ಕುಂಬಳೆಯಲ್ಲಿ ಆಯುಷ್ಮಾನ್ ವಯವಂದನಾ ಯೋಜನೆಗೆ ಚಾಲನೆ

ಕುಂಬಳೆ: ಕೇಂದ್ರ ಸರಕಾರದ ಆಯುಷ್ಮಾನ್ ವಯವಂದನಾಕಾರ್ಡ್ ವಿಮಾ ಯೋಜನೆ ಕುಂಬಳೆ ಪೇಟೆಯಲ್ಲಿ ಉದ್ಘಾಟಿಸಲಾಯಿತು. 70 ವರ್ಷಕ್ಕಿಂತ ಮೇಲಿನ ಹಿರಿಯ ನಾಗರಿಕರಿಗೆ ೫ ಲಕ್ಷ ರೂ. ವಿಮೆ  ಲಭಿಸುವ ಯೋಜನೆಯಾಗಿದೆ ಇದು. ಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ರವೀಂದ್ರನ್ ಉದ್ಘಾಟಿಸಿದರು. ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದರು. ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಹಿರಿಯರಾದ ಫಲಾನುಭವಿಗೆ ಕಾರ್ಡ್ ನೀಡಿ ಪಂಚಾಯತ್ ಮಟ್ಟದಲ್ಲಿ ಉದ್ಘಾಟಿಸಿದರು.

ಜಿಲ್ಲಾ ಸಮಿತಿ ಸದಸ್ಯ ರಾಧಾಕೃಷ್ಣ ರೈ ಮಡ್ವ, ಮಂಡಲ ಅಧ್ಯಕ್ಷ ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಮಂಡಲ ಉಪಾಧ್ಯಕ್ಷೆ ಪ್ರೇಮಲತ ಎಸ್, ಶಶಿ ಕುಂಬಳೆ, ಪ್ರದೀಪ್ ಕುಮಾರ್, ಅವಿನಾಶ್ ಕಾರಂತ್, ಅಜಿತ್ ಕುಮಾರ್ ಉಪಸ್ಥಿತರಿದ್ದರು. ಮೋಹನ ಕೆ. ಸ್ವಾಗತಿಸಿ, ಪ್ರೇಮಾವತಿ ವಂದಿಸಿದರು. ಆನ್‌ಲೈನ್ ಮೂಲಕ ಉಚಿತ ನೋಂದಾವಣೆ ನಡೆಸಲಾಯಿತು.

You cannot copy contents of this page