ಆನ್‌ಲೈನ್ ವಂಚನೆ: 17 ಲಕ್ಷ ಕಳೆದುಕೊಂಡ ವೃದ್ದ

ಕಾಸರಗೋಡು: ಅಮಿತ ಲಾಭ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ 17.31 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ವೃದ್ದರೊಬ್ಬರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ. ಪಡನ್ನ ಕಡಪ್ಪುರ ನಿವಾಸಿ ವೃದ್ದ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ವಂಚನೆಗಾರರು ಇನ್‌ಸ್ಟಾ ಗ್ರಾಮ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನನ್ನು ಪರಿಚಯ ಗೊಂಡು ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿದ್ದಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ಆ ಬಗ್ಗೆ ಆನ್‌ಲೈನ್ ಮೂಲಕ ತರಗತಿಯನ್ನು …

ಮನೆಯ ಫ್ಯೂಸ್ ಕಳಚಿದ ವಿದ್ಯುನ್ಮಂಡಳಿ : ರಾತ್ರಿ ಮನೆಯೊಳಗೆ ಮಹಿಳೆಗೆ ಹಾವು ಕಡಿತ

ಕಾಸರಗೋಡು:  ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸದ ಹೆಸರಲ್ಲಿ ವಿದ್ಯುನ್ಮಂಡಳಿಯ ಸಿಬ್ಬಂದಿಗಳು ಮನೆಯ ಫ್ಯೂಸ್ ತೆಗೆದು ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ್ದು, ಅದೇ ದಿನ ರಾತ್ರಿ ಮಹಿಳೆಗೆ ಮನೆಯೊಳಗೆ ವಿಷಪೂರಿತ ಹಾವು ಕಚ್ಚಿದ ಘಟನೆ ನಡೆದಿದೆ. ಮೇಲ್ಪರಂಬ ನಿವಾಸಿಯಾದ ೪೩ರ ಹರೆಯದ ಮಹಿಳೆಗೆ ಹಾವು ಕಚ್ಚಿದ್ದು, ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕಳೆದ ಆರು ತಿಂಗಳಿಂದ ಮೇಲ್ಪರಂಬದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.  ಇವರಿಗೆ ದಿನಗಳ ಹಿಂದೆ ವಿದ್ಯುತ್ ಬಿಲ್ ನೀಡಲಾಗಿತ್ತು. ಆದರೆ ಮೊತ್ತ ಹೆಚ್ಚಾಗಿದ್ದುದರಿಂದ  ಅದನ್ನು ಸಕಾಲದಲ್ಲಿ …

ಪಾತ್ರೆ ತೊಳೆಯುತ್ತಿದ್ದ ಮಧ್ಯೆ ನದಿಗೆ ಬಿದ್ದು ಮಹಿಳೆ ನಾಪತ್ತೆ

ಕಾಸರಗೋಡು: ಪಾತ್ರೆ ತೊಳೆಯುವುದರ ಮಧ್ಯೆ ಯುವತಿ ಹೊಳೆಗೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ. ಕಣಿಚ್ಚಿರ ನಿವಾಸಿ ಆಟೋಚಾಲಕ ಅಜಿತ್‌ರ ಪತ್ನಿ ನದಿಯ (48) ನಾಪತ್ತೆಯಾದವರು. ಇಂದು ಬೆಳಿಗ್ಗೆ 7 ಗಂಟೆ ವೇಳೆ ಮನೆ ಸಮೀಪದ ಹೊಳೆ ಬದಿಯಲ್ಲಿ ಘಟನೆ ನಡೆದಿದೆ. ಮಹಿಳೆಯ ಮೊಬೈಲ್ ಫೋನ್ ದಡದಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸ್ಕೂಬಾ ತಂಡ ಹಾಗೂ ನೀಲೇಶ್ವರ ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ನೀಲೇಶ್ವರ ನಗರಸಭೆಯ ಅಧ್ಯಕ್ಷ ಪಿ.ಪಿ. ಮೊಹಮ್ಮದ್ ರಾಫಿ, ಕೌನ್ಸಿಲರ್‌ಗಳಾದ ಕೆ. ಸತೀಶನ್, ಇ. ಶಜೀರ್ …

ಪತ್ನಿ, ಅತ್ತೆಯ ದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿರಿಸಿದಾಗ ಸುಟ್ಟು ಗಾಯಗೊಂಡ ಯುವಕ ಮೃತ್ಯು

ಕಾಸರಗೋಡು: ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ ದ್ವೇಷದಿಂದ ಪತ್ನಿ ಹಾಗೂ ಅತ್ತೆಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿರಿಸುವ ವೇಳೆ ಅಕಸ್ಮಾತ್ ಬೆಂಕಿ ತಗಲಿ  ಗಂಭೀರ ಸುಟ್ಟು ಗಾಯ ಗೊಂಡ ಯುವಕ ಸಾವಿಗೀಡಾದ ಘಟನೆ ನಡೆದಿದೆ. ಕರಿವೆಳ್ಳೂರು ಕೊಳುಮ್ಮಲ್ ವರಿಕ್ಕರ ನಿವಾಸಿಯಾದ ಆಟೋ ರಿಕ್ಷಾ ಚಾಲಕ ಸಿ.ವಿ.ಸನಲ್ ಕುಮಾರ್ (46) ಸಾವನ್ನಪ್ಪಿದ ವ್ಯಕ್ತಿ.  ಸನಲ್ ಕುಮಾರ್ ಮತ್ತು ಪತ್ನಿ ಪ್ರಜೀಶರ  ದಾಂಪತ್ಯ ಜೀವನದಲ್ಲಿ  ಬಿರುಕುಂಟಾಗಿತ್ತೆನ್ನಲಾಗಿದೆ. ಇದರಿಂದ ಪತ್ನಿ ವಿವಾಹ ವಿಚ್ಛೇದನ ಪ್ರಕರಣ ದಾಖಲಿಸಿದ್ದರು. ಈ ದ್ವೇಷದಿಂದ ಕಳೆದ  …

ಇಡುಕ್ಕಿಯಲ್ಲಿ ಮತ್ತೊಂದು ಭಯಾನಕ ಘಟನೆ: ತಲೆಗೆ ಹೊಡೆದು ತಾಯಿಯ ಕೊಂದ ಪುತ್ರ

ಇಡುಕ್ಕಿ: ತೊಡುಪುಳದಲ್ಲಿ ಪುತ್ರ ತಾಯಿಯನ್ನು ತಲೆಗೆ ಹೊಡೆದು ಕೊಲೆಗೈದ ಘಟನೆ ನಡೆದಿದೆ. ಇಡವೆಟ್ಟಿ ಮೈಲಾಟುಂಪಾರ ವಳಪ್ ನಿವಾಸಿ ರೈಚಲ್ ಜೋಸೆಫ್ ಕೊಲೆಗೀಡಾದ ಮಹಿಳೆ. ಘಟನೆಯಲ್ಲಿ ಪುತ್ರ ಲಿಜೊನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಎಳುಕ್ಕುಂವಯಲ್‌ನಲ್ಲಿ ಹೆತ್ತವರನ್ನು ಪುತ್ರ ಕೊಲೆಗೈದ ಘಟನೆಯ ಆತಂಕ ಮಾಸುವ ಮೊದಲೇ ಜಿಲ್ಲೆಯಲ್ಲಿ ಮತ್ತೊಂದು ದಾರುಣ ಕೊಲೆ ಸಂಭವಿಸಿದೆ. ನಿನ್ನೆ ಸಂಜೆ ೩ ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಎರ್ನಾಕುಳಂನಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುವ ರೈಚಲ್ ಜೋಸೆಫ್ ಕಳೆದ ಶುಕ್ರವಾರ …

ಮಂಗಲ್ಪಾಡಿಯಲ್ಲಿ ಕೃಷಿಕರ ದಿನಾಚರಣೆ 24 ಹಿರಿಯ ಕೃಷಿಕರಿಗೆ ಸನ್ಮಾನ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ಮತ್ತು ಮಂಗಲ್ಪಾಡಿ ಕೃಷಿ ಭವನದ ವತಿಯಿಂದ ಕೃಷಿಕರ ದಿನಾಚರಿಸಲಾಯಿತು. ಮಂಗಲ್ಪಾಡಿಯ ಅತ್ಯುತ್ತಮ 24 ಕೃಷಿಕರನ್ನು ಸನ್ಮಾನಿಸಲಾಯಿತು. ಉಪ್ಪಳ ಪೇಟೆಯಿಂದ ಪ್ರಾರಂಭವಾದ ವರ್ಣರಂಜಿತ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾ ಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್‌ಮಾನ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಙಳ್ ಮುಖ್ಯ ಅತಿಥಿಯಾಗಿದ್ದರು. ಕೃಷಿ ಅಧಿಕಾರಿ ಅರುಣ್ ಪ್ರಸಾದ್ ಕೆ.ಎಂ ಸ್ವಾಗತಿಸಿದರು.ಹಿರಿಯ ಕೃಷಿಕ ಬಿ. ಸುಫಲಾ …

ಹಬ್ಬದ ಹಿನ್ನೆಲೆ: ಜಿಲ್ಲೆಯಲ್ಲಿ ಹೆಚ್ಚು ರೈಲು ಸೇವೆಗಳು, ನಿಲುಗಡೆಗಳಿಗೆ ಕ್ರಮ- ಬಿಜೆಪಿ

ಕಾಸರಗೋಡು: ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಜಿಲ್ಲೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಹೆಚ್ಚಿನ ಪ್ಯಾಸೆಂಜರ್, ಮೆಮು ರೈಲು ಸೇವೆಗಳನ್ನು ಒದಗಿಸಲು ಹಾಗೂ ಪ್ರಸ್ತುತ ಸಂಚರಿಸುತ್ತಿರುವ ವಿವಿಧ ರೈಲುಗಳಿಗೆ ತುರ್ತಾಗಿ ತಾತ್ಕಾಲಿಕ ನಿಲುಗಡೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳ ಅಂಗವಾಗಿ ಮುಂಬರುವ ಒಂದು ತಿಂಗಳ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಇದನ್ನು ಪರಿಗಣಿಸಿ ವಿವಿಧ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ನೀಡುವಂತೆ ಒತ್ತಾಯಿಸಲಾಗುವುದು …

ಕೆಟ್ಟುಹೋದ ಹೈಮಾಸ್ಟ್ ದೀಪ :ಕತ್ತಲಾವರಿಸಿ ಬಾಯಾರುಪದವುನಲ್ಲಿ ಸಮಸ್ಯೆ

ಪೈವಳಿಕೆ: ಬಾಯಾರುಪದವು ಜಂಕ್ಷನ್‌ನಲ್ಲಿ ಹೈಮಾಸ್ಟ್ ದೀಪ ಕೆಟ್ಟು ಹೋಗಿ ಹಲವಾರು ತಿಂಗಳು ಕಳೆದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ಎರಡು ಬ್ಯಾಂಕ್‌ಗಳು, ಹಲವು ಅಂಗಡಿಗಳು , ಆಟೋ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದು, ಜನನಿಬಿಡ ಪ್ರದೇಶವಾಗಿದೆ. ಈ ಪೇಟೆಯಲ್ಲಿ ರಾತ್ರಿ ೭ ಗಂಟೆಯ ನಂತರ ಸಂಪೂರ್ಣ ಕತ್ತಲು ಆವರಿಸಿ ಕೊಳ್ಳುತ್ತಿದೆ. ಲಕ್ಷಾಂತರ ಹಣ ವ್ಯವಯಿಸಿ ನಿರ್ಮಿಸಿದ ಈ ಬೀದಿ ದೀಪ ಈಗ ಉಪಯೋಗಶೂನ್ಯವಾಗಿದೆ. ಇಲ್ಲಿ ಬೀದಿ ದೀಪವಿಲ್ಲದೆ ನಾಗರಿಕರಿಗೆ, ಹಾಗು ವ್ಯಾಪಾರಿಗಳಿಗೆ ಅತೀವ ತೊಂದರೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. …

ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ ಹಣ ಒಳಗೊಂಡ ಬ್ಯಾಗ್ ಪ್ರಯಾಣಿಕೆಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಶುಚೀಕರಣ ಸಿಬ್ಬಂದಿ

ಕಾಸರಗೋಡು: ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ  ೬೩ ಸಾವಿರ ರೂಪಾಯಿಗಳಿದ್ದ ಬ್ಯಾಗನ್ನು ಮುಖ್ಯೋಪಾಧ್ಯಾಯಿನಿಗೆ ಮರಳಿ ತಲುಪಿಸಿ ರೈಲ್ವೇ ಶುಚೀಕರಣ ಸಿಬ್ಬಂದಿ ಸಜಿನಿ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಳಂಗರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋ ಪಾಧ್ಯಾಯಿನಿ ಬಿಂದು ಈ ತಿಂಗಳ ೧೫ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ರೈಲು ನಿಲ್ದಾಣದಿಂದ ರೈಲಿನಲ್ಲಿ ಪ್ರಯಾಣಿಸಿದ್ದರು.  ಅನಂತರವೇ ಅವರಿಗೆ ಹಣವಿದ್ದ ಬ್ಯಾಗ್ ರೈಲ್ವೇ ನಿಲ್ದಾಣದಲ್ಲಿ ಮರೆತು ಹೋಗಿರುವುದು ನೆನಪಾಗಿದೆ. ಇನ್ನು ಆ ಬ್ಯಾಗ್ ಮರಳಿ ಲಭಿಸಲಾರದೇ  ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. …

ಪ್ರೇಮ ಭಂಡಾರಿ ನಿಧನ

ಮಂಜೇಶ್ವರ: ಪಾವೂರು ಕೋಡಿ ದಿ| ಬಿರ್ಮಣ ಭಂಡಾರಿ ಅವರ ಪತ್ನಿ, ಕಾಸರಗೋಡು ಅಂಚೆ ಕಚೇರಿಯ ನಿವೃತ್ತ ಉದ್ಯೋಗಿ ಪ್ರೇª೧ÀÄ ಭಂಡಾರಿ (70) ನಿಧನ ಹೊಂದಿದರು. ಮೃತರು ಮಕ್ಕಳಾದ ಹರಿಕಿರಣ್, ಶಿವಪ್ರಸಾದ್, ಪ್ರಕಾಶ್ ಅಲ್ಲದೆ ಸೊಸೆಯಂದಿರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.