ಆಟೋ ಚಾಲಕ ನಿಧನ

ಉಪ್ಪಳ: ಬಂದ್ಯೋಡ್‌ನಲ್ಲಿ ಆಟೋ ರಿಕ್ಷಾ ಚಾಲಕನಾಗಿದ್ದ ಪಂಜತೊಟ್ಟಿ ಎಸ್.ಸಿ. ಕಾಲನಿ ನಿವಾಸಿ ಸುಧಾಕರ ಪಿ. (36) ನಿಧನ ಹೊಂದಿದರು. ನಿನ್ನೆ ರಾತ್ರಿ ಮಲಗಿದ್ದು, ಇಂದು ಬೆಳಿಗ್ಗೆ ಏಳದ ಕಾರಣ ಮನೆಯವರು ಎಬ್ಬಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಈ ವೇಳೆ ನಿಧನ ಸಂಭವಿಸಿದೆ. ಹೃದಯಾಘಾತವೇ ನಿಧನಕ್ಕೆ ಕಾರಣವೆನ್ನಲಾಗಿದೆ. ಮೃತರು ತಾಯಿ ದೇವಕಿ, ಸಹೋ ದರ ಸತೀಶ, ಸಹೋದರಿಯರಾದ ಕವಿತಾ, ಸರಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವಿವಾಹಿತರಾಗಿರುವ ಇವರು ಪೆವರಿಟ್ ಪಂಜ ತಂಡದ ಕಾರ್ಯ ಕರ್ತರಾಗಿದ್ದರು. ತಂದೆ ನಾರಾಯಣ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page