ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ
ಬದಿಯಡ್ಕ: ಬೆಳ್ಳೂರು ಪೆರುವತ್ತೋಡಿಯಲ್ಲಿ ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ ಸ್ಪೆಕ್ಟರ್ (ಗ್ರೇಡ್) ಕೃಷ್ಣ ಎಂ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 6.66 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಬೆಳ್ಳೂರು ಪೆರುತ್ತೋಡಿ ನಿವಾಸಿ ಶ್ರೇಯಸ್ ಕುಮಾರ್ (23) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಲಿಜು, ವಿನೋದ್ ಕೆ, ಲಿಜಿನ್ ಆರ್, ಶಾಲಿನಿ ಮತ್ತು ಫಾತಿಮತ್ ಶಂಸ ಎಂಬವರು ಒಳಗೊಂಡಿದ್ದರು.