ಬೈಕ್ ಕಂದಕಕ್ಕೆ ಬಿದ್ದು ಸವಾರ ಮೃತ್ಯು

ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಸವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಮೀಪದ ಚಾತಮತ್ತ್ ಚುಳ್ಳಿಕ್ಕಾಡ್  ನಿವಾಸಿ ರಾಘವನ್ ಕೆ.ವಿ- ವಸುಮತಿ ದಂಪತಿ ಪುತ್ರ ಕೆ.ವಿ. ಶಿನೋಯ್ (41) ಸಾವಾನಪ್ಪಿದ ದುರ್ದೈವಿ. ಈ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಇವರು ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿ ಇಲ್ಲೇ ದುಡಿಯುತ್ತಿದ್ದರು. ಶಿನೋಯ್ ನಿನ್ನೆ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದ ದಾರಿ ಮಧ್ಯೆ ನೀಲೇಶ್ವರ ಕರುವಂತಲ ರಸ್ತೆಯ ಚಾತಮತ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು, ದುರ್ಘಟನೆ ನಡೆದಿದೆ. ಅಪಘಾತದ …

ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ

ಹೊಸದುರ್ಗ: ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಂಡು ಬಂದಿರುವುದಕ್ಕೆ ಸಂಬಂಧಿಸಿ ತನಿಖಾವರದಿ ಸಲ್ಲಿಸುವುದಕ್ಕಾಗಿ ಜಿಲ್ಲಾಧಿಕಾರಿ ನೇಮಕಗೊಳಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಕಾಞಂಗಾಡ್ ಆರ್‌ಡಿಒರ ಪ್ರತಿನಿಧಿ ಸೀನಿಯರ್ ಸುಪರಿಂಟೆಂಡೆಂಟ್ ಇ.ಎಂ. ಬಿಜು, ಹೊಸದುರ್ಗ ತಹಶೀಲ್ದಾರ್ ಪಿ.ಕೆ. ಪ್ರೇಮಾನಂದ್ ಸಹಿತ ಹಲವು ಉನ್ನತ ಅಧಿಕಾರಿಗಳು ತಂಡದಲ್ಲಿದ್ದರು.  ಪಿಲಿಕ್ಕೋಡ್ ಪಂಚಾಯತ್ ಅಧ್ಯಕ್ಷ ಇ. ಕುಂಞಿರಾಮನ್ ಸಮಸ್ಯೆಗಳ ಬಗ್ಗೆ ವಿವರಿಸಿದರು. ಜನಪ್ರತಿನಿಧಿಗಳು, ಕಂಪೆನಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೊಂಡಗಳಿಂದ ತುಂಬಿದ ನಾಯಕ್ಸ್ ರಸ್ತೆಯಲ್ಲಿ ಸಂಚಾರ ತಡೆ

ಕಾಸರಗೋಡು: ಎಂಜಿ ರಸ್ತೆ ಹಾಗೂ ಬ್ಯಾಂಕ್‌ರಸ್ತೆಯನ್ನು ಜೋಡಿಸುವ ನಾಯಕ್ಸ್ ರಸ್ತೆ ಹೊಂಡ ಗುಂಡಿಗಳಿಂದ ತುಂಬಿಕೊಂಡು ಸಂಚಾರಕ್ಕೆ ಅಯೋಗ್ಯವಾಗಿ ರಸ್ತೆ ತಡೆಗೆ ಕಾರಣವಾಗುತ್ತಿದೆ ಎಂದು ದೂರಲಾಗಿದೆ. ಬ್ಯಾಂಕ್ ರಸ್ತೆಯಿಂದ ನಾಯಕ್ಸ್ ರಸ್ತೆಗೆ ಪ್ರವೇಶಿಸುವ್ಗ ಸಿನಿಮಾ ಥಿಯೇಟರ್ ವರೆಗೆ ರಸ್ತೆ ಪೂರ್ಣವಾಗಿ ಹಾನಿಗೊಂಡಿದೆ. ನಾಯಕ್ಸ್ ರಸ್ತೆಯಿಂದ ಕಾಸರಗೋಡು ಬ್ಲೋಕ್ ಪಂಚಾಯತ್ ಕಚೇರಿಗೆ ತೆರಳುವ ರಸ್ತೆಯ ಸಮೀಪದಲ್ಲಿ ಚರಂಡಿಗೆ ಸ್ಲ್ಯಾಬ್ ಇಲ್ಲದ ಕಾರಣ ಅಪಘಾತ ಬೆದರಿಕೆ ಉಂಟಾಗಿದೆ. ಬ್ಯಾಂಕ್ ರಸ್ತೆಯಿಂದ ನಾಯಕ್ಸ್ ರಸ್ತೆಗೆ ಪ್ರವೇಶಿಸುವ ಸ್ಥಳದಿಂದ ರಸ್ತೆ ಕೊನೆಗೊಳ್ಳುವ ಚಂದ್ರಗಿರಿ ಜಂಕ್ಷನ್‌ವರೆಗೆ …

ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು- ಸೋನಿ ಸತ್ಯನ್

ಕಾಸರಗೋಡು: ಕೇರಳ ಪ್ರದೇಶ್ ಆಶಾವರ್ಕರ್ಸ್ ಸಂಘ (ಬಿಎಂಎಸ್) ವಾರ್ಷಿಕ ಸಮ್ಮೇಳನ ಬಿಎಂಎಸ್ ಕಚೇರಿಯಲ್ಲಿ ನಡೆಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋನಿ ಸತ್ಯನ್ ಪತ್ತನಂತಿಟ್ಟ ಉದ್ಘಾಟಿಸಿದರು. ಅವರು ಮಾತನಾಡಿ, ಆರೋಗ್ಯವಲಯ ದಲ್ಲಿ ಅತ್ಯಂತ ಕೆಳ ಸ್ತರದಲ್ಲಿ ಕಾರ್ಯಾ ಚರಿಸುವ ಆಶಾ ಕಾರ್ಯಕರ್ತೆಯರಿಗೆ ಅವರಿಗೆ ಅರ್ಹತೆ ಇರುವ ವೇತನ ನೀಡಬೇಕೆಂದು, ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕೆಂದು, ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಯೂನಿಯನ್ ಅಧ್ಯಕ್ಷೆ ಜಯಲಕ್ಷ್ಮಿ ಮೀಂಜ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಮಂಜೇಶ್ವರ …

ನಜೀಬ್ ಕಲ್ಲಟ್ರನ ಮೊಬೈಲ್ ಫೋನ್, ಪಾಸ್‌ಪೋರ್ಟ್ ವಶ; ತನಿಖಾ ತಂಡ ಶೀಘ್ರಕಾಸರಗೋಡಿಗೆ

ಕೊಚ್ಚಿ: ಎರ್ನಾಕುಳಂ ಕೇಂದ್ರೀಕರಿಸಿ ನಡೆದ ಅವಯವ ವಂಚನೆ ಪ್ರಕರಣದ ತನಿಖೆಯನ್ನು ತನಿಖಾ ತಂಡ ಇನ್ನಷ್ಟು ತೀವ್ರಗೊಳಿಸಿದೆ. ತನಿಖೆಯಂಗವಾಗಿ ಪ್ರಕರಣದ ಸೂತ್ರಧಾರನಾದ ಕಾಸರಗೋಡು ಕಳನಾಡು ಚಳಿಯಂಗೋಡ್‌ನ ಮುಹಮ್ಮದ್ ನಜೀಬ್ ಕಲ್ಲಟ್ರ (53)ನ ಪಾಸ್‌ಪೋರ್ಟ್ ಹಾಗೂ ಮೊಬೈಲ್ ಫೋನ್‌ನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಮೊಬೈಲ್ ಫೋನ್ ಪರಿಶೀಲಿಸಿದರೆ ಈತನೊಂದಿಗೆ ನಂಟು ಹೊಂದಿದವರನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆಯೆಂದು ತನಿಖಾ ತಂಡ ನಿರೀಕ್ಷೆ ಇರಿಸಿದೆ.  ಮೊಹಮ್ಮದ್ ನಜೀಬ್ ಕಲ್ಲಟ್ರನ ನೇತೃತ್ವದಲ್ಲಿ ಕೋಟ್ಯಂತರ ರೂಪಾಯಿಗಳ ವಂಚನೆ ನಡೆದಿದೆ ಯೆಂದೂ ವಂಚನೆಗೆ ಅಂತಾರಾಷ್ಟ್ರ ಮಟ್ಟದಲ್ಲಿ ಸಂಬಂಧವಿ …

ವಾಣಿನಗರ ನಿವಾಸಿ ಪೈವಳಿಕೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಪೈವಳಿಕೆಯಲ್ಲಿರುವ ಸಹೋದರಿಯ ಮನೆಗೆ ತೆರಳಿದ್ದ ವಾಣಿನಗರ ಬಳಿಯ ಯುವಕ   ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಾಣಿನಗರ ಬಳಿಯ ಬೈಲಮೂಲೆ ನಿವಾಸಿ ದಿ| ನಾರಾಯಣ ನಾಯ್ಕರ ಪುತ್ರ ಬಾಲಕೃಷ್ಣ ನಾಯ್ಕ (40) ಮೃತಪಟ್ಟ ವ್ಯಕ್ತಿ.  ಬಾಲಕೃಷ್ಣ ನಾಯ್ಕ ನಿನ್ನೆ ಬೆಳಿಗ್ಗೆ ಪೈವಳಿಕೆಯ ಬೋಳಂಗಳದಲ್ಲಿರುವ ಸಹೋದರಿ ಸುನಿತಾರ ಮನೆಗೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆ ಬಳಿಯ ಶೆಡ್‌ನಲ್ಲಿ  ವಿಶ್ರಾಂತಿ ಪಡೆಯುವುದಾಗಿ ತಿಳಿಸಿ  ಬಾಲಕೃಷ್ಣ ತೆರಳಿದ್ದರೆನ್ನಲಾಗಿದೆ. ಅಪರಾಹ್ನ ೩ ಗಂಟೆ ವೇಳೆ ಮನೆಯವರು ನೋಡಿದಾಗ ಅವರು ಅಲ್ಲಿರಲಿಲ್ಲ. ಇದರಿಂದ …

ಮುಖ್ಯಮಂತ್ರಿ ಯಾರು? ಹಿರಿಯ ನೇತಾರರು ಪಾಲ್ಗೊಂಡ ಚರ್ಚೆ ದಿಲ್ಲಿಯಲ್ಲಿ ಆರಂಭ

ನವದೆಹಲಿ: ಕೇರಳದ ನೂತನ ಮುಖ್ಯಮಂತ್ರಿ ಯಾರು ಎಂಬುದನ್ನು ತೀರ್ಮಾನಿಸಲು ಕಾಂಗ್ರೆಸ್ ಹೈಕಮಾಂಡ್ ಕರೆದ ವಿಸ್ತೃತ ಚರ್ಚೆ ದಿಲ್ಲಿಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕಾಂಗ್ರೆಸ್‌ನ ಕೇರಳ ಘಟಕದ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧ್ಯಕ್ಷರನ್ನು ಮಾತ್ರವೇ ಇಂದಿನ ಈ ಚರ್ಚೆಗೆ ಆಹ್ವಾನಿಸಲಾಗಿದೆ. ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಖ್ಯಮಂತ್ರಿ ಯಾರು ಎಂಬ ಅಂತಿಮ ತೀರ್ಮಾನಕ್ಕೆ ಹೈಕಮಾಂಡ್ ಬಂದ ಬಳಿಕ ವಿದ್ಯುಕ್ತವಾಗಿ ಘೋಷಿಸಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಲ್ತುದಿಯಲ್ಲಿ ನಿಂತಿರುವ ಕಾಂಗ್ರೆಸ್ ನೇತಾರರಾದ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್‌ರೊಂದಿಗೆ …

ಕುಂಟಂಗೇರಡ್ಕದ ಯುವತಿ ಮೃತದೇಹ ಮದುವೆ ನಿಶ್ಚಿತಾರ್ಥ ನಡೆದ ಯುವಕನ ಸಮಾಧಿ ಸಮೀಪದಲ್ಲೇ ಅಂತ್ಯಸಂಸ್ಕಾರ

ಕುಂಬಳೆ:  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಕಿದೂರು ಕುಂಟಂಗೇರಡ್ಕದ ಯುವತಿಯ ಮೃತದೇಹವನ್ನು ತಮಿಳುನಾಡಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಫುಲ್ಲ (26)ರ ಮೃತದೇಹವನ್ನು ನಿನ್ನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರ ಸಮಾಧಿಯ ಸಮೀಪದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರ ನಡೆಸಲಾಗಿದೆ.  ಮಣಿ ಹಾಗೂ ಪ್ರಫುಲ್ಲರ ಮದುವೆ ನಿಶ್ಚಿತಾರ್ಥ ನಾಲ್ಕು ತಿಂಗಳ ಹಿಂದೆ ನಡೆಸಲಾಗಿತ್ತು. ಅನಂತರ ಒಂದು ತಿಂಗಳ ಹಿಂದೆ ಸಂಭವಿಸಿದ …

ಗೂಡಂಗಡಿಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ 

ಕಾಸರಗೋಡು: ಏಳು ವರ್ಷದ ಪುತ್ರಿಯನ್ನು ಕರೆದುಕೊಂಡು ಗೂಡಂಗಡಿಗೆ ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಬೇಕಲ ಬೀಚ್ ರಸ್ತೆಯ ರಮಣಿ ನಿಲಯ ನಿವಾಸಿ ಎಸ್. ಪ್ರದೀಪ್‌ರ ಪತ್ನಿ ಬೇಬಿ (40), ಏಳು ವರ್ಷದ ಪುತ್ರಿ ಎಂಬಿವರು ನಾಪತ್ತೆಯಾದವರು. ಆದಿತ್ಯವಾರ ಬೆಳಿಗ್ಗೆ ಬೇಬಿ ಪುತ್ರಿಯನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಸಂಜೆಯಾದರೂ ಹಿಂತಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಬೇಕಲ ಪೊಲೀಸರಿಗೆ ದೂರು ನೀಡಿದ್ದಾರೆ. ಬೇಬಿ ತಳಿಪರಂಬ ನಿವಾಸಿಯಾದ ಬೈಜು ಎಂಬಾತನ ಜೊತೆ ತೆರಳಿ ರುವುದಾಗಿ ಶಂಕಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. …

ವಿವಾಹ ಭರವಸೆ ನೀಡಿ ಯುವತಿಯ ಎಂಟೂವರೆ ಲಕ್ಷ ರೂ. ವಶಪಡಿಸಿದ ಬಳಿಕ ಮಾನಭಂಗ: ಯುವಕನ ವಿರುದ್ಧ ಕೇಸು

ಕಾಸರಗೋಡು: ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪರಿಚಯಗೊಂಡ ಯುವತಿಯನ್ನು ಮಾನಭಂಗಗೈದಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 32ರ ಹರೆಯದ ಯುವತಿ ನೀಡಿದ ದೂರಿನಂತೆ ವಡಗರ ನಿವಾಸಿಯಾದ ಮುಹಮ್ಮದ್ ಶಮ್ಮಾಸ್ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಕೇಸು ದಾಖಲಿಸಿದೆ. ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿ ಹಾಗೂ ಮುಹಮ್ಮದ್ ಶಮ್ಮಾಸ್ ಪರಿಚಯಗೊಂಡಿದ್ದರು. ಬಳಿಕ ಯುವತಿಗೆ ವಿವಾಹ ಭರವಸೆ ನೀಡಿ ಎಂಟೂವರೆ ಲಕ್ಷದಷ್ಟು ರೂ.ವನ್ನು ವಸೂಲು ಮಾಡಿ ಮಾನಭಂಗಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಶಮ್ಮಾಸ್ …