ವಿವಾಹಕ್ಕೆ ಮುಂಚೆ ಯಾರನ್ನೂ ನಂಬಬಾರದು; ದೈಹಿಕ ಸಂಬಂಧಗಳಲ್ಲಿ ಏರ್ಪಡುವಾಗ ಜಾಗ್ರತೆ ಪಾಲಿಸಲು ಸುಪ್ರೀಂ ಕೋರ್ಟ್ ಮುನ್ನೆಚ್ಚರಿಕೆ

ದೆಹಲಿ: ವಿವಾಹಕ್ಕೆ ಮುಂಚಿತ ಗಂಡು ಮಕ್ಕಳು, ಹೆಣ್ಮಕ್ಕಳು ಸಂಪೂರ್ಣ ಅಪರಿಚಿತರಾಗಿದ್ದಾರೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹದ ಮುಂಚಿತ ಇರುವ ದೈಹಿಕ ಸಂಬಂಧಗಳಲ್ಲಿ ಏರ್ಪಡುವವರು ಅತ್ಯಂತ ಜಾಗ್ರತೆ ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಮುನ್ನೆಚ್ಚರಿಕೆ ನೀಡಿದೆ. ವಿವಾಹ ಭರವಸೆ ನೀಡಿ ದೌರ್ಜನ್ಯಗೈದ ರೆಂಬ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿ ಪರಿಗಣಿಸುತ್ತಿದ್ದ ಮಧ್ಯೆ ನ್ಯಾಯಾಲಯ ಈ ಪರಾಮರ್ಶೆ ನಡೆಸಿದೆ. ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ಉಜ್ಜಲ್ ಭೂಯಾನ್ ಎಂಬಿವರು ಸೇರಿದ ವಿಭಾಗೀಯ ಪೀಠ ಕೇಸು ಪರಿಗಣಿಸಿತ್ತು. ದುಬಾಯಿಯಲ್ಲಿ ಆರೋಪಿ ತನ್ನೊಂದಿಗೆ ದೈಹಿಕ ಸಂಬಂಧದಲ್ಲಿ ಏರ್ಪಟ್ಟಿರುವುದಾಗಿ …

ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಆರ್‌ಸಿ ಮಾಲಕರಿಗೆ ದಂಡ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆ

ಕಾಸರಗೋಡು: ಪ್ರಾಯಪೂರ್ತಿಯಾಗದವರು ವಾಹನ ಚಲಾಯಿಸುತ್ತಿರುವುದು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಸಂಬಂಧ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲು ತೀರ್ಮಾನಿಸಿದೆ. ಇದರಂಗವಾಗಿ 18 ವರ್ಷ ಪ್ರಾಯಪೂರ್ತಿಯಾಗದವರಿಗೆ ಇನ್ನು ವಾಹನಗಳನ್ನು ಚಲಾಯಿಸಲು ನೀಡಿದ ಆರ್‌ಸಿ ಮಾಲಕರು 25,೦೦೦ ರೂಪಾಯಿ ದಂಡ ಪಾವತಿ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆಯನ್ನು ಕೂಡಾ ಅನುಭವಿಸಬೇಕಾಗಿ ಬರಲಿದೆ. ಮಾತ್ರವಲ್ಲದೆ ಪ್ರಾಯಪೂರ್ತಿಯಾಗಿಲ್ಲವೆಂಬ ಹೆಸರಲ್ಲಿ ಇದುವರೆಗೆ ರಿಯಾಯಿತಿ ಲಭಿಸುತ್ತಿದ್ದ ಅಪ್ರಾಪ್ತ ವಾಹನ ಚಾಲಕರಿಗೆ ಇನ್ನುಮುಂದೆ ಜುವನೈಲ್ ಹೋಮ್‌ನಲ್ಲಿ 6 ತಿಂಗಳು ವಾಸಿಸಬೇಕಾಗಿ …

ಎಂ.ವಿ. ಗೋವಿಂದನ್‌ರ ಪ್ರಚಾರ ಜಾಥಾದಲ್ಲಿ ವೃದ್ದ ನೀಡಿದ ಕೊಡುಗೆಗೆ ಟ್ವಿಸ್ಟ್: ಹಣ ನೀಡಿದ್ದು ಮುಖಂಡರ ನಿರ್ದೇಶ ಪ್ರಕಾರವೆಂದು ಹೇಳಿಕೆ

ಕಲ್ಲಿಕೋಟೆ: ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮುನ್ನಡೆಸುವ ಪ್ರಚಾರ ಜಾಥಾದ ವೇದಿಕೆಯಲ್ಲಿ ವೃದ್ದರೋರ್ವರು ನಗದು ಕೊಡುಗೆಯಾಗಿ ನೀಡಿದ ಘಟನೆಯಲ್ಲಿ ಟ್ವಿಸ್ಟ್ ಉಂಟಾಗಿದೆ. ಹಣ ನೀಡಿರುವುದು ಮುಖಂಡರ ನಿರ್ದೇಶ ಪ್ರಕಾರವೆಂದು ವೃದ್ದ ಬಹಿರಂಗಪಡಿಸಿದ್ದಾರೆ. ಫೆಬ್ರವರಿ ೯ರಂದು ಬಾಲುಶ್ಶೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಯ್ದೀನ್ ಎಂಬ ವೃದ್ದರು ವೇದಿಕೆಗೆ ತಲುಪಿ ಇದು ಪಿಂಚಣಿ ಹಣ, ಇದನ್ನು ಪಕ್ಷಕ್ಕೆ ಕೊಡು ಗೆಯಾಗಿ ನೀಡುತ್ತೇನೆ ಎಂದಿದ್ದರು. ಹಣವನ್ನು ಪಡೆದು ಕೊಂಡ ರಾಜ್ಯ ಕಾರ್ಯದರ್ಶಿ ಕೊಡು ಗೆಯನ್ನು ಸ್ವೀಕರಿಸಿ ರುವುದಾಗಿ ಕಲ್ಪಿಸಿಕೊಳ್ಳಿ ಎಂದು …

ಭಾರತದಲ್ಲಿ ಮುಸ್ಲಿಮರು ಸುರಕ್ಷಿತರು; ಯಾವುದೇ ಸಂದಿಗ್ಧತೆಯಿಲ್ಲ- ಕಾಂತಾಪುರಂ

ದೆಹಲಿ: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ತನ್ನ ಇಷ್ಟ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂತಾಪುರಂ ಗಮನಾರ್ಹವಾದ ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಸಂದಿಗ್ಧತೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಮಾತುಕತೆಯಲ್ಲಿ ಸಂತೋಷವಿದೆ ಎಂದು ಕಾಂತಾಪುರಂ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಕ್ಫ್, ತೀವ್ರ ಮತದಾರರ ಯಾದಿ ಪರಿಷ್ಕರಣೆ ಎಂಬೀ ವಿಷಯಗಳಲ್ಲಿ ಪ್ರಧಾನಮಂತ್ರಿಗೆ ತನ್ನ ಆತಂಕವನ್ನು ತಿಳಿಸಿರುವುದಾಗಿಯೂ ಅವರು ನುಡಿದರು. ಪ್ರಧಾನಮಂತ್ರಿಯೊಂದಿಗಿನ ಮಾತುಕತೆಯ ಹೆಚ್ಚಿನ ಮಾಹಿತಿಗಳನ್ನು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ …

ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರಿಗೆ ಗಾಯ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪುಳಿಕುತ್ತಿ ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಅಗರ್ತಿಮೂಲೆಯಲ್ಲಿ ಸ್ಥಳೀಯರಾದ ಇಕ್ಬಾಲ್ ಹಾಗೂ ರಾಧಾಕೃಷ್ಣರಿಗೆ ಬೀದಿನಾಯಿ ಕಚ್ಚಿದ್ದು, ಇವರು ಚಿಕಿತ್ಸೆ ಪಡೆದಿದ್ದಾರೆ. ಬಳಿಕ ನಾಯಿಯನ್ನು ಹಿಡಿದು ಸ್ಥಳೀಯರು ಕಟ್ಟಿಹಾಕಿದ್ದಾರೆ. ಪುಳಿಕುತ್ತಿ, ಪ್ರತಾಪ ನಗರ, ಅಗರ್ತಿ ಮೂಲೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ವ್ಯಾಪಕಗೊಂ ಡಿದ್ದು, ವಾಹನ ಸಂಚಾರದ ವೇಳೆಯೂ ಬೆನ್ನಟ್ಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೀದಿನಾಯಿ ಗಳ ನಿಯಂತ್ರಣಕ್ಕೆ ಅಗತ್ಯ …

ವಿಷಾಹಾರ: ಇಬ್ಬರು ಮೃತ್ಯು; ಹೋಟೆಲ್‌ಗೆ ಬೀಗ

ತಿರುವನಂತಪುರ: ವಿಳಿಂಞದ ಹೋಟೆಲ್‌ನಿಂದ ಆಹಾರ ಸೇವಿಸಿದ ಇಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂ, ನಿಲಾಮೇಲ್ ನಿವಾಸಿಗಳಾದ ರಶೀದ ಬೀವಿ, ಅಳಿಯ ಶಾಜಿ ಎಂಬಿವರು ಮೃತಪಟ್ಟವರು. ವಿಷಾಹಾರ ಮರಣಕ್ಕೆ ಕಾರಣವೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ವಿಳಿಂಞದ ಹೋಟೆಲ್‌ನಿಂದ ರಶೀದ ಬೀವಿ ಹಾಗೂ ಶಾಜಿ ಸಹಿತದ ಆರು ಮಂದಿ ಆಹಾರ ಸೇವಿಸಿದ್ದರು. ಇವರಲ್ಲಿ ನಾಲ್ಕು ಮಂದಿಗೆ ದೈಹಿಕ ಅಸ್ವಸ್ಥತೆಗಳು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ರಶೀದ ಬೀವಿ ಹಾಗೂ ಶಾಜಿಯವರ ಜೀವ ಉಳಿಸ ಲು ಸಾಧ್ಯವಾಗಲಿಲ್ಲ. ಶಾಜಿಯ ವರ ಪತ್ನಿ ಸಜಿನ …

ಕಳತ್ತೂರಿನಲ್ಲಿ ವ್ಯಾಪಾರಿ ಮನೆಯಿಂದ ನಗ-ನಗದು ಕಳವು: ತನಿಖೆ ಆರಂಭ; 7 ಬೆರಳಚ್ಚುಗಳು ಪತ್ತೆ

ಕುಂಬಳೆ: ಕಳತ್ತೂರಿನಲ್ಲಿ ವ್ಯಾಪಾರಿಯ ಮನೆಯಿಂದ  ಚಿನ್ನಾಭರಣ ಹಾಗೂ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಕಳತ್ತೂರು ಪಂಜಿಕಲ್ಲಿನ ಯು.ಕೆ.ಯೂಸಫ್‌ರ ಮನೆಯಿಂದ  ಕಳವು ನಡೆದಿದೆ. ಎರಡಂತಸ್ತಿನ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್ ರೂಂನ  ಕಪಾಟುಗಳನ್ನು ತೆರೆದು 9 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ.  ದೋಚಿದ್ದಾರೆ. ಶನಿವಾರ ರಾತ್ರಿ  7 ಗಂಟೆಯಿಂದ ನಿನ್ನೆ ಬೆಳಿಗ್ಗೆ 7 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ಸಂಶಯಿಸಲಾಗಿದೆ. ವಿಷಯ ತಿಳಿದು ಕುಂಬಳೆ ಪೊಲೀಸರು …

ಸೋಷ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಚಿನ್ನು ಪಾಪು ಸಾವಿನ ಬೆನ್ನಲ್ಲೇ ಸ್ನೇಹಿತ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸೋಶ್ಯಲ್ ಮೀಡಿಯಾ  ಇನ್‌ಫ್ಲುವೆನ್ಸರ್ ಚಿನ್ನು ಪಾಪು ಯಾನೆ ರೇಷ್ಮ (24)ರ ಸ್ನೇಹಿತ  ಸಂದೇಶ್ (28)ರ ಸಾವು  ನೇಣು ಬಿಗಿದು  ಸಂಭವಿಸಿರುವುದಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ  2.30 ರ ವೇಳೆ ಸಂದೇಶ್ ಕೂಡ್ಲು ಮನ್ನಿಪ್ಪಾಡಿಯಲ್ಲಿರುವ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.   ಸಂದೇಶ್‌ರ ಸ್ನೇಹಿತೆ ಆದೂರು ಆಲಂತಡ್ಕದ ಚಿನ್ನು ಪಾಪು ಯಾನೆ ರೇಷ್ಮ …

ಕೊಲೆ ಪ್ರಕರಣದ ಆರೋಪಿಯಾದ 34ರ ಯುವತಿಗೆ ದೌರ್ಜನ್ಯ: ಪುತ್ರನ ಗೆಳೆಯನ ವಿರುದ್ಧ ಕೇಸು

ಕಾಸರಗೋಡು: ಬೇಕಲ್ ಪೊಲೀಸ್ ಸಬ್ ಡಿವಿಷನ್ ವ್ಯಾಪ್ತಿಯ ಕೋಲಾಹಲ ಮೂಡಿಸಿದ್ದ ಕೊಲೆ ಪ್ರಕರಣವೊಂದರ ಆರೋಪಿಯಾದ ಯುವತಿಯನ್ನು  ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. 34ರ ಹರೆಯದ ಯುವತಿ ನೀಡಿದ ದೂರಿನಲ್ಲಿ ಪುತ್ರನ ಗೆಳೆಯನಾದ 22ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. 2025 ನವೆಂಬರ್ 21ರಂದು ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ಪುತ್ರನ ಗೆಳೆಯನಾದ ಯುವಕನ ಜೊತೆ ಕಲ್ಲಿಕೋಟೆಗೆ ತೀರ್ಥಾಟನೆಗೆ ಯುವತಿ ತೆರಳಿದ್ದರು. ಅಂದು ಕಲ್ಲಿಕೋಟೆಯ ಒಂದು ವಸತಿಗೃಹದಲ್ಲಿ ಇವರಿಬ್ಬರು ವಾಸವಾಗಿದ್ದರು. ಅಲ್ಲಿ ಯುವಕ ಮಾನಭಂಗಗೈದಿರುವುದಾಗಿಯೂ, ದೃಶ್ಯವನ್ನು ಫೋನ್‌ನಲ್ಲಿ ದಾಖಲಿಸಿರುವುದಾಗಿಯೂ ಹೇಳಲಾಗಿದೆ. …

ಖಾಸಗಿ ಬಸ್ ಚಾಲಕನಿಗೆ ಆಕ್ರಮಿಸಿ ದಾರಿ ಮಧ್ಯೆ ಉಪೇಕ್ಷೆ: ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕದಲ್ಲಿ ಖಾಸಗಿ ಬಸ್ ಚಾಲಕನಿಗೆ ಮಾರಕವಾಗಿ ಹಲ್ಲೆಗೈದ ಬಳಿಕ ದಾರಿ ಮಧ್ಯೆ ಉಪೇಕ್ಷಿಸಿದ ಘಟನೆ ನಡೆದಿದೆ. ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲುಗೊಂಡ ಚಾಲಕನಿಗೆ ಪ್ರಜ್ಞೆ ಮರಳಿರುವುದರೊಂದಿಗೆ ಘಟನೆ ಬಹಿರಂಗಗೊಂಡಿದೆ. ಬೇಡಡ್ಕ ಪೊಲೀಸರು ಸ್ವತಃ ತನಿಖೆ ಆರಂಭಿಸಿದ್ದಾರೆ. ಚಾಲಕನಿಂದ ಸಮಗ್ರವಾದ ಹೇಳಿಕೆ ಸಂಗ್ರಹಿಸಿದ ಬಳಿಕ ಕೇಸು ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಖಾಸಗಿ ಬಸ್ ಚಾಲಕ  ಬುಧವಾರ ಬೆಳಿಗ್ಗೆ ಬಂದಡ್ಕ ಬಸ್ ನಿಲ್ದಾಣದ ಸಮೀಪ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ಬಂದಡ್ಕದ …