ಕಾರ್ಮಿಕರಿಗೆ ಪ್ರತಿಕೂಲವಾಗುವ ಲೇಬರ್  ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕು- ಬಿಎಂಎಸ್

ಕಾಸರಗೋಡು: ೨೯ ಲೇಬರ್ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಸಂಕ್ಷಿಪ್ತಗೊಳಿಸುವಾಗ ಅದರಲ್ಲಿ ಕಾರ್ಮಿಕರಿಗೆ ಪ್ರತಿಕೂಲವಾಗಿ ಬಾಧಿಸುವ ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕೆಂದು ಬಿಎಂಎಸ್ ಕಾಸರಗೋಡು ವಲಯ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ವಲಯ ಉಪಾಧ್ಯಕ್ಷ ಜನಾರ್ದನ ಕಡಪ್ಪುರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರದೀಪ್ ಕೇಳೋತ್ ಶುಭ ಕೋರಿದರು. ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಚಟುವಟಿಕಾ ವರದಿ, ವಲಯ ಕೋಶಾಧಿಕಾರಿ ಪುಷ್ಪರಾಜ್ ಆಯ ವ್ಯಯಲೆಕ್ಕ ಮಂಡಿಸಿದರು. ವಲಯ ಪ್ರಬಾರ ಗುರುದಾಸ್ …

ನಗರದ ಹಿರಿಯ ವ್ಯಾಪಾರಿ ನಿಧನ

ಕಾಸರಗೋಡು: ನಗರದ ವ್ಯಾಪಾರಿ ಹಾಗೂ ಸೂಪರ್ ಎಂಟರ್‌ಪ್ರೈಸಸ್ ಮಾಲಕ ಪಳ್ಳಂ ಹೈದ್ರೋಸ್ ಮಸೀದಿ ಮಾಜಿ ಕಾರ್ಯದರ್ಶಿಯಾಗಿದ್ದ ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸಮೀಪದ ನಿವಾಸಿ ಅಬ್ದುಲ್ಲ ಸೂಪರ್ ಪಳ್ಳಂ (83) ನಿಧನ ಹೊಂದಿದರು. ಮೃತರು ಪತ್ನಿ ನಫೀಸ, ಮಕ್ಕಳಾದ ಅಶ್ರಫ್, ಫಿರೋಜ್, ಮಿಸ್ರಿಯ, ಶಹರ್ಬಾನು, ಅಳಿಯಂದಿ ರಾದ ಅಬ್ದುಲ್ ಜಲೀಲ್ ಚೂರಿ, ಜಬ್ಬಾರ್ ಕೋಳಿಯಾಡ್, ಸಮೀರ್ ಪಟ್ಲ, ಸೊಸೆಯಂದಿರಾದ ನಸೀಮ, ಹಬೀಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಯುವಕ ಮನೆಯ ಹಾಲ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ

ಕುಂಬಳೆ: ಯುವಕನೋರ್ವ ಮನೆಯ ಹಾಲ್‌ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇಚ್ಲಂಗೋಡು ಚಿತ್ತೂರು ಎಂಬಲ್ಲಿನ ದಿ| ಕುಂಞಿಪಳ್ಳಿ ಎಂಬವರ ಪುತ್ರ ಅಬ್ದುಲ್ ಸಲೀಂ (33)  ಸಾವಿಗೀಡಾದ ಯುವಕನಾಗಿ ದ್ದಾರ.  ಇವರ ತಾಯಿ ಆಯಿಷಾಬಿ  ಮಗಳ ಮನೆಗೆ ತೆರಳಿದ್ದರು. ಇದರಿಂದ ಅಬ್ದುಲ್ ಸಲೀಂ ಮಾತ್ರವೇ ನಿನ್ನೆ ರಾತ್ರಿ ಮನೆಯಲ್ಲಿದ್ದರು. ಇಂದು ಬೆಳಿಗ್ಗೆ ಸ್ಥಳೀಯರು ಇಲ್ಲಿಗೆ ತಲುಪಿ ನೋಡಿದಾಗ ಅಬ್ದುಲ್ ಸಲೀಂ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಪಾರ್ಟ್‌ಟೈಮ್ ಉದ್ಯೋಗದ ಭರವಸೆ ನೀಡಿ ಯುವಕನಿಂದ 24.07 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಪಾರ್ಟ್‌ಟೈಮ್ ಕೆಲಸ ನೀಡುವ ಭರವಸೆಯೊಡ್ಡಿ ಯುವಕನಿಂದ 24.07 ಲಕ್ಷ ರೂ.  ಎಗರಿಸಿದ ದೂರಿನಂತೆ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಡೂರು ಪಾಂಡಿ ಕೊಟ್ಟುಂಬಯಲ್ ನಿವಾಸಿಯಾದ ಯುವಕ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರೋಪಿ ನನ್ನನ್ನು ಸಂಪರ್ಕಿಸಿ ಪಾರ್ಟ್‌ಟೈಮ್ ಉದ್ಯೋಗ ನೀಡುವುದಾಗಿ ಮತ್ತು ಅದರಿಂದ ಭಾರೀ ಕಮಿಷನ್ ಲಭಿಸಲಿದೆ ಎಂಬ ಭರವಸೆ ನೀಡಿ  2025 ಆಗಸ್ಟ್ 21ರಿಂದ 2025 ಡಿಸೆಂಬರ್ 30ರ …

ಮನೆಗೆ ಅಬಕಾರಿ ದಾಳಿ: 100 ಲೀಟರ್ ಹುಳಿರಸ, 2 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆ: ಓರ್ವ ಸೆರೆ

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿ.ಕೆ.ವಿ.ಸುರೇಶ್ (ಗ್ರೇಡ್) ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗಾಗಿ ಸಿದ್ಧಪಡಿಸಲಾಗಿದ್ದ 100 ಲೀಟರ್  ಹುಳಿರಸ ಹಾಗೂ ಎರಡು ಲೀಟರ್ ಕಳ್ಳಭಟ್ಟಿ ಸಾರಾಟಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಬಳಾಲ್ ಗ್ರಾಮದ  ಕನಕಪಳ್ಳಿ ತಟ್ಟ ನಿವಾಸಿ ಕುಂಞಿ ಕೃಷ್ಣನ್.ಕೆ (54) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊ ಳ್ಳಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ …

ಪಾಲಕ್ಕಾಡ್ ರೈಲ್ವೇ ವಿಭಾಗವನ್ನು ವಿಭಜಿಸಿದ ತೀರ್ಮಾನದ ವಿರುದ್ಧ ಕೇರಳದಿಂದ ತೀವ್ರ ಪ್ರತಿಭಟನೆ

ತಿರುವನಂತಪುರ: ಉಳ್ಳಾಲದಿಂದ ಮಂಗಳೂರು ತನಕದ ರೈಲು ನಿಲ್ದಾಣಗಳನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ವಲಯದಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದ ರೈಲ್ವೇ ಇಲಾಖೆಯ ತೀರ್ಮಾನದ ವಿರುದ್ಧ ಕೇರಳ ತೀವ್ರ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದೆ.  ಇಂತಹ ತೀರ್ಮಾನದಿಂದ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಮಾತ್ರವಲ್ಲ ಕೇರಳಕ್ಕೂ  ತೀವ್ರ ಆರ್ಥಿಕ ನಷ್ಟ ಉಂಟುಮಾಡ ಲಿದೆ. ಮಾತ್ರವಲ್ಲ ರೈಲ್ವೇ ಪ್ರಯಾಣಿಕರನ್ನೂ ಇದು ತೀವ್ರ ಆತಂಕಕ್ಕೊಳಪಡಿಸಿದೆ. ಇಂತಹ ತೀ ರ್ಮಾನವನ್ನು ಸುತರಾಂ ಅಂಗೀಕರಿಸು ವಂತಿಲ್ಲವೆಂದೂ ಕೇರಳ ಸರಕಾರ ಹಾಗೂ ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ …

ಗೋಣಿಚೀಲದಲ್ಲಿ ಮೃತದೇಹ ಪತ್ತೆ: ನಾಪತ್ತೆಯಾದ ಮಹಿಳೆಯದ್ದಾಗಿರಬೇಕೆಂಬ ಶಂಕೆ; ಪತಿ ನಾಪತ್ತೆ

ಮಲಪ್ಪುರಂ: ತಿರೂರು ಹೊಳೆ ಸಮೀಪ ಗೋಣಿಚೀಲದಲ್ಲಿ ಕಟ್ಟಿ ಇರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಲ್ಲುಕಟ್ಟಿ ಮುಳುಗಿಸಿಟ್ಟ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಮೀನುಗಾರಿಕೆಗೆ ಹೋಗಲಿದ್ದ ‘ಸಮರ್‌ಕಂದ್’ ಎಂಬ ದೋಣಿಯ ಕಾರ್ಮಿಕರು ಈ ಗೋಣಿ ಚೀಲವನ್ನು ಪತ್ತೆಹಚ್ಚಿದ್ದಾರೆ. ಅದರೊಳಗೆ ಮನುಷ್ಯರ ಶರೀರವಿದೆಯೆಂದು ಖಚಿತವಾದ ಬಳಿಕ ಮೀನು ಕಾರ್ಮಿಕರು ತಿರೂರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಲುಪಿ ಪರಿಶೀಲಿಸಿದಾಗ ಗೋಣಿಚೀಲದೊಳಗೆ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇತ್ತೀಚೆಗೆ ನಾಪತ್ತೆಯಾದ ಪಡಿಞಾರೆಕರೆ ಬೀಚ್ ನಿವಾಸಿ ಫೌಸಿಯ (37)ರ ಮೃತದೇಹವಿದಾಗಿರಬೇಕೆಂದು ಪೊಲೀಸರು ಶಂಕೆ …

ರೈಲಿನಲ್ಲಿ ಮಹಿಳೆಯರ ಮುಂದೆ ಲೈಂಗಿಕ ಚೇಷ್ಠೆ: ಮಧ್ಯವಯಸ್ಕ ಸೆರೆ

ಕಾಸರಗೋಡು: ರೈಲಿನಲ್ಲಿ ಮಹಿಳೆಯರ ಮುಂದೆ ಲೈಂಗಿಕ ಚೇಷ್ಠೆ ಮಾಡಿದ ಮಧ್ಯವಯಸ್ಕನನ್ನು ಸೆರೆಹಿಡಿಯಲಾಗಿದೆ. ಕಣ್ಣೂರು ಜೋಸ್‌ಗಿರಿ ನಿವಾಸಿ ಜೋಸ್ ಮ್ಯಾಥ್ಯು (53) ಎಂಬಾತನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಒಕ್ಕಾ ಎಕ್ಸ್‌ಪ್ರೆಸ್ ತಲುಪಿದಾಗ  ಈತ ಪ್ರಯಾಣಿಕೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಓರ್ವೆ ಯುವತಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಕೂಡಲೇ ಎಸ್‌ಐ ಸನಿಲ್ ಕುಮಾರ್ ನೇತೃತ್ವದ ಪೊಲೀಸರು ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.  ಅನಂತರ ಈತನನ್ನು ರೈಲಿನಿಂದಿಳಿಸಿ ಠಾಣೆಗೆ ಕೊಂಡೊಯ್ದು ನೋಟೀಸು …

ಬಾಯಾರು ನಿವಾಸಿಯ ಲ್ಯಾಪ್‌ಟಾಪ್ ರೈಲಿನಲ್ಲಿ ಕಳವುಗೈದ ಆರೋಪಿ ಬಂಧನ: ಇನ್ನೊಂದು ಸಾಧನೆಗೈದ ಆರ್‌ಪಿಎಫ್, ರೈಲ್ವೇ ಪೊಲೀಸ್

 ಕಾಸರಗೋಡು: ರೈಲು ಪ್ರಯಾ ಣಿಕನ ಲ್ಯಾಪ್‌ಟಾಪ್ ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಸೆರೆಹಿಡಿದು  ರೈಲ್ವೇ ಪೊಲೀಸ್ ಹಾಗೂ ಆರ್‌ಪಿಎಫ್ ಇನ್ನೊಂದು ಸಾಧನೆಗೈದಿದೆ.  ಚೆರ್ವತ್ತೂರು ಪಡನ್ನ ನಿವಾಸಿ ಕೆ.ಸುಧಾಕರನ್ (56) ಎಂಬಾತನನ್ನು ಬಂಧಿಸಲಾಗಿದೆ.  ಬಾಯಾರು ಬೆರಿಪದವು ಬಳ್ಳೂರು ನಿವಾಸಿ ಇಬ್ರಾಹಿಂ ಇಶಾನ್ ಎಂಬವರ ೮೦ ಸಾವಿರ ರೂಪಾಯಿ ಮೌಲ್ಯದ  ಲ್ಯಾಪ್‌ಟಾಪ್‌ನ್ನು ಸುಧಾಕರನ್ ಕಳವುಗೈದಿದ್ದಾನೆನ್ನಲಾಗಿದೆ.  ಇಬ್ರಾಹಿಂ ಇಶಾನ್  ಎರಡು ದಿನಗಳ ಹಿಂದೆ ಕಲ್ಲಿಕೋಟೆ ಫರೂಕ್‌ನಿಂದ ಏರನಾಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದು, ಕಣ್ಣೂರಿಗೆ ತಲುಪಿದಾಗಲೇ ಅವರ ಲ್ಯಾಪ್‌ಟಾಪ್ ಸಹಿತ ಬ್ಯಾಗ್ ಕಳವಿಗೀಡಾಗಿರುವುದು …

ಪೋಕ್ಸೋ ಪ್ರಕರಣ: ಆರೋಪಿ ಕರ್ನಾಟಕ ನಿವಾಸಿಗೆ 6 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್‌ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ಆರು ವರ್ಷ ಕಠಿಣ ಸಜೆ ಹಾಗೂ 30,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕರ್ನಾಟಕ ಬಾಳೆಹೊಸೂರು ಭೀರಪ್ಪ ದೇವಸ್ಥಾನ ಬಳಿಯ ಹೇಲಪ್ಪ ಸುಬ್ಬಣ್ಣ  ಇರೆಗಾರ (36) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೫ ಜುಲೈ ೧೬ರಂದು ಮೇಲ್ಪರಂಬ ಪೊಲೀಸ್ …