ಮನೆಯೊಳಗೆ ನಿದ್ರಿಸಿದ್ದ ಬಾಲಕ ನಾಗರ ಹಾವು ಕಡಿತದಿಂದ ಮೃತ್ಯು

ತಿರುವನಂತಪುರ: ರಾಜ್ಯದಲ್ಲಿ ಹಾವಿನ ಕಡಿತದಿಂದ ಇನ್ನೋರ್ವ ಬಾಲಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತಿರುವನಂತಪುರ ಬಳಿಯ ಚಿರಯಿನ್‌ಕೀಳ್ ನಿವಾಸಿಯಾದ ದಿಲ್ಶನ್ (8) ಎಂಬ ಬಾಲಕ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಇಂದು ಮುಂಜಾನೆ 4 ಗಂಟೆ ವೇಳೆ ಮನೆಯೊಳಗೆ ನಿದ್ರಿಸಿದ್ದ ಬಾಲಕನಿಗೆ ನಾಗರಹಾವು ಕಡಿದಿದೆ. ಬಾಲಕನ ಕೂಗುಕೇಳಿ ತಂದೆ ದಿಲೀಪ್, ತಾಯಿ ಅನುಪಮ ಎಚ್ಚೆತ್ತು ನೋಡಿದಾಗ ಬಾಲಕನ ದೇಹದಲ್ಲಿ ಹಾವಿನ ಕಡಿತದ ಗುರುತು ಕಂಡುಬಂದಿದೆ.ಕೂಡಲೇ ಚಿರಯಿನ್‌ಕೀಳ್‌ನ ತಾಲೂಕು ಆಸ್ಪತ್ರೆಗೆ ತಲುಪಿಸಲಾ ಯಿತು. ಅಲ್ಲಿ ಚುಚ್ಚುಮದ್ದು ನೀಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ …

ಕಾಸರಗೋಡು : ಭಾಸ್ಕರ ಕುಂಬಳೆ ಬಲಿದಾನ ದಿನಾಚರಣೆ

ಕುಂಬಳೆ: ಡಿವೈಎಫ್‌ಐ ನೇತಾರನಾಗಿದ್ದ ಭಾಸ್ಕರ ಕುಂಬಳೆ ಅವರ 29ನೇ ಬಲಿದಾನ ದಿನಾಚರಣೆಯಂಗವಾಗಿ ನಿನ್ನೆ ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ. ಸ್ವರಾಜ್ ಉದ್ಘಾಟಿಸಿ ಮಾತನಾಡಿ ದರು.  ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಟ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶಾಸಕ ಎಂ. ರಾಜಗೋಪಾಲನ್, ರಾಜ್ಯ ಸಮಿತಿ ಸದಸ್ಯ ಶಾಸಕ ಸಿ.ಎಚ್. ಕುಂಞಂಬು, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ, ಜಿಲ್ಲಾ ಸಮಿತಿ ಸದಸ್ಯ …

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

ಕಾಸರಗೋಡು: ಭಾರತೀಯ ಸಂಸ್ಕೃತಿ ಜಗತ್ತಿಗೆ ನೀಡಿದ ದೊಡ್ಡ ಸಂದೇಶ ಧರ್ಮವಾಗಿದೆ. ಸಮಸ್ತ ವೇದ ಸಾರ ಸಂಗ್ರಹವಾದ ಭಗವದ್ಗೀತೆ ಧರ್ಮದಿಂದ ಆರಂಭಗೊAಡು ‘ಮಮ’ ಎಂಬ ತನ್ನ ಧರ್ಮದ ಬಗ್ಗೆ ಸಾರಿದೆ. ಇದರಿಂದಲೇ ಧರ್ಮವೇ ಪ್ರಧಾನವಾದುದು, ಶ್ರೇಯಸ್ಸೂ, ಪ್ರೇಯಸ್ಸೂ ನೀಡುವುದೇ ಆ ಧರ್ಮವಾಗಿದೆ ಎಂದು ಕಾಸರಗೋಡು ಮಾತಾ ಅಮೃತಾನಂದಮಯೀ ಮಠದ ಬ್ರಹ್ಮಚಾರಿ ಶ್ರೀ ವೇದ ವೇದಾಮೃತ ಚೈತನ್ಯ ಆಶೀರ್ವಚನದಲ್ಲಿ ತಿಳಿಸಿದರು.ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ಅಂಗವಾಗಿ ನಿನ್ನೆ ನಡೆದ ಧಾರ್ಮಿಕ …

ಪೆರಡಾಲದಲ್ಲಿ ಶ್ರೀ ಉದನೇಶ್ವರ, ಸಪರಿವಾರ ದೇವತಾ ಪ್ರತಿಷ್ಠೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಪೂರ್ವಾಹ್ನ 10೮ ತೆಂಗಿನಕಾಯಿಯ ಗಣಪತಿಹೋಮ ಬಳಿಕ ಶ್ರೀ ಉದನೇಶ್ವರ ದೇವರು, ಕುಟ್ಟಿಚ್ಚಾತ ಸಹಿತ ಪರಿವಾರ ದೇವತಾ ಪ್ರತಿಷ್ಠೆ ನಡೆಯಿತು.  ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ ನಡೆಯಿತು. ಎಪ್ರಿಲ್ ೨೬ರಂದು ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಇಂದು ಸಂಜೆ …

ಮಂಗಲ್ಪಾಡಿ ಪಂ.ನಲ್ಲಿ ಪ್ರಥಮ ಹಂತದ ಕುಡಿಯುವ ನೀರು ವಿತರಣೆ ಆರಂಭ

ಉಪ್ಪಳ: ಕುಡಿಯುವ ನೀರಿನ ಕ್ಷಾಮ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಪಂಚಾಯತ್‌ನಿಂದ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಥಮ ಹಂತದ ಕುಡಿಯುವ ನೀರು ವಿತರಣೆಯನ್ನು ನಿನ್ನೆ ಆರಂಭಿಸಲಾಯಿತು. ಪಂಚಾಯತ್ ಕಚೇರಿ ಆವರಣದಲ್ಲಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರಿನ ಕ್ಷಾಮವಿರುವ ಪ್ರದೇಶದಲ್ಲಿ ವಾರ್ಡ್‌ನ ಜನಪ್ರತಿನಿಧಿಯವರನ್ನು ಸಂಪರ್ಕಿಸಬೇಕಾಗಿದೆ. ದಿನದಲ್ಲಿ ಎಂಟು ವಾರ್ಡ್‌ಗಳಿಗೆ ನೀರು ವಿತರಿಸಲಾಗುವುದು. ಇದೇ ರೀತಿ ಮೂರು ದಿನಗಳಲ್ಲಿ ಒಟ್ಟು 24 ವಾರ್ಡ್‌ಗಳಿಗೆ ಪ್ರಥಮ ಹಂತದ ನೀರನ್ನು ವಿತರಿಸಲಾಗುವುದು. …

ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮವಿಲ್ಲ: ಮುಸ್ಲಿಂ ಲೀಗ್‌ನಿಂದ ಧರಣಿ

ಉಪ್ಪಳ: ಪತ್ವಾಡಿ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ದುರಸ್ತಿ ನಡೆಸಲು  ಜಲಪ್ರಾಧಿಕಾರಕ್ಕೆ ಅನುಮತಿ ನೀಡದಿರುವುದನ್ನು ಪ್ರತಿಭಟಿಸಿ ಮಂಜೇಶ್ವರ ಪಿಡಬ್ಲ್ಯುಡಿ ರೋಡ್ಸ್ ಅಸಿಸ್ಟೆಂಟ್ ಇಂಜಿನಿಯರ್‌ರ ಕಚೇರಿಯ ಮುಂಭಾಗ ಮಂಗಲ್ಪಾಡಿ ಪಂಚಾಯತ್ ಮುಸ್ಲಿಂ ಲೀಗ್ ವಾರ್ಡ್ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು. 3,4ನೇ ವಾರ್ಡ್ ಸಮಿತಿ ಪದಾಧಿಕಾರಿಗಳು ಎಂ.ಕೆ. ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಧರಣಿಯನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹಿಮಾನ್ ಉದ್ಘಾಟಿಸಿದರು. ಕುಂಬಳೆ ಜಲ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್‌ರ ಆದೇಶ ಪತ್ರಕ್ಕೆ ಅನುಮತಿ  ನೀಡದೆ ಮಂಜೇಶ್ವರ ಪಿಡಬ್ಲ್ಯುಡಿ …

ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಕಾರ್ಯಾರಂಭ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಚಟುವಟಿಕೆ ಆರಂಭಗೊಳ್ಳಲಿದೆ. ಮೂಲಭೂತ ಸೌಕರ್ಯಗಳನ್ನು ಪೂರ್ತಿಗೊಳಿಸಿ ವಿದ್ಯಾರ್ಥಿಗಳಿಗೆ ವಾಸ ಸೌಕರ್ಯ ಏರ್ಪಡಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ ಪ್ರತಿ ತಿಂಗಳ ಅವಲೋಕನ ಸಭೆಯಲ್ಲಿ ಈ ತೀರ್ಮಾನ ಉಂಟಾಗಿದೆ. ಕಳೆದ ತಿಂಗಳು ನಡೆದ ಸಭೆಯ ತೀರ್ಮಾನ ಪ್ರಕಾರ ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ನೇತೃತ್ವದಲ್ಲಿ ಮೆಡಿಕಲ್ ಕಾಲೇಜು ಕ್ಯಾಂಪಸ್‌ಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅಲ್ಲದೆ …

ತನ್ನನ್ನು ಹಾಗೂ ಪಕ್ಷವನ್ನು ಅವಮಾನಿಸಲು ಗೂಢ ತಂತ್ರ- ಎಂ.ಎಲ್. ಅಶ್ವಿನಿ

ಕಾಸರಗೋಡು: ಸುಳ್ಳು ವರದಿ ಪ್ರಕಟಿಸಿ ತನ್ನನ್ನು ಹಾಗೂ ಪಕ್ಷದ ಜಿಲ್ಲಾ ನಾಯಕತ್ವವನ್ನು ಅವಮಾನಿ ಸಲು ಗೂಢ ಪ್ರಯತ್ನ ನಡೆಯುತ್ತಿ ದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ನಡೆಯದ ಮಂಡಲ ಅವಲೋಕನ ಸಭೆಯಲ್ಲಿ  ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಹಾಗೂ ತನ್ನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.  ಮತ ಸೇರಿಸಲು ಸೂಕ್ತ ಚಟುವಟಿಕೆ ನಡೆಸಿಲ್ಲವೆಂದೂ ಮಗನ ಮತ ಕೂಡಾ ಸೇರಿಸಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾದುದಾಗಿದೆ. ಮತ ಸೇರಿಸಲು ಬೇಕಾದ ಎಲ್ಲಾ …

ತೃಶೂರು ಪಟಾಕಿ ಸಂಗ್ರಹಾಲಯದಲ್ಲಿ ಭೀಕರ ಸ್ಫೋಟ: ಮೃತರ ಸಂಖ್ಯೆ 13ಕ್ಕೇರಿಕೆ

ತೃಶೂರು: ತೃಶೂರು ಪೂರಂ ಗಾಗಿ ಕುಂಡತ್ತಿಕ್ಕಾಡ್‌ನ ಪಟಾಕಿ  ಸಂಗ್ರಹಾಲಯದಲ್ಲಿ ನಿನ್ನೆ ಉಂಟಾದ ಭೀಕರ ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡು ಹಲವರು ಗಂಭೀರ ಗಾಯಗೊಂಡ ದುರ್ಘಟನೆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಲು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆ ತೀರ್ಮಾನಿಸಿದೆ. ಮಾತ್ರವಲ್ಲ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳ ಆಶ್ರಿತರಿಗೆ ತಲಾ ೧೪ ಲಕ್ಷ ರೂ.ನಂತೆ ನಷ್ಟ ಪರಿಹಾರವನ್ನೂ ಸರಕಾರ ಘೋಷಿಸಿದೆ. ಇನ್ನೊಂದೆಡೆ ಈ ಘಟನೆ ಬಗ್ಗೆ …

ಶತಾಯುಷಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ ನಿಧನ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ (101) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು.  ಕಳೆದ 70 ವರ್ಷಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಶ್ರೀ ವಿಶ್ವಕರ್ಮ ಫರ್ನೀಚರ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಇವರು  ಬಡಗಿ ವೃತ್ತಿಯಲ್ಲಿ ಜನಾನುರಾಗಿಯಾಗಿದ್ದರು. ಅಲ್ಲದೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ  ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.  ಜೀವನದ ಸಾರ್ಥಕ 100 ವರ್ಷವನ್ನು ಪೂರೈಸಿದ …