ಕಾರಿನಲ್ಲಿ ಸಾಗಿಸುತ್ತಿದ್ದ ೧೧೨ ಲೀಟರ್  ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಬಂದ್ಯೋಡು: ಬಂದ್ಯೋಡ್‌ನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೧೧೨.೩೨ ಲೀಟರ್ ಕರ್ನಾ ಟಕ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಮಾಲು ಸಾಗಿಸುತ್ತಿದ್ದ ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ತೆಕ್ಕಿಲ್ ಗ್ರಾಮದ ಕುಚ್ಚುಂಙಾಟು ವೀಟಿಲ್‌ನ ಮೈಲಾಟಿಯ ಅಶೋಕ್ ಕುಮಾರ್ (೪೦)ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ಯಾಲ್‌ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ನೌಶಾದ್ ಕೆ, ಸತೀಶನ್ ಕೆ, ಮಂಜುನಾಥ ವಿ, ನಸರುದ್ದೀನ್ ಎ.ಕೆ. ಮತ್ತು ಮೈಮೋನ್ ಜೋನ್ ಎಂಬವರು ಒಳಗೊಂಡಿ ದ್ದರು. ಬಂಧಿತ ಆರೋಪಿ ಕರ್ನಾಟಕದಿಂದ  ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುವ ತಂಡದ ಪ್ರಧಾನ ಸೂತ್ರಧಾರನಾಗಿರುವುದಾಗಿ ಅಬಕಾರಿ ತಂಡದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page