ಕಟ್ಟಡ ಲಿಫ್ಟ್‌ನ ಹೊಂಡಕ್ಕೆ ಬಿದ್ದು ವಲಸೆ ಕಾರ್ಮಿಕ ಮೃತ್ಯು

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯೊಂದರ ಕಟ್ಟಡದ ಲಿಫ್ಟ್‌ನ ಹೊಂಡಕ್ಕೆ ಬಿದ್ದು ನಿರ್ಮಾಣ ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಒಡಿಸ್ಸಾ ಚಂಬಾಡಿಪುರ ನಿವಾಸಿ ದೇವೇಂದ್ರಶ್ರೀ (33) ಸಾವನ್ನಪ್ಪಿದ ಕಾರ್ಮಿಕ. ಚೆಂಗಳದ ಇಂದಿರಾನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯೊಂದರಲ್ಲಿ ನಿನ್ನೆ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ವೇಳೆ ಅದರ ಲಿಫ್ಟ್‌ನ ಹೊಂಡಕ್ಕೆ ದೇವೇಂದ್ರ ಶ್ರೀ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ತಲೆಗೆ ಗಂಭೀರ ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page