ಮುಹಿಮ್ಮಾತ್ ವಾರ್ಷಿಕ ಕೌನ್ಸಿಲ್ ಸಮಾರೋಪ: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತಿಗೆ: ಮುಹಿಮ್ಮಾತುಲ್ ಇಸ್ಲಾಮಿನ್ ಎಜ್ಯುಕೇಶನ್ ಸೆಂಟರ್‌ನ ವಾರ್ಷಿಕ ಕೌನ್ಸಿಲ್ ಸಮಾಪ್ತಿಗೊಂಡಿತು. ಕಲ್ಲಿಕೋಟೆ ಮರ್ಕ್ಸಿಲ್ ಅಧ್ಯಕ್ಷ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದು, ಮರ್ಕ್ಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಸಿ ಉದ್ಘಾಟಿಸಿದರು. ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಪ್ರಸ್ತಾಪಿಸಿದರು. ಹಸನುಲ್ ಅಹ್ದಲ್ ತಂಙಳ್ ಚರ್ಚೆಗಳಿಗೆ ನೇತೃತ್ವ ನೀಡಿದರು. ಮೂಸ ಸಖಾಫಿ ಕಳತ್ತೂರು ವರದಿ, ಉಮ್ಮರ್ ಸಖಾಫಿ ಕರ್ನೂರು ಆರ್ಥಿಕ ವರದಿ ಮಂಡಿಸಿದರು. ಹಲವಾರು ಗಣ್ಯರು ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಂತಾಪುರಂ ಎ.ಪಿ ಅಬೂಬಕ್ಕರ್ …

ಅಡ್ವಕೇಟ್ ಕ್ಲರ್ಕ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ಅಡ್ವಕೇಟ್ ಕ್ಲರ್ಕ್ಸ್ ಜಿಲ್ಲಾ ಸಮ್ಮೇಳನ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ರಾಜ್ಯಾಧ್ಯಕ್ಷ ವಿ. ರವೀಂದ್ರನ್ ಪೇರಾಂಬ್ರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ. ರಘುನಾಥ್ ಅಧ್ಯಕ್ಷತೆ ವಹಿಸಿದರು. ಕೆಎಸಿಎ ರಾಜ್ಯ ಕಾರ್ಯದರ್ಶಿ ಪಿ. ರಾಜ್‌ಮೋಹನ್, ಮುಖಂಡರಾದ ಶ್ರೀಕುಮಾರ್ ಕುನ್ನಮಂಗಲಂ, ವಿ.ಎಂ. ಜಯದೇವನ್, ಸಿ. ರವಿ, ಜಯರಾಮ್ ಶೆಟ್ಟಿ, ವಿ.ವಿ. ಬಾಲನ್ ಮಾತನಾಡಿದರು. ನಿವೃತ್ತರಾಗುವ ಹಿರಿಯ ಸದಸ್ಯ ಸೂರ್ಯನಾರಾಯಣ ಮಯ್ಯರನ್ನು  ಈ ವೇಳೆ ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ವಿ. ಬಾಬು ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯ ದರ್ಶಿ …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಮಂಗಲ್ಪಾಡಿ: ಆರ್.ಎಸ್.ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಪ್ರತಾಪನಗರ ನಿವಾಸಿ ಎಂ.ಇ ಗಂಗಾಧರ ಆಚಾರ್ಯ ((65) ಶನಿವಾರ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮರದ ಕೆಲಸಗಾರರಾಗಿದ್ದರು. ಬಿ.ಎಂ.ಎಸ್ ನಿರ್ಮಾಣ ಔ್ತೆ್ನ%ಔ್ಣ ್ಚ್ಣಒಙ್ಣಟವ್ರಿ¾್ಣ್ನ ಮಾಜಿ ಜಿಲ್ಲಾ ಉಪಾಧ್ಯಾಕ್ಷರು, ಶ್ರೀ ಗಾಯತ್ರಿ ವಿಶ್ವಕರ್ಮ ಸಮಾಜ ಸಭಾ ಪ್ರತಾಪನಗರ ಮಂಗಲ್ಪಾಡಿ ಇದರ ಮಾಜಿ ಅಧ್ಯಕ್ಷರಾಗಿದ್ದರು. ದಿ| ಈಶ್ವರ ಆಚಾರ್ಯ- ದಿ| ಪದ್ಮಾವತಿ ದಂಪತಿ ಪುತ್ರರಾಗಿದ್ದಾರೆ. ಮೃತರು ಪತ್ನಿ ಕಲಾವತಿ, ಮಕ್ಕಳಾದ ಯಶಸ್ವಿನಿ, ಕೀರ್ತಿಶ್ರೀ, ಮಿಥುನ್ ಆಚಾರ್ಯ, ಸಹೋದರ-ಸಹೋದರಿಯರಾದ ಜನಾರ್ದನ ಆಚಾರ್ಯ, ಮಾಧವ ಆಚಾರ್ಯ, …

ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ರಸ್ತೆ  ಹದಗೆಟ್ಟು ಶೋಚನೀಯ: ಸಂಚಾರ ದುಸ್ತರ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ರಸ್ತೆ ಸಂಚಾರಕ್ಕೆ ಅಯೋಗ್ಯಗೊಂಡಿರುವುದಾಗಿ ವಾಹನಚಾಲಕರು ದೂರಿದ್ದಾರೆ. ರೈಲ್ವೇ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯ 150 ಮೀಟರ್‌ನಷ್ಟು ಭಾಗದಲ್ಲಿ ಹಲವಾರು ವರ್ಷಗಳಿಂದ ದುರಸ್ತಿಗೊಳಿಸದೆ ಇರುವುದರಿಂದಾಗಿ ಹೊಂಡಗಳಿಂದ ಕೂಡಿ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ರೈಲ್ವೇ ನಿಲ್ದಾಣಕ್ಕೆ ತಲುಪುವರು, ಈ ಭಾಗದಲ್ಲಿ ವಾಸಿಸುವ ನೂರಾರು ಕುಟುಂಬಗಳು ಉಪ್ಪಳ ಪೇಟೆ ಸಹಿತ ವಿವಿಧ ಕಡೆಗಳಿಗೆ ತೆರಳಲು ಇದೇ ರಸ್ತೆಯನ್ನು ಆಶ್ರಯಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಇದರಿಂದಾಗಿ ಬೃಹತ್ ಹೊಂಡಗಳು ಸೃಷ್ಟಿಯಾಗಿವೆ. …

ಪೆಟ್ರೋಲಿಯಂ, ಗ್ಯಾಸ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಲು ಬಿಎಂಎಸ್ ಆಗ್ರಹ

ಕಾಸರಗೋಡು: ಭಾರತೀಯ ಮಜ್ದೂರು ಸಂಘದ ಪೋಷಕ ಸಂಘಟನೆಯಾದ ಪೆಟ್ರೋಲಿಯಂ ಆಂಡ್ ಗ್ಯಾಸ್ ಮಜ್ದೂರ್ ಸಂಘ್ ಜಿಲ್ಲಾ ಸಮ್ಮೇಳನದಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಬೇಕೆಂದು ಬೇಡಿಕೆ ಒಡ್ಡಲಾಯಿತು. ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರನ್ ಬಂಗಳೋತ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲಿಯಂ, ಗ್ಯಾಸ್ ವಲಯದ ಲಾರಿ ಕಾರ್ಮಿಕರಿಗಾಗಿ ಪ್ರಸ್ತುತ ಇರುವ ಒಪ್ಪಂದ ಪ್ರಕಾರದ ವೇತನ ಕಾಸರಗೋಡು ಜಿಲ್ಲೆಯಲ್ಲಿ ಲಭ್ಯಗೊಳಿಸಲಾಗುತ್ತಿಲ್ಲವೆಂದು ಆರೋಪಿಸಿದರು. ಒಪ್ಪಂದ ಪ್ರಕಾರವಿರುವ ವೇತನ ಹಾಗೂ ಇತರ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರವೇ ಲಭ್ಯಗೊಳಿಸಬೇಕೆಂದು ಅವರು ಆಗ್ರಹಿಸಿದರು. ಕಂಪೆನಿಗಳು …

ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್ ಮೊದಲ ಪರಿಗಣನೆ

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿರುವ ಚರ್ಚೆಗಳು  ಬಿರುಸಿನಿಂದ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನ ವಿ.ಡಿ. ಸತೀಶನ್‌ರಿಗೆ ಲಭಿಸುವ ಸಾಧ್ಯತೆ ಇದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ.  ಹೆಚ್ಚಿನ ಶಾಸಕರು ಕೆ.ಸಿ. ವೇಣುಗೋಪಾಲ್‌ರ ಪರ ಬೆಂಬಲ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಸ್ಥಾನದ ರೇಸ್‌ನಿಂದ ಸ್ವಯಂ ಆಗಿ ಹಿಂದಕ್ಕೆ ಸರಿಯುವಂತೆ ಕಾಂಗ್ರೆಸ್ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್‌ರ ಮೇಲೆ ಒತ್ತಡ ಹೇರುತ್ತಿರುವುದಾಗಿಯೂ ವರದಿಗಳು ಸೂಚಿಸುತ್ತಿವೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಮತ್ತು ಯುಡಿಎಫ್‌ನ ಇತರ ಹೆಚ್ಚಿನ ಘಟಕ ಪಕ್ಷಗಳು ವಿ.ಡಿ. ಸತೀಶನ್‌ರಿಗೆ ಬೆಂಬಲ ಸೂಚಿಸಿವೆ.   …

ದೈವದ ಪಾತ್ರಿ ನಿಧನ

ಬೆಳ್ಳೂರು: ಬಸ್ತಿ ಭೂತಕೊಟ್ಯ ನಿವಾಸಿ ನಾರಾಯಣ ಗೌಡ (60) ನಿಧನ ಹೊಂದಿದರು. ಇವರು ಬೆಳ್ಳೂರು ಗ್ರಾಮ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಭರತ್ , ಅಜಿತ್, ಕವಿತ, ಅಳಿಯ ರಂಜಿತ್ ಉರಿಕ್ಯಾಡಿ, ಸಹೋದರಿ ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಸಹೋದರರಾದ ಐತಪ್ಪ, ರಾಮಣ್ಣ, ಸಹೋದರಿ ಪುಟ್ಟಕ್ಕ ಈ ಹಿಂದೆ ನಿಧನರಾಗಿದ್ದಾರೆ.

ಅಸೌಖ್ಯ: ಯುವತಿ ನಿಧನ

ಕುಂಬಳೆ: ಕುಂಟಂಗೇರಡ್ಕ ಲಕ್ಷ್ಯಂವೀಡುನಲ್ಲಿ ವಾಸಿಸುತ್ತಿದ್ದ ಯುವತಿ ಅಸೌಖ್ಯ ತಗಲಿ ನಿಧನ ಹೊಂದಿದರು. ದಿ| ಮೊಹಮ್ಮದ್ ಕುಂಞಿ- ಮುತ್ತು ಬೀವಿ ದಂಪತಿ ಪುತ್ರಿ ನೂರ್‌ಜಹಾನ್ (40) ನಿಧನ ಹೊಂದಿದವರು. ಅಸೌಖ್ಯ ತಗಲಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ, ಪತಿ ಅಶ್ರಫ್, ಸಹೋದರರಾದ ಹಂಸ, ಮೊಯ್ದೀನ್ ಕುಂಞಿ, ಅಬ್ದುಲ್ ರಹ್ಮಾನ್, ಇಸ್ಮಾಯಿಲ್,  ಸಹೋ ದರಿಯರಾದ ಸೈನಬ, ಸಫಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಅಶ್ರಫ್, ಸಹೋದರಿಯರಾದ ಸಫೀನ, ನೆಬೀಸ, ಫಾತಿಮ ಈ ಹಿಂದೆ …

ನೆಡುಂಕಂಡಂನಲ್ಲಿ 3ನೇ ಕೊಲೆ ಕೃತ್ಯ? ಮನೆ ಪರಿಸರದಿಂದ ತಲೆಬುರುಡೆ ಪತ್ತೆ; ನಾಪತ್ತೆಯಾದ ಮ್ಯಾಥ್ಯುವಿನದ್ದೆಂದು ಶಂಕೆ

ಇಡುಕ್ಕಿ: ನೆಡುಂಕಂಡಂನಲ್ಲಿ ತಾಯಿ ಹಾಗೂ ಸಹೋದರನನ್ನು ಕೊಂದು ಹೂತುಹಾಕಿದ ಘಟನೆಯಲ್ಲಿ ಸೆರೆಯಾದ ಸಜಿಯ ಮನೆ ಪರಿಸರದಿಂದ ಇತ್ತೀಚೆಗೆ ಮಣ್ಣು ತೆಗೆದು ನಡೆಸಿದ ತಪಾಸಣೆಯಲ್ಲಿ ಜೀರ್ಣಗೊಂಡ ಅಸ್ತಿಪಂಜರ ಹಾಗೂ ಬಟ್ಟೆಬರೆಗಳನ್ನು ಪತ್ತೆಹಚ್ಚಲಾಗಿದೆ. ೮ ವರ್ಷದ ಹಿಂದೆ ನಾಪತ್ತೆಯಾದ ತಂದೆ ಮ್ಯಾಥ್ಯುರ ಮೃತದೇಹದ ಅವಶಿಷ್ಟಗಳು ಇದಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮ್ಯಾಥ್ಯುವನ್ನು ಕೂಡಾ ಸಜಿ ಕೊಲೆಗೈದು ಹೊಂಡ ತೋಡಿ ಹೂತು ಹಾಕಿರಬೇಕೆಂದು ಪೊಲೀಸರು ತಿಳಿಸುತ್ತಾರೆ. ಈ ಮೊದಲು ಹಟ್ಟಿ ಇದ್ದ ಭಾಗದಲ್ಲಿ ಲಭಿಸಿದ ಎಲುಬು ಆದ ಕಾರಣ ಇದು ಯಾವುದಾದರೂ ದನದ …

ನಿರಂತರ ಹೋರಾಟ ಫಲ ಬೀರಲಿಲ್ಲ: ಚೆರ್ಕಳ-ಅಡ್ಕಸ್ಥಳ ರಸ್ತೆ ಬೇಸಿಗೆ ಮಳೆಗೆ ಕೆಸರುಗದ್ದೆಯಾಗಿ ಮಾರ್ಪಾಡು

ಬದಿಯಡ್ಕ: ನಿರಂತರ ಜನರ ಪ್ರತಿಭಟನೆ, ಬೇಡಿಕೆ ಉಂಟಾಗಿದ್ದರೂ ಯಾವುದೇ ಫಲವಿಲ್ಲದ ಚೆರ್ಕಳ- ಅಡ್ಕಸ್ಥಳ ರಸ್ತೆ ಈಗ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಗೆ ತಲುಪಿದೆ. ಈ ರಸ್ತೆಯ ಪಳ್ಳತ್ತಡ್ಕದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿ ವಾಹನಗಳಿಗೆ ಸಂಚಕಾರ ಉಂಟುಮಾಡುತ್ತಿದೆ. ಚೆರ್ಕಳ- ಅಡ್ಕಸ್ಥಳ ರಸ್ತೆ ದುರಸ್ತಿಗೊಳಿ ಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಸಂಸ್ಥೆಗಳು ಹಲವು ಬಾರಿ ಹೋರಾಟ ನಡೆಸಿದ್ದವು. ಆದರೆ ಶಾಸಕರಿಂದಾಗಲೀ, ಲೋಕೋ ಪಯೋಗಿ ಇಲಾಖೆಯಿಂದಾಗಲೀ ಸೂಕ್ತ ಕ್ರಮ ಇದುವರೆಗೂ ಉಂಟಾಗಲಿಲ್ಲ. ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ …