ಮೃತದೇಹದ ಹೆಸರಲ್ಲಿ ರಾಜಕೀಯ ಲಾಭ ಗಳಿಸಲು ಮುಸ್ಲಿಂಲೀಗ್ ಪ್ರಯತ್ನಿಸುತ್ತಿರುವುದು ಖಂಡನೀಯ-ಎಂ.ಎಲ್. ಅಶ್ವಿನಿ

ಉಪ್ಪಳ: ಅಸೌಖ್ಯ ಬಾಧಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಹೆಸರಲ್ಲಿ ರಾಜಕೀಯ ಲಾಭ ಗಳಿಸಲು ಮುಸ್ಲಿಂಲೀಗ್ ಹಾಗೂ ಲೀಗ್‌ನ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯನ ಅಂತ್ಯ ಸಂಸ್ಕಾರದ ಖರ್ಚು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕಿರುವ ಅನುಮತಿಯನ್ನು ಜನಪ್ರತಿನಿಧಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರದ ಖರ್ಚು ವಹಿಸಿರು ವುದು, ಸಂಸ್ಕಾರ ಕಾರ್ಯಗಳಿಗೆ ನೇತೃತ್ವ ನೀಡಿರುವುದು ಸೇವಾಭಾರತಿಯಾಗಿದೆ …

ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಪಡೆದುಕೊಳ್ಳಲು ಹಿಂಜರಿದ ಸಂಬಂಧಿಕರು; ಜಿಲ್ಲಾ ಪಂ. ಸದಸ್ಯೆ ಇರ್ಫಾನ ಇಕ್ಭಾಲ್ ನೇತೃತ್ವದಲ್ಲಿ ಅಂತ್ಯಸಂಸ್ಕಾರ

ಉಪ್ಪಳ: ಗಂಭೀರ ಅಸೌಖ್ಯ ಬಾಧಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದು,  ಆದರಂ ಮೃತದೇಹವನ್ನು  ಪಡೆದು ಕೊಳ್ಳಲು ಸಂಬಂಧಿಕರಾರೂ ತಲು ಪಿಲ್ಲ. ಇದರಿಂದ ಜಿಲ್ಲಾ ಪಂಚಾ ಯತ್  ಸದಸ್ಯೆ ಇರ್ಫಾನ ಇಕ್ಬಾಲ್‌ರ  ನೇತೃತ್ವದಲ್ಲಿ  ವ್ಯಕ್ತಿ ಯ ಮೃತದೇಹವನ್ನು ಚಿತೆಗೇರಿ ಸಲಾಯಿತು. ಮೀಂಜ ಪಂಚಾಯತ್‌ನ ಚಿಗುರುಪದವು ನಿವಾಸಿಯಾದ ನಾರಾಯಣ (64) ಎಂಬವರು ಮೃತಪಟ್ಟ ವ್ಯಕ್ತಿ. ಇವರಿಗೆ ಅರ್ಬುದ ಬಾಧಿಸಿತ್ತೆನ್ನಲಾಗಿದೆ. ಒಂದು ತಿಂಗಳ ಹಿಂದೆ ಊರಿನ ಅಂಗಡಿಯೊಂದರ ವರಾಂಡದಲ್ಲಿ  ಹಲವು ದಿನಗಳಕಾಲ ಮಲಗಿದ ಸ್ಥಿತಿಯಲ್ಲಿದ್ದರು. ಆಹಾರ ಕೂಡಾ …

ಸೌರ ದೀಪಗಳ ಬ್ಯಾಟರಿ ಕಳವು: ಮೂವರ ಸೆರೆ

ಕಾಸರಗೋಡು: ಸೌರ ದೀಪಗಳ ಪ್ಯಾನಲ್‌ಗಳಿಗೆ ಅಳವಡಿಸುವ ಬ್ಯಾಟರಿ ಗಳನ್ನು ಕಳವುಗೈಯ್ಯುವ ತಂಡಕ್ಕೆ ಸೇರಿದ ಅಸ್ಸಾಂ ನಿವಾಸಿಗಳಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳು ಹಾಗೂ ಈಗ ಪಡನ್ನಕ್ಕಾಡಿನಲ್ಲಿ ವಾಸಿಸುವ ರೌಫಿಕುಲ್ ಇಸ್ಲಾಂ (41), ನಬಿಪರಮಾಣಿಕ್ (45) ಮತ್ತು ಅಲ್ ಜಾಫಿದುಲ್ ಇಸ್ಲಾಂ (28) ಬಂಧಿತ ಆರೋಪಿಗಳಾಗಿದ್ದಾರೆ. ವಲಿಯ ಪರಂಬು ಗ್ರಾಮ ಪಂಚಾಯತ್‌ನ ಮಾವಿಲಕಡಪ್ಪುರಂ ಬಿಚ್ಚಾರಕಡವು ಪಾಡಲ್ ಕಡಪ್ಪುರ, ವಲಿಯಪ ರಂಬು ಮತ್ತು ವಲಿಯಪರಂಬು ಸೇತುವೆ ಎಂಬಿಡೆಗಳಲ್ಲಿ ಸ್ಥಾಪಿಸಲಾಗಿ ರುವ ಸೌರ ದೀಪದ ಪ್ಯಾನಲ್‌ಗಳಿಂದ ೮೦,೦೦೦ ರೂ. ಮೌಲ್ಯದ …

ಕೆಲಸಕ್ಕೆಂದು ತೆರಳಿದ ವ್ಯಕ್ತಿ ಕಾಡಿನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಅಡೂರು: ಕೆಲಸಕ್ಕೆ ತೆರಳುತ್ತಿ ರುವುದಾಗಿ ಮನೆ ಮಂದಿಯಲ್ಲಿ ತಿಳಿಸಿ ಹೊರಟ ವ್ಯಕ್ತಿ ಕಾಡಿನೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡೂರು, ಬಳವಂತಡ್ಕ ನಿವಾಸಿ ಮಣಿ ಯೂರ್‌ನಲ್ಲಿ ವಾಸಿಸುವ ಬಿ.ಸಿ. ಚಂದ್ರ  (56) ಮೃತಪಟ್ಟವರು. ಕಲ್ಲುಕಟ್ಟುವ ಮೇಸ್ತ್ರಿಯಾಗಿದ್ದರು. ನಿನ್ನೆ ಬೆಳಿಗ್ಗೆ ಎಂದಿನಂತೆ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಅದರ ಬಳಿಕ ಬೇರೆ ಯಾರೂ ಇವರನ್ನು ನೋಡಿರಲಿಲ್ಲ. ಸಂಜೆ ಮೂರೂವರೆ ಗಂಟೆಯ ವೇಳೆಗೆ ಕಾಡಿನಿಂದ ಕಟ್ಟಿಗೆ ಸಂಗ್ರಹಿಸಲು ಹೋದವರು ಚಂದ್ರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆದೂರು …

ಕ್ವಾರ್ಟರ್ಸ್‌ಗೆ ಪೊಲೀಸ್ ದಾಳಿ: 4.240 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆ

ಉಪ್ಪಳ: ಆಪರೇಶನ್ ತೂಫಾನ್ ಕಾರ್ಯಾಚರಣೆಯ ಅಂಗವಾಗಿ ಮಂಜೇಶ್ವರ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಹೊಸಬೆಟ್ಟುನಲ್ಲಿರುವ ಮಂಜೇಶ್ವರ ಪಂಚಾಯತ್ ಕಚೇರಿ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಹಂಸ ನೀರಾಳ (46) ಎಂಬಾತ ಸೆರೆಗೀಡಾದ ವ್ಯಕ್ತಿ. ಈತ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಾಂಡವರಕಲ್ಲು ನಿವಾಸಿಯಾಗಿದ್ದಾನೆ. ಈತ ವಾಸಿಸುವ ಕ್ವಾರ್ಟರ್ಸ್ ನಲ್ಲಿ ಮಾದಕವಸ್ತು ಬಚ್ಚಿಡಲಾಗಿದೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಎಸ್‌ಐ ವೈಷ್ಣವ್ ರಾಮಚಂದ್ರನ್‌ರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ …

ಫುಟ್‌ಬಾಲ್ ಪ್ರೇಮಿಗಳಿಂದ ಸ್ಥಾಪಿಸುವ ಫ್ಲೆಕ್ಲ್‌ಬೋರ್ಡ್‌ಗಳಲ್ಲಿ ಹೊಗೆಬತ್ತಿ ಸೇವನೆ ಚಿತ್ರವಿರಬಾರದು- ಡಿಎಂಒ

ಕಾಸರಗೋಡು: ಫಿಫಾ ವಿಶ್ವಕಪ್ ಫುಟ್‌ಬಾಲ್‌ಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಫುಟ್‌ಬಾಲ್ ಪ್ರೇಮಿ ಗಳು ಸ್ಥಾಪಿಸಿದ ಬೋರ್ಡ್ ಗಳಲ್ಲಿ ಹೊಗೆಬತ್ತಿ ಸೇವನೆ ಚಿತ್ರಗಳನ್ನು ಉಪಯೋಗಿಸ ಬಾರದೆಂದು ಜಿಲ್ಲಾ ವೈದ್ಯಾಧಿ ಕಾರಿ ಡಾ. ಬಿ. ಸಂತೋಷ್ ತಿಳಿಸಿದ್ದಾರೆ. ಹೊಗೆಬತ್ತಿ ಸೇವಿಸುವ ಕ್ರೀಡಾಪಟುಗಳು ಒಳಗೊಂಡಿರುವ ಫ್ಲೆಕ್ಸ್ ಬೋರ್ಡ್‌ಗಳನ್ನು ಸ್ಥಾಪಿಸಲಾ ಗಿದೆ ಎಂಬುದು ಗಮನಕ್ಕೆ ಬಂದಿರುವುದಾಗಿಯೂ ಈ ರೀತಿಯ ಬೋರ್ಡ್‌ಗಳನ್ನು ತೆರವುಗೊಳಿಸುವುದು ಅಥವಾ ದೃಶ್ಯಗಳನ್ನು ಮರೆಮಾಚ ಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಇಲ್ಲದಿದ್ದರೆ ರಾಷ್ಟ್ರೀಯ ಹೊಗೆಬತ್ತಿ ಸೇವನೆ ನಿಯಂತ್ರಣ ಕಾನೂನು ಪ್ರಕಾರ …

ಒಬಿಸಿ ಮೀಸಲಾತಿಯನ್ನು ಏಕೀಕರಿಸಲು, ಪಟ್ಟಿಯನ್ನು ಲೋಪದೋಷರಹಿತವಾಗಿಸಲು ಎಚ್‌ಎಸ್‌ಎಸ್‌ವಿ ಆಗ್ರಹ

ಮಂಜೇಶ್ವರA: ಮಂಜೇಶ್ವರದಲ್ಲಿ ನಡೆದ ಹಿಂದೂ ಸಮುದಾಯ ಸೌಹೃದವೇದಿ ಕಾಸರಗೋಡು ಜಿಲ್ಲಾ ಸಮಾವೇಶವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವ. ಪಯ್ಯನ್ನೂರ್ ಶಾಜಿ ಉದ್ಘಾಟಿಸಿದರು. ಕೇರಳ-ಕೇಂದ್ರ ಒಬಿಸಿ ಪಟ್ಟಿಯಲ್ಲಿರುವ ಕಾಗುಣಿತ ಲೋಪ ದೋಷ ಗಳನ್ನು ಸರಿಪಡಿಸಬೇಕು ಮತ್ತು ರಾಜ್ಯ, ರಾಷ್ಟ್ರೀಯ ಸರಕಾರಗಳು ದೋಷರಹಿತ ಒಬಿಸಿ ಪಟ್ಟಿಯನ್ನು ಮರು ಪ್ರಕಟಿಸಲು ಸಿದ್ಧರಾಗಿರಬೇಕು ಎಂದು ಸಭೆ ಒತ್ತಾಯಿ ಸಿತು. ವಾಣಿಯ- ಗಾಣಿಗ, ತೀಯ, ಪದ್ಮಶಾಲಿಯ, ವೇಳುತೇಡತ್ತ್ ನಾಯರ್, ಕೋಟೆಯಾರ್ (ರಾಮ ಕ್ಷತ್ರಿಯ), ಯೋಗಿ, ಹೆಗಡೆ, ಭಂಡಾರಿ, ಮಣಿಯಾಣಿ, ಗಟ್ಟಿ ಮೊದಲಾದ ಸಮುದಾಯಗಳ ಪ್ರತಿನಿಧಿಗಳು …

ವಿಶ್ವ ರೆಫ್ರಿಜರೇಶನ್ ದಿನಾಚರಣೆಯಂಗವಾಗಿ ಅಸೋಸಿಯೇಶನ್‌ನಿಂದ ಮಾದರಿ ಸೇವಾ ಕಾರ್ಯ

ಕಾಸರಗೋಡು: ವಿಶ್ವ ರೆಫ್ರಿ ಜರೇಶನ್ ದಿನಾಚರಣೆಯಂಗವಾಗಿ ಎಚ್‌ವಿಎಸಿಆರ್‌ಇ ಅಸೋಸಿಯೇ ಶನ್ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ಮಾದರಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಕಾಸರಗೋಡು ನಗರ ಠಾಣೆಯ ಏರ್ ಕಂಡೀಶನರ್‌ಗಳನ್ನು ಸಂಘಟನೆಯ ನೇತೃತ್ವದಲ್ಲಿ ಉಚಿತವಾಗಿ ಸರ್ವೀಸ್ ಮಾಡಿಕೊಡಲಾಯಿತು.  ಹಗಲಿರುಳು ಜನರಿಗಾಗಿ ಸೇವೆ ಮಾಡುವ ಪೊಲೀಸ್ ಅಧಿಕಾರಿಗಳಿಗಾಗಿ, ಠಾಣೆಯ ಕಂಟ್ರೋ ಲ್ ರೂಮ್‌ನಲ್ಲಿರುವ ಎಸಿಗಳನ್ನು ಉಚಿತವಾಗಿ ಸರ್ವೀಸ್ ಮಾಡಲಾಗಿದೆ. ಸಂಘಟನೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಶ್ವತ್ಥ್‌ರಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯದರ್ಶಿ ಬ್ಲೆಸ್ಸನ್ಸ್ ಶುಭ ಹಾರೈಸಿದರು. ರಾಜ್ಯ ಕೌನ್ಸಿಲ್ ಸದಸ್ಯ …

ರಂಗಭಾನು ತರಬೇತಿ ಕಾರ್ಯಾಗಾರಕ್ಕೆ ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಚಾಲನೆ

ಮಂಜೇಶ್ವರ: ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜುನಲ್ಲಿ ರಂಗಚೇತನ ಕಾಸರಗೋಡು ಇದರ ವತಿಯಿಂದ ೧೫ ದಿನಗಳ ರಂಗಭೂಮಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಆರಂಭ ಗೊಂಡಿತು. ರಂಗಚೇತನ ಕಾಸರಗೋಡು ಸಂಸ್ಥೆಯ ಅಧ್ಯಕ್ಷ ಡಾ. ಯತೀಶ್ ಕುಮಾರ್ ರೈ ಮುಳ್ಳೇರಿಯ ಉದ್ಘಾಟಿಸಿ ದರು. ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಮ್ಮ ದಲಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಶಿವಶಂಕರ ಸ್ವಾಗತಿಸಿ, ಪ್ರಸ್ತಾಪಿಸಿದರು. ರಂಗಚೇತನ ಉಪಾಧ್ಯಕ್ಷ ವಿಜಯ ಕುಮಾರ್ ಪಾವಳ ಶುಭ ಕೋರಿದರು.ರಂಗಚೇತನ ಕಾಸರಗೋಡು ಇದರ …

ಪ್ರಜಾಪ್ರಭುತ್ವವನ್ನು ಧ್ವಂಸಗೈದವರು ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ವಾಗ್ಮಿಗಳಾಗುತ್ತಾರೆ- ಟಿ.ಪಿ. ಜಯಚಂದ್ರನ್

ಕಾಸರಗೋಡು: ಪ್ರಜಾಪ್ರಭುತ್ವವನ್ನು ಕೊಚ್ಚಿ ಹಾಕಿದ ಕಾಂಗ್ರೆಸ್ ಪಕ್ಷದ ಹೊಸ ತಲೆಮಾರು ಮುಖಂಡರು ಪ್ರಜಾಪ್ರಭುತ್ವ ಹಕ್ಕುಗಳ ಬಗ್ಗೆ ವಾಗ್ಮಿಗಳಾಗುತ್ತಿದ್ದಾರೆ. ತನ್ನ ಹಿಂದಿನ ತಲೆಮಾರುಗಳು ನಡೆಸಿದ ಮಾನವಹಕ್ಕು ಧ್ವಂಸವನ್ನು ತಿರಸ್ಕರಿಸಲು ತಯಾರಾಗದೆ ಜೇಬಲ್ಲಿ ಸಂವಿಧಾನವನ್ನು ಇರಿಸಿಕೊಂಡು ನಡೆಯುವ ರಾಹುಲ್ ಗಾಂಧಿ ಸ್ವಯಂ ಅಪಹಾಸ್ಯರಾಗುತ್ತಿರುವು ದಾಗಿ ಬಿಜೆಪಿ ರಾಜ್ಯ ವಕ್ತಾರ ಟಿ.ಪಿ. ಜಯಚಂದ್ರನ್ ಮಾಸ್ತರ್ ನುಡಿದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ 51ನೇ ವಾರ್ಷಿಕಾಚರಣೆ ಯಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ಆಯೋಜಿಸಿದ ತುರ್ತು ಪರಿಸ್ಥಿತಿ ವಿರುದ್ಧ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. …