ಕಾಶ್ಮೀರ ಹುತಾತ್ಮರಿಗೆ ನುಡಿನಮನ: ವಿರಾಟ್ ಹಿಂದೂ ಜಾಗೃತ ಸಮಾವೇಶಕ್ಕೆ ಸಿದ್ಧತೆ
ಉಪ್ಪಳ: ಇತ್ತೀಚೆಗೆ ಕಾಶ್ಮೀರದ ಪಹಲÁಮ್ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಹಿಂದೂ ನರಮೇಧವನ್ನು ಖಂಡಿಸಲು ಮತ್ತು ಹುತಾತ್ಮರಿಗೆ ನುಡಿನಮನ ಸಲ್ಲಿಸುವ ವಿಶೇಷ ವಿರಾಟ್ ಹಿಂದೂ ಜಾಗೃತ ಸಮಾವೇಶದ ಸಿದ್ಧತಾ ಸಭೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾರ್ಗ ದರ್ಶನ ಗೈದರು. ಎಡನೀರು ಮಠ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಂಯುಕ್ತ ಆಶ್ರಯದಲ್ಲಿ ಮತ್ತು ಜಿಲ್ಲೆಯ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಜಾಗೃತ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಎರಡು ತಾಲೂಕುಗಳ ಎಲ್ಲಾ ಪಂಚಾಯತ್ಗೆÀÆಳಪಟ್ಟ ಸರ್ವ ಹಿಂದೂ ಬಾಂಧವರು, ತಾಯಿಯಂದಿರು, ಮಕ್ಕಳೊಂದಿಗೆ ಎಲ್ಲರೂ ಭಾಗವಹಿಸಿ ಜಾಗೃತ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಯಿತು. ವಿರಾಟ್ ಹಿಂದೂ ಜಾಗೃತ ಸಮಾವೇಶ 4ರಂದು 4 ಗಂಟೆಗೆ ಐಲ ಮೈದಾನದಲ್ಲಿ ನಡೆಯಲಿದೆ. ದೇಶದಲ್ಲಿ ಭಯೋತ್ಪಾದಕರ ಮೂಲೋತ್ಪಾಟನೆ ಮಾಡಲು ಸರಕಾರವು ಕಟ್ಟಿಬದ್ಧರಾಗಬೇಕು ಮತ್ತು ಶತ್ರು ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಲು ಸರಕಾರವನ್ನು ಆಗ್ರಹಿಸಲು ತೀರ್ಮಾನ ಮಾಡಲಾಯಿತು.