ಅಸೌಖ್ಯ: ಗಲ್ಫ್ ಉದ್ಯಮಿ ನಿಧನ
ಉಪ್ಪಳ: ಮಣ್ಣಂಗುಳಿ ನಿವಾಸಿ ದಿ| ಪಿ.ಬಿ ಅಬೂಬಕ್ಕರ್ ಪಾರಕಟ್ಟರ ವರ ಪುತ್ರ ದುಬೈಯಲ್ಲಿ ಉದ್ಯಮಿ ಯಾಗಿರುವ ಮೊಯಿನುದ್ದೀನ್ ಶೆಹದಿಲ್ (43) ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಹಲವು ವರ್ಷಗಳಿಂದ ದುಬೈಯಲ್ಲಿ ಉದ್ಯಮಿಯಾಗಿದ್ದು, ಹೃದಯದ ಅಸೌಖ್ಯ ನಿಮಿತ್ತ 4 ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಕಳೆದ ಮೂರು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುಬೈ ಮಣ್ಣಂಗುಳಿ ಕಲ್ಚರಲ್ ಸೆಂಟರ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ತಾಯಿ ಕೈರುನ್ನೀಸ, ಪತ್ನಿ ಸಕೀನ, ಮಕ್ಕಳಾದ ಸಿಮ್ರಾನ್, …