ಕೆಎಸ್‌ಆರ್‌ಟಿಸಿ ಸೂಪರ್ ಫಾಸ್ಟ್ ಬಸ್ ಅಪಘಾತ: ಚಾಲಕ ಮೃತ್ಯು

ಮಲಪ್ಪುರಂ: ಕೆಎಸ್‌ಆರ್‌ಟಿಸಿ ಸೂಪರ್ ಫಾಸ್ಟ್ ಬಸ್ ಇಂದು ಮುಂಜಾನೆ ಡಿವೈಡರ್‌ಗೆ ಢಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ತಿರೂರು ನಿವಾಸಿ ಪಾಕರ ಅಸೀಬ್ ಮೃತಪಟ್ಟ ಚಾಲಕ. ನಿನ್ನೆ ಸಂಜೆ ಬೆಂಗಳೂರಿಗೆ ಹೊರಟ ಬಸ್ ತಮಿಳುನಾಡು ನಂಜನ್‌ಕೋಡ್‌ನಲ್ಲಿ ಅಪಘಾತಕ್ಕೀಡಾಗಿದೆ. ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆದರೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆಂದು ಮಾಹಿತಿ ಲಭಿಸಿದೆ.

RELATED NEWS

You cannot copy contents of this page