ಬೋಳುಕಟ್ಟೆ ಮೈದಾನ ಬಳಿ ಅಬಕಾರಿ ಇಲಾಖೆ  ಸಹಕಾರದಿಂದ ಮಿನಿ ಪಾರ್ಕ್ ನಿರ್ಮಾಣಕ್ಕೆ ಸ್ಥಳ ನಿಗದಿ

 ಬದಿಯಡ್ಕ: ಆಧುನಿಕ ಸಮಾಜದಲ್ಲಿ ವಿಶೇಷವಾಗಿ ಯುವಕರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಮಾದಕವ್ಯಸನ, ಡಿಜಿಟಲ್ ವ್ಯಸನಕ್ಕೆ ಆರೋಗ್ಯಕರ ಪರ್ಯಾಯ ಕಂಡುಕೊಳ್ಳುವ ಉದ್ಧೇಶದೊಂದಿಗೆ ರಾಜ್ಯ ಸರಕಾರದ 1೦೦ ದಿನಗಳ ಕ್ರಿಯಾ ಯೋಜನೆಗಳ ಅಂಗವಾಗಿ ಬಿಡುವಿನ ಸಮಯವನ್ನು ಸೃಜನಶೀಲ ಮತ್ತು ಆರೋಗ್ಯಕರ ಮನರಂಜನೆಯಲ್ಲಿ ಕಳೆಯಲು ಸೂಕ್ತ ಸ್ಥಳವನ್ನು ಒದಗಿಸುವ ಯೋಜನೆಗೆ ಬದಿಯಡ್ಕದಲ್ಲಿ ಸ್ಥಳ ಗುರುತಿಸಲಾಯಿತು. ಬೋಳುಕಟ್ಟೆ ಮೈದಾನದ ಸಮೀಪ ಅಬಕಾರಿ ಇಲಾಖೆ ಸಹಕಾರದೊಂದಿಗೆ ಮಿನಿ ಪಾರ್ಕ್ ನಿರ್ಮಾಣ ಉದ್ದೇಶಿಸಲಾಗಿದೆ. ಇಲ್ಲಿ ಸಮಾಜದ ವಿವಿಧ ವರ್ಗದ ಜನರು, ಯುವಕರು, ಮಕ್ಕಳು, ವೃದ್ಧರು ಸುರಕ್ಷಿತವಾಗಿ …

ಕುಂಬಳೆಯಲ್ಲಿ ಕಾಡು ಬೆಳೆಯುತ್ತಿರುವ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಜ್ ಯೋಜನೆ

ಕುಂಬಳೆ: ಸ್ವಂತವಾಗಿ ಮನೆಯಿಲ್ಲದವರಿಗೆ ಮನೆ ನಿರ್ಮಿಸುವುದಕ್ಕೆ ಬೇಕಾಗಿ ಕೇಂದ್ರ ಸರಕಾರ ಜ್ಯಾರಿಗೊಳಿಸುವ ಪ್ರಧಾನಮಂತ್ರಿ ಆವಾಜ್ ಯೋಜನ (ಪಿಎಂಎವೈ)ದಂತೆ ಪ್ರಥಮ ಹಂತ ಪೂರ್ತಿಯಾದ ಅಡಿಪಾಯಗಳಲ್ಲಿ ಕಾಡು ಪೊದೆ ಬೆಳೆಯುತ್ತಿದೆ. ಯೋಜನೆ ಜ್ಯಾರಿಗೊಳಿಸಬೇಕಾದ ಅಧಿಕಾರಿಗಳ ಉದಾಸೀನತೆ ಮಹತ್ತರವಾದ ಈ ಯೋಜನೆಯನ್ನು ಈ ರೀತಿಗೆ ತಂದೊಡ್ಡಿದೆ ಎಂಬ ಆರೋಪವಿದೆ. ಕುಂಬಳೆಯಲ್ಲಿ ಪಿಎಂಎವೈ ಯೋಜನೆಯಲ್ಲಿ ಮಂಜೂರು ಮಾಡಿದ ಮನೆಗೆ ಪ್ರಥಮ ಹಂತವಾದ ಅಡಿಪಾಯ ಸ್ಥಾಪಿಸಿ ಮೂರು ವರ್ಷವಾದರೂ ಮೊದಲ ಹಂತದ ಸಹಾಯ ಮೊತ್ತ ಲಭಿಸಿಲ್ಲವೆಂದು ಆರೋಪವಿದೆ. ಈ ಹಿನ್ನೆಲೆಯಲ್ಲಿ ಸಾಲ ಪಡೆದು ಅಡಿಪಾಯವನ್ನು …

ಅಸೌಖ್ಯ : ಯುವತಿ ನಿಧನ

ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಾನಡ್ಕ ನಿವಾಸಿ 26ರ ಹರೆಯದ ಯುವತಿ ಮೃತಪಟ್ಟರು. ಶಾಸ್ತ್ರಿ ನಗರದ ವಿಜಿನ ಮೃತಪಟ್ಟವರು. ಮೂತ್ರಕೋಶ ಸಂಬಂಧವಾದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ನಾರಾಯಣ- ಓಮನ ದಂಪತಿ ಪತ್ರಿಯಾಗಿದ್ದಾರೆ. ಮೃತ ಯುವತಿ ತಂದೆ, ತಾಯಿ, ಸಹೋz ರರಾದ ವಿಜೇಶ್, ವಿನೀಶ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಟೈಲರ್ ಸೀನಪ್ಪ ರೈ ನಿಧನ

 ಪುತ್ತಿಗೆ: ವೊರ್ಕೂಡ್ಲು ನಿವಾಸಿ ಸೀನಪ್ಪ ರೈ (56) ನಿಧನಹೊಂ ದಿದರು. ಹಲವು ವರ್ಷಗಳಿಂದ ಅಂಗಡಿಮೊಗರಿ ನಲ್ಲಿ ಇವರು ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ವರುಣ್, ಕೌಶಿಕ್ (ಇಬ್ಬರೂ ಗಲ್ಫ್ ಉದ್ಯೋಗಿಗಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿ ಅಪಘಾತ: ತಪ್ಪಿದ ಭಾರೀ ದುರಂತ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪೆರಿಯಾಟಡ್ಕದಲ್ಲಿ ಕಂಟೈನರ್ ಲಾರಿ ಅಪಘಾತಕ್ಕೀಡಾಗಿದೆ. ಹೆದ್ದಾರಿಯ ಆವರಣ ಗೋಡೆಗೆ ಲಾರಿಯ ಹಿಂಭಾಗ ಸಿಲುಕಿ ನಿಂತಿರುವುದರಿಂದ ಅದು ಕೆಳಗೆ ಉರುಳದೆ ಭಾರೀ ದೊಡ್ಡ ಅಪಾಯ ತಪ್ಪಿಹೋಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ 10 ಮೀಟರ್ ಎತ್ತರದಲ್ಲಿದೆ. ಪೆರಿಯಾಟಡ್ಕ, ಮುನಿಕ್ಕಲ್ ತಿರುವಿನಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಸಮೀಪ ಕಾಸರಗೋಡು ಭಾಗಕ್ಕಿರುವ ರಸ್ತೆಯಲ್ಲಿ ಲಾರಿ ಅಪಘಾತಕ್ಕೀಡಾಗಿದೆ. ಆವರಣಗೋಡೆಗೆ ತಾಗಿ ನಿಲ್ಲದಿರುತ್ತಿದ್ದಲ್ಲಿ ಲಾರಿ ಕೆಳಗಿನ ಸರ್ವೀಸ್ ರಸ್ತೆಗೆ ಮಗುಚಿ ಬಿದು  ಭಾರೀ ದೊಡ್ಡ ಅಪಘಾತ ಸಂಭವಿಸುತ್ತಿತ್ತೆಂದು ನಾಗರಿಕರು ಹೇಳುತ್ತಿದ್ದಾರೆ. ಅಪಘಾತದಲ್ಲಿ …

ಈಶ್ವರ ಮಲ್ಪೆ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ: ಶಿರಿಯ ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಕುಂಬಳೆ: ಹೊಳೆಯಿಂದ ಹೊಯ್ಗೆ ಸಂಗ್ರಹಿಸುತ್ತಿದ್ದ ವೇಳೆ ಅಲ್ಲಿಗೆ ತಲುಪಿದ ಪೊಲೀಸರನ್ನು ಕಂಡು ದೋಣಿಯಿಂದ ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (35) ಎಂಬವರ ಮೃತದೇಹವನ್ನು  ಶಿರಿಯ ಅಳಿವೆಬಾಗಿಲಿನಲ್ಲಿ  ನಡೆಸಿದ ಶೋಧ ವೇಳೆ ಪತ್ತೆಹಚ್ಚಲಾಗಿದೆ. ನಾಪತ್ತೆಯಾದ ಸ್ಥಳದ ಸಮೀಪದ ಹೊಳೆಯಲ್ಲಿ ಮೀನು ಕಾರ್ಮಿಕರ ಬಲೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಇತ್ತೆಂದು ತಿಳಿದುಬಂದಿದೆ.  ರಕ್ಷಣಾ ಕಾರ್ಯಾಚರಣೆಗಾಗಿ  ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ತಂಡ ಇಂದು ಮುಂಜಾನೆ  ಶಿರಿಯಕ್ಕೆ ತಲುಪಿತ್ತು. ಇವರ …

ಅಸೌಖ್ಯ: ನಿಧನ

ಉಪ್ಪಳ: ಉಪ್ಪಳ ಭಗವತೀ ಕ್ಷೇತ್ರ ಬಳಿಯ ನಿವಾಸಿ, ಉಪ್ಪಳ ದಲ್ಲಿ ಕಾರ್ಯಾಚರಿಸುತ್ತಿರುವ ಬಿ.ಆರ್ ಬೇಕರಿ ಮಾಲಕ ದಿ| ರಾಜೀವ. ಬಿ ಅವರ ಪತ್ನಿ ಸರಸ್ವತಿ (87) ಸ್ವ-ಗಹದಲ್ಲಿ ನಿಧನ ಹೊಂ ದಿದರು. ಇವರು ವಿಶ್ವಹಿಂದೂ ಪರಿಷತ್ ಮಾತೃಶಕ್ತಿಯ ಹಿರಿಯ ಕಾರ್ಯಕರ್ತೆಯಾಗಿ, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಮುಂ ಚೂಣಿಯಲ್ಲಿ ಗುರುತಿಸಿಕೊಂಡಿ ದ್ದರು. ಮೃತರು ಮಕ್ಕಳಾದ ವಿಶು ಕುಮಾರ್, ರಮೇಶ, ಧರ್ಮೇಂದ್ರ, ಗೋಕುಲ್‌ದಾಸ್, ಸರೋಜಿನಿ, ಹೇಮಲತಾ, ಸುಕನ್ಯ, ಜಯಂತಿ, ಸೊಸೆಯಂದಿರಾದ ಸುನಿತ, ಅಮೃತ, ವೀಣಾ, ಗಿರಿಜ, ಅಳಿ ಯಂದಿರಾದ ಸದಾಶಿವ, …

ಯುವಕ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಯುವಕನೋರ್ವ  ಸರಕಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉಪ್ಪಳ ಕೋಡಿಬೈಲು ಎಸ್.ಸಿ ಉನ್ನತಿಯ ಮಂಜುನಾಥ (45) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಉನ್ನತಿಯಲ್ಲಿರುವ  ಪಂಚಾಯತ್ ಬಾವಿಯ ಸಮೀಪ ಚಪ್ಪಲಿ ಕಂಡುಬಂದಿತ್ತು. ಇದರಿಂದ ಸಂಶಯಗೊಂಡ ಸ್ಥಳೀಯರು  ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಪೊಲೀಸರು ಹಾಗೂ ಉಪ್ಪಳದಿಂದ ಅಗ್ನಿಶಾಮ ಕದಳ ತಲುಪಿ ಬಾವಿಯೊಳಗೆ ಶೋಧ ನಡೆಸಿದಾಗ ಮಂಜುನಾಥರ ಮೃತದೇಹ ಪತ್ತೆಯಾಗಿದೆ. ಇವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂ ಡಿರಬಹುದೇ ಎಂಬ ಸಂಶಯ ಹುಟ್ಟಿಕೊಂಡಿದೆ. ಮೃತದೇಹವನ್ನು ಕಾಸರಗೋಡು …

ಕ್ವಾರ್ಟರ್ಸ್‌ನಿಂದ ಹೊರಗೆ ತೆರಳಿದ ಯುವತಿ ನಾಪತ್ತೆ

ಉಪ್ಪಳ: ವಲಸೆ ಕಾರ್ಮಿಕನ ಪತ್ನಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.  ಉತ್ತರಪ್ರದೇಶ ಖೇರಿ ಜಿಲ್ಲೆಯ ಶ್ರೀನಗರ ಮಜ್‌ಹರಿ ಗ್ರಾಂಟ್ ನಂ. 12ರ ನಿವಾಸಿ ಹಾಗೂ ಈಗ ಉಪ್ಪಳ ಮಣಿಮುಂಡದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮನ್‌ಜಿತ್ ಸಿಂಗ್ ಎಂಬವರ ಪತ್ನಿ ಅಚಲ್ ಸಿಂಗ್ (25) ನಾಪತ್ತೆಯಾದ ಯುವತಿ. ಸೆಪ್ಟಂಬರ್ 8ರಂದು ಸಂಜೆ 4.30ರ ವೇಳೆ ಮಣಿಮುಂಡದಲ್ಲಿರುವ ಕ್ವಾರ್ಟರ್ಸ್‌ನಿಂದ ಹೊರ ಹೋದ ಅಚಲ್‌ಸಿಂಗ್ ನಾಪತ್ತೆಯಾಗಿ ರುವುದಾಗಿ ಆಕೆಯ ಪತಿ ಮನ್‌ಜಿತ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ …

ಚೆರ್ಕಳ ಪೇಟೆ ರಸ್ತೆಯ ಶೋಚನೀಯಾವಸ್ಥೆ: ಚೆಂಗಳ ಪಂ. ಆಡಳಿತ ಸಮಿತಿಯಿಂದ ಚಳವಳಿ

ಚೆರ್ಕಳ: ಚೆರ್ಕಳ ಪೇಟೆಯ ರಸ್ತೆ ಹಾನಿಗೀಡಾಗಿರುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಮೇಘ ಕಂಪೆನಿ ವಿರುದ್ಧ  ಚೆಂಗಳ ಪಂಚಾಯತ್ ಆಡಳಿತ ಸಮಿತಿ ಚಳವಳಿಯ ರಂಗಕ್ಕಿಳಿದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ರಸ್ತೆಯನ್ನು ಅಗೆದು ಹಾಕಿ ಬಳಿಕ ಅದನ್ನು ದುರಸ್ತಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯತ್ ಆಡಳಿತ ಸಮಿತಿ ಆರೋಪಿಸಿದೆ. ರಸ್ತೆ ದುರಸ್ತಿ ನಡೆಸುವ ಸಂಬಂಧ ಪಂಚಾಯತ್ ಆಡಳಿತ ಸಮಿತಿಗೆ ಹಾಗೂ ನಾಗರಿಕರಿಗೆ ಕಂಪೆನಿ ನೀಡುವ ಭರವಸೆಗಳನ್ನು ನಿರಂತರ ಉಲ್ಲಂಘಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇಘ …