ಪತ್ನಿಯ ತಂದೆಯನ್ನು ಕೊಲೆಗೈದ ಪ್ರಕರಣ: ಜ್ಯೋತಿಷಿ, ಪುತ್ರ ಸೆರೆ

ಮುಳ್ಳೇರಿಯ: ಪತ್ನಿಯ ತಂದೆಯನ್ನು ಕೊಲೆಗೈದ ಪ್ರಕರಣದ ಆರೋಪಿಗಳಾದ ಜ್ಯೋತಿಷಿ ಮತ್ತು ಆತನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಮುಳ್ಳೇರಿಯ ಬೆಳ್ಳಿಗೆ ವಡಂಬಳದ ಜ್ಯೋತಿಷಿ ರಾಘವೇಂದ್ರ ಕೆದಿಲ್ಲಾಯ (53) ಮತ್ತು ಪುತ್ರ ಮುರಳೀಕೃಷ್ಣ (20) ಬಂಧಿತ ಆರೋಪಿಗಳು. ಧರ್ಮಸ್ಥಳ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ಈತಿಂಗಳ ೨೯ರಂದು ಧರ್ಮಸ್ಥಳ ಬೆಳಾಲುವಿನ ನಿವೃತ್ತ ಅಧ್ಯಾಪಕ ಬಾಲಕೃಷ್ಣ  (83) ಎಂಬವರು  ಈತಿಂಗಳ 29ರಂದು ಹಗಲು ಅವರ ಮನೆಯಲ್ಲಿ ಕೊಲೆಗೈಯ್ಯಲ್ಪಟ್ಟಿದ್ದರು. ಬಾಲಕೃಷ್ಣರ ಪತ್ನಿ ವರ್ಷಗಳ ಹಿಂದೆ ನಿಧನಹೊಂದಿದ್ದರು. ಬಳಿಕ ಅವರ ಪುತ್ರನ ಜತೆ ವಾಸ ಆರಂಭಿಸಿದ್ದರು. ಇವರ ಪತ್ನಿಯ ಚಿನ್ನ ಮತ್ತು ಹಣವನ್ನು ತನಗೆ ನೀಡುವಂತೆ ಬಾಲಕೃಷ್ಣರ ಪುತ್ರಿ ವಿಜಯಲಕ್ಷ್ಮಿಯ ಪತಿ ಆಗ್ರಹಪಟ್ಟಿದ್ದಾನೆಂದೂ ಆದರೆ ಅದನ್ನು ಬಾಲಕೃಷ್ಣ ನೀಡಿದ ದ್ವೇಷವೇ ಕೊಲೆಗೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page