ಸ್ವಾತಿ ಕಲ್ಲಗ ಅವರಿಗೆ ಡಾಕ್ಟರೇಟ್

ಮುಳರಿಯ: ಕಂಪ್ಯೂಟರ್ ಸಯನ್ಸ್‌ಗೆ ಸಂಬಂಧಿಸಿ ಸಂಶೋಧನಾ ಪ್ರಬಂಧ ಮಂಡಿಸಿದ ಬೆಳ್ಳೂರು ಕಲ್ಲಗದ ಸ್ವಾತಿ.ಕೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ  ಗೌರವಿಸಿದೆ. ಸ್ವಾತಿಯವರು ಮಂಡಿಸಿದ ‘ಅಲ್ಗೋರಿಥಮ್ಸ್ ಫಾರ್ ಅಥೆಂಟಿಕೇಶನ್ ಆಫ್ ಡಿಜಿಟಲ್ ಟ್ರಾನ್ಸಾಕ್ಷನ್ಸ್ ಬೇಸ್ಡ್ ಆನ್ ಮಲ್ಟಿ ಬಯೋಮೆಟ್ರಿಕ್ಸ್’ ಎಂಬ ಮಹಾ ಪ್ರಬಂಧವನ್ನು  ಸ್ವೀಕರಿಸಿ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ. ಮಂಗಳೂರು ವಿ.ವಿಯ ಹಿರಿಯ ಪ್ರಾಧ್ಯಾಪಕ ಡಾ. ಬಿ.ಎಚ್. ಶೇಖರ್‌ರ ಮಾರ್ಗದರ್ಶನದಲ್ಲಿ ಪ್ರಬಂಧ ರಚಿಸಲಾಗಿದೆ.ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ಸ್ವಾತಿಯವರು …

ಬಿಎಂಎಸ್ ಜಿಲ್ಲಾ ಕಾರ್ಯಾಲಯಕ್ಕೆ 3ರಂದು ಶಿಲಾನ್ಯಾಸ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯಾಲಯಕ್ಕೆ ಕರಂದಕ್ಕಾಡ್ ಶಿವಾಜಿನಗರದಲ್ಲಿ ಎ. 3ರಂದು ಭೂಮಿಪೂಜೆ ಹಾಗೂ ಶಿಲಾನ್ಯಾಸ ನಡೆಸಲಾಗುವುದು. ಅಂದು ಬೆಳಿಗ್ಗೆ 9.30ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರ ಪ್ರಚಾರಕ್ ಪಿ.ಎನ್. ಹರಿಕೃಷ್ಣ ಕುಮಾರ್ ಶಿಲಾನ್ಯಾಸ ನೆರವೇರಿಸುವರು. ಬಿಎಂಎಸ್ ಅಖಿಲಭಾರತ ಉಪಾಧ್ಯಕ್ಷ ಸಿ. ಉಣ್ಣಿಕೃಷ್ಣನ್ ಉಣ್ಣಿತ್ತಾನ್, ದಕ್ಷಿಣ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವನ್, ರಾಜ್ಯಾಧ್ಯಕ್ಷ ಬಿ. ಶಿವಜಿ ಸುದರ್ಶನನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ. ಅಜಿತ್, ಸಂಘಟನಾ ಕಾರ್ಯದರ್ಶಿ ಕೆ. ಮಹೇಶ್ …

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಶ್ರೀಕಾಂತ್ ಕಾಸರಗೋಡು ಆಯ್ಕೆ

ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿ ಛಾಯಾಗ್ರಾಹಕ ಶ್ರೀಕಾಂತ್ ಕಾಸರಗೋಡುರಿಗೆ ಲಭಿಸಿದೆ. ಎಪ್ರಿಲ್ 11, 12ರಂದು ಬೀದರ್‌ನಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಶ್ರೀಕಾಂತ್‌ರ ಛಾಯಾಚಿತ್ರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಘಟಕದ ಮಾಜಿ ಅಧ್ಯಕ್ಷ, ಈಸ್ಟ್ ಘಟಕದ ಕೋಶಾಧಿಕಾರಿಯಾಗಿ, ಕೇರಳ ಸರಕಾರದ ವಾರ್ತಾ ಇಲಾಖೆಯ ಜಿಲ್ಲಾಕೇಂದ್ರದ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರನ್ನು  ಕಾಸರಗೋಡು …

ಚುನಾವಣೆ: ಬಿಜೆಪಿಯಿಂದಲೂ ಉಚಿತ ಕೊಡುಗೆಗಳ ಘೋಷಣೆ

ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಿನ್ನೆ ಬಿಡುಗಡೆಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ನವೀನ್ ಮತ್ತು ಪಕ್ಷದ  ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಪಕ್ಷದ ಹಿರಿಯ ನಾಯಕರ ಸಮಕ್ಷಮದಲ್ಲಿ ಈ ಪ್ರಣಾಳಿಕೆ ಬಿಡುಗಡೆಮಾಡ ಲಾಯಿತು.  ಪ್ರಣಾಳಿಕೆಯಲ್ಲಿ ಹಲವು ಕೊಡುಗೆಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಮುಖ ಅಂಶಗಳು ಇಂತಿವೆ: ಅರ್ಹ ಕುಟುಂಬಗಳಿಗೆ ವಾರ್ಷಿಕ ಎರಡು ಉಚಿತ ಎಲ್‌ಪಿಜಿ ವಿತರಣೆ, ಕುಟುಂಬಗಳಿಗೆ ದಿನಸಿ ಮತ್ತು ಔಷಧಿ ಖರೀದಿಗೆ ತಿಂಗಳಿಗೆ 2500 ರೂ. ಮೊತ್ತದ ರೀಚಾರ್ಜ್ ಕಾರ್ಡ್, …

ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರ ಇಂದಿನ ಪರ್ಯಟನೆ

ಕಾಸರಗೋಡು: ಕಾಸರಗೋಡು ವಿಧಾನಸಭಾ ಮಂಡಲದ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರವರ ಮೂರನೇ ಹಂತದ ಚುನಾವಣಾ ಪ್ರಚಾರ ಇಂದು ಆರಂಭಗೊಂಡಿತು. ಬೆಳಿಗ್ಗೆ ಬೆಳ್ಳೂರು ಪಂಚಾಯತ್‌ನ ಕಿನ್ನಿಂಗಾರಿನಲ್ಲಿ ಕಾರ್ನರ್ ಸಭೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಿಕ ಕೋಟಿಮೂಲೆ, ಬಜ, ನೆಟ್ಟಣಿಗೆ, ಪಳ್ಳಪ್ಪಾಡಿ, ಮದಕ, ನಾಟೆಕಲ್ಲು ಮೊದಲಾದೆಡೆಗಳ ಮೂಲಕ ಸಂಚರಿಸಿದರು. ಅಪರಾಹ್ನ ಪೂತಪ್ಪಲಂ, ಕಾಯಿಮಲೆ, ಕುಂಬ್ಡಾಜೆ ಪಂಚಾಯತ್‌ನ ಕಜೆ ಎಸ್‌ಸಿನಗರ, ಬೆಳಿಂಜ, ಗೋಸಾಡದ ಮೂಲಕ ಸಾಗಿ ರಾತ್ರಿ ಮಾರ್ಪನಡ್ಕದಲ್ಲಿ ಸಮಾಪ್ತಿಯಾಗಲಿದೆ.ನಿನ್ನೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿ ಪ್ರಯಾಣಿಕರಲ್ಲಿ ಮತ ಯಾಚಿಸಿದರು. …

ಇದುವರೆಗೆ ಜಿಲ್ಲೆಯಲ್ಲಿ 1501 ಮಂದಿ ಮನೆಯಲ್ಲಿ ಮತದಾನ

ಕಾಸರಗೋಡು: ಜಿಲ್ಲೆಯಲ್ಲಿ ಇದುವರೆಗೆ 1501 ಮಂದಿ ಮನೆಯಲ್ಲೇ ಮತದಾನ ಮಾಡಿದ್ದಾರೆ. 85 ವರ್ಷಕ್ಕಿಂತ ಮೇಲಿನ ಪ್ರಾಯದ 698 ಮಂದಿ, ಭಿನ್ನ ಸಾಮರ್ಥ್ಯ ದವರಾದ 800 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.  85 ವರ್ಷ ಪೂರ್ತಿಗೊಂಡ 3281, ಭಿನ್ನ ಸಾಮರ್ಥ್ಯದವರಾದ 3529 ಮಂದಿಗೆ ಜಿಲ್ಲೆಯಲ್ಲಿ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮಂಜೇಶ್ವರದಲ್ಲಿ 85 ವರ್ಷ ಮೇಲಿನ 99 ಮಂದಿ, ಭಿನ್ನ ಸಾಮರ್ಥ್ಯದ 158 ಮಂದಿ ಸೇರಿ ಒಟ್ಟು 257 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.ಕಾಸರಗೋಡಿನಲ್ಲಿ ಒಟ್ಟು 225, …

ಎಕೆಎಂ ಅಶ್ರಫ್‌ರ ಪರ್ಯಟನೆ: ವಿವಿಧೆಡೆ ಹೃದಯಸ್ಪರ್ಶಿ ಸ್ವಾಗತ

ಮಂಜೇಶ್ವರ: ವರ್ಕಾಡಿ, ಮಂಜೇಶ್ವರ ಪಂಚಾಯತ್‌ಗಳಲ್ಲಿ ನಿನ್ನೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್ ಮತ ಯಾಚಿಸಿ ಪರ್ಯಟನೆ ನಡೆಸಿದರು. ಅಭ್ಯರ್ಥಿಗೆ ವಿವಿಧ ಕಡೆ ಹೃದಯಸ್ಪರ್ಶಿ ಸ್ವಾಗತ ಲಭಿಸಿದೆ. ನಿನ್ನೆ ಬೆಳಿಗ್ಗೆ ಸೂಪಿಗುರಿಯಿಂದ ಆರಂಭಿಸಿ ಪಾವೂರು ಅಂಚೆಕಚೇರಿ, ಪಾವೂರುಕೋಡಿ, ಕೆದುಂಬಾಡಿ, ತೌಡುಗೋಳಿ, ನೆಚ್ಚಿಲಪದವು, ಬೋರ್ಕಳ, ಆನೆಕಲ್ಲು, ಗುವೆದಪಡ್ಪು, ಕಜೆ, ಪಾತೂರು ಮೂಲಕ ಸಾಗಿ ಬೇಕರಿ ಜಂಕ್ಷನ್‌ನಲ್ಲಾಗಿ ಮೊರತ್ತಣೆಗೆ ಮಧ್ಯಾಹ್ನ ತಲುಪಿತು. ಅಪರಾಹ್ನ ಕಡಂಬಾರು ಶಾಲೆ ಜಂಕ್ಷನ್‌ನಿಂದ ಆರಂಭಿಸಿ ಪಾಪಿಲ, ಮಚ್ಚಂಪಾಡಿ ಮೂಲಕ ಸಾಗಿ ಕುಂಜತ್ತೂರು ಜಂಕ್ಷನ್‌ನಲ್ಲಿ …

ಓರ್ವನ ಪ್ರಿಯತಮೆಯೊಂದಿಗೆ ಬೇರೊಬ್ಬನಿಗೆ ಪ್ರೇಮ: ತಂಡದಿಂದ ಮಧ್ಯವರ್ತಿ ಮೇಲೆ ಮಾರಕಾಯುಧಗಳಿಂದ ಹಲ್ಲೆ

ಕುಂಬಳೆ: ಪ್ರಿಯತಮೆಯನ್ನು ಪ್ರೀತಿಸುವ ಬೇರೊಬ್ಬನ ಮೇಲೆ ದ್ವೇಷ ತೀರಿಸಲು ಮಾರಕಾಯುಧಗ ಳೊಂದಿಗೆ ತಲುಪಿದ ಪ್ರಿಯಮನ ಸಹಿತ ೮ ಮಂದಿಯ ತಂಡ ಮಧ್ಯವರ್ತಿ ಮೇಲೆ ಹಲ್ಲೆಗೈದು ಗಂಭೀರ ಗಾಯ ಗೊಳಿಸಿದ ಘಟನೆ ನಡೆದಿದೆ. ಹಲ್ಲೆಗೀ ಡಾದ ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ತಲೆ ಸಹಿತ ದೇಹದಾದ್ಯಂತ ಕಬ್ಬಿಣದ ಸರಳುಗ ಳಿಂದ ಹೊಡೆತದ ಗಾಯಗಳು ಉಂಟಾಗಿದೆ. ನಿನ್ನೆ  ರಾತ್ರಿ 12.30 ಕ್ಕೆ ಈ ಘಟನೆ ನಡೆದಿದೆ.  ಬೇರೊಬ್ಬನ ಪ್ರಿಯತಮೆಯೊಂದಿಗೆ ಮೊಹಮ್ಮದ್ …

ಜುಗಾರಿ ಕೇಂದ್ರಕ್ಕೆ ಪೊಲೀಸ್ ದಾಳಿ ಏಳು ಮಂದಿ ಸೆರೆ; 59,500 ರೂ. ವಶ

ಉಪ್ಪಳ:  ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಜುಗಾರಿ ಕೇಂದ್ರಕ್ಕೆ ಪೊಲೀಸರು ಮಫ್ತಿ ವೇಷದಲ್ಲಿ ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ.  ಇದೇ ವೇಳೆ ಜುಗಾರಿ ನಿರತರಾಗಿದ್ದ ಇತರ 13 ಮಂದಿ ಓಡಿ ಪರಾರಿಯಾಗಿದ್ದಾರೆ. ಜುಗಾರಿ ಸ್ಥಳದಿಂದ 59,500 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಾವೂರು ಗ್ರಾಮದ ತಚ್ಚಿರೆಪದವಿನ  ಮೈದಾನ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜುಗಾರಿ ಕೇಂದ್ರಕ್ಕೆ  ಇಂದು ಮುಂಜಾನೆ 2 ಗಂಟೆ ವೇಳೆ ಮಂಜೇಶ್ವರ ಎಸ್‌ಐಗಳಾದ ಉಮೇಶ್ ಕೆ.ಆರ್, ವೈಷ್ಣವ್ ರಾಮಚಂದ್ರನ್, ಎಎಸ್‌ಐ ರಾಜೀವನ್, ಪೊಲೀಸರಾದ …

ವಾಗ್ವಾದ ದೃಶ್ಯ ಚಿತ್ರೀಕರಿಸಿದ ದ್ವೇಷದಿಂದ ಯುವಕನಿಗೆ ಹಲ್ಲೆ: 3 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ:  ವಾಗ್ವಾದ ನಡೆಯುತ್ತಿದ್ದ ವೇಳೆ  ಅದರ ದೃಶವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ದ್ವೇಷದಿಂದ ತಂಡವೊಂದು ಯುವಕನ ಮೇಲೆ  ಹಲ್ಲೆ ನಡೆಸಿರುವುದಾಗಿ  ಆರೋಪಿಸಿ ನೀಡಿದ ದೂರಿನಂತೆ ಮೂವರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ.  ಕುಂಬಳೆ ಶ್ರೀ ನಿತ್ಯಾನಂದ ಆಶ್ರಮ ಬಳಿಯ  ಅಂದುಪ್ಪ ಹೌಸ್‌ನ ಮುಹಮ್ಮದ್ ಹಿಲಾಲ್ ಕೆ.ಎ(19) ಈ ಬಗ್ಗೆ ದೂರು ನೀಡಿದ್ದು ಇದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆ ಪೇಟೆಯಲ್ಲಿ ದೂರದರ್ಶನ ಚ್ಯಾನೆಲ್‌ನ  ಡಿಬೇಟ್ ಕಾರ್ಯಕ್ರಮ ನಡೆದ ಬಳಿಕ …