ಕೆಎಸ್ಆರ್ಟಿಸಿ ಬಸ್ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 60 ಪವನ್ ಚಿನ್ನ ಪತ್ತೆ
ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕೆಎಸ್ಆರ್ ಟಿಸಿ ಬಸ್ನಲ್ಲಿ ಕಾಸರಗೋಡಿಗೆ ಸಾಗಿಸುತ್ತಿದ್ದ ಸುಮಾರು 60 ಪವನ್ಗೂ ಅಧಿಕ (480.9 ಗ್ರಾಂ) ಚಿನ್ನದ ಒಡವೆಗಳನ್ನು ಪತ್ತೆಹಚ್ಚಿದೆ.
ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ತಾನ ನಿವಾಸಿ ಪಗನ್ಲಾಲ್ ಎಂಬಾತನಿಂದ ಈ ಮಾಲು ವಶಪಡಿ ಸಲಾಗಿದೆ. ಈತ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದನು. ಅಬಕಾರಿ ಇನ್ಸ್ಪೆಕ್ಟರ್ ಕೆ.ವಿ. ಗಂಗಾಧರನ್ ನೇತೃತ್ವದ ತಂಡ ಈ ಬಸ್ಸನ್ನು ತಡೆದು ನಿಲ್ಲಿಸಿ ತಪಾಸಣೆ ಗೊಳಪಡಿಸಿದಾಗ ಈ ಮಾಲು ಪತ್ತೆಯಾಗಿದೆ. ನಂತರ ಈ ಚಿನ್ನದ ಒಡವೆಗಳನ್ನು ಜಿಎಸ್ಟಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಅದರಂತೆ ಆ ಚಿನ್ನದೊಡವೆಗಳಿಗೆ 2.60 ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಲಾಯಿತು. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ಗಳಾದ ಪಿ.ಕೆ. ಬಾಬುರಾಜನ್, ಸಿ. ಜಯನ್, ಸಿವಿ ಲ್ ಎಕ್ಸೈಸ್ ಆಫೀಸರ್ ಟಿ. ರಾಹುಲ್ ಎಂಬವರು ಒಳಗೊಂಡಿದ್ದರು.