ಖಾತೆ ಮಾಲಕ ಅರಿವಿಲ್ಲದೆ ಬ್ಯಾಂಕ್‌ನಿಂದ 9.96 ಲಕ್ಷರೂ. ಹಿಂಪಡೆದ ಬಗ್ಗೆ ದೂರು: ಕೇಸು ದಾಖಲು

ಕಾಸರಗೋಡು: ಖಾತೆ  ಮಾಲಕನಿಗೆ ತಿಳಿಯದಂತೆ ಅವರ  ಬ್ಯಾಂಕ್ ಖಾತೆಯಿಂದ 9,96,058 ರೂ. ಹಿಂಪಡೆದು ವಂಚನೆಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.

ತಳಂಗರೆ ಪಳ್ಳಿಕ್ಕಾಲ್ ಫೈಸಲ್ ಮಂಜಿಲ್‌ನ ವಿ.ವಿ. ಅಹಮ್ಮದ್ (71) ಎಂಬವರು ಈ ದೂರು ನೀಡಿದ್ದು, ಅದರಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕೊಂದರ ಕಾಸರಗೋಡು ಶಾಖೆಯಲ್ಲಿರುವ ತನ್ನ ಎನ್‌ಆರ್‌ಇ ಖಾತೆ ಯಿಂದ  ಕಳೆದ ಎಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ಯಾರೋ ಆನ್‌ಲೈನ್ ಮೂಲ ಕ ಹಲವು ಬಾರಿಯಾಗಿ ಹಣ ಹಿಂಪಡೆದು ವಂಚಿಸಿರುವುದಾಗಿ ಪೊಲೀಸರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page