ಚಕ್ರವರ್ತಿ ಹೊಸಂಗಡಿಯಿಂದ ಹೃದಯ ಚಿಕಿತ್ಸಾ ಶಿಬಿರ

ಹೊಸಂಗಡಿ: ಚಕ್ರವರ್ತಿ ಹೊಸಂಗಡಿ ಇದರ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಹಕಾರ ನೀಡಿದೆ. ಹರೀಶ್ ಮಾಡ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಶಿವಪ್ರಸಾದ್ ತಲಪ್ಪಾಡಿ ಅಧ್ಯಕ್ಷತೆ ವಹಿಸಿದರು. ಡಾ| ಮುಕುಂದ, ಡಾ| ಅಮಿತ್ ಕಿರಣ್, ಡಾ| ವಿಜಯ ರೇವಣ್ಕರ್ ಚಿಕಿತ್ಸೆಗೆ ನೇತೃತ್ವ ನೀಡಿದರು. ಜಿಆರ್‌ಬಿ ರಾಮಪ್ಪ, ಕರುಣಾಕರ ಮಂಜೇಶ್ವರ ಶುಭ ಕೋರಿದರು. ಎ.ಎಸ್. ಯಾದವ್, ಮೋತಿ ಕಿರಣ್, ಸುರೇಶ್ ಪರಂಕಿಲ ಉಪಸ್ಥಿತರಿದ್ದರು. ಸುರೇಶ್ ಗಣಿಂಜಾಲ್ ಸ್ವಾಗತಿಸಿ, ದಿನಕರ್ ಬಿ. ನಿರೂಪಿಸಿದರು.

Leave a Reply

Your email address will not be published. Required fields are marked *

You cannot copy content of this page