ಕೇಳುಗುಡ್ಡೆಯಲ್ಲಿ ತ್ಯಾಜ್ಯ ತೆರವು; ಕ್ರಿಯಾ ಸಮಿತಿ ನೇತೃತ್ವದಲ್ಲಿ ಜಂಟಿ ಸಭೆ

ಕಾಸರಗೋಡು: ಕೇಳು ಗುಡ್ಡೆಯಲ್ಲಿ ಹಲವು ವರ್ಷಗಳಿಂದ ರಾಶಿ ಹಾಕಿರುವ ತ್ಯಾಜ್ಯವನ್ನು ವಿಂಗಡಿಸಿ ತೆರವು ಗೊಳಿಸುವಾಗ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಕೇಳುಗುಡ್ಡೆ ಕ್ರಿಯಾ ಸಮಿತಿ ನೇತೃತ್ವದಲ್ಲಿ  ಜಂಟಿ ಸಭೆ ನಡೆಸಲಾಯಿತು. ನದಗರಸಭಾ ಕೌನ್ಸಿಲರ್ ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು.

ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ  ಮಾಜಿ ಅಧ್ಯಕ್ಷ ಮಾಧವನ್ ಮಾಸ್ತರ್, ಪಂ. ಸದಸ್ಯರಾದ ರಾಧಾಕೃಷ್ಣ ಸೂರ್ಲು, ಸೌಮ್ಯ, ನಗರಸಭಾ ಕೌನ್ಸಿಲರ್ ಅಶ್ವಿನಿ, ಕ್ರಿಯಾ ಸಮಿತಿ ಪದಾಧಿಕಾರಿಗಳಾದ ನ್ಯಾಯವಾದಿ ಪಿ. ಮುರಳೀಧರನ್, ಕೆ. ಶ್ರೀಧರನ್ ಹರೀಶ್, ಶಾಹುಲ್ ಹಮೀದ್, ಕೇರಳ ಘನತ್ಯಾಜ್ಯ ಪರಿಪಾಲನೆ ಯೋಜನೆ ಅಧಿಕಾರಿ, ನಗರಸಭಾ ಹೆಲ್ತ್ ಇನ್‌ಸ್ಪೆಕ್ಟರ್  ಮುತ್ತುಕುಮಾರ್, ಡಾ. ಅನ್ಪಲಿಗಿ ಮೊದಲಾದವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page