ಅಮೈ ಶ್ರೀಕೃಷ್ಣ ಭಜನಾಮಂದಿರ ವಾರ್ಷಿಕೋತ್ಸವ 25ರಂದು
ಕಾಸರಗೋಡು: ಅಮೈ ಕೃಷ್ಣನಗರ ಶ್ರೀಕೃಷ್ಣ ಭಜನಾಮಂದಿರ ದಲ್ಲಿ 24ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಈ ತಿಂಗಳ 25ರಂದು ನಡೆಯಲಿದೆ. ಅಂದು ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ, 9 ಗಂಟೆಗೆ ಭಗವದ್ಗೀತಾ ಪಾರಾಯಣ, ಶ್ರೀಕೃಷ್ಣ ಅಷ್ಟೋತ್ತರ ಶತನಾಮಾರ್ಚನೆ, 10.30ಕ್ಕೆ ಶ್ರೀ ಸತ್ಯನಾರಾಯಣ ಪೂಜಾ ಕಲಶ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6.42ಕ್ಕೆ ದೀಪ ಪ್ರತಿಷ್ಠೆ, ಏಕಾಹ ಭಜನೆ ಆರಂಭ, ರಾತ್ರಿ 12 ಗಂಟೆಗೆ ಮಹಾಪೂಜೆ, 26ರಂದು ಬೆಳಿಗ್ಗೆ 6.20ಕ್ಕೆ ಮಂಗಳA ನಡೆಯಲಿದೆ.