ಎಪ್ಲಸ್ ಪಡೆದ ವಿದ್ಯಾರ್ಥಿನಿಗೆ ಬಿಜೆಪಿಯಿಂದ ಅಭಿನಂದನೆ

ಬದಿಯಡ್ಕ: ಪೆರಡಾಲ ಹದಿಮೂರನೇ ವಾರ್ಡ್ ಬಿಜೆಪಿ ಸಮಿತಿಯ ವತಿಯಿಂದ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯ ಗಳಲ್ಲಿ ಎ ಪ್ಲಸ್ ಪಡೆದ ಬೀಜಂತಡ್ಕ ಇಳಂತೋಡಿ ಕಿರಣ-ರೇಖ ದಂಪತಿ ಪುತ್ರಿ, ನವಜೀವನ ಹೈಸ್ಕೂಲ್ ವಿದ್ಯಾರ್ಥಿನಿ ರೋಷಿಕಾ ಕಿರಣ್‌ಳನ್ನು ಅಭಿನಂದಿಸಲಾಯಿತು.ವಾರ್ಡ್ ಸಮಿತಿ ಅಧ್ಯಕ್ಷ, ಹಿರಿಯ ಬಿಜೆಪಿ ಕಾರ್ಯಕರ್ತ ಎಂ. ನಾರಾಯಣ ಭಟ್ ಮೈರ್ಕಳ ಹಾಗೂ ಬದಿಯಡ್ಕ ಪಂ, ಉಪಾಧ್ಯಕ್ಷೆ, ಅಶ್ವಿನಿ ಕೆ.ಯಂ. ಜಂಟಿಯಾಗಿ ಗೌರವಿಸಿದರು. ವಾರ್ಡ್ ಸಮಿತಿ ಪ್ರಧಾನ ಕಾರ್ಯ ದರ್ಶಿ ನಾರಾಯಣ ಪಿ ಪೆರಡಾಲ, ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿ …

ಹೊಸಂಗಡಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ತುರ್ತಾಗಿ ನಡೆಸಬೇಕು-ಕೆವಿವಿಇಎಸ್

ಮಂಜೇಶ್ವರ: ಹೊಸಂಗಡಿ ಪೇಟೆಯಿಂದ ಬಂಗ್ರಮಂಜೇಶ್ವರಕ್ಕೆ ಸಂಪರ್ಕ ಕಲ್ಪಿಸುವ  ರೈಲ್ವೇ ಮೇಲ್ಸೇತುವೆ ನಿರ್ಮಾಣ ಹಲವು ವರ್ಷಗಳಿಂದ ಬಾಕಿಯಾಗಿದ್ದು, ಇದು ವಾಹನ ಸಂ ಚಾರಕ್ಕೆ ಅಡಚಣೆಯಾಗಿ ಪರಿಣಮಿಸಿದೆ.  ವಾಹನಗಳ ದಟ್ಟಣೆಯಿಂದ ರಾಷ್ಟ್ರೀಯ ಹೆದ್ದಾರಿ ಮುಚ್ಚುಗಡೆಯಾಗುತ್ತಿದ್ದು, ಇದರ ಪರಿಹಾರಕ್ಕಾಗಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ತುರ್ತಾಗಿ ನಡೆಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಹಾಸಭೆಯಲ್ಲಿ ಠರಾವು ಮಂಡಿಸಲಾಯಿತು. ಸಭೆಯಲ್ಲಿ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಈ ವೇಳೆ ಶಾಸಕ ಎಕೆಎಂ ಅಶ್ರಫ್‌ರನ್ನು …

ಮೀನು ವ್ಯಾಪಾರಿ ನಿಧನ

ಉಪ್ಪಳ: ಉಪ್ಪಳ ಬಳಿಯ ಶಾರದಾನಗರ ನಿವಾಸಿ ಜಗಜೀವನ್‌ರ ಪತ್ನಿ ಶಕುಂತಳ ಸಾಲಿಯಾನ್ (64) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಮಂಜೇಶ್ವರ ದಲ್ಲಿ ಹಲವು ವರ್ಷಗಳ ಕಾಲ ಮೀನು ವ್ಯಾಪಾರಿಯಾಗಿದ್ದರು.ಮೃತರು ಮಕ್ಕಳಾದ ಸತೀಶ, ಸೌಮ್ಯ, ಸುಷ್ಮ, ಸೊಸೆ ಪ್ರತಿಭಾ, ಅಳಿಯಂದಿ ರಾದ ಕಾರ್ತಿಕ್, ಪ್ರಶಾಂತ್, ಸಹೋದರರಾದ ಹರಿಶ್ಚಂದ್ರ, ಕೃಷ್ಣ ಸಾಲಿಯಾನ್, ಚಂದ್ರಹಾಸ, ಸದಾನಂದ, ರಾಜ್ ಕುಮಾರ್ ಸಾಲಿಯಾನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರ ರುಕ್ಕಯ್ಯ, ಸಹೋದರಿಯರಾದ ಸುಶೀಲ, ವಸಂತಿ …

ಮಧೂರು ಕ್ಷೇತ್ರದ ನಿವೃತ್ತ ನೌಕರ ನಿಧನ

ಮಧೂರು: ಇಲ್ಲಿನ ಮಣಂಗಳ ನಿವಾಸಿ ಸಿ.ಎಂ. ದಾಮೋದರ ಮಣಿಯಾಣಿ (75) ನಿಧನ ಹೊಂದಿದರು. ಮಧೂರು  ದೇವ ಸ್ಥಾನದ ನಿವೃತ್ತ ನೌಕರನಾಗಿದ್ದಾರೆ. ಮೃತರು ಮಕ್ಕಳಾದ ಮಂಜುಳ, ಮೃದುಲ, ಅಳಿಯ ವಿಜಯನ್, ಸಹೋದರಿಯರಾದ ಸಾವಿತ್ರಿ, ರಾಜೀವಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪತ್ನಿ ಪ್ರಮೀಳ ಈ ಹಿಂದೆ ನಿಧನ ಹೊಂದಿದ್ದಾರೆ.

ಅಸೌಖ್ಯ: ಮಹಿಳೆ ನಿಧನ

ಮಂಗಲ್ಪಾಡಿ: ಅಂಬಾರು ಚೆರುಗೋಳಿ ನಿವಾಸಿ ಪೂವಪ್ಪ ಚನಿಲು ರವರ ಪತ್ನಿ ಮುತ್ತು (82) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಯೋಗೇಂದ್ರ, ಪುರುಷೆÆÃತ್ತಮ, ಕಮಲಾಕ್ಷಿ, ಕೋಟಿ, ಸೂರ್ಯ, ಸುಮತಿ, ಪುಷ್ಪ, ಭವಾನಿ, ಪರಮೆಶ್ವರಿ, ಜ್ಯೋತಿ, ಸೊಸೆಯಂದಿರಾದ ಸುಮತಿ, ಚಂದ್ರಾವತಿ, ದೀಕ್ಷ, ರೇವತಿ (ಮಂಗಲ್ಪಾಡಿ ಪಂಚಾಯತ್ ಮಾಜಿ ಸದಸ್ಯೆ), ಅಳಿಯಂದಿರಾದ ಲೋಕೇಶ, ಭಾಸ್ಕರ, ಚಂದ್ರಶೇಖರ, ವಿಶ್ವನಾಥ, ಸಹೋದರಿ ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿಕ್ರಮ್ ಎಲೆಕ್ಟ್ರೋನಿಕ್ಸ್ ಮಾಲಕ ಕೆ.ಪಿ. ರಾಮಚಂದ್ರನ್ ನಿಧನ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಕ್ರಾಸ್ ರೋಡ್‌ನ  ವಿಕ್ರಂ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ, ಅಡ್ಕತ್ತಬೈಲ್ ನಿವಾಸಿ ಯಾದ ಕೆ.ಪಿ. ರಾಮಚಂದ್ರನ್(84) ನಿಧನ ಹೊಂದಿದರು. ಮಂಗಳೂರಿನ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಶೋಭಾ, ಮಕ್ಕಳಾದ ರೋಶ್ನಿ, ದಿವ್ಯಾ, ವಿಕ್ರಂ ಹಾಗೂ ಅಪಾರ ಬಂಧು-ಮಿತ್ರರನ್ನು ಗಲಿದ್ದಾರೆ.

ಡಿಸಿಸಿಯಿಂದ ಕಾಂಗ್ರೆಸ್ ನೇತಾರ ಕೆ. ವೆಳ್ತಂಬು ಸಂಸ್ಮರಣೆ

ಕಾಸರಗೋಡು: ಕೆ.ವೆಳ್ತಂಬು ಅವರು ಕಾಸರಗೋಡು ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೇತೃತ್ವ ನೀಡಿದ ನೇತಾರನಾಗಿದ್ದಾರೆ.ತನ್ನ ಜೀವನದ ಕೊನೆಯ ವರೆಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗಟ್ಟಿನಲ್ಲಿರಿಸಿದ ನೇತಾರನೂ ಆಗಿದ್ದಾರೆಂದು  ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ನಡೆದ ಕೆ. ವೆಳ್ತಂಬು ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನಡೆಸಿದ ಬಳಿಕ ಜರಗಿದ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ  ಅವರು ಮಾತನಾಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಾದ ಜವಾಹರ್ ಭವನ್ ನಿರ್ಮಿಸಿರುವುದು ವೆಳ್ತಂಬು ನೇತೃತ್ವದಲ್ಲಾಗಿದೆಯೆಂದೂ ಅವರು ತಿಳಿಸಿದರು. …

ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ-ಶಾಸಕ

ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜಿನ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ಹಾಗೂ ಮೆಡಿಕಲ್ ಕಾಲೇಜಿನ ಭಾಗವಾಗಿ ತಾಯಿ ಹಾಗೂ ಮಗು ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊಸ ಅಡ್ಮಿನಿಸ್ಟ್ರೇ ಟಿವ್ ಬ್ಲಾಕ್, ಸಿವೇಜ್ ಪ್ಲಾಂಟ್ ಎಂಬಿ ವುಗಳನ್ನು ನೂತನವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಕಲ್ಲಟ್ರ ಮಾಹಿನ್ ತಿಳಿಸಿದ್ದಾರೆ. ಪ್ರತೀ ತಿಂಗಳ ಅವಲೋಕನದಂಗವಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ನೇತೃತ್ವದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜಿಗೆ ಸಂದರ್ಶನ  ನೀಡಿದ ಬಳಿಕ ಶಾಸಕರು ಈ ಬಗ್ಗೆ ತಿಳಿಸಿದ್ದಾರೆ. ಅಸೋಸಿಯೇಟ್ ಪ್ರೊಫೆಸರ್ ಸಹಿತ ಸೂಪರ್ …

ಮಂಜೇಶ್ವರದಲ್ಲಿ ಗಂಟೆಗಳ ಮಧ್ಯೆ ಎರಡು ಘಟನೆಗಳು: ರೈಲು ಢಿಕ್ಕಿ ಹೊಡೆದು ಇಬ್ಬರು ಯುವಕರು ದಾರುಣ ಮೃತ್ಯು

ಉಪ್ಪಳ: ಮಂಜೇಶ್ವರದಲ್ಲಿ ನಿನ್ನೆ ಗಂಟೆಗಳೊಳಗೆ ಇಬ್ಬರು ಯುವಕರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ. ಹೊಸಬೆಟ್ಟು ಸ್ಫೂರ್ತಿನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ಉಮೇಶ (40) ಹಾಗೂ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನ ಬಳಿಯ ಮನೀಶ್ (18) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಉಮೇಶ್ ನಿನ್ನೆ ಸಂಜೆ ೫ ಗಂಟೆಗೆ ರೈಲು ಢಿಕ್ಕಿ ಹೊಡೆದು ಮೃತಪಟ್ಟಿ ದ್ದಾರೆ. ಮಂಜೇಶ್ವರ ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಅನಂತರ ರಾತ್ರಿ 9.45ರ ವೇಳೆ ಇದೇ ಸ್ಥಳದ ಬೇರೊಂದು ಹಳಿಯಲ್ಲಿ …

ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ದಾರುಣ ಘಟನೆ: ತೆಂಗಿನ ಮರ ಮೈಮೇಲೆ ಬಿದ್ದು ಪೆರ್ವಾಡ್  ಜುಮಾ ಮಸೀದಿ ಅಧ್ಯಕ್ಷ ಮೃತ್ಯು

ಕುಂಬಳೆ: ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ತೆಂಗಿನಮರ ತುಂಡಾಗಿ ಮೈ ಮೇಲೆ ಬಿದ್ದು ಮಸೀದಿ ಅಧ್ಯಕ್ಷ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರ್ವಾಡ್ ಜುಮಾ ಮಸೀದಿ ಸಮಿತಿ ಅಧ್ಯಕ್ಷರೂ, ಮೀನುಕಾರ್ಮಿಕನಾದ ಪೆರ್ವಾಡ್‌ನ ಅಬ್ದುಲ್ಲ (65) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ 8.30ರ ವೇಳೆ ಪೆರ್ವಾಡ್ ಪಿ.ಎಸ್ ಗ್ರೌಂಡ್‌ನ ಬಳಿ ದುರ್ಘಟನೆ ಸಂಭವಿಸಿದೆ. ಅಬ್ದುಲ್ಲ ಸ್ನೇಹಿತರಾದ ಇಬ್ರಾಹಿಂ ಹಾಗೂ ಹಸೈನಾರ್‌ರೊಂದಿಗೆ ಪೆರ್ವಾಡ್ ಪಿ.ಎಸ್. ಗ್ರೌಂಡ್‌ನ ಬಳಿಯ ಕಡಪ್ಪುರದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ತೆಂಗಿನಮರ ಮುರಿದು ಅಬ್ದುಲ್ಲರ …