ಎಣ್ಮಕಜೆ ಪಂ.ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ

ಪೆರ್ಲ: ಎಣ್ಮಕಜೆ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಾಳೆ ನಡೆಸಲಾಗುವುದು. ಕಳೆದ 5 ವರ್ಷದಿಂದ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ಎಂಬ ಗುರಿಯಿರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಈ ಬಾರಿಯೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸುವುದಾಗಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಈ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ತಿಳಿಸಿದ್ದಾರೆ. ಪಂಚಾಯತ್ ಉಪಾಧ್ಯಕ್ಷೆ ರಮ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕಾರ್ಯದರ್ಶಿ ಶಾನವಾಸ್, ಸಹಾಯಕ ಕಾರ್ಯದರ್ಶಿ ಗಿರೀಶ್ …

ಪ್ರಯಾಣ ಸಂಕಷ್ಟ ಅನುಭವಿಸುವ ದೇಲಂಪಾಡಿ ಪಂಚಾಯತ್‌ನ 3 ರಸ್ತೆಗಳ ಕಾಮಗಾರಿಗೆ ಚಾಲನೆ

ದೇಲಂಪಾಡಿ: ದೇಲಂಪಾಡಿಯ ವಿವಿಧ ಪ್ರದೇಶಗಳ ಜನರು ಸಂಚಾರ ಸಂಕಷ್ಟದಿಂದ ಬಳಲುತ್ತಿರುವುದಕ್ಕೆ ಪರಿಹಾರ ಕೈಗೊಳ್ಳಲು ಪಂಚಾಯತ್ ಸಿದ್ಧವಾಗಿದೆ. ಇದರಂಗವಾಗಿ ಪಂಚಾಯತ್‌ನ ರಸ್ತೆಗಳನ್ನು ಪುನರುದ್ಧರಿಸುವ ಯೋಜನೆಯಲ್ಲಿ ಒಳಪಡಿಸಿ ೧೫ ಲಕ್ಷ ರೂ.ನಂತೆ ವೆಚ್ಚದಲ್ಲಿ ನಿರ್ಮಿಸುವ ಮೂರು ರಸ್ತೆಗಳ ಕಾಮಗಾರಿ ಉದ್ಘಾಟನೆಯನ್ನು ಇಂದು ಶಾಸಕ ಸಿ.ಎಚ್. ಕುಂಞಂಬು ನಿರ್ವಹಿಸುವರು. ಇದರೊಂದಿಗೆ ದೇಲಂಪಾಡಿಯ ವಿವಿಧ ಪ್ರದೇಶಗಳಿಗೆ, ಕುತ್ತಿಕ್ಕೋಲ್ ಪಂಚಾಯತ್‌ನ ವಿವಿಧ ಭಾಗಗಳಿಗೆ, ಅಂತಾರಾಜ್ಯ ಹೆದ್ದಾರಿಗಿರುವ ಸಂಚಾರ ಸುಲಭವಾಗಲಿದೆ. ಪರಿಶಿಷ್ಟ ಪಂಗಡದವರ ಕೇಂದ್ರವಾದ ಕಯರ್ತೋಡಿ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದೆ. ಕೆಸರು, ಮಣ್ಣು ತುಂಬಿದ …

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ ನಾಳೆಯಿಂದ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ನಾಳೆ, 16, 17ರಂದು ಜರಗಲಿದೆ. ಗರ್ಭಗುಡಿ ಹಾಗೂ ಒಳಾಂಗಣ ನವೀಕರಣ ಕೆಲಸಗಳಿಗೆ ಪೂರ್ವಭಾವಿಯಾಗಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ಕಾರ್ಯಕ್ರಮಗಳು ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದೆ.ನಾಳೆ ಸಂಜೆ 6ರಿಂದ ವಿವಿದ ವೈದಿಕ ಕಾರ್ಯಕ್ರಮ, 16ರಂದು ಬೆಳಗ್ಗೆ 5ರಿಂದ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವಹೋಮ, ಸಾಯಂಕಾಲ 6ರಿಂದ ಅವಾಸ ಹೋಮ, ಕುಂಭೇಶಕರ್ಕರಿ ಪೂಜೆ, ಪರಿಕಲಶ …

ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಶೋಚನೀಯಾವಸ್ಥೆ: ಬಿಎಂಎಸ್‌ನಿಂದ ಚಳವಳಿ

ಕಾಸರಗೋಡು:  ಕಾಸರಗೋಡು ನಗರದ ಬ್ಯಾಂಕ್ ರಸ್ತೆಯ ಶೋಚನೀ ಯಾವಸ್ಥೆಗೆ ಪರಿಹಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯನೀತಿ ಅನುಸರಿಸು ತ್ತಿರುವ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ  ಬಿಎಂಎಸ್ ಕಾಸರಗೋಡು ವಲಯ ಸಮಿತಿ ವತಿಯಿಂದ ಇಂದು ಬೆಳಿಗ್ಗೆ ದಿಗ್ಬಂಧನ ಚಳವಳಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂ ಡಿದ್ದು, ಬಳಿಕ ಏರ್‌ಲೈನ್ಸ್ ಜಂಕ್ಷನ್‌ನಲ್ಲಿ ಚಳವಳಿ ನಡೆಸಲಾಯಿತು.  ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ ಉದ್ಘಾಟಿಸಿದರು.  ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ನೇತಾರರಾದ ದಿನೇಶ್ ಬಂಬ್ರಾಣ, ಕುಂಞಿಕಣ್ಣನ್, ಹರೀಶ್ ಕುದ್ರೆಪ್ಪಾಡಿ, ಕೇಶವ, …

ಕುಂಬಳೆ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕ ನಿಧನ

ಕುಂಬಳೆ:  ಕಂಚಿಕಟ್ಟೆ ರಾಂ ನಗರ ನಿವಾಸಿ ತುಕಾರಾಮ್ (66) ನಿನ್ನೆ ರಾತ್ರಿ ನಿಧನಹೊಂದಿದರು. ಕುಂಬಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಕುಂಬಳೆ ಸೇವಾ ಸಹಕಾರಿ   ಬ್ಯಾಂಕ್‌ನ ಮಾಜಿ ನಿರ್ದೇಶಕರೂ, ಕ್ಯಾಂಪ್ಕೋದ ನಿವೃತ್ತ ಉದ್ಯೋ ಗಿಯೂ ಆಗಿದ್ದಾರೆ. ಮೃತರು ಪತ್ನಿ ಸೌಮ್ಯ ಟೀಚರ್, ಮಗ ಕುಲ್ ದೀಪ್, ಸೊಸೆ ನಿಶ್ಮಿತಾ, ಓರ್ವ ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು

13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು ಕಾಸರಗೋಡು: 13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀ ಡಾದ ಘಟನೆಯಲ್ಲಿ ವ್ಯಕ್ತಿಪಲ್ಲಟ ನಡೆಸಿದ ಯುವತಿ ವಿರುದ್ಧ ಹೊಸದುರ್ಗ ಪೊಲೀ ಸರು ಸ್ವತಃ ಕೇಸು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ದೂರಿನಂತೆ ನ್ಯಾಯಾಲಯದಲ್ಲಿ ತಪ್ಪು ಹೇಳಿಕೆ ನೀಡಿರುವುದಕ್ಕೆ ಕಾಞಂಗಾಡ್, ವಡಗರಮುಖ್‌ನ ಹಂಸರ ಪತ್ನಿ ಪಿ. ಅನೀಸ (42)ರ ವಿರುದ್ಧ ಕೇಸು ದಾಖಲಿಸಲಾಗಿದೆ. 2024 ನವೆಂಬರ್ 17ರಂದು ಘಟನೆ …

ಸುಂಕ ವಿವಾದ ಮಧ್ಯೆ ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕ ಭೇಟಿ

ನವದೆಹಲಿ: ಅಮೆರಿಕಾದ ಜೊತೆ ಸುಂಕದ ಸಂಘರ್ಷ ನಡೆಯುತ್ತಿರುವ ಮಧ್ಯದಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಿನ ತಿಂಗಳು ಅಮೆರಿಕಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು  ಸಂಬಂಧಪಟ್ಟ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯಸಭೆ (ಯುಎನ್‌ಜಿಎ) ಮುಂದಿನ ತಿಂಗಳು ಅಮೆರಿಕಾದಲ್ಲಿ ನಡೆಯಲಿದ್ದು, ಅದರಲ್ಲಿ  ಪ್ರಧಾನಮಂತ್ರಿ ಮೋದಿ ಭಾಗವಹಿಸುವ ಸಾಧ್ಯತೆ ಇದೆ.  ಈ ಸಾಮಾನ್ಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೈನ್ ಅಧ್ಯಕ್ಷ ಝೆಲ್‌ನ್ಸ್ಕಿ ಸೇರಿದಂತೆ ಉನ್ನತ ಮಟ್ಟದ ನಾಯಕರು ಭಾಗವಹಿಸು ವರು. ಯುಎನ್‌ಜಿಎ ಶೃಂಗ ಸಭೆ ನ್ಯೂಯಾರ್ಕ್ ನಗರದಲ್ಲಿ ಸೆಪ್ಟಂಬರ್ …

ತಲಪ್ಪಾಡಿಯಲ್ಲಿ ಲಾರಿ-ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಮಂಜೇಶ್ವರ: ಕಾರು ಹಾಗೂ ಮೀನು ಸಾಗಾಟದ ಲಾರಿ ಢಿಕ್ಕಿ ಹೊಡೆದು ನಾಲ್ಕು ಮಂದಿ   ಗಾಯಗೊಂಡ ಘಟನೆ ಮೇಲಿನ ತಲಪ್ಪಾಡಿಯಲ್ಲಿ ಸಂಭವಿಸಿದೆ. ಇಂದು ಮುಂಜಾನೆ 1 ಗಂಟೆಗೆ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗುತ್ತಿದೆ.  ಇವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಗಾಯಗೊಂಡವರ ಕುರಿತು ಮಾಹಿತಿ ಲಭ್ಯವಾಗಿಲ್ಲ.   ಕಾಸರಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಮೀನಿನ ಲಾರಿ ಪರಸ್ಪರ ಢಿಕ್ಕಿ …

ಕಾರಿನಲ್ಲಿ ಸಾಗಿಸುತ್ತಿದ್ದ 215ಕಿಲೋ ತಂಬಾಕು ಉತ್ಪನ್ನ ವಶ: ಇಬ್ಬರ ಬಂಧನ

ಮಂಜೇಶ್ವರ: ಕರ್ನಾಟಕದಿಂದ ಕಾಸರಗೋಡು ಭಾಗಕ್ಕೆ ಅನಧಿಕೃ ತವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 215 ಕಿಲೋ ತಂಬಾಕು ಉತ್ಪನ್ನಗಳನ್ನು  ಮಂಜೇಶ್ವರದಲ್ಲಿ ಅಬಕಾರಿ ಅಧಿ ಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾರಿನಲ್ಲಿದ್ದ ವಡಗರ ತೆಕ್ಕಾಟಚಾಲಿ ನಿಯನ್ ಹೌಸ್‌ನ ಅಪ್ಸಲ್(31), ತಲಶ್ಶೇರಿ ಪಾಟಿಯಂ ವಲಿಯವೀಟಿಲ್‌ನ ಅಶ್ರಫ್ (40) ಎಂಬಿವರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಹೊಸಂಗಡಿ ಬಳಿಯ ವಾಮಂಜೂರಿನಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ  ಇಂದು ಮುಂಜಾನೆ 5.30ರ ವೇಳೆ ನಡೆಸಿದ ಕಾರ್ಯಾಚ ರಣೆಯಲ್ಲಿ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮಂಗಳೂರು ಭಾಗದಿಂದ ಬರುತ್ತಿದ್ದ ಕಾರನ್ನು …

ಮನೆಯೊಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾದ ಯುವಕ ಮೃತ್ಯು

ಬೋವಿಕ್ಕಾನ: ಮನೆಯೊಳಗೆ ಬಿದ್ದ ಸ್ಥಿತಿಯಲ್ಲಿ ಯುವಕ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ.  ಇರಿಯಣ್ಣಿ ನಿವಾಸಿ ದಿ| ಮಹಾಲಿಂಗನ್ ಎಂಬವರ ಪುತ್ರ ಹರಿಹರನ್ ಪಿ (36) ಮೃತಪಟ್ಟ ಯುವಕನಾಗಿದ್ದಾನೆ. ಮನೆಯಲ್ಲಿ ಹರಿಹರನ್ ಹಾಗೂ ತಾಯಿ ಪದ್ಮಾವತಿ ವಾಸಿಸುತ್ತಿದ್ದರು. ನಿನ್ನೆ ತಾಯಿ  ಪಯ್ಯನ್ನೂರಿನಲ್ಲಿರುವ ಪುತ್ರಿ ಹರಿಣಾಕ್ಷಿಯ ಮನೆಗೆ ತೆರಳಿದ್ದರು. ನಿನ್ನೆ ರಾತ್ರಿ  ಹರಿಹರನ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ 10 ಗಂಟೆ ವೇಳೆ ನೆರೆಮನೆ ನಿವಾಸಿ ಅಲ್ಲಿಗೆ ಹೋದಾಗ ಹರಿಹರನ್ ಕೊಠಡಿಯೊಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ …