ಬೈಕ್‌ನಲ್ಲಿ ಗಾಂಜಾ ಸಹಿತ ಸಂಚರಿಸುತ್ತಿದ್ದ ವ್ಯಕ್ತಿ ಸೆರೆ

ಕುಂಬಳೆ: ಮಾರಾಟಕ್ಕಾಗಿ  ಗಾಂಜಾ ಬೈಕ್‌ನಲ್ಲಿ ಸಾಗಿಸುತ್ತಿದ್ದ  ವ್ಯಕ್ತಿಯನ್ನು ಸೆರೆಹಿಡಿಯಲಾಗಿದೆ. ಬಂದ್ಯೋಡು ಅಡ್ಕ ನಿವಾಸಿ ಅಬ್ದುಲ್ಲ ಯಾನೆ ಫ್ರೂಟ್ ಅಬ್ದುಲ್ಲ (64) ಎಂಬಾತನನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಈತನ ಕೈಯಿಂದ 2 ಕಿಲೋ ಗಾಂಜಾ ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ ಕುಂಬಳೆ ರೇಂಜ್ ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ನೇತೃತ್ವದಲ್ಲಿ ನಡೆಸಿದ ತಪಾಸಣೆ ವೇಳೆ ಅಬ್ದುಲ್ಲ ಗಾಂಜಾ ಸಹಿತ ಬೈಕ್‌ನಲ್ಲಿ  ಸಂಚರಿಸುತ್ತಿರುವುದು ಕಂಡುಬಂದಿದೆ.  ಕೂಡಲೇ ಬೈಕ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.  ಬೈಕ್‌ನ್ನು ಕಸ್ಟಡಿಗೆ ತೆಗೆಯಲಾಗಿದೆ. ಸೆರೆಗೀಡಾದ …

ತಿರುವನಂತಪುರ ಕಾರ್ಪೊರೇಶನ್‌ನ ಬಿಜೆಪಿ ಮೇಯರ್ ಆಯ್ಕೆ ವಿಳಂಬ: ಸರ್ಪ್ರೈಸ್ ವ್ಯಕ್ತಿಗೆ ಸಾಧ್ಯತೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಂದು ಹಲವು ದಿನಗಳು ಕಳೆದರೂ ತಿರುವನಂತಪುರ ಕಾರ್ಪೊರೇಶನ್‌ನ ಮೇಯರ್ ಅಭ್ಯರ್ಥಿ ಯಾರಾಗುವರೆಂಬ ವಿಷಯದಲ್ಲಿ ತೀರ್ಮಾನ ವಿಳಂಬವಾಗುತ್ತಿದೆ. ಬಿಜೆಪಿಗೆ ಭಾರೀ ಬಹುಮತ ಲಭಿಸಿದ ಕಾರ್ಪೊರೇಶನ್‌ನ ಮೇಯರ್ ಅಭ್ಯರ್ಥಿಯನ್ನು ತೀರ್ಮಾನಿಸಲು ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡಲೇ ದೆಹಲಿಗೆ ತೆರಳುವರು ಎಂಬ ಮಾಹಿತಿ ಲಭಿಸಿದೆ. ದೆಹಲಿಯಿಂದ ಹಿಂತಿರುಗಿದ ಬಳಿಕವಷ್ಟೇ ರಾಜ್ಯದಲ್ಲಿ ಚರ್ಚೆಗಳು ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಚುನಾವಣೆ ಅವಲೋಕನಕ್ಕಾಗಿ ಮಂಡಲ ಪದಾಧಿಕಾರಿಗಳುವರೆಗಿರುವ ಮುಖಂಡರ, ಜಿಲ್ಲಾ ಕೋರ್ ಕಮಿಟಿ ಸಭೆ ಜರಗಲಿದೆ. ಕೇಂದ್ರ ನೇತೃತ್ವದ  …

ಮನೆ ಬೆಂಕಿಗಾಹುತಿ ಕುಟುಂಬ ಸಂಕಷ್ಟದಲ್ಲಿ

ಕಾಸರಗೋಡು: ನಗರಸಭಾ ವ್ಯಾಪ್ತಿಯ ಕೊಳಕೆಬೈಲಿನಲ್ಲಿ ನಿನ್ನೆ ಮನೆಯೊಂದು ಬೆಂಕಿಗಾಹುತಿ ಯಾಗಿದೆ. ಇಲ್ಲಿನ ದಿ| ಗಣಪತಿ ಆಚಾರಿ ಎಂಬವರ ಪತ್ನಿ ಪುಷ್ಪಾರ ಮಾಲಕತ್ವದಲ್ಲಿರುವ ಅನುಗ್ರಹ ನಿವಾಸ್  ಉರಿದು ನಾಶಗೊಂಡಿದೆ. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಘಟನೆ ನಡೆದಿದೆ. ಮನೆಯ ಮೇಲ್ಛಾವಣಿ ಪೂರ್ಣವಾಗಿ ನಾಶಗೊಂಡಿದ್ದು, ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ.  ಮನೆ ಉರಿದು ನಾಶಗೊಂಡ ಹಿನ್ನೆಲೆಯಲ್ಲಿ ಪುಷ್ಪಾ ಹಾಗೂ ಕುಟುಂಬಕ್ಕೆ ವಾಸಿಸಲು ವ್ಯವಸ್ಥೆ ಇಲ್ಲದಂತಾಗಿದೆ. 

‘ಪೋತ್ತಿಯೆ ಕೇಟ್ಟಿಯೆ’ಹಾಡಿನ ವಿರುದ್ಧ ದೂರು ಪ್ರಾಥಮಿಕ ತನಿಖೆ ಆರಂಭ

ತಿರುವನಂತಪುರ: ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ‘ಪೋತ್ತಿಯೆ ಕೇಟ್ಟಿಯೆ’ ಎಂಬ ಅನುಕರಣೆ ಹಾಡಿನ ವಿರುದ್ಧ ಡಿಜಿಪಿಗೆ ಸಲ್ಲಿಸಲಾದ ದೂರಿನಲ್ಲಿ ಪ್ರಾಥಮಿಕ ತನಿಖೆ ಆರಂಭಗೊಂಡಿದೆ. ದೂರನ್ನು ಡಿಜಿಪಿ ಎಡಿಜಿಪಿಗೆ ಹಸ್ತಾಂತರಿಸಿದ್ದಾರೆ.  ಹಾಡಿನಲ್ಲಿ ವಿಶ್ವಾಸಕ್ಕೆ ಧಕ್ಕೆ  ಉಂಟುಮಾಡುವ ಭಾಗಗಳಿವೆಯೇ ಎಂದು ಪರಿಶೀಲಿಸಲಾಗುವುದು.  ಈ ಬಗ್ಗೆ ಕಾನೂನು ಸಲಹೆ ಪಡೆದ ಬಳಿಕ ಮಾತ್ರವೇ ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಅಯ್ಯಪ್ಪ ಭಕ್ತರನ್ನು ಅವಹೇಳನಗೈಯ್ಯುವ ರೀತಿಯ ಹಾಡನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ  ತಿರುವಾಭರಣ  ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ …

ಎಲ್‌ಡಿಎಫ್ ಅಭ್ಯರ್ಥಿಗೆ ಸಹಾಯವೊದಗಿಸಿದ ದ್ವೇಷ: ಯುವಕನಿಗೆ ಕೊಲೆ ಬೆದರಿಕೆ; ಕೇಸು ದಾಖಲು

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಎಡರಂಗ ಅಭ್ಯರ್ಥಿಗೆ ಸಹಾಯವೊದಗಿಸಿದ ದ್ವೇಷದಿಂದ  ಕಾರು ತಡೆದು ನಿಲ್ಲಿಸಿ  ಯುವಕನ ಮುಖಕ್ಕೆ ಉಗುಳಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ದೂರ ಲಾಗಿದೆ. ಕುಂಬ್ಡಾಜೆಯ ಫಾರೂಕ್ (43) ನೀಡಿದ ದೂರಿನಂತೆ  ಮುಹಮ್ಮದ್ ಸಿಯಾಬುದ್ದೀನ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.  ಆದಿತ್ಯವಾರ ರಾತ್ರಿ 7.30ರ ವೇಳೆ ಕುಂಬ್ಡಾಜೆ ಸಿ.ಎಚ್ ನಗರದಲ್ಲಿ ಘಟನೆ ನಡೆದಿರುವುದಾಗಿ ದೂರ ಲಾಗಿದೆ.  ಸ್ಥಳೀಯಾಡಳಿತ ಚುನಾ ವಣೆಯಲ್ಲಿ ಎಲ್‌ಡಿಎಫ್ ಅಭ್ಯ ರ್ಥಿಯಾಗಿ ಸ್ಪರ್ಧಿಸಿದ ಕಂಡಕ್ಟರ್ ಮೊಯ್ದೀನ್ ಎಂಬವರಿಗೆ  ಫಾರೂಕ್ ಸಹಾಯ ಒದಗಿಸಿದ ದ್ವೇಷದಿಂದ  …

ಕಾಂಕ್ರೀಟ್ ತುಂಡು ಎಸೆದು ಯುವಕ ಗಾಯಗೊಂಡ ಪ್ರಕರಣ: 5ಮಂದಿ ವಿರುದ್ಧ ಕೇಸು

ಉಪ್ಪಳ: ಉಪ್ಪಳ ಪಚ್ಲಂಪಾರೆಯಲ್ಲಿ  ಉಪ್ಪಳ ಗೇಟ್ ಪಳ್ಳಂ ರೋಡ್ ನ್ಯೂ ಫಾತಿಮಾ ಮಂಜಿಲ್‌ನ ಮಶ್ಕೂರ್ (27) ಎಂಬಾತನಿಗೆ ಸಿಮೆಂಟ್ ತುಂಡು ಎಸೆದು ತಲೆಗೆ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ದೂರಿನಂತೆ  5 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಚ್ಲಂಪಾರೆ ನಿವಾಸಿಗಳಾದ ಸೈಲ(23), ಅಮೀರ (27),ಉಸ್ನ (20),ಆಮಿನ (45)ಮತ್ತು ಅವ್ವ (45)ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಚುನಾವಣಾ ದಿನದಂದು ಬೂತ್‌ನಲ್ಲಿ ದೂರುದಾರ ಮತ್ತು ಈ ಪ್ರಕರಣದ 1 ಮತ್ತು 2ನೇ ಆರೋಪಿಗಳ  ತಂದೆಯೊಂದಿಗೆ    ಮತದಾನದ ವಿಷಯದಲ್ಲಿ …

ದೇಲಂಪಾಡಿಯಲ್ಲಿ ಸ್ವತಂತ್ರರ ಜಯ: ಮುಸ್ತಫ ಹಾಜಿ ಅಧ್ಯಕ್ಷರಾಗುವ ಸಾಧ್ಯತೆ

ದೇಲಂಪಾಡಿ: ಸಿಪಿಎಂನ ಲೆಕ್ಕಾ ಚಾರಗಳನ್ನು ತಪ್ಪಿಸಿ ದೇಲಂಪಾಡಿಯಲ್ಲಿ ಬಂಡಾಯ ಅಭ್ಯರ್ಥಿಗಳು ಗಳಿಸಿದ ಜಯವನ್ನು ಐಕ್ಯರಂಗ ಸದುಪ ಯೋಗಪಡಿಸಿಕೊಳ್ಳುತ್ತಿದೆ. ಸಿಪಿಎಂ ಬಂಡಾಯ ಅಭ್ಯರ್ಥಿಗಳನ್ನು ಜೊತೆಗೆ ಸೇರಿಸಿಕೊಂಡು ಸ್ಪರ್ಧೆಗೆ ಇಳಿದ ಯುಡಿಎಫ್ ಒಟ್ಟು 17 ಸೀಟುಗಳಲ್ಲಿ 7 ಸೀಟುಗಳನ್ನು ಮಾತ್ರವೇ ಗಳಿಸಿದೆಯಾದರೂ ಅತ್ಯಂತ ದೊಡ್ಡ ಒಕ್ಕೂಟವಾಗಿ ಮೂಡಿಬಂದಿದೆ. 6 ಮಂದಿ ಸ್ವತಂತ್ರರನ್ನು ರಂಗಕ್ಕಿಳಿಸಿದಾಗ ಮೂರು ಮಂದಿಯನ್ನು ಮಾತ್ರವೇ ಜಯಗಳಿಸುವಂತೆ ಮಾಡಲು ಸಾಧ್ಯ ವಾಗಿದೆ. ಸಿಪಿಎಂ ಬಿಟ್ಟು ಐಕ್ಯರಂಗದ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯಗಳಿಸಿದ ಇಬ್ಬರು ಮುಖಂಡರು ಭಾರೀ ಬಹುಮತದೊಂದಿಗೆ ಜಯ …

ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 26, 27ರಂದು

ಕಾಸರಗೋಡು: ಈ ತಿಂಗಳ 21ರಂದು ಪ್ರಮಾಣವಚನ ಸ್ವೀಕರಿಸುವ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 26, 27ರಂದು ನಡೆಯಲಿದೆ. ನಗರಸಭೆಯ ಚೆಯರ್ ಪರ್ಸನ್ ಆಯ್ಕೆ 26ರಂದು ಬೆಳಿಗ್ಗೆ 10.30ಕ್ಕೆ, ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಗ್ರಾಮ ಪಂಚಾಯತ್, ಬ್ಲೋಕ್ ಪಂ., ಜಿಲ್ಲಾ ಪಂ. ಎಂಬಿವುಗಳ ಅಧ್ಯಕ್ಷರ ಆಯ್ಕೆ 27ರಂದು ಬೆಳಿಗ್ಗೆ 10.30ಕ್ಕೆ, ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಜಿಲ್ಲಾ ಪಂಚಾಯತ್ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿಗೆ ಹೊಣೆ ನೀಡಲಾಗಿದೆ. ಗ್ರಾಮ ಪಂಚಾಯತ್, ಬ್ಲೋಕ್ ಪಂ.ಗಳಲ್ಲಿ …

ಕಾಮಗಾರಿಗೆ ಆಮೆನಡಿಗೆ: ಪಾರೆಕಟ್ಟೆ ಐಲ ಬೀಚ್ ರಸ್ತೆ ಸಂಚಾರ ಸಮಸ್ಯೆಯಲ್ಲಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪಾರಕಟ್ಟೆ ಐಲ ಬೀಚ್ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಪಂಚಾಯತ್ ವತಿಯಿಂದ ಕಾಮಗಾರಿ ಅರಂಭಿಸಿದ್ದರೂ, ಆಮೆ ನಡಿಗೆ ಯಲ್ಲಿ ಸಾಗುತ್ತಿರುವುದು ಸಾರ್ವ ಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಈ ರಸ್ತೆಯ ಅಭಿವೃದ್ದಿ ಹಿನ್ನೆಲೆಯಲ್ಲಿ ರಸ್ತೆ ಬದಿ ಚರಂಡಿ ನಿರ್ಮಾಣ ಹಾಗೂ ರಸ್ತೆಗೆ ಕಾಂಕ್ರೀಟ್ ಹಾಕುವ ಯೋಜನೆಯನ್ನು ಕೈಗೊಂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೇ ಕಾಮಗಾರಿ ಆರಂಬಿsಸಿದ್ದರು. ಆರಂಭದಲ್ಲಿ ಚರಂಡಿ ನಿರ್ಮಾಣಗೊಳಿಸಿದ ಬಳಿಕ ರಸ್ತೆಗೆ ಕಾಂಕ್ರಿಟ್ ಹಾಕುವ ಮೊದಲು ರಸ್ತೆ ಉದ್ದಕ್ಕೂ ಜಲ್ಲಿ ಕಲ್ಲು …

ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆ

ಬದಿಯಡ್ಕ : ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ 9ರ ತನಕ ನಡೆಯಲಿದೆ. ಇದರ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಮಹಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದೀಪ ಪ್ರಜ್ವಲಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಹರಿನಾರಾಯಣ ನಡುವಂತಿಲ್ಲಾಯ ಪ್ರಾಸ್ತಾಪಿಸಿದರು. ಧಾರ್ಮಿಕ ಮುಖಂಡರಾದ ಬಿ ವಸಂತ ಪೈ, ಶ್ಯಾಮ್ ಭಟ್ ಏತಡ್ಕ, ಕೃಷ್ಣ ಭಟ್ ಅಜ್ಜಿಮೂಲೆ, ಹರಿನಾರಾ ಯಣ …