ಒಣ ಗಾಂಜಾ ಸಹಿತ ಓರ್ವ ಸೆರೆ
ಕಾಸರಗೋಡು: ತೆಕ್ಕಿಲ್ ಚೆರುಗರದಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ೧೫೦ ಗ್ರಾಂ ಒಣಗಿದ ಗಾಂಜಾ ಸಹಿತ ಓರ್ವನನ್ನು ಬಂಧಿಸಿದೆ. ಚೆರುಗರ ನಿವಾಸಿ ಅಬೂಬಕರ್ ಸಿದ್ದಿಕ್ (32) ಬಂಧಿತ ಆರೋಪಿ. ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಬಿಯವರ ನೇತೃತ್ವದ ತಂಡ ನಿನ್ನೆ ಅಪರಾಹ್ನ ಈ ಕಾರ್ಯಾಚರಣೆ ನಡೆಸಿದೆ. ದಾಳಿ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಎ, ಪ್ರಿವೆಂಟೀವ್ ಆಫೀಸರ್ ಸುಧೀಂದ್ರ ಎಂ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಜಿತೇಂದ್ರನ್ ಕೆ, ಅಭಿಲಾಷ್ ಕೆ ಮತ್ತು ಶುಭ ಎಂಬಿವರು ಒಳಗೊಂಡಿದ್ದರು.