ಆಸ್ಪತ್ರೆಗೆ ಹೋದ ಯುವತಿ ನಾಪತ್ತೆ

ಕುಂಬಳೆ: ಯುವತಿ ನಾಪತ್ತೆಯಾದ ಬಗ್ಗೆ ಪತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಲಪ್ಪುರಂ ತಿರೂರಂಗಾಡಿ ಚೆಮ್ಮಾಡ್ ಕುನ್ನುಮೇಲ್ ಹೌಸ್‌ನ  ಮನ್ಸೂರ್ ಅಲಿ ಎಂಬವರ ಪತ್ನಿ ಹಾಗೂ ಕಯ್ಯಾರು ಗ್ರಾಮದ ಸುಬ್ಬಯ ಕಟ್ಟೆ ನಿವಾಸಿ  ಫಾತಿಮತ್ ಜುಹರಾ (27) ನಾಪತ್ತೆಯಾದ ಯುವತಿ.  ಮೇ 2ರಂದು ಬೆಳಿಗ್ಗೆ 10.30ಕ್ಕೆ ಸುಬ್ಬಯ್ಯಕಟ್ಟೆಯಿಂದ ಕುಂಬಳೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಹೋದ ಫಾತಿಮತ್ ಜುಹರಾ ಮರಳಿ ಹಿಂತಿರುಗಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರ ಪತಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ …

ಜ್ಯೋತಿಷ್ಯಾಲಯದಲ್ಲಿ ಗಾಂಜಾ ಪತ್ತೆ: ಜ್ಯೋತಿಷಿ ಬಂಧನ

ಹೊಸದುರ್ಗ: ಜ್ಯೋತಿಷ್ಯಾಲ ಯದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ಪಯ್ಯನ್ನೂರು ಬಸ್ ನಿಲ್ದಾಣ ಸಮೀಪ ಕಾರ್ಯಾಚರಿ ಸುವ ಜ್ಯೋತಿಷ್ಯಾಲಯದಿಂದ  ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೇಸು ದಾಖಲಿಸಿಕೊಂಡ ಪಯ್ಯನ್ನೂರು ಪೊಲೀಸರು ಜ್ಯೋತಿಷ್ಯಾಲಯ ನಡೆಸುತ್ತಿದ್ದ ಜ್ಯೋತಿಷಿ ಕಾಂಕೋಲ್ ವಡಶ್ಶೇರಿಯ ಪಿ. ಶ್ರೀನಾಥ್ (41)ನನ್ನು ಬಂಧಿಸಿದ್ದಾರೆ. ಆಪರೇಶನ್ ತೂಫಾನ್‌ನ ಅಂಗವಾಗಿ ನಿನ್ನೆ ಸಂಜೆ ಎಸ್‌ಐ ಪಿ.ವಿ. ಅನುಶ್ರೀ ನೇತೃತ್ವದಲ್ಲಿ ಡಾನ್ಸಾಪ್ ತಂಡ ಜ್ಯೋತಿಷ್ಯಾಲ ಯದಲ್ಲಿ ತಪಾಸಣೆ ನಡೆಸುವ ವೇಳೆ ಗಾಂಜಾ ಪತ್ತೆಯಾಗಿದೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು …

ಎಡಿಎಂ ನವೀನ್‌ಬಾಬು ಸಾವು: ಪ್ರಕರಣದ ತನಿಖೆ ಸಿಬಿಐಗೆ

ತಿರುವನಂತಪುರ: ಕಣ್ಣೂರು ಎಡಿಎಂ ಆಗಿದ್ದ ನವೀನ್‌ಬಾಬು ಅವರ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಎಡಿಎಂ ನವೀನ್‌ಬಾಬು ಅವರ ಪುತ್ರಿ ನಿರಂಜನ ನಾಯರ್‌ಗೆ ಆಶ್ರಿತ ನೇಮಕಾತಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 2024 ಅಕ್ಟೋಬರ್ 15ರಂದು ಮುಂಜಾನೆ ನವೀನ್‌ಬಾಬು ಕಣ್ಣೂರು ಪಳ್ಳಿಕುನ್ನುನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೆಟ್ರೋಲ್ ಪಂಪ್‌ಗಿರುವ ಅರ್ಜಿಯ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾದ ಹೆಸರಲ್ಲಿ …

ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸಬೇಕು- ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ಖಾಸಗಿ ಬಸ್ ಉದ್ದಿಮೆಯನ್ನು ಸರಕಾರ ಸಂರಕ್ಷಿಸ ಬೇಕೆಂದು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಗಳಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಕರ್ಯ ಏರ್ಪಡಿಸಿ, ಕೋಟ್ಯಂತರ ರೂಪಾಯಿ ಸರಕಾರಕ್ಕೆ ಮುಂಚಿತವಾಗಿ ತೆರಿಗೆ ನೀಡುವ ಖಾಸಗಿ ಬಸ್ ಉದ್ದಿಮೆ ಭಾರೀ ಸಂದಿಗ್ಧತೆಯಲ್ಲಿದೆ. ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ಮಂಜೂರು ಮಾಡಿದರೆ ಖಾಸಗಿ ಬಸ್ ಉದ್ದಿಮೆ ಇನ್ನಷ್ಟು ಸಂದಿಗ್ಧತೆಗೆ ತಲುಪಲಿದೆ. ಅತ್ಯಲ್ಪ ಸಂಗ್ರಹವಾಗುವ ಆದಾಯದಿಂದ …

ಬಿಎಸ್‌ಎಫ್‌ಗೆ ನೇಮಕಗೊಂಡ ಯುವಕನಿಗೆ ಕಾಂಗ್ರೆಸ್‌ನಿಂದ ಗೌರವ

ಬದಿಯಡ್ಕ: ಭಾರತೀಯ ಗಡಿ ಭದ್ರತಾ ಸೇನೆ (ಬಿಎಸ್‌ಎಫ್)ಗೆ ನೇಮಕಗೊಂಡ ಚೆಡೆಕಲ್‌ನ ಕುಂಞಿಕಣ್ಣನ್‌ರ ಪುತ್ರ ದೀಪು ಅವರನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗೌರವಿಸಲಾಯಿತು. ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ ಶಾಲು ಹಾಕಿ ಗೌರವಿಸಿದರು. ಬ್ಲೋಕ್ ಸದಸ್ಯ ಖಾದರ್ ಮಾನ್ಯ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್, ಗಿರೀಶ್ ಮೊದಲಾದವರು ಭಾಗವಹಿಸಿದರು. ದೀಪು ಅವರಿಗೆ ಕಾಂಗ್ರೆಸ್ ಮಂಡಲ ಸಮಿತಿ ವತಿಯಿಂದ ಪಾರಿತೋಷಕ ನೀಡಲಾಯಿತು.

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಕಾರ್ಯಕ್ರಮ: ಖುರ್‌ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಗೌರವ

ಮಂಜೇಶ್ವರ: ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆ ೨೦೨೬ -೨೭ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಾಲೆಯು ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸ್ವಾಗತಿಸುವುದರೊಂದಿಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಾಹುಲ್ ಹಮೀದ್ – ರಜಿಯಾ ದಂಪತಿ ಪುತ್ರ ಹಾಫಿಲ್ ಮೊಹಿಯುದ್ದೀನ್ ಮಿಸಾಬ್ ಹಾಗೂ ಅಬ್ದುಲ್ ರಝಾಕ್ – ನಬೀಸಾ ದಂಪತಿ ಪುತ್ರ ಹಾಫಿಲ್ ಅಬ್ದುಲ್ ನೌಫಲ್ ಎಂಬೀ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಹಾಫಿಝ್ ಆಗಿರುವ ವಿದ್ಯಾರ್ಥಿಗಳು …

ಅನಂತಪುರ ಉದ್ದಿಮೆ ಪಾರ್ಕ್‌ನ ದುರ್ನಾತ ಪರಿಹಾರಕ್ಕೆ ಒತ್ತಾಯ: 8ರಂದು ಕ್ರಿಯಾ ಸಮಿತಿಯಿಂದ ಮಾರ್ಚ್, ಧರಣಿ

ಕುಂಬಳೆ: ಅನಂತಪುರ ಉದ್ದಿಮೆಪಾರ್ಕ್‌ನ ಫ್ಯಾಕ್ಟರಿಗಳಿಂದ ಹೊರಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆ ಯಾಗುವ ಕೈಗಾರಿಕೆಗಳನ್ನು ಮುಚ್ಚುಗಡೆಗೊಳಿಸಬೇಕೆಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ.  ಚರಂಡಿ ಇಲ್ಲದಿರುವುದರಿಂದ ಮಲಿನ ಜಲ ಹರಿದು ಕುಡಿಯುವ ನೀರು ಮೂಲ ಗಳಿಗೆ ತಲುಪಿ ಶುದ್ಧ ನೀರು ಕಲುಷಿ ತಗೊಳ್ಳುತ್ತಿದೆಯೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ನೂತನವಾಗಿ ಆರಂಭಿಸಲಿರುವ ಕೈಗಾರಿಕೆಗಳಿಗೆ ಅನುಮತಿ ನೀಡ ಕೂಡದು.  ಕೈಗಾರಿಕೆ ಹೆಸರಲ್ಲಿ …

ಮಗುವಿನ ಬರ್ಭರ ಕೊಲೆ: ಉಪ್ಪಳದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಉಪ್ಪಳ: ಕೇರಳದ ನೆಡುಮಂ ಙಾಡ್ ಎಂಬಲ್ಲಿ ಯುವತಿಯೊಬ್ಬಳು ಅನ್ಯಮತೀಯನಾದ ಪ್ರಿಯತಮನೊಂ ದಿಗೆ ಸೇರಿ  ಹೆತ್ತ ಕರುಳ ಕುಡಿಯನ್ನೇ ಕೊಲೆಗೈದಿರುವುದನ್ನು ಪ್ರತಿಭಟಿಸಿ ಹಿಂದೂ ಹಿತರಕ್ಷಣಾ ವೇದಿಕೆ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಭಾರತೀಯ ಜನತಾ ಪಕ್ಷದ ಕಲ್ಲಿಕೋಟೆ ವಲಯದ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಕಾನೂನು ಬಾಹಿರವಾಗಿ ಒಂದಾಗಿ  ಜೀವಿಸಿ  ಪುಟ್ಟ ಮಗುವನ್ನು ಕೊಲೆಗೈದ ಅಸ್ಕರ್ ಹಾಗೂ ಅಖಿಲ  ಎಂಬಿವರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಸರಕಾರ ಕ್ರಮ ಕೈಗೊಳ್ಳಬೇಕೆಂದು   ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂ …

ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಹೊಸ ಮುಖ್ಯ ಸರ್ವೇಯರ್‌ನ್ನು ತುರ್ತಾಗಿ ನೇಮಿಸಬೇಕು-ವಲ್ಸರಾಜ್ ಕೆ.ಪಿ

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಮೀಸಲು ವಿಭಾಗದಲ್ಲಿ ಮುಖ್ಯ ಸರ್ವೇಯರ್ ಇಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಂಜೇಶ್ವರ ತಾಲೂಕು ಕಚೇರಿಯಲ್ಲಿ  ತಿಂಗಳುಗಳಿಂದ ಮುಖ್ಯ ಸರ್ವೇಯರ್ ಇಲ್ಲ. ಇರುವ ಮುಖ್ಯ ಸರ್ವೇಯರ್ ರಜೆಯಲ್ಲಿದ್ದಾರೆ.  ಬೇರೆ ಯಾವುದೇ ಅಧಿಕಾರಿಗೆ ಮುಖ್ಯ ಸರ್ವೇಯರ್‌ನ ಉಸ್ತುವಾರಿ ನೀಡಿಲ್ಲ. ಅನೇಕ  ಜನರು ಸರ್ವೇ ರಿಪೋರ್ಟ್ ನಡೆಸಿ ಹೆಡ್ ಸರ್ವೇಯರ್ ವರದಿಗಾಗಿ ಕಾಯುತ್ತಿದ್ದಾರೆ. ತಿಂಗಳಿಂದ ಎಷ್ಟೋ ಜನರು ತಾಲೂಕು ಕಚೇರಿಗೆ ಹೋಗಿ ಬರಿಗೈಯಲ್ಲಿ ಮರಳುತ್ತಿದ್ದಾರೆ. ಉನ್ನತ ಅಧಿಕಾರಿಗಳನ್ನು ವಿಚಾರಿಸಿದಾಗ ಹೊಸ  ಮುಖ್ಯ ಸರ್ವೇಯರ್ ಬಂದಿಲ್ಲವೆಂಬ …

ಪೆರ್ಮುದೆ- ಪೆರ್ಲ ರಸ್ತೆಯ ತಿರುವುಗಳಲ್ಲಿ ಕಾಡುಪೊದೆ ಬೆಳೆದು ವಾಹನ ಸವಾರರಿಗೆ ಆತಂಕ

ಉಪ್ಪಳ: ಪೆರ್ಮುದೆಯಿಂದ ಪೆರ್ಲಕ್ಕೆ ಸಂಚರಿಸುವ ದಾರಿ ಮಧ್ಯೆ ಹಲವು ತಿರುವುಗಳಲ್ಲಿ ಬೆಳೆದು ನಿಂತಿರುವ ಕಾಡುಪೊದೆಗÀಳು ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದೆ. ಅಂಗಡಿ ಮೊಗರು, ಬಾಡೂರು ಸಹಿತ ಹಲವಾರು ತಿರುವುಗಳು ಈ ರಸ್ತೆಯಲ್ಲಿ ಕಂಡು ಬರುತ್ತಿದ್ದು, ಇಕ್ಕೆಡೆಗಳಲ್ಲಿ ಕಾಡುಪೊದೆಗಳು ಬೆಳೆದು ಎದುರು ಭಾಗದಿಂದ ಬರುವ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಆಹ್ವಾ ನೀಡಿದಂತಾಗುತ್ತಿದೆ ಎಂದು ದೂರಲಾ ಗಿದೆ. ಅಚ್ಚು ಕಟ್ಟಾಗಿ ವ್ಯವಸ್ಥಿತ ವಾಗಿರುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯಲ್ಲಿ ವಾಹನ ಗಳು ವೇಗದಿಂದ ಸಂಚರಿಸುವಾಗ ತಿರುವುನಲ್ಲಿ ದ್ವಿಚಕ್ರ …