ಬೈಕ್ ಕಂದಕಕ್ಕೆ ಬಿದ್ದು ಸವಾರ ಮೃತ್ಯು
ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಸವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಮೀಪದ ಚಾತಮತ್ತ್ ಚುಳ್ಳಿಕ್ಕಾಡ್ ನಿವಾಸಿ ರಾಘವನ್ ಕೆ.ವಿ- ವಸುಮತಿ ದಂಪತಿ ಪುತ್ರ ಕೆ.ವಿ. ಶಿನೋಯ್ (41) ಸಾವಾನಪ್ಪಿದ ದುರ್ದೈವಿ. ಈ ಹಿಂದೆ ಗಲ್ಫ್ನಲ್ಲಿ ದುಡಿಯುತ್ತಿದ್ದ ಇವರು ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿ ಇಲ್ಲೇ ದುಡಿಯುತ್ತಿದ್ದರು. ಶಿನೋಯ್ ನಿನ್ನೆ ಮಧ್ಯಾಹ್ನ ಬೈಕ್ನಲ್ಲಿ ಹೋಗುತ್ತಿದ್ದ ದಾರಿ ಮಧ್ಯೆ ನೀಲೇಶ್ವರ ಕರುವಂತಲ ರಸ್ತೆಯ ಚಾತಮತ್ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು, ದುರ್ಘಟನೆ ನಡೆದಿದೆ. ಅಪಘಾತದ …