ಮಿಲ್ಮಾದಿಂದ ಹೊಸ ಹಾಲು ಮಾರುಕಟ್ಟೆಗೆ

ಮಂಜೇಶ್ವರ: ಮಿಲ್ಮಾ ಕಾಸರಗೋಡು ಡೈರಿ ವತಿಯಿಂದ ಮಂಜೇಶ್ವರ, ಉಪ್ಪಳ, ಕುಂಬಳೆ ಮತ್ತು ಬದಿಯಡ್ಕ ವ್ಯಾಪ್ತಿಯ ಗ್ರಾಹಕರಿಗಾಗಿ ಹೊಸ ಮಾದರಿಯ ಮಿಲ್ಮಾ ಹೋಮೋಜೆ ನೈಸ್‌ಡ್ ರಿಚ್ ಹಾಲು ಇಂದಿನಿಂದ ಲಭ್ಯವಾಗಲಿದೆ.  ಈ ಹಾಲು ಶೇ. 4.5ರಷ್ಟು ಫ್ಯಾಟ್ ಹೊಂದಿದ್ದು, ಅತ್ಯಂತ ಗುಣಮಟ್ಟದಿಂದ ಕೂಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಲೆಯೇ ಇಲ್ಲದ ಕುಂಬಳೆ ಪಂಚಾಯತ್ ತೀರ್ಮಾನ :ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ

ಕುಂಬಳೆ: ಕುಂಬಳೆ ಪಂಚಾ ಯತ್‌ನಲ್ಲಿ ತೀರ್ಮಾನಗಳಿಗೆ ಬೆಲೆ ಇಲ್ಲವೆಂದು ಸ್ಥಳೀಯರು ದೂರುತ್ತಾರೆ. ಕುಂಬಳೆಯ ಟ್ರಾಫಿಕ್ ಪರಿಷ್ಕಾರದಂಗ ವಾಗಿ ಮಾಜಿ ಅಧ್ಯಕ್ಷ ಬಸ್ ಪಾರ್ಕಿಂಗ್ ಹಲವು ಕಡೆಗಳಿಗೆ ಬದಲಾಯಿಸಿದ್ದರು. ಇದನ್ನು ಹೆಚ್ಚು ಕಾಲ ಬಾಳಲು ಬಿಡದೆ ಹೊಸ ಅಧ್ಯಕ್ಷರು ಅದನ್ನು ಹಳೆಯ ಬಸ್ ನಿಲ್ದಾಣಕ್ಕೆ ಬದಲಾಯಿಸಲು ತೀರ್ಮಾನಿಸಿದರು. ಆದರೆ ಈ ತೀರ್ಮಾನ ಕಡತದಲ್ಲಿಯೇ ಉಳಿದುಕೊಂಡ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿಯೇ ನಿಲುಗಡೆ ಆರಂಭಿಸಿದವು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಬಾರದೆಂದು ಪೊಲೀಸರು- ಆರ್‌ಟಿಒ ಅಧಿಕಾರಿಗಳು ಪ್ರದರ್ಶಿಸಿದ ಫ್ಲೆಕ್ಸ್ …

ಸ್ಫೋಟಕ ವಸ್ತು ವಶ ಪ್ರಕರಣ:ಕಟ್ಟತ್ತಡ್ಕ ಎಕೆಜಿ ನಗರದ ಕ್ವಾರ್ಟರ್ಸ್‌ಗೆ ಎನ್‌ಐಎ

ದಾಳಿ; ಆರ್‌ಸಿ ಬುಕ್, 3 ವಿಸಿಟಿಂಗ್ ಕಾರ್ಡ್‌ಗಳು ವಶ ಕುಂಬಳೆ: ಮಲಪ್ಪುರಂನ ಕೊಂಡೋಟಿಯಲ್ಲಿ  ಉಗ್ರ ಸ್ಫೋಟ ಸಾಮರ್ಥ್ಯದ  ಒಂದು ಲೋಡ್ ಸ್ಫೋಟಕ ವಸ್ತುಗಳನ್ನು ವಶಪಡಿಸಿ ಕೊಂಡ ಪ್ರಕರಣದ ತನಿಖೆಯಂಗ ವಾಗಿ  ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟತ್ತಡ್ಕ ಎಕೆಜಿ ನಗರ ದಲ್ಲೂ ಎನ್‌ಐಎ ದಾಳಿ ನಡೆಸಿದೆ. ಮೊನ್ನೆ ಬೆಳಿಗ್ಗೆ  ಇಲ್ಲಿಗೆ ತಲುಪಿದ ಐದು ಮಂದಿ ಅಧಿಕಾರಿಗಳ ತಂಡ ಕ್ವಾರ್ಟರ್ಸ್‌ವೊಂದರಲ್ಲಿ  ತಪಾಸಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎಯ ಕಸ್ಟಡಿಯಲ್ಲಿರುವ ಮುಹಮ್ಮದ್ ಸಲೀಂ ಎಂಬಾತನ ಪತ್ನಿ ಹಾಗೂ ಮಕ್ಕಳು ವಾಸಿಸುವ …

ಕೆ.ಎಂ.ಶಾಜಿ ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ

ಕಾಸರಗೋಡು: ರಾಜ್ಯದ ಪಂಚಾಯತ್, ನಗರಸಭೆ ಮತ್ತು ಕಾರ್ಪೋರೇಶನ್ ಒಳಗೊಂಡ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿಯವರಿಗೆ ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಹಿಸಿಕೊಟ್ಟಿದ್ದಾರೆ. ಇದೇ ರೀತಿ ಇತರ ಸಚಿವರುಗಳಾದ ಸನ್ನಿ ಜೋಸೆಫ್‌ರಿಗೆ ಕಣ್ಣೂರು, ಟಿ. ಸಿದ್ದಿಕ್‌ಗೆ ವಯನಾಡ್, ಎ.ಪಿ. ಅನಿಲ್ ಕುಮಾರ್-ಕಲ್ಲಿಕೋಟೆ, ಪಿ.ಕೆ. ಬಷೀರ್- ಮಲಪ್ಪುರಂ, ಎನ್, ಶಂಸುದ್ದೀನ್-ಪಾಲಕ್ಕಾಡ್, ಒ.ಜೆ.ಜನೀಶ್-ತೃಶೂರು, ರೋಜಿ ಎಂ ಜೋನ್-ಎರ್ನಾಕುಳಂ, ಅನೂಪ್ ಜೇಕಬ್ -ಇಡುಕ್ಕಿ, ಮೋನ್ಸ್ ಜೋಸೆಫ್ -ಕೋಟ್ಟಯಂ,  ಎಂ. ಲಿಜು-ಆಲಪ್ಪುಳ, ಪಿ.ಸಿ. ವಿಶ್ವನಾಥ್-ಪತ್ತನಂತಿಟ್ಟ, ಶಿಬು …

ಕೇರಳದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಯತ್ನ-ಶಾಸಕ ಎ.ಕೆ.ಎಂ. ಅಶ್ರಫ್

ಉಪ್ಪಳ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಪತ್ರಕರ್ತರ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಹಾಗೂ ಕೃತಿ ಪರಿಚಯ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆಯಿತು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಕಲಿಕೋಪಕರಣ ವಿತರಿಸಿ ಮಾತನಾಡಿ, ರಾಷ್ಟಿçÃಯತೆ ಬೆಳೆದಂತೆ ಗಡಿಗಳಿಗೆ ಹೆಚ್ಚು ಮಹತ್ವವಿಲ್ಲ. ಆದರೂ ಸ್ಥಳೀಯ ಸಂಸ್ಕೃತಿ ಉಳಿಸಲು ಪ್ರಯತ್ನಗಳು ಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಡಿ ಪ್ರದೇಶಗಳ ಭಾಷಾ ಅಭಿವೃದ್ಧಿಗೆ …

ಡಿ.ಕೆ. ಶಿವಕುಮಾರ್ ಜೂನ್ 3ರಂದು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ

ಬೆಂಗಳೂರು:  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕು ಮಾರ್ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಜೂನ್ 3ರಂದು ಅಧಿಕಾರ ವಹಿಸಿಕೊಳ್ಳಲಿ ದ್ದಾರೆಂದು ತಿಳಿದುಬಂದಿದೆ.  ಕಳೆದ ಮೂರು ವರ್ಷಗಳಿಂದ ನಡೆದ ತೀವ್ರ ಆಂತರಿಕ ಅಧಿಕಾರ ಹಂಚಿಕೆಯ ಹೋರಾಟದ ಬಳಿಕ ಅವರ ಸಹೋ ದ್ಯೋಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ನಿರ್ಧಾರ ಉಂಟಾಗಿದೆ. ಇದೇ ವೇಳೆ ಇಂದು ಸಂಜೆ  ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರಲ್ಲಿ  ಮುಂದಿನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. …

ಕೆರೆಗೆ ಬಿದ್ದು ಎರಡೂವರೆ ವರ್ಷದ ಬಾಲಕ ಮೃತ್ಯು: ಕಾರ್ಲೆಯಲ್ಲಿ ದುರಂತ ಘಟನೆ

ಮುಳ್ಳೇರಿಯ: ಮನೆಯ ಸಮೀಪದ ಆವರಣವಿಲ್ಲದ ಕೆರೆಗೆ ಬಿದ್ದ ಎರಡೂವರೆ ವರ್ಷದ ಬಾಲಕನಿಗೆ ದಾರುಣ ಅಂತ್ಯ ಸಂಭವಿಸಿದೆ. ಕಾರಡ್ಕ ಕಾರ್ಲೆ ನಿವಾಸಿ ಲೋಹಿತ್ ಶೆಟ್ಟಿ- ದಿವ್ಯ ದಂಪತಿ ಪುತ್ರ ದೇವನಂದ ಮೃತಪಟ್ಟ ಬಾಲಕ. ನಿನ್ನೆ ಸಂಜೆ 6 ಗಂಟೆ ವೇಳೆ ಮಗುವಿನ ಮೃತದೇಹವನ್ನು ಕೆರೆಯಲ್ಲಿ ಪತ್ತೆಹಚ್ಚಲಾಗಿದೆ. ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದಿಂದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮನೆಯಿಂದ 300 ಮೀಟರ್ ದೂರದ ತೆಂಗಿನ ತೋಟದಲ್ಲಿದ್ದ ಕೆರೆಯಲ್ಲಿ ಬಾಲಕನ ಮೃತದೇಹ ಕಂಡು ಬಂದಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಆ …

ಯುವತಿ ಹೊಸಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ಕರ್ಮಂತೋಡಿ ಮೂಡಾಂಕುಳ ಎಂಬಲ್ಲಿ ಯುವತಿ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಗಾಲ್ಯಾಂಡ್ ನಲ್ಲಿ ಸೈನಿಕನಾಗಿರುವ ರಾಜೇಶ್ ಕುಮಾರ್‌ರ ಪತ್ನಿ ಸೌಪರ್ಣಿಕ (40) ಸಾವಿಗೀಡಾದ ಯುವತಿ. ಹೊಸತಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಒಂದು ತಿಂಗಳ ಹಿಂದೆಯಷ್ಟೇ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಬಂದ ರಾಜೇಶ್ ಕುಮಾರ್ ಮರಳಿ ಕೆಲಸ ಸ್ಥಳಕ್ಕೆ ತೆರಳಿದ್ದರು. ಇಂದು ಬೆಳಿಗ್ಗೆ ಸೌಪರ್ಣಿಕ ಮನೆಯ ಮೇಲಂತಸ್ತಿನ ಬೆಡ್‌ರೂಂನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಮುಳ್ಳೇರಿಯದ ಆಸ್ಪತ್ರೆಗೆ …

ಕೃಷಿಕ ಕೆರೆಗೆ ಹಾರಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಕಾರಡ್ಕ ಬಳಿಯ ಕೊಟ್ಟಂಗುಳಿಯಲ್ಲಿ ಕೃಷಿಕನೋರ್ವ ಕೆರೆಗೆ ಹಾರಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆರೆಗೆ ಹಾರುವ ಮೊದಲು ಕೈಯ ನರ ಕತ್ತರಿಸಿರುವು ದಾಗಿಯೂ ಸಂಶಯಿಸಲಾಗುತ್ತಿದೆ. ಕೊಟ್ಟಂಗುಳಿಯ ಕುಂಞಂಬು ನಾಯರ್‌ರ ಪುತ್ರ  ಅಜಿತ್ ಕುಮಾರ್ (43) ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ ಅಜಿತ್ ಕುಮಾರ್ ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ನಡೆಸಿದ ಹುಡು ಕಾಟ ವೇಳೆ ಮನೆ ಸಮೀಪದ ಅಡಿಕೆ ತೋಟದ ಕೆರೆಯಲ್ಲಿ  ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಮೇಲಕ್ಕೆತ್ತಿ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಈ  …

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಅಪಾಯ: ಭೀತಿಯೊಡ್ಡುತ್ತಿರುವ ಹೊಂಡ: ಅಧಿಕಾರಿಗಳ ನಿರ್ಲಕ್ಷ್ಯ

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ತೋಡಿದ  ಐದು ಅಡಿ ಆಳದ ಹೊಂಡ ಇದೀಗ ಅಪಾಯ ಭೀತಿಯನ್ನು ಸೃಷ್ಟಿಸುತ್ತಿದೆ. ಒಂದು ವಾರ ಹಿಂದೆ ಕೆಎಸ್‌ಆರ್‌ಟಿಸಿ ನೌಕರರು  ಬೋರ್ಡ್ ಸ್ಥಾಪಿಸಲು ಕೆಲಸಗಾರರನ್ನು ನೇಮಿಸಿ ಹೊಂಡ ತೋಡಿಸಿರುವುದಾಗಿ ಕೆಎಸ್‌ಆರ್‌ಟಿಸಿ ಕಾಂಪ್ಲೆಕ್ಸ್‌ನ ವ್ಯಾಪಾರಿಗಳು ಹೇಳುತ್ತಿದ್ದಾರೆ. ಹೊಂಡ ತೋಡಿದ ಬಳಿಕ  ಬೋರ್ಡ್‌ನ್ನು ಕಟ್ಟಡದ ಮೇಲೆ ಸ್ಥಾಪಿಸಲಾಯಿತು. ಆದರೆ ತೋಡಿದ ಹೊಂಡವನ್ನು ಮುಚ್ಚುವ ಕೆಲಸ ನಡೆದಿಲ್ಲ. ಇದರಿಂದ ಈ ಹೊಂಡ ಅಪಾಯಭೀತಿಯೊಡ್ಡುತ್ತಿದೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ಮೊನ್ನೆಯಷ್ಟೇ ಈ ಹೊಂಡಕ್ಕೆ ಒಂದು ನಾಯಿ …