ಮನೆಯೊಳಗೆ ಭಾರೀ ಪ್ರಮಾಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಮೈಸೂರು ಅರಮನೆಯಿಂದ ಕಳವುಗೈದ ಖಡ್ಗವೂ ಒಳಗೊಂಡ ಶಂಕೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚಿದ ಮನೆಯೊಂದರಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಪತ್ತೆಹಚ್ಚಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೇಕಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್, ಎಸ್‌ಐ ಸವ್ಯಸಾಚಿ ಎಂಬಿವರ ನೇತೃತ್ವದಲ್ಲಿ ಮನೆಯನ್ನು ತೆರೆದು ಪರಿಶೀಲಿಸಿದಾಗ ಪ್ರಾಚ್ಯ ವಸ್ತು ಸಂಗ್ರಹ ಪತ್ತೆಯಾಗಿದೆ. ಇದರಲ್ಲಿ ಕಂಚಿನ ಪಾತ್ರೆಗಳು, ಕಾಲ್ಗೆಜ್ಜೆಗಳು, ಖಡ್ಗಗಳು ಮೊದಲಾದ ಸಾಮಗ್ರಿಗಳು ಇವೆ. ಕೆಲವು ಸಾಮಗ್ರಿಗಳಲ್ಲಿ ಅರಬೀ ಅಕ್ಷರಗಳನ್ನು ಪತ್ತೆಹಚ್ಚಲಾಗಿದೆ. ಖಡ್ಗಗಳಲ್ಲಿ ಮೈಸೂರು ಅರಮನೆಯಿಂದ ಕಳವುಗೈದ ಖಡ್ಗವು ಇರುವುದಾಗಿ ಶಂಕಿಸಲಾಗಿದೆ. ಮನೆಗೆ …

ಬೇರಿಕೆ ಸಮುದ್ರ ಕಿನಾರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಳ: ಶಿರಿಯ ಬಳಿ ಬೇರಿಕೆ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದೆ. ಇಂದು ಬೆಳಿಗ್ಗೆ 7.30ರ ವೇಳೆ ಮೃತದೇಹ ಕಂಡು ಬಂದಿದೆ. ಈ ಬಗ್ಗೆ  ಸ್ಥಳೀಯರು ನೀಡಿದ ಮಾಹಿತಿಯಂತೆ ಕರಾವಳಿ ಪೊಲೀಸರು ತಲುಪಿ ಪರಿಶೀಲನೆ ನಡೆಸಿದರು. ಇದು ಗಂಡಸಿನ ಮೃತದೇಹವೆಂದು ಖಚಿತಗೊಂಡಿದ್ದು, ಸುಮಾರು 50 ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತದೇಹದಲ್ಲಿ ಕೆಂಪು ಬಣ್ಣದ ಅಂಗಿಯಿದೆ. ಸಾವಿಗೀಡಾಗಿ ಐದು ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತವ್ಯಕ್ತಿ ಯಾರೆಂದು ತಿಳಿಯಲು ಪ್ರಯತ್ನ ನಡೆಯುತ್ತಿದೆ. ಈ …

ಆಟೋ ಕಾರ್ಮಿಕ ಯೂನಿಯನ್‌ನ ಜಿಲ್ಲಾ ನೇತಾರ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಟೋರಿಕ್ಷಾ ಕಾರ್ಮಿಕ ಯೂನಿಯನ್ (ಐಎನ್‌ಟಿಯುಸಿ)ಯ ಜಿಲ್ಲಾ ಅಧ್ಯಕ್ಷ ವಿ.ವಿ. ಸುಧಾಕರನ್ (61) ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಇವರು ನೀಲೇಶ್ವರ ಕೊಟ್ರಚ್ಚಾಲ್ ನಿವಾಸಿ ಹಾಗೂ ಹೊಸದುರ್ಗ ಸಹಕಾರಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್‌ನ ಹೊಸದುರ್ಗ ಬ್ಲೋಕ್‌ನ ಮಾಜಿ ಕಾರ್ಯದರ್ಶಿಯೂ ಆಗಿದ್ದರು. ಇವರು ನಿನ್ನೆ ತಮ್ಮ ಸ್ನೇಹಿತರಿಗೆ ವಾಟ್ಸಪ್‌ನಲ್ಲಿ ‘ನನ್ನನ್ನು ಕ್ಷಮಿಸಿ, ನಿಮ್ಮೆಲ್ಲರ ಕ್ಷಮೆ ಯಾಚಿಸುವೆ’ ಎಂಬ ಸಂದೇಶ ರವಾನಿಸಿದ್ದರು. ಅದಾದ ಅರ್ಧ ಗಂಟೆಯ ಬಳಿಕ ಅವರು ಚಲಾಯಿಸುತ್ತಿದ್ದ ಆಟೋರಿಕ್ಷಾ ಪಡನ್ನಕ್ಕಾಡ್ ನಂಬ್ಯಾರ್‌ಕಲ್ ರಸ್ತೆ …

ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮೂರು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಣ್ಣೂರು ಧರ್ಮಡಂ ಮೀತ್ತಲ್ ಪೀಡಿಗ ನಿವಾಸಿ ಎನ್.ಕೆ. ಸಲ್ಮಾನ್ (26) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2020 ಜೂನ್ 2ರಂದು ಮುಂಜಾನೆ ಕುಂಬಳೆ- …

ವಿದ್ಯಾರ್ಥಿಯ ಕರ್ಣ ತಮಟೆಗೆ ಹಾನಿಗೊಂಡ ಪ್ರಕರಣ: ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯ ಕೆನ್ನೆಗೆ ಹೊಡೆದು ಕರ್ಣ ತಮ್ಮಟೆಗೆ ಹಾನಿ ಉಂಟಾದ ಘಟನೆಗೆ ಸಂಬಂಧಿಸಿ  ಪ್ರಸ್ತುತ ಶಾಲೆಯ ಮುಖ್ಯೋಪಾಧ್ಯಾಯ ಎಂ. ಅಶೋಕನ್ ವಿರುದ್ಧ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರ. ಘಟನೆಗೆ ಸಂಬಂಧಿಸಿ ಪೊಲೀಸರು ವಿದ್ಯಾರ್ಥಿಯ  ಮನೆಗೆ ಭೇಟಿ ನೀಡಿ ಆತನ ಹೇಳಿಕೆ ಸಂಗ್ರಹಿಸಿ ಬಳಿಕ ಪ್ರಕರಣ ದಾಖಲಿಸಿದ್ದಾರೆ.  ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ನೀಡಿದ ನಿರ್ದೇಶ ಪ್ರಕಾರ …

16ರ ಹರೆಯದ ಬಾಲಕಿ ನಾಪತ್ತೆ

ಬದಿಯಡ್ಕ:  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 16ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ  ದೂರಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಈ ತಿಂಗಳ 18ರಂದು  ರಾತ್ರಿಯಿಂದ ಬಾಲಕಿ ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಇದೇ ವೇಳೆ ಬಾಲಕಿ ಸಂಬಂಧಿಕನಾದ ಯುವಕನೊಂದಿಗೆ ತೆರಳಿರುವುದಾಗಿ ಸಂಶಯಿಸಲಾಗುತ್ತಿದೆಯೆಂದು ಹೇಳಲಾಗಿದೆ.

ನೀರ್ಚಾಲು ಬಳಿ ಬೀದಿ ನಾಯಿಗಳ ದಾಳಿ: ಮಗು ಸಹಿತ 6 ಮಂದಿಗೆ ಗಾಯ

ನೀರ್ಚಾಲು: ನೀರ್ಚಾಲು ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂಡಿ ದೆ. ನಿನ್ನೆ ಪುಟ್ಟ ಮಗು ಸಹಿತ ಆರು ಮಂದಿಗೆ ಬೀದಿ ನಾಯಿಗಳು ಕಡಿದು ಗಾಯಗೊಳಿಸಿವೆ. ನಿನ್ನೆ ಸಂಜೆ 5 ಗಂಟೆಗೆ ಏಣಿಯರ್ಪಿನಲ್ಲಿ ಬೀದಿ ನಾಯಿಗಳು ಜನರ ಮೇಲೆ  ದಾಳಿ ನಡೆಸಿವೆ. ಏಣಿಯರ್ಪು ನಿವಾಸಿ ಆಟೋ ಚಾಲಕ ಹರಿಹರನ್‌ರ ಪುತ್ರಿ ನವಣ್ಯ (3), ಬಿರ್ಮಿನಡ್ಕ ಅಂಗನವಾಡಿ ನೌಕರೆ ಜೋನ್ಸಿ ಯಾನೆ ಅಶ್ವತಿ (48) ಏಣಿಯರ್ಪು ಲೈಫ್ ವಿಲ್ಲಾದ ರಿಸ್ವಾನ (19), ಪುದುಕೋಳಿಯ ಶಾಂತಿ (10), ಚಂದ್ರನ್ (38), …

ಹೊಸಂಗಡಿ ಬಳಿ ಪತ್ತೆಯಾದ ರಕ್ತ ಮನುಷ್ಯರದ್ದಲ್ಲ

ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವು ದುರ್ಗಿಪಳ್ಳ ಪರಿಸರದಲ್ಲಿ ಇತ್ತೀಚೆಗೆ ಕಂಡುಬಂದ ರಕ್ತ ಮನುಷ್ಯರದ್ದಲ್ಲವೆಂದು ತಿಳಿದುಬಂದಿದೆ.  ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಇದು  ಪ್ರಾಣಿಯದ್ದಾಗಿದೆಯೆಂದು ತಿಳಿಸಲಾಗಿದೆ.  ದುರ್ಗಿಪಳ್ಳ ಪರಿಸರದ ಎರಡು ಅಂಗಡಿಗಳ ಮುಂದೆ ಇತ್ತೀಚೆಗೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಸುಳ್ಯ ನಿವಾಸಿಗೆ ಒಲಿದ ಕಾರುಣ್ಯ ಲಾಟರಿ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ ವಾದ ಒಂದು ಕೋಟಿ ರೂಪಾಯಿ ಒಲಿದಿರುವುದು  ಸುಳ್ಯ ತಾಲೂಕಿನ ಉಬರಡ್ಕ ನಿವಾಸಿಗಾಗಿದೆ. ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್  ಯಾವಟೆ ಅವರಿಗೆ ಈ ಬಹುಮಾನ ಬಂದಿದೆ. ಇವರು ಕಳೆದ ಶನಿವಾರ ಡ್ರಾ ನಡೆದ ಕಾರುಣ್ಯ ಲಾಟರಿ ಟಿಕೆಟ್ ಪಡೆದಿದ್ದರು. ಕಾಸರಗೋಡು ಮಧು ಲಾಟರಿ ಏಜೆನ್ಸೀಸ್‌ನ ಲಾಟರಿ ಟಿಕೆಟ್‌ನ್ನು  ಇವರು ಪಂಜಿಕಲ್ಲಿನಿಂದ ಖರೀದಿಸಿದ್ದರು. ಕೇರಳ ಲಾಟರಿ ಬಹು ಮಾನ ಈ ಹಿಂದೆಯೂ ಕರ್ನಾಟಕದ ಹಲವರಿಗೆ ಲಭಿಸಿರುತ್ತದೆ. ಇದೀಗ  ಮತ್ತೊಬ್ಬರಿಗೆ ಪ್ರಥಮ …

ಹೋಟೆಲ್ ವ್ಯಾಪಾರಿ ನಿಧನ

ಉಪ್ಪಳ: ಕೊಂಡೆವೂರು ಮಠ ಬಳಿಯ ನಿವಾಸಿ ಕೇಶವ (70) ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಮಂಗಲ್ಪಾಡಿ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದರು. ಕೊಂಡೆವೂರು ಶ್ರೀ ನಿತ್ಯಾನಂದ ಮಠದಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಶಾಂತ, ಮಕ್ಕಳಾದ ಪ್ರಶಾಂತ್, ಪ್ರಜಿತ, ಪವಿತ, ಸೊಸೆ ಮಮತಾ, ಅಳಿಯಂದಿರಾದ ಸುನಿಲ್ ಕಾಸರಗೋಡು, ಪ್ರಸನ್ನ ಕಾಞಂಗಾಡ್, ಸಹೋದರ ಭಾಸ್ಕರ ಪುಳಿಕುತ್ತಿ, ಸಹೋದರಿಯರಾದ ಸಾವಿತ್ರಿ, ನಳಿನಿ, ಶಾಂಭವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ನಾರಾಯಣ, ಸಹೋದರಿ ಲಕ್ಷಿ÷್ಮÃ …