ಕಡಂಬಾರು ಶಾಲೆಗೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟನೆ

ಕಡಂಬಾರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ಲಾನ್‌ಫಂಡ್ ಉಪಯೋಗಿಸಿ ಕಡಂಬಾರು ಸರಕಾರಿ ಹೈಸ್ಕೂಲ್‌ಗೆ 1.09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಆರು ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮೀಂಜ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಪಿಟಿಎ ಅಧ್ಯಕ್ಷ ಮೊಯ್ದೀನ್ ಕುಂಞಿ, ಮುಖ್ಯೋಪಾಧ್ಯಾಯ ಎಂ. ಅಶೋಕ, ಅಧ್ಯಾಪಕ ಅಬೂಬಕ್ಕರ್ ಮಾತನಾಡಿದರು.

ಎಕೆಪಿಎ ವೆಸ್ಟ್ ಯೂನಿಟ್‌ನಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯಂಗ ವಾಗಿ ಯೂನಿಟ್ ಸದಸ್ಯರ ಕುಟುಂಬದ ಹಿರಿಯ ಮಹಿಳೆಯನ್ನು ಅಭಿನಂದಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆಯವರ ತಾಯಿ ಉಮಾವತಿ ನಾರಾಯಣ ಆಚಾರ್ಯ ಕೆರೆಮನೆ ಇವರನ್ನು ಅವರ ನಿವಾಸಕ್ಕೆ ತೆರಳಿ ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ.ಎಂ. ಅಭಿನಂದಿಸಿದರು. ಕಾರ್ಯದರ್ಶಿ ಶಾಲಿನಿ ರಾಜೇಂ ದ್ರನ್, ವಾರ್ಡ್ ಕೌನ್ಸಿಲರ್ ಕೆ.ಎನ್. ರಾಮಕೃಷ್ಣ ಹೊಳ್ಳ ಭಾಗವಹಿಸಿದರು.ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ, ಜಿಲ್ಲಾ ಜತೆ ಕಾರ್ಯದರ್ಶಿ …

ಭಾಸ್ಕರನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ  ಕುಂಬಳೆ ಭಾಸ್ಕರನಗರ ನವೋದಯ ಗ್ರಂಥಾಲಯ ಮತ್ತು ವಾಚನಾಲಯ, ನವೋದಯ ಫ್ರೆಂಡ್ಸ್ ಕ್ಲಬ್, ನವೋದಯ ವುಮೆನ್ಸ್ ವಿಂಗ್ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ರಾಷ್ಟ್ರೀಯ ಮಾಯಾಜಾಲ ಪ್ರಶಸ್ತಿ ವಿಜೇತೆ ಪ್ರೊ| ಮುಬೀನ ಫರ್ವೀನ್ ತಾಜ್ ಮಹಿಳಾ ದಿನಾಚರಣೆಯ ಥೀಮ್ ಬಣ್ಣಗಳ ಮಹತ್ವವನ್ನು ವಿವರಿಸಿದರು. ಅಂತಾರಾಷ್ಟ್ರೀಯ ಜಾದು ಪ್ರಶಸ್ತಿ ವಿಜೇತೆ ಕಲಾಸೃಷ್ಠಿ ತಂಡದ ನಿರ್ದೇಶಕಿ ಶಮಾ ಪರ್ವೀನ್ ತಾಜ್ ಸಮಾನತೆ ಮತ್ತು ಬಾಲಕಿಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲದ ಮಹತ್ವ ಎಂದು ತಿಳಿಸಿದರು. …

ಯುವಕನನ್ನು ಕೊಲೆಗೈದು ಮೃತದೇಹವನ್ನು ಲಿಫ್ಟ್‌ನ ಹೊಂಡದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆ; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾದ ನೀರು ತುಂಬಿದ ಹೊಂಡದಲ್ಲಿ ವಲಸೆ ಕಾರ್ಮಿಕನೋರ್ವ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್‌ನಲ್ಲಿ  ಲಿಫ್ಟ್ ನಿರ್ಮಾಣಕ್ಕೆಂದು ತೋಡಲಾದ ಹೊಂಡದಲ್ಲಿ ನಿನ್ನೆ ರಾತ್ರಿ ಸುಮಾರು 11.30ರ ವೇಳೆ  ಮೃತದೇಹ ಕಂಡುಬಂದಿದೆ. ಆ ಬಗ್ಗೆ ಪ್ರಸ್ತುತ ಕಟ್ಟಡದ  ಮಾಲಕನ ಪುತ್ರ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …

ನಿವೃತ್ತ ಎಸ್‌ಐ ನಿಧನ

ನೀರ್ಚಾಲು: ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಬೇಳ ಚರ್ಚ್ ಬಳಿಯ ನಿವಾಸಿ ಪ್ರಭಾಕರನ್ ಬಿ (70) ನಿಧನಹೊಂದಿದರು. ಇವರು ಬೇಡಗಂ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಶಾಂತಕುಮಾರಿ, ಮಕ್ಕಳಾದ ವಿನೋದ್‌ರಾಜ್, ವಿವೇಕ್‌ರಾಜ್ (ಗಲ್ಫ್ ಉದ್ಯೋಗಿಗಳು), ಶ್ವೇತಪ್ರಭ, ಅಳಿಯ ಪ್ರದೀಪ್‌ಕೃಷ್ಣ (ಕುಂಬಳೆ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿ), ಸೊಸೆಯಂದಿರಾದ ರಮ್ಯ, ಅಸ್ತಿಕ, ಸಹೋದರರಾದ ನಾರಾಯಣನ್, ಸುಭಾಷ್, ಜಯಕರ, ಸಹೋದರಿ ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ  ಸೂರ್ಯಕುಮಾರ್, ಹರಿಶ್ಚಂದ್ರ, …

ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನ

ತಿರುವನಂತಪುರ: ಕೇಂದ್ರ ಸರಕಾರದ ಆರ್ಥಿಕ ನೆರವಿನೊಂದಿಗೆ ಕೇರಳದಲ್ಲಿ  ಜ್ಯಾರಿಗೊಳಿಸಿರುವ ಒಟ್ಟು 10,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಅಪರಾಹ್ನ ನೆರವೇರಿಸಲಿರುವಂತೆಯೇ ಆ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ತಲಪ್ಪಾಡಿ-ಚೆಂಗಳ ಹಾಗೂ ಕಲ್ಲಿಕೋಟೆ ಬೈಪಾಸ್ ವೆಂಙಳಂ-ರಾಮನಾಟ್ಟುಕರೆ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯ ಉದ್ಘಾಟನೆ,  ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಕಾರ ಕೇರಳದಲ್ಲಿ ನಿರ್ಮಿಸಲಾಗಿರುವ 23 ರಸ್ತೆಗಳ ಉದ್ಘಾಟನೆ, ಅಮೃತ್ ಭಾರತ್ ಸ್ಟೇಶನ್ ಯೋಜನೆ ಪ್ರಕಾರ ಶೊರ್ನೂರು ಜಂಕ್ಷನ್, …

ತಲಪ್ಪಾಡಿ-ಚೆಂಗಳ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಪ್ರಧಾನಮಂತ್ರಿಯಿಂದ ಇಂದು ಲೋಕಾರ್ಪಣೆ

ಕಾಸರಗೋಡು: ತಲಪ್ಪಾಡಿಯಿಂದ ಚೆಂಗಳ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಪರಾಹ್ನ ಲೋಕಾರ್ಪಣೆಗೈಯ್ಯುವರು. ಕೇರಳದಲ್ಲಿ ಲೋಕಾರ್ಪಣೆಗೈಯ್ಯುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ರಥಮ ರೀಚ್ ಎಂಬ ವಿಶೇಷತೆಯೂ ಇದು ಹೊಂದಿದೆ. ತಲಪ್ಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ 66 ಒಟ್ಟು 39 ಕಿ.ಮೀ. ಹೊಂದಿದೆ. ಇದರಲ್ಲಿ ನಗರದ ಕರಂದಕ್ಕಾಡ್‌ನಿಂದ ಆರಂಭಗೊಂಡು ನುಳ್ಳಿಪ್ಪಾಡಿ ತನಕದ 29 ಸ್ಪ್ಯಾನ್‌ಗಳು ಹೊಂದಿರುವ 1.13 ಕಿ.ಮೀ ತನಕದ ಫ್ಲೈಓವರ್ ಕೂಡಾ ಒಳಗೊಂಡಿದೆ. ಏಕಕಂಬದಿಂದ ನಿರ್ಮಿಸಲಾದ ಫ್ಲೈಓವರ್ ಎಂಬ ವಿಶೇಷತೆಯೂ …

ಕಾರಿನಲ್ಲಿ ಎಂಡಿಎಂಎ ಸಹಿತ ಸಂಚರಿಸುತ್ತಿದ್ದ ಇಬ್ಬರ ಬಂಧನ

ಮಂಜೇಶ್ವರ: ಕಾರಿನಲ್ಲಿ ಮಾರಕ ಮಾದಕವಸ್ತುವಾದ ಎಂಡಿಎಂಎ  ಸಹಿತ   ಪ್ರಯಾಣಿಸುತ್ತಿದ್ದ ಇಬ್ಬರನ್ನು ಮಂ ಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಬಳಿಯ ಚರ್ಲಡ್ಕ ರಫಾ ಮಂ ಜಿಲ್‌ನ ಅಬೂಬಕ್ಕರ್ ಸಿದ್ದಿಕ್ (38), ತೆಕ್ಕಿಲ್ ಚಟ್ಟಂಚಾಲ್ ಕುನ್ನಾರು ನಿವಾಸಿ ಹಾರಿಸ್ ಪಿ (42) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ  3.21 ಗ್ರಾಂ ಎಂಡಿಎಂಎ, ಒಂದು ಇ ಸಿಗರೇಟ್, 12 ಪ್ಯಾಕೆಟ್ ಪಾನ್ ಮಸಲೆ ವಶಪಡಿಸಲಾಗಿದೆ. ಆರೋಪಿಗಳು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ನಿನ್ನೆ ಸಂಜೆ 6.30ರ ವೇಳೆ ತಲಪ್ಪಾಡಿಯಲ್ಲಿ …

ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಪಯ್ಯನ್ನೂರು ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಥಮಿಕ ಅಧ್ಯಾಪಿಕೆ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮುಸಾಫರ್ ನಗರ್ ಮೆಹ್ಲಾಕಿಯ ಲೋಕೇಶ್ ಕುಮಾರ್ ಎಂಬವರ ಪುತ್ರಿ ಸುರಭಿಪಾಲ್ (29) ಮೃತ ಅಧ್ಯಾಪಿಕೆ. ನಿನ್ನೆ ರಾತ್ರಿ 9 ಗಂಟೆಗೆ ಕುಂಞಿಮಂಗಲಂ ಎಡಾಟ್‌ನ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. 2023 ಡಿ. 13ರಂದು ಸುರಭಿಪಾಲ್ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಾಪಿಕೆಯಾಗಿ ನೇಮಕಗೊಂಡಿದ್ದರು. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಮೃತದೇಹವನ್ನು …

ಕುಂಬಳೆ ಬಳಿ ಕಾರು-ಬಸ್ ಢಿಕ್ಕಿ: ಹಲವರಿಗೆ : ಗಾಯ; ನಾಲ್ಕು ಮಂದಿಗೆ ಗಂಭೀರ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ  ಇಂದು ಬೆಳಿಗ್ಗೆ ವಾಹನ ಅಪಘಾತ ಸಂಭವಿದ್ದು ಹಲವರು ಗಾಯಗೊಂಡಿದ್ದಾರೆ.  ಕಾರು ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ  ಕಾರು ಪ್ರಯಾಣಿಕರಾದ  ನಾಲ್ಕು ಮಂದಿ  ಗಂಭೀರ ಗಾಯಗೊಂಡಿದ್ದಾರೆ.  ಅಲ್ಲದೆ ಮಹಿಳೆ ಯರ ಸಹಿತ ಬಸ್ ಪ್ರಯಾಣಿಕರಾದ ಹಲವರಿಗೆ ಗಾಯಗಳಾಗಿವೆ. ಇಂದು ಬೆಳಿಗ್ಗೆ 8.30ರ ವೇಳೆ ಶಾಂತಿಪಳ್ಳ ಅಬಕಾರಿ ಕಚೇರಿ ಸಮೀಪ ಅಪಘಾತವುಂಟಾಗಿದೆ. ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದ ಕಾರು  ಹಾಗೂ ಕುಂಬಳೆಗೆ ಬರುತ್ತಿದ್ದ  ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂ ಟಾಗಿದೆ. …