ಸೋಂಕಾಲು ಪೇಟೆಯಲ್ಲಿ ಉರಿಯದ ಲೋಮಾಸ್ಟ್ ದೀಪ: ದುರಸ್ತಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸೋಂ ಕಾಲು ಪೇಟೆಯಲ್ಲಿ ಸ್ಥಾಪಿಸಲಾದ ಲೋಮಾಸ್ಟ್ ದೀಪ ಕೆಟ್ಟುಹೋಗಿ ವರ್ಷಗಳೇ ಕಳೆದರೂ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರು ಸಮಸ್ಯೆಗೀಡಾಗಿ ದ್ದಾರೆ. ಕೊಡಂಗೆ, ಪ್ರತಾಪನಗರ, ಬಾಯಾರು ಕೈಕಂಬ ರಸ್ತೆಗಳು ಸಂಗಮಿಸುವ ಜನನಿಬಿಡ ಪ್ರದೇಶ ವಾದ ಸೋಂಕಾಲಿನಲ್ಲಿ ಕತ್ತಲೆ ಆವರಿಸಿಕೊಂಡಿದೆ. ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದು ಹಲವರು ಗಾಯಗೊಂಡಿದ್ದಾರೆ. ಓರ್ವ ಮೃತಪಟ್ಟ ಘಟನೆಯೂ ನಡೆದಿದೆ. ಹಲವಾರು ವ್ಯಾಪಾರ ಸಂಸ್ಥೆಗಳು ಇಲ್ಲಿದ್ದು, ವಿವಿಧ ಕಡೆಗೆ ಉದ್ಯೋಗಕ್ಕೆ ತೆರಳಿ ರಾತ್ರಿ ಮರಳುವ ಸಂದರ್ಭದಲ್ಲಿ ಕತ್ತಲೆ ಸಮಸ್ಯೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಲೋಮಾಸ್ಟ್ ದೀಪ ಹಾಗೂ ಹೆದ್ದಾರಿ ರಸ್ತೆ ಬದಿಯಲ್ಲಿರುವ ದೀಪಗಳನ್ನು ದುರಸ್ತಿಗೊಳಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page