ಪ್ರಸಿದ್ಧಿ ಪಡೆದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ವಿದ್ಯುತ್ ಸ್ವಾವಲಂಬನೆಯಲ್ಲಿ ಮತ್ತೊಂದು ಖ್ಯಾತಿ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಸೌರ ವಿದ್ಯುತ್ ಸ್ಥಾಪಿಸಿ ಕ್ಷೇತ್ರ ಸ್ವಾವಲಂಬನೆ ಹೊಂದಿದೆ. 50 ಕಿಲೋ ವ್ಯಾಟ್ ಸೌರಶಕ್ತಿ ಪ್ಲಾಂಟ್‌ನ್ನು ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ. ಮೂರು ತಿಂಗಳ ಹಿಂದೆ ವರೆಗೆ ಪ್ರತೀ ತಿಂಗಳು 4೦,೦೦೦ ರೂ. ನಿಂದ 5೦,೦೦೦ ರೂ.ವರೆಗೆ ವಿದ್ಯುತ್ ವೆಚ್ಚದಲ್ಲಿ ಪಾವತಿಸಲಾಗುತ್ತಿತ್ತು. ಅದೀಗ ಪ್ರತೀ ತಿಂಗಳು ಮೀಟರ್ ಬಾಡಿಗೆ ರೂಪದಲ್ಲಿ 7೦ ರೂ. ಹಾಗೂ ಜಿಎಸ್‌ಟಿ ಸಹಿತದ ವಿದ್ಯುತ್ ಬೋರ್ಡ್‌ನ ಫಿಕ್ಸೆಡ್ ದರವಾಗಿ 5,೦೦೦ ರೂ. ಆಗಿ ಕಡಿತಗೊಂಡಿದೆ. ಈ ಮೊದಲು ತ್ರೀಫೇಸ್ …

ಪೆರಡಾಲ ದೇವಸ್ಥಾನಕ್ಕೆ ಬಸ್ ಸಂಚಾರ ಪುನರಾರಂಭ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಬಸ್ ಸಂಚಾರ ಪುನರಾರಂಭಗೊಂಡಿದೆ. ನೀರ್ಚಾಲ್ ನಿಂದ ಕನ್ಯಪ್ಪಾಡಿ- ಪೆರಡಾಲ ಮೂಲಕ ಬದಿಯಡ್ಕಕ್ಕೆ, ಅನಂತರ ಕಾಸರಗೋಡಿಗೆ  ಸೂರ್ಯ ಸಂಸ್ಥೆಯ ಬಸ್ ಸಂಚರಿಸುತ್ತಿದೆ. ಇದು ಪೆರಡಾಲ ಕ್ಷೇತ್ರಕ್ಕೆ ತೆರಳುವ ಭಕ್ತರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಅವರು ದೇವರ ಮುಂದೆ ಪ್ರಾರ್ಥಿಸಿ ತೆಂಗಿನಕಾಯಿ ಒಡೆಯುವ ಮೂಲಕ ಬಸ್‌ನ ಮೊದಲ ಸಂಚಾರ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಪಂ. ಸದಸ್ಯ …

ಚಂದ್ರನ್ ನಿಧನ

ಮುಳ್ಳೇರಿಯ: ಆದೂರು ಕೊಯಂ ಕೂಡ್ಲು ನಿವಾಸಿ ಚಂದ್ರನ್ (68) ನಿಧನ ಹೊಂದಿದರು. ಮೃತರು ಮಕ್ಕಳಾದ ಪ್ರಮೋದ್, ಪ್ರಸಾದ್, ಸೊಸೆಯಂದಿ ರಾದ ಶ್ವೇತ, ರಶ್ಮಿನಿ, ಸಹೋದರರಾದ ಕುಮಾರನ್, ಭಾಸ್ಕರನ್, ಗೋಪಾಲನ್, ಸಹೋದರಿ ವೆಳ್ಳಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಟಿ.ಎಂ. ಮೊಹಮ್ಮದ್ ನಿಧನ

 ಕಾಸರಗೋಡು: ಚೆರ್ಕಳ ಬೇವಿಂಜೆಯ ಮಾಜಿ ಗುತ್ತಿಗೆದಾರ ಹಾಗೂ ಹಿರಿಯ ನಾಗರಿಕ ಟಿ.ಎಂ. ಮೊಹಮ್ಮದ್ (78) ನಿಧನ ಹೊಂದಿ ದರು. ಮೃತರು ಪತ್ನಿ ನಫೀಸ, ಮಕ್ಕಳಾದ ವಾಹಿದ್, ರಹೀಂ, ಬಾಸಿತ್, ತಸ್ನೀಯ, ಜುಬೀನ, ಅಳಿಯಂದಿರಾದ ಖಾದರ್, ಅಶ್ರಫ್, ಸೊಸೆಯಂದಿರಾದ ಸಾಕಿರ, ನಿರ್ಷಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಕ್ಕು ನಿಧನ

ನೀರ್ಚಾಲು: ಕನ್ನೆಪ್ಪಾಡಿ ಗೋಳಿ ಯಡ್ಕ ನಿವಾಸಿ ದಿ| ಕೊರಗರ ಪತ್ನಿ ಅಕ್ಕು (85) ನಿಧನ ಹೊಂದಿದರು. ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತೆ ಯಾಗಿದ್ದರು. ಮೃತರು ಮಕ್ಕಳಾದ ದೈವ ನರ್ತಕ ಚೋಮ ಯಾನೆ ಸಂಜೀವ, ಲಲಿತ, ಸೊಸೆ ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪುತ್ರಿಯರಾದ ಲಕ್ಷ್ಮಿ ಹಾಗೂ ಸೀತ ಈ ಹಿಂದೆ ನಿಧನ ಹೊಂದಿದ್ದಾರೆ.

ಕಾಡು ಪೊದೆ ಬೆಳೆಯುತ್ತಿರುವ ವಿದ್ಯಾನಗರ ಕೈಗಾರಿಕಾ ಎಸ್ಟೇಟ್ 

ಕಾಸರಗೋಡು: ವಿದ್ಯಾನಗರ ಕೈಗಾರಿಕಾ ಎಸ್ಟೇಟ್‌ನ ಕೈಗಾರಿಕಾ ಘಟಕಗಳು ಕಾಡು ಆವರಿಸಿ ಅಪ್ರತ್ಯಕ್ಷವಾಗುತ್ತಿವೆ. ಕಳೆದ ಒಂದು ದಶಕದಿಂದ ಕೈಗಾರಿಕಾ ರಂಗದಲ್ಲಿ ರಾಜ್ಯ ನಡೆಸುತ್ತಿರುವ ಪರಿಷ್ಕಾರಗಳು, ಯೋಜನೆಗಳು ಕೈಗಾರಿಕಾ ವಲಯ ವನ್ನು ಈರೀತಿಗೆ ಕೊಂಡೊಯ್ದಿದೆ ಎಂದು ಹೇಳಲಾಗುತ್ತಿದೆ. ಕೈಗಾರಿಕಾ ಎಸ್ಟೇಟ್‌ನ 100ರಷ್ಟು ಘಟಕಗಳಲ್ಲಿ ಹೆಚ್ಚಿನವು ಹೆಸರಿಗೆ ಮಾತ್ರವೇ ಕಾರ್ಯಾಚರಿಸುತ್ತಿವೆ. ಎಸ್ಟೇಟ್‌ನ ಪ್ರಧಾನ ರಸ್ತೆ ಡಾಮರೀಕರಣವಿಲ್ಲದೆ ಹೊಂಡಗಳಿಂದ ತುಂಬಿ ಶೋಚನೀ ಯಾವಸ್ಥೆಯಲ್ಲಿದೆ. ಬೀದಿ ದೀಪಗಳು ಕಣ್ಣು ಮುಚ್ಚಿವೆ. ಕೆಲವು ಕಟ್ಟಡಗಳ ಸುತ್ತು ಪೊದೆ ಹಾಗೂ ಹುಲ್ಲು ತುಂಬಿಕೊಂಡಿದೆ. ಕಾಡು ಮೃಗಗಳು ಕೂಡಾ …

ನಾಡಿನಾದ್ಯಂತ ಗಣೇಶ ಚತುರ್ಥಿ ಆಚರಣೆ

ಕಾಸರಗೋಡು: ನಾಡಿನಾದ್ಯಂತ ಇಂದು ಗಣೇಶ ಚತುರ್ಥಿ ಹಬ್ಬವನ್ನು  ಭಕ್ತಿ ಸಡಗರದೊಂದಿಗೆ ಸಂಭ್ರಮ ದಿಂದ ಆಚರಿಸಲಾಗುತ್ತಿದೆ. ವಿವಿಧ ದೇವಾಲಯ,  ತರವಾಡು ಕ್ಷೇತ್ರಗ ಳಲ್ಲಿ ಗಣೇಶೋತ್ಸವ ಆಚರಿಸಲಾ ಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಧಾನವಾಗಿ  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಮುಳ್ಳೇರಿಯ ಗಣೇಶ ಕಲಾ ಮಂದಿರ,  ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರ, ಬಾಡೂರು ಶ್ರೀಕೃಷ್ಣ ಭಜನಾ ಮಂದಿರ, ಬದಿಯಡ್ಕ ಗಣೇಶ ಮಂದಿರ, ಬೆಳ್ಳೂರು ನಾಟೆಕಲ್ಲು ಶ್ರೀ ಅಯ್ಯಪ್ಪ ಭಜನಾ ಮಂದಿರ, ಪೆರ್ಲ ಶ್ರೀ ಸತ್ಯನಾರಾಯಣ …

ಬಸ್‌ನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲೆತ್ನ: ತಮಿಳುನಾಡು ನಿವಾಸಿ ಮಹಿಳೆ ಸೆರೆ

ಕಾಸರಗೋಡು: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ೩ ಪವನ್ ಚಿನ್ನದ ಸರವನ್ನು ಕಳವುಗೈಯ್ಯಲು ಪ್ರಯತ್ನಿಸಿದ ತಮಿಳು ನಾಡು ನಿವಾಸಿ ಮಹಿಳೆ ಸೆರೆಗೀಡಾಗಿ ದ್ದಾಳೆ. ಮಧುರೈ ನಿವಾಸಿ ಮುತ್ತಾತ (40) ಎಂಬಾಕೆಯನ್ನು  ಕಳವು ಯತ್ನ ವೇಳೆ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ  ಘಟನೆ ನಡೆದಿದೆ. ಬಂಗ್ರಮಂಜೇಶ್ವರ ನಿವಾಸಿ ಪ್ರೇಮ 77) ಎಂಬವರ  ಕುತ್ತಿಗೆಯಿಂದ ೩ ಪವನ್‌ನ ಚಿನ್ನದ ಸರವನ್ನು  ಮುತ್ತಾತ ಕಸಿಯಲು ಪ್ರಯತ್ನಿಸಿದ್ದಳು.  ಸಂಬಂಧಿಕರ ಮದುವೆ  ಅತಿಥಿ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿನಿಂದ …

ಯುವತಿಗೆ ದೈಹಿಕ ಕಿರುಕುಳ: ಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ:  ಯುವತಿಗೆ ದೈಹಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಪತಿ ಸೇರಿದಂತೆ ನಾಲ್ವರ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕಣ ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರು ಉದ್ಯಾವರ ಮಿಸ್ರಿಯಾ ಮಂಜಿಲ್‌ನ   ಮುಹಮ್ಮದ್ ಎಂಬವರ ಪುತ್ರಿ   ಅಮಿನತ್ತ್ ಇಶ್ವಾನ (24) ಎಂಬಾಕೆ ಈ ಬಗ್ಗೆ ದೂರು ನೀಡಿದ್ದು ಅದರಂತೆ ಆಕೆಯ ಪತಿ ಕುಂಜತ್ತೂರು ಪದವಿನ ಅಬ್ಬಾಸ್ ಅನಸ್, ಆಮಿನ, ಮುಹಮ್ಮದ್ ಮತ್ತು ಅಜೀಮ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 2025 ಜನವರಿ 19ರಂದು ಅಬ್ಬಾಸ್ ಅನಸ್‌ನೊಂದಿಗೆ …

ಮನೆಯಲ್ಲಿ 6.520 ಕಿ.ಗ್ರಾಂ ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಮನೆಯಲ್ಲಿ ಬಚ್ಚಿಡಲಾಗಿದ್ದ 6.520 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಹೊಸದುರ್ಗ ತಾಲೂಕಿನ ಉದಿನೂರು ಗ್ರಾಮದ ಮಾಚಿಕ್ಕಾಡ್ ಕೊಕ್ಕಾಕಡವ್ ನಿವಾಸಿ ಸಿ. ಧನಂ ಎಂಬ ಮಹಿಳೆ ಮತ್ತು ಅವರ ಕುಟುಂಬ ವಾಸಿಸುತ್ತಿರುವ ಮನೆಯಿಂದ ಈ ಮಾಲು ಪತ್ತೆಹಚ್ಚಲಾಗಿದೆ.  ಇದಕ್ಕೆ ಸಂಬಂಧಿಸಿ ಉದಿನೂರು ಮಾಚಿಕ್ಕಾಡ್ ಕೊಕ್ಕಾಕಡವಿನ ತುರುತ್ತಿ ಮಠತ್ತಿಲ್ ವೀಟಿಲ್‌ನ ಟಿ.ಆರ್. ಮಣಿ (57) ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಕಾಸರಗೋಡು ಇ.ಐ. ಆಂಡ್ ಐಬಿಗೆ …