ಕೇರಳಕ್ಕೆ ಇನ್ನೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಾಧ್ಯತೆ
ಪಾಲಕ್ಕಾಡ್: ಕೇರಳಕ್ಕೆ ಮೂರನೇ ವಂದೇ ಭಾರತ್ ರೈಲುಗಾಡಿ ಶೀಘ್ರ ಲಭಿಸುವ ಸಾಧ್ಯತೆ ಇದೆ. ಆದರೆ ಈ ರೈಲು ಪ್ರಯಾಣ ಹೊರಡುವುದು ಅಥವಾ ಕೊನೆಗೊಳ್ಳುವುದು ಕೇರಳದಲ್ಲಲ್ಲ. ಮಂಗಳೂರು-ಕೊಯಂಬ ತ್ತೂರು ಮಧ್ಯೆ ಈ ರೈಲು ಸಂಚರಿಸ ಲಿದೆಯೆಂದು ಹೇಳಲಾಗತ್ತಿದೆ. ಈ ರೈಲು ಆರಂಭಗೊಂಡರೆ ಕೇರಳದಲ್ಲಿ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಎಂಬೀ ಜಿಲ್ಲೆಗಳ ಮೂಲಕ ಸಂಚರಿಸಲಿದೆ. ಇದು ಮಲಬಾರ್ ಪ್ರದೇಶದ ಪ್ರಯಾಣಕರಿಗೆ ಭಾರೀ ಪ್ರಯೋಜನಕಾರಿಯಾಗಲಿದೆ. ಪ್ರಸ್ತುತ ಕೇರಳದಲ್ಲಿ ಎgಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಂಚರಿಸುತ್ತಿದೆ. ತಿರುವನಂತಪುರ-ಕಾಸರಗೋಡು ವಂದೇ ಭಾರತ್, ಮಂಗಳೂರು-ತಿರುವನಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಇದೀಗ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಹಾಗೂ ರೈಲ್ವೇಗೆ ಉತ್ತಮ ಆದಾಯವೂ ಲಭಿಸುತ್ತಿದೆ. ಇದರಿಂದ ಇನ್ನೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂಜೂರು ಮಾಡಬೇಕೆಂಬ ಬೇಡಿಕೆ ತೀವ್ರಗೊಂಡಿದೆ.