ಅಡೂರು ಉಮೇಶ ನಾಯ್ಕ್‌ರಿಗೆ ಕ.ಸಾ.ಪ.ದ ಗೃಹಸನ್ಮಾನ ಗೌರವ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಕನ್ನಡ ಕಾಯಕದ ಕಟ್ಟಾಳು ಅಡೂರು ಉಮೇಶ ನಾಯ್ಕ್ರನ್ನು ಮನೆಗೆ ತೆರಳಿ ಅಭಿನಂದಿಸಲಾಯಿತು. ಕ.ಸಾ.ಪದ ವತಿಯಿಂದ ಹಿರಿಯ ಕನ್ನಡ ಕಟ್ಟಾಳುಗಳಿಗೆ ಗೃಹಸನ್ಮಾನ ಗೌರವಾಭಿನಂದನೆ ಸಲ್ಲಿಸಿ, ಅವರ ಬದುಕನ್ನು ದಾಖಲಿಸುವ ಯೋಜನೆಯಿದ್ದು, ತದಂಗವಾಗಿ ಅಡೂರು ಉಮೇಶ ನಾಯ್ಕ್ ಮನೆಗೆ ತೆರಳಲಾಯಿತು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅವರ ಆಶಯದಂತೆ ಈ ಅಭಿಯಾನ ನಡೆಯಲಿದೆ. ಅಡೂರು ಉಮೇಶ ನಾಯ್ಕ್ ಹಾಗೂ ಅವರ ಪತ್ನಿ ಕನ್ನಡ ಮಹಿಳಾ ಸಂಘದ ನಾಯಕಿ ಲಲಿತಾ ನಾಯ್ಕ್ರನ್ನು ಗೌರವಿಸಿದ ಗೃಹಸಮ್ಮಾನದಲ್ಲಿ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಲೇಖಕ ಎಂ.ನಾ. ಚಂಬಲ್ತಿಮಾರ್ ಅಭಿನಂದನಾ ಭಾಷಣ ಮಾಡಿದರು. ಗಮಕ ಕಲಾ ಪರಿಷತ್ ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್ ಮÁತನಾಡಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page