ಉಷ್ಣತೆ ಹೆಚ್ಚಿದಂತೆ ತೀವ್ರಗೊಂಡ ಹಾವುಗಳ ಹಾವಳಿ: 2 ದಿನಗಳಲ್ಲಾಗಿ ರಾಜ್ಯದಲ್ಲಿ ಬಾಲಕ ಸಹಿತ ಇಬ್ಬರು ಮೃತ್ಯು: ಓರ್ವನ ಸ್ಥಿತಿ ಗಂಭೀರ
ತಿರುವನಂತಪುರ: ರಾಜ್ಯ ವಿವಿಧೆಡೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಹಾವುಗಳ ಕಡಿತದಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೊನ್ನೆ ತೃಶೂರಿನಲ್ಲಿ ಎಂಟರ ಹರೆಯದ ಆಲ್ಜೋ ಎಂಬ ಬಾಲಕ ಹಾವಿನ ಕಡಿತದಿಂದ ಮೃತಪಟ್ಟಿದ್ದನು. ಅದರ ಬೆನ್ನಲ್ಲೇ ನಿನ್ನೆ ತಿರುವನಂತಪುರ ಕಾರೇಟ್ ಎಂಬಲ್ಲಿ ಹಾವಿನ ಕಡಿತದಿಂದ ಸುಧರ್ಮ (75) ಎಂಬವರು ಮೃತಪಟ್ಟಿದ್ದಾರೆ. ಸುಧರ್ಮ ನಿನ್ನೆ ಬೆಳಿಗ್ಗೆ ಮನೆಯ ಬಾವಿ ಸಮೀಪ ಗಿಡಗಳಿಗೆ ನೀರು ಹಾಯಿಸುತ್ತಿದ್ದಾಗ ಹಾವಿನ ಕಡಿತವುಂಟಾಗಿದೆ. ಬೊಬ್ಬೆ ಕೇಳಿದ ಮನೆಯವರು ತಕ್ಷಣ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಆದಿತ್ಯವಾರ ಮುಂಜಾನೆ …