ಮೀಂಜ ಪಂಚಾಯತ್ ಸಿಡಿಎಸ್‌ಗೆ ಐಎಸ್‌ಒ ಪ್ರಮಾಣಪತ್ರ ಹಸ್ತಾಂತರ

ಉಪ್ಪಳ: ಮೀಂಜ ಪಂಚಾಯತ್ ಕುಟುಂಬಶ್ರೀ ಸಿಡಿಎಸ್‌ಗೆ ಐಎಸ್‌ಒ ಪ್ರಮಾಣಪತ್ರ ಲಭಿಸಿತು. ಕಾಸರಗೋಡು ಸನ್‌ರೈಸ್ ಸಭಾಂಗಣದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌ರಿಂದ ಪ್ರಮಾಣಪತ್ರ ಸ್ವೀಕರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಾಬು, ರುಖಿಯ ಸಿದ್ದಿಕ್, ಶಾಲಿನಿ ಬಿ ಶೆಟ್ಟಿ, ಶಿಲ್ಪಶ್ರೀ, ಸದಸ್ಯರು,ಸ್ಟಾಫ್ ಭಾಗವಹಿಸಿದರು.

ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಮಹಾಸಭೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಚಿರುಗೋಳಿ ಜಿ ಎಚ್ ಡಬ್ಲ್ಯೂ ಎಲ್ ಪಿ ಶಾಲೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಪ್ರೇಮ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಬ್ಯಾಂಕ್‌ನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ವಾರ್ಷಿಕ ವರದಿ, ಆಯವ್ಯಯ ಮತ್ತು 2026 -27ನೇ ವರ್ಷದ ಅಂದಾಜು ಬಜೆಟನ್ನು ಮಂಡಿಸಿದರು. 2024 -25ನೇ ವರ್ಷದ ಬಜೆಟಿಗಿಂತ ಅಧಿಕವಾದ ಖರ್ಚು ಮತ್ತು ಆ ವರ್ಷದ ಲೆಕ್ಕ ಪರಿಶೋಧನಾ ಲೋಪ ದೋಷಗಳ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ವಿವರಿಸಿದರು. ಈ ಸಂದರ್ಭದಲ್ಲಿ ಅನಾಥ ಶವಗಳ ಸಂಸ್ಕಾರ ಕಾರ್ಯ …

ಕುಂಬಳೆ ಭಾಸ್ಕರನಗರದಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಸಮೀಪದ ಭಾಸ್ಕರ ನಗರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟರು. ಮೂಲತಃ ಕಾಸರಗೋಡು ಅಡ್ಕತ್ತಬೈಲು ನಿವಾಸಿಯೂ ಪ್ರಸ್ತುತ ಬೇಳದಲ್ಲಿ ವಾಸಿಸುವ ಅಜಿತ್ (48) ಎಂಬವರು ಮೃತಪಟ್ಟ  ದುರ್ದೈವಿ ಯಾ ಗಿದ್ದಾರೆ. ಇವರು ಕುಂಬಳೆಯ  ಟಯರ್ ಅಂಗಡಿಯೊಂದರ ನೌಕರನಾಗಿದ್ದರು. ಮೊನ್ನೆ ರಾತ್ರಿ 9 ಗಂಟೆ ವೇಳೆ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಭಾಸ್ಕರನಗರದಲ್ಲಿ ಮೋರಿ ಸಂಕದ ಬದಿಗೆ ಢಿಕ್ಕಿ ಹೊಡೆದು ಅಪಘಾ ತವುಂಟಾಗಿತ್ತು. ಕಾರು ಮಗುಚಿ ಬಿದ್ದು ಗಂಭೀರ …

‘ಆಟದಲ್ಲೂ ಆಪರೇಷನ್ ಸಿಂಧೂರ’ ಪಾಕ್ ವಿರುದ್ಧ ಏಷ್ಯಾಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ವಿರೋಚಿತ ಗೆಲುವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಎಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಅಮಾಯಕ ರಾದ 26 ಪ್ರವಾಸಿಗರನ್ನು ಅತಿ ಕ್ರೂರವಾಗಿ ಕೊಂದು ದುಷ್ಕೃತ್ಯಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್ ಸಿಂಧೂರದೊಂದಿಗೆ ಏಷ್ಯಾಕಪ್‌ನಲ್ಲಿ ಭಾರತ ತಂಡ ಗೆದ್ದಿರುವುದನ್ನು ಹೋಲಿಸಿದ್ದಾರೆ. ಆಪರೇಷನ್ ಸಿಂಧೂರ ಏಷ್ಯಾಕಪ್ ಮೈದಾನದಲ್ಲಿ ನಡೆದ ಆಟದಲ್ಲೂ ನಡೆದಿದೆ. ಆಪರೇಷನ್ ಸಿಂಧೂರ ಮತ್ತು ಈ ಆಟದ ಮೈದಾನದಲ್ಲಿ …

ಶಬರಿಮಲೆ: ನಾಪತ್ತೆಯಾಗಿದ್ದ ದ್ವಾರಪಾಲಕ ವಿಗ್ರಹದ 42.5 ಕೆ.ಜಿ ಚಿನ್ನ ಪತ್ತೆ; ಭಾರೀ ಒಳಸಂಚು ನಡೆದಿದೆ- ಮುಜರಾಯಿ ಮಂಡಳಿ

ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ದ್ವಾರಪಾಲಕ ವಿಗ್ರಹಕ್ಕೆ ಹೊದಿಸಲಾಗಿದ್ದ 42.8 ಕೆಜಿ ತೂಕದ ಕವಚದಲ್ಲಿ ನಾಪತ್ತೆಯಾಗಿದ್ದ 42.5 ಕೆಜಿ ಚಿನ್ನವನ್ನು  ತಿರುವಿದಾಂಕೂರು ಮುಜರಾಯಿ ಮಂಡಳಿಯ ವಿಜಿಲೆನ್ಸ್ ವಿಭಾಗವು ಪೊಲೀಸರ ಸಹಾಯದಿಂದ ತಿರುವನಂತಪುರ ದಿಂದ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಚಿನ್ನವನ್ನು ಕೊಡುಗೆಯಾಗಿ ನೀಡಿದ್ದ ತಿರುವನಂತಪುರ ವೆಂಙಾರ ಮೂಡ್‌ನ ಉಣ್ಣಿಕೃಷ್ಣನ್‌ರ ಸಂಬಂಧಿಕರೋರ್ವರ ಮನೆಯಿಂದ ಪತ್ತೆಹಚ್ಚಲಾಗಿದೆ. ಶಬರಿಮಲೆ ಕ್ಷೇತ್ರದ ದ್ವಾರಪಾಲಕ ವಿಗ್ರಹದ ಚಿನ್ನ ನಾಪತ್ತೆಯಾದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ನಿರ್ದೇಶ ನೀಡಿತ್ತು. ಶ್ರೀ ದೇಗುಲದ ಚಿನ್ನ ನಾಪತ್ತೆಯಾದ …

ಕೆರೆಯಲ್ಲಿ ಸ್ನಾನದ ವೇಳೆ ಮೆಡಿಕಲ್ ಶಾಪ್ ಮಾಲಕ ನೀರಿನಲ್ಲಿ ಮುಳುಗಿ ಸಾವು

ಕಾಸರಗೋಡು: ಕುಟುಂಬ ಸದಸ್ಯರ ಜತೆ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಮೆಡಿಕಲ್ ಶಾಪ್ ಮಾಲಕ ಕೆರೆಯಲ್ಲಿ ಧುಮುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಕುತ್ತಿಕ್ಕೋಲ್ ಪಳ್ಳತ್ತುಂಗಾಲ್ ಪಾಲಕ್ಕುಡಿ ಜೇಮ್ಸ್ (60) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೇಡಡ್ಕದ ತೋರ್ ಕುಳತ್ತ್‌ನಲ್ಲಿರುವ ಕೆರೆಯಲ್ಲಿ  ಕುಟುಂಬ ಸದಸ್ಯರೊಂದಿಗೆ ಸ್ನಾನ ಮಾಡುತ್ತಿz ವೇಳೆ ಅವರು ಕೆರೆಗೆ ಧುಮುಕಿದ್ದರು. ನಂತರ ನೀರಿನಿಂದ ಮೇಲಕ್ಕೇರದಿರುವುದನ್ನು ಗಮನಿಸಿದ ಜತೆಗಿದ್ದ ಮಕ್ಕಳು ಮತ್ತು ಇತರರು ತಕ್ಷಣ ಕೆರೆಗಿಳಿದು ಜೇಮ್ಸ್‌ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ಮೃತರು ಬೇಡಡ್ಕ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರೀಟ್ ಬೀಮ್‌ನ ಒಂದು ಭಾಗ ಕುಸಿತ ಪ್ರಯಾಣಿಕರು ಅದೃಷ್ಟವಶಾತ್ ಪಾರು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಳ ಬಸ್ ನಿಲ್ದಾಣ ಸಮೀಪ ಮೇಲ್ಸೇತುವೆಯ ಅಡಿಭಾಗದ ಕಾಂಕ್ರೀಟ್ ಭೀಮ್‌ನ ಒಂದು  ಭಾಗ ಕುಸಿದು ಬಿದ್ದಿದೆ. ಇದೇ ಸಮಯದಲ್ಲಿ ಮೇಲ್ಸೇತುವೆಯ ಕೆಳ ಭಾಗದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಅವುಗಳ ಮೇಲೆ ಕಾಂಕ್ರೀಟ್ ತುಂಡು ಬೀಳದಿರುವುದರಿಂದ ಭಾರೀ ಅಪಾಯ ತಪ್ಪಿ ಹೋಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಇಲ್ಲಿ ಮೇಲ್ಸೇತುವೆ ಕೆಲಸ ಪೂರ್ಣಗೊಂಡಿತ್ತು. ಹಲವು ವಾಹನಗಳು ಮೇಲ್ಸೇತುವೆ ಹಾಗೂ ಕೆಳಗಿನ ರಸ್ತೆಯಲ್ಲಿ ಸಂಚರಿಸುತ್ತಿದೆ. ಇದೀಗ ಈ ಮೇಲ್ಸೇತುವೆಯ ಕಾಂಕ್ರೀಟ್ ತುಂಡು ಬಿದ್ದಿರುವುದು ಸ್ಥಳೀಯರಲ್ಲಿ …

ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಅಣಂಗೂರು ಸ್ಕೌಟ್ ಭವನ ಬಳಿಯ ನಿವಾಸಿ ಕೆ.ಎಂ. ಅಬ್ದುಲ್ಲ (67) ಎಂಬವರು ತಳಂಗರೆಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಇಂದು ಮುಂಜಾನೆ ಮೃತದೇಹ ಕಂಡು ಬಂದಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹವನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ.  ಮಾಹಿನ್ ಫಕ್ರುದ್ದೀನ್ ಎಂಬವರ ಪುತ್ರನಾದ ಮೃತರು ಪತ್ನಿ  ಮರಿಯಾಂಬಿ, ಮಕ್ಕಳಾದ ಕಲಂದರ್ ಶಾ, ಶಹನಾಸ್, ಶಬ್ನ, ರಹೀಸ್, ರುಪ್ಸ, ಅಳಿಯ- ಸೊಸೆಯಂದಿರಾದ ಸಹೀದ್, ಇರ್ಶಾದ್, ಫವಾಸ್, ಉಮರುಲ್ ಫಾರೂಕ್, ರಿಸ್ವಾನ್, ಫೈಬೀನ, ಸಹೋದರ- …

ಕಾರಿನಲ್ಲಿ 112 ಕೆ.ಜಿ ಗಾಂಜಾ ಸಾಗಿಸಿದ ಪ್ರಕರಣ: ಒಂದನೇ ಆರೋಪಿಗೆ 10 ವರ್ಷ ಕಠಿಣ ಸಜೆ, 1 ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ೧೧೨ ಕಿಲೋ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ೧೦ ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ವೆಳ್ಳರಿಕುಂಡ್ ತಾಲೂಕಿನ ಭೀಮನಡಿ ಕುನ್ನುಂಗೈ ಕಕ್ಕಾಡಿನಗತ್ತ್ ನೌಫಲ್ ಕೆ.ಕೆ. (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ …

ಏರುತ್ತಲೇ ಇದೆ ಚಿನ್ನದ ಬೆಲೆ: ಇಂದು ಸಾರ್ವಕಾಲಿಕ ದಾಖಲೆ

ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ಏರುಗತಿಯಲ್ಲಿ ಸಾಗಿದೆ. ಇಂದು ಇತಿಹಾಸದಲ್ಲೇ ಅತ್ಯಧಿಕ ದರದಲ್ಲಿ ಚಿನ್ನದ ವಹಿವಾಟು ನಡೆಯುತ್ತಿದೆ. ಚಿನ್ನದ ಬೆಲೆ 85,000 ದಾಟಿ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಮಾರುಕಟ್ಟೆಯಲ್ಲಿ ಇಂದು ಪವನ್ ಗೆ 85,360 ರೂ. ಇದೆ. ಇಂದು ಪವನ್ ಗೆ 680 ರೂ. ಏರಿಕೆಯಾಗಿದೆ. ಸೆಪ್ಟೆಂಬರ್ 1 ರಿಂದ ಇಂದಿನವರೆಗೆ ಮಾರುಕಟ್ಟೆಯಲ್ಲಿ 7,720 ರೂ. ಏರಿಕೆ ಕಂಡುಬAದಿ ರುವುದು ಗಮನಾರ್ಹ. ಒಂದು ಗ್ರಾಂ ಚಿನ್ನದ ಬೆಲೆ 10,000 ರೂ.ಗಿಂತ ಹೆಚ್ಚಾಗಿದೆ. ಇಂದು ಒಂದು ಗ್ರಾಂ …