ಕಾಸರಗೋಡಿನಲ್ಲಿ ಸಂಗೀತ ಆರಾಧನೋತ್ಸವ ನಾಳೆಯಿಂದ

ಕಾಸರಗೋಡು: ಶ್ರೀ ಪುರಂದರದಾಸ ಸಂಗೀತ ಕಲಾಮಂದಿರ ಕಾಸರಗೋಡು ಎಸ್.ವಿ.ಟಿ.ರಸ್ತೆ, ಇದರ 20 ನೇ ಸಂಗೀತ ಆರಾಧನೋತ್ಸವ ನಾಳೆ ಹಾಗೂ 11 ರಂದು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರಗಲಿದೆ. ನಾಳೆ ಬೆಳಿಗ್ಗೆ 8.30 ಕ್ಕೆ ಉದ್ಘಾಟನೆ, ಬಳಿಕ ಸರಸ್ವತಿ ಕೃಷ್ಣನ್ ಮತ್ತು ಬಳಗದಿಂದ ಸಂಗೀತ ಕಛೆsÃರಿ, ಕೆರೆಮನೆ ಮನಮೋಹನ ಮತ್ತು ಬಳಗ ಇವರಿಂದ ಕೊಳಲು ವಾದನ, ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗ, ಉಷಾ ಈಶ್ವರ ಭಟ್ ಮತ್ತು ಬಳಗ, ಗಣೇಶ್ ಕಣ್ಣನ್ ಮತ್ತು ಕಲ್ಮಾಡಿ ಎಸ್. ಪೂರ್ಣಪ್ರಜ್ಞ ಇವರಿಂದ ದ್ವಂದ್ವ ವಯಲಿನ್ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ 1.30 ರಿಂದ ಕೋಳಿಕಜೆ ಬಾಲಸುಬ್ರಹ್ಮಣ್ಯ ಭಟ್ ಮತ್ತು ಬಳಗ, ಪ್ರಭಾಕರ ಕುಂಜಾರ್ ಇವರಿಂದ ವಯಲಿನ್ ವಾದನ, ಡಾ| ಹೇಮಶ್ರೀ ಮತ್ತು ಶ್ರೀವಾಣಿ, ರಾಧಾ ಮುರಳೀಧರ, ರಾಜ್ ಕುಮಾರ್ ಕಲ್ಲೂರಾಯ ಇವರಿಂದ ಗಿಟರ್ ವಾದನ ಸಂಜೆ 5.30 ಕ್ಕೆ ಪಿ.ವಿ. ಅಜೆಯ ನಂಬೂದಿರಿ ಚೆನ್ನೈ ಇವರಿಂದ ಸಂಗೀತ ಕಛೇರಿ ಪಕ್ಕವಾದ್ಯ ವಾಯಲಿನ್‌ನಲ್ಲಿ ಪಾಲಕ್ಕಾಡ್ ಆರ್. ಸ್ವಾಮಿನಾಥನ್, ಮೃದಂಗದಲ್ಲಿ ವೈಕಮ್ ಪ್ರಸಾದ್ ಸಹಕರಿಸುವರು.
11 ರಂದು ಬೆಳಿಗ್ಗೆ 8.30 ಕ್ಕೆ ಪಂಚರತ್ನ ಕೀರ್ತನೆ, 10.30 ರಿಂದ ವಿಶ್ವಾಸ್ ಕೃಷ್ಣ ಮತ್ತು ಶ್ರೇಷ್ಠಾ ಲಕ್ಷ್ಮಿ ಇವರಿಂದ ವಯಲಿನ್ ವಾದನ, ವಿದ್ಯಾ ಶಂಕರ್ ಬೊಳ್ಳಾವ, ಕಾಂಞAಗಾಡ್ ಟಿ.ಪಿ. ಶ್ರೀನಿವಾಸನ್ ಮತ್ತು ಬಳಗ, ವೆಳ್ಳಿಕೋತ್ ವಿಷ್ಣು ಭಟ್‌ರಿಂದ ಸಂಗೀತ, ಮಧ್ಯಾಹ್ನ 1.30 ರಿಂದ ಸವಿತಾ ಎಂ. ಕಛೇರಿ, 3.30 ಕ್ಕೆ “ವಂದನಾ ಸದಸ್” ನಡೆಯಲಿದ್ದು, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಶತಾಯುಷಿ ವಿದ್ವಾನ್ ಕೆ. ಬಾಬು ರೈ ವಿದ್ವಾನ್ ಕೆ.ವಿ. ರಮಣನ್, ಉಪಸ್ಥಿತರಿರುವರು.

Leave a Reply

Your email address will not be published. Required fields are marked *

You cannot copy content of this page