ದೈವ ಕಲಾವಿದ ನಿಧನ
ಹೊಸದುರ್ಗ: ದೈವ ಕಲಾವಿದ ಮಾಂಙಾಡ್ ಅರಮಂಗಾನದ ಕೆ. ಚಂದ್ರನ್ (61) ನಿಧನ ಹೊಂದಿ ದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ರಂಜಿತ್, ರಂಜಿನಿ, ರಜೀಶ್, ರಜಿತ, ಅಳಿಯಂದಿರಾದ ಉಮೇಶ್, ಪ್ರಜಿಲ್, ಸೊಸೆ ರಜೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಹೊಸದುರ್ಗ: ದೈವ ಕಲಾವಿದ ಮಾಂಙಾಡ್ ಅರಮಂಗಾನದ ಕೆ. ಚಂದ್ರನ್ (61) ನಿಧನ ಹೊಂದಿ ದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ರಂಜಿತ್, ರಂಜಿನಿ, ರಜೀಶ್, ರಜಿತ, ಅಳಿಯಂದಿರಾದ ಉಮೇಶ್, ಪ್ರಜಿಲ್, ಸೊಸೆ ರಜೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಪೆರ್ಲ: ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸರಕಾರ, ಅಧಿಕಾರಿ ಗಳಿಗೆ ಕೇವಲ ಮನವಿ ಸಲ್ಲಿಸಿದರೆ ಮಾತ್ರ ನಮ್ಮ ಜವಾಬ್ದಾರಿ ಮುಗಿಯದು. ರಸ್ತೆ ಹೀನಾಯ ಸ್ಥಿತಿಯನ್ನು ಸರಕಾರಕ್ಕೆ ಗಮನಕ್ಕೆ ತಂದು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಿದರೂ ಪ್ರಯೋಜನ ವಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಬೇಕೆಂದು ಜಿಲ್ಲಾ ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ನುಡಿದರು. ಪೆರ್ಲ-ಸ್ವರ್ಗ ಅಂತಾರಾಜ್ಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ನಡೆದ ನಾಗರಿಕ ಕ್ರಿಯಾ ಸಮಿತಿ ರಚನೆ ಸಭೆಯಲ್ಲಿ ಅವರು …
ಕೊಚ್ಚಿ: ಬೈಕ್ ಖರೀದಿಗೆಂದು ತಲುಪಿದ ಯುವಕ ಸೆಕೆಂಡ್ ಸೇಲ್ ಶೋರೂಂನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೈಕ್ನೊಂದಿಗೆ ಪರಾರಿಯಾಗಿದ್ದಾನೆ. ಆಲುವಾ ಅಸೀಸ್ ಜಂಕ್ಷನ್ನ ಫೋರ್ ವ್ಹೀಲ್ ಡ್ರೈವ್ ಎಂಬ ಸಂಸ್ಥೆಯಿಂದ ಕಳವು ನಡೆಸಲಾಗಿದೆ. ಟೆಸ್ಟ್ರೈಡ್ಗೆಂದು ನೀಡಿದ ಬೈಕ್ನೊಂದಿಗೆ ಯುವಕ ವೇಗದಲ್ಲಿ ಸಂಚರಿಸಿ ಪರಾರಿಯಾಗಿ ದ್ದನೆನ್ನ ಲಾಗಿದೆ. ಗಂಟೆಗಳು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಈತ ಕಳ್ಳನಾಗಿರಬೇಕೆಂದು ಶೋರೂಂ ನೌಕರರು ತಿಳಿದುಕೊಂಡರು. ಮಾರುಕಟ್ಟೆಯಲ್ಲಿ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಬೆಲೆಬಾಳುವ ಬಜಾಜ್ ಕಂಪೆನಿಯ ಡೋಮಿ ನಾರ್ ಬೈಕ್ ಈತ ಅಪಹರಿಸಿದ್ದಾನೆ. …
Read more “ಬೈಕ್ ಖರೀದಿ ನೆಪದಲ್ಲಿ ಶೋರೂಂಗೆ ತಲುಪಿ ಬೈಕ್ನೊಂದಿಗೆ ಪರಾರಿಯಾದ ಯುವಕ”
ತಲಪಾಡಿ: ಮಸೀದಿಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಉಸ್ತಾದ್ರ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜನಾಡಿ, ಮಂಗಳಂದಿಯ ಮೊಹಮ್ಮದ್ ಅಶ್ರಫ್ ಮಾಲಿಕಿ (45)ರ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆಯಾಗಿದೆ. ಮಸೀದಿಗೆ ತೆರಳುತ್ತಿರುವುದಾಗಿ ತಿಳಿಸಿ ಇವರು ಮಂಗಳವಾರ ಸಂಜೆ ಮನೆಯಿಂದ ಹೊರಟಿದ್ದರು. ರಾತ್ರಿಯಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಸಂಬಂಧಿಕರು ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದರಾದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಮಧ್ಯೆ ನಿನ್ನೆ ಬೆಳಿಗ್ಗೆ ಇವರ ಸ್ಕೂಟರ್ ಗುರುಪುರ ಸೇತುವೆಯ ಬಳಿಯಲ್ಲಿ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ …
Read more “ಮಸೀದಿಗೆ ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರಟ ಉಸ್ತಾದ್ರ ಮೃತದೇಹ ಹೊಳೆಯಲ್ಲಿ ಪತ್ತೆ”
ಬದಿಯಡ್ಕ: ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ವೇಳೆ ಕುಸಿದುಬಿದ್ದು ಮುಸ್ಲಿಂ ಲೀಗ್ ಮುಖಂಡ ಮೃತಪಟ್ಟ ಘಟನೆ ನಡೆದಿದೆ. ಚೆಂಗಳ ಪಂಚಾಯತ್ ಮಾಜಿ ಸದಸ್ಯ, ಪಂಚಾಯತ್ ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿ ಸದಸ್ಯ, ನೆಕ್ರಾಜೆ ನಿವಾಸಿ ಕೆ.ಎನ್. ಬಡುವನ್ ಕುಂಞಿ (66) ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ನಮಾಜಿಗೆಂದು ಮಸೀದಿಗೆ ತೆರಳುತ್ತಿದ್ದಾಗ ಕುಸಿದುಬಿದ್ದಿದ್ದು, ಕೂಡಲೇ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿ ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಪತ್ನಿ ಆಯಿಶಾ, ಮಕ್ಕಳಾದ ಸಿರಾಜ್, ಅನೈಸ್, ಸಾಬಿರ, ಸುಮಯ್ಯ, ಸಬೀನ, ಸೊಸೆಯಂದಿರಾದ ಬುಶ್ರಾ, …
Read more “ಮಸೀದಿಗೆ ನಮಾಜಿಗೆಂದು ತೆರಳುತ್ತಿದ್ದ ಮುಸ್ಲಿಂ ಲೀಗ್ ನೇತಾರ ಕುಸಿದುಬಿದ್ದು ನಿಧನ”
ಬಾಯಾರು: ಮುಳಿಗದ್ದೆ-ಬೆರಿಪದವು ರಸ್ತೆಯ ಬದಿಯಾರ್ನಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾಕ್ಕೆ ಹಾನಿ ಉಂಟಾದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಸುಮಾರು 10.45ರವೇಳೆ ರಸ್ತೆ ಬದಿಯಲ್ಲಿರುವ ಬೃಹತ್ ಮರವೊಂದು ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಈ ವೇಳೆ ಮುಳಿಗದ್ದೆ ಭಾಗಕ್ಕೆ ತೆರಳುವ ಬಾಯಾರು ಪದವು ಆಟೋ ನಿಲ್ದಾಣದ ಆರೀಫ್ ಎಂಬವರ ಆಟೋರಿಕ್ಷಾಕ್ಕೆ ಹಾನಿ ಉಂಟಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ತಂತಿ ಚೆಲ್ಲಾಪಿಲ್ಲಿಗೊಂಡು …
Read more “ಮರ ಬಿದ್ದು ವಿದ್ಯುತ್ ಕಂಬ, ಆಟೋರಿಕ್ಷಾಕ್ಕೆ ಹಾನಿ: ಸಂಚಾರಕ್ಕೆ ಅಡಚಣೆ”
ಕುಂಬಳೆ: ಭಾರೀ ಗಾಳಿ, ಮಳೆಗೆ ಬಂದ್ಯೋಡು ಶಿರಿಯದಲ್ಲಿ ಮನೆಯೊಂದು ಕುಸಿದಿದೆ. ಇದರಿಂದ ದಂಪತಿಗಳಿಗೆ ಗಾಯವುಂಟಾಗಿದೆ. ಶಿರಿಯ ಉನ್ನತಿಯ ತಿರುಮಲೇಶ್ ಹಾಗೂ ಪತ್ನಿ ಗಾಯಗೊಂಡವರು. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ಈ ಪರಿಸರದಲ್ಲಿ ಬಲವಾಗಿ ಬೀಸಿದ ಸುಳಿಗಾಳಿಗೆ ಹಾಗೂ ಭಾರೀ ಮಳೆಗೆ ತಿರುಮಲೇಶರ ಹೆಂಚು ಹಾಸಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಈ ವೇಳೆ ದಂಪತಿ ಮನೆಯೊಳಗಿದ್ದರು. ಪತ್ನಿಯ ಕಾಲಿಗೆ ಗಾಯವುಂಟಾಗಿದೆ. ಇವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸುವಾಗ ತಿರುಮಲೇಶರ ತಾಯಿ ಹಾಗೂ …
Read more “ತೀವ್ರ ಗಾಳಿ, ಮಳೆ: ಬಂದ್ಯೋಡು ಶಿರಿಯದಲ್ಲಿ ಮನೆ ಕುಸಿದು ದಂಪತಿಗೆ ಗಾಯ”
ಹೊಸದುರ್ಗ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಬೆಲೆಬಾಳುವ ದಾಖಲೆಗಳು ಅಡಕವಾದ ಪರ್ಸ್ 8ನೇ ತರಗತಿ ವಿದ್ಯಾರ್ಥಿ ವಾರೀಸು ದಾರನಿಗೆ ಹಸ್ತಾಂತರಿಸಿದನು. ನೀಲೇಶ್ವರ ಪರಿಪ್ಪುವಡ ವಿಭವ ಶಾಲಾ ಬಳಿಯಿಂದ 15ರಷ್ಟು ದಾಖಲೆಪತ್ರಗಳು ಅಡಕವಾಗಿರುವ ಪರ್ಸ್ ಛಾಯೋತ್ತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಹಾಗೂ ಶಾಲೆಯ ಎನ್ಸಿಸಿ ಕೆಡೆಟ್ ಪಾಲಾ ನಿವಾಸಿ ದ್ರುಪದ್ನಿಗೆ ಬಿದ್ದು ಸಿಕ್ಕಿತ್ತು. ದಾಖಲೆಪತ್ರಗಳು ಅಡಕವಾಗಿರುವ ಈ ಪರ್ಸ್ನ್ನು ದ್ರುಪದ್ ಕೂಡಲೇ ನೀಲೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದನು. ತನಿಖೆಯಲ್ಲಿ ಪರ್ಸ್ನ ವಾರೀಸುದಾರ ಪಾಲಕ್ಕಾಡ್ …
Read more “ಬಿದ್ದು ಸಿಕ್ಕಿದ ಪರ್ಸ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ 8ನೇ ತರಗತಿ ವಿದ್ಯಾರ್ಥಿ”
ಕುಂಬಳೆ: ಪಂಚಾಯತ್ ಹಾಗೂ ಪೊಲೀಸರು ಕುಂಬಳೆ ಪೇಟೆಯೊಂದಿಗೆ ತೋರುವ ಅವಗಣನೆಯನ್ನು ಪ್ರತಿಭಟಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್ವಿಂಗ್ ತೀವ್ರ ಆಂದೋಲನಕ್ಕೆ ನೇತೃತ್ವ ನೀಡಲಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೋರಾಟದ ಮೊದಲ ಹಂತವಾಗಿ ಈ ತಿಂಗಳ 6ರಂದು ಬೆಳಿಗ್ಗೆ 10 ಗಂಟೆಗೆ ಪಂಚಾಯತ್ ಕಚೇರಿಗೆ ವ್ಯಾಪಾರಿಗಳು ಮಾರ್ಚ್ ನಡೆಸುವರು. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸುವರು. ರಾಜೇಶ್ ಮನಯತ್ ಅಧ್ಯಕ್ಷತೆ …
Read more “ಕುಂಬಳೆ ಪಂಚಾಯತ್ ನಿರ್ಲಕ್ಷ್ಯ ವಿರುದ್ಧ ವ್ಯಾಪಾರಿಗಳಿಂದ 6ರಂದು ಮಾರ್ಚ್”
ಉಪ್ಪಳ: ಹಿಂದೂ ಕಾರ್ಯಕರ್ತನ ಮೃತದೇಹವನ್ನು ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಸಂಸ್ಕರಿಸಲಾಯಿತೆಂಬ ವರದಿಗಳ ಹಿನ್ನೆಲೆಯಲ್ಲಿ ಕೊಂಡೆವೂರು ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಂಗಲ್ಪಾಡಿ ಸೇವಾ ಭಾರತಿ ಸ್ಪಷ್ಟೀಕರಣ ನೀಡಿದೆ. ನಿನ್ನೆ ಕೊಂಡೆವೂರು ಆಶ್ರಮದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ. ಮೃತ ನಾರಾಯಣರ ಮೃತದೇಹವನ್ನು ಸಂಸ್ಕರಿಸಲು ಶೇಖ್ ಜಾಯಿದ್ ವೃದ್ಧಾಶ್ರಮದ ಸಂಚಾಲಕ ಇಕ್ಬಾಲ್ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಆಶ್ರಮದ ಕಡೆಯಿಂದ ಮಂಗಲ್ಪಾಡಿ ಸೇವಾ ಭಾರತಿಯ ಅಧ್ಯಕ್ಷ ರಘು ಚೆರುಗೋಳಿಯವರಿಗೆ ಜವಾಬ್ದಾರಿ ನೀಡಲಾಗಿತ್ತು. ಇದರಂತೆ ಜೂನ್ ೨೬ರಂದು ಮಧ್ಯಾಹ್ನ …
Read more “ಅನಾಥ ಮೃತದೇಹದ ಅಂತ್ಯ ಸಂಸ್ಕಾರ: ಕೊಂಡೆವೂರು ಶ್ರೀಗಳಿಂದ ಸ್ಪಷ್ಟೀಕರಣ”
You cannot copy contents of this page