ನಗರದ ಬಾರ್ ಬಳಿ ಯುವಕರ ಮಧ್ಯೆ ಘರ್ಷಣೆ: ಎರಡು ಕೇಸು ದಾಖಲು

ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಮದ್ಯ ಬಾರ್‌ಬಳಿ ಯುವಕರ ಮಧ್ಯೆ ಘರ್ಷಣೆ ನಡೆದು ಅದರಲ್ಲಿ ಓರ್ವ ಇರಿತಕ್ಕೊಳಗಾಗಿದ್ದು ಇನ್ನೋರ್ವ  ಗಾಯಗೊಂಡ ಘಟನೆ ಮೊನ್ನೆ ರಾತ್ರಿ ನಡೆದಿದೆ. ಈ ಘರ್ಷಣೆಯಲ್ಲಿ ತಿರುವನಂತಪುರ ಬಾಲರಾಮಪುರ ನಿವಾಸಿ ತೌಫೀಕ್ ಮತ್ತು ಕಾಸರಗೋಡು ನೆಲ್ಕಳ ಹೌಸ್‌ನ ರಿಜೇಶ್ ಕೆ.ಆರ್ ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ತೌಫೀಕ್‌ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ  ಕಾಸರಗೋಡು ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ರಿಜೇಶ್ ನೀಡಿದ ದೂರಿನಂತೆ ಕಂಡಲ್ಲಿ ಗುರುತುಹಚ್ಚಲು …

ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕುಬಣೂರು ನಿವಾಸಿ ರಮೇಶ್ (49) ಎಂಬಾತನನ್ನು ಕುಂಬಳೆ ಎಸ್‌ಐ ಶ್ರೀಜೇಶ್ ಕೆ ಬಂಧಿಸಿದ್ದಾರೆ. ಆರೋಪಿಯ ಕೈಯಿಂದ ಕರ್ನಾಟಕ ನಿರ್ಮಿತ 8 ಬಾಟ್ಲಿ ಹಾಗೂ 34 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ಇವುಗಳನ್ನು ಚೀಲದಲ್ಲಿ ತುಂಬಿಸಿ ಆರೋಪಿ ಮಾರಾಟ ಕ್ಕಾಗಿ ಕೊಂಡೊಯ್ಯುತ್ತಿದ್ದ ವೇಳೆ ಕುಬ ಣೂರು ಶಾಂತಿಗುರಿಯಿಂದ ವಶಪಡಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಇಬ್ಬರಿಗೆ ರಾಷ್ಟ್ರಪತಿ ಪೊಲೀಸ್ ಮೆಡಲ್

ಕಾಸರಗೋಡು: ರಾಷ್ಟ್ರಪತಿಯವರ ಪೊಲೀಸ್ ಮೆಡಲ್‌ಗೆ ಕಾಸರಗೋಡು ಜಿಲ್ಲೆಯಿಂದ ಇಬ್ಬರು ಆಯ್ಕೆಗೊಂಡಿದ್ದಾರೆ. ಮಾಜಿ ಅಡಿಶನಲ್  ಎಸ್‌ಪಿ ಹಾಗೂ ಕಣ್ಣೂರು ರಾಜ್ಯ ಕ್ರೈಂ ಬ್ರಾಂಚ್ ಎಸ್ಪಿಯಾದ  ಪಿ. ಬಾಲಕೃಷ್ಣನ್ ನಾಯರ್, ಕಲ್ಲಿಕೋಟೆ ರೂರಲ್ ಕ್ರೈಂಬ್ರಾಂಚ್ ಡಿವೈಎಸ್ಪಿ ಯು. ಪ್ರೇಮನ್ ಎಂಬವರು ಮೆಡಲ್‌ಗೆ ಅರ್ಹರಾಗಿದ್ದಾರೆ.  ಬೇಕಲ ಪಾಲಕುನ್ನು ನಿವಾಸಿಯಾದ ಪಿ. ಬಾಲಕೃಷ್ಣನ್ ನಾಯರ್ ಇತ್ತೀಚೆಗೆ ಕಣ್ಣೂರು ಕ್ರೈಂ ಬ್ರಾಂಚ್ ಎಸ್ಪಿಯಾಗಿ ಅಧಿಕಾರ  ವಹಿಸಿಕೊಂಡಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವ ಯು. ಪ್ರೇಮನ್ ಕಾಞಂಗಾಡ್ ಚೆಮ್ಮಟಂವಯಲ್ ನಿವಾಸಿಯಾಗಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ 25.92 ಲೀಟರ್ ಮದ್ಯ ವಶ: ಆರೋಪಿ ಪರಾರಿ

ಕಾಸರಗೋಡು: ಕೂಡ್ಲು ಸೂರ್ಲಿನಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜನ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕರ್ನಾಟಕ ರಾಜ್ಯ ನೋಂದಾ ಯಿತ ಆಲ್ಟೋ ಕಾರಿನಲ್ಲಿ ಸಾಗಿಸು ತ್ತಿದ್ದ 25.92ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ವೇಳೆ  ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿರುವುದಾಗಿಯೂ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು  ತಿಳಿಸಿದ್ದಾರೆ. ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಇ.ಇ ಆಂಡ್ ಎಎನ್‌ಎಸ್‌ಎಸ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ …

ಮುಂದುವರಿಯುತ್ತಿರುವ ಹಿರಿಯ ವಿದ್ಯಾರ್ಥಿಗಳ ಅಕ್ರಮ: ಆದೂರು, ಕಾಸರಗೋಡು, ಮೇಲ್ಪರಂಬ ಠಾಣೆಗಳಲ್ಲಿ ಕೇಸು ದಾಖಲು; ಹೆತ್ತವರು, ಶಾಲಾ ಅಧಿಕಾರಿಗಳು ಆತಂಕದಲ್ಲಿ

ಕಾಸರಗೋಡು: ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದ ಕಿರಿಯ ವಿದ್ಯಾರ್ಥಿಗಳಿಗೆ ಗಾಯಗೊಳ್ಳುತ್ತಿರುವ ಘಟನೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಿದ್ದ ಬೆನ್ನಲ್ಲೇ ಪರವನಡ್ಕದಲ್ಲೂ ಇದೇ ರೀತಿಯ ಅಕ್ರಮ ಸಂಭವಿಸಿದೆ. ಪರವನಡ್ಕದಲ್ಲಿ ಕಾರ್ಯಾಚರಿಸುವ ಚೆಮ್ಮನಾಡ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾದ ಕೋಳಿಯಡ್ಕ ನಿವಾಸಿ 15ರ ಬಾಲಕನಿಗೆ ಆಕ್ರಮಿಸಲಾಗಿದೆ. ಮಂಗಳವಾರ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳಲೆಂದು ಬಸ್ ನಿಲ್ದಾಣಕ್ಕೆ ತಲುಪಿದಾಗ ಹಿರಿಯ ವಿದ್ಯಾರ್ಥಿಗಳ ತಂಡವೊಂದು ಆಕ್ರಮಿಸಿರುವುದಾಗಿ ವಿದ್ಯಾರ್ಥಿಯ ಸಹೋದರ ತಿಳಿಸಿದ್ದಾರೆ. ಕಣ್ಣು ಹಾಗೂ ಮುಖಕ್ಕೆ ಗಾಯಗೊಂಡ ವಿದ್ಯಾರ್ಥಿಯನ್ನು …

ಕೇಂದ್ರ ಸಚಿವ ಸುರೇಶ್‌ಗೋಪಿ ಕಚೇರಿಗೆ ದಾಳಿ: ವ್ಯಾಪಕ ಪ್ರತಿಭಟನೆ ಜಿಲ್ಲೆಯ ಮತದಾರ ಯಾದಿಯನ್ನು ಪರಿಶೀಲಿಸಬೇಕು-ಬಿಜೆಪಿ

ಕಾಸರಗೋಡು:  ಕೇಂದ್ರ ಸಚಿವ ಸುರೇಶ್ ಗೋಪಿಯವರ ತೃಶೂರಿನಲ್ಲಿ ರುವ ಎಂ.ಪಿ. ಕಚೇರಿಯ ನಾಮಫಲಕಕ್ಕೆ ಕರಿ ಆಯಿಲ್ ಸುರಿದು ವಿಕೃತಗೊಳಿಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ನಿನ್ನೆ ಜಿಲ್ಲೆಯಾದ್ಯಂತ ಹಲವೆಡೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದರಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಿನ್ನೆ ಸಂಜೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಿಪಿಎಂ, ಕಾಂಗ್ರೆಸ್‌ನ ವಿರುದ್ಧ ಕಾರ್ಯಕರ್ತರು ಮುಗಿಲು ಮುಟ್ಟುವ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿದರು. ಪ್ರಜಾತಂತ್ರ ಸಂರಕ್ಷಣಾ ಆಂದೋಲನ ಎಂಬ ಹೆಸರಲ್ಲಿ ಈ ಪ್ರತಿಭಟನೆ …

ಕ್ರಿಯಾಸಮಿತಿಯ ಅರ್ಜಿ ತಿರಸ್ಕರಿಸಿ ಆರಿಕ್ಕಾಡಿ ಹೆದ್ದಾರಿಯಲ್ಲಿ ತಾತ್ಕಾಲಿಕ ಟೋಲ್‌ಗೇಟ್ ಆರಂಭಿಸಲು ನ್ಯಾಯಾಲಯ ಹಸಿರು ನಿಶಾನೆ

ಕುಂಬಳೆ: ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ಗೇಟ್ ನಿರ್ಮಾಣಕ್ಕಿದ್ದ ತಡೆಯನ್ನು ನ್ಯಾಯಾಲಯ ರದ್ದುಪಡಿಸಿದೆ. ಕ್ರಿಯಾ ಸಮಿತಿ ಸಹಿತವಿರುವವರು ನೀಡಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಶ ಎನ್. ನಗರೇಶ್ ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸರಕಾರದ ಅನುಮತಿಯೊಂದಿಗೆ ಟೋಲ್ ಗೇಟ್ ನಿರ್ಮಿಸುತ್ತಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಿಟ್ಟ ವಾದವನ್ನು ನ್ಯಾಯಾಲಯ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಇಲ್ಲಿ ಟೋಲ್ ಗೇಟ್ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಬಹುದಾಗಿದೆ. ಇದೇ ವೇಳೆ ಈ ತೀರ್ಪಿನ ವಿರುದ್ಧ ವಿಭಾಗೀಯ ಪೀಠಕ್ಕೆ ಅಪೀಲು …

ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯಿಂದ ತಿರಂಗ ಯಾತ್ರೆ

ಪೈವಳಿಕೆ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ, ದೇಶದ ಸೈನಿಕ ಶಕ್ತಿ ಆಪರೇಶನ್ ಸಿಂಧೂರ ಮೂಲಕ ಜಗತ್ತು ಕಂಡಿದೆ. ಭಾರತದ ಶಕ್ತಿಯನ್ನು ಮಣಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯಾರು ನಾರಾಯಣ ಶೆಟ್ಟಿ ಹೇಳಿದರು. ಬಾಯಿಕಟ್ಟೆಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆಯನ್ನು ನಿವೃತ್ತ ಸೈನಿಕ ವಸಂತ್ ಕೃಷ್ಣ ಶರ್ಮ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ.ರಿಗೆ ಧ್ವಜ ಹಸ್ತಾಂತರ ಮಾಡಿ ಉದ್ಘಾಟಿಸಿದರು.ಮಂಡಲ ಅಧ್ಯಕ್ಷ …

ಕೃಷಿಕ ಸಂಘದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಅಮೆರಿಕದೊಂ ದಿಗಿನ ಒಪ್ಪಂದವನ್ನು ಭಾರತ ಹಿಂತೆಗೆಯಬೇಕೆAದು ಒತ್ತಾಯಿಸಿ, ಅಮೆರಿಕ ಅಧ್ಯಕ್ಷ ಮತ್ತು ಭಾರತದ ಪ್ರಧಾನಿ ವಿರುದ್ಧ ಎಡರಂಗ ಕೃಷಿಕ ಸಂಘಟನೆಗಳ ನೇತೃತ್ವ ದಲ್ಲಿ ಹೊಸಂಗಡಿ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದರು. ಕಿಸಾನ್ ಸಭಾ ಜಿಲ್ಲಾ ಕಾರ್ಯ ದರ್ಶಿ ಕೆ. ಕುಂಞಕಣ್ಣನ್ ಉದ್ಘಾಟಿಸಿ ಮಾತನಾಡಿದರು. ಸಿ. ಪಿ. ಐ ನೇತಾರ ಜಯರಾಮ ಬಲ್ಲಂ ಗುಡೇಲು ಸ್ವಾಗತಿಸಿ, ನೇತಾರರಾದ ಕೆ. ಕಮಲಾಕ್ಷ, ಎಂ.ರಾಮಚAದ್ರ,  ಪ್ರಶಾಂತ್ ಕನಿಲ, ಅಹ್ಮದ್ ಹುಸೇನ್  ಮಾಸ್ಟರ್, ಬಿ.ಎಂ. ಕರುಣಾಕರ …

ಯು.ಪಿ. ಕುಣಿಕುಳ್ಳಾಯರು ಸದಾ ಸ್ಮರಣೀಯರು-ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುರಳೀಧರ ಬಳ್ಳಕ್ಕುರಾಯ

ಕಾಸರಗೋಡು :ಮಾಜಿ ಶಾಸಕ, ಕನ್ನಡ ಹೋರಾಟಗಾರ, ನ್ಯಾಯವಾದಿ ದಿ| ಯು.ಪಿ ಕುಣಿಕುಳ್ಳಾಯರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ. ಮುರಳೀಧರ ಬಳ್ಳಕ್ಕುರಾಯ ಸಂಸ್ಮರಣಾ ಭಾಷಣ ಮಾಡಿದರು. ಕಾಸರಗೋಡಿನಲ್ಲಿ ಕನ್ನಡದ ಸವಲತ್ತುಗಳನ್ನು ಉಳಿಸುವುದಕ್ಕಾಗಿ ಕನ್ನಡದ ಹಿತರಕ್ಷಣೆಗಾಗಿ ಕುಣಿಕುಳ್ಳಾಯರು ಅವಿರತವಾಗಿ ಶ್ರಮಿಸಿದವರು. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯವಾದಾಗ ಸಂಬAಧಪಟ್ಟವರಿಗೆ ನೂರಾರು ಮನವಿ ಸಲ್ಲಿಸಿ, ನ್ಯಾಯಾಲಯದ ಮೆಟ್ಟಲೇರಿ ನ್ಯಾಯ ದೊರಕಿಸಿಕೊಟ್ಟವರು ಎಂದು ಅವರು ಹೇಳಿದರು. …