ಅಗ್ನಿ ಫ್ರೆಂಡ್ಸ್ ಬದಿಯಡ್ಕದ ಆಂಬುಲೆನ್ಸ್ ಲೋಕಾರ್ಪಣೆ

ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇದರ ಆಶ್ರಯದಲ್ಲಿ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ತಿರುವೋಣಂ ದಿನವಾದ ನಿನ್ನೆ ಬದಿಯಡ್ಕದಲ್ಲಿ ಜರಗಿತು. ಆರ್‌ಎಸ್‌ಎಸ್ ಬದಿಯಡ್ಕ ಖಂಡ ಸಂಘಚಾಲಕ್ ರಮೇಶ್ ಕಳೇರಿ ಉದ್ಘಾಟಿಸಿದರು. ಅಗ್ನಿ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ಕುಟ್ಟನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಆರ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚ್ಚಾಲು, ಹರೀಶ್ ನಾರಂಪಾಡಿ, ಹರೀಶ್ ಗೋಸಾಡ, ಹರಿಪ್ರಸಾದ್ ಪುತ್ರಕಳ, ವಿ. ಬಾಲಕೃಷ್ಣ …

ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಓಣಂ ಆಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಓಣಂ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಶಿವಾನಂದ ಕೋಟಿಯಾನ್ ಕಟಪಾಡಿ ಬರೆದ ಗುರುದರ್ಶನ ಕೃತಿನ್ನು ಇದೇ ಸಂದರ್ಭದಲ್ಲಿ ಶಾಸಕರು ಪ್ರದರ್ಶನಗೈದರು. ಹಿರಿಯ ಪೊಲೀಸ್ ಅಧಿಕಾರಿ ಡಾ. ವಿ. ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕರ್ನಾಟಕ ಕಾರ್ಯನಿರತ …

ಮುಹಿಮ್ಮಾತ್‌ನಿಂದ ಜನರಲ್ ಆಸ್ಪತ್ರೆಯ ರೋಗಿಗಳಿಗೆ ಕಾರುಣ್ಯಸ್ಪರ್ಶ

ಪುತ್ತಿಗೆ: ಕಾಸರಗೋಡು ಜನರಲ್ ಆಸ್ಪತ್ರೆಯ 300ಕ್ಕೂ ಅಧಿಕ ರೋಗಿಗಳಿಗೆ ಹಾಗೂ ಅವರ ಪರಿಚಾರಕರಿಗೆ, ನೌಕರರಿಗೆ ಮುಹಿಮ್ಮಾತ್ ಮುಸ್ಲಿಮೀನ್ ಎಜ್ಯುಕೇಶನ್ ಸೆಂಟರ್‌ನಿಂದ ನಬಿದಿನದಂಗವಾಗಿ ಕಾರುಣ್ಯ ಸ್ಪರ್ಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಹಿಮ್ಮಾತ್ ಮದ್‌ಹುರಸೂಲ್ ಫೌಂಡೇಶನ್ ಅಧೀನದಲ್ಲಿ 10 ದಿನಗಳಿಂದ ನಡೆದು ಬರುತ್ತಿದ್ದ ಕಾರ್ಯಕ್ರಮದಂಗವಾಗಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ಅಗತ್ಯದ ಉಪಕರಣಗಳು, ರೋಗಿಗಳಿಗೆ ಹಣ್ಣು ಹಂಪಲು ಕಿಟ್‌ಗಳನ್ನು ನೀಡಲಾಯಿತು. ಕಳೆದ 10 ವರ್ಷಗಳಿಂದ ಮುಹಿಮ್ಮಾತ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಗತ್ಯದ ಸಾಮಗ್ರಿಗಳನ್ನು ನೀಡುತ್ತಿದೆ. ಕಾರ್ಯಕ್ರಮವನ್ನು ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಯವರ …

ಲಯನ್ಸ್‌ಕ್ಲಬ್‌ನಿಂದ ಸಹಾಯಧನ ಹಸ್ತಾಂತರ

ಉಪ್ಪಳ: ಮಣಿಮುಂಡದಲ್ಲಿ ಕಾರ್ಯಾಚರಿಸುವ ಶೇಖ್ ಜಾಹೇದ್ ಆಶ್ರಮಕ್ಕೆ ಲಯನ್ಸ್‌ಕ್ಲಬ್ ಮಂಜೇಶ್ವರ- ಉಪ್ಪಳ ಇದರ ವತಿಯಿಂದ  ವಸ್ತ್ರ ರೂಪದಲ್ಲಿ, ನಗದು ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, ಲ| ಚರಣ್ ಬಂದ್ಯೋಡು, ಲ| ಮಾಧವ ಕೆ, ಲ| ಅಶೋಕ್ ಎಂಜೆಎಫ್, ಲ| ವಿಜಯನ್ ನಾಯರ್, ಲ| ಗಣೇಶ್ ಎಂ, ಲ| ಉದಯ ಕುಮಾರ್ ಶೆಟ್ಟಿ, ಲ| ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.

ಮನೆಗೆ ಅತಿಕ್ರಮಿಸಿ ನುಗ್ಗಿ ವೃದ್ಧೆಯನ್ನು ಬಿಗಿದಪ್ಪಿಕೊಂಡ ಯುವಕನ ಬಂಧನ

ಮುಳ್ಳೇರಿಯ: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ಯುವಕ 78ರ ಹರೆಯದ ವೃದ್ಧೆಯನ್ನು ಬಿಗಿದಪ್ಪಿಕೊಂಡ ಬಗ್ಗೆ ದೂರಲಾಗಿದೆ.  ವೃದ್ಧೆ ಬೊಬ್ಬೆ ಹಾಕಿದಾಗ ನೆರೆಮನೆ ನಿವಾಸಿಗಳು ಅಲ್ಲಿಗೆ ತಲುಪಿದ್ದು ಅಷ್ಟರಲ್ಲಿ ಯುವಕ ಓಡಿ ಪರಾರಿಯಾಗಿದ್ದಾನೆ.  ಬಳಿಕ ತಲುಪಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಿಂಚಿಪದವು ನಿವಾಸಿ ವಸಂತ (35) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಆದೂರು ಎಸ್‌ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 3.30ರ ವೇಳೆ ಪ್ರಕರಣಕ್ಕೆ ಕಾರಣವಾದ …

ಕುಂಬಳೆಯಲ್ಲಿ ಸಾರಿಗೆ ಅಡಚಣೆ ಇನ್ನಷ್ಟು ತೀವ್ರ

ಕುಂಬಳೆ:  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆದ ಬಳಿಕ ಕುಂಬಳೆಯಲ್ಲಿ ಸಾರಿಗೆ ಸಮಸ್ಯೆಗೆ ಯಾವುದೇ ಪರಿಹಾರ ಉಂಟಾಗಿಲ್ಲ. ದಿನದಿಂದ ದಿನಕ್ಕೆ ಸಾರಿಗೆ ಅಡಚಣೆ ತೀವ್ರಗೊಳ್ಳುತ್ತಿದ್ದು, ಇದರಿಂದ  ಸಾರ್ವಜನಿಕರು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತಿದೆ.  ಕುಂಬಳೆ ಬಸ್ ನಿಲ್ದಾಣದಿಂದ ರೈಲು ನಿಲ್ದಾಣದ ಅಂಡರ್ ಪಾಸ್‌ವರೆಗೆ ಸಾರಿಗೆ ಅಡಚಣೆ ನಿತ್ಯ ಘಟನೆಯಾಗಿದೆ. ಈ ಭಾಗದಲ್ಲಿ ಒಂದೇ ಸರ್ವೀಸ್ ರಸ್ತೆಯಿದ್ದು, ಅಗಲ ಕಿರಿದಾದ ಅದರಲ್ಲೇ ವಾಹನಗಳು ಆಚೀಚೆ ಸಂಚರಿಸಬೇಕಾಗಿ ಬರುತ್ತಿದೆ. ಅಲ್ಲದೆ ಕಾಲುದಾರಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಇನ್ನಷ್ಟು  ಸಮಸ್ಯೆ ಎದುರಾಗುತ್ತಿದೆ.  ಸಾರಿಗೆ ಅಡಚಣೆ …

ಒಂದೇ ಕುಟುಂಬದ ಸಾಮೂಹಿಕ ಆತ್ಮಹತ್ಯೆ: ಚಿಕಿತ್ಸೆಯಲ್ಲಿದ್ದ ಯುವಕನೂ ಮೃತ್ಯು

ಕಾಸರಗೋಡು: ಆಸಿಡ್ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಾಲ್ಕನೇ ವ್ಯಕ್ತಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಂಬಲತ್ತರ ಪರಕ್ಕಳಾಯಿ ಒಂಡಂಪುಳಕ್ಕಾಲ್ ನಿವಾಸಿ ಗೋಪಿ ಎಂಬವರ ಪುತ್ರ ರಾಖೇಶ್ (27) ಸಾವನ್ನಪ್ಪಿದ ಯುವಕ. ಆಸಿಡ್ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ. ರಾಖೇಶ್‌ರ ತಂದೆ ಕೃಷಿಕರಾಗಿರುವ ಗೋಪಿ (60), ಇವರ ಪತ್ನಿ ಇಂದಿರಾ (57), ಇನ್ನೋರ್ವ ಪುತ್ರ ರಾಜೇಶ್ (34) …

ಕೆಎಸ್‌ಆರ್‌ಟಿಸಿ ಬಸ್-ಜೀಪು ಢಿಕ್ಕಿ: ಮೂವರ ದಾರುಣ ಮೃತ್ಯು

ಕೊಲ್ಲಂ: ಕೆಎಸ್‌ಆರ್‌ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್ ಢಿಕ್ಕಿ ಹೊಡೆದು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಲ್ಲಂ ಓಚಿರ ವಲಿಯಕುಳಂಗರೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ತೇವಲಕರ ನಿವಾಸಿಗಳಾದ ಪ್ರಿನ್ಸ್ ತೋಮಸ್ (44), ಮಕ್ಕಳಾದ ಅಥುಲ್ (14), ಅಲ್ಕಾ (5) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ಮೃತ ಪ್ರಿನ್ಸ್‌ರ ಪತ್ನಿ ಬಿಂದಿಯಾ ಸೂಸನ್ ವರ್ಗೀಸ್, ಇನ್ನೋರ್ವ ಪುತ್ರಿ ಐಶ್ವರ್ಯ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರ ಪೈಕಿ 20ರಷ್ಟು …

ಕಾಸರಗೋಡು ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 75 ಲಕ್ಷ ರೂ. ಅಪಹರಣ: ಯುವತಿ ಸಹಿತ 6 ಮಂದಿ ಸೆರೆ

ಮಂಗಳೂರು: ಕಾಸರಗೋಡು ನಿವಾಸಿಯೂ, ಮಂಗಳೂರಿನಲ್ಲಿ ವಾಸಿಸುವ ಯುವಕನನ್ನು ತಂಡವೊಂದು  ಹನಿಟ್ರ್ಯಾಪ್‌ನಲ್ಲಿ  ಸಿಲುಕಿಸಿ 75 ಸಾವಿರ ರೂಪಾಯಿ ಅಪಹರಿಸಿದ ಬಳಿಕ ಆತನ ಕೈಕಾಲುಗಳನ್ನು ಕಟ್ಟಿಹಾಕಿ   ಹಲ್ಲೆಗೈದು  ಗಂಭೀರ ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಯುವತಿ ಸಹಿತ 6 ಮಂದಿಯನ್ನು  ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.  ನಾವುಂದ ಬಡಾಕೆರೆಯ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಕಟ್ಟೆಯ ಸೈಫುಲ್ಲ (38), ಹಂಗಳೂರಿನ ಮೊಹಮ್ಮದ್ ನಾಸಿರ್ ಶರೀಫ್ (38), ಮೂಡುಗೋಪಾಡಿಯ ಅಬ್ದುಲ್ ಸತ್ತಾರ್ (23), ನಾಗೋಡಿಯ ಅಬ್ದುಲ್‌ಅಜೀಜ್ (26) ಹಾಗೂ …

ಜ್ವರ ಬಾಧಿಸಿ ವ್ಯಕ್ತಿ ಮೃತ್ಯು

ಕಾಸರಗೋಡು: ಜ್ವರಬಾಧಿಸಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು. ಕಾಸರಗೋಡು ಕಸಬ ಬೀಚ್‌ನ ಕೆ. ಶ್ರೀಧರನ್ (68) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನೆಲ್ಲಿಕುಂಜೆಯ ಜೀನಸು ಅಂಗಡಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜ್ವರ ಬಾಧಿಸಿದ್ದ ಇವರನ್ನು ಈ ತಿಂಗಳ ೧ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ದಿವಂಗತರಾದ ಕೃಷ್ಣನ್-ಲಕ್ಷ್ಮಿ ದಂಪತಿಯ ಪುತ್ರನಾದ ಮೃತರು ಪತ್ನಿ ಸವಿತ, ಮಕ್ಕಳಾದ ಶ್ರಿತ್, ಚರಣ್‌ಜಿತ್, ಸಹೋದರ-ಸಹೋದರಿಯರಾದ ರಾಜನ್, ದಾಮು, ಪ್ರೇಮ, ಬೇಬಿ ಹಾಗೂ ಅಪಾರ …