ಬಿಎಸ್‌ಎಫ್‌ಗೆ ನೇಮಕಗೊಂಡ ಯುವಕನಿಗೆ ಕಾಂಗ್ರೆಸ್‌ನಿಂದ ಗೌರವ

ಬದಿಯಡ್ಕ: ಭಾರತೀಯ ಗಡಿ ಭದ್ರತಾ ಸೇನೆ (ಬಿಎಸ್‌ಎಫ್)ಗೆ ನೇಮಕಗೊಂಡ ಚೆಡೆಕಲ್‌ನ ಕುಂಞಿಕಣ್ಣನ್‌ರ ಪುತ್ರ ದೀಪು ಅವರನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗೌರವಿಸಲಾಯಿತು. ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ ಶಾಲು ಹಾಕಿ ಗೌರವಿಸಿದರು. ಬ್ಲೋಕ್ ಸದಸ್ಯ ಖಾದರ್ ಮಾನ್ಯ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್, ಗಿರೀಶ್ ಮೊದಲಾದವರು ಭಾಗವಹಿಸಿದರು. ದೀಪು ಅವರಿಗೆ ಕಾಂಗ್ರೆಸ್ ಮಂಡಲ ಸಮಿತಿ ವತಿಯಿಂದ ಪಾರಿತೋಷಕ ನೀಡಲಾಯಿತು.

RELATED NEWS

You cannot copy contents of this page