ನೇರೋಳು ನಿವಾಸಿ ಲಲಿತ ಎನ್. ಭಟ್ ನಿಧನ

ಪೆರ್ಲ: ಎಣ್ಮಕಜೆ ಪಂ. ವ್ಯಾಪ್ತಿಯ ಅಡ್ಕಸ್ಥಳ ಸಮೀಪದ ನೇರೋಳು ನಿವಾಸಿ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ, ಯಕ್ಷಗಾನ ಹಿಮ್ಮೇಳ ವಾದಕರಾಗಿದ್ದ ದಿ| ರಾಮ್ ಭಟ್‌ರ ಪತ್ನಿ ಲಲಿತ ಎನ್. ಭಟ್ (74) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ಮಕ್ಕಳಾದ ಪದ್ಮಶೇಖರ ಎನ್. (ಬಿಜೆಪಿ ಕುಂಬಳೆ ಮಂಡಲ ಸದಸ್ಯ), ಮಮತ ಪುದುಕೋಳಿ, ಅಳಿಯಂದಿರಾದ ನರಸಿಂಹ ಭಟ್ ಕುರುವೇರಿ, ಶಿವಶಂಕರ ಭಟ್ ಪುದುಕೋಳಿ, ಸಹೋದರಿ ಯರಾದ ಸರಸ್ವತಿ ಭಟ್, ಕಲಾವತಿ ಭಟ್, ಕುಸುಮಾವತಿ ಭಟ್, …

ನಿವೃತ್ತ ತಹಶೀಲ್ದಾರ್ ನಿಧನ

ಕಾಸರಗೋಡು: ನಿವೃತ್ತ ತಹಶೀಲ್ದಾರ್, ಪೊಯಿನಾಚಿ ಎಸ್.ಎನ್. ನಿವಾಸ್‌ನ ಎನ್. ನಾರಾಯಣನ್ (81) ನಿಧನ ಹೊಂದಿದರು. ಪಾಲಕುನ್ನು ಕಳಗಂ ಶ್ರೀ ಭಗವತೀ ಕ್ಷೇತ್ರ ಕೇಂದ್ರ ಸಮಿತಿ ಸದಸ್ಯ ಸಹಿತ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ಬೆಳ್ಳೂರು, ನೆಟ್ಟಣಿಗೆ ಸಹಿತ ವಿವಿಧ ಕಡೆಗಳಲ್ಲಿ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಕೆ. ಶಾಂತ ಕುಮಾರಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಎನ್. ಗೋಪಕುಮಾರ್ (ಜಿಲ್ಲಾ ಟ್ರಷರಿ ಕಾಸರಗೋಡು), ಎನ್. ಪ್ರವೀಣ್ ಕುಮಾರ್, ಎನ್. ಜ್ಯೋತಿಪ್ರಭ, ಸೊಸೆಯಂದಿರಾದ ಪ್ರಸೀತಾ, …

ಜಿಲ್ಲಾ ಪಂಚಾಯತ್ ಬಜೆಟ್ ಮಂಡನೆಹಲವು ಅಭಿವೃದ್ಧಿ ಯೋಜನೆಗಳ ಘೋಷಣೆ

ಕಾಸರಗೋಡು:  2026-27 ನೇ ವಿತ್ತೀಯ ವರ್ಷದ ಜಿಲ್ಲಾ ಪಂಚಾಯತ್ ಬಜೆಟ್‌ನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ.ಕೆ. ಸೋಯಾ ನಿನ್ನೆ ಪಂಚಾಯತ್‌ನ ಬಜೆಟ್ ಅಧಿವೇಶನದಲ್ಲಿ ಮಂಡಿಸಿದರು. ಒಟ್ಟು 126.67 ಕೋಟಿ ರೂ. ಆದಾಯ ಹಾಗೂ 100.66 ಕೋಟಿ ರೂ.ಗಳ ವೆಚ್ಚ ಕಳೆದು ಒಟ್ಟು 26 ಕೋಟಿ ರೂ.ಗಳ ಮಿಗತೆ ನಿರೀಕ್ಷಿಸುವ ಬಜೆಟ್ ಇದಾಗಿದೆ. ಬಜೆಟ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಭಡ್ತಿಗೊಳಿಸುವ ಹಾಗೂ ರೋಗಿಗಳಿಗೆ ಉಚಿತವಾಗಿ ಬೆಳಗ್ಗಿನ ಫಲಾಹಾರ ನೀಡುವ ಘೋಷಣೆಯನ್ನು …

ರಾಮನವಮಿ ರಥಕ್ಕೆ ಬದಿಯಡ್ಕದಲ್ಲಿ ಸ್ವಾಗತ

ಬದಿಯಡ್ಕ: ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಸಂಚರಿಸುವ ರಾಮನವಮಿ ರಥಯಾತ್ರೆ ನಿನ್ನೆ ಬದಿಯಡ್ಕಕ್ಕೆ ಆಗಮಿಸಿದ್ದು ಹಾರಾರ್ಪಣೆಗೈದು ಎಂ.ಸುಧಾಮ ಗೋಸಾಡ ಸ್ವಾಗತಿಸಿದರು. ರಥಯಾತ್ರೆಯ ಧ್ಯೇಯೋದ್ದೇಶದ ಬಗ್ಗೆ ರವೀಶತಂತ್ರಿ ಕುಂಟಾರು ದಿಕ್ಸೂಚಿ ಭಾಷಣ ಮಾಡಿದರು.ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಪ್ರಮುಖರಾದ ಉದನೇಶ್ವರ ಬದಿಯಡ್ಕ, ನಾರಾಯಣ ಭಟ್ ಮೈರ್ಕಳ, ಆನಂದ ಪೆರಡಾಲ, ಗಂಗಾಧರ ಪಳ್ಳತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಮಹೇಶ್ ವಳಕುಂಜ ವಂದಿಸಿದರು.

ಕೊನೆಯಾಗದ ಕೆಂಪುಕಲ್ಲು, ಮರ ಸಾಗಾಟ ಅಂತ್ಯ ಹಾಡಲು ಕೇಶವ ನಾಯಕ್ ವಿಧಾನಸಭೆಗೆ ಸ್ಪರ್ಧೆ

ಕುಂಬಳೆ: ನಿರಂತರ ಆಗ್ರಹಿಸಿದರೂ, ಅಧಿಕಾರಿಗಳಿಗೆ ತಿಳಿಸಿದರೂ ಮಂಜೇಶ್ವರ ಮಂಡಲದ ವಿವಿಧ ಭಾಗಗಳಲ್ಲಿ ಕೆಂಪು ಕಲ್ಲು, ಮರಗಳನ್ನು ಸಾಗಿಸುತ್ತಿರುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯಕ್ ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅನಂತಪುರ, ಬಾಯಾರು, ಪಾದೆಕಲ್ಲು ಎಂಬೆಡೆಗಳಿಂದ ಕೆಂಪು ಕಲ್ಲುಗಳನ್ನು ಹಾಗೂ ಹಲವು ಕಡೆಗಳಿಂದ ಮರಗಳನ್ನು ಕಡಿದು ಕರ್ನಾಟಕ, ತಮಿಳುನಾಡಿಗೆ ಸಾಗಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೆಂಪು ಕಲ್ಲು ಕಡಿಯುವುದನ್ನು ಸರಕಾರ ನಿಷೇದಿಸಿದೆ. ಆದರೆ ಕರ್ನಾಟಕದ ಪಾಸ್ ಉಪಯೋಗಿಸಿ ಕೇರಳದಿಂದ ಕರ್ನಾಟಕಕ್ಕೆ ಕಲ್ಲುಗಳನ್ನು ಸಾಗಿಸಲಾಗುತ್ತಿದ್ದು, ಈ …

ಶೋಚನೀಯಗೊಂಡ ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ : ಸಂಚಾರ ಸಮಸ್ಯೆ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಹಲವು ವರ್ಷಗಳಿಂದ ಶೋಚನೀಯÁವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉಪ್ಪಳ ಪೇಟೆಯಿಂದ ರೈಲ್ವೇ ನಿಲ್ದಾಣ ತನಕದ ಸುಮಾರು ಒಂದು ಕಿಲೋ ಮೀಟರ್ ಕಾಂಕ್ರೀಟ್ ಹಾಗೂ ಡಾಮರು ರಸ್ತೆ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಚಾಯತ್ ಹಾಗೂ ರೈಲ್ವೇ ಇಲಾಖೆಗೆ ಸೇರಿದ ರಸ್ತೆಯಾಗಿದೆ ಇದು. ಇತ್ತೀಚೆಗೆ ರಸ್ತೆ ಉದ್ದಕ್ಕೂ ಚರಂಡಿಯನ್ನು ಅಭಿವೃದ್ದಿಗೊಳಿಸ ಲಾಗಿದೆ. ಈ ಪ್ರದೇಶದಲ್ಲಿ ಅಯ್ಯಪ್ಪ ಮಂದಿರ, ನೂರಾರು ಮನೆಗಳು, ವ್ಯಾಪಾರ ಸಂಸ್ಥೆಗಳು ಇದ್ದು, …

ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಪೈವಳಿಕೆ: ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಿಫ್‌ಬಿ ನಿಧಿಯಿಂದ 3.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಕಟ್ಟಡವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮೂರು ಮಹಡಿಗಳಲ್ಲಾಗಿ ಒಟ್ಟು 13 ತರಗತಿ ಕೊಠಡಿಗಳನ್ನು ಹೊಂದಿರುವ ಈ ಕಟ್ಟಡದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಲಿದೆ. ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್ ಅಧ್ಯಕ್ಷತೆ ವಹಿಸುವರು. ಪಂಚಾಯತ್ ಅಧ್ಯಕ್ಷೆ ಬದ್ರುನ್ನೀಸ ಸಲೀಂ ಕಳಾಯಿ, ಬ್ಲೋಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ರೈ, ಪಿಟಿಎ …

ಶೇಡಿಗದ್ದೆ-ನಾರಾಯಣಮಂಗಲ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕುಂಬಳೆ: ಶೇಡಿಗದ್ದೆ ಮುಂಗಿಲ ನಾರಾಯಣಮಂಗಲ ಕಾಂಕ್ರೀಟ್ ರಸ್ತೆಯನ್ನು ನಾಡಿಗೆ ಸಮರ್ಪಿಸ ಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ನವೀಕರಿಸಿದ ಕುಂಬಳೆ ಪಂಚಾಯತ್ ವ್ಯಾಪ್ತಿಯ ಈ ರಸ್ತೆಯನ್ನು ಶಾಸಕ ಎ.ಕೆ.ಎಂ. ಅಶ್ರಫ್ ನಾಡಿಗೆ ಸಮರ್ಪಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ ಅಧ್ಯಕ್ಷತೆ ವಹಿಸಿದರು. ಬ್ಲೋಕ್‌ನ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಸ್ವಾಗತಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ಪಿ. ಅಬ್ದುಲ್ ಖಾದರ್ , ಜಿಲ್ಲಾ ಪಂ. ಸದಸ್ಯ ಅಸೀಸ್ ಕಳತ್ತೂರು, ಮಂಜೇಶ್ವರ ಬ್ಲೋಕ್ …

ಕಾಸರಗೋಡು ಹೆಚ್ಚಿನ ಅಭಿವೃದ್ಧಿಗೆ ಸಾಧ್ಯತೆಯುಳ್ಳ ಜಿಲ್ಲೆ: ನೂತನ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್

ಕಾಸರಗೋಡು: ಕಾಸರಗೋಡು  ಅಭಿವೃದ್ಧಿಗೆ ಹೆಚ್ಚು ಸಾಧ್ಯತೆಯುಳ್ಳ ಜಿಲ್ಲೆಯಾಗಿದೆ. ಆದ್ದರಿಂದ ಭಾರೀ ಸಂತೋಷ ಹಾಗೂ ನಿರೀಕ್ಷೆಯೊಂದಿಗೆ ತಾನು ಜಿಲ್ಲಾಧಿಕಾರಿಯಾಗಿ ಇಲ್ಲಿ ಅಧಿಕಾರ ವಹಿಸುತ್ತಿದ್ದೇನೆಂದು ನೂತನ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನುಡಿದಿದ್ದಾರೆ.  ಇಂದು ಬೆಳಿಗ್ಗೆ ಕಾಸರಗೋಡು ಸಿವಿಲ್ ಸ್ಟೇಶನ್‌ನ ಛೇಂಬರ್‌ಗೆ ತಲುಪಿದ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡು ತ್ತಿದ್ದರು.  ಕಾಸರಗೋಡಿನಲ್ಲಿ  ಅಭಿವೃದ್ಧಿಗೆ ಹಲವು ಅವಕಾಶಗಳಿವೆ. ಅವುಗಳನ್ನೆಲ್ಲಾ ತಿಳಿದುಕೊಂಡು ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಯೋಜನೆ ಸಿದ್ಧಪಡಿಸಲಾಗುವುದು. ಜಿಲ್ಲೆಯ ಜನರ ಪಟ್ಟೆ   ಸಹಿತ ವಿವಿಧ  ಸಮಸ್ಯೆಗಳಿಗೆ ಪರಿಹಾರ ಕಂಡು …

ಪೊವ್ವಲ್ ಕ್ವಾರ್ಟರ್ಸ್‌ನಿಂದ ಕಳವು: ಚೆರ್ಕಳ ಬಾಲಡ್ಕ ನಿವಾಸಿ ಸೆರೆ

ಬೋವಿಕ್ಕಾನ: ಪೊವ್ವಲ್‌ನ ಪಿ.ಎ. ಕಾಂಪ್ಲೆಕ್ಸ್ ಕ್ವಾರ್ಟರ್ಸ್‌ನ ಬೀಗ ಮುರಿದು ಲ್ಯಾಪ್‌ಟಾಪ್, ಸಂಬಂಧಪಟ್ಟ ಉಪಕರಣಗಳನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿ ಸೆರೆಯಾಗಿದ್ದಾನೆ. ಚೆರ್ಕಳ ಬಾಲಡ್ಕ ನಿವಾಸಿ ಹನೀಫ್ (52)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳ 25ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ಮಧ್ಯೆ ಕಳವು ನಡೆಸಲಾಗಿತ್ತು. ಉತ್ತರ ಪ್ರದೇಶ ನಿವಾಸಿ ಹಾಗೂ ಹೋಟೆಲ್ ನೌಕರ ರಿಹಾನ್ ಅಶ್ರಫ್‌ನ ಕೊಠಡಿಯಲ್ಲಿ ಕಳವು ನಡೆಸಲಾಗಿತ್ತು. ಬೀಗ ಮುರಿದು ಒಳನುಗ್ಗಿದ ಕಳ್ಳ ಮಲಗುವ ಕೊಠಡಿಯಲ್ಲಿ ಬ್ಯಾಗ್‌ನಲ್ಲಿರಿಸಿದ್ದ ಲ್ಯಾಪ್‌ಟಾಪ್, ಚಾರ್ಜರ್, ಮೈಕ್ರೋಫೋನ್ ಎಂಬಿವು ಕಳವುಗೈದಿರುವುದಾಗಿ …