ಮನೆ ಶೋಚನೀಯ ಸ್ಥಿತಿಯಲ್ಲಿ: ಸಂಕಷ್ಟ ಪರಿಹಾರಕ್ಕೆ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ಪುತ್ತಿಗೆ: ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದಾದ ಮನೆಯಲ್ಲಿ ಬಡಕುಟುಂಬವೊಂದು ವಾಸಿಸುತ್ತಿದ್ದು, ಆತಂಕ ನೆಲೆಗೊಂ ಡಿದೆ. ಪುತ್ತಿಗೆ ಪಂಚಾಯತ್ ೬ನೇ ವಾರ್ಡ್ ಪಾಡ್ಲಡ್ಕದಲ್ಲಿ ಬಡ ಕುಟುಂಬದ ಮೈಮೂನ ಎಂಬವರು ವಾಸಿಸುವ ಮನೆ ಅಪಾಯ ಭೀತಿಯೊಡ್ಡುತ್ತಿದೆ. ೧೪ ವರ್ಷಗಳ ಹಿಂದೆ ಹಳೆಯ ಹೆಂಚಿನ ಮನೆ ಹಾಗೂ ಆರು ಸೆಂಟ್ ಸ್ಥಳವನ್ನು ಮೈಮೂನ ಖರೀದಿಸಿದ್ದರು. ಹೆಂಚಿನ ಮೇಲ್ಛಾವಣಿಯಿಂದ ಮಳೆ ನೀರು ಮನೆಯೊಳಗೆ ಸೋರುತ್ತಿದೆ. ಇದರಿಂದ ಛಾವಣಿ ಮೇಲೆ ಪ್ಲಾಸ್ಟಿಕ್ ಹೊದಿಸಿ ನೀರು ಒಳಗೆ ಬೀಳುವುದನ್ನು ತಡೆಯಲಾಗಿದೆ. ಆದರೂ ಜೋರಾಗಿ ಗಾಳಿ ಬೀಸಿದರೆ …

ಜಾತಿ ಚಿಂತನೆ ತೊರೆದು ಸಮಸ್ತ ಹಿಂದೂ ಸಮಾಜ ಒಂದಾಗಬೇಕು-ಚಕ್ರವರ್ತಿ ಸೂಲಿಬೆಲೆ

ಕಾಸರಗೋಡು: ಜಾತಿ ಚಿಂತನೆ ತೊರೆದು ಸಮಸ್ತ ಹಿಂದೂ ಸಮಾಜ ಒಂದಾಗಬೇಕೆಂದು ಶ್ರೇಷ್ಠ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಹಿಂದೂ ಸಮಾಜವನ್ನು ನಿರಂತರ ವಾಗಿ ಜಾತಿ  ಹೆಸರಲ್ಲಿ ವಿಭಜಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತವಾದ ರೀತಿಯ ಷಡ್ಯಂತ್ರ ಅಡಗಿದೆ. ಆದ್ದರಿಂದ ಹಿಂದೂ ಗಳೆಲ್ಲರೂ ಜಾತಿ ಚಿಂತನೆಗೆ ಪ್ರಾಮುಖ್ಯತೆ ನೀಡದೆ ಎಲ್ಲರೂ ಸಂಘಟಿತರಾಗಬೇ ಕಾಗಿದೆಯೆಂದು ಅವರು ಹೇಳಿದ್ದಾರೆ. ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವ ದಂಗವಾಗಿ ನಿನ್ನೆ ಸಂಜೆ ನಡೆದ ಮಹಿಳಾ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡು …

ಕುಂಬಳೆ ಹೆದ್ದಾರಿಯಲ್ಲಿ ಟೋಲ್ ಬೂತ್: ಬಿಜೆಪಿ ವಿರುದ್ಧ ಎಸ್‌ಡಿಪಿಐ ಹೇಳಿಕೆ ಸುಳ್ಳು-ಬಿಜೆಪಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕ ಟೋಲ್ ಬೂತ್ ನಿರ್ಮಾಣ ವಿಷಯದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುತ್ತಿಲ್ಲವೆಂಬ ಎಸ್‌ಡಿಪಿಐಯ ಹೇಳಿಕೆ ಸುಳ್ಳು ಎಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಆರೋಪಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆರಂಭವಾದಾಗಿನಿಂದ ಜನರಿಗೆ ಅಗತ್ಯವಿರುವ ಕಡೆಗಳಲ್ಲಿ ಬಿಜೆಪಿ ಮಧ್ಯಪ್ರವೇಶಿಸಿದೆ.  ಕಾಸರಗೋಡು  ಜಿಲ್ಲೆಯಲ್ಲಿ ಸಂಸದ ಹಾಗೂ ಶಾಸಕರಿಗಿಂತ  ಬಿಜೆಪಿ ಜಿಲ್ಲಾಧ್ಯಕ್ಷರು ಹೆಚ್ಚು ಮಧ್ಯಪ್ರವೇಶಿಸಿದ್ದಾರೆಂಬುದಕ್ಕೆ ಪುರಾವೆಗಳಿವೆ.  ಟೋಲ್ ಸಮಸ್ಯೆಯ ಕುರಿತು ಕೇಂದ್ರ ಸಾರಿಗೆ ಸಚಿವರಿಗೆ ವರದಿ ಸಲ್ಲಿಕೆ ಸೇರಿದಂತೆ ವಿವಿಧ ಚಟುವಟಿಕೆಗಳೊಂದಿಗೆ ಬಿಜೆಪಿ ಕುಂಬಳೆ ಮಂಡಲ ಸಮಿತಿ ಮುಂದುವರಿಯುತ್ತಿದೆ. …

ತಲೆಹೊರೆ ಕಾರ್ಮಿಕ ನಿಧನ

ಉಪ್ಪಳ: ಪಚ್ಲಂಪಾರೆ ಎಸ್.ಸಿ ಕಾಲನಿ ನಿವಾಸಿ ರಾಮ ಯು.ಟಿ [65] ನಿಧನರಾದರು. ಸೋಮವಾರ ರಾತ್ರಿ ಇವರಿಗೆ ಎದೆನೋವು ಉಂಟಾಗಿದ್ದು ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಹೊಂದಿದರು. ಇವರು ಹಲವು ವರ್ಷಗಳಿಂದ ಉಪ್ಪಳ ಪೇಟೆಯಲ್ಲಿ ತಲೆಹೊರೆ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಸುಜಾತ, ಸುನಿಲ್, ಸುಜಿತ್, ಸುಧೀರ್, ಅಳಿಯ ಅಯ್ಯಪ್ಪ, ಸೊಸೆಯಂದಿರಾದ ಜಯಶ್ರೀ, ಜಯಶ್ರೀ, ಸಹೋದರಿ ಸುಂದರಿ ಹಾಗೂ …

ಉಪ್ಪಳದಲ್ಲಿ ಅಪಾರ್ಟ್‌ಮೆಂಟ್‌ನಿಂದ ಮಲಿನ ಜಲ ಸಾರ್ವಜನಿಕ ಸ್ಥಳಕ್ಕೆ ಹರಿದುಬಿಡುವುದರ ವಿರುದ್ಧ  ಕ್ರಿಯಾ ಸಮಿತಿಯಿಂದ ಮಾರ್ಚ್

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಟ್ಟಡ ನಿರ್ಮಾಣಗಳು ಅಧಿಕಾರಿಗಳ ನಿರ್ಲಕ್ಷ್ಯ ಕ್ರಮದಿಂದಾಗಿ ಅವೈಜ್ಞಾನಿಕವಾಗಿವೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವುಗಳನ್ನು ನೋಡಿ ನಿಂತಿರುವುದರ ಫಲವಾಗಿ ಇದೀಗ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆಯೆಂದು ಮಾನವ ಹಕ್ಕು ಕಾರ್ಯಕರ್ತ ಕೂಕಲ್ ಬಾಲಕೃಷ್ಣನ್ ಆರೋಪಿಸಿದ್ದಾರೆ. ಉಪ್ಪಳ ಕೈಕಂಬದ ಅಪಾರ್ಟ್‌ಮೆಂಟ್‌ವೊಂದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪರಿಸರ ಪ್ರದೇಶಕ್ಕೆ  ಮಲಿನ ಜಲ ಹರಿದುಬಿಡುವುದರ  ವಿರುದ್ಧ ನಿನ್ನೆ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಫ್ಲಾಟ್‌ನ ಮುಂಭಾಗದಲ್ಲಿ ಪೊಲೀಸರು ಮಾರ್ಚ್‌ಗೆ ತಡೆಯೊಡ್ಡಿದ್ದಾರೆ. ಬಹುಜನ ಮುನ್ನಡೆ ಕ್ರಿಯಾ ಸಮಿತಿ …

ಶ್ರೀ ನಾರಾಯಣಗುರು ಜಯಂತಿ 7ರಂದು

ಕಾಸರಗೋಡು: ಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭಗೊಂಡಿದೆ. ಗುರುಪೂಜೆ, ಪ್ರಾರ್ಥನೆ, ಸಂಸ್ಮರಣೆ, ಪಾಯಸ ವಿತರಣೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಸೆ. 7ರಂದು ನಾರಾಯಣಗುರು ಜಯಂತಿ ಆಚರಿಸಲಾಗುವುದು. ಗುರುಮಂದಿರಗಳು, ಗುರುಗಳು ಸ್ಥಾಪಿಸಿದ ಕ್ಷೇತ್ರಗಳು, ಗುರುವಿಗೆ ಸಂಬಂ ಧಪಟ್ಟ ಸ್ಥಳಗಳಲ್ಲಿ ಕಾರ್ಯಕ್ರಮಗಳಿ ರುವುದು. ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಣೆಗೆ ಮಂದಿರದ ಮುಖ್ಯ ಅರ್ಚಕ ಬಾಬುರಾಜ್ ನೇತೃತ್ವ ನೀಡು ವರು. 7ರಂದು ಮುಂಜಾನೆ 5.30ಕ್ಕೆ ಬಾಗಿಲು ತೆರೆಯುವುದು, 6.30ಕ್ಕೆ ಗುರು ಅರ್ಚನೆ, …

ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ಸದಸ್ಯರಿಗೆ ಓಣಂ ಉಡುಪು ವಿತರಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ ವೆಸ್ಟ್ ಯೂನಿಟ್‌ನ ವತಿಯಿಂದ ಓಣಂ ಪ್ರಯುಕ್ತ ಯೂನಿಟ್ ಸದಸ್ಯ ರಿಗೆ ಉಡುಪು ವಿತರಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಇವರು ಸದಸ್ಯೆ ಶಾಲಿನಿ ರಾಜೇಂ ದ್ರನ್‌ರಿಗೆ ಓಣಂ ಉಡುಪು ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಟ್‌ನ ಹಿರಿಯ ಸದಸ್ಯ ಪ್ರಕಾಶ್ ಸ್ಟುಡಿಯೋ ಮಾಲಕ ಜಯಪ್ರಕಾಶ್ ಅವರಿಗೆ ಯೂನಿಟ್ ನೀರೀಕ್ಷಕ ಶ್ರೀಜಿತ್ ಓಣಂ ಉಡುಪು ನೀಡಿದರು.ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸ್ಪೊರ್ಟ್ಸ್ ಕೋಓರ್ಡಿನೇಟರ್ ರತೀಶ್ ರಾಮು, ವಲಯ ಕೋಶಾ ಧಿಕಾರಿ ಮನು …

ಸಿಪಿಐ ರಾಜ್ಯ ಸಮ್ಮೇಳನಕ್ಕೆ ಅದ್ದೂರಿಯ ಚಾಲನೆ

ಆಲಪ್ಪುಳ:  ಸಿಪಿಐಯ ರಾಜ್ಯ ಸಮ್ಮೇಳನಕ್ಕೆ ಆಲಪ್ಪುಳದಲ್ಲಿ ಅದ್ದೂರಿಯ ಚಾಲನೆ ದೊರಕಿದೆ. ಕಯ್ಯೂರು, ಪಾಳಯಂ ಮತ್ತು ಗುರುನಾಡ್ ಎಂಬೆಡೆಗಳಿಂದಾಗಿ ಬಂದ ಪತಾಕೆ, ಬ್ಯಾನರ್ ಮತ್ತು ಧ್ವಜಸ್ತಂಭಗಳ ಜಾಥಾ ನಿನ್ನೆ ಸಮ್ಮೇಳನ ನಗರದಲ್ಲಿ ಸಂಗಮಿಸಿದ ಬಳಿಕ ವಯಲಾರು ಹೋರಾಟ ನೇತಾರೆ ಪಿ.ಕೆ. ಮೇದಿನಿ ಧ್ವಜಾರೋಹಣ ನಡೆಸುವ ಮೂಲಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂ, ಅಸಿಸ್ಟೆಂಟ್ ರಾಜ್ಯ ಕಾರ್ಯದರ್ಶಿ ಸಂಸದ ಪಿ.ಪಿ. ಸುನೀಶ್, ಸಚಿವರುಗಳಾದ ಪಿ. ಪ್ರಸಾದ್, ಕೆ. ರಾಜನ್ ಪ್ರಧಾನ ಸಂಚಾಲಕ ಟಿ.ಜೆ. …

ಮಂಗಲ್ಪಾಡಿ ಏಕಾಹ ಭಜನಾ ಮಂದಿರ ಮಹಾಸಭೆ: ಶಾರದೋತ್ಸವ, ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಜರಗಿತು. ಲಿಂಗಪ್ಪ ಶೆಟ್ಟಿಗಾರ್ ಪರಂಕಿಲ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕೃಷ್ಣ ಪಿ ಅಡ್ಕ, ಬಾಲಕೃಷ್ಣ ಅಂಬಾರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 39ನೇ ವರ್ಷದ ಶಾರದಾ ಮಹೋತ್ಸವ ಹಾಗೂ 75ನೇ ವರ್ಷದ ಏಕಾಹ ಭಜನೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಉತ್ಸವದ ಯಶಸ್ವಿಗೆ ನೂತನ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ತುಂಗ, ಉಪಾಧ್ಯಕ್ಷರಾಗಿ ಕೃಷ್ಣ ಪ್ರಗತಿನಗರ ಮುಟ್ಟಂ, ಜಾನಕಿ ಶೆಟ್ಟಿಗಾರ್ ಪೋರಿಕೋಡು, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಶೆಟ್ಟಿಗಾರ್ …

ಸ್ಥಳೀಯರ ಸಹಾಯ ಫಲ ನೀಡಲಿಲ್ಲ: ಆದೂರಿನಲ್ಲಿ ಹಾವು ಕಚ್ಚಿದ್ದ ವ್ಯಕ್ತಿ ಮೃತ್ಯು

ಮುಳ್ಳೇರಿಯ:  ಹಾವು ಕಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ಆದೂರು ಆಲಂತಡ್ಕದ  ಚಂದ್ರನ್ (60) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಗೋಸ್ತ್ ೨೧ರಂದು ಮನೆ ಪರಿಸರದಲ್ಲಿ ಚಂದ್ರನ್‌ರಿಗೆ ಹಾವು ಕಚ್ಚಿತ್ತು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ  ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದೇರಳಕಟ್ಟೆ  ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  ತುರ್ತು ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ಚಿಕಿತ್ಸೆಗಾಗಿ ಪ್ರತಿದಿನ  ಭಾರೀ ಮೊತ್ತ ವ್ಯಯಿಸ ಬೇಕಾಗಿ ಬಂದಿತ್ತು. ಬಡ ಕುಟುಂಬವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿರುವ ಹಣವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಕುಟುಂಬ ಸಂಕಷ್ಟಕ್ಕೀಡಾದಾಗ ಸ್ಥಳೀಯರು ಚಿಕಿತ್ಸಾ ಸಹಾಯ …