ್ ಬಂಧಿಸಿದ್ದಾರೆ. ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕನಿಗೆ ಈತ ದೌರ್ಜನ್ಯಗೈದಿದ್ದು, ಈ ಬಗ್ಗೆ ಪೋಕ್ಸೋ ಪ್ರಕರಣ ದಾಖ ಲಿಸಲಾಗಿತ್ತು.

ಏಮ್ಸ್: ಪಟ್ಟಿಯಲ್ಲಿ ಕಾಸರಗೋಡನ್ನು ಒಳಪಡಿಸಬೇಕು-ಸಂಸದ

ಕಾಸರಗೋಡು: ಕೇರಳದಲ್ಲಿ ಸ್ಥಾಪಿಸಲಾಗುವ ಏಮ್ಸ್ ಆಸ್ಪತ್ರೆಯ ಪ್ರಸ್ತಾವನೆ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸಬೇಕೆಂದು ಸಂಸತ್‌ನ ಮಳೆಗಾಲದ ಅಧಿವೇಶನದ ಪೂರ್ವಭಾವಿಯಾಗಿ  ರಾಜ್ಯ ಸರಕಾರ ತಿರುವನಂತಪುರದಲ್ಲಿ ಕರೆದ ಕೇರಳದ ಸಂಸದರ ಸಭೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯನ್ನು ಒಳಪಡಿಸಿ ಪ್ರಸ್ತಾವನೆ ಯನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಏಮ್ಸ್ ಪಟ್ಟಿಯಲ್ಲಿ ಕಾಸರಗೋ ಡನ್ನು ಒಳಪಡಿಸದೇ ಇರುವುದು ಜಿಲ್ಲೆಯೊಂದಿಗೆ ತೋರುತ್ತಿರುವ ಅವಗಣನೆಯ ಮುಂದುವರಿಕೆ ಯಾಗಿದೆ.  ಏಮ್ಸ್ ಸ್ಥಾಪಿಸಲು  ಅನುಕೂಲಕರವಾದ ೨೦೦೦ ಎಕ್ರೆಯಷ್ಟು ಸರಕಾರಿ ಭೂಮಿ ಪುಲ್ಲೂರುಪೆರಿಯ ಪಂಚಾಯತ್‌ನಲಿ ದೆಯೆಂದು …

ವರ್ಕಾಡಿ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಮುಸ್ಲಿಂ ಲೀಗ್ ಪಂ. ಸಮಿತಿ ಸಭೆ ಒತ್ತಾಯ

ವರ್ಕಾಡಿ: ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಮಿತಿ ಸಭೆ ಒತ್ತಾಯಿಸಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿಗಳಲ್ಲಿ ಕೆಲವರು ತೋರುವ ನಿರ್ಲಕ್ಷ್ಯ ಕೂಡಲೇ ಕೊನೆಗೊಳಿಸ ಬೇಕು, ಇಲ್ಲದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸಲಾಗು ವುದು ಎಂದು ಸಭೆ ಎಚ್ಚರಿಕೆ ನೀಡಿದೆ.ಕೆಲವು ಪ್ರದೇಶಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಇಲ್ಲದಿದ್ದರೂ, ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡದೆ ಮೋಸಗೊಳಿಸಲಾಗುತ್ತಿದೆ ಎಂದು ಸಭೆ ಆರೋಪಿಸಿತು. ಈ ಕುರಿತು …

ಕಡಲ್ಕೊರೆತ ತೀವ್ರಗೊಂಡ ಮಂಗಲ್ಪಾಡಿ ಪಂ. ವ್ಯಾಪ್ತಿಯ ಪ್ರದೇಶಗಳಿಗೆ ಜಿಲ್ಲಾಧಿಕಾರಿ ತುರ್ತು ಭೇಟಿಗೆ ಒಬಿಸಿ ಮೋರ್ಚಾ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿವಾಜಿ ನಗರ, ಶಾರದಾ ನಗರ ಮತ್ತು ಮೂಸೋಡಿ ಮುಂತಾದ ಸ್ಥಳಗಳಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಈ ಸ್ಥಳಗಳಿಗೆ ತಕ್ಷಣ ಭೇಟಿ ನೀಡಿ ತುರ್ತು ನೆರವು ನೀಡಬೇಕು ಎಂದು ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಒತ್ತಾಯಿಸಿದರು. ಐಲ ಶಿವಾಜಿ ನಗರ ಕಡಲತೀರದಲ್ಲಿ ಮೀನುಗಾರರ ಬಲೆ ದುರಸ್ತಿ ಶೆಡ್ ಸಂಪೂರ್ಣವಾಗಿ ನಾಶವಾಗಿದ್ದು, ಕಡಲತೀರದಲ್ಲಿರುವ ಸಾರ್ವಜನಿಕ ಸ್ಮಶಾನವೂ ವಿನಾಶದ ಅಂಚಿನಲ್ಲಿದೆ. ಈ ಸ್ಥಳಗಳಲ್ಲಿನ ಮೀನುಗಾರರು ಭಯದಿಂದ ಬದುಕುತ್ತಿದ್ದಾರೆ. ರಾಜ್ಯ ಸರಕಾರ ಮತ್ತು …

ಮಂಜೇಶ್ವರದಲ್ಲಿ ಹಲಸುಹಣ್ಣಿನ ಮೇಳ ಇಂದಿನಿಂದ

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ಪ್ರಥಮ ಬಾರಿಗೆ ಹಲಸು ಹಣ್ಣಿನ ಮೇಳ ಇಂದಿನಿಂದ ಜುಲೈ 12 ರ ತನಕ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಜರಗಲಿದೆ. ಬೆನಕ ಇವೆಂಟ್ಸ್ ಕುಂದಾಪುರ ನೇತೃತ್ವದಲ್ಲಿ ರಾಯರ ಭಕ್ತರು ಮಂಜೇಶ್ವರ, ಜಾನ್ಸಿ ಫ್ರೆಂಡ್ಸ್ ಜಾನ್ಸಿ ನಗರ ಮಂಜೇಶ್ವರ, ಟೀಮ್ ಮಂಜೇಶ್ವರ, ಕಟ್ಟೆ ಫ್ರೆಂಡ್ಸ್ ಮಾಡ, ತಿಲಕ್ ಗೆಳೆಯರ ಬಳಗ, ಚಾಣಕ್ಯ ನಗರ ಮಂಜೇಶ್ವರ, ನೇತಾಜಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ, ಮಂಜೇಶ್ವರ. ಟೀಮ್ ಕಲ್ಕಿ ಮಂಜೇಶ್ವರ, ಪ್ರತಾಪ್ …

ಕಾಲ್ನಡೆ ದಾರಿಗೆ ಮುರಿದು ಬಿದ್ದ ಮರ: ಸಂಚಾರ ಸಮಸ್ಯೆ:ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣ ಸಹಿತ ಮಂಜೇಶ್ವರ ಪೇಟೆ, ಶಾಲಾ-ಕಾಲೇಜುಗಳು, ಸ್ಥಳೀಯಾ ಡಳಿತ ಕಚೇರಿ, ಮೃಗಾಸ್ಪತ್ರೆಗಳಿಗೆ ತಲುಪಲು ಹತ್ತಿರದ ಕಾಲ್ನಡಿಗೆ ರಸ್ತೆಯಲ್ಲಿ ಸಂಪೂರ್ಣವಾಗಿ ಸಂಚಾರ ಮೊಟಕುಗೊಂಡಿದೆ. ರಸ್ತೆಗೆ ಅಡ್ಡವಾಗಿ ಬಿದ್ದಿರುವ ಬೃಹತ್ ಮರವನ್ನು ತೆರವುಗೊಳಿಸಲು ತಿಂಗಳು ಕಳೆದರೂ ಸಂಬAಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಗಳು, ಸರಕಾರಿ ಕಚೇರಿ ಸಿಬ್ಬಂದಿಗಳು ಹಾಗೂ ರೈಲ್ವೇ ಪ್ರಯಾಣಿಕರು ಸೇರಿ ದಂತೆ ನೂರಾರು ಮಂದಿ ಪ್ರತಿದಿನ ಬಳಸುವ ಕಿರುದಾರಿ ಇದಾಗಿದ್ದು, ಬಿದ್ದಿರುವ ಮರದಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. …

ಅನಾರೋಗ್ಯ: ಗೃಹಿಣಿ ನಿಧನ

ಬದಿಯಡ್ಕ: ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ ಹೊಂದಿದರು. ಕುಂಬ್ಡಾಜೆ ಕೊಳಂಬೆ ನಿವಾಸಿ, ಹೋಟೆಲ್ ಮಾಲಕ ವಿಠಲ ರೈ ಯವರ ಪತ್ನಿ ಬೇಬಿ (52) ನಿಧನ ಹೊಂದಿದರು. ಕಳೆದ ಕೆಲವು ಸಮಯದಿಂದ ರೋಗ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಮಕ್ಕಳಾದ ವಿಜಿತ್, ಸುಜಿತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವೃದ್ಧ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:?ಮುಳಿಯಾರು ಪಂಚಾಯತ್‌ನ ಕಾನತ್ತೂರಿನಲ್ಲಿ ವೃದ್ಧ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಡೇಂವೀಡ್ ಕುಂಞಿರಾಮನ್  (ತರಯಿಲಚ್ಚನ್-84) ಎಂಬವರು  ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಮನೆಯೊಳಗೆ ಇವರು ಕಾಣದ ಹಿನ್ನೆಲೆಯಲ್ಲಿ ಹುಡುಕಿದಾಗ ಮನೆಯ ಹಿಂಭಾಗದಲ್ಲಿ  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ …

ಕಾರಿನಲ್ಲಿ ಮಾದಕವಸ್ತು ಸಹಿತ  ಸಂಚರಿಸುತ್ತಿದ್ದ ಮೂವರ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಮೂವರನ್ನು  ಬಂಧಿಸಲಾಗಿದೆ. ಪಟ್ಲ ನಿವಾಸಿ  ಅಬ್ದುಲ್ ರೌಫ್, ಕರ್ನಾಟಕದ  ಸುಳ್ಯ ಕೋಣಡ್ಕಪದವು ನಿವಾಸಿ ಕೌಶಿಕ್, ಅಡೂರು ಪೇರಾಮರವ ನಿವಾಸಿ ಮುಹಮ್ಮದ್ ಜಸೀರ್ ಯು.ಕೆ ಎಂಬಿವರನ್ನು ಕಾಸರಗೋಡು ಎಕ್ಸೈಸ್ ರೇಂಜ್ ಆಫೀಸರ್ ಅಶ್ವಿನ್ ಟಿ.ಕೆ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳ ಕೈಯಿಂದ  1.899 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ಈ ಸಂಬಂಧ  ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ರಾತ್ರಿ 7.10ರ ವೇಳೆ ಚೆಂಗಳ ಸಂತೋಷ್‌ನಗರದಲ್ಲಿ ಆರೋಪಿಗಳು ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರನ್ನು  ತಡೆದು …

ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡ ಲಾಟರಿ ಏಜೆಂಟ್ ಮೃತ್ಯು

ಕಾಸರಗೋಡು:ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಲಾಟರಿ ಮಾರಾಟಗಾರ ಮೃತಪಟ್ಟರು.  ಚೌಕಿ ಕಾವುಗೋಳಿ ಶ್ವೇತ ನಿವಾಸ್‌ನ ದಿ| ಆನಂದ ಎಂಬವರ ಪುತ್ರ ಲೋಕೇಶ್ (42) ಮೃತಪಟ್ಟ ದುರ್ದೈವಿ. ಇವರು ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರ ಸಮೀಪ ಲಾಟರಿ ಸ್ಟಾಲ್ ನಡೆಸುತ್ತಿದ್ದರು. ಒಂದು ತಿಂಗಳ ಹಿಂದೆ  ಇವರು ಸಂಚರಿಸುತ್ತಿದ್ದ ಸ್ಕೂಟರ್ ಮಂಗಲ್ಪಾಡಿ ಶಾಲೆ ಸಮೀಪ ರಸ್ತೆಯಲ್ಲಿ ಮಗುಚಿಬಿದ್ದು ಇವರು ಗಂಭೀರ ಗಾಯಗೊಂ ಡಿದ್ದರು. ಇದರಿಂದ ಎರಡು ವಾರ   ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದರು. ಅನಂತರ ನುಳ್ಳಿಪ್ಪಾಡಿಯ ಖಾಸಗಿ …