ಮಂಗಲ್ಪಾಡಿ ಪಂ.ನಲ್ಲಿ ಪ್ರಥಮ ಹಂತದ ಕುಡಿಯುವ ನೀರು ವಿತರಣೆ ಆರಂಭ

ಉಪ್ಪಳ: ಕುಡಿಯುವ ನೀರಿನ ಕ್ಷಾಮ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಪಂಚಾಯತ್‌ನಿಂದ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಥಮ ಹಂತದ ಕುಡಿಯುವ ನೀರು ವಿತರಣೆಯನ್ನು ನಿನ್ನೆ ಆರಂಭಿಸಲಾಯಿತು. ಪಂಚಾಯತ್ ಕಚೇರಿ ಆವರಣದಲ್ಲಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರಿನ ಕ್ಷಾಮವಿರುವ ಪ್ರದೇಶದಲ್ಲಿ ವಾರ್ಡ್‌ನ ಜನಪ್ರತಿನಿಧಿಯವರನ್ನು ಸಂಪರ್ಕಿಸಬೇಕಾಗಿದೆ. ದಿನದಲ್ಲಿ ಎಂಟು ವಾರ್ಡ್‌ಗಳಿಗೆ ನೀರು ವಿತರಿಸಲಾಗುವುದು. ಇದೇ ರೀತಿ ಮೂರು ದಿನಗಳಲ್ಲಿ ಒಟ್ಟು 24 ವಾರ್ಡ್‌ಗಳಿಗೆ ಪ್ರಥಮ ಹಂತದ ನೀರನ್ನು ವಿತರಿಸಲಾಗುವುದು. …

ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮವಿಲ್ಲ: ಮುಸ್ಲಿಂ ಲೀಗ್‌ನಿಂದ ಧರಣಿ

ಉಪ್ಪಳ: ಪತ್ವಾಡಿ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ದುರಸ್ತಿ ನಡೆಸಲು  ಜಲಪ್ರಾಧಿಕಾರಕ್ಕೆ ಅನುಮತಿ ನೀಡದಿರುವುದನ್ನು ಪ್ರತಿಭಟಿಸಿ ಮಂಜೇಶ್ವರ ಪಿಡಬ್ಲ್ಯುಡಿ ರೋಡ್ಸ್ ಅಸಿಸ್ಟೆಂಟ್ ಇಂಜಿನಿಯರ್‌ರ ಕಚೇರಿಯ ಮುಂಭಾಗ ಮಂಗಲ್ಪಾಡಿ ಪಂಚಾಯತ್ ಮುಸ್ಲಿಂ ಲೀಗ್ ವಾರ್ಡ್ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು. 3,4ನೇ ವಾರ್ಡ್ ಸಮಿತಿ ಪದಾಧಿಕಾರಿಗಳು ಎಂ.ಕೆ. ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಧರಣಿಯನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹಿಮಾನ್ ಉದ್ಘಾಟಿಸಿದರು. ಕುಂಬಳೆ ಜಲ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್‌ರ ಆದೇಶ ಪತ್ರಕ್ಕೆ ಅನುಮತಿ  ನೀಡದೆ ಮಂಜೇಶ್ವರ ಪಿಡಬ್ಲ್ಯುಡಿ …

ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಕಾರ್ಯಾರಂಭ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಚಟುವಟಿಕೆ ಆರಂಭಗೊಳ್ಳಲಿದೆ. ಮೂಲಭೂತ ಸೌಕರ್ಯಗಳನ್ನು ಪೂರ್ತಿಗೊಳಿಸಿ ವಿದ್ಯಾರ್ಥಿಗಳಿಗೆ ವಾಸ ಸೌಕರ್ಯ ಏರ್ಪಡಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ ಪ್ರತಿ ತಿಂಗಳ ಅವಲೋಕನ ಸಭೆಯಲ್ಲಿ ಈ ತೀರ್ಮಾನ ಉಂಟಾಗಿದೆ. ಕಳೆದ ತಿಂಗಳು ನಡೆದ ಸಭೆಯ ತೀರ್ಮಾನ ಪ್ರಕಾರ ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ನೇತೃತ್ವದಲ್ಲಿ ಮೆಡಿಕಲ್ ಕಾಲೇಜು ಕ್ಯಾಂಪಸ್‌ಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅಲ್ಲದೆ …

ತನ್ನನ್ನು ಹಾಗೂ ಪಕ್ಷವನ್ನು ಅವಮಾನಿಸಲು ಗೂಢ ತಂತ್ರ- ಎಂ.ಎಲ್. ಅಶ್ವಿನಿ

ಕಾಸರಗೋಡು: ಸುಳ್ಳು ವರದಿ ಪ್ರಕಟಿಸಿ ತನ್ನನ್ನು ಹಾಗೂ ಪಕ್ಷದ ಜಿಲ್ಲಾ ನಾಯಕತ್ವವನ್ನು ಅವಮಾನಿ ಸಲು ಗೂಢ ಪ್ರಯತ್ನ ನಡೆಯುತ್ತಿ ದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ನಡೆಯದ ಮಂಡಲ ಅವಲೋಕನ ಸಭೆಯಲ್ಲಿ  ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಹಾಗೂ ತನ್ನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.  ಮತ ಸೇರಿಸಲು ಸೂಕ್ತ ಚಟುವಟಿಕೆ ನಡೆಸಿಲ್ಲವೆಂದೂ ಮಗನ ಮತ ಕೂಡಾ ಸೇರಿಸಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾದುದಾಗಿದೆ. ಮತ ಸೇರಿಸಲು ಬೇಕಾದ ಎಲ್ಲಾ …

ತೃಶೂರು ಪಟಾಕಿ ಸಂಗ್ರಹಾಲಯದಲ್ಲಿ ಭೀಕರ ಸ್ಫೋಟ: ಮೃತರ ಸಂಖ್ಯೆ 13ಕ್ಕೇರಿಕೆ

ತೃಶೂರು: ತೃಶೂರು ಪೂರಂ ಗಾಗಿ ಕುಂಡತ್ತಿಕ್ಕಾಡ್‌ನ ಪಟಾಕಿ  ಸಂಗ್ರಹಾಲಯದಲ್ಲಿ ನಿನ್ನೆ ಉಂಟಾದ ಭೀಕರ ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡು ಹಲವರು ಗಂಭೀರ ಗಾಯಗೊಂಡ ದುರ್ಘಟನೆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಲು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆ ತೀರ್ಮಾನಿಸಿದೆ. ಮಾತ್ರವಲ್ಲ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳ ಆಶ್ರಿತರಿಗೆ ತಲಾ ೧೪ ಲಕ್ಷ ರೂ.ನಂತೆ ನಷ್ಟ ಪರಿಹಾರವನ್ನೂ ಸರಕಾರ ಘೋಷಿಸಿದೆ. ಇನ್ನೊಂದೆಡೆ ಈ ಘಟನೆ ಬಗ್ಗೆ …

ಶತಾಯುಷಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ ನಿಧನ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ (101) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು.  ಕಳೆದ 70 ವರ್ಷಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಶ್ರೀ ವಿಶ್ವಕರ್ಮ ಫರ್ನೀಚರ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಇವರು  ಬಡಗಿ ವೃತ್ತಿಯಲ್ಲಿ ಜನಾನುರಾಗಿಯಾಗಿದ್ದರು. ಅಲ್ಲದೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ  ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.  ಜೀವನದ ಸಾರ್ಥಕ 100 ವರ್ಷವನ್ನು ಪೂರೈಸಿದ …

ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾ ಪತ್ತೆ: ಉಳಿಯತ್ತಡ್ಕ ನಿವಾಸಿ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ ಬಿಸ್ಮಿಲ್ಲಾ ಮಂಜಿಲ್‌ನ ಹನೀಫಾ (38) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರ್ನಾಕುಳಂ ಜಿಲ್ಲೆಯ ಅಂಗಮಾಲಿ ಟಿ.ಬಿ. ಜಂಕ್ಷನ್ ಬಳಿ ಎರ್ನಾಕುಳಂ ರೂರಲ್ ಜಿಲ್ಲಾ ಡಾನ್ಸಾಪ್ ನೇತೃತ್ವದ ಪೊಲೀಸರ ತಂಡ  ಈ ಕಾರ್ಯಾಚರಣೆ ನಡೆಸಿದೆ.  ಕಾರಿನ ಹಿಂದಿನ ಭಾಗದ ಆಸನದ ಒರಗುವ ಭಾಗದಲ್ಲಿ ಗುಪ್ತ ಸೆರೆ ತಯಾರಿಸಿ ಅದರೊಳಗೆ ಈ ಮಾಲಕನ್ನು ಬಚ್ಚಿಡಲಾಗಿತ್ತೆಂದು ಪೊಲೀಸರು …

ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಎರ್ನಾಕುಳಂನಿಂದ ಸೆರೆ

ಕಾಸರಗೋಡು: ತಲೆಮರೆಸಿ ಕೊಂಡಿದ್ದ ಪೋಕ್ಸೋ ಪ್ರಕರಣ ಆರೋಪಿಯನ್ನು ವಿದ್ಯಾನಗರ ಪೊಲೀಸರು ಎರ್ನಾಕುಳಂನಿಂದ ಬಂಧಿಸಿದ್ದಾರೆ. ಉಳಿಯತ್ತಡ್ಕ ಇಸ್ಸತ್ ನಗರ  ನಿವಾಸಿ ಬದ್ರುದ್ದೀನ್ (37) ಬಂಧಿತ ಆರೋಪಿ.  ಒಂದು ತಿಂಗಳ ಹಿಂದೆ ಚೆಟ್ಟುಂಗುಳಿಯಲ್ಲಿ ೧೬ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ವಿದ್ಯಾನಗರ ಪೊಲೀಸರು  ಪೋಕ್ಸೋ ಕಾನೂನುಪ್ರಕಾರ ಪ್ರಕರಣ ದಾಖಲಿಸಿಕೊಂ ಡಿದ್ದರು. ಆ ಬಳಿಕ ಆರೋಪಿ ತಲೆಮರೆಸಿಕೊಂ ಡಿದ್ದನು.  ಆತ ಎರ್ನಾಕುಳಂನಲ್ಲಿರುವುದಾಗಿ ಬಳಿಕ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ವಿನೀಶ್ ಕುಮಾರ್‌ರ …

ನುಳ್ಳಿಪ್ಪಾಡಿ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ನಾಳೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಷ್ಟಬಂಧ ಲೇಪನ ಬ್ರಹ್ಮಕಲ ಶಾಭಿಷೇಕ ನಾಳೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಭಾಗಿತ್ವದಿಂದ ಯಶಸ್ವಿಯಾಗಿದೆ. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಸಂದಣಿ ಕಂಡುಬರುತ್ತಿದೆ. ಮಕ್ಕಳು, ಮಹಿಳೆಯರ ಸಹಿತ ಜನರು ಕ್ಷೇತ್ರ ವಠಾರದಲ್ಲಿ ವಿವಿಧ ಕಾರ್ಯ ಕ್ರಮಗಳಲ್ಲಿ ಭಾಗ ವಹಿಸುತ್ತಿದ್ದಾರೆ. ಅನ್ನ ಸಂತರ್ಪಣೆಯು ಭರದಿಂದ ನಡೆಯುತ್ತಿದೆ.

ಕುಂಬಳೆಯಲ್ಲಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಓರ್ವ ಆರೋಪಿ ಚೆನ್ನೈಯಲ್ಲಿ ಸೆರೆಗೀಡಾದ ಬೆನ್ನಲ್ಲೇ ಇತರ 6 ಮಂದಿ  ಪೊಲೀಸರ ಮುಂದೆ ಶರಣು

ಕುಂಬಳೆ: ಕುಂಬಳೆ ಕೃಷ್ಣನಗರ ಸಮೀಪ ಯುವಕನನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಸೆರೆಗೀಡಾದ ಬೆನ್ನಲ್ಲೇ ಇತರ ಆರು ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಕುಂಟಂಗೇರಡ್ಕ ನಿವಾಸಿಗಳಾದ ಮುಹಮ್ಮದ್ ಹಾಶಿಂ ಯಾನೆ ಆಶಿಂ, ಅಬು ಜಾಸಿಂ ಯಾನೆ ಜಾಸಿ, ರಮೀಸ್ ರೋಷಲ್ ಫಿರೋಸ್ ಯಾನೆ ರಮೀಸ್, ಮಿನ್‌ಹಾಜ್ ಅಬ್ದುಲ್ಲ ಇ.ಕೆ ಯಾನೆ ಮಿನ್‌ಹಾಜ್, ಫಸಲ್ ರಹ್ಮಾನ್ ಯಾನೆ ಪಜಿಲು,  ಮೊಹಿಯು ದ್ದೀನ್ ನಿಹಾಲ್ ಯಾನೆ ನಿಹಾಲ್ ಎಂಬಿ ವರು ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್‌ರ …