139.29 ಗ್ರಾಂ ಎಂಡಿಎಂಎ ಪತ್ತೆ ಪ್ರಕರಣ: ತನಿಖೆಗೆ ಡಿವೈಎಸ್‌ಪಿ ನೇತೃತ್ವದ 17 ಪೊಲೀಸರನ್ನೊಳಗೊಂಡ ವಿಶೇಷ ತಂಡ ರಚನೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಈತಿಂಗಳ ೯ರಂದು ಪೊಲೀಸರು ಮಾದಕದ್ರವ್ಯವಾದ 139.29 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣದ ಮುಂದಿನ  ಹಂತದ ತನಿಖೆಗಾಗಿ  ಡಿವೈಎಸ್ಪಿ ನೇತೃತ್ವದಲ್ಲಿ 17 ಮಂದಿ ಪೊಲೀಸರ ನ್ನೊಳಗೊಂಡ ವಿಶೇಷ ತನಿಖಾ ತಂಡಕ್ಕೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ರೂಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ  ಅರಿಕ್ಕಪ್ಪಾಡಿ ಪೂಮಲ ವೆಸ್ಟ್ ವೇಂಙಳ ಪುಳಿಯಾನ್ತೋಟಂ ಅಬ್ದುಲ್ ಸಲಾಂ ಪಿ.ಎ (27), ಎರ್ನಾಕುಳಂ ಅರಿಕ್ಕಪ್ಪಾಡಿ ಪೂಮಲ ಕರಿವಿಳ್ಳಿ ಹೌಸಿನ ಮೊಹಮ್ಮದ್ ಹುಸೈನ್ ಕೆ.ಎಚ್ (28), …

ನೀರು ಸೇದುತ್ತಿದ್ದ ಮಧ್ಯೆ ಬಾವಿಗೆ ಬಿದ್ದು ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಕಾಸರಗೋಡು: ಪೆರಿಯ ವಡಕ್ಕೇಕರೆ ನಡುವಿಲ್ ವೀಟಿಲ್ ನಿವಾಸಿ ಪುರುಷೋತ್ತಮನ್ (64) ಬಾವಿಗೆ ಬಿದ್ದು ಮೃತಪಟ್ಟರು. ನೀರು ಸೇದುತ್ತಿದ್ದ ಮಧ್ಯೆ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿರುವ ತರವಾಡು ಮನೆಗೆ ನೀರು ಕೊಂಡೊಯ್ಯಲೆಂದು ತೆರಳಿದ್ದರು. ಒಂದು ಬಕೆಟ್ ನೀರು ಮನೆಗೆ ತಲುಪಿಸಿದ ಬಳಿಕ ಮತ್ತೆ ಹಿಂತಿರುಗದ ಹಿನ್ನೆಲೆಯಲ್ಲಿ ನೋಡಿದಾಗ ಹಗ್ಗ ಹಾಗೂ ಬಕೆಟ್ ಬಾವಿಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಂಕೆ ತೋರಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ತಲುಪಿ …

ಮೀಂಜ ಗ್ರಾಮಕಚೇರಿ ಮುಂಭಾಗ ಪಿಂಚಣಿದಾರರ ಪ್ರತಿಭಟನಾ ಸಂಗಮ

ಮೀಯಪದವು: ಕ್ಷೇಮ ಪಿಂಚಣಿಯನ್ನು ಬುಡಮೇಲುಗೊಳಿ ಸುವ ಯುಡಿಎಫ್ ಸರಕಾರದ ತೀರ್ಮಾನಕ್ಕೆದುರಾಗಿ ಸಿಪಿಎಂ ರಾಜ್ಯ ಸಮಿತಿಯ ಅಹ್ವಾನ ಪ್ರಕಾರ ಮೀಂಜ ಗ್ರಾಮ ಕಛೇರಿಯ ಮುಂದೆ ಪಿಂಚಣಿದಾರರ ಪ್ರತಿಭಟನಾ ಸಂಗಮ ನಡೆಯಿತು. ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಲೋಕೇಶ ಚಿನಾಲ ಅಧ್ಯಕ್ಷತೆ ವಹಿಸಿದರು. ರಾಮಚಂದ್ರ ಟಿ. ಸ್ವಾಗತಿಸಿದರು. ಬಾಳಪ್ಪ ಬಂಗೇರ, ಜನಾರ್ದನ ಪೂಜಾರಿ, ಐರಿನ್ ಜೋಸ್ಫಿನ್ ನೇತೃತ್ವ ನೀಡಿದರು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಅಧ್ಯಾಪಕನಿಗೆ ಏಳು ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಅಧ್ಯಾಪಕನಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶ ರಾದ ಕೆ. ಸಂತೋಷ್ ಕುಮಾರ್ ವಿವಿಧ ಸೆಕ್ಷನ್‌ಗಳಲ್ಲಾಗಿ ೭ ವರ್ಷಕಠಿಣ ಸಜೆ ಹಾಗೂ ೭೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಎನ್‌ಸಿಸಿ ಇನ್‌ಸ್ಟ್ರಕ್ಟರ್ ಹಾಗೂ ಅಧ್ಯಾಪಕನೂ ಆಗಿರುವ ಮೈರೆ ಗ್ರಾಮದ ಬಿಸ್ಮಿಲ್ಲಾ ಮಂಜಿಲ್‌ನ ಇಬ್ರಾಹಿಂ ಎಂ (54) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪೋಕ್ಸೋ ಆಕ್ಟ್ ಪ್ರಕಾರ ಆರೋಪಿಗೆ 5 ವರ್ಷ ಕಠಿಣ ಸಜೆ ಮತ್ತು …

ಶಾಲಾ ಬಸ್ -ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು

ಮುಳ್ಳೇರಿಯ:  ಶಾಲಾ ಬಸ್  ಹಾಗೂ ಬೈಕ್ ಢಿಕ್ಕಿ ಹೊಡೆದು  ಗಾಳಿಮುಖ ಬಳಿಯ ನಿವಾಸಿ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಗಾಳಿಮುಖ ಗೋಳಿ ತ್ತಡಿ ಪುದಿಯವಳಪ್ಪ್‌ನ ಶಮ್ಮಾಸ್ ಅಬ್ದುಲ್ಲ (25) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ  9 ಗಂಟೆ ವೇಳೆ ಬೋವಿಕ್ಕಾನ ಬಳಿಯ ಮಾಸ್ತಿಕುಂಡ್ ನಲ್ಲಿ     ಕುನಿಲ್ ಶಾಲೆಯ ಬಸ್ ಹಾಗೂ  ಬೈಕ್ ಢಿಕ್ಕಿ ಹೊಡೆದು   ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಮ್ಮಾಸ್ ಅಬ್ದುಲ್ಲರನ್ನು ತಕ್ಷಣ ಸ್ಥಳೀಯರ ನೇತೃತ್ವದಲ್ಲಿ  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  …

ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಫ್ಲೆಕ್ಸ್ ಅಂಗಡಿ ಮಾಲಕ ಮೃತ್ಯು

ಕಾಸರಗೋಡು: ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ. ತಳಂಗರೆ ಬಾಂಗೋಡು ನಿವಾಸಿ ಹನೀಫಾ (55) ಸಾವನ್ನಪ್ಪಿದ ದುರ್ದೈವಿ. ವಿದ್ಯಾನಗರ ಬಿ.ಸಿ ರೋಡ್‌ನಲ್ಲಿರುವ ಫ್ಲೆಕ್ಸ್ ಅಂಗಡಿಯ ಮಾಲಕನಾಗಿರುವ ಹನೀಫಾ ನಿನ್ನೆ ಮಧ್ಯಾಹ್ನ ಸ್ಕೂಟರ್‌ನಲ್ಲಿ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ  ಭಾರೀ ವಾಹನಗಳ ನಿಬಿಡತೆ ಹೊಂದಿರುವ ಎಂ.ಜಿ ರಸ್ತೆ ಮೂಲಕ ಸಾಗುತ್ತಿದ್ದ ವೇಳೆ ಸ್ಕೂಟರ್ ಟ್ಯಾಂಕರ್ ಲಾರಿಗೆ ಢಿಕ್ಕಿ  ಹೊಡೆದಿತ್ತು. ಈ ವೇಳೆ ಸ್ಕೂಟರ್‌ನಿಂದ ಕೆಳಕ್ಕೆ …

ಕಟ್ಟಡ ನಿರ್ಮಾಣದಲ್ಲಿ ವಂಚನೆ: ಕುಂಬಳೆ ಪಂ. ಕಚೇರಿಯಲ್ಲಿ ವಿಜಿಲೆನ್ಸ್‌ನಿಂದ ಮತ್ತೆ ಪರಿಶೀಲನೆ

ಕುಂಬಳೆ: ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟು ಭಾರೀ ವಂಚನೆ ನಡೆದಿದೆ ಯೆಂಬ ಆರೋಪದಂತೆ ಕುಂಬಳೆ ಗ್ರಾಮ ಪಂಚಾ ಯತ್‌ಗೆ ವಿಜಿಲೆನ್ಸ್ ನಿನ್ನೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿ ಸಿದೆ. ಪರ್ಮಿಟ್‌ನಲ್ಲಿ ತಿಳಿಸಿ ರುವುದಕ್ಕಿಂತಲೂ  ಹೆಚ್ಚು ವಿಸ್ತೀ ರ್ಣದಲ್ಲಿ ಕಟ್ಟಡ ನಿರ್ಮಾಣ ನಡೆಸಲಾಗಿದೆಯೆಂಬ ಆರೋಪ ಕೇಳಿಬಂದಿತ್ತು. 1200 ಚದರ ಅಡಿ ವಿಸ್ತೀರ್ಣವುಳ್ಳ ಶಾಪಿಂಗ್ ಕಾಂಪ್ಲೆಕ್ಸ್  ಕಟ್ಟಡದ ವಿಸ್ತೀರ್ಣವನ್ನು 653 ಚದರ ಅಡಿಯಾಗಿದೆಯೆಂದು ತಿಳಿಸಿ ಪಂಚಾಯತ್‌ಗೆ ಆದಾಯ ನಷ್ಟವುಂಟುಮಾಡಲಾಗಿದೆಯಂದು ದೂರು ಕೇಳಿಬಂದಿದೆ. ಇದರಂತೆ ನಿನ್ನೆ ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರೆಪ್ಶನ್ …

ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

ಪೆರ್ಲ:  ಜ್ವರ ಬಾಧಿಸಿ  ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಅಸೌಖ್ಯ ಉಲ್ಭಣಗೊಂಡು ಮೃತಪಟ್ಟ ಘಟನೆ ನಡೆದಿದೆ. ಪಡ್ರೆ ಸಜಂಗದ್ದೆ ನಿವಾಸಿ ತಿಲು ನಾಯ್ಕ (58) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕನಾ ಗಿದ್ದರು. ಇತ್ತೀಚೆಗಿನಿಂದ ಇವರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಮನೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ 2.15ರ ವೇಳೆ ಅರೆಪ್ರ ಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.   ಮೃತದೇಹ ವನ್ನು ಕುಂಬಳೆ ಜಿಲ್ಲಾ …

ಮಾಜಿ ಬಸ್ ಕಂಡಕ್ಟರ್ ಸುಬ್ಬ ಮಣಿಯಾಣಿ ನಿಧನ

ಕುಂಬ್ಡಾಜೆ: ಬೆಳಿಂಜ ಬಳಿಯ ಕುದಿಂಗಿಲ ಕಟ್ಟದಕೋರಿಕ್ಕಾರು ನಿವಾಸಿ  ಸುಬ್ಬ ಮಣಿಯಾಣಿ (53) ನಿಧನಹೊಂದಿದರು. ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ರಾತ್ರಿ ಅಲ್ಲಿ ನಿಧನ ಸಂಭವಿಸಿದೆ. ಸುಬ್ಬ ಮಣಿಯಾಣಿ ಈ ಹಿಂದೆ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದರು. ಅನಂತರ ಸ್ವಲ್ಪ ಕಾಲ ಬದಿಯಡ್ಕ ಪೇಟೆಯಲ್ಲಿ ಹೂವು ಮಾರಾಟ ನಡೆಸುತ್ತಿ ದ್ದರು. ಮೃತರು ಪತ್ನಿ  ಸಾವಿತ್ರಿ, ಸಹೋದರ ಕೃಷ್ಣ ಮಣಿಯಾಣಿ, ಸಹೋದರಿಯರಾದ ಲೀಲಾವತಿ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಸಾವರ್ಕರ್ ಹೆಸರಿನಲ್ಲಿನ ರಸಪ್ರಶ್ನೆ: ಅಧ್ಯಾಪಕ ಗುರುಪ್ರಸಾದ್‌ರ ಅಮಾನತಿಗೆ ಹೈಕೋರ್ಟ್ ತಡೆಯಾಜ್ಞೆ

ಕೊಚ್ಚಿ: ಶಾಲಾ ರಸಪ್ರಶ್ನೆ ಸ್ಪರ್ಧೆಗಾಗಿ ವಿ.ಡಿ. ಸಾವರ್ಕರ್ ಹೆಸರಿನ ಪ್ರಶ್ನೆ ಸಿದ್ಧಪಡಿಸಿದ ಘಟನೆಯಲ್ಲಿ ಅಧ್ಯಾಪಕನನ್ನು ಅಮಾನತುಗೊಳಿಸಿದ ಸರಕಾರದ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಒಂದು ತಿಂಗಳ ವರೆಗೆ ಈ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಒಂದು ತಿಂಗಳೊಳಗೆ ತನಿಖೆ ಪೂರ್ತಿಗೊಳಿಸಿ ಅಧ್ಯಾಪಕನ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆಯೆಂದು ನ್ಯಾಯಾಲಯ ನಿರ್ದೇಶ ನೀಡಿದೆ. ಅದರೆ ತುರ್ತು ಶಿಸ್ತುಕ್ರಮ ಮುಂದುವರಿಸಬಹುದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪಳ್ಳತ್ತಡ್ಕ ಎಯುಪಿ ಶಾಲೆಯ ಅಧ್ಯಾಪಕನಾಗಿರುವ ಗುರುಪ್ರಸಾದ್ ನೀಡಿದ ಅರ್ಜಿ ಪರಿಗಣಿಸಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಎಇಒರ …