ಪೆರುಂಬಳದಲ್ಲಿ ಕಾರು-ರಿಕ್ಷಾ ಢಿಕ್ಕಿ: 6 ಮಂದಿಗೆ ಗಾಯ

ಕಾಸರಗೋಡು: ಪೆರುಂಬಳದಲ್ಲಿ ನಿನ್ನೆ ಮಧ್ಯಾಹ್ನ ಕಾರು ಮತ್ತು ರಿಕ್ಷಾ ಢಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಆಲಂಪಾಡಿ ನಿವಾಸಿಗಳಾದ ಪ್ರಜಿನ (36), ಹಾಜಿರ 55), ಶಮೀರ (35), 2 ವರ್ಷದ ಮಗು ಹಾಗೂ ರಿಕ್ಷಾ ಚಾಲಕ ಆಲಂಪಾಡಿಯ ಅಬ್ದುಲ್ ಖಾದರ್ (55) ಎಂಬವರು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಶಾಲೆ ಸಮೀಪ ಅಪಾಯಭೀತಿಯೊಡ್ಡುವ ಮರ

ಪೆರ್ಲ: ಶಾಲೆಯ ಪರಿಸರದಲ್ಲಿ ಬೃಹತ್ ಮರವೊಂದು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿದ್ದು, ಇದರಿಂದ ವಿದ್ಯಾರ್ಥಿಗಳ ಸಹಿತ ಸ್ಥಳೀಯರಿಗೆ ಆತಂಕ ಸೃಷ್ಟಿಸಿದೆ.ಉಕ್ಕಿನಡ್ಕ ಎಲ್‌ಪಿ ಶಾಲೆಯ ಗೇಟ್ ಸಮೀಪ ಅಪಾಯಭೀತಿ ಸೃಷ್ಟಿಸುವ ಅಕೇಶಿಯ ಮರಗಳಿವೆ.  ಮಾತ್ರವಲ್ಲದೆ ಈ ಪರಿಸರದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದೆ. ಮರಗಳು ಮುರಿದು ಬಿದ್ದರೆ ಅಪಾಯ ಖಚಿತವೆಂದು ಸ್ಥಳೀಯರು ಹೇಳುತ್ತಿದ್ದಾರೆ.ಶಾಲಾ ವಿದ್ಯಾರ್ಥಿಗಳ ಸಹಿತ ಹಲವರು ಈ ಮರಗಳ ಸಮೀಪದ ರಸ್ತೆಯಲ್ಲಿ ನಡೆದು ಹೋಗತ್ತಿದ್ದಾರೆ.   ಧಾರಾಕಾರ ಮಳೆ ಸುರಿಯುವ ವೇಳೆ ಒಣಗಿದ ಮರ ಮುರಿದು ಬಿದ್ದರೆ ಅಪಾಯ …

ಕುಂಬಳೆ ಆಟೋರಿಕ್ಷಾ ಕಾರ್ಮಿಕರಿಗೆ ಪಂಚಾಯತ್  ಕಿರುಕುಳ ಕೊನೆಗೊಳಿಸಬೇಕು- ಬಿಎಂಎಸ್

ಕುಂಬಳೆ: ಆಟೋರಿಕ್ಷಾ ಮಜ್ದೂರ್ ಸಂಘ ಕುಂಬಳೆ ಯೂನಿಟ್ ಸಭೆ ಕುಂಬಳೆ ಜಯ ಮಾರುತಿ ವ್ಯಾಯಾಮ ಶಾಲೆಯಲ್ಲಿ ಸಮಿತಿ ಉಪಾಧ್ಯಕ್ಷ ಸುನಿಲ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂಬಳೆ ನಗರದಲ್ಲಿ ಪದೇ ಪದೇ ಬಸ್ ನಿಲ್ದಾಣವನ್ನು ಬದಲಾವಣೆ ಮಾಡಿ ಜನರಿಗೆ ಹಾಗೂ ಆಟೋ ಕಾರ್ಮಿಕರಿಗೆ ತೊಂದರೆ ಕೊಡುವುದನ್ನು ಕೊನೆಗೂಳಿಸಬೇಕು ಹಾಗೂ ಕುಂಬಳೆ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗುವುದÀಕ್ಕೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಕುಂಬಳೆ ನಗರದಲ್ಲಿ ಶಾಶ್ವತವಾದ ಸುಸಜಿgತ ಬಸ್ ನಿಲ್ದಾಣ ಇಲ್ಲದೆ ಪ್ರಯಾಣೆಕರು ಕಷ್ಟಪಡುತ್ತಿರುವಾಗ …

ಮದ್ಯ ಸಾಗಿಸುತ್ತಿದ್ದ ಕಾರು ರಸ್ತೆಯ ಚರಂಡಿಗೆ ಬಿದ್ದು ಅಪಘಾತ: ಚಾಲಕ ಸೆರೆ

ಉಪ್ಪಳ: ಕರ್ನಾಟಕದಿಂದ ಮದ್ಯ ಸಾಗಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಚರಂಡಿಗಾಗಿ ತೆಗೆದ ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ.  ವಿಷಯ ತಿಳಿದು ಅಲ್ಲಿಗೆ ತಲುಪಿದ ಪೊಲೀ ಸರು   ಚಾಲಕನನ್ನು  ಸೆರೆಹಿಡಿದು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 11.20 ರ ವೇಳೆ ಉಪ್ಪಳ ಗೇಟ್ ಬಳಿ ಈ ಘಟನೆ ನಡೆದಿದೆ. ಕಾರಿನಿಂದ ಕರ್ನಾಟಕ ನಿರ್ಮಿತ 180 ಎಂಎಲ್‌ನ 1483 ಬಾಟ್ಲಿ ಮದ್ಯ, 90 ಎಂಎಲ್‌ನ 763 ಬಾಟ್ಲಿ ಮದ್ಯ ಪತ್ತೆಯಾಗಿದೆ. ಈ ಸಂಬಂಧ ಕಾರು ಚಾಲಕ ಕುಳೂರು ಚಾರ್ಲ …

25 ಲೀಟರ್ ಕರ್ನಾಟಕ ಮದ್ಯ ಸಹಿತ ಸ್ಕೂಟರ್ ವಶ

ಕುಂಬಳೆ: ಕೊಪಾಡಿ ಕುಂಟಂಗೇರಡ್ಕದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 25.92 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ವೇಳೆ ಅದನ್ನು ಸಾಗಿಸುತ್ತಿದ್ದ ವ್ಯಕ್ತಿ ತಪ್ಪಿಸಿಕೊಂಡಿದ್ದು, ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿಷ್ಣು ಪ್ರಕಾಶ್‌ರ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್ ವಿ., ಶಿಜಿತ್ ಪಿ.ವಿ, ಚಾಲಕ ಕ್ರಿಸ್ಟಿನ್ ಪಿ.ಎ. ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ …

ಆಪರೇಶನ್ ತೂಫಾನ್: ಶಾಲಾ ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆಗಳನ್ನು ಪೂರೈಸುವ ಯುವಕ ಸೆರೆ

ಕಾಸರಗೋಡು: ಶಾಲಾ ವಿದ್ಯಾರ್ಥಿಗಳಿಗೆ  ಮಾದಕ ಮಾತ್ರೆಗಳನ್ನು ಪೂರೈಸುತ್ತಿದ್ದ ಯುವಕನನ್ನು ಮೇಲ್ಪರಂಬ ಠಾಣೆಯ ಎಸ್‌ಐ ಪಿ.ಕೆ. ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಉತ್ತರಪ್ರದೇಶದ ಅಂರೊಬಾ ದ್ವಾರ್ಸಿ ನಿವಾಸಿ ಮೊಹಮ್ಮದ್ ನಸೀರ್ (19) ಬಂಧಿತ ಆರೋಪಿ. ಕಳನಾಡಿನ  14ರ ಹರೆಯದ ವಿದ್ಯಾರ್ಥಿಗೆ ಮಾದಕಮಾತ್ರೆಗಳನ್ನು ನೀಡುತ್ತಿದ್ದ ವೇಳೆ ಆರೋಪಿಯನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಮಾದಕದ್ರವ್ಯ ದಂಧೆಯನ್ನು ಪತ್ತೆಹಚ್ಚಿ ಅದನ್ನು ಬೇರು ಸಹಿತ ಕಿತ್ತು ಹಾಕಲು ರಾಜ್ಯ ಗೃಹ ಇಲಾಖೆ ರಾಜ್ಯಾದ್ಯಂತ  ನಿನ್ನೆಯಿಂದ ಆರಂಭಿಸಿರುವ ‘ತೂಫಾನ್ …

ಹೋಟೆಲ್ ಮಾಲಕ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕಾಸರಗೋಡು ನಗರದ ಎಸ್‌ವಿಟಿ ಕ್ರಾಸ್ ರೋಡ್‌ನಲ್ಲಿ ಗಣೇಶ್ ಕೃಪಾದ  ಮೋಹನ್‌ದಾಸ್ ಕಾಮತ್ (65) ನಿಧನಹೊಂದಿದರು. ಇಂದು ಬೆಳಿಗ್ಗೆ ಮನೆಯಲ್ಲಿ ಕುಸಿದುಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು  ಕಾಸರಗೋಡು ಬೀಚ್ ರೋಡ್‌ನಲ್ಲಿ ಶ್ರೀರಾಂ ಲಂಚ್ ಹೋಂನ ಮಾಲಕರಾಗಿದ್ದಾರೆ. ದಿವಂಗತರಾದ ಅಪ್ರಾಯಿ ಕಾಮತ್-ಶಾಂತಾಬಾಯಿ ದಂಪತಿಯ ಪುತ್ರನಾದ ಮೃತರು  ಪತ್ನಿ ಪದ್ಮಾ ಕಾಮತ್, ಮಕ್ಕಳಾದ ವಿಘ್ನೇಶ್(ಬೆಂಗಳೂರು), ವಿನುತ (ಮಂಗಳೂರು), ಅಳಿಯ ಯೋಗೀಶ್, ಸೊಸೆ ಸ್ವಾತಿ, ಸಹೋದರ-ಸಹೋದರಿಯರಾದ ಚಿತ್ರಾ ಭಂಡಾರಿ,ಶ್ರೀಮತಿ ಶೆಣೈ,ಮಾಲತಿ ಪ್ರಭು, ಗಣೇಶ್ ಕಾಮತ್ ಹಾಗೂ …

ಆಪರೇಷನ್ ತಂಡರ್’ ಶಾಲಾ ಪರಿಸರದ ಅಂಗಡಿಗಳಿಗೆ ಅಬಕಾರಿ ತಂಡದಿಂದ ಮಿಂಚಿನ ದಾಳಿ

ಕಾಸರಗೋಡು: ಹೊಸ ಶೈಕ್ಷಣಿಕ ವರ್ಷ ನಿನ್ನೆ ಆರಂಭಗೊಂಡಿರು ವಂತೆಯೇ ಶಾಲಾ ಪರಿಸರಗಳಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಇತ್ಯಾದಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆಯೇ, ಎಂಬುದನ್ನು ಪತ್ತೆಹಚ್ಚಲು ‘ಆಪರೇಷನ್ ತಂಡರ್’ ಯೋಜನೆಯಂತೆ ಅಬಕಾರಿ ಇಲಾಖೆಯ ಗುಪ್ತಚರ ವಿಭಾಗದವರು ಜಿಲ್ಲೆಯ ಎಲ್ಲಾ ಶಾಲಾ ಪರಿಸರಗಳ ಅಂಗಡಿಗಳಿಗೆ ನಿನ್ನೆಯಿಂದ ದಾಳಿ ಮತ್ತು ತಪಾಸಣೆ ಆರಂಭಿಸಿದ್ದಾರೆ. ಇದರಂತೆ ಅಬಕಾರಿ ಗುಪ್ತಚರ ವಿಭಾಗದ ಇನ್ಸ್‌ಪೆಕ್ಟರ್ ಸುಬಿನ್‌ರಾಜ್ ನೇತೃತ್ವದ ಅಬಕಾರಿ ತಂಡ  ನಿನ್ನೆ ವ್ಯಾಪಕ ಕಾರ್ಯಾಚರಣೆ ನಡೆಸಿದರೂ, ಯಾವುದೇ ರೀತಿಯ ಅಮಲು ಪದಾರ್ಥಗಳು ಪತ್ತೆಯಾಗಲಿಲ್ಲ. ನೀಲೇಶ್ವರ …

ಕುಂಬಳೆ ಪೇಟೆ ರಸ್ತೆಯಲ್ಲಿರುವ ಬೀದಿ ದೀಪಗಳಿಂದ ಬೆಳಕಿಲ್ಲ: ಪ್ರಕಾಶಿಸುವಂತಾಗಲು ಅಧಿಕಾರಿಗಳಿಂದ ಕ್ರಮವಿಲ್ಲ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ವಿವಿಧೆಡೆ ಸ್ಥಾಪಿಸಿರುವ ಬೀದಿ ದೀಪಗಳಲ್ಲಿ ಹಲವು ಉರಿಯುತ್ತಿಲ್ಲ ಎಂಬ ಆರೋಪ ಹಲವು ಕಾಲದಿಂದ ಕೇಳಿ ಬರುತ್ತಿದ್ದರೂ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.  ಕುಂಬಳೆ ಪೇಟೆಯಲ್ಲಿ ಕುಂಬಳೆ ಸರ್ಕಲ್‌ನಿಂದ ಅನಿಲ್ ಕುಂಬ್ಳೆ  ರಸ್ತೆಯಲ್ಲಿರುವ ಒಟ್ಟು ೧೬ ಕಂಬಗಳಲ್ಲಿ ಬೀದಿ ದೀಪಗಳು ಸ್ಥಾಪಿಸಲಾಗಿದೆ.  ಈ ಪೈಕಿ ೮ ಕಂಬಗಳಲ್ಲಿರುವ  ಬೀದಿ ದೀಪಗಳು ಹಲವು ತಿಂಗಳಿಂದ ಉರಿಯುತ್ತಿಲ್ಲ. ಇದರಿಂದ ಇಷ್ಟು ಭಾಗದಲ್ಲಿ ರಾತ್ರಿ ಹೊತ್ತು ಕತ್ತಲೆ ಆವರಿಸಿ ಕೊಂಡಿರುತ್ತದೆ.  ಕುಂಬಳೆಯಲ್ಲಿ …

ಡಾ. ರಮಾನಂದ ಬನಾರಿ ಅಭಿನಂದನೆ : ನೀರ್ಚಾಲಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ

ನೀರ್ಚಾಲು: ಕಾಸರಗೋಡು ಸಹಿತ ಕರಾವಳಿ ಕರ್ನಾಟಕದ ಸಾಧಕ ಶ್ರೇಷ್ಠರ ಯಶೋಗಾಥೆಗಳ ಮರು ಓದುವಿಕೆ ಸ್ಪೂರ್ತಿದಾಯಕವಾದುದು. ಕಾಸರಗೋಡು ಗಡಿನಾಡನ್ನು ಸಾಂಸ್ಕೃತಿಕವಾಗಿ ಕರ್ನಾಟಕದೊಂದಿಗೆ ಬೆಸೆಯುವ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದವರಲ್ಲಿ ಡಾ.ರಮಾನಂದ ಬನಾರಿ ಪ್ರಮುಖರು. ಅವರ ೮೫ರ ವಸಂತದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಆ ಆಶಯ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಮೋಹನ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಕ.ಸಾ.ಪ ಕೇರಳ ಗಡಿನಾಡ ಘಟಕ, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ …