ಕಲೆಕ್ಟರೇಟ್ ಪರಿಸರದಲ್ಲಿ ಕಾಡಿನೊಳಗೆ ವಾಹನದ ಅಸ್ಥಿಪಂಜರ: ನೋಡುಗರಿಗೆ ಭೀತಿ

ಕಾಸರಗೋಡು: ಈ ಕಾಡಿನಲ್ಲಿ ಹುಲಿ ಅಥವಾ ಚಿರತೆ ಇಲ್ಲ. ಆದರೆ ಈ ಚಿತ್ರವನ್ನು ಕಂಡರೆ ಇಲ್ಲಿ ಯಾವುದೋ ವನ್ಯ ಮೃಗ ಇದೆಯೆಂದು ಭಯವುಂಟಾಗಬಹುದು. ಕಾಸರಗೋಡು ಕಲೆಕ್ಟರೇಟ್ ಕಟ್ಟಡದ ಹಿಂಭಾಗದಲ್ಲಿ ಇಂತಹ ಭೀತಿ ಹುಟ್ಟಿಸುವ ದೃಶ್ಯವಿದೆ. ಅದಕ್ಕೆ ಹೊಂದಿಕೊಂಡು ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಕಚೇರಿ ಕಾರ್ಯಾ ಚರಿಸುತ್ತಿದೆ. ಈ ಪ್ರದೇಶದಲ್ಲಿ ಕಾಡು ಪೊದೆಗಳು ಬೆಳೆದಿವೆ.  ಈ ಕಾಡಿನೊಳಗೆ ಒಂದು ಟಿಪ್ಪರ್ ಲಾರಿಯನ್ನು ಕಾಣ ಬಹುದಾಗಿತ್ತು. ಲಾರಿಯಲ್ಲಿದ್ದ  ಹೊಯ್ಗೆ ಈಗಲೂ ಇದೆ. ದಶಕಗಳ ಕಾಲ ಲಾರಿಯಲ್ಲಿದ್ದ ಹೊಯ್ಗೆ ಮೇಲೆ ಕಾಡು …

ಮಣ್ಣಂಗುಳಿ ಮೈದಾನ, ಅಂಗನವಾಡಿ ಪರಿಸರದ ತ್ಯಾಜ್ಯರಾಶಿಯಿಂದ ಸ್ಥಳೀಯರಿಗೆ ರೋಗಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ರಸ್ತೆ ಹಾಗೂ ಪರಿಸರದ ಅಂಗನವಾಡಿ ಬಳಿಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ರಾಶಿ ಸಂಗ್ರಹ ಗೊಂಡಿದ್ದು , ದುರ್ವಾಸನೆ ಬೀರುತ್ತಿ ರುವ ಹಿನ್ನೆಲೆಯಲ್ಲಿ ಸಾರ್ವಜನಿ ಕರು ಹಾಗೂ ಮಕ್ಕಳು ಸಮಸ್ಯೆ ಅನು ಭವಿಸು ತ್ತಿರುವುದಾಗಿ ದೂರಲಾಗಿದೆ. ಕಳೆದ ಹಲವಾರು ತಿಂಗಳುಗಳಿAದ ಮಣ್ಣಂಗುಳಿ ಮೈದಾನ ಪರಿಸರದ ವಿವಿಧ ರಸ್ತೆಗಳಲ್ಲಿ ಹಾಗೂ ಅಂಗನ ವಾಡಿ ಸಮೀಪದಲ್ಲೇ ಭಾರೀ ಪ್ರಮಾಣದ ತ್ಯಾಜ್ಯವಿದ್ದರೂ ತೆರವು ಗೊಳಿಸಲು ಕ್ರಮಕೈಗೊಳ್ಳದಿರುವು ದರಿಂದ ಮೂಗಿಗೆ ಕೈ ಹಿಡಿದು ತೆರಳುವ …

ಕೇಂದ್ರ ಸರಕಾರದ ಯೋಜನೆಗಳನ್ನು ಕಮ್ಯೂನಿಸ್ಟ್ ಸರಕಾರದ್ದೆಂದು ಬಿಂಬಿಸಲಾಗುತ್ತಿದೆ- ನಳಿನ್ ಕುಮಾರ್ ಕಟೀಲ್

ಬದಿಯಡ್ಕ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವಿಭಾಗದವರಿಗೆ ಸಮಾನವಾದ ರೀತಿಯಲ್ಲಿ ಯೋಜನೆಗಳನ್ನು ತಲುಪಿಸುವಾಗ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸದೆ, ಯೋಜನೆಗಳು ತಮ್ಮದೆಂದು ಬಿಂಬಿಸುವ ದುಷ್ಠ ಆಡಳಿತ ನಡೆಸುತ್ತಿರುವುದಾಗಿ ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಕುಂಬ್ಡಾಜೆ ಪಂಚಾಯತ್ ಮೈಲ್ತೊಟ್ಟಿ ಎಸ್‌ಸಿ ಕಾಲನಿಯಲ್ಲಿ ನಿನ್ನೆ ನಡೆದ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯು ಎಲ್ಲರ ಕ್ಷೇಮಕ್ಕಾಗಿ ಎಲ್ಲಾ ಪಂಗಡದವರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ನಡೆಸುತ್ತಿದ್ದು, …

4 ತಿಂಗಳ ಗರ್ಭಿಣಿ ಯುವತಿ ಪತಿ ಗೃಹದಲ್ಲಿ ನೇಣು ಬಿಗಿದು ಮೃತ್ಯು: ನಿಗೂಢತೆ ಆರೋಪ

ಕೊಲ್ಲಂ: ನಾಲ್ಕು ತಿಂಗಳ ಗರ್ಭಿಣಿ ಯಾದ ಯುವತಿ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಕೊಲ್ಲಂ ಕಡೈಕಲ್ ಇಟ್ಟಿವ ಫಿಲ್ಗಿರಿಯ ನಿವಾಸಿ ಸುಬಿನ್‌ರ ಪತ್ನಿ ಶರಣ್ಯ (26)ರ ಮೃತದೇಹ ಮಲಗುವ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಘಟನೆಯಲ್ಲಿ ನಿಗೂಢತೆ ಆರೋಪಿಸಿ ಯುವತಿಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಕಣ್ಣೂರು ನಿವಾಸಿ ಯಾದ ಶರಣ್ಯ ಹಾಗೂ ಸುಬಿನ್ ಒಂದು ವರ್ಷದ ಹಿಂದೆ ವಿವಾಹಿತರಾ ಗಿದ್ದರು. ನಿನ್ನೆ ಸಂಜೆ ನೆರೆಮನೆಯ ವಿದ್ಯಾರ್ಥಿ ಶರಣ್ಯಳ …

ಕಡಂಬಾರು ಶಾಲೆಗೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟನೆ

ಕಡಂಬಾರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ಲಾನ್‌ಫಂಡ್ ಉಪಯೋಗಿಸಿ ಕಡಂಬಾರು ಸರಕಾರಿ ಹೈಸ್ಕೂಲ್‌ಗೆ 1.09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಆರು ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮೀಂಜ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಪಿಟಿಎ ಅಧ್ಯಕ್ಷ ಮೊಯ್ದೀನ್ ಕುಂಞಿ, ಮುಖ್ಯೋಪಾಧ್ಯಾಯ ಎಂ. ಅಶೋಕ, ಅಧ್ಯಾಪಕ ಅಬೂಬಕ್ಕರ್ ಮಾತನಾಡಿದರು.

ಎಕೆಪಿಎ ವೆಸ್ಟ್ ಯೂನಿಟ್‌ನಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯಂಗ ವಾಗಿ ಯೂನಿಟ್ ಸದಸ್ಯರ ಕುಟುಂಬದ ಹಿರಿಯ ಮಹಿಳೆಯನ್ನು ಅಭಿನಂದಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆಯವರ ತಾಯಿ ಉಮಾವತಿ ನಾರಾಯಣ ಆಚಾರ್ಯ ಕೆರೆಮನೆ ಇವರನ್ನು ಅವರ ನಿವಾಸಕ್ಕೆ ತೆರಳಿ ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ.ಎಂ. ಅಭಿನಂದಿಸಿದರು. ಕಾರ್ಯದರ್ಶಿ ಶಾಲಿನಿ ರಾಜೇಂ ದ್ರನ್, ವಾರ್ಡ್ ಕೌನ್ಸಿಲರ್ ಕೆ.ಎನ್. ರಾಮಕೃಷ್ಣ ಹೊಳ್ಳ ಭಾಗವಹಿಸಿದರು.ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ, ಜಿಲ್ಲಾ ಜತೆ ಕಾರ್ಯದರ್ಶಿ …

ಭಾಸ್ಕರನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ  ಕುಂಬಳೆ ಭಾಸ್ಕರನಗರ ನವೋದಯ ಗ್ರಂಥಾಲಯ ಮತ್ತು ವಾಚನಾಲಯ, ನವೋದಯ ಫ್ರೆಂಡ್ಸ್ ಕ್ಲಬ್, ನವೋದಯ ವುಮೆನ್ಸ್ ವಿಂಗ್ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ರಾಷ್ಟ್ರೀಯ ಮಾಯಾಜಾಲ ಪ್ರಶಸ್ತಿ ವಿಜೇತೆ ಪ್ರೊ| ಮುಬೀನ ಫರ್ವೀನ್ ತಾಜ್ ಮಹಿಳಾ ದಿನಾಚರಣೆಯ ಥೀಮ್ ಬಣ್ಣಗಳ ಮಹತ್ವವನ್ನು ವಿವರಿಸಿದರು. ಅಂತಾರಾಷ್ಟ್ರೀಯ ಜಾದು ಪ್ರಶಸ್ತಿ ವಿಜೇತೆ ಕಲಾಸೃಷ್ಠಿ ತಂಡದ ನಿರ್ದೇಶಕಿ ಶಮಾ ಪರ್ವೀನ್ ತಾಜ್ ಸಮಾನತೆ ಮತ್ತು ಬಾಲಕಿಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲದ ಮಹತ್ವ ಎಂದು ತಿಳಿಸಿದರು. …

ಯುವಕನನ್ನು ಕೊಲೆಗೈದು ಮೃತದೇಹವನ್ನು ಲಿಫ್ಟ್‌ನ ಹೊಂಡದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆ; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾದ ನೀರು ತುಂಬಿದ ಹೊಂಡದಲ್ಲಿ ವಲಸೆ ಕಾರ್ಮಿಕನೋರ್ವ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್‌ನಲ್ಲಿ  ಲಿಫ್ಟ್ ನಿರ್ಮಾಣಕ್ಕೆಂದು ತೋಡಲಾದ ಹೊಂಡದಲ್ಲಿ ನಿನ್ನೆ ರಾತ್ರಿ ಸುಮಾರು 11.30ರ ವೇಳೆ  ಮೃತದೇಹ ಕಂಡುಬಂದಿದೆ. ಆ ಬಗ್ಗೆ ಪ್ರಸ್ತುತ ಕಟ್ಟಡದ  ಮಾಲಕನ ಪುತ್ರ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …

ನಿವೃತ್ತ ಎಸ್‌ಐ ನಿಧನ

ನೀರ್ಚಾಲು: ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಬೇಳ ಚರ್ಚ್ ಬಳಿಯ ನಿವಾಸಿ ಪ್ರಭಾಕರನ್ ಬಿ (70) ನಿಧನಹೊಂದಿದರು. ಇವರು ಬೇಡಗಂ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಶಾಂತಕುಮಾರಿ, ಮಕ್ಕಳಾದ ವಿನೋದ್‌ರಾಜ್, ವಿವೇಕ್‌ರಾಜ್ (ಗಲ್ಫ್ ಉದ್ಯೋಗಿಗಳು), ಶ್ವೇತಪ್ರಭ, ಅಳಿಯ ಪ್ರದೀಪ್‌ಕೃಷ್ಣ (ಕುಂಬಳೆ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿ), ಸೊಸೆಯಂದಿರಾದ ರಮ್ಯ, ಅಸ್ತಿಕ, ಸಹೋದರರಾದ ನಾರಾಯಣನ್, ಸುಭಾಷ್, ಜಯಕರ, ಸಹೋದರಿ ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ  ಸೂರ್ಯಕುಮಾರ್, ಹರಿಶ್ಚಂದ್ರ, …

ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನ

ತಿರುವನಂತಪುರ: ಕೇಂದ್ರ ಸರಕಾರದ ಆರ್ಥಿಕ ನೆರವಿನೊಂದಿಗೆ ಕೇರಳದಲ್ಲಿ  ಜ್ಯಾರಿಗೊಳಿಸಿರುವ ಒಟ್ಟು 10,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಅಪರಾಹ್ನ ನೆರವೇರಿಸಲಿರುವಂತೆಯೇ ಆ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ತಲಪ್ಪಾಡಿ-ಚೆಂಗಳ ಹಾಗೂ ಕಲ್ಲಿಕೋಟೆ ಬೈಪಾಸ್ ವೆಂಙಳಂ-ರಾಮನಾಟ್ಟುಕರೆ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯ ಉದ್ಘಾಟನೆ,  ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಪ್ರಕಾರ ಕೇರಳದಲ್ಲಿ ನಿರ್ಮಿಸಲಾಗಿರುವ 23 ರಸ್ತೆಗಳ ಉದ್ಘಾಟನೆ, ಅಮೃತ್ ಭಾರತ್ ಸ್ಟೇಶನ್ ಯೋಜನೆ ಪ್ರಕಾರ ಶೊರ್ನೂರು ಜಂಕ್ಷನ್, …