ಧಾರ್ಮಿಕ ಮುಂದಾಳು ಕುಮಾರನ್ ಮಡಪ್ಪುರ ನಿಧನ

ಕಾಸರಗೋಡು: ಹಿರಿಯ ಧಾರ್ಮಿಕ ಮುಂದಾಳು ಮನ್ನಿಪ್ಪಾಡಿ ಮುತ್ತಪ್ಪನ್ ನಿವಾಸ್‌ನ ಕೆ. ಕುಮಾರನ್ ಮಡಪ್ಪುರ (72) ಇಂದು ಬೆಳಿಗ್ಗೆ ನಿಧನ ಹೊಂದಿದರು. ಮನೆಯಲ್ಲಿ ಹೃದಯಾ ಘಾತ ಕಾಣಿಸಿಕೊಂಡ ಇವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದ್ದು  ಅಷ್ಟರೊಳಗೆ ನಿಧನ ಸಂಭವಿಸಿದೆ.

ಪಿಲಿಕುಂಜೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರ ಸಮಿತಿ ಮುಖ್ಯ ರಕ್ಷಾಧಿಕಾರಿಯಾಗಿದ್ದರು. ಅಲ್ಲದೆ  ತಳಂಗರೆ ಪಿಲಿಕುಂಜೆ ಶ್ರೀ ಭಗವತೀ ಕ್ಷೇತ್ರ ಸೇವಾ ಸಂಘದ ಪದಾಧಿಕಾರಿ, ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದ ಮಾಜಿ ಕಾರ್ಯ ದರ್ಶಿಯಾಗಿ ದ್ದರು. ಉತ್ತಮ ಭಜನಾ ಹಾಡುಗಾರನಾಗಿಯೂ ಗುರುತಿಸಿಕೊಂಡಿದ್ದ ಇವರು ಕಾಸರಗೋಡಿನಲ್ಲಿ ವಿವಿಧ ಭಜನಾ ಸಂಘಗಳ ರೂಪೀಕರಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ದಿವಂಗತರಾದ ಕೊರಗನ್- ಬೆಳ್ಳಚ್ಚಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುಶೀಲ, ಪುತ್ರಿ ಪ್ರಿಯ, ಅಳಿಯ ಉಣ್ಣಿಕೃಷ್ಣನ್ ಉದುಮ, ಸಹೋದರಿಯರಾದ ಕೊರಪ್ಪಾಳು, ಸೀಮಂತಿ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ಜನಾರ್ದನ, ಕೃಷ್ಣನ್, ಉಪೇಂದ್ರನ್, ನಾರಾಯಣನ್ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page